
9th April 2025
ಕುಷ್ಟಗಿ: ತಾಲೂಕಾಡಳಿತ ಹಾಗೂ ಜೈನ ಸಮಾಜದ ನೇತೃತ್ವದಲ್ಲಿ ಏಪ್ರೀಲ್ ತಿಂಗಳ 10 ರಂದು ಭಗವಾನ ಮಹಾವೀರ ಜಯಂತಿ ಆಚರಣೆಯನ್ನು ತಾಲೂಕಿನ ನಿಲೋಗಲ್ ಗ್ರಾಮದಲ್ಲಿ ಆಚರಿಸಲು ತಹಶೀಲ್ದಾರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ನಿರ್ಣಯಿಸಲಾಯಿತು.
ಸೋಮವಾರ ತಹಶೀಲ್ದಾರ ಅಶೋಕ ಶಿಗ್ಗಾಂವಿ ಅಧ್ಯಕ್ಷತೆಯಲ್ಲಿ ನಡೆದ ಭಗವಾನ್ ಮಹಾವೀರ ಜಯಂತಿ ಹಿನ್ನೆಲೆಯ ಪೂರ್ವಭಾವಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ತಾಲೂಕಿನ ನಿಲೋಗಲ್ ಗ್ರಾಮದಲ್ಲಿ ನವೀಕರಣಗೊಂಡ ಜೈನ ಬಸದಿ ಉದ್ಘಾಟನೆ ಹಾಗೂ ತಾಲೂಕಿನಲ್ಲಿ ನಿಲೋಗಲ್ ಗ್ರಾಮದಲ್ಲಿ ಅಧಿಕ ಸಂಖ್ಯೆಯಲ್ಲಿ ಜೈನ ಸಮುದಾಯ ವಾಸವಿದೆ. ತಾಲೂಕಾಡಳಿತ ಆಚರಿಸಲಾಗುವ ಜಯಂತಿಯನ್ನು ಅದೇ ಗ್ರಾಮದಲ್ಲಿ ಆಚರಿಸಲು ಜೈನ ಸಮುದಾಯದ ಅಧ್ಯಕ್ಷ ಶಾಂತರಾಜ್ ಗೋಗಿ ಮನವಿ ಮಾಡಿದರು.
ತಹಶೀಲ್ದಾರ ಅಶೋಕ ಶಿಗ್ಗಾಂವಿ ಮಾತನಾಡಿ, ಭಗವಾನ್ ಮಹಾವೀರ ಜಯಂತಿ ಕಾರ್ಯಕ್ರಮದ ದಿನ ಸರಕಾರಿ ರಜೆ ಇದ್ದು, ಆ ದಿನ ಕಚೇರಿಯಲ್ಲಿ ಸಾಂಕೇತಿಕವಾಗಿ ಆಚರಿಸಲಾಗುವುದು. ಏಪ್ರೀಲ್ 11ರಂದು ಜೈನ ಸಮುದಾಯ, ವಿವಿಧ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ತಹಶೀಲ್ದಾರ ಕಛೇರಿಯ ಸಭಾಂಗಣದಲ್ಲಿ ಆಚರಿಸುವ ಬಗ್ಗೆ ಪ್ರಸ್ತಾಪಿಸಿದರು.
ನಿಲೋಗಲ್ ಗ್ರಾಮದಲ್ಲಿ ಆಚರಿಸಿದರೆ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತಿಯ ಬಗ್ಗೆ ಅನುಮಾನ ವ್ಯಕ್ತ ಪಡಿಸಿದ ಅವರು, ನಾನು ಮಾತ್ರ ಆ ದಿನ ಖಂಡಿತವಾಗಿ ಭಾಗವಹಿಸುವೆ. ಸದರಿ ನಿಲೋಗಲ್ ಗ್ರಾಮದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಹಾಜರಾಗಲು ನೋಟೀಸ್ ಜಾರಿ ಮಾಡುವುದಾಗಿ ತಿಳಿಸಿದರು. ಮಹಾವೀರ ಜಯಂತಿಗೆ ಸರ್ಕಾರ ರಜೆ ನೀಡಿರುವುದು ಸರಕಾರಿ ಅಧಿಕಾರಿಗಳಿಗೆ ನೆಪ ಆಗಬಾರದು, ನಿಲೋಗಲ್ ಗ್ರಾಮ ತಾಲೂಕಾ ಕೆಂದ್ರದಿಂದ ದೂರ ಇದೆ ಎಂದು ಹಿಂಜರಿಯದೇ ಸದರಿ ಕಾರ್ಯಕ್ರಮಕ್ಕೆ ಹಾಜರಾಗಲು ಮನವಿ ಮಾಡಿದರು.
ಜೈನ ಸಮುದಾಯದ ಶಾಂತರಾಜ್ ಗೋಗಿ ಜೈನ್, ಅಮರಚಂದ್ ಜೈನ್, ವೀರೇಶ ಬಂಗಾರಶೆಟ್ಟರ್ ಸೇರಿದಂತೆ ಸಮಾಜ ಕಲ್ಯಾಣ ಇಲಾಖೆಯ ಸುಂದರ್, ಪುರಸಭೆ ನೈರ್ಮಲ್ಯ ಅಧಿಕಾರಿ ಪ್ರಾಣೇಶ ಬಳ್ಳಾರಿ, ಕಂದಾಯ ಇಲಾಖೆಯ ಸುಂದರೇಶಕುಮಾರ್ ಹಾಗೂ ತಾಲೂಕ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
9th April 2025
ಜಿಎಂ ನ್ಯೂಜ್ ಕುಷ್ಟಗಿ : ಇಲ್ಲಿಯ ಶ್ರೀ ಅಡವಿರಾಯ ದೇವಸ್ಥಾನದ ಶ್ರೀ ರಾಮದೇವರ ದೇವಸ್ಥಾನದಲ್ಲಿ ಶ್ರೀ ರಾಮ ನವಮಿ ಉತ್ಸವವು ಭಾನುವಾರದಂದು ವಿಜೃಂಭಣೆಯಿಂದ ಹಾಗೂ ಶ್ರದ್ಧಾಭಕ್ತಿಯಿಂದ ಜರುಗಿತು.
ಶ್ರೀ ಸೀತಾ ರಾಮರಿಗೆ ಮುಂಜಾನೆ 8:00 ಗಂಟೆಗೆ
ಫಲ ಪಂಚಾಮೃತ ಅಭಿಷೇಕ, 9:00 ರಿಂದ 11:30 ರ ವರೆಗೆ ಶ್ರೀ ರಾಮ ತಾರಕ ಮಂತ್ರ ಹೋಮ, ಮಧ್ಯಾಹ್ನ 12:00 ಗಂಟೆಗೆ ಶ್ರೀ ರಾಮ ದೇವರ ತೊಟ್ಟಿಲು ಸೇವೆ, 12:30 ಗಂಟೆಗೆ ಮಹಾ ನೈವೇದ್ಯ , 1:00 ಗಂಟೆಗೆ ಸರ್ವರಿಗೂ ತೀರ್ಥ ಪ್ರಸಾದ ನಡೆಯಿತು.
ಶ್ರೀ ರಾಮ ದೇವರ ಉಸ್ಥವ ಮೂರ್ತಿಯನ್ನು ತೊಟ್ಟಿಲದೊಳಗಿಟ್ಟು ತೂಗಿದ ನಂತರ ಪ್ರತಿಯೊಬ್ಬ ಭಕ್ತರಿಗೂ ಕೋಸಂಬರಿ, ಪಾನಕ ವಿತರಿಸಲಾಯಿತು.
ದೇವಸ್ಥಾನದ ಅರ್ಚಕರಾದ ಶೇಷಾಚಾರ್ ಅವರಿಂದ ಶ್ರೀ ಸೀತಾ ರಾಮ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಹಾಗೂ ಶ್ರೀ ರಾಮನ ಭಕ್ತ ಶ್ರೀ ಅಡವಿರಾಯ ದೇವಸ್ಥಾನದಲ್ಲಿ ವಾದಿರಾಜಾಚಾರ್ ಅವರಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ಈ ಒಂದು ಕಾರ್ಯಕ್ರಮದಲ್ಲಿ ವಿಪ್ರ ಸಮಾಜದರೆಲ್ಲರೂ ಭಾಗವಹಿಸಿದ್ದರು.
ವರದಿ : ಭೀಮಸೇನರಾವ್ ಕುಲಕರ್ಣಿ ಕುಷ್ಟಗಿ.
19th February 2025
ಜಿಎಂ ನ್ಯೂಜ್ ಕುಷ್ಟಗಿ.
ಕುಷ್ಟಗಿ : ಪರಮಪೂಜ್ಯ ವಿರೇಂದ್ರಹೆಗಡೆ ಹಾಗೂ ಹೇಮಾವತಿ ಹೆಗಡೆಯವರು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡಿದ್ದಾರೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಶೇಖರನಾಯ್ಕ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕುಷ್ಟಗಿ ಶಾಖೆ ಹಾಗೂ ಡಾ.ಎಂ.ಎಂ ಜೋಷಿ ನೇತ್ರ ವಿಜ್ಞಾನ ಸಂಸ್ಥೆ ಹುಬ್ಬಳ್ಳಿ, ವಿನಾಯಕ ನೇತ್ರ ಸೇವಾ ಸಂಸ್ಥೆ ಕೊಪ್ಪಳ ಇವರುಗಳ ಸಂಯುಕ್ತಾಶ್ರಯದಲ್ಲಿ ಬುಧವಾರ ಬೆಳಿಗ್ಗೆ ಇಲ್ಲಿಯ ಶ್ರೀ ಬುತ್ತಿಬಸವೇಶ್ವರ ಸಭಾಭವನದಲ್ಲಿ ಏರ್ಪಡಿಸಿದ್ದ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಕೆರೆ ಅಭಿವೃದ್ಧಿ, ಬಡಜನರಿಗೆ ವಾತ್ಸಲ ಯೋಜನೆಯಡಿಯಲ್ಲಿ ಉಚಿತವಾಗಿ ಮನೆ ನಿರ್ಮಾಣ, ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಸಹಾಯಧನ, ನಿರ್ಗತಿಕ ಹಿರಿಯ ನಾಗರಿಕರಿಗೆ ಮಾಶಾಸನ ಸೇರಿದಂತೆ ಅನೇಕ ಯೋಜನೆಗಳ ಮೂಲಕ ಬಡಜನರಿಗೆ ಸಹಾಯ ಮಾಡಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸಾಲ ನೀಡುವ ಸಂಸ್ಥೆಯಲ್ಲ ವಿವಿಧ ಬ್ಯಾಂಕ್ ಗಳ ಸಹಭಾಗಿತ್ವದಲ್ಲಿ ಸದಸ್ಯರ ಉಳಿತಾಯ ಖಾತೆ ತೆರೆದು ಸಾಲ ಸೌಲಭ್ಯ ಒದಗಿಸಿ ಉದ್ಯಮಗಳ ಮೂಲಕ ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಗ್ರಾಮಾಭಿವೃದ್ಧಿ ಯೋಜನೆಯನ್ನು ಆರಂಭಿಸಿದ್ದಾರೆ ಎಂದು ಹೇಳಿದರು.
ಮಹಿಳಾ ಸ್ವ ಸಹಾಯ ಸಂಘದ ಸದಸ್ಯರು ಆರೋಗ್ಯ ಕಾರ್ಡ್ ಪಡೆಯುವ ಮೂಲಕ ಉತ್ತಮ ಆರೋಗ್ಯ ಹೊಂದಬೇಕು ಎಂದು ಸಲಹೆ ನೀಡಿದರು.
ವಿನಾಯಕ ನೇತ್ರ ಸೇವಾ ಸಂಸ್ಥೆ ಅಧ್ಯಕ್ಷ ಬಸವರಾಜ ಪಲ್ಲೇದ, ವಕೀಲ ಚಂದ್ರಶೇಖರ ಉಪ್ಪಿನ ಮಾತನಾಡಿದರು.
ಈ ಸಂದರ್ಭದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಪ್ರಕಾಶರಾವ್, ಒಕ್ಕೂಟದ ಅಧ್ಯಕ್ಷರಾದ ಹಂಪಮ್ಮ ಕೋಳೂರು, ಶಿಲ್ಪಾ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮನ್ವಯಾಧಿಕಾರಿ ಶಿವಲೀಲಾ ಬೆಳ್ಳೇರಿಮಠ ಹಾಗೂ ಕಾರ್ಯದರ್ಶಿ ಪ್ರಭು ಜಾಗೀರದಾರ, ನೇತ್ರಾಧಿಕಾರಿ ಮನೋಹರ ಪತ್ತಾರ, ಕಾವೇರಿ, ಬಸಯ್ಯ ಹಿರೇಮಠ, ವಲಯದ ಮೇಲ್ವಿಚಾರಕಿ ಮಂಜುಳಾ, ಟಿ.ಎನ್.ಓ ರಾಘವೇಂದ್ರ, ಸೇವಾ ಪ್ರತಿನಿಧಿಗಳಾದ ಕಳಕಮ್ಮ, ಶಿವಶರಣಮ್ಮ, ಒಕ್ಕೂಟದ ಪದಾಧಿಕಾರಿಗಳು ಹಾಗೂ ಜ್ಞಾನ ವಿಕಾಸ ಹಾಗೂ ಎಲ್ಲಾ ಸ್ವಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಶರಣಪ್ಪ ಲೈನದ್ ಸ್ವಾಗತಿಸಿದರು.
ಶಿವಲೀಲಾ ಬೆಳ್ಳೇರಿಮಠ ವಂದಿಸಿದರು.
ಶಿಬಿರದಲ್ಲಿ ಸುಮಾರು 112 ಜನರು ತಮ್ಮ ಕಣ್ಣುಗಳನ್ನು ತಪಾಸಣೆ ಮಾಡಿದರು.
20 ಜನರು ಕಣ್ಣಿನ ಪೊರೆ ಹೊಂದಿರುವ ಫಲಾನುಭವಿಗಳು ಶಸ್ತ್ರ ಚಿಕಿತ್ಸೆಗೆ ಆಯ್ಕೆಯಾದರು.
ವರದಿ : ಭೀಮಸೇನರಾವ್ ಕುಲಕರ್ಣಿ ಕುಷ್ಟಗಿ.
4th January 2025
ಜಿಎಂ ನ್ಯೂಜ್ ಕುಷ್ಟಗಿ.
ಕುಷ್ಟಗಿ : ನಾಳೆ ದಿನಾಂಕ:-05-01-2025 ಭಾನುವಾರ ದಂದು ಸಾಯಂಕಾಲ 4: 00 ಘಂಟೆಗೆ ಕುಷ್ಟಗಿ ಪಟ್ಟಣದ ಶ್ರೀ ಬುತ್ತಿ ಬಸವೇಶ್ವರ ದೇವಸ್ಥಾನದ ಸಭಾ ಮಂಟಪದಲ್ಲಿ ಜೀಶಾನ್ ಪ್ರಕಾಶನ ಬಿನ್ನಾಳ ವತಿಯಿಂದ ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯರಾದ ಹಾಗೂ ಅಂತರಾಷ್ಟ್ರೀಯ ಜಾನಪದ ಕಲಾವಿದರಾದ ಡಾ.ಜೀವನಸಾಬ್ ವಾಲಿಕಾರ್ ಬಿನ್ನಾಳ ಅವರ ಕೃತಿ *ಜಾನಪದ ಮತ್ತು ಸಮಷ್ಟಿಪ್ರಜ್ಞೆ* ಎಂಬ ಪುಸ್ತಕದ ಲೋಕಾರ್ಪಣೆ ಹಾಗೂ *ಜಾನಪದ ಸಂಭ್ರಮ* ಸಮಾರಂಭ ಜರುಗಲಿದ್ದು ಈ ಕಾರ್ಯಕ್ರಮದ ಉದ್ಘಾಟನೆಯನ್ನು ವಿಧಾನಸಭೆ ವಿರೋಧ ಪಕ್ಷದ ಮುಖ್ಯಸಚೇತಕರು ಕುಷ್ಟಗಿ ವಿಧಾನಸಭಾ ಕ್ಷೇತ್ರದ ಶಾಸಕರಾದ ದೊಡ್ಡನಗೌಡ ಎಚ್ ಪಾಟೀಲ್ ಅವರು ಮಾಡಲಿದ್ದು, ,
ಪುಸ್ತಕ ಲೋಕಾರ್ಪಣೆಯನ್ನು ಅಮರೇಗೌಡ ಪಾಟೀಲ್ ಬಯ್ಯಾಪುರ ಮಾಜಿ ಸಚಿವರು ನೇರವೇರಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಸನಸಾಬ ದೋಟಿಹಾಳ ಅಧ್ಯಕ್ಷರು ಕಾಡಾ ಮುನಿರಾಬಾದ್ ಇವರು ವಹಿಸಲಿದ್ದು, ಪುಸ್ತಕದ ಕುರಿತು ಡಾ. ಜಾಜಿ ದೇವೇಂದ್ರಪ್ಪ ಸದಸ್ಯರು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಬೆಂಗಳೂರು ಮಾತನಾಡಲಿದ್ದು,
ಮುಖ್ಯ ಅತಿಥಿಗಳಾಗಿ ಕೆ ಶರಣಪ್ಪ ಮಾಜಿ ಶಾಸಕರು,
ಪ್ರೊ. ಅಲ್ಲಮಪ್ರಭು ಬೆಟ್ಟದೂರು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿಗಳು, ಡಾ. ಸತೀಶ್ ಪಾಟೀಲ್ ಸಹಪ್ರಾಧ್ಯಾಪಕರು ಸರಕಾರಿ ಪ್ರಥಮ ದರ್ಜೆ ಕಾಲೇಜು ಹೂವಿನಹಡಗಲಿ, ಡಾ. ಬಿ ಕೆ ಎಸ್ ವರ್ಧನ್ ನಿರ್ದೇಶಕರು ಸಿಸ್ಲೇಪ್ ಧಾರವಾಡ,
ಬಿ ಎಚ್ ಗೋನಾಳ ನಿವೃತ್ತ ಜಂಟಿ ನಿರ್ದೇಶಕರು ಶಿಕ್ಷಣ ಇಲಾಖೆ, ಶ್ರೀಶೈಲ ಬಿರಾದಾರ ಉಪನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ ಕೊಪ್ಪಳ,
ದೊಡ್ಡಬಸಪ್ಪ ನಿರಲಕೇರಿ ಪ್ರಾಂಶುಪಾಲರು ಡಯಟ್ ಮುನಿರಾಬಾದ್, ಸುರೇಂದ್ರ ಕಾಂಬಳೆ ಕ್ಷೇತ್ರ
ಶಿಕ್ಷಣಾಧಿಕಾರಿಗಳು, ಚನ್ನಬಸಪ್ಪ ಎಮ್ ಕ್ಷೇತ್ರ ಶಿಕ್ಷಣಾಧಿಕಾರಿ ಹೊಸಪೇಟೆ, ಸೋಮರೆಡ್ಡಿ ಅಳವಂಡಿ ಅಧ್ಯಕ್ಷರು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕೊಪ್ಪಳ,
ದೇವಿಂದ್ರಪ್ಪ ಬಳೂಟಗಿ ಪ್ರಗತಿಪರ ರೈತರು, ಹಾಗೂ ಮುಖಂಡರಾದ ಶೇಖರಗೌಡ ಮಾಲಿಪಾಟೀಲ್,
ಬಸವರಾಜ ಹಳ್ಳೂರು, ಜಗದೀಶಪ್ಪ ಎಮ್ ಕ್ಷೇತ್ರ ಸಮನ್ವಯಾಧಿಕಾರಿಗಳು, ಕಲ್ಲೇಶ್ ತಾಳದ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರು ಪುರಸಭೆ ಕುಷ್ಟಗಿ, ಸೈಯದ್ ಮೈನುದ್ದೀನ್ ಮುಲ್ಲಾ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರು ಪುರಸಭೆ ಕುಷ್ಟಗಿ, ಕಳಕಪ್ಪ ಕಂಬಳಿ ಮಾಜಿ ಉಪಾಧ್ಯಕ್ಷರು ತಾಲೂಕು ಪಂಚಾಯತ್ ಯಲಬುರ್ಗಾ, ನಾಗರಾಜ ಜುಮ್ಮಣ್ಣನವರ ರಾಜ್ಯ ಉಪಾಧ್ಯಕ್ಷರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೆಂಗಳೂರು,
ಶರಣಬಸವನಗೌಡ ಪಾಟೀಲ್ ಅಧ್ಯಕ್ಷರು ಕ ರಾ ಪ್ರಾ ಶಾಲಾ ಸಹ ಶಿಕ್ಷಕರ ಸಂಘ ಕೊಪ್ಪಳ, ಶ್ರೀನಿವಾಸ ನಾಯಕ ಅಧ್ಯಕ್ಷರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕು ಘಟಕ ಕುಷ್ಟಗಿ,
ರುದ್ರೇಶ್ ಬೂದಿಹಾಳ ಅಧ್ಯಕ್ಷರು ಕರ್ನಾಟಕ ರಾಜ್ಯ ಪ್ರಾ ಶಾಲಾ ಶಿಕ್ಷಕರ ಸಂಘ ತಾಲೂಕು ಘಟಕ ಕುಷ್ಟಗಿ,
ನೀಲನಗೌಡ ಹೊಸಗೌಡ್ರು ಅಧ್ಯಕ್ಷರು ಕ ರಾ ಪ್ರೌಢಶಾಲಾ ಶಿಕ್ಷಕರ ಸಂಘ ಕುಷ್ಟಗಿ,
ಲಂಕೇಶ್ ವಾಲಿಕಾರ್ ಅಧ್ಯಕ್ಷರು ಕನ್ನಡ ಸಾಹಿತ್ಪರಿಷತ್ ತಾಲೂಕು ಘಟಕ ಕುಷ್ಟಗಿ, ಎಮ್ ಎಮ್ ಗೊಣ್ಣಾಗರ ಅಧ್ಯಕ್ಷರು ಶಿಕ್ಷಣಾಧಿಕಾರಿಗಳ ಸಂಘ ತಾಲೂಕು ಘಟಕ ಕುಷ್ಟಗಿ, ಸೋಮಲಿಂಗಪ್ಪ ಗುರಿಕಾರ್ ಅಧ್ಯಕ್ಷರು ಸಿ ಆರ್ ಪಿ,ಬಿ ಆರ್ ಪಿ ಸಂಘ ಕುಷ್ಟಗಿ ಇವರುಗಳು ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮಕ್ಕೆ ಸರ್ವರಿಗೂ ಸುಸ್ವಾಗತವನ್ನು
ಡಾ. ಜೀವನಸಾಬ್ ವಾಲಿಕಾರ್ ಬಿನ್ನಾಳ ಸದಸ್ಯರು ಕರ್ನಾಟಕ ಜಾನಪದ ಅಕಾಡೆಮಿ ಬೆಂಗಳೂರು ಇವರು ತಿಳಿಸಿದ್ದಾರೆ.
ವರದಿ : ಭೀಮಸೇನರಾವ್ ಕುಲಕರ್ಣಿ ಕುಷ್ಟಗಿ.
3rd December 2024
ಜಿಎಂ ನ್ಯೂಜ್ ಕುಷ್ಟಗಿ.
ಕುಷ್ಟಗಿ : ಪಟ್ಟಣದ ಮಾತೋಶ್ರೀ ಹೊಳಿಯಮ್ಮ ಮಹಿಳಾ ಮಹಾವಿದ್ಯಾಲಯದಲ್ಲಿ ಭಾರತೀಯ ಸಾಹಿತ್ಯ ಪರೀಷದ್ ಕುಷ್ಟಗಿ ಘಟಕದ ವತಿಯಿಂದ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಹಿರಿಯ ಉಪನ್ಯಾಸಕರಾದ ಡಾ. ನಾಗರಾಜ ಹೀರಾ ಅವರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ರಾಷ್ಟ್ರೀಯ ಸಾಹಿತ್ಯದ ಕುರಿತು ಉಪನ್ಯಾಸ ನೀಡಿದರು.
ಬ್ರಿಟಿಷ್ ವಿರುದ್ಧದ ಸ್ವಾತಂತ್ರ್ಯ ಹೋರಾಟದಲ್ಲಿ ಸಾಹಿತಿಗಳ ಪಾತ್ರ ಮಹತ್ವದ್ದು ಬಾಲಗಂಗಾಧರ ತಿಲಕ್ ,ಬಂಕೀಂ ಚಂದ್ರ ಚಟರ್ಜಿ ಇಂತಹ ಅನೇಕರ ಲೇಖನಗಳು,ಹಾಡುಗಳು ಭಾರತೀಯರಲ್ಲಿ ರಾಷ್ಟ್ರಪ್ರೇಮದ ಜೊತೆಗೆ ಬ್ರಿಟಿಷ್ ರ ಶೋಷಣೆ, ವಿರುದ್ದ ಹೋರಾಡುವಲ್ಲಿ ಭಾರತೀಯರಿಗೆ ಪ್ರೇರಣೆ ಹಾಗೂ ಜಾಗ್ರತಿ ಮೂಡಿಸಿತು ಎಂದರು.
ಇದೇ ಸಂದರ್ಭದಲ್ಲಿ ಭಾರತೀಯ ಸಾಹಿತ್ಯ ಪರಿಷದ್ ನ ತಾಲೂಕ ಅಧ್ಯಕ್ಷರಾದ ನಾಗರಾಜ ಪಟ್ಟಣ ಶೆಟ್ಟರ ಪ್ರಾಸ್ತಾವಿಕವಾಗಿ ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ ಮಹನಿಯವಾಗಿದ್ದು ನಮಗೆ ಚರಿತ್ರೆ ಗೊತ್ತಿದ್ದರೆ ಮಾತ್ರ ನಾವು ಇತಿಹಾಸ ನಿರ್ಮಾಣ ಮಾಡಬಲ್ಲೆವು ,ಸದ್ರಡ ಭಾರತ ಕಟ್ಟಲೂ ನಮಗೆ ರಾಷ್ಟ್ರೀಯ ಪರಿಕಲ್ಪನೆ ಇರಬೇಕು ನಾವೆಲ್ಲರೂ ರಾಷ್ಟ್ರಪಂಥ ಕಟ್ಟೋಣವೆಂದು ಹೇಳಿದರು.
ಈ ಸಂಧರ್ಭದಲ್ಲಿ ಕಾಲೇಜಿನ ಪ್ರಾಚಾರ್ಯರಾದ ತಿಪ್ಪಣ್ಣ ಬಿಜಕಲ್ , ಶೇಖರಪ್ಪ ಕಂದಕೂರ, ಹನಮಂತಪ್ಪ ತೋಟದ ,ಮಂಜುನಾಥ್ ಚಪ್ಪನ್ನಮಠ ಶಿವರಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
24th November 2024
ಜಿಎಂ ನ್ಯೂಜ್ ಕುಷ್ಟಗಿ.
ಕುಷ್ಟಗಿ: ತಾಲೂಕಿನ ದೋಟಿಹಾಳ ಗ್ರಾಮದ ದೇವಲ ಮಹರ್ಷಿ ಸಾಂಸ್ಕೃತೀಕ ಭವನದಲ್ಲಿ ನವೆಂಬರ್ 26 ಮಂಗಳವಾರ ದಂದು ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕ ದೋಟಿಹಾಳ ಹಾಗೂ ಕೇಸೂರು ವತಿಯಿಂದ ಕನ್ನಡ ರಾಜ್ಯೋತ್ಸವ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜರುಗಲಿದ್ದು ಎಲ್ಲರೂ ಸಹಕಾರ ನೀಡಬೇಕು ಎಂದು ನೂತನ ಅಧ್ಯಕ್ಷ ನಿಂಗಪ್ಪ ಸಜ್ಜನ ಅವರು ಹೇಳಿದರು.
ತಾಲೂಕಿನ ದೋಟಿಹಾಳ ಗ್ರಾಮದ ಶುಖಮುನಿಸ್ವಾಮಿ ದೇವಸ್ಥಾನದ ಹತ್ತಿರ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದ ಅಂಗವಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಕನ್ನಡ ಸಾಹಿತ್ಯ ಪರಿಷತ್ತು ಹೋಬಳಿ ಘಟಕದ ವತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಆಚರಣೆ ಮಾಡುತ್ತಿದ್ದು ಹಾಗೂ ಕಸಾಪ ಹೋಬಳಿ ಘಟಕದ ನೂತನ ಪದಾಧಿಕಾರಿಗಳನ್ನು ನೇಮಿಸಲಾಗಿದ್ದು ಪದಗ್ರಹಣ ಕಾರ್ಯಕ್ರಮದಲ್ಲಿ ನಡೆಯಲಿದೆ ಎಂದರು.
ಈ ಕಾರ್ಯಕ್ರಮಕ್ಕೆ 2024ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಆಗಮಿಸಲಿದ್ದು ಅವರಿಗೆ ವಿಶೇಷ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದರು. ಸಮಾರಂಭದಲ್ಲಿ ದಿವ್ಯ ಸಾನಿಧ್ಯವನ್ನು ಚಂದ್ರಶೇಖರ ದೇವರು ವಹಿಸಲಿದ್ದು ಉದ್ಘಾಟಕರಾಗಿ ಶಾಸಕ ದೊಡ್ಡನಗೌಡ ಪಾಟೀಲ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಕಸಾಪ ಅಧ್ಯಕ್ಷ ಶರಣೇಗೌಡ ಪೋಲಿಸಪಾಟೀಲ ವಹಿಸಲಿದ್ದಾರೆ. ಕನ್ನಡಾಂಬೆ ಭಾವಚಿತ್ರಕ್ಕೆ ಕಾಡಾ ನಿಗಮದ ಅಧ್ಯಕ್ಷ ಹಸನಸಾಬ ದೋಟಿಹಾಳ, ಹಾಗೂ ಕಸಾಪ ತಾಲೂಕಾಧ್ಯಕ್ಷ ವಿರೇಶ ಬಂಗಾರಶೆಟ್ಟರ ಅವರು ಪುಷ್ಪಾರ್ಪಣೆ ಮಾಡಲಿದ್ದು. "ಕಟ್ಟೋಣ ಕನ್ನಡ ಕಂಕಣ" ಎಂಬ ಕೃತಿಯನ್ನು ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪುರ ಬಿಡುಗಡೆಗೊಳಿಸಲಿದ್ದಾರೆ, ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಕೆ. ಶರಣಪ್ಪ ವಕೀಲರು ಹಾಗೂ ಕೇಂದ್ರ ಕಸಾಪ ಪ್ರತಿನಿಧಿ ನಬಿಸಾಬ ಕುಷ್ಟಗಿ ಸೇರಿದಂತೆ ದೋಟಿಹಾಳ ಹಾಗೂ ಕೇಸೂರು ಗ್ರಾಪಂ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸದಸ್ಯರು, ಕಸಾಪ ಆಜೀವ ಸದಸ್ಯರು, ಕನ್ನಡಾಭಿಮಾನಿಗಳು ಆಗಮಿಸಲಿದ್ದಾರೆ ಎಂದರು.
ಮಾಜಿ ಕಸಾಪ ಅಧ್ಯಕ್ಷ ಹನುಮಂತರಾವ ದೇಸಾಯಿ ಮಾತನಾಡಿ ಕಸಾಪ ವತಿಯಿಂದ ನಡೆಯುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮಕ್ಕೆ ಸಹಕಾರ ನೀಡುವದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಕಸಾಪ ಹೋಬಳಿ ಘಟಕದ ಕಾರ್ಯದರ್ಶಿ ಶ್ರೀನಿವಾಸ ಕಂಟ್ಲಿ, ಬಸವರಾಜ ಕಡಿವಾಲ, ಮುಖಂಡರಾದ ಕೆವೈ ಕಂದಕೂರು, ಕಲ್ಲಯ್ಯಸ್ವಾಮಿ ಸರಗಣಾಚಾರಿ, ಪ್ರಭುದೇವ ಕಲ್ಯಾಣಮಠ, ಶರಣಪ್ಪ ಗೋತಗಿ, ಪರಶಿವಮೂರ್ತಿ ಮಾಟಲದಿನ್ನಿ, ಮಂಜುನಾಥ ಅಂಗಡಿ, ಪೂರ್ಣಿಮಾ ದೇವಾಂಗಮಠ, ಗಾಯಿತ್ರಿ ಕುದರಿಮೋತಿ ಸೇರಿದಂತೆ ಇತರರು ಇದ್ದರು.
ವರದಿ : ಭೀಮಸೇನರಾವ್ ಕುಲಕರ್ಣಿ, ನಮ್ಮ ನ್ಯೂಜ್ ಕುಷ್ಟಗಿ.
15th November 2024
ಜಿಎಂ ನ್ಯೂಜ್ ಕುಷ್ಟಗಿ.
ಇದೇ ನವಂಬರ್ 21ರಂದು ಶ್ರೀ ಚಿದಂಬರೇಶ್ವರರ 266ನೇ ಜನ್ಮೋತ್ಸವ ಅಂಗವಾಗಿ ಗಜೇಂದ್ರಗಡ ತಾಲೂಕಿನ ಶ್ರೀ ಕ್ಷೇತ್ರ ಸೂಡಿಯಲ್ಲಿ 54ನೇ ಜನ್ಮೋತ್ಸವ ನಿಮಿತ್ಯ ಲೋಕಕಲ್ಯಾಣಾರ್ಥಕ್ಕಾಗಿ ಹನುಮಾನ್ ಚಾಲೀಸ್ ಪಾರಾಯಣ ಹಾಗೂ ಶ್ರೀ ಚಿದಂಬರೇಶ್ವರ ಜನ್ಮರಥೋತ್ಸವವು ಶ್ರೀ ಚಿದಂಬರೇಶ್ವರ ದೇವಸ್ಥಾನದಲ್ಲಿ ಜರುಗಲಿದೆ ಎಂದು ಮುಖ್ಯ ಅರ್ಚಕರಾದ ಭುಜಂಗಭಟ್ಟ ಜೋಷಿ ಅವರು ತಿಳಿಸಿದ್ದಾರೆ.
ಜಾತ್ರಾಮಹೋತ್ಸವದ ಕಾರ್ಯಗಳುಇದೇ 16 ನೇ ದಿನಾಂಕದಿಂದ ಪ್ರಾರಂಭವಾಗುತ್ತವೆ16ರಿಂದ 22ರವರೆಗೆ ನಿತ್ಯವೂ ಕಾಕಡಾರುತಿ,ಅಭಿಷೇಕ, ಅಲಂಕಾರ, ಪಾಲಕೀ ಸೇವೆ,ಅಷ್ಠಾವಧಾನ, ಭಜನೆ, ಆರತಿ ಮುಂತಾದ ಕಾರ್ಯಕ್ರಮಗಳು ನಡೆಯುತ್ತವೆ. 16 ನೇ ದಿನಾಂಕದಿಂದ ಧರ್ಮ ಧ್ವಜಾರೋಹಣ ಜರುಗಲಿದ್ದು, ಅನೇಕ ಹೋಮಗಳು ಜರುಗಲಿವೆ. ನ.18ರಂದು ಸಂಜೆ ಸೂಡಿಗೆ ಶ್ರೀ ಕ್ಷೇತ್ರ ಹೆಬ್ಬಳ್ಳಿಯ ಶ್ರೀ ದತ್ತವಧೂತಮ ಹಾರಾಜರು ಆಗಮಿಸಲಿದ್ದು, ಸಂಜೆ 5 ಗಂಟೆಗೆ ಶೋಭಾಯಾತ್ರೆ ಜರುಗಲಿದೆ.
ನ.19ರಂದು ಶ್ರೀ ದತ್ತಾವಧೂತರ ಸಾನಿಧ್ಯದಲ್ಲಿ 30 ಘಂಟೆಗಳ ಅಖಂಡ ಹನುಮಾನ ಚಾಲೀಸಾ ಪಠಣ ಪ್ರಾರಂಭವಾಗುತ್ತದೆ. ನ.20ರಂದು ಮಧ್ಯಾನ್ಹ 12 ಗಂಟೆಗೆ ಶ್ರೀ ದತ್ತಾವಧೂತರು ಮತ್ತು ಲೋಕಾಪುರದ ಶ್ರೀ ಬ್ರಹ್ಮಾನಂದ ಮಹಾಸ್ವಾಮಿಗಳವರ ಸಾನಿಧ್ಯದಲ್ಲಿ ವಿರೂಪಾಕ್ಷಶಾಸ್ತ್ರೀ ಪುರಸ್ಕಾರ ಪ್ರಧಾನವು ಕಮಡೊಳ್ಳಿಯ ಶ್ರೀ ಶಂಕರಭಟ್ಟ ಜೋಷಿಯವರಿಗೆ ಮತ್ತು ಶ್ರೀ ಇಳಕಲ್ಲಿನ ಶ್ರೀ ವಿನಾಯಕರಾವ್ ಗೊಂಬಿಯವರಿಗೆ ನಡೆಯಲಿದೆ. ಸಾಯಂಕಾಲ 4 ಗಂಟೆಗೆ ಶ್ರೀ ಮಹಾಗಣಪತಿ ದೇವಸ್ಥಾನದಿಂದ ಶ್ರೀ ಚಿದಂಬರೇಶ್ವರ ದೇವಸ್ಥಾನದವರೆಗೆ ಭಜನೆ ವಿವಿಧ ವಾದ್ಯ ವೈಭವಗಳೊಂದಿಗೆ ಮಹಾಸ್ವಾಮಿಯ ಉತ್ಸವ ಮೂರ್ತಿಯ ಮೆರವಣಿಗೆ ನಡೆಯಲಿದೆ.
ನ. 21ರ ಬೆಳಿಗ್ಗೆ 10.30ಕ್ಕೆ ಕುರ್ತಕೋಟಿಯ ಶ್ರೀ ದಿಗಂಬರಶಾಸ್ತ್ರಿಗಳು ಅವರಿಂದ ಶ್ರೀ ಚಿದಂಬರೇಶ್ವರ ತೊಟ್ಟಿಲೋತ್ಸವ ಜನ್ಮಾಖ್ಯಾನ ಜರುಗಲಿದ್ದು, ನಂತರ ಪವಮಾನ ಹೋಮ ಹಾಗೂ ಶಿವಚಿದಂಬರ ಜಪಯಜ್ಞದ ಪೂರ್ಣಾಹುತಿ, ಸತ್ಯ ಚಿದಂಬರ ವೃತ ನಡೆಯಲಿದೆ. ಮುಂಜಾನೆ11.30ಕ್ಕೆ ಧರ್ಮಸಭಾದಲ್ಲಿ ಶ್ರೀ ದತ್ತಾವಧೂತ ಮಹಾರಾಜರು ಶ್ರೀ ಚೈತನ್ಯಾಶ್ರಮ, ಶ್ರೀಕ್ಷೇತ್ರ ಹೆಬ್ಬಳ್ಳಿ ಇವರ ಸಾನಿಧ್ಯದಲ್ಲಿ ಶ್ರೀ ಚಿದಂಬರ ಪಂಚಾಂಗ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಶ್ರೀ ಚಿದಂಬರಭಟ್ಟ ಜೋಶಿ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ರೋಣ ಶಾಸಕ ಜಿ. ಎಸ್. ಪಾಟೀಲ ಭಾಗವಹಿಸಲಿದ್ದಾರೆ. ಮಧ್ಯಾಹ್ನ 1:30ಕ್ಕೆ
ಪೂಜ್ಯರ ಸಮ್ಮುಖದಲ್ಲಿ ವೇದಘೋಷ, ಭಜನೆ ಹಾಗೂ ವಿವಿಧ ವಾದ್ಯವೈಭವಗಳೊಂದಿಗೆ
ಶ್ರೀ ಚಿದಂಬರೇಶ್ವರ ರಥೋತ್ಸವವು ವಿಜೃಂಭಣೆಯಿಂದ ಜರುಗಲಿದೆ. ನಂತರ ಮಹಾನೈವೇದ್ಯ, ಮಹಾ ಮಂಗಳಾರತಿ, ಅನ್ನಸಂತರ್ಪಣೆ ನೆರವೇರಲಿದೆ.
ನ.22ರಂದು ಮಧ್ಯಾಹ್ನ 1 ಗಂಟೆಗೆ ಶ್ರೀ ಸ್ವಾಮಿ ಪುಷ್ಕರಣಿಯಲ್ಲಿ ಅವಭ್ರತೋತ್ಸವ, ಶ್ರೀ ಚಿದಂಬರ ಚರಿತ್ರೆ ಸಪ್ತಾಹ ಮಂಗಳ, ಗುರುಪಾದ ಪೂಜೆ, ಬುತ್ತಿಪೂಜಾ ದರ್ಶನ, ನೈವೇದ್ಯ, ಮಹಾಮಂಗಳಾರತಿ, ವನಭೋಜನ ಕಾರ್ಯಕ್ರಮದೊಂದಿಗೆ ಜಾತ್ರಾಮಹೋತ್ಸವ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿವೆ ಎಂದು ಶ್ರೀ ಭುಜಂಗಭಟ್ಟ ಜೋಷಿ, ಶ್ರೀ ಚಿದಂಬರ ಪಂಚಾಂಗ ಸಹಾಯಕರ್ತರು ಶ್ರೀ ಯಾಜ್ಞವಲ್ಕ್ಯಾಶ್ರಮ, ಶ್ರೀ ಚಿದಂಬರೇಶ್ವರ ದೇವಸ್ಥಾನ ಸೂಡಿ ಇವರು ತಿಳಿಸಿದ್ದಾರೆ.
ವರದಿ : ಭೀಮಸೇನರಾವ್ ಕುಲಕರ್ಣಿ ಕುಷ್ಟಗಿ.
22nd October 2024
ಜಿಎಂ ನ್ಯೂಜ್ ಕುಷ್ಟಗಿ.
ಕುಷ್ಟಗಿ : ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ ಅಡಿಯಲ್ಲಿ ಕುಷ್ಟಗಿ ಯೋಜನಾ ಕಛೇರಿ ವ್ಯಾಪ್ತಿಯ ತಾಲೂಕಾ ಮಟ್ಟದ ಒಕ್ಕೂಟಗಳ ಪದಾಧಿಕಾರಿಗಳ ಸಮಾವೇಶ ಕಾರ್ಯಕ್ರಮವು ಕೊಪ್ಪಳ ಜಿಲ್ಲೆಯ ಕುಷ್ಟಗಿ ನಗರದ ಎನ್ ಸಿ ಹೆಚ್ ಪ್ಯಾಲೇಸ್ ದಲ್ಲಿ ಜರುಗಿತು.
ಈ ಕಾರ್ಯಕ್ರಮವನ್ನು ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ದೇವೇಂದ್ರಪ್ಪ ಬಳೂಟಗಿ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರತಿಯೊಂದು ಕಾರ್ಯಕ್ರಮ ಬಹಳ ಅರ್ಥಗರ್ಭಿತವಾಗಿ ನಡೆಯುತ್ತವೆ. ಮಧ್ಯವರ್ಜನಂತಹ ಕಾರ್ಯಕ್ರಮಗಳು ಜನರ ಜೀವನವನ್ನೇ ಬೆಳಗಿಸಿದಂತಹ ಕಾರ್ಯಕ್ರಮಗಳಾಗಿವೆ. ಧರ್ಮಸ್ಥಳದ ಯಾವುದೇ ಕಾರ್ಯಕ್ರಮದಲ್ಲಿ ನಾನು ಯಾವುದೇ ಫಲಾಪೇಕ್ಷೆ ಇಲ್ಲದೆ ಸಕ್ರಿಯವಾಗಿ ಭಾಗವಹಿಸುತ್ತೇನೆ ಎಂದು ಹೇಳಿದರು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗಂಗಾವತಿ ಶಾಖೆಯ ಪ್ರಬಂಧಕರಾದ ವಿರುಪಾಕ್ಷಪ್ಪ ಮಾತನಾಡಿ ಬ್ಯಾಂಕಿನ ನಿಯಮಗಳು ನಿಬಂಧನೆಗಳು ಮತ್ತು ಸ್ವ ಸಹಾಯ ಸಂಘಗಳ ಸಾಲದ ವ್ಯವಹಾರದ ಬಗ್ಗೆ ತಿಳಿಸಿದರು. ಬ್ಯಾಂಕ್ ಸೌಲಭ್ಯಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಬಿ.ಸಿ ಗಳನ್ನು ಆಯ್ಕೆ ಮಾಡಿಕೊಂಡಿದೆ. ಸಂಘಗಳನ್ನು ರಚನೆ ಮಾಡಿ ಸಾಮಾನ್ಯ ಜನರಿಗೆ ಉಳಿತಾಯದ ಜೊತೆಗೆ ಆರ್ಥಿಕ ಸಹಕಾರವನ್ನು ನೀಡುತ್ತಾ ಬಂದಿದೆ, ಬ್ಯಾಂಕಿನ ನಿಯಮಗಳು ನಿಬಂಧನೆಗಳು ಮತ್ತು ಸ್ವ ಸಹಾಯ ಸಂಘಗಳ ಸಾಲದ ವ್ಯವಹಾರದ ಬಗ್ಗೆ ತಿಳಿಸಿದರು.
ಕೊಪ್ಪಳ ಜಿಲ್ಲೆಯ ನಿರ್ದೇಶಕರಾದ ಪ್ರಕಾಶರಾವ್ ಮಾತನಾಡಿ ಯೋಜನೆಯ ಕಾರ್ಯಕ್ರಮಗಳು ನಡೆದು ಬಂದ ಹಾದಿ ಪೂಜ್ಯ ಡಾ. ಡಿ. ವೀರೇಂದ್ರ ಹೆಗಡೆಯವರ ಉದ್ದೇಶ ಮತ್ತು ಕನಸುಗಳ ಬಗ್ಗೆ ಮಾರ್ಗದರ್ಶನ ನೀಡಿದರು. ಕುಷ್ಟಗಿ ತಾಲೂಕಿನ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಮಾಡಿದ ಸಾಧನೆಗಳನ್ನು ಯೋಜನಾಧಿಕಾರಿಗಳು ಅಂಕಿ ಅಂಶಗಳ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ವೀರೇಶ್ ಬಂಗಾರಶೆಟ್ರು, ಶೇಖರ್ ನಾಯ್ಕ, ಮಹಾಂತಯ್ಯ ಅರಳೆಲಿಮಠ, ಜಯತೀರ್ಥ ದೇಸಾಯಿ, ವಿ ವಿ ಹಿರೇಮಠ, ರುದ್ರಪ್ಪ ಅಕ್ಕಿ ಹಾಗೂ ಜನಜಾಗೃತಿ ವೇದಿಕೆ ವೇದಿಕೆ ಸದಸ್ಯರು ಭಾಗವಹಿಸಿ ಕಾರ್ಯಕ್ರಮದ ಬಗ್ಗೆ ಶುಭ ಹಾರೈಸಿದರು. ತಾಲೂಕಿನ 12 ವಲಯದ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು, ಕಚೇರಿ ಸಿಬ್ಬಂದಿಗಳು ಮತ್ತು ಒಟ್ಟು 108 ಒಕ್ಕೂಟದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ವರದಿ : ಭೀಮಸೇನರಾವ್ ಕುಲಕರ್ಣಿ ಕುಷ್ಟಗಿ.
2nd October 2024
ಜಿಎಂ ನ್ಯೂಜ್ ಕುಷ್ಟಗಿ
ಕುಷ್ಟಗಿ : ಎಲ್ಲಾ ಅನಾಚಾರಗಳಿಗೆ ಮಧ್ಯಪಾನ, ಗುಟಕ, ಓಸಿ, ಇಸ್ಪಟ್ ಗಳಂತಹ ದುಶ್ಚಟಗಳೇ ಕಾರಣವೆಂದು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಪ್ರಧಾನಮಂತ್ರಿಯ 15 ಅಂಶಗಳ ಕಾರ್ಯಕ್ರಮ ಅನುಷ್ಠಾನ ಸಮಿತಿ ಸದಸ್ಯರಾದ ನಜೀರ್ ಸಾಬ ಮೂಲಿಮನಿ ಹೇಳಿದರು.
ನಂತರ ಮಾತನಾಡಿದ ಅವರು, ಕುಷ್ಟಗಿ ತಾಲೂಕಿನ ನಿಡಶೇಷಿ ಗ್ರಾಮದ ಶ್ರೀ ಚನ್ನಬಸವೇಶ್ವರ ಮಠದ ಕಿರಿಯ ಮಹಾಸ್ವಾಮಿಗಳಾದ ಶ್ರೀ ಅಭಿನವ ಕರಿಬಸವ ಶಿವಾಚಾರ್ಯರು ಸದ್ಭಾವನ ಪಾದಯಾತ್ರೆ ಹಮ್ಮಿಕೊಂಡಿದ್ದು ಶಿವಾಚಾರ್ಯರು ಜೋಳಿಗೆ ಹಿಡಿದುಕೊಂಡು ದುಶ್ಚಟಗಳನ್ನು ಜೋಳಿಗೆಗೆ ಹಾಕಿ ವ್ಯಸನ ಮುಕ್ತರಾಗಬೇಕೆಂದು, ಚಟ್ಟ ಕಟ್ಟುವ ಚಟಗಳನ್ನು ಮಟ್ಟ ಹಾಕೋಣ ಎನ್ನುವ ಅತ್ಯುತ್ತಮ ಐತಿಹಾಸಿಕ ಕಾರ್ಯಕ್ರಮ ದುಶ್ಚಟಗಳ ಭಿಕ್ಷೆ ಶ್ರದ್ಧಾಶಯಗಳ ದೀಕ್ಷೆ ಎಂದು ವೇದವಾಕ್ಯದೊಂದಿಗೆ ಪ್ರಾರಂಭವಾಗಿರತಕ್ಕಂತಹ ಈ ಮಹತ್ತರ ಕಾರ್ಯಕ್ರಮ ಶ್ಲಾಘನೀಯವಾದದು. ಮಧ್ಯಪಾನವೆಂಬುದು ಗ್ರಾಮಗಳಲ್ಲಿ ಯುವಕರಲ್ಲಿ ಸರ್ವೇಸಾಮಾನ್ಯವಾಗಿದೆ ಶ್ರೀಗಳ ಈ ಮಹತ್ ಕಾರ್ಯಕ್ಕೆ ಭೇದಭಾವ ಇಲ್ಲದೆ ಜಾತಿ ಭೇದವಿಲ್ಲದೆ ಎಲ್ಲರೂ ಕೈ ಜೋಡಿಸಬೇಕಿದೆ ಎಂದು ಹೇಳಿದರು.
ಇದೇ ವೇಳೆ ಶ್ರೀ ಅಭಿನವ ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳಿಗೆ ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಪ್ರಧಾನಮಂತ್ರಿಯ 15 ಅಂಶಗಳ ಕಾರ್ಯಕ್ರಮ ಅನುಷ್ಠಾನ ಸಮಿತಿ ಸದಸ್ಯ ನಜೀರ್ ಸಾಬ ಮೂಲಿಮನಿ,ಅಲ್ ಮುಸ್ಲಿಂ ಸೇವಾ ಸಮಿತಿಯ ಅಧ್ಯಕ್ಷರಾದ ಹಸನುದೀನ್ ಆಲಂಬರದಾರ್, ಉಪಾಧ್ಯಕ್ಷ ಸೈಯದ್ ಅತ್ತಾರ್, ಮುಸ್ಲಿಂ ಯೂತ್ ಕಮಿಟಿಯ ಮೌಲಾಹುಸೇನ್ ಗುಮಗೇರಿ, ಬಾಷಾ ಸವಡಿ ಉಪಸ್ಥಿತರಿದ್ದರು.
ವರದಿ : ಭೀಮಸೇನರಾವ್ ಕುಲಕರ್ಣಿ ಕುಷ್ಟಗಿ.
29th September 2024
ಜಿಎಂ ನ್ಯೂಜ್ ಕುಷ್ಟಗಿ.
ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕ, ಕುಷ್ಠಗಿ,
ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು,
ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳ, ಮಲ್ಲಪ್ಪ ಸುಂಕದ ಕೃಷಿ ಮತ್ತು ಪರಿಸರ ಪ್ರತಿಷ್ಠಾನ, ಮಂಗಳೂರು, ಕುವೆಂಪು ರೈತ ಉತ್ಪಾದಕರ ಸಂಸ್ಥೆ (ರಿ), ಕುಷ್ಟಗಿ, ಕರುನಾಡು ರೈತ ಉತ್ಪಾದಕರ ಸಂಸ್ಥೆ (ರಿ), ಬೀಜಕಲ್ ಮತ್ತು ಶ್ರೀ ಮಾರುತೇಶ್ವರ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘ, ನಿ (ರಿ), ಶಾಖಾಪೂರ ಇವರ ಸಹಯೋಗದಲ್ಲಿ ದಿವಂಗತ ಎಸ್.ಕೆ. ಪಾಟೀಲ್, ನಿವೃತ್ತ ಅಭಿಯಂತರರು, ಕಂದಕೂರು ಇವರ ಸ್ಮರಣಾರ್ಥವಾಗಿ ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ವಿಚಾರ ಸಂಕಿರಣ ಹಾಗೂ ಸಾಧಕ ರೈತರಿಗೆ ಸನ್ಮಾನ ಕಾರ್ಯಕ್ರಮವು ಇಂದು ದಿನಾಂಕ 29-09-2024 ರವಿವಾರ ಮುಂಜಾನೆ 10.30 ಕ್ಕೆ, ಎಸ್.ಕೆ. ಪಾಟೀಲ್ ರವರ ನಿವಾಸದ ಆವರಣ, ಕೊಪ್ಪಳ ರಸ್ತೆ, ಕುಷ್ಟಗಿಯಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದ ದತ್ತಿ ದಾನಿಗಳು ವಿನಾಯಕ ಎಸ್. ಪಾಟೀಲ್ ಆಗಿದ್ದಾರೆ. ಕಾರ್ಯಕ್ರಮದ ನಿರೂಪಣೆಯನ್ನು ತಿಪ್ಪಣ್ಣ ತಾವರಗೇರೆ, ಶಿಕ್ಷಕರು ಮಾಡಲಿದ್ದಾರೆ. ಪ್ರಾರ್ಥನೆಯನ್ನು ಶ್ರೀಮತಿ ಶಿವಲೀಲ ಹಿರೇಮಠ ಮಾಡಲಿದ್ದು, ಸ್ವಾಗತ ಹಾಗೂ ಪ್ರಾಸ್ತಾವಿಕ ಭಾಷಣವನ್ನು ವೀರೇಶ ಬಂಗಾರ ಶೆಟ್ಟರ್, ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್, ಕುಷ್ಟಗಿ ಇವರಿಂದ ನಡೆಯಲಿದೆ. ತಿಮ್ಮಣ್ಣ ಸೋಮಪ್ಪ ಚವಡಿ, ಮಾನ್ಯ ವ್ಯವಸ್ಥಾಪಕರು ಮಂಡಳಿ ಸದಸ್ಯರು, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು ಇವರು ಕಾರ್ಯಕ್ರಮ ಉದ್ಘಾಟನೆ, ಶರಣೆಗೌಡ ಪಾಟೀಲ್, ಜಿಲ್ಲಾಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್, ಕುಷ್ಟಗಿ ಇವರು ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಹಾಲಪ್ಪ ಬಸಪ್ಪ ಆಚಾರ್, ಮಾಜಿ ಸಚಿವರು, ಯಲಬುರ್ಗಾ, ಡಾ. ಗುರುರಾಜ ಸುಂಕದ, ವ್ಯವಸ್ಥಾಪನಾ ಮಂಡಳಿ ಸದಸ್ಯರು, ಹಾಗೂ ಡೀನ್ (ಸ್ನಾತಕೋತ್ಸರ), ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು, ದೇವೇಂದ್ರಪ್ಪ ಬಳೂಟಗಿ, ಪ್ರಗತಿಪರ ರೈತರು, ಕುಷ್ಠಗಿ,
ಎಸ್. ಆರ್. ನವಲಿ ಹಿರೇಮಠ, ಸಮಾಜ ಸೇವಕರು, ಇಳಕಲ್, ನಬೀಸಾಬ್, ಕೇಂದ್ರ ಪ್ರತಿನಿಧಿಗಳು, ಕನ್ನಡ ಸಾಹಿತ್ಯ ಪರಿಷತ್, ಡಿ.ಕೆ. ಪಾಟೀಲ್, ಸಮಾಜ ಸೇವಕರು, ಕಂದಕೂರು,
ಎಸ್.ಬಿ. ಶಿವನಗುತ್ತಿ, ನಿವೃತ್ತ ಪ್ರಾಂಶುಪಾಲರು, ಕುಷ್ಠಗಿ, ಸುಕುಮುನಿ, ಎಸ್. ಬಂಡಿ, ಅಧ್ಯಕ್ಷರು, ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘ, ಕುಷ್ಠಗಿ ಶಾಖಾಪುರ, ಕುಷ್ಠಗಿ, ಪರಶುರಾಮ ಹ. ಪಲ್ಲೇದ, ಮಾಜಿ ಎ.ಪಿ.ಎಮ್.ಸಿ. ಅಧ್ಯಕ್ಷರು, ಕುಷ್ಠಗಿ, ಶ್ರೀನಿವಾಸ ಎನ್. ಗುತ್ತೇದಾರ, ಕಾರ್ಯದರ್ಶಿ, ಕುವೆಂಪು ರೈತ ಉತ್ಪಾದಕರ ಸಂಸ್ಥೆ, ಕುಷ್ಟಗಿ,
ಬೀರಪ್ಪ ಕಂಬಳಿ, ಅಧ್ಯಕ್ಷರು, ಕರುನಾಡು ರೈತ ಉತ್ಪಾದಕರ ಸಂಸ್ಥೆ, ಕುಷ್ಠಗಿ ಇವರುಗಳು ವಹಿಸಲಿದ್ದಾರೆ.
ಉಪನ್ಯಾಸವನ್ನು ಮನೋಜ ಸುಂಕದ, ಕಾರ್ಯದರ್ಶಿಗಳು, ಮಲ್ಲಪ್ಪ ಸುಂಕದ ಕೃಷಿ ಮತ್ತು ಪರಿಸರ ಪ್ರತಿಷ್ಠಾನ, ಮಂಗಳೂರು, ಡಾ. ಎಂ.ವಿ. ರವಿ, ಪ್ರಾಧ್ಯಾಪಕರು ಮತ್ತು ವಿಸ್ತರಣಾ ಮುಂದಾಳು, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳ, ವಾಮನಮೂರ್ತಿ ಪುರೋಹಿತ, ಸಹಾಯಕ ಪ್ರಾಧ್ಯಾಪಕರು, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳ, ಇವರು ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಎಲ್ಲ ಗಣ್ಯಮಾನ್ಯರಿಂದ ರೈತರಿಗೆ ಸನ್ಮಾನ ನಡೆಯಲಿದೆ. ವಂದನಾರ್ಪಣೆಯನ್ನು ಭೀಮನಗೌಡ ಕೆ, ಕಂಪ್ಲಿ ಮಾಡಲಿದ್ದಾರೆ.
ಶ್ರೀಮತಿ. ವಿದ್ಯಾ ಕಂಪಾಪುರ ಮಠ, ಎಸ್.ಜಿ. ಕಡೇಮನಿ, ಉಮೇಶ್ ಹಿರೇಮತ್, ಮಹೇಶ್ ಹಡಪದ, ಲೆಂಕಪ್ಪ ವಾಲಿಕರ್, ಕನ್ನಡ ಸಾಹಿತ್ಯ ಪರಿಷತ್, ಕುಷ್ಟಗಿ ಇವರು ಉಪಸ್ಥಿತರಿರುತ್ತಾರೆ.
ಇಂದು ನಡೆಯುವ ಈ ಕಾರ್ಯಕ್ರಮಕ್ಕೆ ಎಲ್ಲರೂ ಆಗಮಿಸಿ ಶೋಭೆ ತರಬೇಕೆಂದು ಕುಷ್ಟಗಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ವೀರೇಶ ಬಂಗಾರ ಶೆಟ್ಟರ್ ತಿಳಿಸಿದ್ದಾರೆ.
ವರದಿ : ಭೀಮಸೇನರಾವ್ ಕುಲಕರ್ಣಿ ಕುಷ್ಟಗಿ.