
20th May 2025
ಬಿಜೆಪಿ ರಾಜ್ಯಾಧ್ಯಕ್ಷರಾದ ಹಾಗೂ ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ವಿಜಯೇಂದ್ರ ಅವರಿಗೆ ಹಾಗೂ ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಲೋಕಸಭಾ ಸದಸ್ಯರಾದ ಬಸವರಾಜ ಬೊಮ್ಮಯಿ ಅವರಿಗೆ, ಸಣ್ಣ ನೀರಾವರಿ ಇಲಾಖೆ ನಿವೃತ್ತ ಕಾರ್ಯದರ್ಶಿ ಕರ್ನಾಟಕ ಸರ್ಕಾರ ಹಾಗೂ ಬಿಜೆಪಿ ಮುಖಂಡರಾದ ಪ್ರಭಾಕರ ಚಿಣಿ ಅವರು ಇಂದು ಮಂಗಳವಾರ ಬೆಂಗಳೂರಿನಲ್ಲಿ ತಮ್ಮ ಪುತ್ರನ ಮದುವೆಯ ಆಮಂತ್ರಣ ಪತ್ರಿಕೆಯನ್ನು ಕೊಟ್ಟು ಮದುವೆಗೆ ಬಂದು ಮದುಮಕ್ಕಳನ್ನು ಆಶೀರ್ವದಿಸಬೇಕೆಂದು ಅಹ್ವಾನಿಸಿದರು.
ಇದೇ ವೇಳೆ ಕರ್ನಾಟಕ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕರು ಹಾಗೂ ಕುಷ್ಟಗಿ ಮತಕ್ಷೇತ್ರದ ಶಾಸಕರಾದ ದೊಡ್ಡನಗೌಡ ಹೆಚ್ ಪಾಟೀಲ್, ಬಿಜೆಪಿ ಮುಖಂಡರಾದ ಬಸವರಾಜ ಹಳ್ಳೂರು, ಶರಣು ತಳ್ಳಿಕೇರಿ, ಬಿಜೆಪಿ ಮಂಡಲ ಅಧ್ಯಕ್ಷರಾದ ಮಹಾಂತೇಶ್ ಬಾದಾಮಿ, ವಿಜಯಕುಮಾರ್ ಹಿರೇಮಠ, ಅಶೋಕ ಬಳ್ಳೂಟಗಿ, ಕೆ. ಮಹೇಶ್, ವೀರಭದ್ರಪ್ಪ, ಮಲ್ಲಣ್ಣ ಪಲ್ಲೆದ್, ಪರಶುರಾಮ ನಾಗರಾಳ, ಲಾಡಸಾಬ್ ಕೊಳ್ಳಿ ಸೇರಿದಂತೆ ಕುಷ್ಟಗಿ ನಗರದ ಬಿಜೆಪಿ ಮುಖಂಡರು ಉಪಸ್ಥಿತದ್ದರು.
GM News Kushtagi.
20th May 2025
ಕುಷ್ಟಗಿ: ಪಟ್ಟಣದ ಎನ್ ಸಿ ಹೆಚ್ ಪ್ಯಾಲೇಸ್ ನಲ್ಲಿ ಇದೇ ಮೇ 22 ರಂದು ಗುರುವಾರ ಬೆಳಿಗ್ಗೆ 08:30 ಗಂಟೆಗೆ ರಾಜ ಋಷಿ ಶ್ರೀ ಭಗೀರಥ ಮಹರ್ಷಿ ಜಯಂತಿ ಕಾರ್ಯಕ್ರಮ ಅದ್ದೂರಿಯಾಗಿ ಜರುಗಲಿದೆ.
ತಾಲೂಕಾಡಳಿತ ಹಾಗೂ ಉಪ್ಪಾರ ಸಮಾಜದ ಸಹಭಾಗಿತ್ವದಲ್ಲಿ ನಡೆಯುವ ರಾಜ ಋಷಿ ಶ್ರೀ ಭಗೀರಥ ಮಹರ್ಷಿ ಜಯಂತಿಯ ಅಂಗವಾಗಿ 2024 - 25 ನೇ ಸಾಲಿನ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ 85% ಕ್ಕಿಂತ ಹೆಚ್ಚು ಅಂಕ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ 2023-2025 ಅವಧಿಯಲ್ಲಿ ನೂತನವಾಗಿ ಸರಕಾರಿ ನೌಕರಿಗೆ ಆಯ್ಕೆಯಾದ ನೌಕರರಿಗೆ ಹಾಗೂ ನಿವೃತ್ತ ನೌಕರರಿಗೆ ಗೌರವ ಪೂರ್ವಕ ಸನ್ಮಾನ ಸಮಾರಂಭ ನಡೆಯಲಿದೆ.
ಹೊಸದುರ್ಗದ ಭಗೀರಥ ಪೀಠದಾಪತಿ ಶ್ರೀ ಪುರುಷೋತ್ತಮಾನಂದಪುರಿ ಮಹಾಸ್ವಾಮಿಗಳು , ಕಲಬುರ್ಗಿಯ ರಾಂಪೂರಹಳ್ಳಿಯ ಶ್ರೀ ಭಗೀರಥ ಆನಂದಪುರಿ ಮಹಾಸ್ವಾಮಿಗಳು, ಸವದತ್ತಿಯ ವಶಿಷ್ಠಾಶ್ರಮದ ಶ್ರೀ ಭಾರ್ಗವನಂದ ಗಿರಿ ಮಹಾಸ್ವಾಮಿಗಳು ಸಾನಿಧ್ಯ ವಹಿಸಲಿದ್ದಾರೆ.
ಸಂಸದ ಕೆ ರಾಜಶೇಖರ ಹಿಟ್ನಾಳ ಶ್ರೀ ಭಗೀರಥ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಿದ್ದಾರೆ. ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಹಾಗೂ ಶಾಸಕ ದೊಡ್ಡನಗೌಡ ಪಾಟೀಲ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಚುನಾಯಿತ ಪ್ರತಿನಿಧಿಗಳು ಹಾಗೂ ಮುಖಂಡರು, ಗಣ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಭಗೀರಥ ಕ್ಷೇಮಾಭಿವೃದ್ಧಿ ಸೇವಾ ಸಂಘದ ಅಧ್ಯಕ್ಷ ಸಂಗಪ್ಪ ಶೇಷಪ್ಪ ಭಾವಿಕಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ.
ಬಿಳಗಿ ಶಿಕ್ಷಕ ರವಿ ನಾರಾಯಣ ಉಪ್ಪಾರ ರವರಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ ಎಂದು ಭಗೀರಥ ಕ್ಷೇಮಾಭಿವೃದ್ಧಿ ಸೇವಾ ಸಂಘದ ತಾಲೂಕಾ ಅಧ್ಯಕ್ಷ ಸಂಗಪ್ಪ ಶೇಷಪ್ಪ ಭಾವಿಕಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
GM News Kushtagi.
5th May 2025
ಕುಷ್ಟಗಿ ಪಟ್ಟಣದ ಮಾತೋಶ್ರೀ ಹೊಳಿಯಮ್ಮ ಪದವಿ ಕಲಾ ಮಹಾವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದ ವತಿಯಿಂದ ಮೇ5 ರಂದು ಬೆಳಿಗ್ಗೆ 10ಗಂಟೆಗೆ ಕನ್ನಡ ಸಾಹಿತ್ಯ ಪರಿಷತ್ತಿನ 111ನೇಯ ವರ್ಷದ ಸಂಸ್ಥಾಪನೇಯ ದಿನಾಚರಣೆಯ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ ಎಂದು ಕಸಾಪ ತಾಲೂಕಾಧ್ಯಕ್ಷ ಲೆಂಕಪ್ಪ ವಾಲಿಕಾರ ಹೇಳಿದರು
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು ಕನ್ನಡ ಸಾಹಿತ್ಯ ಪರಿಷತ್ತು ಸಂಸ್ಥಾಪನಾ ದಿನಾಚರಣೆಯ ಜೊತೆಗೆ ಕಾಲೇಜಿಗೊಂದು ಕವಿನುಡಿ ಕಾರ್ಯಕ್ರಮವನ್ನು ನಡೆಸಲಾಗುತ್ತಿದ್ದು ಸಾಹಿತ್ಯಾಸಕ್ತರು ಹಾಗೂ ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ವಿನಂತಿಸಿಕೊಂಡರು
ಕಾರ್ಯಕ್ರದ ಉದ್ಘಾಟನೆಯನ್ನು ಹಕ್ಕಬುಕ್ಕ ವಿದ್ಯಾವರ್ಧಕ ಸಂಸ್ಥೆಯ ಅಧ್ಯಕ್ಷ ಹನುಮಂತಪ್ಪ ಚೌಡ್ಕಿ, ಅಧ್ಯಕ್ಷತೆಯನ್ನು ಕಸಾಪ ಅಧ್ಯಕ್ಷ ಲೆಂಕಪ್ಪ ವಾಲಿಕಾರ, ಉಪನ್ಯಾಸವನ್ನು ಸಾಹಿತಿ ನಿಂಗಪ್ಪ ಸಜ್ಜನ, ಮುಖ್ಯ ಅತಿಥಿಗಳಾಗಿ ಕೇಂದ್ರ ಕಸಾಪ ಪ್ರತಿನಿಧಿ ನಬಿಸಾಬ ಕುಷ್ಟಗಿ, ದತ್ತಿ ದಾನಿಗಳಾದ ಫಕೀರಪ್ಪ ಚಳಗೇರಿ, ಕೃಷ್ಣ ಆಶ್ರೀತ್, ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ ಕಾಲೇಜು ವಿದ್ಯಾರ್ಥಿಗಳಿಂದ ಕವಿನುಡಿ ಕಾರ್ಯಕ್ರಮ ನಡೆಯಲಿದೆ ಎಂದರು.
ರವೀಂದ್ರ ಬಾಕಳೆ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಇದು ಕನ್ನಡ ಕಟ್ಟುವ ಕೆಲಸ ಇದ್ದು ಎಲ್ಲರೂ ಸಹಕಾರ ನೀಡಬೇಕು ಎಂದರು.
ಬಸವರಾಜ ಗಾಣಿಗೇರ, ಭರತೇಶ ಜೋಶಿ ಮಾತನಾಡಿದರು, ಈ ಸಂದರ್ಭದಲ್ಲಿ ನಿಂಗಪ್ಪ ಸಜ್ಜನ, ಮಂಜುನಾಥ ಗುಳೇದಗುಡ್ಡ, ಶ್ರೀನಿವಾಸ ಕಂಟ್ಲಿ, ಶರಣಪ್ಪ ಲೈನದ, ದೇವರಾಜ ವಿಶ್ವಕರ್ಮ,ಲಲಿತಮ್ಮ ಹಿರೇಮಠ, ಪರಶಿವಮೂರ್ತಿ ದೋಟಿಹಾಳ, ಅನಿಲಕುಮಾರ ಕಮ್ಮಾರ, ಸಂಗಮೇಶ ಲೂತಿಮಠ ಸೇರಿದಂತೆ ಇತರರು ಇದ್ದರು.
ವರದಿ: ಭೀಮಸೇನರಾವ್ ಕುಲಕರ್ಣಿ ಕುಷ್ಟಗಿ.
18th April 2025
ಕೊಪ್ಪಳ : ರಾಜ್ಯದಲ್ಲಿ ದಿನಾಂಕ 17/04/2025 ರಂದು ಸಿಇಟಿ ಪರೀಕ್ಷೆ ನಡೆಸಲಾಗಿದೆ ಪರೀಕ್ಷಾ ಕೊಠಡಿಗೆ
ಕೆಲವೊಂದು ವಸ್ತುಗಳು ತರುವುದನ್ನು ನಿಷೇಧಿಸಲಾಗಿದೆ ಆದರೆ ಇದನ್ನೇ ನೆಪವಾಗಿಟ್ಟುಕೊಂಡು ಪರೀಕ್ಷಾ ಮೇಲ್ವಿಚಾರಕರು ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರವನ್ನು ತೆಗೆಸಿರುವ ಘಟನೆ ಹಲವಡೆ ನಡೆದಿರುತ್ತದೆ. ಇದು ಖಂಡನೀಯ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಕೊಪ್ಪಳ ಜಿಲ್ಲಾ ಪ್ರತಿನಿಧಿ ಗುರುರಾಜ್ ಎನ್ ಜೋಶಿ ತಿಳಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಆದಿಚುಂಚನಗಿರಿ ಪದವಿಪೂರ್ವ ಕಾಲೇಜು ಪರೀಕ್ಷಾ ಕೇಂದ್ರ ಹಾಗೂ ಬೀದರನ ಸಾಯಿ ಸ್ಫೂರ್ತಿ ಪರೀಕ್ಷಾ ಕೇಂದ್ರ ಅಲ್ಲದೇ ರಾಜ್ಯದ ಇತರೆಡೆ ನಡೆದ ಸಿಇಟಿ ಪರೀಕ್ಷೆಯಲ್ಲಿ, ಪರೀಕ್ಷೆ ಬರೆಯಲು ಆಗಮಿಸಿದ್ದ ವಿದ್ಯಾರ್ಥಿಗಳು ಧರಿಸಿದ್ದ ಜನಿವಾರವನ್ನು ಭದ್ರತಾ ಸಿಬ್ಬಂದಿಗಳು ಬಲವಂತವಾಗಿ ತೆಗೆಸಿರುತ್ತಾರೆ. ಜನಿವಾರ ತೆಗೆಯಲೊಪ್ಪದ ಬೀದರನ ವಿದ್ಯಾರ್ಥಿಗೆ ಪರೀಕ್ಷೆಗೆ ಅವಕಾಶ ಕೊಟ್ಟಿರುವುದಿಲ್ಲ.
ಸಿಇಟಿ ಪರೀಕ್ಷೆ ಬರೆಯಲು ಜನಿವಾರ ಹೇಗೆ
ಅಡ್ಡಿಯಾಗುತ್ತದೆ ಎಂದು ಪ್ರಶ್ನಿಸಿದ್ದಾರೆ. ಕೇವಲ ಬ್ರಾಹ್ಮಣರ ಮೇಲೆ ಮಾತ್ರ ಕಾನೂನುಗಳನ್ನು ಹೇರುವುದು ಏಕೆ?, ಅನ್ಯ ಕೋಮಿನವರ ವಿಚಾರದಲ್ಲಿ ಅಧಿಕಾರಿಗಳ ನಿಲುವು ಭಿನ್ನವಾಗಿರಲು ಕಾರಣ ಏನು ಎಂದು ಕೇಳಿದ್ದಾರೆ. ಜನಿವಾರ ಧರಿಸಿದವರು ಪರೀಕ್ಷೆ ಬರೆಯಲು ಅನರ್ಹರೇ, ಇದು ತಾರತಮ್ಯವಲ್ಲದೆ ಮತ್ತೇನು. ಇದರ ಬಗ್ಗೆ ಅಧಿಕಾರಿಗಳು ಸ್ಪಷ್ಟನೆ ನೀಡಬೇಕು, ಹಾಗೂ ಬೇಶರತ್ ಕ್ಷಮೆಯಾಚಿಸಬೇಕು ಮತ್ತು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಇಲ್ಲದಿದ್ದಲ್ಲಿ ಬರುವ ದಿನಗಳಲ್ಲಿ ವಿಪ್ರ ಸಮಾಜವು ಪ್ರತಿಭಟನೆ ನಡೆಸಲು ಸಿದ್ಧವಾಗಬೇಕಾಗುತ್ತದೆ. ಯಾರ ತಂಟೆಗೂ ಹೋಗದೇ ತಮ್ಮಷ್ಟಕ್ಕೆ ತಾವು ಇರುವ ಬ್ರಾಹ್ಮಣ ಸಮುದಾಯದ ಮೇಲೆ ಈ ರೀತಿ ಮೇಲಿಂದ ಮೇಲೆ ಅವಮಾನಾಸ್ಪದ ಘಟನೆಗಳು ಆಗುತ್ತಿರುವುದು ಖಂಡನಾರ್ಹ, ಜನಿವಾರ ಧರಿಸುವುದು ಬ್ರಾಹ್ಮಣರ ಧಾರ್ಮಿಕ ಹಕ್ಕು, ಅದನ್ನು ತೆಗೆಸಿದ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಎಚ್ಚರಿಸಿದ್ದಾರೆ.
ಈ ಘಟನೆಯನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಕೊಪ್ಪಳ ಜಿಲ್ಲಾ ಪ್ರತಿನಿಧಿ ಗುರುರಾಜ್ ಎನ್ ಜೋಶಿ ಮತ್ತು ವಿಪ್ರ ಮುಖಂಡರಾದ ಎಚ್ ಬಿ ದೇಶಪಾಂಡೆ, ವೇಣುಗೋಪಾಲಾಚಾರ ಜಹಗೀರದಾರ, ಜಗನಾಥ ಹುನಗುಂದ, ಪ್ರಾಣೇಶ್ ಮಾದಿನೂರ, ಡಾ. ಕೆ.ಜಿ.ಕುಲಕರ್ಣಿ, ಡಿ.ವಿ ಜೋಶಿ, ಸುರೇಶ್ ಗಾವರಾಳ, ಅಪ್ಪಣ ಪದಕಿ, ರಾಘವೆಂದ್ರ ಕುಲಕರ್ಣಿ, ರಾಮಮೂರ್ತಿ ಸಿದ್ಧಾಂತಿ, ಭೀಮಸೇನ ಜೋಷಿ, ಮಂಜುನಾಥ ಹಳ್ಳಿಕೇರಿ. ಅರವಿಂದ
ಕುಲಕರ್ಣಿ, ಪ್ರಕಾಶ್ ಜೋಶಿ, ಪ್ರಶಾಂತ ಕುಲಕರ್ಣಿ, ಶ್ರೀಮತಿ ವೈಷ್ಣವಿ ಹುಲಗಿ, ಶ್ರೀಮತಿ ಲತಾ
ಮುದೊಳ, ರಾಘವೇಂದ್ರ ನರಗುಂದ, ರಮೇಶ್ ಜಹಗೀರದಾರ, ನಾಗರಾಜ್ ಸಿದ್ಧಾಂತಿ,
ಅನಿಲ್ ಕುಲಕರ್ಣಿ, ನಾಗೆಶ್ವರಾವ್ ದೇಶಪಾಂಡೆ ಹಾಗೂ ಇನ್ನೂ ಪ್ರಮುಖ ಮುಖಂಡರು ಘಟನೆಯನ್ನು
ತೀವ್ರವಾಗಿ ಖಂಡಿಸಿರುತ್ತಾರೆ.
ವರದಿ: ಭೀಮಸೇನರಾವ್ ಕುಲಕರ್ಣಿ ಕುಷ್ಟಗಿ.
11th April 2025
ಜಿಎಂ ನ್ಯೂಜ್ ಕುಷ್ಟಗಿ : ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಮತ್ತು ಜಿಲ್ಲಾ ಪ್ರತಿನಿಧಿ ಅಭ್ಯರ್ಥಿಯ ಚುನಾವಣೆ ನಿಮಿತ್ಯ ಅಶೋಕ್ ಹಾರನಹಳ್ಳಿ ರವರ ಬೆಂಬಲಿತ ಅಧ್ಯಕ್ಷೀಯ ಅಭ್ಯರ್ಥಿಯಾದ ವೇದಬ್ರಹ್ಮ ಬಾನುಪ್ರಕಾಶ್ ಶರ್ಮ ರವರ ಹಾಗೂ ಕೊಪ್ಪಳ ಜಿಲ್ಲಾ ಪ್ರತಿನಿಧಿ ಅಭ್ಯರ್ಥಿಯಾದ ಗುರುರಾಜ್ ಜೋಶಿ ರವರ ಪರವಾಗಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಚುನಾವಣೆಯ ಪ್ರಚಾರವನ್ನು ಕೊಪ್ಪಳ ಜಿಲ್ಲೆಯ ಕುಷ್ಟಗಿ ನಗರದಲ್ಲಿ ದಿನಾಂಕ : 10-04-2025 ಗುರುವಾರದಂದು ವಿಪ್ರ ಮಹನೀಯರ ಮನೆ ಮನೆಗೆ ತೆರಳಿ ಪ್ರಚಾರ ಕೈಗೊಳ್ಳಲಾಯಿತು.
ಕುಷ್ಟಗಿ ತಾಲೂಕಾ ಬ್ರಾಹ್ಮಣ ಸಮಾಜದ ಅಧ್ಯಕ್ಷರಾದ ತಿಮ್ಮಪ್ಪಯ್ಯ ದೇಸಾಯಿ ಕಾಟಾಪುರ ಇವರ ಮನೆಗೆ ಕೊಪ್ಪಳ ಜಿಲ್ಲಾ ಪ್ರತಿನಿಧಿ ಅಭ್ಯರ್ಥಿಯಾದ ಗುರುರಾಜ್ ಜೋಶಿ ಅವರು ತಮ್ಮ ತಂಡದವರೊಂದಿಗೆ ಚುನಾವಣೆಯ ಪ್ರಚಾರದ ನಿಮಿತ್ಯ ಭೇಟಿ ನೀಡಿದರು. ಇದೇ ಏಪ್ರಿಲ್ ತಿಂಗಳು 13ನೇ ತಾರೀಕಿನಂದು ಕೊಪ್ಪಳದಲ್ಲಿ ನಡೆಯುವ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಮತ್ತು ಕೊಪ್ಪಳ ಜಿಲ್ಲಾ ಪ್ರತಿನಿಧಿ ಅಭ್ಯರ್ಥಿಯ ಚುನಾವಣೆ ನಿಮಿತ್ಯ ಅಶೋಕ್ ಹಾರನಹಳ್ಳಿ ರವರ ಬೆಂಬಲಿತ ಅಧ್ಯಕ್ಷೀಯ ಅಭ್ಯರ್ಥಿಯಾದ ವೇದಬ್ರಹ್ಮ ಬಾನುಪ್ರಕಾಶ್ ಶರ್ಮ ರವರ ಕ್ರಮ ಸಂಖ್ಯೆ 1 ಹಾಗೂ ಕೊಪ್ಪಳ ಜಿಲ್ಲಾ ಪ್ರತಿನಿಧಿ ಅಭ್ಯರ್ಥಿ ಗುರುರಾಜ್ ಜೋಶಿ ಕ್ರಮ ಸಂಖ್ಯೆ 1 ಇವರಿಗೆ ಮತವನ್ನು ನೀಡಬೇಕೆಂದು ಮನವಿ ಮಾಡಿದರು ಹಾಗೂ ಕೃಷ್ಣ ಆಶ್ರಿತ್ ವಕೀಲರ ಮನೆಗೆ ಕೊಪ್ಪಳ ಜಿಲ್ಲಾ ಪ್ರತಿನಿಧಿ ಅಭ್ಯರ್ಥಿ ಗುರುರಾಜ್ ಜೋಶಿ ತಮ್ಮ ತಂಡದವರೊಂದಿಗೆ ಭೇಟಿ ನೀಡಿ ಮತಯಾಚನೆ ಮಾಡಿದರು. ನಂತರ ಕುಷ್ಟಗಿ ನಗರದ ಆರಾಧ್ಯ ದೇವರಾದ ಶ್ರೀ ಅಡವಿ ಮುಖ್ಯಪ್ರಾಣ ದೇವರ ದೇವಸ್ಥಾನಕ್ಕೆ ಭೇಟಿ ನೀಡಿದ ತಂಡವು ಶ್ರೀ ಅಡವಿರಾಯನ ದರ್ಶನ ಪಡೆದರು.
ಇದೇ ವೇಳೆ ಮುಖಂಡರಾದ ವೇಣುಗೋಪಾಲ್ ಆಚಾರ್ ಜಾಗೀರದಾರ್, ಕೊಪ್ಪಳ ಜಿಲ್ಲಾ ಪ್ರತಿನಿಧಿ ಅಭ್ಯರ್ಥಿ ಗುರುರಾಜ್ ಜೋಶಿ, ಮತ್ತು ಸುರೇಶ್ ದೇಸಾಯಿ ಮಾಜಿ ಅಧ್ಯಕ್ಷರು ನಗರಸಭೆ ಕೊಪ್ಪಳ, ಮಂಜುನಾಥ ಹಳ್ಳಿಕೇರಿ ಚುನಾವಣೆ ಪ್ರಚಾರದ ನಿಮಿತ್ಯ ಮಾತನಾಡಿದರು.
ಈ ಸಂಧರ್ಭದಲ್ಲಿ ಕುಷ್ಟಗಿ ಬ್ರಾಹ್ಮಣ ಸಮಾಜದ ಅಧ್ಯಕ್ಷರಾದ ತಿಮ್ಮಪ್ಪಯ್ಯ ದೇಸಾಯಿ ಕಾಟಾಪುರ, ಕೃಷ್ಣ ಆಶ್ರಿತ್ ವಕೀಲರು, ವೆಂಕಟೇಶ ಮಠದ್, ಭೀಮಸೇನರಾವ್ ಕುಲಕರ್ಣಿ ಬನ್ನೆಟ್ಟಿ, ಹಾಗೂ
ಸುರೇಶ್ ಗಾವರಾಳ, ರಾಜೇಂದ್ರ ಬಿಸರಳ್ಳಿ, ಹೆಚ್ ಬಿ ದೇಶಪಾಂಡೆ, ವೇಣುಗೋಪಾಲ್ ಆಚಾರ್ ಜಾಗೀರದಾರ್. ರಾಮಮೂರ್ತಿ ಸಿದ್ಧಾಂತಿ, ನಾಗೇಶರಾವ್ ದೇಶಪಾಂಡೆ, ಮಂಜುನಾಥ ಹಳ್ಳಿಕೇರಿ. ಪ್ರಹ್ಲಾದ ಬನ್ನೇಗೋಳ, ಅನಿಲ್ ಜೋಶಿ, ಅರವಿಂದ ಕುಲಕರ್ಣಿ, ಚಿದಂಬರ ದೇಶಪಾಂಡೆ, ರವಿ ಕುಲಕರ್ಣಿ, ಪ್ರಕಾಶ್ ಜೋಶಿ, ಗೋಪಾಲಕೃಷ್ಣ ಜೋಶಿ, ರಾಮಕೃಷ್ಣ ಕುಲಕರ್ಣಿ, ಸಂಜಯ ವೈದ್ಯ, ಹಾಗೂ ಕುಷ್ಟಗಿ ನಗರದ ವಿಪ್ರ ಬಾಂಧವರು ಭಾಗವಹಿಸಿ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ : ಭೀಮಸೇನರಾವ್ ಕುಲಕರ್ಣಿ ಕುಷ್ಟಗಿ.
9th April 2025
ಜಿ ಎಂ ನ್ಯೂಜ್ ಕುಷ್ಟಗಿ. : ಭಾರತೀಯ ಜನತಾ ಪಕ್ಷದ ಸಂಸ್ಥಾಪನಾ ದಿನವಾದ ಇಂದು ಶಾಸಕ ಹಾಗೂ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕರಾದ ದೊಡ್ಡನಗೌಡ ಪಾಟೀಲ್ ಅವರು ತಾಲೂಕಿನ ಕೊರಡಕೇರಾ ಗ್ರಾಮದಲ್ಲಿಯ ತಮ್ಮ ಮನೆಯ ಮೇಲೆ ಪಕ್ಷದ ಧ್ವಜ ಹಾರಿಸಿದರು.
ನಂತರ ಮಾತನಾಡಿದ ಅವರು ಪ್ರತಿ ವರ್ಷ ಸಂಸ್ಥಾಪನಾ ದಿನದಂದು ಬೂತ್ ಮಟ್ಟದ ಅಧ್ಯಕ್ಷರು, ಕಾರ್ಯಕರ್ತರು ಅವರವರ ಮನೆಗಳ ಮುಂದೆ ಬಿಜೆಪಿ ಧ್ವಜವನ್ನು ಹಾರಿಸುವುದು ನಿರಂತರವಾಗಿ ನಡೆದುಕೊಂಡು ಬಂದಿರುವ ಪದ್ಧತಿಯಾಗಿದೆ. ಅದರಂತೆ ಇಂದು ನಮ್ಮ ಮನೆಯಲ್ಲಿ ಬಿಜೆಪಿ ಧ್ವಜವನ್ನು ಸಂತಸದಿಂದ ಹಾರಿಸಿ ಗೌರವ ವಂದನೆ ಸಲ್ಲಿಸಿದ್ದೇನೆ. ಇಂದು ಇಡೀ ತಾಲ್ಲೂಕಿನದ್ಯಂತ ನಮ್ಮ ಬಿಜೆಪಿ ಪಕ್ಷದ ಬೂತ್ ಮಟ್ಟದ ಅಧ್ಯಕ್ಷರು ಹಾಗೂ ಕಾರ್ಯಕರ್ತರು ತಮ್ಮ ತಮ್ಮ ಮನೆಗಳ ಮೇಲೆ ಪಕ್ಷದ ಧ್ವಜವನ್ನು ಹಾರಿಸುತ್ತಾರೆ ಎಂದರು.
ದೇಶ ಮೊದಲು, ಪಕ್ಷ ನಂತರ, ವ್ಯಕ್ತಿ ಕೊನೆಗೆ ಎಂಬ ಸಿದ್ಧಾಂತದಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಭಾರತೀಯ ಜನತಾ ಪಾರ್ಟಿಯ ಕುಟುಂಬದ ಸಮಸ್ತ ಸದಸ್ಯರಿಗೆ ಪಕ್ಷದ ಸ್ಥಾಪನಾ ದಿನಾಚರಣೆಯ ಹಾರ್ದಿಕ ಶುಭಾಶಯಗಳನ್ನು ಶಾಸಕರು ತಿಳಿಸಿದರು.
ಇದೇ ವೇಳೆ ವಿಜಯ್ ದೇಸಾಯಿ, ರಮೇಶ್ ಕೊಳ್ಳಿ , ಸುಕಮುನಿ ಗುರುವಿನ್ ಸೇರಿದಂತೆ ಇತರರಿದ್ದರು.
4th January 2025
ಜಿಎಂ ನ್ಯೂಜ್ ಕುಷ್ಟಗಿ.
ಕುಷ್ಟಗಿ ತಾಲೂಕ ಪ್ರಾಥಮಿಕ ಸಹಕಾರಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತ ಇದರ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯು ನಾಳೆ ದಿನಾಂಕ 05-01-2025 ಭಾನುವಾರದಂದು ಕುಷ್ಟಗಿ ನಗರದ ವಿದ್ಯಾನಗರದಲ್ಲಿರುವ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದ್ದು ಗೋಪಾಲರಾವ್ ರಾಮರಾವ್ ಕುಲಕರ್ಣಿ ಸಾ:- ಬಿಜಕಲ್ ಇವರು 08 ಬಿಜಕಲ್ ಮತಕ್ಷೇತ್ರ ಸಾಲಗಾರರ ಸದಸ್ಯರ ಸಾಮಾನ್ಯ ಮತಕ್ಷೇತ್ರದಿಂದ ಸ್ಪರ್ಧಿಸಿರುತ್ತಾರೆ. ಇವರ ಅನುಕ್ರಮ ನಂಬರ್ 2 ಟೆಲಿಫೋನ್ ಗುರುತಿಗೆ ತಮ್ಮ ಅತ್ಯಮೂಲ್ಯವಾದ ಮತವನ್ನು ನೀಡಿ ರೈತರ ಶ್ರೇಯೋಭಿವೃದ್ಧಿಗಾಗಿ ಹಾಗೂ ರೈತರ ಆರ್ಥಿಕ ಅಭಿವೃದ್ಧಿ ದೃಷ್ಟಿಯಿಂದ ಅನುಕ್ರಮ ಸಂಖ್ಯೆ 2 ಟೆಲಿಫೋನ್ ಗುರುತಿಗೆ ತಮ್ಮ ಮತವನ್ನು ನೀಡಿ ಪ್ರಚಂಡ ಬಹುಮತದಿಂದ ಆರಿಸಿ ತರಬೇಕೆಂದು ವಿನಂತಿಸಿದ್ದಾರೆ.
ನಾಳೆ ದಿನಾಂಕ 05-01-2025 ಭಾನುವಾರದಂದು ಕುಷ್ಟಗಿ ನಗರದ ವಿದ್ಯಾನಗರದಲ್ಲಿರುವ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಂಜಾನೆ 9 ರಿಂದ ಸಂಜೆ 4 ರವರೆಗೆ ಮತದಾನ ನಡೆಯಲಿದ್ದು ತಾವುಗಳು ತಮ್ಮ ಅತ್ಯಮೂಲ್ಯವಾದ ಮತವನ್ನು ಕ್ರಮ ಸಂಖ್ಯೆ 2 ಟೆಲಿಫೋನ್ ಗುರ್ತಿಗೆ ನೀಡಿ ಮುಂದಿನ ಐದು ವರ್ಷಗಳ ಕಾಲ ತಮ್ಮ ಸೇವೆ ಮಾಡುವ ಅವಕಾಶ ಕಲ್ಪಿಸಿ ಕೊಡಬೇಕೆಂದು ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯ ಅಭ್ಯರ್ಥಿ ಗೋಪಾಲರಾವ್ ರಾಮರಾವ್ ಕುಲಕರ್ಣಿ ಸಾಕಿನ್ ಬಿಜಿಕಲ್ ಇವರು ವಿನಂತಿಸಿಕೊಂಡಿದ್ದಾರೆ.
ವರದಿ : ಭೀಮಸೇನರಾವ್ ಕುಲಕರ್ಣಿ ಕುಷ್ಟಗಿ.
25th December 2024
ಕುಷ್ಟಗಿ : ತಾಲೂಕಾ ಕೃಷಿಕ ಸಮಾಜದ ನೂತನ ಪದಾಧಿಕಾರಿಗಳಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಅಧ್ಯಕ್ಷರಾದ ಶ್ರೀ ಶ್ಯಾಮರಾವ್ ಕುಲಕರ್ಣಿ ಅವರಿಗೆ ಮತ್ತು ಜಿಲ್ಲಾ ಪ್ರತಿನಿಧಿಗಳಾದ ಶ್ರೀ ಶೇಖರಗೌಡ ಮಾಲಿಪಾಟೀಲ, ಪ್ರಧಾನ ಕಾರ್ಯದರ್ಶಿ ಶ್ರೀ ಸುರೇಶ್ ಪಾಟೀಲ್, ಹಾಗೂ ಆರ್.ಡಿ.ಸಿ.ಸಿ.ಬ್ಯಾಂಕ್ ಉಪಾಧ್ಯಕ್ಷರಾದ ಶ್ರೀ ಶಿವಶಂಕರಗೌಡ ಪಾಟೀಲ್ ಅವರನ್ನು
ಮಾಜಿ ಸಚಿವರಾದ ಹಾಗೂ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಶ್ರೀ ಅಮರೇಗೌಡ ಪಾಟೀಲ್ ಅವರ ಕಾರ್ಯಾಲಯದಲ್ಲಿ ಅಭಿಮಾನಿಗಳು ಗೌರವಿಸಿ ಸನ್ಮಾನಿಸಿದರು.
ಇದೇ ವೇಳೆ ಲಾಡ್ಲೇ ಮಷಾಕ್ ದೋಟಿಹಾಳ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
13th December 2024
ಜಿಎಂ ನ್ಯೂಜ್ ಕುಷ್ಟಗಿ
ಕುಷ್ಟಗಿ : ನಾಳೆ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಕೊಪ್ಪಳ, ಕನ್ನಡ ಸಾಹಿತ್ಯ ಪರಿಷತ್ತು ತಾಲೂಕ ಘಟಕದ ಕುಷ್ಟಗಿ ತಾಲೂಕ ಕ.ಸಾ.ಪ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭವು ನಾಳೆ ದಿನಾಂಕ ೧೩-೧೨-೨೦೨೪ ಶುಕ್ರವಾರ ಮಧ್ಯಾಹ್ನ : ೪-೩೦ ಕ್ಕೆ ಕುಷ್ಟಗಿ ನಗರದ ಬಸವ ಭವನದಲ್ಲಿ ನಡೆಯಲಿದೆ.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಷ.ಬ್ರ.108 ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳು ಮದ್ದಾನಿ ಹಿರೇಮಠ ಕುಷ್ಟಗಿ ವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಶರಣೇಗೌಡ ಪೋ.ಪಾಟೀಲ್ ಜಿಲ್ಲಾ ಅಧ್ಯಕ್ಷರು ಕ.ಸಾ.ಪ ಕೊಪ್ಪಳ ವಹಿಸಲಿದ್ದಾರೆ.
ದೊಡ್ಡನಗೌಡ ಹೆಚ್. ಪಾಟೀಲ್ ವಿರೋಧ ಪಕ್ಷದ ಮುಖ್ಯ ಸಚೇತಕರು ಹಾಗೂ ಶಾಸಕರು ಕುಷ್ಟಗಿ, ಅಮರೇಗೌಡ ಪಾಟೀಲ್ ಬಯ್ಯಾಪೂರ ಮಾಜಿ ಸಚಿವರು, ಹಸನಸಾಬ ದೋಟಿಹಾಳ ಅಧ್ಯಕ್ಷರು ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ, ತುಂಗಭದ್ರ ಯೋಜನೆ ಮುನಿರಾಬಾದ, ಕೆ.ಶರಣಪ್ಪ ವಕೀಲರು ಮಾಜಿ ಶಾಸಕರು ಇವರುಗಳು ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಕನ್ನಡಾಂಬೆ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು
ಶೇಖರಗೌಡ ಮಾಲಿ ಪಾಟೀಲ್, ಕೇಂದ್ರ ಕ.ಸಾ.ಪ.ಸಂ.ಸಂ. ಮಾಜಿ ಪ್ರತಿನಿಧಿ ಹಾಗೂ ಮಾಜಿ ಜಿಲ್ಲಾಧ್ಯಕ್ಷರು ಕ.ಸಾ.ಪ ಕೊಪ್ಪಳ ಮಾಡಲಿದ್ದಾರೆ.
ರವಿಂದ್ರ ಬಾಕಳೆ ನಿಕಟ ಪೂರ್ವ ಜಿಲ್ಲಾ ಗೌರವ ಕಾರ್ಯದರ್ಶಿ ಆಶಯ ನುಡಿಗಳನ್ನಾಡಲಿದ್ದಾರೆ.
ಕುಷ್ಟಗಿ ತಾಲೂಕಾ ಕಸಾಪ ಅಧ್ಯಕ್ಷರಾಗಿದ್ದ ವಿರೇಶ ಬಂಗಾರ ಶೆಟ್ಟರ ಅವರಿಂದ ನೂತನ ಅಧ್ಯಕ್ಷರಾಗಲಿರುವ ಲೆಂಕಪ್ಪ ವಾಲಿಕಾರ ರವರಿಗೆ ಅಧಿಕಾರ ಹಸ್ತಾಂತರಿಸಲಿದ್ದಾರೆ.
ವಿಶೇಷ ಆಹ್ವಾನಿತರಾಗಿ,
ನಬಿಸಾಬ ಕುಷ್ಟಗಿ ಕೇಂದ್ರ ಸಂಘ ಸಂಸ್ಥೆ ಪ್ರತಿನಿಧಿ ಕ.ಸಾ.ಪ. ಬೆಂಗಳೂರು, ಚನ್ನಬಸಪ್ಪ ಕಡ್ಡಿಪುಡಿ ಗೌರವ ಕಾರ್ಯದರ್ಶಿ ಕ.ಸಾ.ಪ. ಕೊಪ್ಪಳ, ಶೇಖರಗೌಡ ಪೋ.ಪಾಟೀಲ್ ಗೌರವ ಕಾರ್ಯದರ್ಶಿ ಕ.ಸಾ.ಪ. ಕೊಪ್ಪಳ, ರಮೇಶ ಕುಲಕರ್ಣಿ ಗೌರವ ಕೋಶಾಧ್ಯಕ್ಷರು ಕ.ಸಾ.ಪ. ಕೊಪ್ಪಳ, ಪ್ರಸನ್ನಕುಮಾರ ದೇಸಾಯಿ ಸಹಕಾರ್ಯದರ್ಶಿಗಳು ಕ.ಸಾ.ಪ ಕೊಪ್ಪಳ, ಮಹೇಶ ಸಿಂಗನಾಳ ಸಹ ಕಾರ್ಯದರ್ಶಿಗಳು ಕ.ಸಾ.ಪ ಕೊಪ್ಪಳ, ಎಸ್.ಜಿ. ಕಡೇಮನಿ ಪ.ಜಾ. ಪ್ರತಿನಿಧಿ ಕ.ಸಾ.ಪ. ಕೊಪ್ಪಳ, ಶ್ರೀಮತಿ ವಿದ್ಯಾ ಕಂಪಾಪೂರಮಠ ಮಹಿಳಾ ಪ್ರತಿನಿಧಿ ಕ.ಸಾ.ಪ. ಕೊಪ್ಪಳ ಭಾಗವಹಿಸಲಿದ್ದಾರೆ.
ಗೌರವ ಉಪಸ್ಥಿತರಾಗಿ ಅಶೋಕ ವಿ. ಶಿಗ್ಗಾಂವಿ ಕೆ.ಎ.ಎಸ್. ತಹಶೀಲ್ದಾರರು, ಕುಷ್ಟಗಿ,
ಪಂಪಾಪತಿ ಹಿರೇಮಠ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕ ಪಂಚಾಯತ್ ಕುಷ್ಟಗಿ,
ಯಶವಂತ ಎಚ್. ಬಿಸನಹಳ್ಳಿ ಆರಕ್ಷಕ ವೃತ್ತ ನಿರೀಕ್ಷಕರು ಕುಷ್ಟಗಿ, ಸುರೇಂದ್ರ ಕಾಂಬ್ಳೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕುಷ್ಟಗಿ, ಜಗದೀಶಪ್ಪ ಎಮ್. ಕ್ಷೇತ್ರ ಸಮನ್ವಯಾಧಿಕಾರಿಗಳು ಕುಷ್ಟಗಿ ಭಾಗವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ
ಶ್ರೀನಿವಾಸ ನಾಯಕ್ ತಾಲೂಕಾಧ್ಯಕ್ಷರು ಕ.ರಾ.ಸ.ನೌ.ಸಂ. ಕುಷ್ಟಗಿ, ಡಾ. ಜೀವನಸಾಬ ಬಿನ್ನಾಳ ರಾಜ್ಯ ಜಾನಪದ ಅಕಾಡೆಮಿ ಸದಸ್ಯರು ಬೆಂಗಳೂರ, ಕಿಶನರಾವ್ ಕುಲಕರ್ಣಿ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಪುಸ್ತಕ ಆಯ್ಕೆ ಸಮಿತಿ ಸದಸ್ಯರು ಬೆಂಗಳೂರ, ಜಿ.ಕೆ. ಹಿರೇಮಠ ಪುರಸಭೆ ಮಾಜಿ ಅಧ್ಯಕ್ಷರು ಕುಷ್ಟಗಿ, ಶರಣಪ್ಪ ವಡಿಗೇರ ಕ.ಸಾ.ಪ. ತಾಲೂಕ ಮಾಜಿ ಅಧ್ಯಕ್ಷರು, ಹನುಮೇಶ ಗುಮಗೇರಿ ಕ.ಸಾ.ಪ. ತಾಲೂಕ ಮಾಜಿ ಅಧ್ಯಕ್ಷರು, ಶ್ರೀನಿವಾಸ ಜಹಗೀರದಾರ ಕ.ಸಾ.ಪ. ತಾಲೂಕ ಮಾಜಿ ಅಧ್ಯಕ್ಷರು, ರವೀಂದ್ರ ಬಾಕಳೆ ಕ.ಸಾ.ಪ. ತಾಲೂಕ ಮಾಜಿ ಅಧ್ಯಕ್ಷರು, ಚಂದಪ್ಪ ಹಕ್ಕಿ ಕ.ಸಾ.ಪ. ತಾಲೂಕ ಮಾಜಿ ಅಧ್ಯಕ್ಷರು, ನಟರಾಜ ಸೋನಾರ ಕ.ಸಾ.ಪ. ತಾಲೂಕ ಮಾಜಿ ಅಧ್ಯಕ್ಷರು, ಉಮೇಶ ಹಿರೇಮಠ ಕ.ಸಾ.ಪ. ತಾಲೂಕ ಮಾಜಿ ಅಧ್ಯಕ್ಷರು, ಡಾ. ಎಸ್.ಬಿ. ಡಾಣಿ ಪ್ರಾಚಾರ್ಯರು ಪ್ರಥಮ ದರ್ಜೆ ಕಾಲೇಜ್ ಕುಷ್ಟಗಿ, ಫಕೀರಪ್ಪ ಚಳಗೇರ ಹಿರಿಯ ನ್ಯಾಯವಾದಿಗಳು ಕುಷ್ಟಗಿ, ಮಹ್ಮದ ಅಬ್ದುಲ್ ಕರೀಮ್ ವಂಟೆಳಿ,
ರಾಜ್ಯ ಉಪಾಧ್ಯಕ್ಷರು ಜಂಪ್ ರೋಪ್ ಸಂಸ್ಥೆ (ರಿ) ಹನಮಸಾಗರ, ಮಲ್ಲಯ್ಯ ಕೋಮಾರಿ ಅಧ್ಯಕ್ಷರು ನಿಸರ್ಗ ಸಂಗೀತ ಶಾಲೆ, ಹನಮಸಾಗರ,
ಮಲ್ಲಣ್ಣ ಪಲ್ಲೇದ ಮುಖಂಡರು ಕುಷ್ಟಗಿ, ಬಸವರಾಜ ಹಳ್ಳೂರ ಮುಖಂಡರು ಕುಷ್ಟಗಿ,
ಮಹಾಂತೇಶ ಅಗಸಿಮುಂದಿನ ಮುಖಂಡರು ಕುಷ್ಟಗಿ, ರಜಾಕ ಟೇಲರ್ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಜಂಪರೋಪ್ ಸಂಸ್ಥೆ, ಮಂಜುನಾಥ ಗುಳೇದಗುಡ್ಡ ಹೋಬಳಿ ಅಧ್ಯಕ್ಷರು ಹನಮಸಾಗರ, ರವೀಂದ್ರ ಕಾಟವಾ ಹೋಬಳಿ ಅಧ್ಯಕ್ಷರು ಹನಮನಾಳ, ವೀರಬಸಯ್ಯ ಕಾಡಗಿಮಠ ಹೋಬಳಿ ಅಧ್ಯಕ್ಷರು ಹಿರೇಮನ್ನಾಪೂರ, ರವೀಂದ್ರ ಬಳಗಾರ ಹೋಬಳಿ ಅಧ್ಯಕ್ಷರು ತಾವರಗೇರಾ,
ನಿಂಗಪ್ಪ ಸಜ್ಜನ ಹೋಬಳಿ ಅಧ್ಯಕ್ಷರು ದೋಟಿಹಾಳ,
ಎಂ.ಎಂ. ಗೊಣ್ಣಾಗರಅಧ್ಯಕ್ಷರು ತಾಲೂಕ ಶಿಕ್ಷಣಾಧಿಕಾರಿಗಳ ಸಂಘ ಕುಷ್ಟಗಿ, ಶಿವಯ್ಯ ಗುರುಸ್ಥಳಮಠ ಅಧ್ಯಕ್ಷರು ತಾ.ಪ.ಪೂ. ಉಪನ್ಯಾಸಕರ ಸಂಘ ಕುಷ್ಟಗಿ, ನೀಲನಗೌಡ ಹೊಸಗೌಡ್ರ ತಾಲೂಕಾಧ್ಯಕ್ಷರು ಪ್ರೌ.ಶಾ.ಶಿ.ಸಂಘ ಕುಷ್ಟಗಿ, ಮಲ್ಲಪ್ಪ ಕುದರಿ ತಾಲೂಕಾಧ್ಯಕ್ಷರು ಪ್ರಾ.ಶಾ.ಶಿ.ಸಂಘ ಕುಷ್ಟಗಿ, ಚಂದಪ್ಪ ಗುಡಿಮನಿ
ಅಧ್ಯಕ್ಷರು ಪಂಚಾಯತ ಅಭಿವೃದ್ಧಿ ಅಧಿಕಾರಗಳ ಕ್ಷೇಮಾಭಿವೃದ್ಧಿ ಸಂಘ ಕುಷ್ಟಗಿ, ಸೋಮಲಿಂಗಪ್ಪ ಗುರಿಕಾರ ಅಧ್ಯಕ್ಷರು ಬಿ.ಆರ್.ಪಿ, ಬಿ.ಐ.ಇ.ಆರ್.ಟಿ, ಸಿ.ಆರ್.ಪಿ ಸಂಘ ಕುಷ್ಟಗಿ, ಶಿವಸಂಗಪ್ಪ ಬೆಲ್ಲದ ಅಧ್ಯಕ್ಷರು ಬಸವ ಸಮಿತಿ ಕುಷ್ಟಗಿ, ಟಿ. ಬಸವರಾಜ ಅಧ್ಯಕ್ಷರು ಜಾಗತಿಕ ಲಿಂಗಾಯತ ಮಹಾಸಭಾ ಕುಷ್ಟಗಿ, ಬಸವರಾಜ ಉಪ್ಪಲದಿನ್ನಿ ರಾಜ್ಯ ಸಂಪನ್ಮೂಲ ವ್ಯಕ್ತಿಗಳು ಕುಷ್ಟಗಿ, ಶೇಖರಗೌಡರು ಸರನಾಡಗೌಡರ ಸಾಹಿತಿಗಳು ತಾವರಗೇರಾ,
ಕೆ.ವಾಯ್ ಕಂದಕೂರ ಸಾಹಿತಿಗಳು ದೋಟಿಹಾಳ,
ಹೆಚ್. ವಾಯ್, ಈಟಿಯವರು ಸಾಹಿತಿಗಳು ಕುಷ್ಟಗಿ,
ತಾಜುದ್ದೀನ್ ದಳಪತಿ ಸಾಹಿತಿಗಳು ಕುಷ್ಟಗಿ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ..
ನಿರೂಪಣೆಯನ್ನು ಶರಣಪ್ಪ ತೆಮ್ಮಿನಾಳ ಕ್ಷೇತ್ರ ಸಂಪನ್ಮೂಲ ವ್ಯಕ್ತಿ, ಶಿಕ್ಷಣ ಇಲಾಖೆ ಕುಷ್ಟಗಿ ಇವರು ಮಾಡಲಿದ್ದಾರೆ. ಮಹೇಶ ಹಡಪದ ಗೌರವ ಕಾರ್ಯದರ್ಶಿಗಳ ಕ.ಸಾ.ಪ ಕುಷ್ಟಗಿ ಇವರು ಸ್ವಾಗತ ಮಾಡಲಿದ್ದಾರೆ.ವಂದನಾರ್ಪಣೆಯನ್ನು ಶರಣಪ್ಪ ಲೈನದ ಪ.ಜಾ. ಪ್ರತಿನಿಧಿ ಕ.ಸಾ.ಪ ಕುಷ್ಟಗಿ ನೆರವೇರಿಸಲಿದ್ದಾರೆ.ನಾಡಗೀತೆ ಮತ್ತು ರೈತ ಗೀತೆಯನ್ನು ಜುಮ್ಮನಗೌಡ ಪಾಟೀಲ್ ಸಂಗೀತ ಶಿಕ್ಷಕರು ಮೊರಾರ್ಜಿ ವಸತಿ ಶಾಲೆ, ಕಾಟಾಪೂರ ಮಾಡಲಿದ್ದಾರೆ.ಹಾಗೂ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮತ್ತು ಸರ್ವ ಆಜೀವ ಸದಸ್ಯರು ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಪರ ಸಂಘಟನೆಗಳು ಸ್ಥಳೀಯ ಸಂಘ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ನೂತನ ಕಸಾಪ ಅಧ್ಯಕ್ಷ ಲೆಂಕಪ್ಪ ವಾಲೀಕರ ತಿಳಿಸಿದ್ದಾರೆ.
ವರದಿ : ಭೀಮಸೇನರಾವ್ ಕುಲಕರ್ಣಿ ಕುಷ್ಟಗಿ.
ಮೋ. 9482935606.
10th December 2024
ಜಿಎಂ ನ್ಯೂಜ್ ಕುಷ್ಟಗಿ.
ಕುಷ್ಟಗಿ: ತಾಲೂಕಿನ ದೋಟಿಹಾಳ ಗ್ರಾಮಕ್ಕೆ ಮಾಜಿ ಮುಖ್ಯಮಂತ್ರಿಗಳಾದ ಎಸ್ ಎಮ್ ಕೃಷ್ಣ ಅವರ ಕೊಡುಗೆಯು ಅಪಾರವಾಗಿದ್ದು ಅವರ ಹೆಸರಿನಲ್ಲಿ ಇಂದು ನೂರಾರು ಕುಟುಂಬಗಳು ಜೀವನವನ್ನು ಮಾಡುತ್ತಿದ್ದು ಅವರ ಸಾವು ನಮಗೆ ಅತೀವ ನೋವು ತಂದಿದೆ ಎಂದು ಗ್ರಾಪಂ ಅಧ್ಯಕ್ಷರಾದ ಮಹೇಶ ಕಾಳಗಿ ಹೇಳಿದರು.
ತಾಲೂಕಿನ ದೋಟಿಹಾಳ ಗ್ರಾಮದ ಎಚ್ ಜಿ ರಾಮುಲು ಕಾಲೋನಿಯಲ್ಲಿ ಮಾಜಿ ಸಿಎಂ ಎಸ್ ಎಮ್ ಕೃಷ್ಣ ಅವರ ನಿಧನದ ಹಿನ್ನಲೆಯಲ್ಲಿ ಅವರಿಗೆ ಭಾವಪೂರ್ಣ ಶ್ರದ್ದಾಂಜಲಿಯನ್ನು ಅರ್ಪಿಸಿ ಮಾತನಾಡಿದ ಅವರು 2001-02ನೇ ಸಾಲಿನಲ್ಲಿ ನಮ್ಮ ಗ್ರಾಮದಲ್ಲಿ ನೂರಾರು ಮನೆಗಳನ್ನು ನಿರ್ಮಿಸಿಕೊಟ್ಟ ಕೀರ್ತಿ ಎಸ್ ಎಂ ಕೃಷ್ಣ ಅವರಿಗೆ ಸಲ್ಲುತ್ತದೆ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ಉತ್ತಮವಾದ ಆಡಳಿತವನ್ನು ನಡೆಸಿದ್ದಾರೆ ಹಾಗೂ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಅಭಿವೃದ್ದಿಯ ಹರಿಕಾರರಾಗಿದ್ದಾರೆ ಎಂದರು.
ಶೇಖಪ್ಪ ದೊಡ್ಡಮನಿ ಮಾತನಾಡಿದರು.
ಈ ಸಂದರ್ಭದಲ್ಲಿ ಅಜಮೀರಸಾಬ ಯಲಬುರ್ಗಿ, ಲಾಡಸಾಬ ಯಲಬುರ್ಗಿ, ಪಂಪಾಪತಿ ಅರಳಿಕಟ್ಟಿ, ಚನ್ನಬಸವ ಚೌರಿ, ಶಂಕ್ರಪ್ಪ ವಡ್ಡರ, ಭಾಷಾ ಗೋನಾಳ, ಖಾಜೇಸಾಬ ಗಚ್ಚಿನಮನಿ, ಮಂಜೂರುಅಲಿ ಬನ್ನು, ಲಾಲಸಾಬ ಮೂಗನೂರು, ಬಂದೆನವಾಜ ಬಿಜಕತ್ತಿ, ಹಾಗೂ ಎಚ್ ಜಿ ರಾಮುಲು ಕಾಲೋನಿ ನಿವಾಸಿಗಳು ಇದ್ದರು.