
5th July 2025
ಕುಷ್ಟಗಿ ಜು.05: ಪಂಚ ಸೇನಾ ತಾಲೂಕು ಘಟಕದ ಅಧ್ಯಕ್ಷರಾಗಿ ಟೆಂಗುಂಟಿ ಗ್ರಾಮದ ಪ್ರಭುಗೌಡ ಪೊಲೀಸ್ ಪಾಟೀಲ್ ಅವರನ್ನು ಪಂಚಮಸಾಲಿ ಸಮಾಜದ ಗುರುಗಳಾದ ಬಸವಜಯ ಮೃಂತುಜಯ ಮಹಾಸ್ವಾಮಿಗಳು ಹಾಗೂ ರಾಜ್ಯಾಧ್ಯಕ್ಷರಾದ ರುದ್ರಗೌಡರು ಸೊಲಭಗೌಡ್ರು, ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ ಮನಗುಂಡಿ, ಜಿಲ್ಲಾಧ್ಯಕ್ಷ ಶಿವಶರಣಪ್ಪ ಶಿವಪೂಜೆ, ಉಪಾಧ್ಯಕ್ಷ ಬಸವರಾಜ ಅರಳಹಳ್ಳಿ, ಕಾರ್ಯದರ್ಶಿ ಮಂಜುನಾಥ ಬಸಾಪುರ ನೇಮಕಾತಿ ಮಾಡಿ ಆದೇಶವನ್ನು ಹೊರಡಿಸಿದ್ದಾರೆ.
ಪಂಚ ಸೇನಾ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಟೆಂಗುಂಟಿ ಗ್ರಾಮದ ಪ್ರಭುಗೌಡ ಪೊಲೀಸ್ ಪಾಟೀಲ್ ಅವರು ನೇಮಕಾತಿ ಹೊಂದಿದ ಪ್ರಯುಕ್ತ ತಾಲೂಕು ಅಧ್ಯಕ್ಷ ದೇವೇಂದ್ರಪ್ಪ ಬಳೂಟಗಿ, ಸಮಾಜದ ಹಿರಿಯ ಮುಖಂಡರಾದ ಕೆ.ಮಹೇಶ, ಉಮೇಶ ಮಂಗಳೂರು, ಚಂದ್ರಶೇಖರ ನಾಲತವಾಡ, ಸಂಗಪ್ಪ ವಂಕಲಕುಂಟಿ, ಮಹಾಂತೇಶ ಅಗಸಿಮುಂದಿನ, ದೊಡ್ಡಪ್ಪ ವಿ. ಕೌದಿ, ಶರಣಪ್ಪ ಹೊಸಮನಿ, ಶರಣಪ್ಪ ಮಾಲೀಪಾಟೀಲ್, ಗೌಡಪ್ಪಗೌಡ ಪೊಲೀಸ್ ಪಾಟೀಲ್, ಶರಣಪ್ಪ ಮಾಳಿ, ಮಲ್ಲಿಕಾರ್ಜುನ ಅಂಗಡಿ, ಹನುಮಂತಪ್ಪ ಅಂಗಡಿ, ದೊಡ್ಡಪ್ಪ ಎಸ್ ಕೌದಿ, ಬಸವರಾಜ ಮಾಲೀಪಾಟೀಲ್, ಶರಣಪ್ಪ ನವಲಹಳ್ಳಿ, ಬಸವರಾಜ ಹುಲಿಹೈದರ್, ಮುತ್ತಪ್ಪ ಹೊಸೂರ, ಸುರೇಶ ಕೌದಿ ಹಾಗೂ ತಾಲೂಕು ಪಂಚಮಸಾಲಿ ಸಮಾಜದ ಗುರು ಹಿರಿಯರು, ಯುವಕರು ಅಭಿನಂದನೆ ಸಲ್ಲಿಸಿದ್ದಾರೆ.
26th June 2025
ನಮ್ಮನ್ಯೂಜ್ ಜಿಎಂ ನ್ಯೂಜ್ ಕುಷ್ಟಗಿ. 26 :
ಸರಕಾರ ಸರಕಾರಿ ಶಾಲೆಗಳ ಉಳಿವಿಕೆಗಾಗಿ ಸಾಕಷ್ಟು ಹಣವನ್ನು ಯೋಜನೆಗಳ ರೂಪದಲ್ಲಿ ಶಿಕ್ಷಣ ಇಲಾಖೆಗೆ ಖರ್ಚು ಮಾಡುತ್ತಿದೆ ಆದರೆ ಸರಕಾರವು ಶಾಲೆಗಳಿಗೆ ಹಣ ಖರ್ಚು ಮಾಡಿದರೆ ಸಾಲದು ಶಾಲಾ ಎಸ್.ಡಿ.ಎಂ.ಸಿಯ ಸಮುದಾಯದ ಸಹಭಾಗಿತ್ವದಲ್ಲಿ ಶಾಲೆಗಳನ್ನು ಅಭಿವೃದ್ಧಿ ಪಡಿಸಿದಾಗ ಮಾತ್ರ ಸರಕಾರಿ ಶಾಲೆಗಳು ಅಭಿವೃದ್ಧಿ ಹೊಂದುತ್ತವೆ ಎಂದು ಬಿ.ಆರ್.ಸಿ ಹಾಗೂ ಎಸ್.ಡಿ.ಎಂ.ಸಿ ಸಮಿತಿ ಸದಸ್ಯ ಡಾ. ಜೀವನ್ ಸಾಬ ಬಿನ್ನಾಳ ಇಂದು ಗುರುವಾರ ಹೇಳಿದರು.
ಕುಷ್ಟಗಿ ನಗರದ ಗುರುಭವನದಲ್ಲಿ ಕಲಿಕಾ ಟಾಟಾ ಟ್ರಸ್ಟ್ ಹಾಗೂ ಶಿಕ್ಷಣ ಇಲಾಖೆ ಇವರ ಸಹ ಯೋಗದಲ್ಲಿ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಿಗೆ ಹಾಗೂ ಸದಸ್ಯರಿಗೆ ಒಂದು ದಿನದ ಕಾರ್ಯಾಗಾರ ತರಬೇತಿ ಕಾರ್ಯಕ್ರಮ ಕುರಿತು ಮಾತನಾಡಿದ ಅವರು, ದೇವಾಲಯದ ಗಂಟೆಗಿಂತ ಶಾಲೆಯ ಗಂಟೆ ಬಹಳ ಮುಖ್ಯ ಎಷ್ಟೋ ಕಡೆ ಹಳ್ಳಿಯ ಜನತೆ ತಮ್ಮ ಸ್ವಂತ ಖರ್ಚಿನಿಂದ ಶಾಲೆಗಳನ್ನು ಅಭಿವೃದ್ಧಿಗೊಳುಸುತ್ತಿದ್ದಾರೆ ಆದರೆ ಕಲಿಕಾ ಟಾಟಾ ಟ್ರಸ್ಟ್ ಸಂಸ್ಥೆ ಸರಕಾರದ ಸಹ ಭಾಗಿತ್ವದಲ್ಲಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಇವತ್ತು ಉಚಿತ ಶಿಕ್ಷಣವನ್ನು ನೀಡುತ್ತಿದೆ ಟಾಟಾ ಟ್ರಸ್ಟ್ ಸಂಸ್ಥೆ ಮಾಡುತ್ತಿರುವ ಕಾರ್ಯವನ್ನು ನಿಜಕ್ಕೂ ಮೆಚ್ಚಲೆಬೇಕು ಎಂದು ಹೇಳಿದರು.
ನಂತರ ಬಿ.ಆರ್.ಪಿ ಸಂತೋಷ ಬೆಟಗೇರಿ ಹಾಗೂ ಸರಕಾರಿ ಬಾಲಕಿಯರ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಎಸ್. ಡಿ.ಎಂ.ಸಿ. ಅಧ್ಯಕ್ಷ ಪವಾಡೆಪ್ಪ ಚೌಡ್ಕಿ ಕಾರ್ಯಕ್ರಮ ಕುರಿತು ಮಾತನಾಡಿದರು.
ನಂತರ ತಾಲೂಕಿನ ವಿವಿಧ ಶಾಲೆಗಳಿಂದ ಬಂದ ಎಸ್.ಡಿ.ಎಂ.ಸಿ ಅಧ್ಯಕ್ಷರುಗಳಿಗೆ ಸದಸ್ಯರಿಗೆ ಕಲಿಕಾ ಟಾಟಾ ಟ್ರಷ್ಟ್ ನಿಂದ ತರಬೇತಿ ನೀಡಲಾಯಿತು.
ಈ ಸಂದರ್ಭದಲ್ಲಿ ಕಲಿಕಾ ಟಾಟಾ ಟ್ರಸ್ಟ್ ಸಮಿತಿ ತಾಲೂಕು ಮುಖ್ಯಸ್ಥರಾದ ವೀರೇಶ ಹಂಚಿನಾಳ, ಸಂಯೋಜಕರಾದ ಬಸವರಾಜ ನಾಗಣ್ಣವರ, ಭಾಷುಸಾಬ, ಕಲ್ಲಪ್ಪ, ಆನಂದ, ಬಸವರಾಜ ಹಾದಿಮನಿ ಸೇರಿದಂತೆ ತಾಲೂಕಿನ ವಿವಿಧ ಕಡೆಗಳಿಂದ ಬಂದ ಎಸ್.ಡಿ.ಎಂ.ಸಿ. ಅಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು.
25th June 2025
ಕುಷ್ಟಗಿ : ಆಲಮಟ್ಟಿ ಜಲಾಶಯದಲ್ಲಿ 76.475 ಟಿಎಂಸಿ ನೀರು ಶೇಖರಣೆಯಾಗಿದ್ದು ಒಳಹರಿವು 1 ಲಕ್ಷ ಕ್ಯೂಸೆಕ್ಸ್ ತಲುಪಿದ್ದು ಪ್ರತಿದಿನ 70 ಕ್ಯೂಸೆಕ್ಸ್ ನೀರನ್ನು ನದಿಗಳಿಗೆ ಹರಿಸಲಾಗುತ್ತಿದ್ದು ಕೊಪ್ಪಳ ಏತ ನೀರಾವರಿ ಯೋಜನೆ ಅಡಿಯಲ್ಲಿ ಈಗಾಗಲೇ ಜಿಲ್ಲೆಯ ಕೆರೆಗಳನ್ನು ತುಂಬಿಸುವ ಯೋಜನೆ ಜಾರಿಯಲ್ಲಿದ್ದು ಈಗ ವ್ಯರ್ಥವಾಗಿ ನದಿಗಳಿಗೆ ಹರಿದು ಹೋಗುವ ನೀರನ್ನು ಶೀಘ್ರವೇ ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯ ಸಮಿತಿ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ನಜೀರ್ ಸಾಬ್ ಮೂಲಿಮನಿ ಅವರು ಇಂದು ಮಂಗಳವಾರದಂದು ಸಹಾಯಕ ಕಾರ್ಯಪಾಲಕ ಅಭಿಯಂತರರು ಕೃಷ್ಣಭಾಗ್ಯ ಜಲ ನಿಗಮ ಉಪ ವಿಭಾಗ ಕುಷ್ಟಗಿ ಇವರಿಗೆ ಆಗ್ರಹಿಸಿ ಮನವಿ ಸಲ್ಲಿಸಿದರು.
ನಂತರ ಮಾತನಾಡಿದ ಅವರು ತಾಲೂಕಿನ ಎಲ್ಲ ಕೆರೆಗಳಿಗೆ ಪೈಪ್ ಲೈನ್ ಮಾಡುವ ಪ್ರಕ್ರಿಯೆಯಲ್ಲಿದ್ದು ಉಳಿದ ಆ ಕೆರೆಗಳ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಕುಷ್ಟಗಿ ಮತ್ತು ಯಲಬುರ್ಗಾ ತಾಲೂಕುಗಳಲ್ಲಿ ಕಡಿಮೆ ಮಳೆಯಿಂದಾಗಿ ಕೆರೆಗಳು ತುಂಬಿರುವುದಿಲ್ಲ. ಕೆರೆಗಳಿಗೆ ನೀರನ್ನು ತುಂಬಿಸುವ ಯೋಜನೆ ಜಿಲ್ಲೆಯ ರೈತರಿಗೆ ವರದಾನವಾಗಿದ್ದು ವಿಳಂಬ ಮಾಡದೆ ಜುಲೈ ತಿಂಗಳ ಒಂದನೆ ತಾರೀಖಿನೊಳಗಾಗಿ ಕೆರೆಗಳಿಗೆ ನೀರನ್ನು ತುಂಬಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯ ಸಮಿತಿ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ನಜೀರ್ ಸಾಬ್ ಮೂಲಿಮನಿ, ಗೌರವಾಧ್ಯಕ್ಷರಾದ ಶಂಕರ್ ಬೀಳಗಿ, ಕಾರ್ಯದರ್ಶಿ ದೊಡ್ಡಪ್ಪ ಸಜ್ಜಲಗುಡ್ಡ ಮತ್ತು ಕಾಡಪ್ಪ ಗದ್ದಿ, ಬಸಪ್ಪ ಗದ್ದಿ, ಪರಶುರಾಮ ಬಲಕುಂದಿ, ಸಂಗಮೇಶ ಗುಡಗದ್ದಿ, ಯಮನೂರ ಮುದುಗಲ್, ಪರಸಪ್ಪ ಮಾಲಗಿತ್ತಿ, ಹನುಮಂತ ಹಂಚನಾಳ, ಕುಮಾರ್ ಕೊರಡಕೇರಾ ಹಾಗೂ ಇತರರಿದ್ದರು. ವರದಿ : ಭೀಮಸೇನರಾವ್ ಕುಲಕರ್ಣಿ ಜಿಎಂ ನ್ಯೂಜ್ ಕುಷ್ಟಗಿ.
20th May 2025
ಬಿಜೆಪಿ ರಾಜ್ಯಾಧ್ಯಕ್ಷರಾದ ಹಾಗೂ ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ವಿಜಯೇಂದ್ರ ಅವರಿಗೆ ಹಾಗೂ ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಲೋಕಸಭಾ ಸದಸ್ಯರಾದ ಬಸವರಾಜ ಬೊಮ್ಮಯಿ ಅವರಿಗೆ, ಸಣ್ಣ ನೀರಾವರಿ ಇಲಾಖೆ ನಿವೃತ್ತ ಕಾರ್ಯದರ್ಶಿ ಕರ್ನಾಟಕ ಸರ್ಕಾರ ಹಾಗೂ ಬಿಜೆಪಿ ಮುಖಂಡರಾದ ಪ್ರಭಾಕರ ಚಿಣಿ ಅವರು ಇಂದು ಮಂಗಳವಾರ ಬೆಂಗಳೂರಿನಲ್ಲಿ ತಮ್ಮ ಪುತ್ರನ ಮದುವೆಯ ಆಮಂತ್ರಣ ಪತ್ರಿಕೆಯನ್ನು ಕೊಟ್ಟು ಮದುವೆಗೆ ಬಂದು ಮದುಮಕ್ಕಳನ್ನು ಆಶೀರ್ವದಿಸಬೇಕೆಂದು ಅಹ್ವಾನಿಸಿದರು.
ಇದೇ ವೇಳೆ ಕರ್ನಾಟಕ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕರು ಹಾಗೂ ಕುಷ್ಟಗಿ ಮತಕ್ಷೇತ್ರದ ಶಾಸಕರಾದ ದೊಡ್ಡನಗೌಡ ಹೆಚ್ ಪಾಟೀಲ್, ಬಿಜೆಪಿ ಮುಖಂಡರಾದ ಬಸವರಾಜ ಹಳ್ಳೂರು, ಶರಣು ತಳ್ಳಿಕೇರಿ, ಬಿಜೆಪಿ ಮಂಡಲ ಅಧ್ಯಕ್ಷರಾದ ಮಹಾಂತೇಶ್ ಬಾದಾಮಿ, ವಿಜಯಕುಮಾರ್ ಹಿರೇಮಠ, ಅಶೋಕ ಬಳ್ಳೂಟಗಿ, ಕೆ. ಮಹೇಶ್, ವೀರಭದ್ರಪ್ಪ, ಮಲ್ಲಣ್ಣ ಪಲ್ಲೆದ್, ಪರಶುರಾಮ ನಾಗರಾಳ, ಲಾಡಸಾಬ್ ಕೊಳ್ಳಿ ಸೇರಿದಂತೆ ಕುಷ್ಟಗಿ ನಗರದ ಬಿಜೆಪಿ ಮುಖಂಡರು ಉಪಸ್ಥಿತದ್ದರು.
GM News Kushtagi.
20th May 2025
ಕುಷ್ಟಗಿ: ಪಟ್ಟಣದ ಎನ್ ಸಿ ಹೆಚ್ ಪ್ಯಾಲೇಸ್ ನಲ್ಲಿ ಇದೇ ಮೇ 22 ರಂದು ಗುರುವಾರ ಬೆಳಿಗ್ಗೆ 08:30 ಗಂಟೆಗೆ ರಾಜ ಋಷಿ ಶ್ರೀ ಭಗೀರಥ ಮಹರ್ಷಿ ಜಯಂತಿ ಕಾರ್ಯಕ್ರಮ ಅದ್ದೂರಿಯಾಗಿ ಜರುಗಲಿದೆ.
ತಾಲೂಕಾಡಳಿತ ಹಾಗೂ ಉಪ್ಪಾರ ಸಮಾಜದ ಸಹಭಾಗಿತ್ವದಲ್ಲಿ ನಡೆಯುವ ರಾಜ ಋಷಿ ಶ್ರೀ ಭಗೀರಥ ಮಹರ್ಷಿ ಜಯಂತಿಯ ಅಂಗವಾಗಿ 2024 - 25 ನೇ ಸಾಲಿನ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ 85% ಕ್ಕಿಂತ ಹೆಚ್ಚು ಅಂಕ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ 2023-2025 ಅವಧಿಯಲ್ಲಿ ನೂತನವಾಗಿ ಸರಕಾರಿ ನೌಕರಿಗೆ ಆಯ್ಕೆಯಾದ ನೌಕರರಿಗೆ ಹಾಗೂ ನಿವೃತ್ತ ನೌಕರರಿಗೆ ಗೌರವ ಪೂರ್ವಕ ಸನ್ಮಾನ ಸಮಾರಂಭ ನಡೆಯಲಿದೆ.
ಹೊಸದುರ್ಗದ ಭಗೀರಥ ಪೀಠದಾಪತಿ ಶ್ರೀ ಪುರುಷೋತ್ತಮಾನಂದಪುರಿ ಮಹಾಸ್ವಾಮಿಗಳು , ಕಲಬುರ್ಗಿಯ ರಾಂಪೂರಹಳ್ಳಿಯ ಶ್ರೀ ಭಗೀರಥ ಆನಂದಪುರಿ ಮಹಾಸ್ವಾಮಿಗಳು, ಸವದತ್ತಿಯ ವಶಿಷ್ಠಾಶ್ರಮದ ಶ್ರೀ ಭಾರ್ಗವನಂದ ಗಿರಿ ಮಹಾಸ್ವಾಮಿಗಳು ಸಾನಿಧ್ಯ ವಹಿಸಲಿದ್ದಾರೆ.
ಸಂಸದ ಕೆ ರಾಜಶೇಖರ ಹಿಟ್ನಾಳ ಶ್ರೀ ಭಗೀರಥ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಿದ್ದಾರೆ. ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಹಾಗೂ ಶಾಸಕ ದೊಡ್ಡನಗೌಡ ಪಾಟೀಲ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಚುನಾಯಿತ ಪ್ರತಿನಿಧಿಗಳು ಹಾಗೂ ಮುಖಂಡರು, ಗಣ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಭಗೀರಥ ಕ್ಷೇಮಾಭಿವೃದ್ಧಿ ಸೇವಾ ಸಂಘದ ಅಧ್ಯಕ್ಷ ಸಂಗಪ್ಪ ಶೇಷಪ್ಪ ಭಾವಿಕಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ.
ಬಿಳಗಿ ಶಿಕ್ಷಕ ರವಿ ನಾರಾಯಣ ಉಪ್ಪಾರ ರವರಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ ಎಂದು ಭಗೀರಥ ಕ್ಷೇಮಾಭಿವೃದ್ಧಿ ಸೇವಾ ಸಂಘದ ತಾಲೂಕಾ ಅಧ್ಯಕ್ಷ ಸಂಗಪ್ಪ ಶೇಷಪ್ಪ ಭಾವಿಕಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
GM News Kushtagi.
5th May 2025
ಕುಷ್ಟಗಿ ಪಟ್ಟಣದ ಮಾತೋಶ್ರೀ ಹೊಳಿಯಮ್ಮ ಪದವಿ ಕಲಾ ಮಹಾವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದ ವತಿಯಿಂದ ಮೇ5 ರಂದು ಬೆಳಿಗ್ಗೆ 10ಗಂಟೆಗೆ ಕನ್ನಡ ಸಾಹಿತ್ಯ ಪರಿಷತ್ತಿನ 111ನೇಯ ವರ್ಷದ ಸಂಸ್ಥಾಪನೇಯ ದಿನಾಚರಣೆಯ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ ಎಂದು ಕಸಾಪ ತಾಲೂಕಾಧ್ಯಕ್ಷ ಲೆಂಕಪ್ಪ ವಾಲಿಕಾರ ಹೇಳಿದರು
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು ಕನ್ನಡ ಸಾಹಿತ್ಯ ಪರಿಷತ್ತು ಸಂಸ್ಥಾಪನಾ ದಿನಾಚರಣೆಯ ಜೊತೆಗೆ ಕಾಲೇಜಿಗೊಂದು ಕವಿನುಡಿ ಕಾರ್ಯಕ್ರಮವನ್ನು ನಡೆಸಲಾಗುತ್ತಿದ್ದು ಸಾಹಿತ್ಯಾಸಕ್ತರು ಹಾಗೂ ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ವಿನಂತಿಸಿಕೊಂಡರು
ಕಾರ್ಯಕ್ರದ ಉದ್ಘಾಟನೆಯನ್ನು ಹಕ್ಕಬುಕ್ಕ ವಿದ್ಯಾವರ್ಧಕ ಸಂಸ್ಥೆಯ ಅಧ್ಯಕ್ಷ ಹನುಮಂತಪ್ಪ ಚೌಡ್ಕಿ, ಅಧ್ಯಕ್ಷತೆಯನ್ನು ಕಸಾಪ ಅಧ್ಯಕ್ಷ ಲೆಂಕಪ್ಪ ವಾಲಿಕಾರ, ಉಪನ್ಯಾಸವನ್ನು ಸಾಹಿತಿ ನಿಂಗಪ್ಪ ಸಜ್ಜನ, ಮುಖ್ಯ ಅತಿಥಿಗಳಾಗಿ ಕೇಂದ್ರ ಕಸಾಪ ಪ್ರತಿನಿಧಿ ನಬಿಸಾಬ ಕುಷ್ಟಗಿ, ದತ್ತಿ ದಾನಿಗಳಾದ ಫಕೀರಪ್ಪ ಚಳಗೇರಿ, ಕೃಷ್ಣ ಆಶ್ರೀತ್, ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ ಕಾಲೇಜು ವಿದ್ಯಾರ್ಥಿಗಳಿಂದ ಕವಿನುಡಿ ಕಾರ್ಯಕ್ರಮ ನಡೆಯಲಿದೆ ಎಂದರು.
ರವೀಂದ್ರ ಬಾಕಳೆ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಇದು ಕನ್ನಡ ಕಟ್ಟುವ ಕೆಲಸ ಇದ್ದು ಎಲ್ಲರೂ ಸಹಕಾರ ನೀಡಬೇಕು ಎಂದರು.
ಬಸವರಾಜ ಗಾಣಿಗೇರ, ಭರತೇಶ ಜೋಶಿ ಮಾತನಾಡಿದರು, ಈ ಸಂದರ್ಭದಲ್ಲಿ ನಿಂಗಪ್ಪ ಸಜ್ಜನ, ಮಂಜುನಾಥ ಗುಳೇದಗುಡ್ಡ, ಶ್ರೀನಿವಾಸ ಕಂಟ್ಲಿ, ಶರಣಪ್ಪ ಲೈನದ, ದೇವರಾಜ ವಿಶ್ವಕರ್ಮ,ಲಲಿತಮ್ಮ ಹಿರೇಮಠ, ಪರಶಿವಮೂರ್ತಿ ದೋಟಿಹಾಳ, ಅನಿಲಕುಮಾರ ಕಮ್ಮಾರ, ಸಂಗಮೇಶ ಲೂತಿಮಠ ಸೇರಿದಂತೆ ಇತರರು ಇದ್ದರು.
ವರದಿ: ಭೀಮಸೇನರಾವ್ ಕುಲಕರ್ಣಿ ಕುಷ್ಟಗಿ.
18th April 2025
ಕೊಪ್ಪಳ : ರಾಜ್ಯದಲ್ಲಿ ದಿನಾಂಕ 17/04/2025 ರಂದು ಸಿಇಟಿ ಪರೀಕ್ಷೆ ನಡೆಸಲಾಗಿದೆ ಪರೀಕ್ಷಾ ಕೊಠಡಿಗೆ
ಕೆಲವೊಂದು ವಸ್ತುಗಳು ತರುವುದನ್ನು ನಿಷೇಧಿಸಲಾಗಿದೆ ಆದರೆ ಇದನ್ನೇ ನೆಪವಾಗಿಟ್ಟುಕೊಂಡು ಪರೀಕ್ಷಾ ಮೇಲ್ವಿಚಾರಕರು ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರವನ್ನು ತೆಗೆಸಿರುವ ಘಟನೆ ಹಲವಡೆ ನಡೆದಿರುತ್ತದೆ. ಇದು ಖಂಡನೀಯ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಕೊಪ್ಪಳ ಜಿಲ್ಲಾ ಪ್ರತಿನಿಧಿ ಗುರುರಾಜ್ ಎನ್ ಜೋಶಿ ತಿಳಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಆದಿಚುಂಚನಗಿರಿ ಪದವಿಪೂರ್ವ ಕಾಲೇಜು ಪರೀಕ್ಷಾ ಕೇಂದ್ರ ಹಾಗೂ ಬೀದರನ ಸಾಯಿ ಸ್ಫೂರ್ತಿ ಪರೀಕ್ಷಾ ಕೇಂದ್ರ ಅಲ್ಲದೇ ರಾಜ್ಯದ ಇತರೆಡೆ ನಡೆದ ಸಿಇಟಿ ಪರೀಕ್ಷೆಯಲ್ಲಿ, ಪರೀಕ್ಷೆ ಬರೆಯಲು ಆಗಮಿಸಿದ್ದ ವಿದ್ಯಾರ್ಥಿಗಳು ಧರಿಸಿದ್ದ ಜನಿವಾರವನ್ನು ಭದ್ರತಾ ಸಿಬ್ಬಂದಿಗಳು ಬಲವಂತವಾಗಿ ತೆಗೆಸಿರುತ್ತಾರೆ. ಜನಿವಾರ ತೆಗೆಯಲೊಪ್ಪದ ಬೀದರನ ವಿದ್ಯಾರ್ಥಿಗೆ ಪರೀಕ್ಷೆಗೆ ಅವಕಾಶ ಕೊಟ್ಟಿರುವುದಿಲ್ಲ.
ಸಿಇಟಿ ಪರೀಕ್ಷೆ ಬರೆಯಲು ಜನಿವಾರ ಹೇಗೆ
ಅಡ್ಡಿಯಾಗುತ್ತದೆ ಎಂದು ಪ್ರಶ್ನಿಸಿದ್ದಾರೆ. ಕೇವಲ ಬ್ರಾಹ್ಮಣರ ಮೇಲೆ ಮಾತ್ರ ಕಾನೂನುಗಳನ್ನು ಹೇರುವುದು ಏಕೆ?, ಅನ್ಯ ಕೋಮಿನವರ ವಿಚಾರದಲ್ಲಿ ಅಧಿಕಾರಿಗಳ ನಿಲುವು ಭಿನ್ನವಾಗಿರಲು ಕಾರಣ ಏನು ಎಂದು ಕೇಳಿದ್ದಾರೆ. ಜನಿವಾರ ಧರಿಸಿದವರು ಪರೀಕ್ಷೆ ಬರೆಯಲು ಅನರ್ಹರೇ, ಇದು ತಾರತಮ್ಯವಲ್ಲದೆ ಮತ್ತೇನು. ಇದರ ಬಗ್ಗೆ ಅಧಿಕಾರಿಗಳು ಸ್ಪಷ್ಟನೆ ನೀಡಬೇಕು, ಹಾಗೂ ಬೇಶರತ್ ಕ್ಷಮೆಯಾಚಿಸಬೇಕು ಮತ್ತು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಇಲ್ಲದಿದ್ದಲ್ಲಿ ಬರುವ ದಿನಗಳಲ್ಲಿ ವಿಪ್ರ ಸಮಾಜವು ಪ್ರತಿಭಟನೆ ನಡೆಸಲು ಸಿದ್ಧವಾಗಬೇಕಾಗುತ್ತದೆ. ಯಾರ ತಂಟೆಗೂ ಹೋಗದೇ ತಮ್ಮಷ್ಟಕ್ಕೆ ತಾವು ಇರುವ ಬ್ರಾಹ್ಮಣ ಸಮುದಾಯದ ಮೇಲೆ ಈ ರೀತಿ ಮೇಲಿಂದ ಮೇಲೆ ಅವಮಾನಾಸ್ಪದ ಘಟನೆಗಳು ಆಗುತ್ತಿರುವುದು ಖಂಡನಾರ್ಹ, ಜನಿವಾರ ಧರಿಸುವುದು ಬ್ರಾಹ್ಮಣರ ಧಾರ್ಮಿಕ ಹಕ್ಕು, ಅದನ್ನು ತೆಗೆಸಿದ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಎಚ್ಚರಿಸಿದ್ದಾರೆ.
ಈ ಘಟನೆಯನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಕೊಪ್ಪಳ ಜಿಲ್ಲಾ ಪ್ರತಿನಿಧಿ ಗುರುರಾಜ್ ಎನ್ ಜೋಶಿ ಮತ್ತು ವಿಪ್ರ ಮುಖಂಡರಾದ ಎಚ್ ಬಿ ದೇಶಪಾಂಡೆ, ವೇಣುಗೋಪಾಲಾಚಾರ ಜಹಗೀರದಾರ, ಜಗನಾಥ ಹುನಗುಂದ, ಪ್ರಾಣೇಶ್ ಮಾದಿನೂರ, ಡಾ. ಕೆ.ಜಿ.ಕುಲಕರ್ಣಿ, ಡಿ.ವಿ ಜೋಶಿ, ಸುರೇಶ್ ಗಾವರಾಳ, ಅಪ್ಪಣ ಪದಕಿ, ರಾಘವೆಂದ್ರ ಕುಲಕರ್ಣಿ, ರಾಮಮೂರ್ತಿ ಸಿದ್ಧಾಂತಿ, ಭೀಮಸೇನ ಜೋಷಿ, ಮಂಜುನಾಥ ಹಳ್ಳಿಕೇರಿ. ಅರವಿಂದ
ಕುಲಕರ್ಣಿ, ಪ್ರಕಾಶ್ ಜೋಶಿ, ಪ್ರಶಾಂತ ಕುಲಕರ್ಣಿ, ಶ್ರೀಮತಿ ವೈಷ್ಣವಿ ಹುಲಗಿ, ಶ್ರೀಮತಿ ಲತಾ
ಮುದೊಳ, ರಾಘವೇಂದ್ರ ನರಗುಂದ, ರಮೇಶ್ ಜಹಗೀರದಾರ, ನಾಗರಾಜ್ ಸಿದ್ಧಾಂತಿ,
ಅನಿಲ್ ಕುಲಕರ್ಣಿ, ನಾಗೆಶ್ವರಾವ್ ದೇಶಪಾಂಡೆ ಹಾಗೂ ಇನ್ನೂ ಪ್ರಮುಖ ಮುಖಂಡರು ಘಟನೆಯನ್ನು
ತೀವ್ರವಾಗಿ ಖಂಡಿಸಿರುತ್ತಾರೆ.
ವರದಿ: ಭೀಮಸೇನರಾವ್ ಕುಲಕರ್ಣಿ ಕುಷ್ಟಗಿ.
11th April 2025
ಜಿಎಂ ನ್ಯೂಜ್ ಕುಷ್ಟಗಿ : ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಮತ್ತು ಜಿಲ್ಲಾ ಪ್ರತಿನಿಧಿ ಅಭ್ಯರ್ಥಿಯ ಚುನಾವಣೆ ನಿಮಿತ್ಯ ಅಶೋಕ್ ಹಾರನಹಳ್ಳಿ ರವರ ಬೆಂಬಲಿತ ಅಧ್ಯಕ್ಷೀಯ ಅಭ್ಯರ್ಥಿಯಾದ ವೇದಬ್ರಹ್ಮ ಬಾನುಪ್ರಕಾಶ್ ಶರ್ಮ ರವರ ಹಾಗೂ ಕೊಪ್ಪಳ ಜಿಲ್ಲಾ ಪ್ರತಿನಿಧಿ ಅಭ್ಯರ್ಥಿಯಾದ ಗುರುರಾಜ್ ಜೋಶಿ ರವರ ಪರವಾಗಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಚುನಾವಣೆಯ ಪ್ರಚಾರವನ್ನು ಕೊಪ್ಪಳ ಜಿಲ್ಲೆಯ ಕುಷ್ಟಗಿ ನಗರದಲ್ಲಿ ದಿನಾಂಕ : 10-04-2025 ಗುರುವಾರದಂದು ವಿಪ್ರ ಮಹನೀಯರ ಮನೆ ಮನೆಗೆ ತೆರಳಿ ಪ್ರಚಾರ ಕೈಗೊಳ್ಳಲಾಯಿತು.
ಕುಷ್ಟಗಿ ತಾಲೂಕಾ ಬ್ರಾಹ್ಮಣ ಸಮಾಜದ ಅಧ್ಯಕ್ಷರಾದ ತಿಮ್ಮಪ್ಪಯ್ಯ ದೇಸಾಯಿ ಕಾಟಾಪುರ ಇವರ ಮನೆಗೆ ಕೊಪ್ಪಳ ಜಿಲ್ಲಾ ಪ್ರತಿನಿಧಿ ಅಭ್ಯರ್ಥಿಯಾದ ಗುರುರಾಜ್ ಜೋಶಿ ಅವರು ತಮ್ಮ ತಂಡದವರೊಂದಿಗೆ ಚುನಾವಣೆಯ ಪ್ರಚಾರದ ನಿಮಿತ್ಯ ಭೇಟಿ ನೀಡಿದರು. ಇದೇ ಏಪ್ರಿಲ್ ತಿಂಗಳು 13ನೇ ತಾರೀಕಿನಂದು ಕೊಪ್ಪಳದಲ್ಲಿ ನಡೆಯುವ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಮತ್ತು ಕೊಪ್ಪಳ ಜಿಲ್ಲಾ ಪ್ರತಿನಿಧಿ ಅಭ್ಯರ್ಥಿಯ ಚುನಾವಣೆ ನಿಮಿತ್ಯ ಅಶೋಕ್ ಹಾರನಹಳ್ಳಿ ರವರ ಬೆಂಬಲಿತ ಅಧ್ಯಕ್ಷೀಯ ಅಭ್ಯರ್ಥಿಯಾದ ವೇದಬ್ರಹ್ಮ ಬಾನುಪ್ರಕಾಶ್ ಶರ್ಮ ರವರ ಕ್ರಮ ಸಂಖ್ಯೆ 1 ಹಾಗೂ ಕೊಪ್ಪಳ ಜಿಲ್ಲಾ ಪ್ರತಿನಿಧಿ ಅಭ್ಯರ್ಥಿ ಗುರುರಾಜ್ ಜೋಶಿ ಕ್ರಮ ಸಂಖ್ಯೆ 1 ಇವರಿಗೆ ಮತವನ್ನು ನೀಡಬೇಕೆಂದು ಮನವಿ ಮಾಡಿದರು ಹಾಗೂ ಕೃಷ್ಣ ಆಶ್ರಿತ್ ವಕೀಲರ ಮನೆಗೆ ಕೊಪ್ಪಳ ಜಿಲ್ಲಾ ಪ್ರತಿನಿಧಿ ಅಭ್ಯರ್ಥಿ ಗುರುರಾಜ್ ಜೋಶಿ ತಮ್ಮ ತಂಡದವರೊಂದಿಗೆ ಭೇಟಿ ನೀಡಿ ಮತಯಾಚನೆ ಮಾಡಿದರು. ನಂತರ ಕುಷ್ಟಗಿ ನಗರದ ಆರಾಧ್ಯ ದೇವರಾದ ಶ್ರೀ ಅಡವಿ ಮುಖ್ಯಪ್ರಾಣ ದೇವರ ದೇವಸ್ಥಾನಕ್ಕೆ ಭೇಟಿ ನೀಡಿದ ತಂಡವು ಶ್ರೀ ಅಡವಿರಾಯನ ದರ್ಶನ ಪಡೆದರು.
ಇದೇ ವೇಳೆ ಮುಖಂಡರಾದ ವೇಣುಗೋಪಾಲ್ ಆಚಾರ್ ಜಾಗೀರದಾರ್, ಕೊಪ್ಪಳ ಜಿಲ್ಲಾ ಪ್ರತಿನಿಧಿ ಅಭ್ಯರ್ಥಿ ಗುರುರಾಜ್ ಜೋಶಿ, ಮತ್ತು ಸುರೇಶ್ ದೇಸಾಯಿ ಮಾಜಿ ಅಧ್ಯಕ್ಷರು ನಗರಸಭೆ ಕೊಪ್ಪಳ, ಮಂಜುನಾಥ ಹಳ್ಳಿಕೇರಿ ಚುನಾವಣೆ ಪ್ರಚಾರದ ನಿಮಿತ್ಯ ಮಾತನಾಡಿದರು.
ಈ ಸಂಧರ್ಭದಲ್ಲಿ ಕುಷ್ಟಗಿ ಬ್ರಾಹ್ಮಣ ಸಮಾಜದ ಅಧ್ಯಕ್ಷರಾದ ತಿಮ್ಮಪ್ಪಯ್ಯ ದೇಸಾಯಿ ಕಾಟಾಪುರ, ಕೃಷ್ಣ ಆಶ್ರಿತ್ ವಕೀಲರು, ವೆಂಕಟೇಶ ಮಠದ್, ಭೀಮಸೇನರಾವ್ ಕುಲಕರ್ಣಿ ಬನ್ನೆಟ್ಟಿ, ಹಾಗೂ
ಸುರೇಶ್ ಗಾವರಾಳ, ರಾಜೇಂದ್ರ ಬಿಸರಳ್ಳಿ, ಹೆಚ್ ಬಿ ದೇಶಪಾಂಡೆ, ವೇಣುಗೋಪಾಲ್ ಆಚಾರ್ ಜಾಗೀರದಾರ್. ರಾಮಮೂರ್ತಿ ಸಿದ್ಧಾಂತಿ, ನಾಗೇಶರಾವ್ ದೇಶಪಾಂಡೆ, ಮಂಜುನಾಥ ಹಳ್ಳಿಕೇರಿ. ಪ್ರಹ್ಲಾದ ಬನ್ನೇಗೋಳ, ಅನಿಲ್ ಜೋಶಿ, ಅರವಿಂದ ಕುಲಕರ್ಣಿ, ಚಿದಂಬರ ದೇಶಪಾಂಡೆ, ರವಿ ಕುಲಕರ್ಣಿ, ಪ್ರಕಾಶ್ ಜೋಶಿ, ಗೋಪಾಲಕೃಷ್ಣ ಜೋಶಿ, ರಾಮಕೃಷ್ಣ ಕುಲಕರ್ಣಿ, ಸಂಜಯ ವೈದ್ಯ, ಹಾಗೂ ಕುಷ್ಟಗಿ ನಗರದ ವಿಪ್ರ ಬಾಂಧವರು ಭಾಗವಹಿಸಿ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ : ಭೀಮಸೇನರಾವ್ ಕುಲಕರ್ಣಿ ಕುಷ್ಟಗಿ.
9th April 2025
ಜಿ ಎಂ ನ್ಯೂಜ್ ಕುಷ್ಟಗಿ. : ಭಾರತೀಯ ಜನತಾ ಪಕ್ಷದ ಸಂಸ್ಥಾಪನಾ ದಿನವಾದ ಇಂದು ಶಾಸಕ ಹಾಗೂ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕರಾದ ದೊಡ್ಡನಗೌಡ ಪಾಟೀಲ್ ಅವರು ತಾಲೂಕಿನ ಕೊರಡಕೇರಾ ಗ್ರಾಮದಲ್ಲಿಯ ತಮ್ಮ ಮನೆಯ ಮೇಲೆ ಪಕ್ಷದ ಧ್ವಜ ಹಾರಿಸಿದರು.
ನಂತರ ಮಾತನಾಡಿದ ಅವರು ಪ್ರತಿ ವರ್ಷ ಸಂಸ್ಥಾಪನಾ ದಿನದಂದು ಬೂತ್ ಮಟ್ಟದ ಅಧ್ಯಕ್ಷರು, ಕಾರ್ಯಕರ್ತರು ಅವರವರ ಮನೆಗಳ ಮುಂದೆ ಬಿಜೆಪಿ ಧ್ವಜವನ್ನು ಹಾರಿಸುವುದು ನಿರಂತರವಾಗಿ ನಡೆದುಕೊಂಡು ಬಂದಿರುವ ಪದ್ಧತಿಯಾಗಿದೆ. ಅದರಂತೆ ಇಂದು ನಮ್ಮ ಮನೆಯಲ್ಲಿ ಬಿಜೆಪಿ ಧ್ವಜವನ್ನು ಸಂತಸದಿಂದ ಹಾರಿಸಿ ಗೌರವ ವಂದನೆ ಸಲ್ಲಿಸಿದ್ದೇನೆ. ಇಂದು ಇಡೀ ತಾಲ್ಲೂಕಿನದ್ಯಂತ ನಮ್ಮ ಬಿಜೆಪಿ ಪಕ್ಷದ ಬೂತ್ ಮಟ್ಟದ ಅಧ್ಯಕ್ಷರು ಹಾಗೂ ಕಾರ್ಯಕರ್ತರು ತಮ್ಮ ತಮ್ಮ ಮನೆಗಳ ಮೇಲೆ ಪಕ್ಷದ ಧ್ವಜವನ್ನು ಹಾರಿಸುತ್ತಾರೆ ಎಂದರು.
ದೇಶ ಮೊದಲು, ಪಕ್ಷ ನಂತರ, ವ್ಯಕ್ತಿ ಕೊನೆಗೆ ಎಂಬ ಸಿದ್ಧಾಂತದಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಭಾರತೀಯ ಜನತಾ ಪಾರ್ಟಿಯ ಕುಟುಂಬದ ಸಮಸ್ತ ಸದಸ್ಯರಿಗೆ ಪಕ್ಷದ ಸ್ಥಾಪನಾ ದಿನಾಚರಣೆಯ ಹಾರ್ದಿಕ ಶುಭಾಶಯಗಳನ್ನು ಶಾಸಕರು ತಿಳಿಸಿದರು.
ಇದೇ ವೇಳೆ ವಿಜಯ್ ದೇಸಾಯಿ, ರಮೇಶ್ ಕೊಳ್ಳಿ , ಸುಕಮುನಿ ಗುರುವಿನ್ ಸೇರಿದಂತೆ ಇತರರಿದ್ದರು.
4th January 2025
ಜಿಎಂ ನ್ಯೂಜ್ ಕುಷ್ಟಗಿ.
ಕುಷ್ಟಗಿ ತಾಲೂಕ ಪ್ರಾಥಮಿಕ ಸಹಕಾರಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತ ಇದರ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯು ನಾಳೆ ದಿನಾಂಕ 05-01-2025 ಭಾನುವಾರದಂದು ಕುಷ್ಟಗಿ ನಗರದ ವಿದ್ಯಾನಗರದಲ್ಲಿರುವ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದ್ದು ಗೋಪಾಲರಾವ್ ರಾಮರಾವ್ ಕುಲಕರ್ಣಿ ಸಾ:- ಬಿಜಕಲ್ ಇವರು 08 ಬಿಜಕಲ್ ಮತಕ್ಷೇತ್ರ ಸಾಲಗಾರರ ಸದಸ್ಯರ ಸಾಮಾನ್ಯ ಮತಕ್ಷೇತ್ರದಿಂದ ಸ್ಪರ್ಧಿಸಿರುತ್ತಾರೆ. ಇವರ ಅನುಕ್ರಮ ನಂಬರ್ 2 ಟೆಲಿಫೋನ್ ಗುರುತಿಗೆ ತಮ್ಮ ಅತ್ಯಮೂಲ್ಯವಾದ ಮತವನ್ನು ನೀಡಿ ರೈತರ ಶ್ರೇಯೋಭಿವೃದ್ಧಿಗಾಗಿ ಹಾಗೂ ರೈತರ ಆರ್ಥಿಕ ಅಭಿವೃದ್ಧಿ ದೃಷ್ಟಿಯಿಂದ ಅನುಕ್ರಮ ಸಂಖ್ಯೆ 2 ಟೆಲಿಫೋನ್ ಗುರುತಿಗೆ ತಮ್ಮ ಮತವನ್ನು ನೀಡಿ ಪ್ರಚಂಡ ಬಹುಮತದಿಂದ ಆರಿಸಿ ತರಬೇಕೆಂದು ವಿನಂತಿಸಿದ್ದಾರೆ.
ನಾಳೆ ದಿನಾಂಕ 05-01-2025 ಭಾನುವಾರದಂದು ಕುಷ್ಟಗಿ ನಗರದ ವಿದ್ಯಾನಗರದಲ್ಲಿರುವ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಂಜಾನೆ 9 ರಿಂದ ಸಂಜೆ 4 ರವರೆಗೆ ಮತದಾನ ನಡೆಯಲಿದ್ದು ತಾವುಗಳು ತಮ್ಮ ಅತ್ಯಮೂಲ್ಯವಾದ ಮತವನ್ನು ಕ್ರಮ ಸಂಖ್ಯೆ 2 ಟೆಲಿಫೋನ್ ಗುರ್ತಿಗೆ ನೀಡಿ ಮುಂದಿನ ಐದು ವರ್ಷಗಳ ಕಾಲ ತಮ್ಮ ಸೇವೆ ಮಾಡುವ ಅವಕಾಶ ಕಲ್ಪಿಸಿ ಕೊಡಬೇಕೆಂದು ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯ ಅಭ್ಯರ್ಥಿ ಗೋಪಾಲರಾವ್ ರಾಮರಾವ್ ಕುಲಕರ್ಣಿ ಸಾಕಿನ್ ಬಿಜಿಕಲ್ ಇವರು ವಿನಂತಿಸಿಕೊಂಡಿದ್ದಾರೆ.
ವರದಿ : ಭೀಮಸೇನರಾವ್ ಕುಲಕರ್ಣಿ ಕುಷ್ಟಗಿ.