26th June 2025
ಚಡಚಣ:ಪಟ್ಟಣದ ವಿದ್ಯಾ ಕಲ್ಯಾಣಶೆಟ್ಟಿ ಅವರು ರಾಜ್ಯ ಮಟ್ಟದ ಬಸವ ಚೇತನ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ ಎಂದು ಅಮ್ಮ ಫೌಂಡೆಷನ ಸಂಚಾಲಕರಾದ ಕಬೂಲ್ ಕೊಕಟನೂರ ಮತ್ತು ಕಾರ್ಯದರ್ಶಿಗಳಾದ ಎಚ್ ಆರ್ ಕೊಕಟನೂರ ಪ್ರಕಟಿಸಿದ್ದಾರೆ.
ವಿದ್ಯಾ ಕಲ್ಯಾಣಶೆಟ್ಟಿ ಅವರು ಚಡಚಣ ತಾಲೂಕಿನಲ್ಲಿ ಸಮೃದ್ಧಿ ಮಹಿಳಾ ಸೇವಾ ಸಂಸ್ಥೆಯನ್ನು ಕಟ್ಟಿ ಅನೇಕ ಮಹಿಳಾ ಪರ ಕಾರ್ಯಗಳನ್ನು ಮಾಡಿ ನೊಂದ ಮಹಿಳೆಯರಿಗೆ ದಾರಿ ದೀಪವಾಗಿದ್ದಾರೆಂದು ಅವರ ಈ ಸೇವೆಯನ್ನು ಪರಿಗಣಿಸಿ ನಮ್ಮ ಸಂಸ್ಥೆಯು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
26th June 2025
ಚಡಚಣ; ಚಡಚಣ ಪಟ್ಟಣದಲ್ಲಿ ಮಣ್ಣೆತ್ತಿನ ಅಮಾವಾಸ್ಯೆಯ ನಿಮಿತ್ಯ ರೈತ ರಮೇಶ ಮಲ್ಲಾಡಿ ಅವರ ತೋಟದ ಮನೆಯಲ್ಲಿ ಅವರ ಮಕ್ಕಳಾದ ವೀರಾಟ ಮತ್ತು ಸಾಮ್ರಾಟ ಅವರು ಸಂಭ್ರಮದಿAದ ಜೋಡೆತ್ತುಗಳನ್ನು ಕೈಯಾರೆ ತಯಾರಿಸಿ ಪೂಜೆ ಸಲ್ಲಿಸುವ ದೃಶ್ಯ ಗಮನಸೆಳೆಯಿತು. ಎತ್ತು, ದನ-ಕರುಗಳ ಮೈ ತೊಳೆದು ವಿಶೇಷವಾಗಿ ಸಿಂಗರಿಸಿ ಮಣ್ಣಿನಿಂದ ತಯಾರಿಸಿದ ಜೋಡೆತ್ತುಗಳನ್ನು ದೇವರ ಜಗುಲಿ ಮೇಲಿಟ್ಟು ಸಹ ಕುಟುಂಬದವರೆಲ್ಲರೂ ಸೇರಿ ಪೂಜೆ ಸಲ್ಲಿಸಿದರು. ಮನೆಯಲ್ಲಿ ತಯಾರಿಸಿದ ವಿವಿಧ ಭಕ್ಷ ಭೋಜನವನ್ನು ಎತ್ತುಗಳಿಗೆ ನೈವೇದ್ಯ ಮಾಡಿ ಉಣಬಡಿಸಿದರು.ನಂತರ ಕುಟುಬಂದವರೆಲ್ಲರೂ ಸಿಹಿ ಭೋಜನ ಸವಿದು ಸಂಭ್ರಮಿಸಿದರು.ಈ ಸಂಪ್ರದಾಯ ಪೂರ್ವ ಕಾಲದಿಂದಲೂ ನಡೆದುಕೊಂಡು ಬಂದಿದೆ.
ಹೊಲದಲ್ಲಿ ಮುಂಗಾರು ಬಿತ್ತನೆಯ ಕೆಲಸ ಮುಗಿದ ನಂತರ ಬಂದಿರುವ ಹಬ್ಬ ಇದಾಗಿದೆ.ಮಣ್ಣೆತ್ತಿನ ಅಮಾವಾಸ್ಯೆ ಕರ್ನಾಟಕದಲ್ಲಿ ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಪ್ರಮುಖವಾಗಿ ಆಚರಿಸುತ್ತಾರೆ ಈ ದಿನ ಮೃದುವಾದ ಜೇಡಿ ಮಣ್ಣಿನಿಂದ ತಮ್ಮ ಕೈಯಾರೆ(ಕುಂಬಾರಣ್ಣ)ತಯಾರಿಸಿದ ಜೋಡಿ ಎತ್ತುಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ಭೂಮಿ ಮತ್ತು ರೈತರ,ಎತ್ತುಗಳ ನಡುವಿನ ಅವಿನಾಭಾವ ಸಂಬAಧವನ್ನು ಸೂಚಿಸುತ್ತದೆ.ಎತ್ತುಗಳು ಭೂಮಿಯಿಂದ ಆಹಾರ ಉತ್ಪಾದಿಸುವ ಮೂಲಕ ತಮ್ಮ ಸಂಗಾತಿ ಗೋವುಗಳಿಗೆ ಮತ್ತು ಮಾನವನ ಜೀವನವನ್ನು ರಕ್ಷಿಸುತ್ತದೆ.
ಕಾರಹುಣ್ಣಿಮೆ ನಂತರ ಬರುವ ಮಣ್ಣೆತ್ತಿನ ಅಮಾವಾಸ್ಯೆಯನ್ನು ಪ್ರತಿವರ್ಷ ಜೇಷ್ಠ ಮಾಸ, ಕೃಷ್ಣ ಪಕ್ಷದ ಅಮಾವಾಸ್ಯೆಯಂದು ಸಡಗರ ಸಂಭ್ರಮದಿAದ ರೈತರು ವಿಶೇಷವಾಗಿ ಆಚರಿಸುತ್ತಾರೆ.ಕೃಷಿಕನ ಬದುಕಿನಲ್ಲಿ ಆಸರೆಯಾಗಿರುವ ಜೋಡೆತ್ತ್ತುಗಳನ್ನು ಪೂಜಿಸುವ ಹಬ್ಬ ಇದಾಗಿದೆ.
ಬೇಸಿಗೆಯ ಕಡು ಬಿಸಿಲಿನಲ್ಲಿ ಹೋಲ ಹಸನಾಗಿಡಲು, ವೈಶಾಖ ಮಾಸ ಮುಗಿದು,ಪುನರ್ವಸು ಮಳೆ ಆರಂಭವಾದಾಗ ಕೃಷಿ ಚಟುವಟಿಕೆಗಳು ಮಳೆಯಾದೊಡನೆ ಬೀಜ ಬಿತ್ತುವ ಕೆಲಸ ಕೂಡಾ ರೈತನೊಂದಿಗೆ ಸೇರಿ ಮಾಡುತ್ತವೆ ಹಾಗಾಗಿ ಜೋಡೆತ್ತುಗಳು ರೈತಸಮೂಹದ ಜೀವನಾಡಿ ಎಂದೆನಿಸಿಕೊAಡಿವೆ.
20th June 2025
ವರದಿ:ರಾಜಶೇಖರ ಡೋಣಜಮಠ.
ಚಡಚಣ;ಬ್ರೀಟಿಷರ ಕಾಲದ ೧೮೪೫ ರಲ್ಲಿ ಪ್ರಾರಂಭವಾಗಿರುವ ಚಡಚಣದ ಹಿರಿಯ ಪ್ರಾಥಮಿಕ ಶಾಲೆ,ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣದೊಂದಿಗೆ ನೈತಿಕ ಮೌಲ್ಯಗಳನ್ನು ಕಲಿಸುತ್ತ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದೆ ನಮ್ಮೂರ ನಮ್ಮ ಶಾಲೆ.
ಸರಕಾರಿ ಶಾಲೆಗಳೆಂದರೆ ಮೂಗು ಮುರಿಯುವ ಇಂದಿನ ಪೀಳಿಗೆಯು ಇಂಥ ಸಂದರ್ಭದಲ್ಲಿ ಈ ಶಾಲೆ ಮಕ್ಕಳಿಗೆ ಒಳ್ಳೆಯ ಶಿಕ್ಷಣದೊಂದಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ನೀಡಿ ಭೇಷ ಎನಿಸಿಕೊಂಡಿದೆ.
ಬ್ರಿಟೀಷರ ಕಾಲದಲ್ಲಿ ಅಂದರೆ ೧೮೪೫ ರಲ್ಲಿ ಪ್ರಾರಂಭವಾದ ಶಾಲೆ ಸುಮಾರು ೧೮೦ ವರ್ಷಗಳ ಇತಿಹಾಸವನ್ನು ಹೊಂದಿದೆ. ೧೮೪೫ ರ ಸಂದಭದಲ್ಲಿ ಮೋಡಿ ಭಾಷೆಯಲ್ಲಿ ಬರೆದ ಶಾಲೆಯ ಕಾಗದ ಪತ್ರಗಳನ್ನು ಮುಖ್ಯ ಶಿಕ್ಷಕರು ಇಲ್ಲಿಯವರೆಗೆ ಅತ್ಯಂತ ಜೋಪಾನವಾಗಿ ಇಟ್ಟಿರುವದು ತುಂಬಾ ವಿಶೇಷವಾಗಿದೆ.
ಈ ಶಾಲೆಯಲ್ಲಿ ೧ ನೇ ತರಗತಿಯಿಂದ ೮ ನೇ ತರಗತಿಯವರೆಗೆ ಸುಮಾರು ೨೫೦ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಶಾಲೆಯ ಮುಖ್ಯ ಶಿಕ್ಷಕ ಎಸ್ಎಸ್ ಪಾಟೀಲ ಇವರ ವಿಶೇಷ ಪ್ರಯತ್ನದ ಫಲವಾಗಿ ಶಾಲೆ ಎಲ್ಲ ರೀತಿಯ ಸೌಲಭ್ಯಗಳನ್ನು ಹೊಂದಿದೆ.
ಮುಖ್ಯ ಶಿಕ್ಷಕರ ವಿಶೇಷ ಕಾಳಜಿ ಫಲವಾಗಿ ಕಿರ್ಲೋಸ್ಕರ ಕಂಪನಿಯ ಎಂಡಿ ಗುಮಾಸ್ತೆ ಇವರು ಶಾಲೆಗೆ ವಿದ್ಯಾರ್ಥಿಗಳಿಗೆ ಕೂರಲು ಡೆಸ್ಕುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ ಶಾಲೆಯ ಸೌಲಭ್ಯಗಳನ್ನು ಹೆಚ್ಚಿಸಲು ರೂ ೧.೫ ಲಕ್ಷ ವಿಶೇಷ ಅನುದಾನವನ್ನು ನೀಡಿದ್ದಾರೆ. ಕೆನರಾ ಬ್ಯಾಂಕ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ಮತ್ತು ಕೆಲವರು ವೈಯಕ್ತಿಕವಾಗಿ ಶಾಲೆಯ ಅಭಿವೃದ್ದಿಗೆ ಕಾಣಿಕೆಯನ್ನು ನೀಡಿದ್ದಾರೆ.
ಶಾಲೆಯ ಆವರಣದಲ್ಲಿ ಬೆಳೆದಿರುವ ದೊಡ್ಡ ಗಿಡಮರಗಳು ಶಾಲೆಯ ಸೌದರ್ಯವನ್ನು ಹೆಚ್ಚಿಸಿವೆ. ಶಾಲೆಯ ಆವರಣವನ್ನು ಪ್ರವೇಶಿಸಿದರೆ ಮಲೆನಾಡಿನ ಅನುಭವವಾಗುತ್ತದೆ. ಎಲ್ಲ ಶಿಕ್ಷಕರು ಮತ್ತು ಮಕ್ಕಳ ಪ್ರಯತ್ನದ ಫಲವಾಗಿ ಶಾಲೆಯ ಆವರಣ ಹಚ್ಚು ಹಸಿರಿನಿಂದ ನಳನಳಿಸುತ್ತಿದೆ.ಕನ್ನಡ ನಾಡಿನ ಖ್ಯಾತ ಸಾಹಿತಿ, ಜನಪದ ಭೀಷ್ಮ ಡಾ.ಸಿಂಪಿ ಲಿಂಗಣ್ಣನವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಇದೆ ಶಾಲೆಯಲ್ಲಿ ಮುಗಿಸಿರುವದು ಶಾಲೆಯ ಶಿಕ್ಷಕರಿಗೆ ಹೆಮ್ಮಯ ವಿಷಯವಾಗಿದೆ.
ಸರಕಾರದ ಯೋಜನೆ ಸದ್ಬಳಕೆ.
ಸರಕಾರಿ ಯೋಜನೆಗಳನ್ನು ಅತ್ಯಂತ ವ್ಯವಸ್ಥಿತವಾಗಿ ಸದುಪಯೋಗ ಪಡೆಸಿಕೊಳ್ಳುತ್ತಿದೆ. ಸಮವಸ್ತ್ರ, ಬಿಸಿಯೂಟ, ಬಾಳೆಹಣ್ಣು ಸೇರಿದಂತೆ ಎಲ್ಲ ಯೋಜನೆಗಳೊಂದಿಗೆ ದಾನಿಗಳಿಂದಲೂ ಸಾಕಷ್ಟು ವಸ್ತುಗಳನ್ನು ಪಡೆದುಕೊಂಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿರುವದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.
*ಖಾಸಗಿ ಶಾಲೆಗಳಲ್ಲಿ ದೊರೆಯುವ ಎಲ್ಲ ಸೌಕರ್ಯಗಳು ನಮ್ಮ ಶಾಲೆಯ ಮಕ್ಕಳಿಗೂ ದೊರೆಯುವಂತೆ ಮಾಡಬೇಕು ಎನ್ನವದು ನನ್ನ ಆಸೆ.ಈ ದಿಸೆಯಲ್ಲಿ ನಾನು ಪ್ರಯತ್ನ ಮಾಡುತ್ತಿದ್ದೆನೆ. ಗುಣಮಟ್ಟದ ಶಿಕ್ಷಣ ನೀಡಿದರೆ ಮಕ್ಕಳು ಖಂಡಿತ ಸರಕಾರಿ ಶಾಲೆಗಳಿಗೆ ಬರುತ್ತಾರೆ. ನಮ್ಮ ಶಾಲೆ ಇದಕ್ಕೆ ಒಂದು ಉದಾರಹಣೆ. ಶಾಲೆಯ ಅಭಿವೃದ್ಧಿಗೆ ಶಾಸಕ ವಿಠ್ಠಲ ಕಟಕಧೋಂಡ ಅವರು ಅನುದಾನವನ್ನು ನೀಡಿದ್ದಾರೆ.
ಇನ್ನು ಸುಧಾರಣೆ ಮಾಡಬೇಕೆಂದರೆ ಹೋರಾಂಗಣದ ಕೊರತೆ ಇದೆ ಎಂದರು.ಪ.ಪ0.ಯವರು ನಮ್ಮ ಕನ್ನಡ ಶಾಲೆಗೆ ಮೀಸಲಿಟ್ಟ ೨.೨೯ ಎಕರೆ ಜಮಿನಿನ ಪೈಕಿ ಸುಮಾರು ೧.೦೦ ಎಕರೆ ಭೂ ಕಬಳಿಸಿ ವ್ಯಾಪಾರ ಮಳಿಗೆ ಹಾಗೂ ಇನ್ನಿತರೆ ಕೆಲಸಗಳಿಗಾಗಿ ಜಾಗ ಅಕ್ರಮ ಮಾಡಿದ್ದರಿಂದ ಜಾಗದ ಕೊರತೆಯಾಗಿದೆ. * ಎಸ್.ಎಸ್.ಪಾಟೀಲ ಮುಖ್ಯ ಗುರುಗಳು.
*ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎನ್ನುವದು ನನ್ನ ಮತ್ತು ಮುಖ್ಯ ಗುರುಗಳ ಕನಸಾಗಿದೆ. ಈ ದಿಸೆಯಲ್ಲಿ ಶಾಲೆಯ ಮುಖ್ಯ ಗುರುಗಳು ಮತ್ತು ಎಲ್ಲ ಶಿಕ್ಷಕರೊಂದಿಗೆ ಕೂಡಿ ನಾನು ಮತ್ತು ನಮ್ಮ ಎಸ್ಡಿಎಂಸಿ ಸದಸ್ಯರು ಪ್ರಯತ್ನಿಸುತ್ತೆವೆ.
* ಪ್ರಕಾಶ.ಬ.ಪಾಟೀಲ ಎಸ್ಡಿಎಂಸಿ ಅಧ್ಯಕ್ಷ ಹಾಗೂ ಪ.ಪಂ.ಸದಸ್ಯ.
19th June 2025
ಚಡಚಣ: ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ನಂ-೨ ಮರಡಿಯಲ್ಲಿ ಮಂಗಳವಾರ ಅನೇಮಿಯಾ ಮುಕ್ತ ಪೌಷ್ಟಿಕ ಕರ್ನಾಟಕ ಯೋಜನೆ ಅಡಿಯಲ್ಲಿ ಶಾಲೆಯ ಮಕ್ಕಳಿಗೆ ಹಿಮೋಗ್ಲೋಬಿನ್(ರಕ್ತ) ತಪಾಸಣೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ (ಆರ್ಬಿಎಸ್ಕೆ) ವೈದ್ಯಾಧಿಕಾರಿ ಡಾ.ಆಯ್ ಎಂ ಬಿರಾದಾರ ಮಾತನಾಡಿ ಮಕ್ಕಳಿಗೆ ರಕ್ತಹೀನತೆಯ ಕುರಿತು ಹಾಗೂ ಪೌಷ್ಟಿಕ ಆಹಾರದ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಿದರು.
ಅನೇಮಿಯಾ ಮುಕ್ತ ಪೌಷ್ಟಿಕ ಕರ್ನಾಟಕ ಯೋಜನೆ ಹಾಗೂ ಯಾವುದೆ ಸರಕಾರಿ ಆರೋಗ್ಯ ಯೋಜನೆಗಳಾಗಲಿ ಸರಕಾರಿ ಶಾಲೆಯ ಮಕ್ಕಳಿಗೆ ಮಾತ್ರ ಸಿಮಿತಗೋಳಿಸದೆ ಖಾಸಗಿ ಹಾಗೂ ಸರಕಾರಿ ಶಾಲೆಯ ಮಕ್ಕಳಿಗೆ ಅನುಕೂಲವಾಗುವಂತೆ ಕ್ರಮಕೈಗೊಳ್ಳಬೇಕೆಂದು ಚಡಚಣದ ಹಿರಿಯ ನಾಗರಿಕರು ಮನವಿ ಮಾಡಿದ್ದಾರೆ.
ಡಾ.ಸಂಗೀತಾ ಕಡಕೋಳ,ಶುಶ್ರೂಷಕಿ ಉಮಾಶ್ರೀ ಸುತಾರ ಹಾಗೂ ಶಾಲೆಯ ಮುಖ್ಯ ಗುರುಗಳು ಮಹಾಂತೇಶ ಉಮರಾಣಿ, ಶಿಕ್ಷಕ ಬಸವರಾಜ ಕರಜಗಿ, ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಸಿಬ್ಬಂದಿ ವರ್ಗದವರು ಇದ್ದರು.
18th June 2025
ಚಡಚಣ;ಲೋಕೋಪಯೋಗಿ ಇಲಾಖೆ ಉಪ-ವಿಭಾಗ ಇಂಡಿ. ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ,
ಚಡಚಣ ಹಾವಿನಾಳ ಹತ್ತಳ್ಳಿ ಲೋಣಿ ಬಿ.ಕೆ ಯಿಂದ ರಾಜ್ಯ ಹೆದ್ದಾರಿ ೪೧ಕ್ಕೆ ಕೂಡುವ ರಸ್ತೆ ಕಿ,ಮೀ ೨.೦೦ ರಿಂದ ೩.೦೦ ವರೆಗೆ ರಸ್ತೆ ಸುಧಾರಣೆಯ ಗುದ್ದಲಿ ಪೂಜೆಯನ್ನು ಶಾಸಕ ವಿಠ್ಠಲ ಕಟಕಧೋಂಡ ಅವರು ಮಂಗಳವಾರ ನೆರವೇರಿಸಿದರು.
ಹಾವಿನಾಳ ಹತ್ತಳ್ಳಿ ಲೋಣಿ, ಬಿಕೆ ಯಿಂದ ರಾಜ್ಯ ಹೆದ್ದಾರಿ೪೧ಕ್ಕೆ ಕೂಡುವ ರಸ್ತೆ ಒಟ್ಟು ೩೩.೦೦ ಕೀ.ಮಿ ಉದ್ದದ ಜಿಲ್ಲಾ ಮುಖ್ಯ ರಸ್ತೆ ಇದ್ದು ಪೂರ್ತಿ ಡಾಂಬರ ಮೇಲೆ ಹೊಂದಿದ ರಸ್ತೆಯಾಗಿರುತ್ತದೆ. ಸದರಿ ರಸ್ತೆಗಳು ಇಂಡಿ ಉಪ-ವಿಭಾಗದ ವ್ಯಾಪ್ತಿಯಲ್ಲಿ ಬರುತ್ತದೆ. ಹಾಗೂ ಸದರಿ ರಸ್ತೆಯು ಚಡಚಣ ಉಮರಾಣಿ ಯಿಂದ ಮಹಾರಾಷ್ಟ್ರ ಕೂಡುವ ರಸ್ತೆ ಇದ್ದು ಮತ್ತು ಗಡಿಯಲ್ಲಿ ಇರುವ ಎರಡು ರಾಜ್ಯದ ಜನರಿಗೆ ಓಡಾಡಲು ತುಂಬಾ ಅನುಕೂಲವಾಗಿರುತ್ತದೆ. ಸದರ ರಸ್ತೆಯ ಮೇಲೆ ವಾಹನ ಸಂಚಾರ ಹೆಚ್ಚಾಗಿ ಇರುವದರಿಂದ ಡಾಂಬರ ಹಾಳಾಗಿದ್ದು, ರಸ್ತೆ ಸಂಚಾರಕ್ಕೆ ತುಂಬಾ ತೊಂದರೆ ಆಗುತ್ತಿದೆ.
ಸದರಿ ರಸ್ತೆ ಸುಧಾರಣೆಗಾಗಿ ಲೆಕ್ಕ ಶಿರ್ಷಿಕ ೨೦೨೩-೨೪ನೇ ಸಾಲಿನ ೫೦೫೪- ಜಿ.ಮು.ರ ಅಪೆಂಡಿಕ್ಷ ಯೋಜನೆಯಡಿಯಲ್ಲಿ ರೂ. ೧೦೦.೦೦ ಲಕ್ಷಗಳಿಗೆ ಅನುದಾನ ಮಂಜುರಾಗಿದ್ದು, ಸದರಿ ರಸ್ತೆ ಕಿ.ಮೀ: ೨.೦೦ ರಿಂದ ೨.೯೮ ವರೆಗೆ ೫.೫೦ ಮೀ ಅಗಲದ ರಸ್ತೆಯನ್ನು ಕ್ರಸ್ಟ್ ಸುಧಾರಣೆ ಮಾಡುವದು ಅತಿ ಅವಶ್ಯವಿದ್ದುದರಿಂದ ಕೆಲಸ ಪ್ರಾರಂಭಿಸಲಾಗಿದೆ ಎಂದರು.
ಈ ಕೆಲಸದ ವಿವರ ಅಂದಾಜು ಮೊತ್ತ ರೂ ೧೦೦ ಲಕ್ಷ ಮಾಡಿದ್ದರು. ಟೆಂಡರಿಗಿಟ್ಟ ಮೊತ್ತ ರೂ ೯೫.೨೨ ಲಕ್ಷ ಆದರೆ ಗುತ್ತಿಗೆದಾರವಿಜಯಪುರದ ಕೆ.ಆರ್.ತುಪ್ಪದ ಅವರಿಗೆ ರೂ ೯೫.೫೧ ಲಕ್ಷ ಗುತ್ತಿಗೆ ಮೊತ್ತ.ನೀಡಿದ್ದು ಗುಣಮಟ್ಟದ ರಸ್ತೆ ನಿರ್ಮಿಸುವಂತೆ ಈ ಸಂದರ್ಬದಲ್ಲಿ ಶಾಸಕರು ಹೇಳಿದರು.
ಸರಕಾರದ ಹಂತದಲ್ಲಿ ಕೆಲಸಕ್ಕೆ ಹಣ ಹಾಗೂ ಅನುಮೋದನೆ ಕೊಡಿಸುವ ಕೆಲಸ ನಮ್ಮದು ಆದರೇ ಕೆಲಸ ಸರಿಯಾಗಿದೆಯೊ ಇಲ್ಲವೋ ನೋಡುವದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಾಗೂ ಸಾರ್ವಜನಿಕರಿಗೆ ಬಿಟ್ಟಿದ್ದು ಮತ್ತು ಅವರ ಜವಾಬ್ದಾರಿಯಾಗಿದೆ ಎಂದರು.
ಈ ಸಂಧರ್ಬದಲ್ಲಿ ಕಾರ್ಯಕರ್ತರು ಹಾಗೂ ಹಾವಿನಾಳ ಹತ್ತಳ್ಳಿ ಲೋಣಿ, ಬಿಕೆ ಗ್ರಾಮಸ್ಥರು ಇದ್ದರು.
16th June 2025
ಚಡಚಣ;ಧಾರವಾಡ-ನಾಟ್ಯ ಸ್ಫೂರ್ತಿ ಆರ್ಟ್ & ಕಲ್ಬರಲ್ ಅಕಾಡೆಮಿ ಧಾರವಾಡ ಇದರ ೧೫ನೇ ವಾರ್ಷಿಕೋತ್ಸವದ ಅಂಗವಾಗಿ ರಾಜ್ಯಮಟ್ಟದ ಬಸವಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಕನ್ನಡ, ನಾಡು-ನುಡಿ, ಜಲ, ಸಾಹಿತ್ಯ,ಸಾಂಸ್ಕೃತಿಕ, ಕೃಷಿ, ಶಿಕ್ಷಣ ಚಿಂತನೆ, ನಾಟಕ ಪ್ರದರ್ಶನಈ ಎಲ್ಲ ಕಾರ್ಯಕ್ರಮದಲ್ಲಿ ಸಾಧನೆ ಮಾಡಿದವರಿಗೆ ದಿ.೧೫ ರವಿವಾರ ಸನ್ಮಾನಿಸಿದರು.
ಕಾರ್ಯಕ್ರಮವು ಆಲೂರ ವೆಂಕಟರಾವ್ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು. ನಾಟ್ಯಸ್ಫೂರ್ತಿ ಆರ್ಟ ಕಲ್ಚರಲ್ ಅಕಾಡೆಮಿಯ ಅಧ್ಯಕ್ಷ ಸದಾನಂದ ಎಸ್ ಬಂಗೆಣ್ಣನವರ ಅಧ್ಯಕ್ಷತೆಯಲ್ಲಿ,ಮನಸೂರ ಶ್ರೀ ರೇವಣಸಿದ್ದೇಶ್ವರ ಮಠದ ಡಾ. ಶ್ರೀ ಶ್ರೀ ಶ್ರೀ ಬಸವರಾಜ ದೇವರು ದಿವ್ಯ ಸಾನಿಧ್ಯದಲ್ಲಿ, ನವಲಗುಂದ ಶಾಸಕರಾದ ಎನ್ ಎಚ್ ಕೋನರಡ್ಡಿ ಉದ್ಘಾಟಿಸಿದರು.
ಚಡಚಣ ತಾಲೂಕಿನ ರೇವತಗಾಂವ ಗ್ರಾಮದ ಪ್ರಗತಿಪರ ರೈತರಾದ ರಮೇಶ ಸಿದ್ದಪ್ಪ ನಡಗೇರಿ ಅವರಿಗೆ ದ್ರಾಕ್ಷಿ ಬೆಳೆಯಲ್ಲಿ ವಿಶೇಷವಾದ ಪರಿಣಿತಿಯನ್ನು ಪರಿಗಣಿಸಿ ರಾಜ್ಯ ಮಟ್ಟದ ಬಸವಶ್ರೀ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸದರು.
ಸನ್ಮಾನದ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿದ್ಯಾರ್ಥಿಗಳಿಂದ ಕನ್ನಡ ನಾಡಗೀತೆ ಚಲನಚಿತ್ರ ಗೀತೆಗೆ ನೃತ್ಯ, ಇಮಾಮಸಾಬ ವಲ್ಲೆಪ್ಪನವರ ಅವರಿಂದ ತತ್ವಪದ, ಚಿನ್ನು ವಸ್ತ್ರದ ಅವರ ಸ್ವರ್ಣ ಮಯೂರಿ ನೃತ್ಯಸಂಸ್ಥೆ ಹುಬ್ಬಳ್ಳಿಯವರಿಂದ ವಚನರೂಪಕ ನೃತ್ಯ, ಸುಮಾ ಹಡಪದ ಅವರಿಂದ ಕವಿಗೋಷ್ಟಿ, ಮೊಬೈಲ್ ಮಲ್ಲ ಅವರಿಂದ ಹಾಸ್ಯ ಕಾರ್ಯಕ್ರಮಗಳು ಜರುಗಿದವು ಎಂದು ತಿಳಿಸಿದ್ದಾರೆ.
. ಈ ಸಾಧನೆಗೆ ರೇವತಗಾಂವ ಹಾಗೂ ಚಡಚಣದ ಗ್ರಾಮಸ್ಥರು ಹಾಗೂ ಗೆಳಯರ ಬಳಗ ಅಭಿನಂದಿಸಿ ಸಂತೋಷ ವ್ಯಕ್ತಪಡಿಸಿದ್ದಾರೆ.
15th June 2025
ಚಡಚಣ ಃ ಪಟ್ಟಣದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಕಾರಹುಣ್ಣಿಮೆ ವಿಶೇಷ ಎತ್ತುಗಳ ಕರಿ ಹರಿಯುವ ಕಾರ್ಯಕ್ರಮ ಬುಧವಾರ ಸಂಜೆ ೪.೦೦ ಗಂಟೆಗೆ ಸಡಗರದಿಂದ ಜರುಗಿತು.
ಮುಂಗಾರು ಆರಂಭದ ಮೊದಲ ಹಬ್ಬವೇ ಕಾರಹುಣ್ಣಿಮೆಯಾಗಿದೆ. ರೈತರು ಕೃಷಿ ಕಾರ್ಯದ ಸಂಗಾತಿ ಜೋಡೆತ್ತುಗಳಿಗೆ ನಮಿಸಿ ಆರಾಧಿಸುವ ಹಬ್ಬ. ಬೆಳಗ್ಗೆಯಿಂದಲೇ ತಮ್ಮ ಎತ್ತುಗಳಿಗೆ ಮೈತೊಳೆದು ವಿವಿಧ ಬಣ್ಣ ಹಚ್ಚಿ ಶೃಂಗಾರಗೊಳಿಸಿ, ಕೊರಳಲ್ಲಿ ಗೆಜ್ಜೆ ಸರ, ಮೈಮೇಲೆ ಬಣ್ಣ ಬಣ್ಣದ ಹೂವಿನ ಚಿತ್ರ ಬಿಡಿಸಿ,ಶಾಲು(ಹೊದಿಕೆ)ಹಾಕಿ, ಸಾಯಂಕಾಲ ಕರಿ ಹರಿಯುವ ದೃಶ್ಯ ರೋಮಾಂಚನಕಾರಿಯಾಗಿದೆ.
ಸAಜೆ ೪ ಗಂಟೆಗೆ ಕಾರಹುಣ್ಣಿಮೆಯ ರೂವಾರಿ ಗ್ರಾಮದ ಹಿರಿಯ ಗೌಡರ ಮನೆತನದ ಹಾಲಿ ಪಿಕೆಪಿಎಸ್ ಅಧ್ಯಕ್ಷ ಬಾಬುಗೌಡ ಪಾಟೀಲರ ಮನೆಯಿಂದ ಶೃಂಗಾರಗೊ0ಡ ಕರಿ ಹರಿಯುವ ಎತ್ತುಗಳ ಭವ್ಯ ಮೇರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ ಅಗಸಿ(ದ್ವಾರ ಬಾಗಿಲು) ಮುಂದಿರುವ ಶ್ರೀಹನುಮಾನ ದೇವಸ್ಥಾನದ ಆವರಣ ಸೇರಿದವು. ಅಲ್ಲಿ ಎತ್ತುಗಳಿಗೆ ಚಂದುಗೌಡ ಪಾಟೀಲರು ಕರಿ ಹರಿಯುವುದಕ್ಕೆ ಚಾಲನೆ ನೀಡಿದರು.
ಈ ಸಲ ಮುಂಗಾರು ಕೆಂದೆತ್ತ ಮತ್ತು ಹಿಂಗಾರು ಬಿಳಿ ಎತ್ತುಗಳು ಕೊನೆವರೆಗೂ ಸಮನಾಗಿ ಓಡಿದವು. ಅಂದರೆ ಮುಂಗಾರು ಹಿಂಗಾರು ಮಳೆ ಸಮ ಪ್ರಮಾಣದಲ್ಲಿ ಬಂದು ರೈತರಿಗೆ ಬೆಳೆಗಳು ಚನ್ನಾಗಿ ಬರುತ್ತವೆ ಎಂಬ ನಂಬಿಕೆ ಜನರಲ್ಲಿ ಇದೆ. ಸಾವಿರಾರು ರೈತಾಪಿಗಳು ಇದನ್ನು ವೀಕ್ಷಿಸಿ ಚಪ್ಪಾಳೆ ತಟ್ಟಿ ಸಂತಸ ಪಟ್ಟರು. ಕರಿ ಹರಿದ ಎತ್ತುಗಳಿಗೆ ಬಾಬುಗೌಡ ಪಾಟೀಲ ಕುಟುಂಬದವರು ಆರತಿ ಎತ್ತಿ ಪೂಜೆಗೈದರು.
“ಪಟ್ಟಣದ ಎಲ್ಲ ರೈತರು ನಾಗರಿಕರು ಕರಿ ಹರಿಯುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ರೈತನಿಗೆ ಸಹಪಾಠಿಯಾಗಿ ದುಡಿವ ಮತ್ತು ಅನ್ನ ನೀಡುವ ಎತ್ತುಗಳ ಸಂಭ್ರಮ ಆಚರಣೆಯಲ್ಲಿ ಭಾಗವಹಿಸಿದ್ದೀರಿ. ಹಿರಿಯರಿಂದ ಬಂದ ಈ ವಾಡಿಕೆ ನಾವು ಚಾಚೂ ತಪ್ಪದೇ ಪ್ರತಿ ವರ್ಷ ಪಾಲಿಸಿಕೊಂಡು ಹೋಗುತ್ತಿದ್ದೇವೆ. ಹಿಂಗಾರು ಮುಂಗಾರು ಬೆಳೆಗಳು ರೈತನಿಗೆ ಸಂತಸ ತರುವುದಾಗಿದೆ.” ಬಾಬುಗೌಡ ಪಾಟೀಲ ಪಿಕೆಪಿಎಸ್ ಅಧ್ಯಕ್ಷ.
ಕಾರ್ಯಕ್ರಮದಲ್ಲಿ ಬಾಬುಗೌಡ ಪಾಟೀಲ, ದುಂಡಪ್ಪ ನಿರಾಳೆ, ದ್ಯಾವಪ್ಪಗೌಡ ಪಾಟೀಲ, ಅಶೋಕ ಕುಲಕರ್ಣಿ, ಮೋನಪ್ಪ ಬಡಿಗೇರ, ಚಂದುಗೌಡ ಪಾಟೀಲ, ಪ.ಪ.ಸ ಪ್ರಕಾಶಗೌಡ ಪಾಟೀಲ, ಸಿದ್ದು ಭಮಶೆಟ್ಟಿ, ಸಂಗಪ್ಪ ಬಿರಾದಾರ, ಶಿವಗೊಂಡ ಬಿರಾದಾರ, ಲಾಲಸಾಬ ಅತ್ತಾರ, ಮಹಾದೇವ ಯಂಕ0ಚಿ, ರಾಮ ಮಾಲಾಪೂರ, ಸತೀಶ ಬಂಡಿ, ಸದಾಶಿವ ಕೌಲಗಿ, ಭೀಮನಗೌಡ ಪಾಟೀಲ, ಮಲ್ಲು ಕಾಮಗೊಂಡ, ಅನೀಲ ಮಲ್ಲಾಡಿ ಸೇರಿದಂತೆ ಪಟ್ಟಣದ ರೈತರು,ನಾಗರೀಕರು ಇದ್ದರು.
15th June 2025
ಚಡಚಣ : ಸತ್ಪçಜೆಗಳನ್ನಾಗಿ ರೂಪಿಸುವ ಜವಾಬ್ದಾರಿ ಹೊಂದಿರುವ ಶಿಕ್ಷಕವೃಂದ ಈ ಸಮಾಜದ ಸರ್ವಶ್ರೇಷ್ಠ ವ್ಯಕ್ತಿ ಅಂತಹ ಶಿಕ್ಷಕರಿಗೆ ನಿವೃತ್ತಿ ಎಂಬುದಿಲ್ಲ. ಇವರು ಸಮಾಜಕ್ಕೆ ಸದಾ ಮಾರ್ಗದರ್ಶಕರಾಗಿರುತ್ತಾರೆ ಎಂದು ಇಂಡಿ ಶಾಸಕ ಯಶವಂತರಾಯ ಗೌಡ ಪಾಟೀಲ ಹೇಳಿದರು.
ಚಡಚಣ ಪಟ್ಟಣದಲ್ಲಿ ನಿವೃತ್ತ ಶಿಕ್ಷಕ ಐ ಎಮ್ ಬೇಂದ್ರೆಕರ ಅವರ ಅಭಿನಂದನಾ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಶಿಕ್ಷಕರು ತಮ್ಮ ಸೇವಾವಧಿಯಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಪಾಠ ಹೇಳಿ, ಸಂಸ್ಕಾರ ಕಲಿಸಿ ಸಮಾಜ ಸೇವೆ ಮಾಡಿದ ಶಿಕ್ಷಕರು ನಿವೃತ್ತಿಯಾಗುವುದು ಸೇವಾ ದಾಖಲೆಯಲ್ಲಿ ಮಾತ್ರವೇ ಹೊರತು ನಿಜವಾದ ಅರ್ಥದಲ್ಲಿ ಸಮಾಜಕ್ಕೆ ಸದಾ ಮಾರ್ಗದರ್ಶಕರಾಗಿಯೇ ಇರುವ ಶಿಕ್ಷಕರಿಗೆ ನಿವೃತ್ತಿ ಎಂಬುದಿಲ್ಲ.
ನನ್ನ ಆತ್ಮೀಯ ಒಡನಾಡಿ ಐ ಎಮ್ ಬೇಂದ್ರೆಕರ ಅದ್ಭುತ ಅಭಿನಂದನಾ ಸಮಾರಂಭ ನೋಡಿದರೆ ಅವರು ಶಿಕ್ಷಕ ಸಂಘಟನೆಗೆ ಹಾಗೂ ಈ ಸಮಾಜಕ್ಕೆ ನೀಡಿದ ಕೊಡುಗೆ ಎಷ್ಟು ದೊಡ್ಡದೆಂಬುದು ತೆರೆದ ಪುಸ್ತಕದಂತಿದೆ. ಬೇಂದ್ರೆಕರವರ ಜನ್ಮಭೂಮಿ ನನ್ನ ಮತಕ್ಷೇತ್ರ ಇಂಡಿ ಆಗಿದ್ದರೂ ಕೂಡಾ ಅವರ ಕರ್ಮ ಭೂಮಿ ಚಡಚಣ ಆಗಿದೆ.
ಚಡಚಣದಲ್ಲಿ ೨೫ ವರ್ಷಗಳ ಪ್ರಾಮಾಣಿಕ ಸೇವೆ ಸಲ್ಲಿಸಿ ವಿದ್ಯಾರ್ಥಿಗಳ, ಶಿಕ್ಷಕರ, ಶಿಕ್ಷಕರ ಸಂಘಗಳ, ಹಾಗೂ ಸಮಾಜದ ಪ್ರೀತಿಗೆ ಪಾತ್ರರಾಗಿದ್ದಾರೆ. ಶಾಸಕನಾಗಿ ನಾನು ನನ್ನ ಒಡನಾಡಿ ಶಿಕ್ಷಕ ಬೇಂದ್ರೆಕರ ಮಾಡಿದ ಅಪಾರ ಸೇವೆ ಬಗ್ಗೆ ನಾನು ಸದಾ ಹೆಮ್ಮೆ ಪಡುತ್ತೇನೆ. ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮ ಅಧ್ಯಕ್ಷ ವಹಿಸಿ ಮಾತನಾಡಿದ ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ ಶಿಕ್ಷಕ ರಾಷ್ಟ್ರದ ಹಾಗೂ ಸಮಾಜದ ನಿಜವಾದ ಸೇವಕ ಇಂತಹ ಶಿಕ್ಷಕರಿಗೆ ನಿವೃತ್ತಿ ಎಂಬುದಿಲ್ಲ ಇವರು ಸದಾ ಸಮಾಜದ ಸೇವಕರು ಹಾಗೂ ಮಾರ್ಗದರ್ಶಕರು. ಬೇಂದ್ರೆಕರ ಶ್ರೇಷ್ಠ ಶಿಕ್ಷಕರ ಸಾಲಿನಲ್ಲಿ ಇರುವ ಶಿಕ್ಷಕ.ಸಮಾಜಕ್ಕೆ ೩೧ ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದ ಅತ್ಯಂತ ಪ್ರಾಮಾಣಿಕ ಹಾಗೂ ಶ್ರೇಷ್ಠ ಶಿಕ್ಷಕ.
ವೃತ್ತಿಯೊಂದಿಗೆ ಶಿಕ್ಷಕ ಸಂಘಟನೆ ಬೆಳೆಸಿ ಶಿಕ್ಷಕರ ಸಾವಿರಾರು ಸಮಸ್ಯೆ ಗಳನ್ನು ಬಗೆಹರಿಸಿ ಶಿಕ್ಷಕರ ಪ್ರೀತಿಗೆ ಪಾತ್ರರಾದ ಹೆಮ್ಮೆಯ ಶಿಕ್ಷಕ. ನಿವೃತ್ತಿ ನಂತರವೂ ನಿಮ್ಮ ಸೇವೆ ಈ ಸಮಾಜಕ್ಕೆ ಹಾಗೂ ನಮ್ಮಂಥ ರಾಜಕಾರಣಿಗಳಿಗೆ ಬೆನ್ನೆಲುಬಾಗಿ ಇರಬೇಕು ಎಂದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ನಿವೃತ ಶಿಕ್ಷಕ ಐ ಎಮ್ ಬೇಂದ್ರೇಕರ ಶಿಕ್ಷಕರಿಗೆ ಮೊದಲು ತ್ಯಾಗ ಭಾವನೆ ಇರಬೇಕು. ತ್ಯಾಗ ಮಾಡಿದ ಶಿಕ್ಷಕ ಮಾತ್ರ ಶಿಕ್ಷಕ ಸಂಘಟನೆಯಲ್ಲಿ, ಶಿಕ್ಷಕ ವೃತ್ತಿಯಲ್ಲಿ ಹಾಗೂ ಸಮಾಜದಲ್ಲಿ ಉನ್ನತ ಮಟ್ಟಕ್ಕೆ ಬೆಳೆಯಲು ಸಾಧ್ಯ. ಇದಕ್ಕೆ ಜೀವಂತ ಉದಾಹರಣೆ ನಾನೇ ಎಂದರು. ಎಸ್ ಎಸ್ ಪಾಟೀಲ,ಎ ಎಸ್ ಸೋನಗಿ ನೇತೃತ್ವದ ಶಿಕ್ಷಕ ಸಂಘಟನೆ ಹಾಗೂ ಶಿಕ್ಷಕರು ತಮಗೆ ತೋರಿದ ಪ್ರೀತಿ ಹಾಗೂ ಅಭಿನಂದನಾ ಸಮಾರಂಭ ನನ್ನ ಜೀವನದ ಅತ್ಯಂತ ಶ್ರೇಷ್ಠ ಕ್ಷಣ ಎಂದು ಭಾವುಕರಾದರು.
ಪ್ರಸ್ತಾವಿಕವಾಗಿ ಮಾತನಾಡಿದ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಂಘದ ಅಧ್ಯಕ್ಷ ಎಸ್ ಎಸ್ ಪಾಟೀಲ ಕಳೆದ ೨೫ ವರ್ಷಗಳವೆರೆಗೆ ಐ ಎಮ್ ಬೇಂದ್ರೇಕರ ಮಾಡಿದ ತ್ಯಾಗ ಪ್ರಾಮಾಣಿಕ ಸೇವೆ ಕೊಂಡಾಡಿದರು.ಶಿಕ್ಷಕರ ಸಂಘಟನೆಗೆ ಅವರ ಕೊಡುಗೆ ಅಪಾರ ಅವರು ಸದಾ ಶಿಕ್ಷಕರ ಸೇವಕರಾಗಿದ್ದು ಸಂಘಟನೆಯ ಶಕ್ತಿಯಾಗಿದ್ದರು. ಅವರ ನಿವೃತ್ತಿ ನಮ್ಮ ಸಂಘಟನೆಗೆ ತುಂಬಲಾರದ ನಷ್ಟ. ನಮ್ಮ ಸಂಘಟನೆಗೆ ಹಾಗೂ ಶಿಕ್ಷಕರ ಸೇವೆಗೆ ಅವರ ಮಾರ್ಗದರ್ಶನ ಸದಾ ಇರಬೇಕೆಂದು ಕೇಳಿಕೊಂಡರು.
ತಾಲೂಕ ಕ್ಷೇತ್ರ ಶಿಕ್ಷಣಾಧಿಕಾರಿ ಸುಜಾತಾ ಹುನೂರ ಮಾತನಾಡಿ ಶಿಕ್ಷಣ ಇಲಾಖೆ ಹಾಗೂ ಶಿಕ್ಷಕರ ನಡುವಿನ ಸೇತುವೆಯಾಗಿ ಬೇಂದ್ರೇಕರ ಮಾಡಿದ ಸೇವೆಯನ್ನು ಕೊಂಡಾಡಿದರು.
ಕಾರ್ಯಕ್ರಮದಲ್ಲಿ ಪ.ಪಂ.ಅಧ್ಯಕ್ಷ ಮಲ್ಲಿಕಾರ್ಜುನ ಧೋತ್ರೆ, ಚಡಚಣ ಕೃಷಿ ಪತ್ತಿನ ಅಧ್ಯಕ್ಷ ಬಾಬುಗೌಡ ಪಾಟೀಲ, ನಿವೃತ್ತ ವೀರ ಯೋಧರ ಸಂಘದ ಅಧ್ಯಕ್ಷ ಕಾಂತುಗೌಡ ಪಾಟೀಲ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ಮಜಗಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎ ಎಸ್ ಸೋನಗಿ, ತಾಲ್ಲೂಕಿನ ವಿವಿಧ ನೌಕರ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಶಿಕ್ಷಕರು ಭಾಗವಹಿಸಿದ್ದರು. ನೌಕರ ಸಂಘದ ನಿರ್ದೇಶಕ ಸುನೀಲ ಯಳಮೇಲಿ ಸ್ವಾಗತಿಸಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಂಘದ ನಿರ್ದೇಶಕ ಗುರು ಜೇವೂರ ಕಾರ್ಯಕ್ರಮ ನಿರೂಪಿಸಿದರು
14th June 2025
ವರದಿ;ರಾಜಶೇಖರ ಡೋಣಜಮಠ
ಚಡಚಣ;ನಾಗಠಾಣ ಮತಕ್ಷೇತ್ರದ ಶಾಸಕರಾದ ವಿಠ್ಠಲ ಕಟಕಧೋಂಡ ಅವರ ವ್ಯಾಪ್ತಿಯಲ್ಲಿ ಬರುವ ಚಡಚಣ ತಾಲೂಕಿನ ನಂದ್ರಾಳ ಗ್ರಾಮದ ನಡುವಿನ ರಸ್ತೆಯಲ್ಲಿ ತಗ್ಗು-ಗುಂಡಿಗಳು ಬಿದ್ದಿದ್ದು, ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ.
ಹದಗೆಟ್ಟ ರಸ್ತೆಯಿಂದ ನಿತ್ಯ ತೆರಳುವ ವಾಹನಗಳು ಹಾಗೂ ಗ್ರಾಮಸ್ಥರಿಗೆ ತೊಂದರೆಯಾಗುತ್ತಿದೆ. ವಾಹನ ಸವಾರರು, ರಸ್ತೆಯಲ್ಲಿ ಬಿದ್ದಿರುವ ತಗ್ಗುಗುಂಡಿಗಳ ಜೊತೆಗೆ ಸಾಗುವ ದುಃಸ್ಥಿತಿ ಎದುರಾಗಿದೆ. ಮಳೆಗೆ ರಸ್ತೆಯಲ್ಲಿ ನೀರು ನಿಲ್ಲುತ್ತಿದ್ದು, ಗುಂಡಿ ತಪ್ಪಿಸಲು ಹೋಗಿ ಅಪಘಾತಗಳಾಗುತ್ತಿದೆ.ಕೆಲವೊಂದುಸಲ ಶಾಲಾ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುವಾಗ ಗುಂಡಿಯಲ್ಲಿ ಬಿದ್ದು ಬಟ್ಟೆ ಹೊಲಸಾಗುವದರಿಂದ ಹಿಡಿದು ಸಣ್ಣ ಗಾಯಗಳಾಗಿರುವ ಘಟನೆ ಕೂಡಾ ಆಗಿವೆ ಎಂದು ಸ್ಥಳಿಯರು ಹೇಳಿದ್ದಾರೆ.
ಈ ಮಾರ್ಗವಾಗಿ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತವೆ. ಕಳೆದ ಕೆಲ ವರ್ಷಗಳಿಂದ ರಸ್ತೆ ಹದಗೆಟ್ಟಿದ್ದರೂ ಅಧಿಕಾರಿಗಳು ಗಮನ ಹರಿಸಿಲ್ಲ. ಇನ್ನೂ ನಿತ್ಯ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆ ಕೆಸರು ಗದ್ದೆಯಾಗಿ ಮಾರ್ಪಟ್ಟಿದೆ. ಮಳೆಯಿಂದಾಗಿ ರಸ್ತೆಗಳು ನೀರಿನಿಂದ ಮುಚ್ಚಿಕೊಂಡಿರುವದರಿ0ದ ವಾಹನಗಳು ಸ್ಲಿಪ್ ಆಗುತ್ತಿವೆ.
ಈ ರಸ್ತೆ ಯಾವಾಗ ದುರಸ್ತಿಯಾಗುತ್ತದೆ ಎಂದು ಜನಸಾಮಾನ್ಯರು ಕಾದು ಕುಳಿತಿದ್ದಾರೆ. ಸಂಚರಿಸಬೇಕಾದ ಜನರು ಹದಗೆಟ್ಟ ರಸ್ತೆಗೆ ಹೆದರಿ ವಾಹನ ರಸ್ತೆಯಲ್ಲಿ ತಗ್ಗು, ಗುಂಡಿಗಳು ಬಿದ್ದಿರುವುದರಿಂದ ಸವಾರರು ಗುಂಡಿ ತಪ್ಪಿಸಲು ಹೋಗಿ ಎದುರಿನಿಂದ ಬರುವ ವಾಹನಗಳಿಗೆ ಡಿಕ್ಕಿ ಹೊಡೆದು ಅಪಘಾತಗಳಾಗಿವೆ. ಅನಾರೋಗ್ಯ ಪೀಡಿತರು, ಗರ್ಭಿಣಿಯರು ಈ ರಸ್ತೆಯಲ್ಲಿ ಸಂಚರಿಸುವುದು ಮತ್ತಷ್ಟು ತ್ರಾಸದಾಯಕವಾಗಿದೆ.
ಈ ರಸ್ತೆಯನ್ನು ಶೀಘ್ರದಲ್ಲಿಯೇ ಅಧಿಕಾರಿಗಳು ದುರಸ್ತಿ ಮಾಡಿ ಸುಗಮ ಸಂಚಾರ ಕಲ್ಪಿಸಿಕೊಡಬೇಕು. ಶಾಸಕರಾದ ವಿಠ್ಠ¯ ಕಟಕಧೋಂಡ ಅವರು ಕೂಡಾ ಈ ಭಾಗದ ಜನರ ಸಮಸ್ಯೆಗೆ ಸ್ಪಂದಿಸಬೇಕು ಎಂದು ಗ್ರಾಮಸ್ಥರು ಕೇಳಿಕೊಳ್ಳುತ್ತಿದ್ದಾರೆ.
* ಪ್ರತಿನಿತ್ಯ ನಂದ್ರಾಳ ಗ್ರಾಮದಿಂದ ಶಾಲೆ, ಕಾಲೇಜು, ಆಸ್ಪತ್ರೆ, ವ್ಯಾಪಾರ ವಹಿವಾಟು ಸಲುವಾಗಿ ಇಂಡಿ, ಹಲಸಂಗಿ, ವಿಜಯಪುರ, ಚಡಚಣ, ಝಳಕಿ ಗ್ರಾಮಗಳಿಗೆ ತೆರಳಬೇಕು ಹದಗೆಟ್ಟ ರಸ್ತೆಯಿಂದ ಬಿದ್ದು ಎದ್ದು ಹಾಗೆ ವಾಹನ ಚಲಾಯಿಸಿಕೊಂಡು ದಿನಾಲು ಸಂಚಾರ ಮಾಡುವುದೇ ಸವಾಲಾಗಿದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತರಲಾಗಿದೆ ಆದರು ಈವರೆಗೆ ರಸ್ತೆ ಕಾಮಗಾರಿಗೆ ಮುಂದಾಗಿಲ್ಲ. ಮುಂದಿನ ದಿನಗಳಲ್ಲಿ ಅದಷ್ಟು ಬೇಗನೆ ಇತ್ತ ಕಡೆ ಗಮನ ಹರಿಸಿ ಆಗುವ ತೊಂದರೆಗಳಿಗೆ ಸಹಕರಿಸಿ ಎಂದು ಗ್ರಾಮಸ್ಥರ ಆಗ್ರಹವಾಗಿದೆ.
ಪರಮೇಶ್ವರ ಕಾಂಬಳೆ ನಿವಾಸಿ
• ನಂದ್ರಾಳ ಗ್ರಾಮಸ್ಥರ ಬಹುದಿನಗಳ ಬೇಡಿಕೆಗೆ ನಾನು ಈಗಾಗಲೆ ಸ್ಪಂಧಿಸಿದ್ದು ಇರುತ್ತದೆ ಅದರಂತೆ ನಾನು ಹದಗೆಟ್ಟ ನಂದ್ರಾಳದಿ0ದ ಮುಖ್ಯ ರಸ್ತೆಗೆ ಕೂಡುವ ಸುಮಾರು ೯ ಕಿ.ಮಿ ರಸ್ತೆ ನಿರ್ಮಾಣದ ೧೦ ಕೋಟಿ ರೂ ಹಣ ಬಿಡುಗಡೆ ಆಗಿದೆ.ಈಗಾಗಲೆ ಟೆಂಡರ್ ಕಾರ್ಯ ಪ್ರಗತಿಯಲ್ಲಿದೆ ಆದರೆ ೯ಕಿ.ಮಿ ರಸ್ತೆ ನಿಮಾಣಕ್ಕೆ ೯ಕೋಟಿ ಸಾಕಾಗುತ್ತದೆ ಉಳಿದ ೧ ಕೋಟಿ ಹಿಂಗಣಿ ರಸ್ತೆ ಅಭೀವೃದ್ದಿಗೆ ಇಡಲು ನಿರ್ಧರಿಸಿದ್ದರಿಂದ ಸ್ವಲ್ಪ ಸಮಸ್ಯೆ ಆಗಿದೆ ಆದರು ಕೆಲವು ತಿಂಗಳಲ್ಲಿ ನಂದ್ರಾಳ ರಸ್ತೆ ನಿರ್ಮಾಣ ಮಾಡಲಿದ್ದೆನೆ.
• ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ
12th June 2025
ಚಡಚಣ;ಚಡಚಣ ತಹಶೀಲ್ದಾರ್ ಕಚೇರಿಯಲ್ಲಿ ನೂತನವಾಗಿ ಆಹಾರ ನಿರೀಕ್ಷಕ ಅಂತ ಶಿವಾನಂದ ಕೋಳಿ ಇವರು ಪ್ರಭಾರಿಯಾಗಿ ಚಾರ್ಜನ್ನು ವಹಿಸಿಕೊಂಡಿರುವುದರಿAದ ಸದರಿಯರನ್ನು ಸನ್ಮಾನಿಸಲಾಯಿತು.
ಕಲ್ಮೇಶ್ ವಾಗ್ಮೋರೆ, ರುದ್ರೇಶ್ ಬನಸೋಡೆ ಶಾಲು ಹೊದಿಸಿ, ಹಾರು ಹಾಕಿ ಸನ್ಮಾನಿಸಿದರು.
ನಂತರ ಮಾತನಾಡಿದ ಚಡಚಣ ಗ್ರೇಡ್ ೨ ತಹಶೀಲ್ದಾರ್ ಆರ್ ಎಸ್ ಚೌಹಾಣ್ ರವರು ಮಾತನಾಡಿ ಬಡ ಹಾಗೂ ನಿರ್ಗತಿಕ ಜನರ ಸೇವೆಗಾಗಿ ತಮ್ಮನ್ನು ಆಹಾರ ನಿರೀಕ್ಷಕ ಅಂತ ನೇಮಿಸಿದ್ದು ತಮ್ಮ ಸೌಭಾಗ್ಯವಾಗಿದ್ದು ಜನ ಸೇವೆಯೆ ಜನಾರ್ಧನ ಸೇವೆ ಅಂತ ತಿಳಿದು ಬಡ ಹಾಗೂ ನಿರ್ಗತಿಕರಿಗೆ ಅನ್ಯಾಯವಾಗದಂತೆ ತ್ವರಿತ ಗತಿಯಲ್ಲಿ ಸೇವೆಸಲ್ಲಿಸಿ ರೇಶನ್ ಕಾರ್ಡ ಬಡವರಿಗೆ ವಿತರಿಸಿ ಬಡವರ ಗೌರವಕ್ಕೆ ಪಾತ್ರರಾಗಿರಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪ ತಹಶೀಲದಾರರು ಕೆ ವೈ ಹೊಸಮನಿ,ಕಲ್ಮೇಶ್ ವಾಗ್ಮೋರೆ,ರುದ್ರೇಶ್ ಬನಸೋಡೆ,ರವಿ ಕಾಂಬಳೆ ರೇವುತಂಗವ, ಸಂಜು ಬೆಳ್ಳೆನವರ,ಶಾಕಿರ್ ಮುಲ್ಲಾ ಮರಗೂರ, ಶಿವರಾಜ್ ಶಿವಶರಣ,ಸುಭಾಸ್ ಗಾಯಕವಾಡ ಇನ್ನಿತರರು ಇದ್ದರು.