


19th January 2026
ಕುಷ್ಟಗಿ:- ತಾಲೂಕಿನ ಕಂದಕೂರು ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ತಾಲೂಕು ಘಟಕ ಕುಷ್ಟಗಿ, ಇವರ ಸಹಯೋಗದೊಂದಿಗೆ ಜ್ಞಾನವಿಕಾಸ ಕಾರ್ಯಕ್ರಮದ ಅಡಿಯಲ್ಲಿ ಮಹಿಳೆಯರಿಗೆ ಉಚಿತ ಹೊಲಿಗೆ ತರಬೇತಿ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ರವಿವಾರ ನಡೆಯಿತು.
ಕಂದಕೂರು ಗ್ರಾಮದ ಭೀಮನಗೌಡ ಪಾಟೀಲ ಮತ್ತು ಶರಣಪ್ಪ, ಶಾಲೆಯ ಶಿಕ್ಷಕರಾದ ಕುಮಾರಸ್ವಾಮಿ ಹಿರೇಮಠ, ಸಭೆಯ ಅಧ್ಯಕ್ಷರಾದ ಶಕುಂತಲಮ್ಮ, ಹೊಲಿಗೆ ತರಬೇತಿ ಶಿಕ್ಷಕಿ ನೀಲಮ್ಮ ರವರು
ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮ ಕುರಿತು ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕರಾದ ಕುಮಾರಸ್ವಾಮಿ ಹಿರೇಮಠ ಮಾತನಾಡಿ ಇವತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಒಂದಲ್ಲ ಒಂದು ರೀತಿಯಲ್ಲಿ ಸಾಮಾಜಿಕವಾಗಿ ಅನೇಕ ಕಾರ್ಯಕ್ರಮಗಳನ್ನು ಯೋಜನೆಯ ಮೂಲಕ ರೂಪಿಸಿ ಸಮಾಜದ ಒಳಿತಿಗಾಗಿ ಸಾಕಷ್ಟು ಕಾರ್ಯಕ್ರಮವನ್ನು ಮಾಡಿ ನಿರುದ್ಯೋಗಿಗಳಿಗೆ ಉದ್ಯೋಗವನ್ನು ಕೊಡುವಂತಹ ಕೆಲಸವನ್ನು ಶ್ರೀ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ಮಾಡುತ್ತಿದೆ ಎಂದು ಹೇಳಿದರು
ಇದೆ ವೇಳೆ ಉಚಿತ ಹೊಲಿಗೆ ತರಬೇತಿ ಕಾರ್ಯಕ್ರಮದಲ್ಲಿ ಗ್ರಾಮದ ಸುಮಾರು 35 ಮಹಿಳೆಯರಿಗೆ ಉಚಿತ ಹೊಲಿಗೆ ತರಬೇತಿ ನೀಡಿ ಸೇವಾ ಪ್ರಮಾಣ ಪತ್ರವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಶಕುಂತಲಾ, ಹೊಲಿಗೆ ಶಿಕ್ಷಕಿ ನೀಲಮ್ಮ, ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ರೂಪ, ಕಾರ್ಯ ಕ್ಷೇತ್ರದ ಸೇವಾ ಪ್ರತಿನಿಧಿ ಗಿರಿಜಾ ಸೇರಿದಂತೆ ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು...
ರಿಪೋರ್ಟರ್, ಭೀಮಸೇನರಾವ್ ಕುಲಕರ್ಣಿ ಜಿಎಂ ನ್ಯೂಸ್ ಕುಷ್ಟಗಿ.

2nd January 2026
ಕುಷ್ಟಗಿ : ಇಂದಿನ ಕಾಲದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವವಿದ್ದು ಉನ್ನತ ಶಿಕ್ಷಣವನ್ನು ಮಕ್ಕಳಿಗೆ ಕೊಡುವುದುರ ಜೊತೆಗೆ ನಿಮ್ಮ ಕುಲಕಸುಬುಗಳ ಬಗ್ಗೆ ಅರಿವು ಮೂಡಿಸುವುದನ್ನು ಮರೆಯಬಾರದೆಂದು ಕಾಂಗ್ರೆಸ್ ಯುವ ಮುಖಂಡರಾದ ದೊಡ್ಡಬಸವನಗೌಡ ಪಾಟೀಲ್ ಬಯ್ಯಾಪುರ ಹೇಳಿದರು.
ತಾಲೂಕ ಆಡಳಿತ ಹಾಗೂ ವಿಶ್ವಕರ್ಮ ಸಮಾಜದ ಸಹಯೋಗದಲ್ಲಿ ಪಟ್ಟಣದ ಶ್ರೀ ಕಾಳಿಕಾದೇವಿ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಹಾಗೂ ಮೌನೇಶ್ವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿಶ್ವಕರ್ಮ ಸಮಾಜದ ಕುಲಕಸುಬುಗಳು ಎಂದಿಗೂ ಶಾಸ್ವತವಾಗಿರುತ್ತವೆ. ಕುಲಕಸುಬುಗಳ ಬಗ್ಗೆ ತಮಗೆ ಕೀಳರಿಮೆ ಬರುವುದು ಬೇಡ. ಯಾವುದೇ ಸಮಾಜದವರೇ ಆಗಿರಲಿ ಆರ್ಥಿಕವಾಗಿ ಬಡತನವಿದ್ದರೂ ಜ್ಞಾನದಲ್ಲಿ ಬಡತನ ಇರಬಾರದು. ಆಧುನಿಕತೆಗೆ ತಕ್ಕಂತೆ ಜೀವನ ಮಾಡಬೇಕು. ತಂತ್ರಜ್ಞಾನ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು. ಪುರಾತನ ಕಾಲದಲ್ಲಿ ಶಿಲ್ಪಿಗಳು ನೂರಾರು ದಿನಗಳ ಕಾಲ ಕೆತ್ತನೆ ಮಾಡಿ ರೂಪವನ್ನು ಕೊಡಬೇಕಾಗಿತ್ತು. ಅಂದಿನ ಕಾಲದಲ್ಲಿ ಯಾವುದೇ ಯಂತ್ರಗಳು ಸಹ ಇರಲಿಲ್ಲ. ಅಂತಹ ಕಾಲದಲ್ಲಿ ಜಕಣಾಚಾರಿಯವರ ಶಿಲ್ಪಕಲೆಗಳು ಇಂದಿಗೂ ಜಗತ್ತಿಗೆ ಮಾದರಿಯಾಗಿವೆ. ಅವರು ನೀಡಿದ ಶಿಲ್ಪಕಲಾ ಕೊಡುಗೆಗಳು ಅಮರವಾಗಿದ್ದು ಅಮರಶಿಲ್ಪಿ ಜಕಣಾಚಾರಿಯಾಗಿ ಯಾಗಿ ಇಂದಿಗೂ ಎಂದಿಗೂ ಎಲ್ಲರ ಮನದಲ್ಲಿ ಉಳಿದಿದ್ದಾರೆ ಎಂದರು.
ನಂತರ ತಾಲೂಕಾ ಅಧ್ಯಕ್ಷ ಶರಣಪ್ಪ ಬಡಿಗೇರ ಪ್ರಾಸ್ತಾವಿಕವಾಗಿ ಮಾತನಾಡಿ ಹಿರಿಯರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಡೆಯಬೇಕು. ಮಕ್ಕಳಿಗೆ ವಿಶ್ವಕರ್ಮ ಬಾಂಧವರು ಉತ್ತಮ ಶಿಕ್ಷಣ ಕೊಡಿಸಿ ಶಿಕ್ಷಣವಂತರಾಗಬೇಕು. ಸಮಾಜದಲ್ಲಿ ಸಂಘಟನೆಯ ಕೊರತೆ ಇದ್ದು ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು. ಸರಕಾರದ ಸೌಲಭ್ಯ ಪಡೆಯಲು ನಮ್ಮ ಸಮಾಜದವರು ಸಂಘಟಿತರಾಗಬೇಕು ಎಂದರು.
ಶಿಕ್ಷಕ ರಾಮಚಂದ್ರಪ್ಪ ಬಡಿಗೇರ ಅವರು ಉಪನ್ಯಾಸ ನೀಡಿ, ಕಾಯಕ ಸಂಸ್ಕೃತಿ ಹುಟ್ಟಿದ್ದು ವಿಶ್ವಕರ್ಮ ಸಮಾಜದಿಂದ, ದೇಶದಲ್ಲಿ ನಿರ್ಮಿಸಿರುವ ಶಿಲ್ಪ ಕಲೆಗೆ ಜಕಣಾಚಾರಿ ಅವರ ಕೊಡುಗೆ ಅಪಾರವಿದೆ. ಯಾವುದೇ ತಂತ್ರಜ್ಞಾನ ಇಲ್ಲದ ಕಾಲದಲ್ಲಿ ಓರ್ವ ಸಾಮಾನ್ಯ ವಿಶ್ವಕರ್ಮ ಸಮಾಜದ ವ್ಯಕ್ತಿ ಸುಂದರ ಕಲಾಕೃತಿಗಳನ್ನು ನಿರ್ಮಿಸಿರಿವುದು ಈಗ ದೊಡ್ಡ ಶಕ್ತಿ ಆಗಿದ್ದಾರೆ. ಶತಮಾನ ಕಳೆದರು ಅಚ್ಚಳಿಯದೆ ಉಳಿದಿರುವ ಜಕಣಾಚಾರಿ ಅವರು ಈ ಜಗತ್ತಿಗೆ ನೀಡಿದ ಶಿಲ್ಪಕಲೆ ಅಜರಾಮರವಾಗಿದೆ ಎಂದರು.
ಶಿಕ್ಷಕ ನಟರಾಜ ಸೋನಾರ ಮಾತನಾಡಿ ಶ್ರೀ ಮೌನೇಶ್ವರ ವಚನಗಳು ಅಲ್ಲಮಪ್ರಭು ವಚನಗಳಿಗೆ ಸಮವಾಗಿವೆ. ಹಿಂದೂ ಮುಸ್ಲಿಂ ಭಾವೈಕ್ಯತೆಯ ಶರಣರು, ಕಂಬಳಿ ಬಿಸಿ ಮಳೆ ತರಿಸಿರುವ ಪವಾಡ ಪುರುಷ ಮೌನೇಶ್ವರರು ಎಂಬ ಪ್ರತಿತಿ ಇದೆ. ಇಂತಹ ಮಹಾನ್ ಶರಣ ತಿಂಥಣಿ ಮೌನೇಶ್ವರ ತತ್ವಗಳನ್ನು, ಜಕಣಾಚಾರಿ ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ಇದಕ್ಕೂ ಮೊದಲು ಅಮರಶಿಲ್ಪಿ ಜಕಣಾಚಾರಿ ಹಾಗೂ ಶ್ರೀ ಮೌನೇಶ್ವರರ ಭಾವಚಿತ್ರ ಮೆರವಣಿಗೆಯು ಹನಮಸಾಗರದ ವಿಶ್ವಕರ್ಮ ಸಮಾಜದ ಮಹಿಳಾ ಭಜನಾ ಮಂಡಳಿಯವರಿಂದ ಭಕ್ತಿ, ಭಜನಾಗೀತೆಗಳ ಜೊತೆಗೆ ಕುಂಭಹೊತ್ತ ಮಹಿಳೆಯರಿಂದ ಕುಷ್ಟಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯು ವಿಜೃಂಭಣೆಯಿಂದ ನಡೆಯಿತು.
ಈ ಸಂದರ್ಭದಲ್ಲಿ ಎ. ತೀರ್ಥಂದ್ರ ಮಹಾಸ್ವಾಮಿಗಳು, ನಾಗಮೂರ್ತೆಂದ್ರ ಮಹಾಸ್ವಾಮಿಗಳು, ದಿವಾಕರ ಮಹಾಸ್ವಾಮಿಗಳು, ನರಸಿಂಹಚಾರ್ಯರು, ಹಿರಿಯ ಮುಖಂಡರಾದ ಮಾಜಿ ಜಿಲ್ಲಾಧ್ಯಕ್ಷರಾದ ನಾಗಲಿಂಗಪ್ಪ ಪತ್ತಾರ, ಈಶಪ್ಪ ಬಡಿಗೇರ, ಜಿಲ್ಲಾ ಕಾರ್ಯದರ್ಶಿ ರುದ್ರಪ್ಪ ಮಾಸ್ತರ್, ಸಹಕಾರ ರತ್ನ ಪುರಸ್ಕೃತ ಮಾಹಾಲಿಂಗಪ್ಪ ದೋಟಿಹಾಳ, ವಿಶ್ವಕರ್ಮ ನಿಗಮದ ಜಿಲ್ಲಾ ನಿರ್ದೇಶಕ ದೇವೇಂದ್ರ ಬಡಿಗೇರ, ಶಿರಗುಂಪಿ ಗ್ರಾ.ಪಂ. ಅದ್ಯಕ್ಷೆ ಸವಿತಾ ಕಾಳೇಶ ಬಡಿಗೇರ, ಮಹಾದೇವಪ್ಪ ಕಮ್ಮಾರ, ನಗರ ಘಟಕದ ಅಧ್ಯಕ್ಷ ಸಿದ್ದಪ್ಪ ಬಡಿಗೇರ, ಮಾಜಿ ಅಧ್ಯಕ್ಷ ಗುರಪ್ಪ ಬಡಿಗೇರ, ರಾಮಚಂದ್ರಪ್ಪ ಬಡಿಗೇರ, ಮಾನಪ್ಪ ಕಮ್ಮಾರ, ಶ್ರೀಶೈಲ ಬಡಿಗೇರ, ಕೃಷ್ಣಪ್ಪ ಪತ್ತಾರ, ವೀರೇಶ ಕಮ್ಮಾರ, ಕಾಶೀಮಪ್ಪ ಬಿಜಕಲ್ಲ, ನರಸಿಂಹ ಕಾರಟಗಿ, ಬಸವರಾಜ ಬಡಿಗೇರ, ಅಮರೇಶ ಬಡಿಗೇರ, ಮಾರುತಿ ಬಡಿಗೇರ, ಮಹಾಂತೇಶ ಬಡಿಗೇರ, ಅನೀಲ ಕಮ್ಮಾರ ಸೇರಿದಂತೆ ಇತರರಿದ್ದರು.

31st December 2025
ಕುಷ್ಟಗಿ : ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಕೊಪ್ಪಳ ಹಾಗೂ ತಾಲೂಕ ಪಂಚಾಯತ ಕುಷ್ಟಗಿ ಮತ್ತು ಗ್ರಾಮ ಪಂಚಾಯತ ಹೂಲಗೇರಿ ವತಿಯಿಂದ ಇಂದು ವಿಕಲಚೇತನರ ವಿಶೇಷ ಸಮನ್ವಯ ಗ್ರಾಮ ಸಭೆಯನ್ನು ನಡೆಸಲಾಯಿತು
ಈ ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಕವಿತಾ ರವಿ ಚವ್ಹಾಣ ವಹಿಸಿಕೊಂಡು ಮಾತನಾಡಿ ವಿಕಲಚೇತನರು ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಂಡು ಸ್ವಾವಲಂಬಿ ಜೀವನವನ್ನು ನಡೆಸಬೇಕು ಎಂದರು.
ಪಿಡಿಓ ಆನಂದ ಯಲಗೇರಿ ಮಾತನಾಡಿ ಶೇಕಡಾ 5 ರಷ್ಟು ಅನುದಾನವನ್ನು ಎಲ್ಲಾ ವಿಕಲಚೇತನರು ಮನವಿ ಸಲ್ಲಿಸಿ ಸೂಕ್ತವಾದ ಸೌಲಭ್ಯ ನೀಡಲಾಗುತ್ತದೆ ಹಾಗೂ ಎಲ್ಲರೂ ವಿಕಲಚೇತನರ ವಿಶಿಷ್ಟ ಗುರುತಿನ ಚೀಟಿ ಮಾಡಿಸಿಕೊಳ್ಳಬೇಕು ಎಂದರು ಹಾಗೂ ಎಲ್ಲಾ ಸೌಲಭ್ಯಗಳನ್ನು ಒದಗಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.
ವಿಕಲಚೇತನರ ಸಂಘಟನೆಯ ಅಧ್ಯಕ್ಷರಾ ಚಂದಪ್ಪ ಗುಡಿಮನಿ ಇವರು ವಿಕಲಚೇತನರ ಸರ್ಕಾರಿ ಸೌಲಭ್ಯಗಳ ಕುರಿತು ಹಲವು ಮಾಹಿತಿಗಳನ್ನು ನೀಡಿದರು
ಗ್ರಾಮೀಣ ಪುನರ್ವಸತಿ ಕಾರ್ಯಕರ್ತಿಯಾದ ರೇಣುಕಾ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಸದಸ್ಯರಾದ ಸುರೇಶ್ ಬಲಗ್ಕುಂದಿ, ಮಹಿಬೂಬಸಾಬ ಉಂಡಿ , ಕಾಯಕ ಮಿತ್ರರಾದ ಗಂಗಮ್ಮ ವಾಲ್ಮೀಕಿ ,ಬಿಲ್ ಕಲೆಕ್ಟರ್ ಸಂಗಯ್ಯ ಹೊಸಮಠ ,ಲಂಕೇಶ್. ಮರಿಯಪ್ಪ ಸರ್ವ ಸದಸ್ಯರು ಗ್ರಾಮ ಪಂಚಾಯತಿ ಸಿಬ್ಬಂದಿ ಊರಿನ ಹಿರಿಯ ನಾಗರಿಕರು ಹಾಗೂ ವಿಕಲಚೇತನರು ಉಪಸ್ಥಿತರಿದ್ದರು.

26th November 2025
ಕುಷ್ಟಗಿ : ಸರ್ವಧರ್ಮಗಳ ಆರಾಧಕರು, ಅಧ್ಯಕ್ಷರು ಶ್ರೀ ಬನ್ನಿ ಮಹಾಂಕಾಳಿ ದೇವಿ ಸೇವಾ ಸಮಿತಿ ಕುಷ್ಟಗಿ, ಅಧ್ಯಕ್ಷರು ಭಗತಸಿಂಗ್ ಸೇವಾ ಸಂಸ್ಥೆ ಕುಷ್ಟಗಿ ಇದರ
ಅಧ್ಯಕ್ಷರಾದ ವಜೀರ್ ಬಿ. ಗೋನಾಳ್ ಅವರ ನೇತೃತ್ವದಲ್ಲಿ ದಿನಾಂಕ 27-11-2025 ಗುರುವಾರದಂದು ಕುಷ್ಟಗಿ ನಗರದಲ್ಲಿ ಸರ್ವ ಧರ್ಮಗಳ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವು ಅದ್ದೂರಿಯಾಗಿ ನಡೆಯಲಿದ್ದು
ಈ ಸರ್ವ ಧರ್ಮಗಳ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ 42 ಹಿಂದೂ ಹಾಗೂ 1 ಮುಸ್ಲಿಮ್ ಸೇರಿದಂತೆ ಒಟ್ಟು 43 ಜೋಡಿಗಳ ಮದುವೆ ನಡೆಯಲಿದೆ ಎಂದು ಕಾರ್ಯಕ್ರಮದ ಆಯೋಜಕರಾದ ವಜೀರ್ ಬಿ. ಗೋನಾಳ್ ತಿಳಿಸಿದರು.
ಇದುವರೆಗೂ ಸುಮಾರು ಸಾವಿರಕ್ಕೂ ಹೆಚ್ಚು ಸರ್ವ ಧರ್ಮಗಳ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಮಾಡಿರುವ ವಜೀರ್ ಬಿ. ಗೋನಾಳ್ ಅವರು ಬಡವರ ಪಾಲಿಗೆ ದೇವರ ಸಮಾನರಾಗಿದ್ದಾರೆ. ಮುಸ್ಲಿಂ ಸಮಾಜದ ವ್ಯಕ್ತಿಯಾಗಿದ್ದರು ಕೂಡ ತಮ್ಮ ಧರ್ಮಕ್ಕೆ ಸೀಮಿತವಾಗಿರದೆ ಎಲ್ಲಾ ಸಮಾಜದವರ ಪಾಲಿಗೆ ಹಾಗೂ ಅವರ ನೋವು ನಲಿವುಗಳಿಗೆ ಸ್ಪಂದಿಸುವ ವ್ಯಕ್ತಿಯಾಗಿದ್ದಾರೆ.
ನಾಳೆ ಮುಂಜಾನೆ ನಗರದ ಸಂತೆ ಬಜಾರದಲ್ಲಿ ಇರುವ ಶ್ರೀ ಬನ್ನಿ ಮಹಾಂಕಾಳಿ ದೇವಿಯ ಮಹಾಭಿಷೇಕದ ಪ್ರಯುಕ್ತ ಸರ್ವ ಧರ್ಮ ಶ್ರೀಗಳ ಸಾನಿಧ್ಯದಲ್ಲಿ ಜರಗುವ ಸರ್ವಧರ್ಮಗಳ ಉಚಿತ ಸಾಮೂಹಿಕ ವಿವಾಹಗಳ ಕಾರ್ಯಕ್ರಮದಲ್ಲಿ ಮುಂಜಾನೆ ಹೋಮ ಹವನ, ಕುಂಭ ಹೊತ್ತ ಮಹಿಳೆಯರಿಂದ ಮೆರವಣಿಗೆ, ನಂತರ 43 ಜೋಡಿಗಳ ವಿವಾಹ ಸಾಮೂಹಿಕ ಕಾರ್ಯಕ್ರಮ ಜರುಗಿಲಿದೆ. ನಂತರ ಸರ್ವರಿಗೂ ಅನ್ನ ಸಂತರ್ಪಣೆ ನಡೆಯಲಿದೆ.
ಮಧ್ಯಾಹ್ನ ಕುಷ್ಟಗಿಯ ವಿಷ್ಣು ತೀರ್ಥ ನಗರದ ಬಹಿರಂಗ ವೇದಿಕೆಯ ಕಾರ್ಯಕ್ರಮ ನಡೆಯಲಿದ್ದು ದಿವ್ಯ ಸಾನಿಧ್ಯವನ್ನು ಶ್ರೀ ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳು ಮದ್ದಾನಿ ಕುಷ್ಟಗಿ, ಶ್ರೀ ನೀಲಕಂಠ ತಾತನವರು ಸುಕ್ಷೇತ್ರ ಎಂ ಗುಡದೂರು, ಶ್ರೀ ಶಿವಲಿಂಗ ಮಹಾಸ್ವಾಮಿಗಳು ವಿರಕ್ತಮಠ ಬಿಜಕಲ್, ಶ್ರೀ ವೀರ ಸಂಗಮೇಶ್ವರ ಮಹಾಸ್ವಾಮಿಗಳು ಹಿರೇಮಠ ಚಳಗೇರಾ, ಹಜರತ್ ಸೈಯದ್ ಷಾ ಅಬ್ದುಲ್ ಖಾದ್ರಿ ಪೈಜಲ್ ಭಾಷಾ ಇಲಕಲ್ಲ, ಶ್ರೀ ಬ್ರಹ್ಮಶ್ರೀ ವೀರಭದ್ರ ಮಹಾಸ್ವಾಮಿಗಳು ಸುಕ್ಷೇತ್ರ ಅಂಕಲಿಮಠ, ಡಾ. ಮಹದೇವ ಮಹಾಸ್ವಾಮಿಗಳು ಕುಕನೂರು, ಶ್ರೀ ಮರುಳಸಿದ್ಧ ದೇವರು ವಿಜಯ ಚಂದ್ರಶೇಖರ ಮಹಾಸ್ವಾಮಿಗಳ ಮಠ ಮುದೇನೂರು, ಶ್ರೀ ಅಭಿನವ ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳು ನಿಡಸೆಸಿ, ಶ್ರೀ ಪರಮಪೂಜ್ಯ ಚಂದ್ರಶೇಖರ ದೇವರು ದೋಟಿಹಾಳ ವಹಿಸಲಿದ್ದಾರೆ.
ಕಾರ್ಯಕ್ರಮದ ಉದ್ಘಾಟನೆಯನ್ನು ದೊಡ್ಡನಗೌಡ ಎಚ್ ಪಾಟೀಲ್ ವಿರೋಧ ಪಕ್ಷದ ಮುಖ್ಯ ಸಚೇತಕರು ಹಾಗೂ ಕ್ಷೇತ್ರದ ಶಾಸಕರು ಮಾಡಲಿದ್ದು, ಅಧ್ಯಕ್ಷತೆಯನ್ನು ಅಮರೇಗೌಡ ಪಾಟೀಲ್ ಬಯ್ಯಾಪುರ,ರಾಜ್ಯ ಉಪಾಧ್ಯಕ್ಷರು ಅಖಿಲ ಭಾರತ ವೀರಶೈವ ಮಹಾಸಭಾ ಹಾಗೂ ಮಾಜಿ ಶಾಸಕರು ವಹಿಸಲಿದ್ದಾರೆ.
ಕಮಲಪ್ಪ ಜಾಲಿಹಾಳ್ ಗ್ರಾನೈಟ್ ಉದ್ಯಮಿಗಳು ಹುಲಗೇರಾ ಹಾಗೂ ಪ್ರಭಾಕರ್ ಹೆಚ್ ಚಿಣಿ, ನಿವೃತ್ತ ಪ್ರಧಾನ ಇಂಜಿನಿಯರ್ ವಿಶೇಷ ಆಹ್ವಾನಿತರಾಗಿ
ಭಾಗವಹಿಸಲಿದ್ದಾರೆ. ಗೌರವ ಆಹ್ವಾನಿತರಾಗಿ ಕಾಡಾ ಅಧ್ಯಕ್ಷರಾದ ಹಾಗೂ ಮಾಜಿ ಶಾಸಕರಾದ ಹಸನ್ ಸಾಬ್ ದೋಟಿಹಾಳ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ.
ಸಂಜೆ 6:30ಕ್ಕೆ ಬೃಹತ್ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಚಲನ ಚಿತ್ರರಂಗದ ನಟರದ ನಿನಾಸಂ ಸತೀಶ್ ಹಾಗೂ ಸಪ್ತಮಿಗೌಡ ಸೇರಿದಂತೆ ಇತರೇ ನಟ ನಟಿಯರು ಹಾಗೂ ಹಿನ್ನೆಲೆ ಗಾಯಕ ಗಾಯಕಿಯರು ಹಾಗೂ ಜಿ ಕನ್ನಡ ವಾಹಿನಿಯ ಸರಿಗಮಪ ಕಾರ್ಯಕ್ರಮದ ಜ್ಯೂರಿ ಮೆಂಬರ್ ಶ್ರೀಮತಿ ಶಶಿಕಲಾ ಸುನಿಲ್, ಅಜಯ್ ವಾರಿಯರ್, ಪೃಥ್ವಿ ಭಟ್ಟ, ಶ್ರೀಹರ್ಷ, ಕುಮಾರಿ ಶಿವಾನಿ ಹಾಗೂ ಉದಯ ಟಿವಿ ಕಾಮೆಡಿ ಬೆಳ್ಳಿತೆರೆ ಮತ್ತು ಕಿರುತೆರೆ ನಟಿ ರಾಜೇಶ್ವರಿ , ಹಾಗೂ ಕಾಮಿಡಿ ಕಿಲಾಡಿಗಳು ತಂಡದ ತುಕಾಲಿ ಸಂತೋಷ್, ಮಾನಸ ಸಂತೋಷ್, ಸೂರಜ್ ಹಾಗೂ ಬೆಂಗಳೂರಿನ ವಿವಿಧ ತಂಡದ ಕಲಾವಿದರಿಂದ
ಭಾವೈಕ್ಯ ಸಂಗೀತ ಮಹಾಹಬ್ಬ ಕಾರ್ಯಕ್ರಮ ಜರುಗಲಿದೆ.
ಡಾ. ಶಿವಕುಮಾರ ಸ್ವಾಮೀಜಿ ದಾಸೋಹ ಹಾಗೂ ಕಲಾ ಪೋಷಕ ಮಠ, ಸಿದ್ದನಕೊಳ್ಳ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ನಡೆಯಲಿದೆ.
ಈ ಎಲ್ಲ ಕಾರ್ಯಕ್ರಮಗಳಲ್ಲಿ ಸರ್ವ ಸಮಾಜದವರು ಭಾಗವಹಿಸಬೇಕೆಂದು ಕಾರ್ಯಕ್ರಮದ ಆಯೋಜಕರಾದ ವಜೀರ್ ಬಿ. ಗೋನಾಳ್ ಅಧ್ಯಕ್ಷರು
ಶ್ರೀ ಭಗತಸಿಂಗ್ ಸಂಸ್ಥೆ ಹಾಗೂ ಶ್ರೀ ಬನ್ನಿ ಮಹಾಂಕಾಳಿ ಸೇವಾ ಸಮಿತಿ ಹಾಗೂ ಶಂಕರನಾಗ್ ಆಟೋ ಚಾಲಕರ ಸಂಘ ಕುಷ್ಟಗಿ ಇವರು ತಿಳಿಸಿದ್ದಾರೆ.....
ಭೀಮಸೇನರಾವ್ ಕುಲಕರ್ಣಿ, ಜಿಎಂ ನ್ಯೂಜ್ ಕುಷ್ಟಗಿ.

3rd November 2025
-:ಸಿರಿಗನ್ನಡ ಉತ್ಸವ:-
ಕನ್ನಡ ನಾಡು ಪುಣ್ಯದ ಬೀಡು,
ಸಾವಿರ ಸಂಸ್ಕೃತಿಗಳಿಗೆ ನೆಲೆಯ ಹಾಡು,
ಸುಂದರ ಸಂಪ್ರೀತಿ ಸೌಹಾರ್ದತೆ ನೋಡು,
ವಚನ, ಕಾವ್ಯ ಅರಿವಿನ ದೀಪದ ಸಿರಿಗನ್ನಡ ನಾಡು.
ಕನ್ನಡದ ಕಾವೇರಿ ಕೃಷ್ಣಯರ ನಾಡಿದು, ಹಚ್ಚ ಹಸಿರ ಗೂಡಿದು ಸಾಂಸ್ಕೃತಿಕ ಭೌಗೋಳಿಕ ಚಿನ್ನದ ತೇರಿದು, ಹಳದಿ ಕೆಂಪು ಬಾವುಟ ಹಿಡಿದ ಭುವನೇಶ್ವರಿಯ ನಾಡಿದು,
ರತ್ನತ್ರೆಯರ ಕವಿಪುಂಗವರ ಶ್ರೇಷ್ಠ ಮನೆತನಗಳ ತವರೂರಿದು,
ಎಲ್ಲೆಲ್ಲೂ ಕನ್ನಡದ ಕಲರವ ಮೂಡಿದೆ
ಮನಸ್ಸಿಗೆ, ಹೃದಯಕ್ಕೆ ಸವಿಭಾವ ತಂದಿದೆ,
ಹೃದಯದಲಿ ಕನ್ನಡ ಡಿಂಡಿಮ ಮೊಳಗಿದೆ,
ತಾಯಿ ಭುವನೇಶ್ವರಿಗೆ ಮನವು ಶರಣೆಂದಿದೆ,
ಎಲ್ಲೆಲ್ಲೂ ಕೇಳಲಿ ಕನ್ನಡದ ಸ್ವರ ಸಂಗಮದಲಿ,
ವಿಶ್ವದೆಡೆ ಸಾರಲಿ ಕನ್ನಡದ ಝೇಂಕಾರ ಕಹಳೆಯಲಿ,
ಅಖಂಡ ಕರ್ನಾಟಕದ ಹೃದಯ ಕಣ್ತೆರೆಯಲಿ,
ಸಿರಿಗನ್ನಡ ಉತ್ಸವದ ತೇರು ಸಂಭ್ರಮದಿ ಸಾಗುತಿರಲಿ....
- ರಶ್ಮಿ ಪ್ರಶಾಂತ್ ಕುಲಕರ್ಣಿ
ಕನ್ನಡ ರಾಜ್ಯೋತ್ಸವದ
ಶುಭಾಶಯಗಳು.

15th October 2025
ಕುಷ್ಟಗಿ : ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಚಳಗೇರಾ ಗ್ರಾಮದಲ್ಲಿ ಇಂದು 15 ನೇ ದಿನಾಂಕ ಬುಧುವಾರ ಹಾಗೂ ನಾಳೆ 16 ನೇ ದಿನಾಂಕ ಗುರುವಾರದಂದು ಚಳಗೇರಾ ಹಿರೇಮಠದ ಲಿಂಗೈಕ್ಯ ಪರಮಪೂಜ್ಯ ಶ್ರೀ ವಿರೂಪಾಕ್ಷಲಿಂಗ ಶಿವಾಚಾರ್ಯ ಮಹಾಸ್ವಾಮಿಗಳವರ 11ನೇ ವರ್ಷದ
ಪುಣ್ಯಸ್ಮರಣೋತ್ಸವದ ಹಾಗೂ ಶ್ರೀ ಮಠದ ಉದ್ಘಾಟನೆಯು 16-10-2025 ಗುರುವಾರ ವಿವಿಧ ಕಾರ್ಯಕ್ರಮಗಳು ನಡೆಯಲಿವೆ ಎಂದು ಚಳಗೇರಿಯ ವೀರಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಕುಷ್ಟಗಿ ಪಟ್ಟಣದಲ್ಲಿ ನಮ್ಮ ವಾಹಿನಿಯೊಂದಿಗೆ ಮಾತನಾಡಿದ ಅವರು, ಈ ಕಾರ್ಯಕ್ರಮದಲ್ಲಿ ರಂಭಾಪುರಿ ಹಾಗೂ ಉಜ್ಜಯಿನಿ ಜಗದ್ಗುರುಗಳು,
ಹುಬ್ಬಳ್ಳಿ ಮೂರುಸಾವಿರಮಠ ಮತ್ತು ನೊಣವಿನಕೆರೆ
ಕಾಡಸಿದ್ದೇಶ್ವರಮಠದ ಶ್ರೀಗಳ ಸಾನ್ನಿಧ್ಯದಲ್ಲಿ ಅನೇಕ
ಕಾರ್ಯಕ್ರಮಗಳು ನಡೆಯಲಿವೆ ಎಂದರು.
ನಾಳೆ 15 ನೇ ದಿನಾಂಕದಂದು ಶ್ರೀಮಠದ ಹಳೆಯ ವಿದ್ಯಾರ್ಥಿಗಳ ಸಂಘದ ಉದ್ಘಾಟನೆ ಹಾಗೂ ಧರ್ಮಸಭೆ ಸಮಾರಂಭ ಮತ್ತು ರುದ್ರಮುನಿ ದೇವರಿಂದ ಯೋಗ ಪ್ರದರ್ಶನ ನಡೆಯಲಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹನೀಯರಿಗೆ ಪ್ರಶಸ್ತಿ ಪುರಸ್ಕಾರ, ಗೌರವ ಸನ್ಮಾನ ಕಾರ್ಯಕ್ರಮ ಇರುತ್ತದೆ.
ನಾಡಿದ್ದು 16ರಂದು ಬೆಳಗ್ಗೆ ಮೂಲ ಕರ್ತೃ ಗದ್ದುಗೆಗೆ ಪೂಜಾ ಕಾರ್ಯಕ್ರಮಗಳು, ಅಡ್ಡಪಲ್ಲಕ್ಕಿ
ಮಹೋತ್ಸವ ಚಳಗೇರಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಠ ತಲುಪಿದ ನಂತರ ನೂತನ ಶ್ರೀಮಠದ ಉದ್ಘಾಟನೆ ಹಾಗೂ ರೇಣುಕಾಚಾರ್ಯರ ಮಂಗಲಮೂರ್ತಿಗೆ
ಸ್ವರ್ಣಕಿರೀಟ ಧಾರಣೆ ನಡೆಯುತ್ತದೆ. ಈ ಸ್ವರ್ಣ ಕಿರೀಟ ಸೇವೆಯನ್ನು ಶ್ರೀಮತಿ ಸುನಿತಾ ಡಾಕ್ಟರ್ ಅಂದಾನಯ್ಯ ಶ್ಯಾಡ್ಲಗೇರಿ ಹಿರೇಮಠ ಮತ್ತು ಪರಿವಾರ ಸಾಕಿನ್ ಮುಧೋಳ ಇವರು ಮಾಡಲಿದ್ದಾರೆ.
ನಂತರ ಉಚಿತ ಆರೋಗ್ಯ ಶಿಬಿರ, ಧರ್ಮಸಭೆ ಉದ್ಘಾಟನೆ ನಡೆಯಲಿದೆ. ಸಂಜೆ ರಥೋತ್ಸವ ನಡೆಯಲಿದೆ ಎಂದು ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಜಗದ್ಗುರು ಡಾಕ್ಟರ್ ಪ್ರಸನ್ನರೇಣುಕ ವೀರಸೋಮೆಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಭಗವತ್ಪಾದಂಗಳವರು, ವೀರಸಿಂಹಾಸನ ಮಹಾಸಂಸ್ಥಾನಪೀಠ ಬಾಳೆಹೊನ್ನೂರು, ಹಾಗೂ
ಜಗದ್ಗುರು ಸಿದ್ದಲಿಂಗರಾಜ ದೇಶಿಕೇಂದ್ರ ಮಹಾಭಗವತ್ಪಾದಂಗಳವರು, ಸದ್ಧರ್ಮ ಸಿಂಹಾಸನ ಮಹಾಸಂಸ್ಥಾನಪೀಠ ಉಜ್ಜಯಿನಿ ವಹಿಸಲಿದ್ದಾರೆ.
ಅಧ್ಯಕ್ಷತೆಯನ್ನು ವಿಮಲರೇಣುಕ ಮುಕ್ತಿಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಮುಕ್ತಿಮಂದಿರ ವಹಿಸಲಿದ್ದಾರೆ.
ಗುರುಸಿದ್ದರಾಜಯೋಗೀಂದ್ರ ಮಹಾಸ್ವಾಮಿಗಳು, ಡಾಕ್ಟರ್ ಕರಿವೃಷಭದೇಶಿಕೇಂದ್ರ ಶಿವಯೋಗೀಶ್ವರ ಮಹಾಸ್ವಾಮಿಗಳು, ಪ್ರಭುಸಾರಂಗದೇವ ಶಿವಾಚಾರ್ಯ ಮಹಾಸ್ವಾಮಿಗಳು, ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು, ಡಾಕ್ಟರ್ ಶರಣಬಸವ ಶಿವಾಚಾರ್ಯ ಮಹಾಸ್ವಾಮಿಗಳು, ಮತ್ತು ಜಿಲ್ಲಾಧಿಕಾರಿ ಸುರೇಶ ಇಟ್ನಾಳ್, ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ, ಸಂಸದರಾದ ರಾಜಶೇಖರ ಹಿಟ್ನಾಳ್, ಶಾಸಕರಾದ ದೊಡ್ಡನಗೌಡ ಎಚ್. ಪಾಟೀಲ, ವಿಜಯಾನಂದ ಕಾಶಪ್ಪನವರು, ಮಹೇಶ ಟೆಂಗಿನಕಾಯಿ, ಎಸ್.ಎಲ್.
ಭೋಜೇಗೌಡರು, ಹೇಮಲತಾ ನಾಯಕ್, ಶರಣಗೌಡ ಬಯ್ಯಾಪುರ, ಅಮರೇಗೌಡ ಪಾಟೀಲ್ ಬಯ್ಯಾಪುರ, ಸಂಗಣ್ಣ ಕರಡಿ, ಕೆ. ಶರಣಪ್ಪ ವಕೀಲರು, ಹಸನಸಾಬ್ ದೋಟಿಹಾಳ್, ಪರಣ್ಣ ಮುನವಳ್ಳಿ, ದೊಡ್ಡನಗೌಡ ಪಾಟೀಲ್ ಭಾಗವಹಿಸಲಿದ್ದಾರೆ. ಸಂಜೆ 5 ಗಂಟೆಗೆ ಲಘು ರಥೋತ್ಸವ ನಡೆದ ನಂತರ ಮದ್ದು ಸಿಡಿಸುವ ಕಾರ್ಯಕ್ರಮ ಇರುತ್ತದೆ ಎಂದು ಹೇಳಿದರು.
ರೈತ ನಾಯಕರಾದ ಡಾಕ್ಟರ್ ದೇವೇಂದ್ರಪ್ಪ ಬಳೂಟಗಿ ಅವರು ಮಾತನಾಡಿ, ನಾನು ಕೂಡಾ ಶ್ರೀ ಮಠದ ಹಳೆಯ ವಿದ್ಯಾರ್ಥಿಯಾಗಿದ್ದು ಇಂತಹ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ತುಂಬಾ ಸಂತೋಷದಾಯಕ ವಿಷಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ರುದ್ರಮುನಿ ದೇವರು ಹಾಗೂ ಇತರರು ಉಪಸ್ಥಿತರಿದ್ದರು.
ಶ್ರೀ ವಿರುಪಾಕ್ಷಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ರಥ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು ಈ ಕಾರ್ಯಕ್ಕೆ ಕಾಣಿಕೆ ಸಲ್ಲಿಸುವವರು, ಶ್ರೀ ರುದ್ರಮುನಿ ಶಿವಾಚಾರ್ಯ ವಿದ್ಯಾವರ್ಧಕ ಸಂಸ್ಥೆ ಸೋಲ್ ಟ್ರಸ್ಟ್ ಚಳಗೇರಾ. ಅಕೌಂಟ್ ನಂಬರ್. 10085714525.
IFSC ಕೋಡ್. 1DFB0080353.
ಬ್ರಾಂಚ್ ಕುಷ್ಟಗಿ ಕಳುಹಿಸಬೇಕೆಂದು ತಿಳಿಸಲಾಗಿದೆ.
ಗೂಗಲ್ ಪೇ ಫೋನ್ ಪೇ ಮತ್ತು ಪೇಟಿಎಂ ಮುಖಾಂತರ ದೇಣಿಗೆ ಸಲ್ಲಿಸುವವರು, 9071126655
ಈ ನಂಬರಿಗೆ ಕಳುಹಿಸಬೇಕೆಂದು ಶ್ರೀ ಮಠದಿಂದ ತಿಳಿಸಲಾಗಿದೆ.
ಭೀಮಸೇನ್ ರಾವ್ ಕುಲಕರ್ಣಿ, ಜಿಎಂ ನ್ಯೂಜ್ ಕುಷ್ಟಗಿ - ಸುದ್ದಿಗಳಿಗಾಗಿ ಸಂಪರ್ಕಿಸಿರಿ. 9482935606 ಮತ್ತು 8660935572.
ಧನ್ಯವಾದಗಳು.

5th October 2025
ಕುಷ್ಟಗಿ : ಸೌರಭ ಸಾಂಸ್ಕೃತಿಕ ಕಲಾ ಬಳಗ ಹಿರೇಮನ್ನಾಪುರ ಸಂಘದ ಪ್ರಥಮ ಸಭೆಯು ಶುಕ್ರವಾರ ಕುಷ್ಟಗಿ ತಾಲೂಕಿನ ತಾವರಗೇರಿ ಪಟ್ಟಣದ ಶ್ರೀ ಶ್ಯಾಮೀದಲಿ ದರ್ಗಾದಲ್ಲಿ ಜರುಗಿತು.
ಸಭೆಯಲ್ಲಿ ನೂತನವಾಗಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಸೌರಭ ಸಾಂಸ್ಕೃತಿಕ ಕಲಾ ಬಳಗದ ಗೌರವಾಧ್ಯಕ್ಷರನ್ನಾಗಿ ಹಿರಿಯರಾದ ಹಾಗೂ ರಂಗ ನಿರ್ದೇಶಕರಾದ ಹಿರೇಹುಸೇನಸಾಬ್ ಕೋಳೂರು ಇವರನ್ನು ಒಮ್ಮತದಿಂದ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ರೆಹಮಾನಸಾಬ್ ಕೋಳೂರು, ಹಾಗೂ
ಉಪಾಧ್ಯಕ್ಷರಾಗಿ ನಮ್ಮ ತುಂಗಾಕಿರಣ ಪತ್ರಿಕೆಯ ಕುಷ್ಟಗಿ ತಾಲೂಕಾ ವರದಿಗಾರರಾದ ಭೀಮಸೇನರಾವ್ ಕುಲಕರ್ಣಿ ಇವರನ್ನು ಆಯ್ಕೆ ಮಾಡಲಾಯಿತು. ಅದರಂತೆ ಕಾರ್ಯದರ್ಶಿಯಾಗಿ ಶ್ರೀಮತಿ ಫೈಮುನ್ನಿಸಾ ಕೋಳೂರು, ಸಹ ಕಾರ್ಯದರ್ಶಿಯಾಗಿ ಬಾಳನಗೌಡ ಕನ್ನಾಳ್, ಸಂಘಟನ ಕಾರ್ಯದರ್ಶಿಯಾಗಿ ಹನುಮಣ್ಣ ಗೌಡ್ರ, ಖಜಾಂಚಿಯಾಗಿ ಹುಸೇನಭಾಷಾ ಮುಜಾವರ್, ಹಾಗೂ ಸಂಘದ ಸದಸ್ಯರನ್ನಾಗಿ ಶರಣಗೌಡ ಪೋಲಿಸ್ ಪಾಟೀಲ್, ಮಾನಪ್ಪ ಹಳ್ಳಿ , ರಾಜಮೊಹಮ್ಮದ ದಲಾಯತ್, ಸುನೀಲಕುಮಾರ್ ಮಧುಕರ್, ಬಷೀರ್ ಅಹಮ್ಮದ್ ಸಾಬಾದ್, ವಿರುಪಾಕ್ಷಪ್ಪ ದೇಸಾಯಿ, ಮುದಕಪ್ಪ ಕಲ್ಮಂಗಿ ಇವರನ್ನು ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾದ ಭೀಮಸೇನರಾವ್ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಲಾ ಬದಕಿನ ಸಂಗೀತದ ಉದ್ದೇಶವನ್ನು ಉಳಿಸಿ ಬೆಳೆಸುವ ಬಗ್ಗೆ ಹಾಗೂ ಸಂಘದ ಉದ್ದೇಶಗಳ ಕುರಿತು ಮಾತನಾಡಿದರು.
ಗೌರವಾಧ್ಯಕ್ಷರಾದ ಹಿರೇಹುಸೇನಸಾಬ ಕೋಳೂರು ಮಾತನಾಡಿ, ಭಜನಾಪದ, ಲಾವಣಿ ಪದ, ತತ್ವಪದ, ದಾಸರಪದ ಮತ್ತು ಕರೋಕೆ ಹಾಡಿನ ಜೊತೆಗೆ ಇನ್ನಿತರ ಪದಗಳನ್ನು ಹಾಡುವುದಲ್ಲದೇ ಸಂಘದ ಮೂಲಕ ಹೊಸ ಹೊಸ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಹಾಡುವ ಅವಕಾಶ ಕೊಟ್ಟು ಒಬ್ಬ ಕಲಾವಿದರನ್ನಾಗಿ ಮಾಡುವ ಕೆಲಸವಾಗಬೇಕು. ನಿಜಗುಣಿ ಶಿವಯೋಗಿಗಳ ಹಾಡುಗಳನ್ನು ಹಾಡುವ ಮುಖಾಂತರ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು ಇದಕೆ ಎಲ್ಲರ ಸಹಕಾರ ಅಗತ್ಯವೆಂದು ಹೇಳಿದರು.
ಅಧ್ಯಕ್ಷರಾದ ರೆಹಮಾನಸಾಬ್ ಕೋಳೂರು ಮಾತನಾಡಿ ಸಂಗೀತವು ಎಲ್ಲರ ಆರೋಗ್ಯದ ಮಾರ್ಗವಾಗಿದ್ದು ಎಲ್ಲರೂ ಇದರ ಬಗ್ಗೆ ಆಸಕ್ತಿಯಿಂದ ಭಾಗವಹಿಸಬೇಕು. ಸರ್ಕಾರದಿಂದ ಸಿಗುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಹೇಳಿದರು.
ಇದೇ ವೇಳೆ ಸಂಘದ ನೂತನ ಪದಾಧಿಕಾರಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷರಾದ ಹಿರೇಹುಸೇನಸಾಬ್ ಕೋಳೂರು, ಅಧ್ಯಕ್ಷರಾದ ರೆಹಮಾನಸಾಬ್ ಕೋಳೂರು, ಉಪಾಧ್ಯಕ್ಷರಾದ ಭೀಮಸೇನರಾವ್ ಕುಲಕರ್ಣಿ, ಸಹ ಕಾರ್ಯದರ್ಶಿ ಬಾಳನಗೌಡ ಕನ್ನಾಳ್, ಸಂಘಟನ ಕಾರ್ಯದರ್ಶಿ ಹನುಮಣ್ಣ ಗೌಡ್ರ, ಖಜಾಂಚಿ ಹುಸೇನಭಾಷಾ ಮುಜಾವರ್, ಸದಸ್ಯರಾದ ಶರಣಗೌಡ ಪೋಲಿಸ್ ಪಾಟೀಲ್, ಮಾನಪ್ಪ ಹಳ್ಳಿ , ವಿರುಪಾಕ್ಷಪ್ಪ ದೇಸಾಯಿ, ಮುದಕಪ್ಪ ಕಲ್ಮಂಗಿ ಹಾಗೂ ಇತರರಿದ್ದರು.
ವರದಿಗಾರರು: ಭೀಮಸೇನರಾವ್ ಕುಲಕರ್ಣಿ, ಜಿಎಂ ನ್ಯೂಜ್ ಕುಷ್ಟಗಿ.

16th September 2025
ಕುಷ್ಟಗಿ: ಹನುಮನಾಳ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆದ ಕುಷ್ಟಗಿ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಬಾಲಕರ ಕ್ರೀಡಾಕೂಟದಲ್ಲಿ ಕುಷ್ಟಗಿ ನಗರದಲಎಸ್ ವಿ ಸಿ ಸೈನ್ಸ್ ಮತ್ತು ಕಾಮರ್ಸ್ ಪಿಯು ಕಾಲೇಜು ವಿದ್ಯಾರ್ಥಿಗಳು ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಶಟಲ್ ಬ್ಯಾಡ್ಮಿಂಟನ್ ಆಟದಲ್ಲಿ ಎಸ್ ವಿ ಸಿ ಕಾಲೇಜು ವಿದ್ಯಾರ್ಥಿಗಳು ಅನ್ನದಾನೇಶ್ವರ ಪದವಿಪೂರ್ವ ಕಾಲೇಜು ತಂಡದ ವಿರುದ್ಧ 15 - 9 ಅಂತರದ ಜಯ ದಾಖಲಿಸಿದರು.
ಗುಂಡು ಎಸೆತ ಸ್ಪರ್ಧೆಯಲ್ಲಿ ಪೃಥ್ವಿ ಹೆಚ್ ಎಸ್ ಪ್ರಥಮ ಸ್ಥಾನ, ಟ್ರಿಪಲ್ ಜಂಪ್ ಸ್ಪರ್ಧೆಯಲ್ಲಿ ಚಿರಂಜೀವಿ ದ್ವಿತೀಯ ಸ್ಥಾನ, ಚೆಸ್ ಸ್ಪರ್ಧೆಯಲ್ಲಿ ವಿರೇಶ್ ಮತ್ತು ಮಾರುತಿ ಪ್ರಥಮ ಸ್ಥಾನ,
ಕರಾಟೆ ಸ್ಪರ್ಧೆಯಲ್ಲಿ ಸಂಜಯ್ ಪ್ರಥಮ ಸ್ಥಾನ, ಪೃಥ್ವಿ ಎಚ್.ಎಸ್ ದ್ವಿತೀಯ ಸ್ಥಾನ, ಈಜು ಸ್ಪರ್ಧೆಯಲ್ಲಿ ಸಂಜಯ್ ಪ್ರಥಮ ಸ್ಥಾನ ಹಾಗೂ ಅಜಯ್ ದ್ವಿತೀಯ ಸ್ಥಾನ ತಮ್ಮದಾಗಿಸಿಕೊಂಡರು.
ಎಸ್ ವಿ ಸಿ ಕಾಲೇಜಿನ ವಿದ್ಯಾರ್ಥಿನಿಯರು ಹ್ಯಾಂಡ್ ಬಾಲ್ ಆಟದಲ್ಲಿ ಹನುಮನಾಳ ಸರಕಾರಿ ಪದವಿ ಪೂರ್ವ ಕಾಲೇಜು ತಂಡದ ವಿರುದ್ಧ 5-3 ಗೋಲುಗಳ ಅಂತರದ ಜಯ ದಾಖಲಿಸಿದರು.
ದೈಹಿಕ ಶಿಕ್ಷಕರಾದ ಸಂತೋಷ್ ಮತ್ತು ರಮೇಶ್ ಬೆಸ್ಟ್ ರೆಫರಿ ಅವಾರ್ಡ್ ಪಡೆದರು.
ಎಸ್ ವಿ ಸಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಸಿ ವಿ ಚಂದ್ರಶೇಖರ್, ಸಿಇಓ ಡಾ ಜಗದೀಶ್ ಅಂಗಡಿ, ಪ್ರಾಂಶುಪಾಲರಾದ ಭೀಮಸೇನ್ ಆಚಾರ್ ಹಾಗೂ ಉಪನ್ಯಾಸಕ ಸಿಬ್ಬಂದಿಗಳು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.
ವರದಿ: ಭೀಮಸೇನರಾವ್ ಕುಲಕರ್ಣಿ, ಜಿಎಂ ನ್ಯೂಜ್ ಕುಷ್ಟಗಿ.

6th September 2025
ಕುಷ್ಟಗಿ ತಾಲೂಕಿನ ಹಿರೇಮನ್ನಾಪೂರ ಗ್ರಾಮದಲ್ಲಿ ಲಿಂಗೈಕ್ಯ ಪರಮಪೂಜ್ಯ ಶ್ರೀ ಶಂಕರಲಿಂಗ ಗುರುವರ್ಯರ 41 ನೇ ಪುಣ್ಯತಿಥಿ, ಜಾತ್ರಾ ಮಹೋತ್ಸವದ ಅಂಗವಾಗಿ ಇಂದು ಮೂರನೇ ದಿನ ಶುಕ್ರವಾರ ದಿನಾಂಕ: 5-9-2025 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಮುಂಜಾನೆ ಶ್ರೀಗುರು ಶಂಕರ ಲಿಂಗೇಶ್ವರ ಗುರುವರ್ಯರ ಮೂರ್ತಿಗೆ ಮಹಾರುದ್ರಾಭಿಷೇಕದ
ಪೂಜೆಯೊಂದಿಗೆ ಅಲಂಕಾರ ಮಾಡಲಾಯಿತು.
ಶ್ರೀ ಗುರು ಶಂಕರಲಿಂಗ ಶಿವಯೋಗಿಗಳ ಜಾತ್ರೆಯ ನಿಮಿತ್ಯ ಬೆಟ್ಟದಲ್ಲಿ ಸತತ 24 ತಾಸು ಭಜನೆ ಕಾರ್ಯಕ್ರಮದ ಉದ್ಘಾಟನೆಯು ಸಸಿಗೆ ನೀರು ಹಾಕುವುದರ ಮೂಲಕ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಶ್ರೀ ಗುರು ಶಂಕರಲಿಂಗ ಮಠ ಹಿರೇಮನ್ನಾಪೂರದ ಗೌರವಾಧ್ಯಕ್ಷರಾದ ಹಾಗೂ ಧರ್ಮಾಧಿಕಾರಿಗಳಾದ ಬಾಲಚಂದ್ರಪ್ಪನವರು ಹಾಗೂ
ಸುರೇಶ ಸ್ವಾಮಿಗಳು, ವೀರಬಸಯ್ಯ ಸ್ವಾಮಿಗಳು,
ಕಳಕಪ್ಪ ಸೂಡಿ, ಶರಣಪ್ಪ ನೆರೆಬೆಂಚಿ, ಕಳಕಪ್ಪ ಪುರದ್, ಬಸವರಾಜ ಬಿದರಕುಂದಿ, ಫಕೀರಪ್ಪ ಈಳಗೇರ್, ಹುಸೇನ್ ಸಾಬ್ ಕೋಳೂರ್, ಶಿವಾನಂದ್ ಹಿರೇಮಠ ಹಾಗೂ ಇತರರಿದ್ದರು.
ಭೀಮಸೇನ್ ರಾವ್ ಕುಲಕರ್ಣಿ, ಜಿಎಂ ನ್ಯೂಜ್ ಕುಷ್ಟಗಿ.

5th September 2025
ಕುಷ್ಟಗಿ ತಾಲೂಕಿನ ಹಿರೇಮನ್ನಾಪೂರ ಗ್ರಾಮದಲ್ಲಿ ಲಿಂಗೈಕ್ಯ ಪರಮಪೂಜ್ಯ ಶ್ರೀ ಶಂಕರಲಿಂಗ ಗುರುವರ್ಯರ 41 ನೇ ಪುಣ್ಯತಿಥಿ, ಜಾತ್ರಾ ಮಹೋತ್ಸವದ ಅಂಗವಾಗಿ ದಿನಾಂಕ 3-9-2025 ರಿಂದ 13-9-2025 ರ ವರೆಗೆ ಧಾರ್ಮಿಕ ಕಾರ್ಯಕ್ರಮಗಳು ಅನವರತ 11 ದಿನಗಳವರೆಗೆ ನಡೆಯುತ್ತಿದೆ.
ಗುರುವಾರ ದಿನಾಂಕ: 4-9-2025 ರಂದು ನಡೆದ ಎರಡನೇ ದಿನದ ಪುರಾಣದಲ್ಲಿ ಪರಮ ಪೂಜ್ಯ ಶ್ರೀ ಕೇಶವಾನಂದ ಶ್ರೀಗಳು ಶಿದ್ದರೂಡ ಬಸವ ಆಶ್ರಮ ಹಾಗೂ ಶ್ರೀ ಶಿವಾಚಾರ್ಯ ಶ್ರೀಗಳು ಗಿನಿವಾರ ಇವರು
ಸಸಿಗೆ ನೀರು ಹಾಕುವುದರ ಮೂಲಕ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು.
ಇದೇ ವೇಳೆ ಪೂಜ್ಯರಿಗೆ ಗೌರವಿಸಿ ಸನ್ಮಾನಿಸಲಾಯಿತು.
ನಂತರ ನವ ದುರ್ಗೆಯರ ಪಾದ ಪೂಜೆಯು ಅತ್ಯಂತ ಶ್ರದ್ಧಾ ಭಕ್ತಿಯಿಂದ ನಡೆಯಿತು.
ಈ ಸಂದರ್ಭದಲ್ಲಿ ಶ್ರೀ ಗುರು ಶಂಕರಲಿಂಗ ಮಠ ಹಿರೇಮನ್ನಾಪೂರದ ಗೌರವಾಧ್ಯಕ್ಷರಾದ ಹಾಗೂ ಧರ್ಮಾಧಿಕಾರಿಗಳಾದ ಬಾಲಚಂದ್ರಪ್ಪನವರು ಹಾಗೂ ಪರಮ ಪೂಜ್ಯ ಶ್ರೀ ಕೇಶವಾನಂದ ಶ್ರೀಗಳು ಶಿದ್ದರೂಡ ಬಸವ ಆಶ್ರಮ, ಶ್ರೀ ಶಿವಾಚಾರ್ಯ ಶ್ರೀಗಳು ಗಿನಿವಾರ, ನಾಗರಾಜ್ ಜಿಗಜಿನ್ನಿ, ಶರಣಪ್ಪ ಮ್ಯಾಗೇರಿ,
ಶಿವಾನಂದ ಗುರುಗಳು ಸೇರಿದಂತೆ ಇತರರಿದ್ದರು.
ಭೀಮಸೇನರಾವ್ ಕುಲಕರ್ಣಿ, ಜಿಎಂ ನ್ಯೂಜ್ ಕುಷ್ಟಗಿ.