
12th March 2025
ಹಾಸನ: ಚನ್ನರಾಯಪಟ್ಟಣ ತಾಲೂಕು ಕಬ್ಬಳಿ ಗ್ರಾಮದ ಕಟ್ಟೆಗೆ ಹಾರಿ ತಾಯಿ-ಮಗ
ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಜೋಡಿ ಸಾವಿಗೆ ಪತ್ನಿ/ಸೊಸೆಯ ಮಾನಸಿಕ ಹಿಂಸೆ ನೀಡಿಲ್ಲ. ಬದಲಾಗಿ ಮಾನ
ಮರ್ಯಾದೆಗೆ ಅಂಜಿ ಸಾವಿಗೆ ಶರಣಾಗಿದ್ದಾರೆ ಎಂಬ ಅಂಶ ಇದೀಗ ಬಯಲಾಗಿದೆ.
ಹೆಚ್ಐವಿ ಸೋಂಕಿತ: ಇಬ್ಬರ ಸಾವಿನ ನಂತರ ಹೊರ ಬಿದ್ದಿರುವ ಸ್ಫೋಟಕ ಸಂಗತಿ
ಏನೆಂದರೆ ಮೃತ ಭರತ್ ಹೆಚ್ಐವಿ ಸೋಂಕಿತನಾಗಿದ್ದ ಎಂಬುದು. ಇದನ್ನು ಸ್ವತಃ ಪತ್ನಿ
ಗೀತಾ ಕುಟುಂಬದವರು ಬಹಿರಂಗ ಪಡಿಸಿದ್ದಾರೆ.
ಭರತ್ಗೆ ೪ ಲಕ್ಷ ವರದಕ್ಷಿಣೆ, ೧೦೦ ಗ್ರಾಂ. ಚಿನ್ನ ನೀಡಿ ಅದ್ಧೂರಿಯಾಗಿ ೮ ತಿಂಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ಆದರೆ ಆತ ೩ ವರ್ಷಗಳಿಂದಲೇ ಹೆಚ್ಐವಿ ಸೋಂಕಿತನಾಗಿದ್ದ, ಇದನ್ನು ಮುಚ್ಚಿಟ್ಟು ಮಾತ್ರೆ ತೆಗೆದುಕೊಳ್ಳುತ್ತಿದ್ದ. ತನಗೆ ಮಾರಣಾಂತಿಕ ಕಾಯಿಲೆ ಸೋಂಕು ತಗುಲಿರುವುದನ್ನು ಮುಚ್ಚಿಟ್ಟು ಮದುವೆಯಾಗಿದ್ದ ಎಂದು ಗಂಭೀರ ಆರೋಪ ಮಾಡಿದರು. ಇದರಿಂದ ನಮ್ಮ ಹುಡುಗಿಗೆ ಅನ್ಯಾಯ ಆಗಿದ್ದು, ನ್ಯಾಯಕೊಡಿಸಿ ಎಂದು ಮನವಿ ಮಾಡಿದರು.
ಹೀಗಿದ್ದರೂ ಪತ್ನಿ ಜೊತೆ ಆರಂಭದಲ್ಲಿ ಸಂಸಾರ ಮಾಡಿದ್ದಾನೆ. ನಂತರದಲ್ಲಿ ಅಂತರ ಕಾಯ್ದುಕೊಂಡಿದ್ದ. ಆಕೆ ಜೊತೆ ಸೇರುತ್ತಿರಲಿಲ್ಲ.
ಗೀತಾಳ ಮೇಲೆಯೇ ಆರೋಪ: ಅದಕ್ಕೂ ಮುನ್ನ ತನ್ನ ಹುಳುಕು ಮುಚ್ಚಿಕೊಳ್ಳಲು ಪಂಚಾಯ್ತಿ ಸೇರಿಸಿ ಗೀತಾ ಹೆಣ್ಣೇ ಅಲ್ಲ, ಮದ್ಯಪಾನ ಮಾಡುತ್ತಾಳೆ, ಮಾದಕ ವಸ್ತು ತೆಗೆದುಕೊಳ್ಳುತ್ತಾಳೆ ಎಂದೆಲ್ಲ ಭರತ್ ಹಾಗೂ ಸಂಬಂಧಿಕರು ಆರೋಪ ಹೊರಿಸಿದ್ದರು.
ಕೆಲ ದಿನ ಸಂಬಂಧಿಕರ ಮನೆಯಲ್ಲಿ ಗೀತಾಳನ್ನು ಉಳಿಸಿದ್ದ. ಮತ್ತೊಂದು ಪಂಚಾಯ್ತಿ ನಡೆಸಿ ಹಿರಿಯರು ಬುದ್ಧಿವಾದ ಹೇಳಿದ ನಂತರ ಗೀತಾ ಗಂಡನ ಮನೆಯಲ್ಲಿ ಇರುವುದಾಗಿ ಹೇಳಿದ್ದಳು. ಅಲ್ಲೀವರೆಗೂ ಪತಿಯ ಮಹಾಪರಾಧ ತಿಳಿದಿರಲಿಲ್ಲ. ಗೀತಾ ಏನೂ ಮಾತನಾಡದೇ ಇದ್ದರೂ, ತವರು ಮನೆಗೆ ಕಳಿಸಿದ್ದರು.