


15th October 2025
ಕುಷ್ಟಗಿ : ಬೈಕ್ ಮತ್ತು ಲಾರಿ ನಡುವೆ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಇಂದು ಬುಧವಾರ ಸಂಜೆ ಕುಷ್ಟಗಿ ತಾಲೂಕಿನ ವಣಗೇರಿ ಗ್ರಾಮದ ಜಿಯೋ ಪೆಟ್ರೋಲ್ ಬಂಕ್ ಹತ್ತಿರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಅಪಘಾತದಲ್ಲಿ ಮೃತಪಟ್ಟ ದುರ್ಧೈವಿ ಯುವಕನನ್ನು ತಾಲೂಕಿನ ಕೆ. ಬೋದೂರು ಗ್ರಾಮದ ನಿವಾಸಿ ಅಮರೇಶ ಗದ್ದೆಪ್ಪ 35 ವರ್ಷ ಎಂದು ತಿಳಿದು ಬಂದಿದೆ.
ಕುಷ್ಟಗಿ NH ಹೈವೇ ಮೊಬೈಲ್ ASI ಮುತ್ತಣ್ಣ ಅವರು ಅಪಘಾತವಾದ ಸುದ್ದಿ ತಿಳಿದ ತಕ್ಷಣ, ಕೂಡಲೇ ಸ್ಥಳಕ್ಕೆ ಭೇಟಿ ನೀಡಿದರು. ಮೃತಪಟ್ಟ ಬೈಕ್ ಸವಾರನನ್ನು ಕುಷ್ಟಗಿ ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು ಸಾಕಷ್ಟು ಸಂಖ್ಯೆಯಲ್ಲಿ ವಾಹನಗಳು ಈ ರಸ್ತೆಗಳಲ್ಲಿ ಓಡಾಡುತ್ತಿದ್ದು ಯಾವುದೇ ವಾಹನಕ್ಕೆ ಅಡೆತಡೆಯಾಗದಂತೆ ಹೈವೇ ಮೊಬೈಲ್ ASI ಮುತ್ತಣ್ಣ ಅವರು ನೋಡಿಕೊಂಡರು.
ಘಟನೆ ನಡೆದ ಸ್ಥಳಕ್ಕೆ ಸಿಪಿಐ ಯಶವಂತ್ ಬಿಸನಹಳ್ಳಿ ಅವರು ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದ್ದಾರೆ ಮತ್ತು ಅಲ್ಲಿ ಗುಂಪುಗುಡಿದ್ದ ಜನರನ್ನು ತಿಳಿಗೊಳಿಸಿ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಂಡಿದ್ದಾರೆ.
ಮೃತ ಅಮರೇಶನು ಪೆಟ್ರೋಲ್ ಪಂಪಿನಲ್ಲಿ ಪೆಟ್ರೋಲ್ ಹಾಕಿಸಿಕೊಂಡು ಕುಷ್ಟಗಿ ಕಡೆ ತೆರಳುವ ಮಾರ್ಗದಲ್ಲಿ ಈ ದುರ್ಘಟನೆ ನಡೆದಿದ್ದು ಮೃತನಿಗೆ
ಯಲ್ಲಮ್ಮ 7 ತಿಂಗಳ ಗರ್ಭಿಣಿ ಪತ್ನಿ, ಓರ್ವ ಪುತ್ರ ಹರೀಶ್ ಕುಮಾರ್ 4 ವರ್ಷ, ಓರ್ವ ಪುತ್ರಿ ಆದ್ಯ 3 ವರ್ಷ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಈ ಕುರಿತು ಕುಷ್ಟಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೋಲಿಸ್ ಮೂಲಗಳು ತಿಳಿಸಿವೆ.
ರಿಪೋರ್ಟರ್ : ಭೀಮಸೇನರಾವ್ ಕುಲಕರ್ಣಿ ಜಿಎಂ ನ್ಯೂಜ್ ಕುಷ್ಟಗಿ.

8th October 2025
ಕುಷ್ಟಗಿ : ಸದಾ ನಗುಮುಖದಿಂದ ಲವಲವಿಕೆಯಿಂದ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಮುಂದಿರುತ್ತಿದ್ದ 27 ವರ್ಷದ ಭಾಷಾ ಸವಡಿ (ಗುಮಗೇರಿ) ತಂದೆ ಮೂರ್ತಜಾಸಾಬ ತೆಗ್ಗಿನಓಣಿ ಕುಷ್ಠಗಿ ಇವರು
ಇಂದು ನಮ್ಮನ್ನೆಲ್ಲ ಬಿಟ್ಟು ಅಗಲಿದ್ದಾರೆ.
ಕುಟುಂಬಕ್ಕೆ ಆಸರೆಯಾಗಬೇಕಿದ್ದ ವಯಸ್ಸಿನಲ್ಲಿ ಹಿರಿಯ ಮಗನನ್ನು ಕಳೆದುಕೊಂಡ ಕುಟುಂಬದ ಆಕ್ರಂದನ ಒಂದು ಕಡೆಯಾದರೆ ತಮ್ಮ ಆಪ್ತ ಮಿತ್ರನನ್ನು ಕಳೆದುಕೊಂಡ ಸ್ನೇಹಿತರ ಹಾಗೂ ಬಂಧುಬಳಗ ನೋವು ಇಡೀ ತೆಗ್ಗಿನ ಓಣಿಯಲ್ಲಿ ಮೌನದ ಛಾಯೆ ಆವರಿಸಿತ್ತು.
ಹಲವಾರು ಸಮಾಜ ಸೇವೆ ಕಾರ್ಯಗಳಲ್ಲಿ ತನ್ನಿಂದಾದ ಸೇವೆ ಸಲ್ಲಿಸುತ್ತಾ ಹಾಗೂ ಯಾವುದೇ ದುಷ್ಟ ಚಟಗಳಿಲ್ಲದ ಅತ್ಯಂತ ಸರಳ ಸಜ್ಜನಿಕೆಯ ಯುವಕನ ಸಾವು ಎಲ್ಲರಲ್ಲಿ ನೋವು ಉಂಟುಮಾಡಿದೆ.
ಮೃತ ಭಾಷಾ ಸವಡಿ, ಸದ್ದಾಂ ಗುಮಗೇರಿ ಅವರ ಅಕ್ಕನ ಮಗನಾಗಿದ್ದು ಅಪಾರ ಬಂಧು ಮಿತ್ರರನ್ನು ತೊರೆದು ಬಾರದ ಲೋಕಕ್ಕೆ ತೆರಳಿದ್ದಾನೆ, ಇವರ ಅಂತ್ಯ ಸಂಸ್ಕಾರ ಇಂದು ಸಂಜೆ 6.30ಕ್ಕೆ ಕುಷ್ಟಗಿ ಪಟ್ಟಣದ ವಣಗೇರಿ ರಸ್ತೆಯ ಕಬರಸ್ಥಾನದಲ್ಲಿ ನೆರೆವೆರಲಿದೆ.
ಮೃತ ಭಾಷಾ ಸವಡಿ ಅವರಿಗೆ ಕಳೆದ ಮೂರ್ನಾಲ್ಕು ದಿನಗಳಿಂದ ಸುಸ್ತು, ತಲೆ ಚಕ್ರ ಹಾಗೂ ಭೇದಿ ಉಂಟಾಗಿತ್ತು, ವೈದ್ಯರು ಪರೀಕ್ಷೆ ಮಾಡಿದಾಗ ದೇಹದಲ್ಲಿ ಬಿಳಿ ಹಾಗೂ ಕೆಂಪು ರಕ್ತ ಕಣಗಳ ಸಂಖ್ಯೆ ಕಡಿಮೆಯಾಗಿವೆ ಹಾಗೂ ಎದೆಯಲ್ಲಿ ಕಫ ಕಟ್ಟಿದೆ ಎಂದಿದ್ದರು.ಕಳೆದ ಎರಡು ದಿನಗಳಿಂದ ಹೊಸಪೇಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಆದರೆ ಇಂದು ಬೆಳಗ್ಗೆ ಏಕಾಏಕಿ ಆರೋಗ್ಯದಲ್ಲಿ ಏರುಪೇರಾಗಿದ್ದಕ್ಕೆ ಹೊಸಪೇಟೆಯಿಂದ ಹುಬ್ಬಳ್ಳಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಕೊಪ್ಪಳದ ಹತ್ತಿರ ಮಾರ್ಗ ಮಧ್ಯದಲ್ಲಿಯೇ ಕೊನೆಯುಸಿರು ಎಳೆದಿದ್ದಾರೆ.
ನಿನ್ನೆ ರಾತ್ರಿ 10.45ಕ್ಕೆ ಆತನನ್ನು ಹೊಸಪೇಟೆ ಆಸ್ಪತ್ರೆಯಲ್ಲಿ ಭೇಟಿಯಾಗಿ ವಿಚಾರಸಿದಾಗ ನಗು ನಗುತ್ತಾ ಮಾತಾನಾಡುತ್ತಾ, ಇವಾಗ ಸ್ವಲ್ಪ ಆರಾಮ ಆಗಿನಿ ಎಂದಿದ್ದ. ಆದರೆ ಬೆಳಿಗ್ಗೆ ಎಷ್ಟೇ ಪ್ರಯತ್ನ ಪಟ್ಟರು ಕಫ ಕಡಿಮೆಯಾಗಲಿಲ್ಲ, ರಕ್ತ ಕಣಗಳ ಸಂಖ್ಯೆ ಹೆಚ್ಚಾಗಲಿಲ್ಲ, ಶುಗರ್ ಇರಲಿಲ್ಲ ಆದರೆ ಬೆಳಿಗ್ಗೆ ಶುಗರ್ ಲೇವಲ್ 500ಕ್ಕೂ ಹೆಚ್ಚು ಕಾಣಿಸಿದೆ ಎಂದು RT ಸುಬಾನಿ ತಿಳಿಸಿದ್ದಾರೆ.
ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ ಸಹೋದರ, ಆ ದೇವರಿಗೆ ನಿಜಕ್ಕೂ ಕರುಣೆಯಿಲ್ಲವೇ, ಇಷ್ಟು ಚಿಕ್ಕ ವಯಸ್ಸಿನ ಯುವಕ ಯಾರಿಗೂ ಅನ್ಯಾಯ ಮಾಡದ ಜೀವ, ಯಾರೊಂದಿಗೂ ಕೆಟ್ಟದಾಗಿ ಮಾತನಾಡುವವನಲ್ಲ ಇಂತಹ ವ್ಯಕ್ತಿತ್ವದಲ್ಲಿ ಏನು ದೋಷ ಹುಡುಕಿದ ಆ ಭಗವಂತ ಎಂದು RT ಸುಬಾನಿ ಅವರು ನೋವು ತೋಡಿಕೊಂಡಿದ್ದಾರೆ.
ವರದಿ : ಭೀಮಸೇನ್ ರಾವ್ ಕುಲಕರ್ಣಿ, ಜಿಎಂ ನ್ಯೂಜ್ ಕುಷ್ಟಗಿ

22nd August 2025
ಕುಷ್ಟಗಿ :- ಮುಸ್ಲಿಂ ಯುವ ಸಮಿತಿ, ಕುಷ್ಟಗಿ ಹಾಗೂ ಜಮಾಅತೆ ಇಸ್ಲಾಮಿ ಹಿಂದ್ ಇವರ ಸಹಯೋಗದಲ್ಲಿ
ಕನ್ನಡದಲ್ಲಿ ಸಾರ್ವಜನಿಕ ಕುರ್ ಆನ್ ಪ್ರವಚನ ಕಾರ್ಯಕ್ರಮವು ಇಂದು ದಿನಾಂಕ : 22 ಹಾಗೂ 23 ಮತ್ತು 24 ಆಗಸ್ಟ್, 2025 ರಂದು ಪ್ರತಿದಿನ ಸಾಯಂಕಾಲ 6-45 ಗಂಟೆಗೆ, ಕುಷ್ಟಗಿ ನಗರದ ಬೀಬಿ ಫಾತಿಮಾ ಶಾದಿ ಮಹಲ್ ದಲ್ಲಿ ಜರುಗಲಿದೆ. ಮಹಿಳೆಯರಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಕೂಡಾ ಮಾಡಲಾಗಿದೆ. ಸರ್ವ ಧರ್ಮದವರು ಈ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಅಲ್ತಾಫ್ ಹುಸೇನ್ ಮುಜಾವರ್, ಸ್ಥಾನಿಯ ಸಂಚಾಲಕರು, ಜಮಾತೆ ಇಸ್ಲಾಮಿ ಹಿಂದ್ ಸ್ಥಾನಿಯ ಘಟಕ ಕುಷ್ಟಗಿ, ಹಾಗೂ ಮಹ್ಮದ್ ಆಫ್ತಾಬ್ ಕಾರ್ಯಕರ್ತರು, ಜಮಾತೆ ಇಸ್ಲಾಮಿ ಹಿಂದ್ ಕುಷ್ಟಗಿ, ಸೈಯದ್ ಅಮೀನುದ್ದಿನ್ ಮುಲ್ಲಾ ಅಧ್ಯಕ್ಷರು, ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾ ಕೊಪ್ಪಳ,
ಮತ್ತು ಮೌಲಾ ಗುಮಗೇರಿ, ಯುವ ಮುಸ್ಲಿಂ ಸಮಿತಿ ಮುಖ್ಯಸ್ಥರು ತಿಳಿಸಿದ್ದಾರೆ.
ಇಂದು ದಿನಾಂಕ 22-8-2025 ಶುಕ್ರವಾರದಂದು ನಡೆಯುವ ಮಾನವನ ಘನತೆ ಎನ್ನುವ ವಿಷಯದ
ಕಾರ್ಯಕ್ರಮದ ಸಾನಿಧ್ಯ, ಉದ್ಘಾಟನೆಯನ್ನು ಶ್ರೀ ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳು, ಮದ್ದಾನೇಶ್ವರ ಮಠ, ಕುಷ್ಟಗಿ ಮಾಡಲಿದ್ದಾರೆ.
ನೇತೃತ್ವವನ್ನು ಮೌಲಾನಾ ಹಾಫೀಜ್ ಫಜ್ಲೆ ಅಜೀಮ್
ವ್ಯವಸ್ಥಾಪಕರು, ಮದರಸಾ ಅರೇಬಿಯಾ ದಾರೂಲ್ ಉಲೂಮ್ ಅಶ್ರಫೀಯಾ, ಕುಷ್ಟಗಿ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ದೊಡ್ಡನಗೌಡ ಹೆಚ್. ಪಾಟೀಲ್
ವಿರೋಧ ಪಕ್ಷದ ಮುಖ್ಯ ಸಚೇತಕರು ಹಾಗೂ ಶಾಸಕರು, ಕುಷ್ಟಗಿ,.
ಹಸನಸಾಬ ದೋಟಿಹಾಳ್ ಕಾಡಾ ಅಧ್ಯಕ್ಷರು ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮುನಿರಾಬಾದ್,.
ಮಹಾಂತೇಶ ಕಲಭಾವಿ ಅಧ್ಯಕ್ಷರು ಪುರಸಭೆ, ಕುಷ್ಟಗಿ.
ದೇವೆಂದ್ರಪ್ಪ ಬಳೂಟಗಿ ಮುಖಂಡರು, ಕುಷ್ಟಗಿ,.
ಅಹ್ಮದ ಹುಸೇನ್ ಆದೋನಿ ಅಧ್ಯಕ್ಷರು, ಅಂಜುಮನ್ ಇಸ್ಲಾಂ ಪಂಚ್ ಕಮಿಟಿ, ಕುಷ್ಟಗಿ,.
ಅಬ್ದುಲ್ ರಹಿಮಾನ್ ಹಸನಸಾಬ್ ದೋಟಿಹಾಳ
ಮುಖಂಡರು, ಉದ್ದಿಮೆದಾರರು, ಹಾಗೂ
ಅಶೋಕ ಶಿಗ್ಗಾಂವಿ ತಹಶೀಲ್ದಾರರು, ಕುಷ್ಟಗಿ,.
ಕುಮಾರಿ ಬ್ರಹ್ಮಕುಮಾರಿ ಸಹೋದರಿ,. ಶ್ರೀಮತಿ ಗಿರಿಜಾ ಮಾಲಿಪಾಟೀಲ್ ಅಧ್ಯಕ್ಷರು, ಇನ್ನರ್ ವೀಲ್ ಕ್ಲಬ್, ಕುಷ್ಟಗಿ,. ವಹಿಸಲಿದ್ದಾರೆ.
ಜನಾಬ ಲಾಲಹುಸೇನ್ ಕಂದಗಲ್ ಇವರು ಪ್ರವಚನ ಮಾಡಲಿದ್ದಾರೆ.
ಭೀಮಸೇನರಾವ್ ಕುಲಕರ್ಣಿ, ಜಿಎಂ ಕುಷ್ಟಗಿ.

13th August 2025
ಇಳಕಲ್ ನಗರದ ಎಸ್.ವಿ.ಎಂ. ಕಾಲೇಜ್ ಪ್ರಾಚಾರ್ಯರಾಗಿ ಡಾ. ಎಸ್.ಬಿ. ಬಿರಾದಾರ್ ನೇಮಕ.
ಹೌದು ನಮ್ಮ ಉತ್ತರ ಕರ್ನಾಟಕದ ಪ್ರತಿಷ್ಠಿತ ಶಿಕ್ಷಣ
ಸಂಸ್ಥೆಗಳಲ್ಲಿ ಒಂದಾಗಿರುವ ಶ್ರೀ ವಿಜಯ ಮಹಾಂತೇಶ
ವಿದ್ಯಾವರ್ಧಕ ಸಂಘದ, ಶ್ರೀ ವಿಜಯ ಮಹಾಂತೇಶ ಕಲೆ, ವಿಜ್ಞಾನ ಹಾಗೂ ವಾಣಿಜ್ಯ ಮಹಾ
ವಿದ್ಯಾಲಯದ ನೂತನ ಪ್ರಾಚಾರ್ಯರಾಗಿ ಡಾಕ್ಟರ್
ಎಸ್.ಬಿ. ಬಿರಾದಾರ್ ಅವರು ಶುಕ್ರವಾರದಂದು
ಅಧಿಕಾರ ಸ್ವೀಕರಿಸಿಕೊಂಡರು.
ಡಾಕ್ಟರ್ ಎಸ್.ಎಸ್. ಅವಟಿ ಅವರು ನಿವೃತ್ತಿ ಹೊಂದಿದ್ದರಿಂದ ಅವರ ಜಾಗೆಯಲ್ಲಿ ಇಂಗ್ಲೀಷ್
ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ಡಾಕ್ಟರ್
ಎಸ್. ಬಿ. ಬಿರಾದಾರ್ ಅವರು ಶ್ರೀ ವಿಜಯ ಮಹಾಂತೇಶ ಕಲೆ, ವಿಜ್ಞಾನ ಹಾಗೂ ವಾಣಿಜ್ಯ ಮಹಾ
ವಿದ್ಯಾಲಯದ ಪ್ರಾಚಾರ್ಯರಾಗಿ ಆಡಳಿತ ಸ್ವೀಕರಿಸಿದ್ದಾರೆ.
ಇದೇ ವೇಳೆ ಡಾಕ್ಟರ್ ಎಸ್.ಎಸ್. ಅವಟಿ ನಿವೃತ್ತ ಪ್ರಾಚಾರ್ಯರು ಹಾಗೂ ಉಪನ್ಯಾಸಕರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
ಭೀಮಸೇನರಾವ್ ಕುಲಕರ್ಣಿ ಜಿಎಂ ನ್ಯೂಜ್ ಕುಷ್ಟಗಿ.

6th July 2025
ಕುಷ್ಟಗಿ : ಬ್ರಾಹ್ಮಣ ಸಮಾಜದ ಹಿರಿಯರು ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದ ಅಧ್ಯಕ್ಷರು, ಆಕಾಶವಾಣಿ ಕಲಾವಿದರು, ಜೀವನ ಪರ್ಯಂತ ರಾಯರ ಭಜನೆಯ ಮೂಲಕ ಶ್ರೀ ರಾಘವೇಂದ್ರ ಸ್ವಾಮಿಗಳ ಸೇವೆಯನ್ನು ಮಾಡಿದ ಸಾಧಕರಾಗಿದ್ದ ಪ್ರಲ್ಲಾದಾಚಾರ್ಯ ಸೌದಿ (72 ವರ್ಷ) ಅವರು ನಿನ್ನೆ ದಿನಾಂಕ 05-07-2025 ಶನಿವಾರದಂದು ರಾತ್ರಿ 10 ಗಂಟೆಗೆ ವೈಕುಂಠವಾಸಿಗಳಾಗಿರುತ್ತಾರೆ.
ಮೃತರ ಅಂತ್ಯಕ್ರಿಯೆಯು ಇಂದು 06-07-2025 ಭಾನುವಾರ ಬೆಳಗ್ಗೆ 10-30 ಗಂಟೆಗೆ ಕುಷ್ಟಗಿಯ ಬ್ರಾಹ್ಮಣ ಸಮಾಜದ ರುದ್ರಭೂಮಿಯಲ್ಲಿ ವಿಧಿ ವಿಧಾನಗಳೊಂದಿಗೆ ನಡೆಯಿತು. ಮೃತ ಪ್ರಲ್ಲಾದಾಚಾರ್ಯ ಸೌದಿ ಇವರು ಅನೇಕ
ವರ್ಷಗಳಿಂದ ಕುಷ್ಟಗಿ ನಗರದ ಸಿಂಡಿಕೆಟ್ ಬ್ಯಾಂಕ್ ದಲ್ಲಿ ಪಿಗ್ಮಿ ಕಲೆಕ್ಟರ್ ಆಗಿ ಸೇವೆಯನ್ನು ಸಲ್ಲಿಸಿ ನಿವೃತ್ತಿಯಾಗಿದ್ದರು. ಮೃತರಿಗೆ ಪತ್ನಿ ಹಾಗೂ ಒಂದು ಗಂಡು ಹಾಗೂ ಒಂದು ಹೆಣ್ಣು ಮಕ್ಕಳಿದ್ದು ಇಬ್ಬರು ಸಹೋದರರು ಹಾಗೂ ನಾಲ್ಕು ಜನ ತಂಗಿಯರು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕುಷ್ಟಗಿ ಜನತೆಯಿಂದ ಅಶ್ರುತರ್ಪಣ.

11th May 2025
ಕುಷ್ಟಗಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಹಿರಿಯ ಆಜೀವ ಸದಸ್ಯರು, ಸಾಹಿತಿಗಳು,ರಾಜ್ಯ ಹಿರಿಯ ನಾಗರಿಕ ಪ್ರಶಸ್ತಿ ಪುರಸ್ಕೃತರು, ಹೋರಾಟಗಾರರು ಆದ ತಾಜುದ್ದಿನ್ ದಳಪತಿ ಅವರ ನಿಧನ ತುಂಬಾ ದುಃಖದ ಸಂಗತಿ.. ಅವರ ಸ್ಮರಣಾರ್ಥವಾಗಿ ನಾಳೆ ದಿನಾಂಕ: ೧೨/೦೫/೨೦೨೫ ಸೋಮವಾರದಂದು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಅವರ ಆತ್ಮಕ್ಕೆ ಶಾಂತಿ ಕೋರಿ ಕುಷ್ಟಗಿ ನಗರದ ಹಳೆ ಪ್ರವಾಸಿ ಮಂದಿರದಲ್ಲಿ ಮುಂಜಾನೆ ೧೦:೩೦ ಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಗುವುದು.
ಕುಷ್ಟಗಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಎಲ್ಲಾ ಪದಾಧಿಕಾರಿಗಳು, ಕ.ಸಾ.ಪ ಆಜೀವ ಸದಸ್ಯರು, ಪತ್ರಿಕಾ ಮಾಧ್ಯಮದವರು ಉಪಸ್ಥಿತರಿರಬೇಕೆಂದು ಕೋರಲಾಗಿದೆ ಎಂದು ಗೌರವ ಕಾರ್ಯದರ್ಶಿ ಶರಣಪ್ಪ ಲೈನದ್ ಕೊರಿದ್ದಾರೆ

11th May 2025
ಕುಷ್ಟಗಿ ಮೇ ೧೧ : ಇಲ್ಲಿನ ಹಿರಿಯ ನಾಗರೀಕ ತಾಜುದ್ದೀನ ದಳಪತಿ (೮೨) ಅವರು ಇಂದು ತಮ್ಮ ಗಾಂಧಿ ನಗರದ ನಿವಾಸದಲ್ಲಿ ನಿಧನರಾದರು.
ಅವರಿಗೆ ಮೂರು ಜನ ಗಂಡು ಮಕ್ಕಳು ಪತ್ನಿ ಸೇರಿ ಅಪಾರ ಬಂದು ಬಳಗ ಅಗಲಿದ್ದಾರೆ.
ತಾಜುದ್ದೀನ ದಳಪತಿ ಅವರು ಇತ್ತೀಚೆಗೆ ರಾಜ್ಯ ಸರಕಾರದ ಹಿರಿಯ ನಾಗರೀಕರ ಪ್ರಶಸ್ತಿ ಪಡೆದಿದ್ದ ಅವರು ಸುಮಾರು ವರ್ಷಗಳ ಕಾಲ ಸಾಕ್ಷರತಾ ಸಂಗ್ರಾಮ ಸಮಿತಿಯ ತಾಲೂಕು ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುವ ಮೂಲಕ ಖ್ಯಾತಿಯಾಗಿದ್ದರು. ಕುಷ್ಟಗಿ ಗ್ರಾಮದ ದಳಪತಿಯಾಗಿ ಕೂಡಾ ಸೇವೆಯಲ್ಲಿ ಇದ್ದರು. ತಾಜುದ್ದೀನ ದಳಪತಿ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಹಿರಿಯ ಆಜೀವ ಸದಸ್ಯರಾಗಿದ್ದರು. ಅಲ್ಲದೇ ಸಾಹಿತ್ಯದಲ್ಲಿ ಕೂಡಾ ಸಾಧನೆ ಮಾಡಿದ್ದಾರೆ. ಅವರ ಮೂರು ಕೃತಿಗಳು ಹೊರಬಂದಿವೆ ಮೊದಲನೆಯ ಕಾದಂಬರಿ ಕಣ್ಣತೇರೆಯಿತು, ಎರಡನೆಯದು ಮಸಣದಿಂದಾ ಮನೆಗೆ, ಇತ್ತೀಚೆಗೆ ಒಂದು ಕಾದಂಬರಿ ಬಿಡುಗಡೆ ಆಗಿದೆ. ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ತಾಜುದ್ದೀನ ದಳಪತಿ ಅವರು ಅನಾರೋಗ್ಯದ ಕಾರಣ ಇಂದು ಇಹಲೋಕ ತ್ಯಜಿಸಿದರು.
ಮೃತರಿಗೆ ಹೆಂಡತಿ, ಹಾಗೂ ಮಹಮ್ಮದ್ ತನ್ವೀರ್, ಮಹಮ್ಮದ್ ರಿಜ್ವಾನ್, ಅಬ್ದುಲ್ ಅಲ್ತಾಮಾಸ್, ಮೂರು ಜನ ಗಂಡು ಮಕ್ಕಳು, ಸೊಸೆಯಂದಿರು ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಅವರ ನಿಧನಕ್ಕೆ ಶಾಸಕ ದೊಡ್ಡನಗೌಡ ಪಾಟೀಲ್, ಮಾಜಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ, ಹಸನಸಾಬ ದೋಟಿಹಾಳ, ಕೆ.ಶರಣಪ್ಪ ವಕೀಲರು ತೀವ್ರ ಸಂತಾಪ ಸೂಚಿಸಿದ್ದಾರೆ.
ಮೃತರ ಆತ್ಮಕ್ಕೆ ಶಾಂತಿ ಕೋರಿ ನಾಳೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಮದ್ಯಾನಃ ಹಳೆ ಐಬಿಯಲ್ಲಿ ಶ್ರದ್ಧಾಂಜಲಿ ಸಭೆ ನಡೆಸಲಾಗುತ್ತದೆ.

20th April 2025
ಕುಷ್ಟಗಿ : ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಬಿ. ಕಿಶನ್ ರಾವ್ ವಕೀಲರು ಬನ್ನಿಗೋಳ ಇವರ ಧರ್ಮಪತ್ನಿ ಶ್ರೀಮತಿ ಕುಂಕುಮ ಸೌಭಾಗ್ಯವತಿ ರುಕ್ಮಿಣಿ ಬಾಯಿ (93) ಅವರು ಇಂದು ದಿನಾಂಕ 20-04-2025 ಭಾನುವಾರ ಮಧ್ಯಾಹ್ನ 3:00 ಗಂಟೆಗೆ ಸ್ವರ್ಗಸ್ತರಾಗಿರುತ್ತಾರೆ.
ಮೃತರಿಗೆ 5 ಜನ ಗಂಡುಮಕ್ಕಳು, ಇಬ್ಬರು ಹೆಣ್ಣು ಮಕ್ಕಳು ಹಾಗೂ ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ
ಕುಷ್ಟಗಿ ಕ್ಷೇತ್ರದ ಶಾಸಕರಾದ ಹಾಗೂ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕರಾದ ದೊಡ್ಡನಗೌಡ ಎಚ್ ಪಾಟೀಲ್ ಹಾಗೂ ಮಾಜಿ ಸಚಿವರಾದ ಅಮರೇಗೌಡ ಪಾಟೀಲ್ ಬಯ್ಯಾಪುರ, ಮಾಜಿ ಶಾಸಕರಾದ ಕೆ ಶರಣಪ್ಪ ವಕೀಲರು ಹಾಗೂ ಬಿ. ಕಿಶನ್ ರಾವ್ ವಕೀಲರ ಅಭಿಮಾನಿಗಳು ಮೃತರಾದ ಶ್ರೀಮತಿ ರುಕ್ಮಿಣಿಬಾಯಿ ಅವರ ಅಂತಿಮ ದರ್ಶನ ಪಡೆದರು.
ಮೃತರ ಅಂತ್ಯಕ್ರಿಯೆಯು ಇಂದು ರಾತ್ರಿ 8-00 ಗಂಟೆಗೆ ನಗರದ ರುದ್ರ ಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ
ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಸದ್ಗತಿ ಪ್ರಾಪ್ತಿಯಾಗಲಿ ಎಂದು ಭಗವಂತನಲ್ಲಿ ಕೇಳಿಕೊಳ್ಳುತ್ತೇವೆ.

9th March 2025
ಜಿ ಎಮ್ ನ್ಯೂಜ್ ಕುಷ್ಟಗಿ.
ಕುಷ್ಟಗಿ ಪಟ್ಟಣದ ಕರೀಂ ಕಾಲೋನಿಯ ಕನಕದಾಸ ಸರ್ಕಲ್ ಹತ್ತಿರದ ನಿವಾಸಿ ವೀರಶೈವ ಲಿಂಗಾಯತ ಸಮಾಜದ ಹಿರಿಯರಾದ ಬಸಯ್ಯ ಮಹಾಂತಯ್ಯ ಗೋನಾಳಮಠ (88) ಇಂದು ಭಾನುವಾರ ಬೆಳಿಗ್ಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಲಿಂಗೈಕ್ಯರಾದರೆಂದು ತಿಳಿಸಲು ವಿಶಾದವೆನಿಸುತ್ತದೆ.
ಮೃತರಾದ ಬಸಯ್ಯ ಗೋನಾಳಮಠ ಅವರು
ಸರ್ಕಾರಿ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಜೀವನ ನಡೆಸುತ್ತಿದ್ದರು. ಮೃತರ ಪಾರ್ಥಿವ ಶರೀರವು ಬೆಂಗಳೂರಿನಿಂದ ಇಂದು ಸಾಯಂಕಾಲ 5:00 ಗಂಟೆಗೆ ಕುಷ್ಟಗಿ ಪಟ್ಟಣಕ್ಕೆ ಬರಬಹುದೆಂದು ಅಂದಾಜಿಸಲಾಗಿದೆ.
ಮೃತರು ಸುಧೀರ್ ಗೋನಾಳಮಠ, ಪ್ರದೀಪ್ ಗೋನಾಳಮಠ ಇವರ ತಂದೆಯವರಾಗಿದ್ದಾರೆ. ಮೃತರು ಹೆಂಡತಿ, ಇಬ್ಬರು ಗಂಡು ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಶಿಷ್ಯ ಬಳಗ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆಯು ನಾಳೆ 10-03-2025 ರಂದು ಬೆಳಗ್ಗೆ 10-00 ಗಂಟೆಗೆ ಕುಷ್ಟಗಿ ನಗರದ ವೀರಶೈವ ಲಿಂಗಾಯಿತ ರುದ್ರಭೂಮಿಯಲ್ಲಿ ಜರಗುವುದು.
ಮೃತ ಬಸಯ್ಯ ಗೋನಾಳಮಠ ಗುರುಗಳಿಗೆ ಕುಷ್ಟಗಿ ಜನತೆಯಿಂದ ಭಾವಪೂರ್ಣ ಶ್ರದ್ಧಾಂಜಲಿ.
ವರದಿ : ಭೀಮಸೇನರಾವ್ ಕುಲಕರ್ಣಿ ಕುಷ್ಟಗಿ.

19th February 2025
ಜಿಎಂ ನ್ಯೂಜ್ ಕುಷ್ಟಗಿ.
ಕೊಪ್ಪಳ ಫೆಬ್ರವರಿ 19 : ಕೊಪ್ಪಳ ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ತಮಗೆ ಇರುವ ನಿಯಮಗಳ ಕಾನೂನು ವ್ಯಾಪಿಯಲ್ಲಿ ಕಾರ್ಯನಿರ್ವಹಿಸಬೇಕು. ಅದನ್ನು ಬಿಟ್ಟು ಜನರಿಗೆ ಕಿರುಕುಳ ನೀಡುವ ಯಾವುದೇ ಪ್ರಕರಣಗಳು ಕಂಡು ಬಂದರೆ ಅಂಥಹ ಫೈನಾನ್ಸ್ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಹೇಳಿದರು.
ಬುಧವಾರ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲನಲ್ಲಿ ಜಿಲ್ಲೆಯ ಮೈಕ್ರೋ ಪೈನಾನ್ಸ್ ಸಂಸ್ಥೆಗಳ ಪ್ರತಿನಿಧಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಕಾರ್ಯಾಗಾರದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜನರಿಗೆ ಸಾಲ ನೀಡುವಾಗ ತಮ್ಮ ಕಂಡೀಷನಗಳ ಕುರಿತು ಸ್ಪಷ್ಟವಾಗಿ ಅವರಿಗೆ ಅರ್ಥವಾಗುವ ರೀತಿಯಲ್ಲಿ ತಿಳಿಸಬೇಕು ಮತ್ತು ಅವರ ಸಾಮರ್ಥ್ಯಕ್ಕೆ ತಕ್ಕಂತೆ ಸಾಲ ನೀಡಬೇಕು. ಅದನ್ನು ಬಿಟ್ಟು ಅವರಿಗೆ ಸರಿಯಾಗಿ ಮಾಹಿತಿ ನೀಡದೆ ಸಾಲ ನೀಡುವದರ ಜೊತೆಗೆ ಅವರಿಗೆ ಕಿರುಕೂಳ ನೀಡಿದರೆ ಇದು ಕಾನೂನಿನ ಉಲ್ಲಂಘನೆಯಾಗುತ್ತದೆ. ತಾವು ಸಾಲ ಕೊಟ್ಟಾಗ, ಜನರಿಂದ ಕಾನೂನು ರೀತಿಯಲ್ಲಿ ಅವರಿಂದ ಹಣವನ್ನು ಮರಳಿ ಪಡೆಯಬೇಕೆಂದು ಹೇಳಿದರು.
ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕಿರುಕೂಳ ಪ್ರಕರಣಗಳ ಹಿನ್ನೆಲೆಯಲ್ಲಿ ಕರ್ನಾಟಕ ಕಿರು ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ಅಧ್ಯಾದೇಶವನ್ನು ರಾಜ್ಯ ಸರ್ಕಾರ ದಿನಾಂಕ 12-02-2025 ರಂದು ಜಾರಿಗೆ ತಂದಿದೆ. ಇದರ ಹೊರತಾಗಿ ಈಗಾಗಲೇ ಫೈನಾನ್ಸ್ ಸಂಸ್ಥೆಗಳ ಕುರಿತು ಆರ್.ಬಿ.ಐ ಸ್ಪಷ್ಟವಾದ ಗೈಡಲೈನ್ಸ್ ಇದೆ ಆದರೆ ಅದನ್ನು ತಾವು ಯಾರು ಸರಿಯಾಗಿ ಪಾಲನೆ ಮಾಡುತ್ತಿಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ದುಬಾರಿ ಬಡ್ಡಿ ದರಗಳ ಅನುಚಿತ ತೊಂದರೆಗಳಿಂದ ಮತ್ತು ಬಲವಂತದ ವಸೂಲಾತಿ ವಿಧಾನಗಳಿಂದ ಆರ್ಥಿಕವಾಗಿ ದುರ್ಬಲ ಗುಂಪುಗಳು ಮತ್ತು ವ್ಯಕ್ತಿಗಳು, ವಿಶೇಷವಾಗಿ ರೈತರು, ಮಹಿಳೆಯರು ಮತ್ತು ಮಹಿಳಾ ಸ್ವಸಹಾಯ ಗುಂಪುಗಳನ್ನು ರಕ್ಷಿಸಲು ಮತ್ತು ಮುಕ್ತಗೊಳಿಸಲು ಹಾಗೂ ಅದಕ್ಕೆ ಸಂಬಂಧಪಟ್ಟ ಅಥವಾ ಅದಕ್ಕೆ ಪ್ರಾಸಂಗಿಕವಾದ ವಿಷಯಗಳಿಗೆ ಸಂಬಂಧಿಸಿದ ಅಧ್ಯಾದೇಶವಾಗಿದೆ ಎಂದು ಹೇಳಿದರು.
ಸೆಕ್ಷನ್ 3 ರಡಿ ತಿಳಿಸಿದಂತೆ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಈ ಅಧ್ಯಾದೇಶದ ಪ್ರಾರಂಭದ ದಿನಾಂಕದಿಂದ ಮೂವತ್ತು ದಿನಗಳೊಳಗಾಗಿ, ಜಿಲ್ಲೆಯ ನೋಂದಣಿ ಪ್ರಾಧಿಕಾರಿಯ ಮುಂದೆ ನೋಂದಣಿಗಾಗಿ ಅರ್ಜಿಯನ್ನು ಸಲ್ಲಿಸಬೇಕು. ಈ ಅಧ್ಯಾದೇಶದ ಪ್ರಾರಂಭದ ತರುವಾಯ, ನೋಂದಣಿ ಪ್ರಾಧಿಕಾರಿಯಿಂದ ಈ ಅಧ್ಯಾದೇಶದಡಿ ನೋಂದಣಿ ಪಡೆಯದೆ ಯಾವುದೇ ಸಾಲಗಳನ್ನು ಮಂಜೂರು ಮಾಡತಕ್ಕದ್ದಲ್ಲ ಅಥವಾ ಯಾವುದೇ ಸಾಲವನ್ನು ವಸೂಲು ಮಾಡುವಂತಿಲ್ಲ. ನೋಂದಣಿ ಪ್ರಾಧಿಕಾರಿಯು ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕಾರ್ಯಾಚರಣೆಗಾಗಿ ನಿರ್ದಿಷ್ಟಪಡಿಸಬಹುದಾದಂಥ ವಿಧಾನದಲ್ಲಿ ಒಂದು ವರ್ಷದ ಅವಧಿಗಾಗಿ ನೋಂದಣಿಯನ್ನು ಮಾಡಿಕೊಳ್ಳಬಹುದಾಗಿದೆ.
ನೋಂದಣಿ ಪ್ರಾಧಿಕಾರಿಯು ಮೈಕ್ರೋ ಫೈನಾನ್ಸ್ ಸಂಸ್ಥೆಗಳು (ಎಂ.ಎಫ್.ಐ) ಅಥವಾ ಸಾಲ ನೀಡಿಕೆ ಏಜೆನ್ಸಿಗಳು ಅಥವಾ ಸಂಸ್ಥೆಗಳ ಅಥವಾ ಲೇವಾ ದೇವಿದಾರರ ನೋಂದಣಿಯನ್ನು ರದ್ದುಗೊಳಿಸಬಹುದು ಅಥವಾ ರದ್ದುಪಡಿಸಲು ಶಿಫಾರಸ್ಸು ಮಾಡಬಹುದು. ನೋಟೀಸು ನೀಡದ ಹೊರತು ಮತ್ತು ಮೈಕ್ರೋ ಫೈನಾನ್ಸ್ ಸಂಸ್ಥೆಗಳು (ಎಂ.ಎಫ್.ಐ) ಅಥವಾ ಸಾಲ ನೀಡಿಕೆ ಏಜೆನ್ಸಿಗಳು ಅಥವಾ ಸಂಸ್ಥೆಗಳು ಅಥವಾ ಲೇವಾ ದೇವಿದಾರರಿಗೆ ಅಂಥ ನೋಟೀಸಿನ ವಿರುದ್ಧ ಅಹವಾಲನ್ನು ಹೇಳಿಕೊಳ್ಳುವ ಸೂಕ್ತ ಅವಕಾಶವನ್ನು ನೀಡಿದ ಹೊರತು ನೋಂದಣಿ ರದ್ದತಿಯ ಆದೇಶವನ್ನು ಹೊರಡಿಸತಕ್ಕದ್ದಲ್ಲ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್. ಅರಸಿದ್ದಿ ಅವರು ಮಾತನಾಡಿ ಸಾಲಗಾರರ ಮನೆಗೆ ಹೋಗಿ ಅವರ ಕುಟುಂಬದ ಸದಸ್ಯರಿಗೆ ಮತ್ತು ಮನೆಯಲ್ಲಿರುವ ಹೆಣ್ಣು ಮಕ್ಕಳಿಗೆ ತೊಂದರೆ ಕೊಡುವದನ್ನು ಮೈಕ್ರೋ ಫೈನಾನ್ಸನವರು ಮಾಡಬಾರದು. ಅವರಿಗೆ ಕಾನೂನು ರೀತಿಯಲ್ಲಿ ಹಣ ವಸೂಲಿ ಮಾಡಬೇಕು. ಅದನ್ನು ಬಿಟ್ಟು ನಾಲ್ಕು ಜನರಿಗೆ ಅವರ ಮನೆಗಳಿಗೆ ಕಳಿಸಿ ಕುಟುಂಬದ ಸದಸ್ಯರಿಗೆ ತೊಂದರೆ ಮಾಡುವುದು ಕಾನೂನಿನ ಉಲ್ಲಂಘನೆಯಾಗುತ್ತದೆ. ನಿಮ್ಮ ಹಣದ ರಿಕವರಿ ನಿಯಮದ ಪ್ರಕಾರ ಮಾಡಿ. ಜನರಿಗೆ ತೊಂದರೆ ಕೊಟ್ಟಾಗ ಒಂದು ಡೆತ್ ಏನಾದರೂ ಆದರೆ ಅದು ದೊಡ್ಡ ಅಫರಾಧ ಆಗುತ್ತದೆ. ಅದಕ್ಕಾಗಿಯೆ ಜನರಿಗೆ ತೊಂದರೆ ಆಗಬಾದರು ಎನ್ನುವ ಕಾರಣಕ್ಕಾಗಿ ಕರ್ನಾಟಕ ಕಿರು ಸಾಲ ಮತ್ತು ಸಣ್ಣ ಸಾಲ ಬಲವಂತದ ಕ್ರಮಗಳ ಪ್ರತಿಬಂಧಕ ಕಾಯ್ದೆ ಜಾರಿಗೆ ಬಂದಿದೆ ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಅವರು ಕರ್ನಾಟಕ ಕಿರು ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ಅಧ್ಯಾದೇಶ. 2025 ಕಾನೂನಿನ ಕುರಿತು ಸವಿವರವಾದ ಮಾಹಿತಿಯನ್ನು ಮೈಕ್ರೋ ಫೈನಾನ್ಸ್ ಸಂಸ್ಥೆಯವರಿಗೆ ನೀಡಿದರು.
ಈ ಕಾರ್ಯಾಗಾರದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹೇಮಂತ ಕುಮಾರ್, ಲೀಡಬ್ಯಾಂಕ್ ಮ್ಯಾನೇಜರ್ ವಿರೇಂದ್ರಕುಮಾರ ಮತ್ತು ಜಿಲ್ಲೆಯ ಎಲ್ಲಾ ತಾಲೂಕಿನ ತಹಶಿಲ್ದಾರರು, ಲೇವಾದೇವಿ ಹಾಗೂ ಗಿರವಿದಾರರು. ಫೈನಾನ್ಸ ಹಾಗೂ ಫೈನಾನ್ಸ್ ಕಾರ್ಪೊರೇಷನ್ ಮತ್ತು ಸಹಕಾರ ಇಲಾಖೆ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.