

2nd July 2026

ಹೊಳಲ್ಕೆರೆ, ಜು. 2: ಹೊಳಲ್ಕೆರೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ವಿಬಿಜಿ ರಾಮ್ ಜಿ (VBG RAM G) ಯೋಜನೆ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಚಿತ್ರದುರ್ಗ ಜಿಲ್ಲಾ ಪಂಚಾಯಿತಿಯ ಉಪ ಕಾರ್ಯದರ್ಶಿ ಎಸ್.ಆರ್. ಬಾಬು ಅವರು ಗಿಡಕ್ಕೆ ನೀರುಣಿಸುವ ಮೂಲಕ ಉದ್ಘಾಟಿಸಿ, ವಿಬಿಜಿ ರಾಮ್ ಜಿ ಯೋಜನೆಯ ಉದ್ದೇಶ ಹಾಗೂ ಮಹತ್ವದ ಕುರಿತು ಸಂಕ್ಷಿಪ್ತವಾಗಿ ವಿವರಿಸಿದರು.
ನಂತರ ಎಡಿಪಿಸಿ ಮೋಹನ್ ಮಾತನಾಡಿ, ವಿಬಿಜಿ ರಾಮ್ ಜಿ ಯೋಜನೆ ಮತ್ತು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಉದ್ಯೋಗ ಖಾತ್ರಿ) ನಡುವಿನ ವ್ಯತ್ಯಾಸವನ್ನು ವಿವರಿಸಿದರು.
ಜಿಲ್ಲಾ ಪಂಚಾಯಿತಿಯ ಮುಖ್ಯ ಲೆಕ್ಕಾಧಿಕಾರಿ ಓಂಕಾರಪ್ಪ ಅವರು ಮಾತನಾಡಿ, ವಿಬಿಜಿ ರಾಮ್ ಜಿ ಯೋಜನೆಯ ಅನುಷ್ಠಾನ, ಸಾಮಾಜಿಕ ಲೆಕ್ಕಪರಿಶೋಧನೆ (ಸೋಶಿಯಲ್ ಆಡಿಟ್) ಹಾಗೂ ಸ್ಥಳೀಯ ಲೆಕ್ಕಪರಿಶೋಧನೆ (ಲೋಕಲ್ ಆಡಿಟ್) ಕುರಿತು ಮಾಹಿತಿ ನೀಡಿದರು.
ಹೊಳಲ್ಕೆರೆ ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ ಶಿವಪ್ರಕಾಶ್ ಎಸ್. ಅವರು ಮಾತನಾಡಿ, ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಅಧಿಕಾರಿಗಳಿಗೆ ಕರೆ ನೀಡಿದರು. ಅಲ್ಲದೆ, ತಾಲೂಕಿನಲ್ಲಿ ತಕ್ಷಣದಿಂದಲೇ ಎನ್ಎಂಆರ್ (NMR) ಜನರೇಟ್ ಮಾಡುವಂತೆ ಸೂಚಿಸಿದರು.
ತರಬೇತಿಯ ಮಾಸ್ಟರ್ ಟ್ರೈನರ್ ಹಾಗೂ ವಿಬಿಜಿ ರಾಮ್ ಜಿ ಸಹಾಯಕ ನಿರ್ದೇಶಕ ನಟರಾಜ್ ಅವರು ಯೋಜನೆಯ ವಿವಿಧ ಅಂಶಗಳು, ಕಾರ್ಯವಿಧಾನ ಹಾಗೂ ಅನುಷ್ಠಾನದ ಕುರಿತು ಸಮಗ್ರ ತರಬೇತಿ ನೀಡಿದರು.
ಕಾರ್ಯಕ್ರಮದಲ್ಲಿ ತಾಲೂಕು ಯೋಜನಾಧಿಕಾರಿ ಸುರೇಶ್, ಎಂಐಎಸ್ ಕೋ-ಆರ್ಡಿನೇಟರ್ ಜಗದೀಶ್, ಐಸಿಎಫ್ ಕೋ-ಆರ್ಡಿನೇಟರ್ ಉಮಾಶಂಕರ್ ಜಿ.ಆರ್., ಟಿಸಿ ಪ್ರತಾಪ್ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
ತಾಲೂಕಿನ 29 ಗ್ರಾಮ ಪಂಚಾಯಿತಿಗಳ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ), ಟಿಎಟಿ, ಡಿಇಒ, ಬಿಎಫ್ಟಿ ಹಾಗೂ ಜಿಕೆಎಂ ಸಿಬ್ಬಂದಿ ತರಬೇತಿಯಲ್ಲಿ ಭಾಗವಹಿಸಿ ಯೋಜನೆಯ ಕುರಿತು ಮಾಹಿತಿ ಪಡೆದುಕೊಂಡರು.

ಮುಂಗಾರು ಕ್ಷೀಣ-ಭದ್ರಾ ಜಲಾಶಯದಲ್ಲಿ ನೀರು ಖಾಲಿ- ಮುಂಗಾರು ಬೆಳೆಗೆ ನೀರು ಇಲ್ಲ: ರೈತರಿಗೆ ಆತಂಕ

ರಾಷ್ಟ್ರೀಯ 'ಇನ್ಸ್ಪೈರಿಂಗ್ ಚೆಸ್ಟ್ ಸ್ಪೆಷಲಿಸ್ಟ್ ಆಫ್ ಇಂಡಿಯಾ–2026' ಪ್ರಶಸ್ತಿ ಡಾ. ಹರೀಶ್ ಜಿ.ಎಂ.ಗೆ

ಕೊರ್ತಿ-ಕೋಲಾರ ಸೇತುವೆ ಮೇಲೆ ಭೀಕರ ಅಪಘಾತ: ಕೃಷ್ಣಾ ನದಿಗೆ ಉರುಳಿದ ಟಿಪ್ಪರ್, ಓರ್ವ ರಕ್ಷಣೆ – ಮತ್ತೋರ್ವರಿಗಾಗಿ ಶೋಧ