12th June 2025
ಚಡಚಣ;ಚಡಚಣ ತಹಶೀಲ್ದಾರ್ ಕಚೇರಿಯಲ್ಲಿ ನೂತನವಾಗಿ ಆಹಾರ ನಿರೀಕ್ಷಕ ಅಂತ ಶಿವಾನಂದ ಕೋಳಿ ಇವರು ಪ್ರಭಾರಿಯಾಗಿ ಚಾರ್ಜನ್ನು ವಹಿಸಿಕೊಂಡಿರುವುದರಿAದ ಸದರಿಯರನ್ನು ಸನ್ಮಾನಿಸಲಾಯಿತು.
ಕಲ್ಮೇಶ್ ವಾಗ್ಮೋರೆ, ರುದ್ರೇಶ್ ಬನಸೋಡೆ ಶಾಲು ಹೊದಿಸಿ, ಹಾರು ಹಾಕಿ ಸನ್ಮಾನಿಸಿದರು.
ನಂತರ ಮಾತನಾಡಿದ ಚಡಚಣ ಗ್ರೇಡ್ ೨ ತಹಶೀಲ್ದಾರ್ ಆರ್ ಎಸ್ ಚೌಹಾಣ್ ರವರು ಮಾತನಾಡಿ ಬಡ ಹಾಗೂ ನಿರ್ಗತಿಕ ಜನರ ಸೇವೆಗಾಗಿ ತಮ್ಮನ್ನು ಆಹಾರ ನಿರೀಕ್ಷಕ ಅಂತ ನೇಮಿಸಿದ್ದು ತಮ್ಮ ಸೌಭಾಗ್ಯವಾಗಿದ್ದು ಜನ ಸೇವೆಯೆ ಜನಾರ್ಧನ ಸೇವೆ ಅಂತ ತಿಳಿದು ಬಡ ಹಾಗೂ ನಿರ್ಗತಿಕರಿಗೆ ಅನ್ಯಾಯವಾಗದಂತೆ ತ್ವರಿತ ಗತಿಯಲ್ಲಿ ಸೇವೆಸಲ್ಲಿಸಿ ರೇಶನ್ ಕಾರ್ಡ ಬಡವರಿಗೆ ವಿತರಿಸಿ ಬಡವರ ಗೌರವಕ್ಕೆ ಪಾತ್ರರಾಗಿರಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪ ತಹಶೀಲದಾರರು ಕೆ ವೈ ಹೊಸಮನಿ,ಕಲ್ಮೇಶ್ ವಾಗ್ಮೋರೆ,ರುದ್ರೇಶ್ ಬನಸೋಡೆ,ರವಿ ಕಾಂಬಳೆ ರೇವುತಂಗವ, ಸಂಜು ಬೆಳ್ಳೆನವರ,ಶಾಕಿರ್ ಮುಲ್ಲಾ ಮರಗೂರ, ಶಿವರಾಜ್ ಶಿವಶರಣ,ಸುಭಾಸ್ ಗಾಯಕವಾಡ ಇನ್ನಿತರರು ಇದ್ದರು.
12th June 2025
ವರದಿ ; ರಾಜಶೇಖರ ಡೋಣಜಮಠ.
ಚಡಚಣ;ಸುಮಾರು ೮ ವರ್ಷಗಳ ಹಿಂದೆ ೪೮೦ ಕೋಟಿ ವೆಚ್ಚದಲ್ಲಿ ಪ್ರಾರಂಭವಾದ ಚಡಚಣ ಏತ ನೀರಾವರಿ ಯೋಜನೆಯ ಕಾಮಗಾರಿಯನ್ನು ಕೆಬಿಜೆಎನ್ಎಲ್ ಎಂಡಿ ಕೆ.ಪಿ ಮೋಹನ ರಾಜ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಕಳಪೆ ಕಾಮಗಾರಿಯ ಕುರಿತು ಅನೇಕ ಕಡೆಗಳಲ್ಲಿ ರೈತರು ಎಂಡಿಯವರನ್ನು ಸುತ್ತುವರಿದು ಕಾಮಗಾರಿ ಮಾಡದೆ ಯೋಜನೆ ಪೂರ್ಣಗೊಂಡಿದೆ ಎಂದು ತೋರಿಸಿ ಅಧಿಕಾರಿಗಳು ಹಣ ಲಪಟಾಯಿಸಿದ್ದಾರೆ ಎಂದು ಆರೋಪಿಸಿದರು ಅಷ್ಟೆ ಅಲ್ಲದೆ ರೈತರು ಸಾಬೀತುಕೂಡಾ ಮಾಡಿದರು.
ಕೆಬಿಜೆಎನ್ಎಲ್ ಅಧಿಕಾರಿಗಳು(ಝಳಕಿ,ಆಲಮೇಲ,ಇಂಡಿ,ರಾ0ಪೂರ ಇಇ, ಎಇಇ ಗಳು) ಕೆಲಸ ಮುಗಿಸಿದ ಕೆಲವು ಕಡೇಗಳಲ್ಲಿ ಮಾತ್ರ ಕರೆದುಕೊಂಡು ಹೋದರು (ಜಾಣಕುರುಡರಂತೆ)ಎ0.ಡಿ ಭೇಟಿ ನೀಡಿದ ಬಹುತೇಕ ಕಡೆಗಳಲ್ಲಿ ವಾಸ್ತವವಾಗಿ ಕಾಮಗಾರಿ ಮುಗಿಯದೆ ಇರುವದು ಗಮನಕ್ಕೆ ಬಂದಿತು ಆದರೇ ಅಧಿಕಾರಿಗಳ ದಾಖಲಾತಿಯಲ್ಲಿ (ರಿಪೋರಟಗಳಲ್ಲಿ) ಎಲ್ಲ ಕಾಮಗಾರಿ ಮುಗಿದು ಗುತ್ತಿಗೆದಾರರ ಬಿಲ್ಲು ಕೊಟ್ಟಿರುವ ಸಂಗತಿ ಬೆಳಕಿಗೆ ಬಂದಿತು.ಎ0.ಡಿ. ಅಧಿಕಾರಿಗಳಿಗೆ ಯೋಜನೆಯ ಕುರಿತು ಮಾಹಿತಿ ಕೇಳಿದಾಗ ಬಹುತೇಕ ಅಧಿಕಾರಿಗಳು ಉತ್ತರಕೊಡಲು ತಡಬಡಾಯಿಸಿದ್ದು ನಗೆಪಾಟಲಿಗೆ ಇಡಾಯಿತು. ಅಧಿಕಾರಿಗಳು ಕಾಂಟ್ಯಾçಕ್ಟರ ಮೇಲೆ ಜವಾಬ್ದಾರಿ ಹೊರೆಸುವ ಪ್ರಯತ್ನವನ್ನು ಮಾಡಿದರು.
ಚಡಚಣ ಏತ ನೀರಾವರಿ ವ್ಯಾಪಿಯಲ್ಲಿ ೬೦೦ ಔಟಲೆಟ್ ಗಳಿದ್ದು ಇದರಲ್ಲಿ ಕೇವಲ ೧೫೦ ಔಟಲೆಟ್ಗಳಲ್ಲಿ ಮಾತ್ರ ಪ್ರಾಯೋಗಿಕವಾಗಿ ನೀರು ಹರಿದಿರುವದನ್ನು ಸ್ವತ ಅಧಿಕಾರಿಗಳ ಒಪ್ಪಿಕೊಂಡರು.ಆದರೆ ನೀರು ರೈತರ ಹೊಲಗಳಿಗೆ ತಲುಪುವ ವ್ಯವಸ್ಥೆ ಎಂಡಿ ಭೇಟಿ ನೀಡಿದ ಪ್ರತಿ ಸ್ಥಳಗಳಲ್ಲಿ ರೈತರು ಯೋಜನೆಯ ಅಕ್ರಮದ ಕುರಿತು ಮಾಹಿತಿಯನ್ನು ನೀಡಿದರು. ಈ ಸಂದರ್ಭದಲ್ಲಿ ನಾಗಠಾಣ ಶಾಸಕರಾದ ವಿಠ್ಠಲ ಕಟಕಧೋಂಡ ಮತ್ತು ಕೆಬಿಜೆಎನ್ಎಲ್ ಎಲ್ಲ ಹಂತದ ಅಧಿಕಾರಿಗಳು ಹಾಜರಿದ್ದರು.
ನಂತರ ಚಡಚಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೆಂಗಳುರಿನ ಮೋಹನ ಕುಮಾರ ತಾವು ಕಳೆದ ಮೂರು ದಿನಗಳಿಂದ ಇಂಡಿ ಮತ್ತು ಚಡಚಣ ತಾಲೂಕುಗಳ ಕೆರೆ ತುಂಬುವ ಯೋಜನೆ ಮತ್ತು ಚಡಚಣ ಏತ ನೀರಾವರಿ ಯೋಜನೆ ಕುರಿತು ಅವಲೋಕನ ನಡೆಸಿದ್ದೆನೆ. ಚಡಚಣ ಏತ ನೀರಾವರಿಯ ವಿಷಯದಲ್ಲಿ ಲೋಪಗಳು ನಡೆದಿರುವದು ನನ್ನ ಗಮನಕ್ಕೆ ಬಂದಿದೆ. ಈ ದಿಸೆಯಲ್ಲಿ ಅಧಿಕಾರಿಗಳ ಸಭೆಯನ್ನು ನಡೆಸಿ ಕುಲಂಕುಶವಾಗಿ ಪರಿಶೀಲನೆ ನಡೆಸುತ್ತೆನೆ ಮತ್ತು ೬ ತಿಂಗಳಲ್ಲಿ ಈ ಯೋಜನೆ ವ್ಯವಸ್ಥಿತ ರೀತಿಯಲ್ಲಿ ಕಾರ್ಯರೂಪಗೊಳ್ಳುವಂತೆ ಮಾಡುತ್ತೆನೆ. ನಾಗಠಾಣ ಶಾಸಕರು ನನಗೆ ಅನೇಕ ಬಾರಿ ಭೇಟಿಯಾಗಿ ಈ ಯೋಜನೆಯ ಕುರಿತು ಮಾಹಿತಿಯನ್ನು ನೀಡಿದ್ದಾರೆ. ಈ ಯೋಜನೆಗೆ ಸ್ಕಾಡ ಅಳವಡಿಸಬೇಕು ಎಂಬ ವಿನಂತಿಯನ್ನು ಮಾಡಿದ್ದಾರೆ. ಈ ದಿಸೆಯಲ್ಲಿ ಇಗಾಗಲೆ ಸರಕಾರದ ಮಟ್ಟದಲ್ಲಿ ಪ್ರಕ್ರಿಯ ಪ್ರಾರಂಭವಾಗಿದೆ ಎಂದು ಹೇಳಿದರು.
ಯೋಜನೆ ಹಳ್ಳು ಹಿಡಿಯುವಂತೆ ಮಾಡಿದ ಅಧಿಕಾರಿಗಳ ಮೇಲೆ ಕ್ರಮ ಕೈಕೊಳ್ಳುತ್ತಿರಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ನಾನು ಮೊದಲು ಯೋಜನೆ ಸಮಗ್ರ ಮಾಹಿತಿಯನ್ನು ಪಡೆಯುತ್ತೆನೆ ಮತ್ತು ಮುಂದೆ ಕ್ರಮ ಕೈಕೊಳ್ಳುವಾಗಿ ಹೇಳಿದರು. ಚಡಚಣ ತಾಲೂಕಿನ ಕೆರೆಗಳನ್ನು ತುಂಬುವ ಕುರಿತು ಕೇಳಿದ ಪ್ರಶೆಗೆ ಅಧಿಕಾರಿಗಳು ಶೇ.೩೦ ರಷ್ಟು ಕೆರೆ ತುಂಬಿದ್ದೆವೆ ಎಂದು ಸುಳ್ಳು ಹೇಳಿದರು ಅದಕ್ಕೆ ಹೊಸದಿಗಂತ ಪತ್ರಕರ್ತ ಮೊನ್ನೆ ಕೆಲವು ದಿನಗಳಿಂದಈ ಭಾಗದಲ್ಲಿ ಭಾರಿ ಮಳೆ ಬಂದ ಪರಿಣಾಮ ಕೆರೆಗಳು ಶೇ.೩೦ ತುಂಬಿವೆ ಹೊರತಾಗಿ ಇವರು ಬಿಟ್ಟ ನೀರಿನಿಂದಲ್ಲ ಎಂದರು.ಮದ್ಯಪ್ರವೇಶಿಸಿದ ಎಂ.ಡಿ.ಮೋಹನ ರಾಜ ಅವರು ಖಂಡಿತ ಈ ಭಾಗದ ಕೆರೆಗಳನ್ನು ಮುಂದಿನ ದಿನಗಳಲ್ಲಿ ೭೦% ತುಂಬಿಸುವ ಆಶ್ವಾಸನೆಯನ್ನು ನೀಡುವದಾಗಿ ಹೇಳಿದರು.
ಚಡಚಣ ನೀರಾವರಿ ಯೋಜನೆ ೮ ವರ್ಷಗಳ ಹಿಂದೆ ೪೮೦ ಕೋಟಿ ರೂ ವೆಚ್ಚದಲ್ಲಿ ಪ್ರಾರಂಭವಾಗಿದೆ ಆದರೇ ಈಗ ಅಂದಾಜು ವೆಚ್ಚ ೨೦೦೦ ಕೋಟಿ ರೂ ಬೇಕಾಗುತ್ತದೆ ಎಂದು ಸ್ವಥ ಎಂಡಿ ಕೆ.ಪಿ ಮೋಹನ ರಾಜ
ಕೆಬಿಜೆಎನ್ಎಲ್ ಟೇಲ್ ಎಂಡ ಕಾಲುವೆಗಳಿಗೆ ನೀರು ಹರಿಸುವ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಕ್ರಮ ಕೈಕೊಳ್ಳುವಾಗಿ ಹೇಳಿದರು. ಈ ಸಂದರ್ಭದಲ್ಲಿ ಕೆಬಿಜೆಎನ್ಎಲ್ ಮುಖ್ಯ ಇಂಜನೀಯರ ಎಚ್ ರವಿಶಂಕರ, ಸುಪರಿಡೆಂಟ್ ಇಂಜನೀಯರ ಮನೋಜಕುಮಾರ ಗಡಬಳ್ಳಿ, ಆಲಮೇಲ, ಝಳಕಿ ಮತ್ತು ರಾಂಪೂರದ ಇಇ, ಎಇಇಗಳು ಹಾಜರಿದ್ದರು.
*ವಿಠ್ಠಲ ಕಟಕಧೋಂಡ ಶಾಸಕರು ನಾಗಠಾಣ
ಚಡಚಣ ಏತ ನೀರಾವರಿ ಚಡಚಣ ಭಾಗದ ರೈತರ ಹತ್ತಾರ ವರ್ಷದ ಕನಸಾಗಿದೆ. ಆದರೆ ಹತ್ತು ವರ್ಷಗಳಲ್ಲಿ ಆಗಿಹೋದ ಅಧಿಕಾರಿಗಳು ಯೋಜನೆಯನ್ನು ಸಂಪೂರ್ಣವಾಗಿ ಹಳ್ಳ ಹಿಡಿಸಿದ್ದಾರೆ. ನಾನು ಈ ಯೋಜನೆ ಜಾರಿಯಾಗಿ ರೈತರ ಹೊಲಗಳಿಗೆ ನೀರು ಹರಿಯುವವರೆಗೆ ಸುಮ್ಮನೆ ಕೂಡುವದಿಲ್ಲ. ಚಡಚಣ ಭಾಗದ ರೈತರಿಗೆ ಯಾವುದೆ ನೀರಾವರಿ ಯೋಜನೆಗಳು ಮುಟ್ಟಿಲ್ಲ, ಈ ಯೋಜನೆಯನ್ನು ಅಧಿಕಾರಿಗಳು ಹಳ್ಳ ಹಿಡಿಸುತ್ತಿದ್ದಾರೆ. ನಾನು ಇದಕ್ಕೆ ಆಸ್ಪದ ನೀಡುವದಿಲ್ಲ. ಆದ್ದರಿಂದಲೆ ಎಂಡಿ ಇವರನ್ನು ಪ್ರತ್ಯಕ್ಷ ಸಮೀಕ್ಷೆಗೆ ಇಲ್ಲಿ ಕರೆದುಕೊಂಡು ಬಂದಿದ್ದೆನೆ.
10th June 2025
ಚಡಚಣ : ಪಟ್ಟಣದ ವಿರಕ್ತಮಠದ ಲಿಂ.ಮನಿಪ್ರಷ.ಶಿವಾನ0ದ ಸ್ವಾಮೀಜಿಯವರ ೨೯ ನೇ ಪುಣ್ಯ ಸ್ಮರಣೆ ಕಾರ್ಯಕ್ರಮ ಶನಿವಾರಜರುಗಿತು.
ಬೆಳಗ್ಗೆ ೫.೩೦ ರಿಂದ ೭ ಗಂಟೆಗೆ ಸಾಗರ ಹಿರೇಮಠ ಅವರಿಂದ ಲಿಂ.ಶಿವಾನ0ದ ಶ್ರೀಗಳ ಗದ್ದುಗೆಗೆ ಮಹಾ ರುದ್ರಾಭಿಷೇಕ ಜರುಗಿತು. ನಂತರ ಸಹಸ್ರ ಬಿಲ್ವಾರ್ಚನೆ, ಮಹಾ ಮಂಗಳಾರುತಿ ಭಕ್ತರ ಸಮ್ಮುಖದೊಂದಿಗೆ ಪುಷ್ಪವೃಷ್ಠಿ ಕಾರ್ಯಕ್ರಮಗಳು ಜರುಗಿದವು.ಪಟ್ಟಣದ ಎಲ್ಲ ಭಕ್ತಾಧಿಗಳ ಕಾಣಿಕೆಯಿಂದ ಮಹಾಪ್ರಸಾದದ ವ್ಯವಸ್ಥೆ ಮಾಡಿದ್ದರು.
ಸಂಜೆ ೭ ರಿಂದ ೧೦ ರ ವರೆಗೆ ಗಾನಕೋಗಿಲೆ ಚಂದ್ರಶೇಖರ ಕಾಮಗೊಂಡ ಹಾಗೂ ಸಂಗಡಿಗರಿ0ದ ಸಂಗೀತ ಭಜನೆ ಕಾರ್ಯಕ್ರಮ ಜರುಗಿತು.
ಪಟ್ಟಣದ ವಿರಕ್ತ ಮಠವು ಪುರಾತನ ಕಾಲದಲ್ಲಿ ತನ್ನದೆ ಆದ ಪ್ರಖ್ಯಾತಿ ಹೊಂದಿತ್ತು.ಸ್ವಾತ0ತ್ರ ಕಾಲದಲ್ಲಿ ಶ್ರೀ ವಿರಕ್ತ ಮಠದ ಕೊಡುಗೆ ಅಪಾರ. ಭಾರತಕ್ಕೆ ಸ್ವಾತಂತ್ರ ಸಿಗುವ ಮೊದಲು ಇಲ್ಲಿ ೪೨ ಸ್ವಾತಂತ್ರ ಯೋಧರ ಅಡಗುತಾಣ ವಾಗಿದ್ದಲ್ಲದೆ ಇಲ್ಲಿ ಸ್ವಾತಂತ್ರ ಸಂಗ್ರಾಮದ ಕಾರ್ಯ ಚಟುವಟಿಕೆಗಳು ಸ್ವಾತಂತ್ರ ಯೋಧ ದಿ.ಜೀವರಾಜ ಶೇಡಜಿ ಹಾಗೂ ಶ್ರೀಗಳ ಸಾನಿಧ್ಯದಲ್ಲಿ ಜರಗುತ್ತಿದ್ದವು.
ಲಿಂ.ಶಿವಾನ0ದ ಶ್ರೀಗಳ ಪುಣ್ಯಸ್ಮರಣೆಯ ಸಾನ್ನಿಧ್ಯ ವಹಿಸಿ ವಿರಕ್ತ ಮಠದ ಉತ್ತರಾಧಿಕಾರಿ ಮನಿಪ್ರ ಷಡಕ್ಷರಿ ಸ್ವಾಮೀಜಿ ಅವರು ಮಾತನಾಡಿ ೭ ನೇ ಪೀಠಾಧೀಶ ಲಿಂ.ಮನಿಪ್ರಷ.ಶಿವಾನ0ದ ಸ್ವಾಮೀಜಿ ಅಪ್ರತಿಮ ಪುರಾಣಿಕರಾಗಿದ್ದರು. ಧಾರ್ಮಿಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತ, ತಮ್ಮ ವಿಶಿಷ್ಟವಾದ ಜ್ಞಾನವನ್ನು ಭಕ್ತರಿಗೆ ಹರಡುತ್ತ ಧರ್ಮ ಜಾಗೃತಿ ಮೂಡಿಸಿದ್ದವರು.
ಅವರು ಹೆಚ್ಚಾಗಿ ಧಾರವಾಡ, ಹಾವೇರಿ, ಗದಗ, ಹುಬ್ಬಳ್ಳಿ, ಅಥಣಿ, ಚಿತ್ರದುರ್ಗ ಮುಂತಾದ ಕಡೆಗಳಲ್ಲಿ ಪುರಾಣ ಪ್ರವಚನಗಳನ್ನು ಮಾಡುತ್ತ ಭಕ್ತರ ಮನದಲ್ಲಿ ಅಚ್ಚಳಿಯದೇ ಉಳಿದವರು ಎಂದು ವಿರಕ್ತ ಮಠದ ಉತ್ತರಾಧಿಕಾರಿ ಮನಿಪ್ರ ಷಡಕ್ಷರಿ ಸ್ವಾಮೀಜಿ ಹೇಳಿದರು.
ಪೂಜ್ಯರು ಧಾರ್ಮಿಕ ತತ್ವಗಳನ್ನು ಅತ್ಯಂತ ಸರಳವಾದ ವಿಶಿಷ್ಟವಾದ ಹಾಸ್ಯದ ಶೈಲಿಯಲ್ಲಿ ಸಾಮಾನ್ಯರಿಗೆ ತಿಳಿಯುವಂತೆ ಪ್ರವಚನದ ಮೂಲಕ ತಿಳಿ ಹೇಳುತ್ತಿದ್ದರು. ನೇರ ನುಡಿಯ ಅತ್ಯಂತ ಸರಳ ವ್ಯಕ್ತಿತ್ವದ ಮತ್ತು ಅತ್ಯಂತ ದುರ್ಲಭವಾದ ಜ್ಞಾನದ ಅನುಭವ ಹೊಂದಿದ ಇವರು ಭಕ್ತರ ಸಂಕಷ್ಟಗಳಿಗೆ ಸ್ಪಂದಿಸುವವರಾಗಿದ್ದರು ಎಂದರು.
ಡಾ. ಡಿ.ಬಿ. ಕಟಗೇರಿ, ಸಿದ್ದಯ್ಯ ಸ್ವಾಮೀಜಿ, ಪ್ರಾಚಾರ್ಯ ಎಂ.ವಿ. ಕಟಗೇರಿ, ನಿವೃತ್ತ ಡಿವೈಎಸ್ಪಿ ಎಂ.ಎಸ್.ಮಾಳಿ,ಸಿ.ಆರ್.ಅವಜಿ, ದೇವಪ್ಪಗೌಡ ಪಾಟೀಲ, ರಾಜು ಡೋಣಗಾಂವ. ನಾಗರಾಜ ನಿರಾಳೆ,ಚೇತನಕುಮಾರ ನಿರಾಳೆ, ಶಿವರುದ್ರಪ್ಪ ಭಂಡರಕವಠೆ, ಕುಬೇರ ಸಿಂಧೆ,ಮಲ್ಲು ಕಟ್ಟಿಮನಿ,ಜಿ.ಡಿ.ಪಾವಲೆ,ಹರಳಯ್ಯ ಸಮಾಜದವರು ಹಾಗೂ ಚಡಚಣ ಗ್ರಾಮದ ಭಕ್ತವೃಂದ ಇದ್ದರು.
2nd June 2025
ವರದಿ ; ರಾಜಶೇಖರ ಡೋಣಜಮಠ
ಚಡಚಣ;ಇಲಾಖೆಗಳ ಮಧ್ಯೆ ಸಮನ್ವದ ಕೊರತೆ ಇದ್ದರೆ ಸಾರ್ವಜನಿಕರು ಹೇಗೆ ತೊಂದರೆ ಅನುಭವಿಸುತ್ತಾರೆ ಎನ್ನುವದಕ್ಕೆ ಉತ್ತಮ ಉದಾರಹಣೆ ಚಡಚಣ ಪಟ್ಟಣ.
ಹೌದು ಚಡಚಣ ಪಟ್ಟಣದಲ್ಲಿ ಪಪಂ ಅಧಿಕಾರಿಗಳು ೧೫ ದಿನಕ್ಕೊಮ್ಮೆ ನೀರು ಪೂರೈಸುತ್ತಿದ್ದಾರೆ, ಇದರಿಂದಾಗಿ ಸಾರ್ವಜನಿಕರು ತೀವ್ರ ತೊಂದರೆ ಅನುಭಸುತ್ತಿದ್ದಾರೆ. ಬೇಸಿಗೆ ಇದೆ ನೀರಿನ ಮೂಲ ಬತ್ತಿ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ತಿಳಿದುಕೊಂಡರು ಅದು ತಪ್ಪು.
ಏಕೆಂದರೆ ಸದ್ಯ ಭೀಮಾ ನದಿಯಲ್ಲಿ ಸಾಕಷ್ಟು ನೀರಿದ್ದು, ಪಪಂ ಅಧಿಕಾರಿಗಳು ಸರಿಯಾಗಿ ಸರಿಯಾಗಿ ನೀರಿನ ನಿರ್ವಹಣೆ ಮಾಡಿದರೆ ಚಡಚಣ ಪಟ್ಟಣಕ್ಕೆ ೨-೩ ದಿನಕ್ಕೊಮ್ಮೆ ನೀರು ಕೊಡಬಹುದು. ಆದರೆ ಈ ನೀರಿನ ಸಮಸ್ಯೆಗೆ ಪ್ರಮುಖ ಕಾರಣ ವಿದ್ಯುತ್ ಪೂರೈಕೆ.
ಚಡಚಣ ಪಟ್ಟಣಕ್ಕೆ ನೀರು ಪೂರೈಸುವ ಪಂಪಸೆಟ್ಟುಗಳಿಗೆ ವಿದ್ಯುತ್ತ ಪೂರೈಸಲು ಹೊಳಿಸಂಖ ಹತ್ತಿರ ಜಾಕವೆಲ್ ನಿರ್ಮಾಣಮಾಡಲಾಗಿದೆ. ಈ ಜಾಕವೆಲ್ಗೆ ಚಡಚಣದಿಂದ ಒಂದು ವಿಶೇಷ ವಿದ್ಯುತ್ ಲೈನ್ ವ್ಯವಸ್ಥೆಯನ್ನು ಮಾಡಲಾಗಿತ್ತು. ಆದರೆ ಕೆಪಿಟಿಎಸ್ಎಲ್ ಅಧಿಕಾರಿಗಳು ಈ ಎಕ್ಸಪ್ರೇಸ್ ಲೈನಗೆ ಹತ್ತಳ್ಳಿ, ಹಾವಿನಾಳ, ಸಂಖ ಮತ್ತು ಉಮರಾಣಿ ಗ್ರಾಮಗಳಿಗೆ ವಿದ್ಯುತ್ ಪೂರೈಸಲು ಅವಕಾಶ ಕೊಟ್ಟಿದ್ದಾರೆ. ಈ ಗ್ರಾಮಗಳಲ್ಲಿ ವಿದ್ಯುತ್ ತೊಂದರೆಯಾದರೆ ಪ್ರತಿ ಬಾರಿ ವಿದ್ಯುತ್ತಚ್ಚಕ್ತಿಯನ್ನು ಕಡಿತಗೊಳಿಸಬೇಕಾಗುತ್ತದೆ. ಇದರಿಂದಾಗಿ ಚಡಚಣ ಪಟ್ಟಣಕ್ಕೆ ಭೀಮಾ ನದಿಯಿಂದ ನಿರಂತರ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ.
ಇದರಿಂದಾಗಿ ಪಟ್ಟಣದ ೧೬ ವಾರ್ಡಗಳಲ್ಲಿ ೧೨-೧೫ ದಿನಗಳಿಗೊಮ್ಮೆ ನೀರು ಪೂರೈಸಲಾಗುತ್ತಿದೆ. ಈ ಕುರಿತು ಪಪಂ ಅಧ್ಯಕ್ಷರನ್ನು ಮತ್ತು ಮುಖ್ಯಾಧಿಕಾರಿಗಳನ್ನು ಕೇಳಿದರೆ ವಿದ್ಯುತ್ ಸಮಸ್ಯೆಯಿಂದ ಹೀಗಾಗುತ್ತಿದೆ ಎನ್ನುತ್ತಾರೆ. ಗಂಡ-ಹೆAಡತಿಯ ನಡುವೆ ಕೂಸು ಬಡವಾಯಿತು ಎನ್ನುವ ಹಾಗೆ ಪಪಂ ಮತ್ತು ಹೆಸ್ಕಾಂ ನಡುವೆ ಸಮನ್ವಯದ ಕೊರತೆಯಿಂದಾಗಿ ಚಡಚಣದ ಸಾರ್ವಜನಿಕರು ನಿರಿಲ್ಲದೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ತಕ್ಷಣ ಎರಡು ಇಲಾಖೆಯ ಅಧಿಕಾರಿಗಳು ಕುಳಿತು ಸಮಸ್ಯೆಯನ್ನು ಬಗೆಹರಿಸಿ ಚಡಚಣ ಪಟ್ಟಣಕ್ಕೆ ಕುಡಿಯುವ ನೀರಿನ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎನ್ನುವದು ಸಾರ್ವಜನಿಕರ ಅಪೆಕ್ಷೆಯಾಗಿದೆ.
ಇನ್ನು ಮಳೆಗಾಲ ಪ್ರಾರಂಭವಾದರೆ ವಿದ್ಯುತ್ ಕಂಬ ಬಿದ್ದು ತಂತಿ(ಲೈನ್)ಕಟ್ಟಾಗಿ ವಿದ್ಯುತ್ ಸಮಸ್ಯೆ ಇನ್ನಷ್ಟು ಉಲ್ಭಣಗೊಳ್ಳುತ್ತದೆ ಇದರಿಂದ ಪಟ್ಟಣಕ್ಕೆ ನೀರು ಪೂರೈಕೆ ತಿಂಗಳಿಗೊಮ್ಮೆ ಆದರು ಆಗುತ್ತದೆ.
ಮಲ್ಲಿಕಾರ್ಜುನ ಧೋತ್ರೆ ಅಧ್ಯಕ್ಷರು ಪಪಂ ಚಡಚಣ
ಚಡಚಣಕ್ಕೆ ನೀರು ಪೂರೈಸುವ ವಿದ್ಯುಚ್ಚಕ್ತಿ ಲೈನಗೆ ಹೆಸ್ಕಾಂ(ಕೆಇಬಿ) ಅಧಿಕಾರಿಗಳು ಕೆಲವು ಹಳ್ಳಿಗಳ ನಿರಂತರ ಜ್ಯೋತಿ ವಿದ್ಯುತ್ ಕೊಟ್ಟಿರುವದರಿಂದ ಈ ಸಮಸ್ಯೆಯಾಗುತ್ತಿದೆ. ನಾವು ಅನೇಕ ಬಾರಿ ಈ ಸಮಸ್ಯೆಯನ್ನು ಸರಿಪಡಿಸುವಂತೆ ಕೋರಿ ಹೆಸ್ಕಾಂ(ಕೆಇಬಿ) ಅಧಿಕಾರಿಗಳಿಗೆ ಮನವಿಯನ್ನು ಕೊಟ್ಟಿದ್ದೆವೆ. ಅವರು ನಮ್ಮ ಮನವಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಇದರಿಂದಾಗಿ ಭೀಮಾ ನದಿಯಲ್ಲಿ ನೀರಿದ್ದರೂ ಚಡಚಣದ ಜನ ನೀರಿನ ಸಮಸ್ಯೆ ಎದುರಿಸುವಂತಾಗಿದೆ. ಈ ದಿಸೆಯಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿ ಶಿಘ್ರದಲ್ಲಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೆನೆ.
ವಿಜಯಕುಮಾರ ಹವಾಲ್ದಾರ ಎಇಇ ಹೆಸ್ಕಾಂ ಚಡಚಣ
ಚಡಚಣ ನೀರು ಪೂರೈಕೆಯ ಮೇನ್ ಲೈನಿಗೆ ಕೆಲವು ಹಳ್ಳಿಗಳಿಗೆ ವಿದ್ಯುತ್ ಜೋಡಣೆ ನೀಡಿದ್ದು ನನ್ನ ಗಮನಕ್ಕೆ ಬಂದಿದೆ,. ಇದು ಕೆಲವು ವರ್ಷಗಳ ಹಿಂದೆ ನಡೆದಿದೆ, ಇಗ ಇದನ್ನು ಮೇಲಾಧಿಕಾರಿಗಳ ಮತ್ತು ಶಾಸಕರ ಗಮನಕ್ಕೂ ತರಲಾಗಿದೆ. ಇಗಾಗಲೆ ಎಷ್ಟಿಮೇಶನ್ ಮಾಡಲಾಗಿದ್ದು ಒಂದು ತಿಂಗಳಲ್ಲಿ ಸಮಸ್ಯೆ ಪರಿಹಾರವಾಗಲಿದೆ.
25th April 2025
ಚಡಚಣ: ವಿಜಯಪುರ ಸೋಲಾಪುರ ರಾಷ್ಟ್ರೀಯ ಹೆದ್ದಾರಿಯ ಹೊರ್ತಿ, ಧೂಳಖೇಡ ಮಹಾ ಮಾರ್ಗದ ಬದಿಯಲ್ಲಿ ಸಾಮಾಜಿಕ ಅರಣ್ಯ ಇಲಾಖೆ ಇಂಡಿ ವತಿಯಿಂದ ೨೦೨೫_೨೬ ನೇ ಸಾಲಿನ ಮುಂಗಾರು ಹಂಗಾಮಿನ ಸಸಿ ನೆಡುವಿಕೆಯನ್ನು ಚಡಚಣ ತಾಪಂ ಇಒ ಸಂಜಯ ಖಡಗೇಕರ ಅವರು ಅಶ್ವತ್ಥ ವೃಕ್ಷಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಈ ನೆಲಕ್ಕೆ ಬೀಳುವ ಪ್ರತಿ ಹನಿಯನ್ನೂ ಸದ್ಬಳಕೆ ಮಾಡಿಕೊಳ್ಳುವ ದೃಷ್ಟಿಯಿಂದ ತೀರ ಮುಂಚಿತವಾಗಿ ಈ ವರ್ಷ ಸಸಿ ನೆಡುವುದನ್ನು ನೀರುಣಿಸುವ ಮುಖಾಂತರ ಪ್ರಾರಂಭಿಸಲಾಗಿದೆ. ಮುಂಚಿತವಾಗಿ ನೆಟ್ಟ ಸಸಿಗಳು ಅಪರೂಪಕ್ಕೊಮ್ಮೆ ಬೀಳುವ ಪ್ರತಿ ಹನಿಯನ್ನೂ ಕುಡಿದು, ಆರೋಗ್ಯಯುತವಾಗಿ, ಶಕ್ತಿಯುತವಾಗಿ ಬೆಳೆದು ಬಹು ಬೇಗನೆ ಮರಗಳಾಗಿ ನಮ್ಮ ಸುತ್ತ-ಮುತ್ತಲಿನ ಪರಿಸರ ಹಸಿರು ಮತ್ತು ಉಸಿರನ್ನು ನೀಡುತ್ತದೆ. ಈ ಭೂಮಿಯ ಮೇಲೆ ಇರುವ ಪರಿಸರದ ರಕ್ಷಣೆ ನಮ್ಮೇಲ್ಲರ ಹೊಣೆಯಾಗಿದೆ. ಈ ದೃಷ್ಟಿಯಿಂದ ಸಾಮಾಜಿಕ ಅರಣ್ಯ ಇಲಾಖೆಯ ಪರಿಸರ ಕಳಕಳಿ, ಸಂರಕ್ಷಣೆ ಕಾರ್ಯ ಪ್ರಶಂಸನೆಗೆ ಅರ್ಹವಾದುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ವಲಯ ಅರಣ್ಯಾಧಿಕಾರಿ ಶ್ರೀ ಮಂಜುನಾಥ ಧುಳೆ , ಗಸ್ತು ವನಪಾಲಕ ಶ್ರೀ ಡಿ ಎ ಮುಜಗೊಂಡ, ನಾಗೇಶ್ ಬಿರಾದಾರ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸಂಜಯ ವಠಾರ ಸೇರಿದಂತೆ ಸಾರ್ವಜನಿಕರು, ಅರಣ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
22nd April 2025
ಚಡಚಣ : ಚಡಚಣ ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು, ಸದರಿ ಅರ್ಜಿಗಳನ್ನು ಪರಿಶೀಲಿಸಿ ತಾತ್ಕಾಲಿಕ ಆಯ್ಕೆ ಪಟ್ಟಿ ಚಡಚಣ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಛೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ ಎಂದು ಸಿಡಿಪಿಓ ಸಾಹೇಬಗೌಡ ಝುಂಜರವಾಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾತ್ಕಾಲಿಕ ಆಯ್ಕೆ ಪಟ್ಟಿಗೆ ಯಾವುದಾದರೂ ಆಕ್ಷೇಪಣೆಗಳಿದ್ದರೆ ಏ.೨೧ ರಿಂದ ಮೇ.೨ ರೊಳಗಾಗಿ (ಕಛೇರಿವೇಳೆಯಲ್ಲಿ)ಸೂಕ್ತ ದಾಖಲಾತಿಗಳೊಂದಿಗೆ ಆಕ್ಷೇಪಣೆಗಳನ್ನು ಚಡಚಣದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿಯಲ್ಲಿ ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಲು ಸಿಡಿಪಿಓ ಸಾಹೇಬಗೌಡ ಝುಂಜರವಾಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
12th April 2025
ಚಡಚಣ: ಇಂದಿನ ಮಹಿಳೆಯರು ಅಡುಗೆ ಮನೆಯಿಂದ ಅಂತರಿಕ್ಷದವರೆಗೆ ಗುರಿ ಸಾಧಿಸಿದ್ದಾರೆ ಮತ್ತು ಸಾಧಿಸುತ್ತಿದ್ದಾರೆ ಎಂದರೆ ಅಜ್ಞಾನದ ಅಂಧಕಾರವನ್ನು ತೊಲಗಿಸಿ ಮಹಿಳೆ ಮತ್ತು ಹೆಚ್ಚಾಗಿ ದಲಿತರಿಗೆ ಜ್ಞಾನದ ಬೆಳಕನ್ನು ನೀಡಿದ ಮಹಾ ಪುರುಷ ಜ್ಯೋತಿಬಾ ಫುಲೆ ಮಹಿಳೆ ಅಡುಗೆ ಮನೆಗೆ ಮಾತ್ರ ಸಿಮಿತವಲ್ಲ ಎಂದು ದೇವರನಿಂಬರಗಿ ಗ್ರಾಮ ಪಂಚಾಯತ ಅಧ್ಯಕ್ಷ ಭೀಮನಗೌಡ ಬೀರಾದಾರ ಹೇಳಿದರು.
ದೇವರನಿಂಬರಗಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಜ್ಯೋತಿಬಾ ಫುಲೆ ವೃತ್ತದಲ್ಲಿ ಜಯಂತಿಯನ್ನು ಆಚರಿಸಿ ಫೊಟೊ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಮಾಜಿ ಗ್ರಾ.ಪಂ.ಅಧ್ಯಕ್ಷ ರಾಜು ಸಿಂಗೆ ಮಾತನಾಡಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತುಕೊಟ್ಟು ಇಂದು ಮಹಿಳೆಯರು ಎಲ್ಲಾ ರಂಗದಲ್ಲಿ ಮುಂದಡಿ ಇಡುತ್ತಿರುವದಕ್ಕೆ ಕಾರಣವೆ ನಮ್ಮ ಜ್ಯೋತಿಬಾ ಫುಲೆ ಅವರ ದೂರದೃಷ್ಟಿಯೆ ಕಾರಣ ಎಂದರು.
ಈ ಕಾರ್ಯಕ್ರಮದಲ್ಲಿ ಮಾಳಿ ಸಮಾಜದ ಅಧ್ಯಕ್ಷ ಚಂದ್ರಕಾAತ ಮಾಳಿ,ಗ್ರಾ.ಪಂ.ಸದಸ್ಯ ಬೀರಪ್ಪ ಸಲಗರ,ಎಲ್ಲ ಯುವಕರು ಇದ್ದರು.
11th April 2025
ಚಡಚಣ: ಮಹಾವೀರರ ಮುಖ್ಯ ತತ್ವಗಳಲ್ಲಿ ಅಹಿಂಸೆಯೂ ಒಂದು.ಆತ್ಮವು ಪರಿಶುದ್ಧವಾಗಿದೆ ಮತ್ತು ಅನಂತವಾಗಿದೆ ಮತ್ತು ಸರಿಯಾದ ನಂಬಿಕೆ,ಜ್ಞಾನ ಮತ್ತು ನಡವಳಿಕೆಯ ಮೂಲಕ ಅದು ಮುಕ್ತಿಯನ್ನು ಪಡೆಯಬಹುದೆಂದು ಅವರು ನಂಬಿದ್ದರು ಎಂದು ಶಿಕ್ಷಕ ಬಸವರಾಜ ಕರಜಗಿ ಹೇಳಿದರು.
ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ನಂ-೨ ಮರಡಿ ಶಾಲೆಯಲ್ಲಿ ಭಗವಾನ ಮಹಾವೀರ ಜಯಂತಿ ಉದ್ದೇಶಿಸಿ ಮಾತನಾಡಿದರು.ಮಹಾವೀರರು ಜೈನ ಧರ್ಮದ ಇಪ್ಪತ್ನಾಲ್ಕನೇ ಮತ್ತು ಕೊನೆಯ ತೀರ್ಥಂಕರರೆನ್ನುವ ಹೆಮ್ಮೆಗೆ ಪಾತ್ರರಾಗಿದ್ದಾರೆ ಎಂದರು.
ಶಿಕ್ಷಕ ಡಿ ಎಸ್ ಬಗಲಿ ಮಾತನಾಡಿ ಮಹಾವೀರರು ಬಿಹಾರ ರಾಜ್ಯದ ವೈಶಾಲಿ ಜಿಲ್ಲೆಯ ಕುಂದಲ ಗ್ರಾಮದಲ್ಲಿ ಜನಿಸಿದರು.ಮಹಾವೀರರು ತಮ್ಮ ಜೀವನದ ಮೂಲಕ ಅಹಿಂಸೆ,ಸತ್ಯ,ಕರುಣೆ ಮತ್ತು ಸ್ವಯಂ ಕೃಷಿಯ ಅದ್ಭುತ ತತ್ವಗಳನ್ನು ಪ್ರಸ್ತುತಪಡಿಸಿದರು.ಅವರ ಭೋದನೆಗಳು ಇಂದಿಗೂ ಪ್ರತಿಯೊಬ್ಬ ವ್ಯಕ್ತಿಗೂ ಸ್ಪೂರ್ತಿಯಾಗಿದೆ ಎಂದರು.
ಶಿಕ್ಷಕ ಜಗದೀಶ ಚಲವಾದಿ ಮಾತನಾಡಿ ಅಹಿಂಸೆಯೇ ಧರ್ಮದ ಮಾರ್ಗವೆಂದವರಲ್ಲಿ ಮಹಾವೀರರೂ ಒಬ್ಬರು.ಅವರು ಅಹಿಂಸೆಯನ್ನೇ ಶ್ರೇಷ್ಠ ಧರ್ಮವೆಂದು ಬೋಧಿಸಿದ್ದಾರೆ.ಅಹಿಂಸೆಯೆAದರೆ ಕೇವಲ ದೈಹಿಕ ಹಿಂಸೆ ಅಥವಾ ನೋವಿಗೆ ಮಾತ್ರ ಸೀಮಿತವಾಗಿಲ್ಲ.ಅದು ವ್ಯಕ್ತಿಯ ಆಲೋಚನೆಗಳು,ಮಾತು ಮತ್ತು ಕಾರ್ಯಗಳನ್ನು ಪ್ರತಿನಿಧಿಸುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯ ಶಿಕ್ಷಕ ಮಹಾಂತೇಶ ಉಮರಾಣಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಎಸ್ ಡಿ ಎಂ ಸಿ ಅಧ್ಯಕ್ಷ ಬಾಲಾಜಿ ಗಾಡಿವಡ್ಡರ,ಶಿಕ್ಷಕ ಸಿಬ್ಬಂದಿ ವರ್ಗ ಹಾಗೂ ಅಡುಗೆ ಸಿಬ್ಬಂದಿ ಹಾಗೂ ಮಕ್ಕಳು ಇದ್ದರು.
9th April 2025
ಚಡಚಣ : ಯುವಕರು ಮಾನಸಿಕ, ದೈಹಿಕವಾಗಿ ಸದೃಡರಾಗಲು ಕ್ರೀಡೆಯಲ್ಲಿ ಭಾಗವಹಿಸುವುದರಿಂದ ದೈಹಿಕವಾಗಿ ಸದೃಡರಾಗಲು ಸಾಧ್ಯ ಎಂದು ಶ್ರೀ ಭೀಮಾಶಂಕರ ಸಕ್ಕರೆ ಕಾರ್ಖಾನೆ ನಿರ್ದೇಶಕ ಸುರೇಶಗೌಡ ಪಾಟೀಲ ಹೇಳಿದರು.
ಧೂಳಖೇಡ ಗ್ರಾಮದ ದಕ್ಷಿಣ ಕಾಶಿ ಎಂದೇ ಹೆಸರುವಾಸಿಯಾಗಿರುವ ಶ್ರೀ ಶಂಕರಲಿAಗ ಜಾತ್ರಾ ನಿಮಿತ್ಯವಾಗಿ ಆಯೋಜಿಸಿದ್ದ ಕ್ರಿಕೆಟ್ ಟೂರ್ನಾಮೆಂಟ್ಗೆ ಚಾಲನೆ ನೀಡಿ ಮಾತನಾಡಿ, ಯುವಕರು ಶಿಕ್ಷಣ ಜೊತೆಯಲ್ಲಿ ಕ್ರೀಡೆಯಲ್ಲಿ ಭಾಗವಹಿಸುವದರಿಂದ ದೈಹಿಕ ಪರೀಕ್ಷೆಯಂತ ಸರ್ಕಾರಿ ಹುದ್ದೆ ಪಡೆಯುವಲ್ಲಿ ಸಹಕಾರಿಯಾಗುತ್ತದೆ. ಕ್ರೀಡಾಕೂಟದಲ್ಲಿ ಭಾಗವಹಿಸುವುದರಿಂದ ಯುವಕರು ಸರ್ಕಾರದ ಪೊಲೀಸ್, ರೈಲ್ವೆ, ಆರ್ಮಿಯಂತ ನಾನಾ ಹುದ್ದೆಯಲ್ಲಿ ದೈಹಿಕ ಪರೀಕ್ಷೆ ಪಾಸಾಗಿ ಇವತ್ತಿನ ದಿನ ಅನೇಕ ಇಲಾಖೆಯಲ್ಲಿ ಗ್ರಾಮದ ಯುವಕರು ಸೇವೆ ಸಲ್ಲುಸುತ್ತಿದ್ದಾರೆ. ಯುವಕರು ಕ್ರೀಡಾಮನೋಭಾದಿಂದ ದೈಹಿಕವಾಗಿ, ಮಾನಸಿಕವಾಗಿ, ಸದೃಡರಾಗಲು ಸಾಧ್ಯ ಕ್ರೀಡೆಗಾಗಿ ಯಾವತ್ತು ಪ್ರೋತ್ಸಾಹ ಇರುತ್ತದೆ. ಆದರೆ ಯುವಕರು ದುಶ್ಚಟಗಳಿಂದ ದೂರವಿರಿ ಎಂದರು.
ಧೂಳಖೇಡ ಪ್ರಿಮಿಯಂ ಲೀಗ್À ೫ ನೇ ಆವೃತಿಯ ಪ್ರಥಮ ಬಹುಮಾನ ೫೦೦೦೦ ರೂ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ದಿ. ರವಿಗೌಡ ವ್ಹಿ ಪಾಟೀಲ ಇವರ ಸ್ಮರಣಾರ್ಥವಾಗಿ ಮತ್ತು ಟ್ರೋಪಿ, ದ್ವಿತೀಯ ಬಹುಮಾನ ಯುವ ಮುಖಂಡ ದ್ಯಾಮಗೊಂಡ ಕಾಂಬಳೆ ೨೫೦೦೦ ರೂ, ತೃತೀಯ ಬಹುಮಾನ ಜಿಲ್ಲಾ ಕಾಂಗ್ರೆಸ್ ಮುಖಂಡ ಬಾಬಾಸಾಹೇಬ ವಿಜಯದಾರ ೧೧೦೦೦ ರೂ, ನಗದು ಮತ್ತು ಟ್ರೋಪಿ ಬಹುಮಾನಗಳಾಗಿ ಆಯೋಜನೆಸಲಾಗಿದೆ.
ಈ ವೇಳೆ ಗ್ರಾಪಂ ಪಿಡಿಓ ಲಾಲಾಸಾಹೇಬ ನದಾಫ್, ಗ್ರಾಪಂ ಅಧ್ಯಕ್ಷ ದಿಲೀಪ ಶಿವಶರಣ, ಸೋಮುಗೌಡ ಪಾಟೀಲ, ಪ್ರಭು ನಾಟೀಕರ, ಸಚೀನ ಬಿರಾದಾರ, ಅರುಣು ಪಾಟೀಲ, ಪರಮೇಶ್ವರ ತಳವಾರ, ಅನೀಲ ಕ್ಷತ್ರಿ, ಸುರಾಜ್ ಮುಲ್ಲಾ, ಚಂದ್ರಕಾAತ ಕೊಡತೆ, ಮಹೇಶ ಭೈರಗೊಂಡ, ರಾಜಕುಮಾರ ಕಾಳೆ, ಮಂಜು ಧೂಳಖೇಡಕರ, ಮತ್ತಿತರರು ಇದ್ದರು..
8th April 2025
ಚಡಚಣ: ಚಡಚಣದ ಶ್ರೀ ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ಎಸ್ ಎಸ್ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದವತಿಯಿಂದ ಸೋಮವಾರ ನಡೆದ ಉದ್ಯೋಗ ಮೇಳದ ಉದ್ಘಾಟನೆಯನ್ನು ಜ್ಯೋತಿ ಬೆಳಗಿಸುವದರ ಮೂಲಕ ಸಂಸದ ರಮೇಶ ಜಿಗಜಿಣಗಿ ಅವರು ಚಾಲನೆ ನೀಡಿದರು.
ಸಂಸದ ರಮೇಶ ಜಿಗಜಿಣಗಿ ಅವರು ಮಾತನಾಡಿ ಕೌಶಲ್ಯಾಭಿವೃದ್ಧಿ ನಮ್ಮ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಇದನ್ನು ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷೆ ಶಿವಕಾಂತಮ್ಮ(ಕಾAತಾ) ನಾಯಕ ಅವರು ೨೦೨೫ ನೇ ಸಾಲೀನ ಪ್ರಥಮ ಉದ್ಯೋಗಮೇಳವನ್ನು ಚಡಚಣದಲ್ಲಿ ಆಯೋಜಿಸುವ ವಿಚಾರ ಹೇಳಿದಾಗ ನಾನು ಅದಕ್ಕೆ ಒಪ್ಪಿಗೆ ಸೂಚಿಸಿದ್ದೆ ಅದರಂತೆ ಗಡಿಭಾಗದವರು ಸೇರಿದಂತೆ ಚಡಚಣದ ಸುಮಾರು ಜನ ಉದ್ಯೋಗ ಪಡೆದುಕೊಳ್ಳುತ್ತಾರೆ ಎಂದರು.
ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷೆ ಶಿವಕಾಂತಮ್ಮ(ಕಾAತಾ) ನಾಯಕ ಅವರು ಮಾತನಾಡಿ ಕೌಶಲ್ಯಾಭಿವೃದ್ಧಿ,ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಕೆಎಸ್ಡಿಸಿ ಅಡಿಯಲ್ಲಿ ನನ್ನ ವೃತ್ತಿ ನನ್ನ ಆಯ್ಕೆ ಎಂಬುದು ಯುವಕರಿಗೆ ಅಷ್ಟೆಅಲ್ಲ ಮಹಿಳೆಯರಿಗು ಅನುಕೂಲವಾಗಲಿದೆ ಅಡಿಗೆ ಮನೆಯಿಂದ ಅಂತರಿಕ್ಷದವರೆಗೆ ಮಹಿಳೆಯರು ಸಾಧನೆ ಮಾಡುತ್ತಲಿದ್ದಾರೆ ಫ್ರಾನ್ಸ್ ನಲ್ಲಿ ಇತ್ತಿಚೆಗೆ ನಡೆದ ರ್ಲ್÷್ಡ ಸ್ಕಿಲ್ ಕಾಂಪಿಟೇಶನ್ ನಲ್ಲಿ ನಮ್ಮ ಭಾರತದ ೭ ಜನ ಆಯ್ಕೆಆಗಿದ್ದರು ಅದರಲ್ಲಿ ೪ ಜನ ಸ್ಕಿಲ್ ಅವರ್ಡ್ ಪಡೆದಿದ್ದಾರೆ ಎಂದರು.
ಮುAದಿನ ದಿನಮಾನಗಳಲ್ಲಿ ಕಲಿಕೆ ಜೊತೆ ಕೌಶಲ್ಯ ತರಬೇತಿಯನ್ನು ಅಕ್ಕಮಹಾದೇವಿ ವಿ ವಿ ಯಲ್ಲಿ ಅಳವಡಿಸಲಿದ್ದೆವೆ ಎಂದರು.ಮತ್ತು ಸ್ಕಿಲ್ ಟ್ರೇನಿಂಗ್ ಜೊತೆಗೆ ನೋಕರಿಯನ್ನು ಒದಗಿಸುವ ಜವಾಬ್ದಾರಿಯನ್ನು ಕಂಪನಿಗಳಿಗೆ ಜವಾಬ್ದಾರಿಯನ್ನು ಕೊಡಲಿದ್ದೆವೆ ಎಂದರು. ವಿದೇಶಗಳಲ್ಲಿಯು ನೋಕರಿ ಲಭ್ಯವಿದೆ ಸ್ಕಿಲ್ ಜೊತೆಗೆ ಪ್ರಯತ್ನಕೋಡಾ ಮಾಡಬೇಕಾಗುತ್ತದೆ ಅವಕಾಶವನ್ನು ನಾವು ಕಲ್ಪಿಸಿಕೊಡುತ್ತೆವೆ ಎಂದರು.
ಈ ಮೇಳದಲ್ಲಿ ಉದ್ಯೋಗ ಸಿಗದಿದ್ದರು ನಿರಾಳತೆ, ಹತಾಶರಾಗುವದು ಬೇಡಾ ೩೦೦೦ ಉದ್ಯೋಗ ಖಾಲಿ ಇವೆ ಎಂದು ಕಂಪನಿಯವರು ಹೇಳಿದ್ದಾರೆ ಆದರೆ ಕೌಶಲ್ಯ ಕೊರತೆಯಿಂದ ನೋಕರಿ ಸಿಗದೆಇರಬಹುದು ದಿ.೧೬ ರಂದು ಕಲಬುರ್ಗಿಯಲ್ಲಿ ನಡೆಯಲಿರುವ ಬೃಹತ್ ಉದ್ಯೋಗ ಮೇಳ ಇದ್ದು ಅಲ್ಲಿ ಇಂಜಿನೀಯರ್,ಮೆಡಿಕಲ್ ದವರಿಗು ಉದ್ಯೋಗ ಸಿಗಲಿದೆ ಎಂದರು.ಉದ್ಯೋಗ ಸಿಕ್ಕರು ಅರ್ಧಕ್ಕೆ ಕೆಲವಬ್ಬರು ಬಿಟ್ಟುಬರುತ್ತಾರೆ ಕಷ್ಟಪಟ್ಟರೆ ಸುಖಸಿಗುತ್ತದೆ ಎಂದರು.
ಅಪರ ಜಿಲ್ಲಾಧಿಕಾರಿ ಸೋಮನಿಂಗ ಗೆನ್ನೂರ ಮಾತನಾಡಿ ೬೦% ಯುವಕರ ನಾಡು ನಮ್ಮ ಭಾರತ ದೇಶಾಭಿವೃದ್ಧಿ,ಸಮಾಜಾಭಿವೃದ್ಧಿ ಯುವಕರು ಉದ್ಯೋಗ ಮಾಡುತ್ತಿದ್ದರೆ ಮಾತ್ರ ಸಮೃದ್ಧ ದೇಶವಾಗಲಿಕ್ಕೆ ಸಾಧ್ಯ ಉದ್ಯೋಗದಲ್ಲಿಯು ಸ್ಪರ್ಧೆಯಿದ್ದು ನಮ್ಮ ವಿಜಯಪುರದ ಯುವಕರು ಕಷ್ಟಾಳುಗಳಿದ್ದು ಕರ್ನಾಟಕದ ಯಾವ ಮೂಲೆಗೆ ಹೋದರು ಸುಮಾರು ನಾಲ್ಕು ಜನರು ಸಿಗುತ್ತಾರೆ.ಅದಲ್ಲದೆ ೨.೬% ಕೌಶಲ್ಯ ಪಡೆದವರು ಸಿಗುತ್ತಾರೆ ಅದನ್ನು ಜಪಾನ್,ಚಿನಾ ದೇಶಕ್ಕೆ ಹೋಲಿಸಿದರೆ ಅಲ್ಲಿ ೬೦% ಕೌಶಲ್ಯ ಹೊಂದಿದವರು ಸಿಗುತ್ತಾರೆ ಮುಂದಿನ ದಿನಮಾನಗಳಲ್ಲಿ ಭಾರತದಲ್ಲಿಯು ಕೌಶಲ್ಯಪಡೆದವರು ೧೦೦% ಸಿಗಲಿದ್ದಾರೆ ಎಂದರು.ಅದರAತೆ ಮಾತೃಭಾಷೆಯ ಜೊತೆಗೆ ಹಿಂದಿ,ಇAಗ್ಲೀಷ ಕಲಿತರೆ ದೇಶ ವಿದೇಶಗಳಲ್ಲಿಯು ನೋಕರಿ ಸಿಗಲಿದೆ ಎಂದರು.
ಉದ್ಯೋಗ ಸಿಗುತ್ತಿಲ್ಲ ಎಂದು ಕಲಿತವರು ಹೇಳುತ್ತಿದ್ದಾರೆ ಆದರೆ ಹೊಲದಲ್ಲಿ ಕೆಲಸ ಮಾಡಲು ಕೂಲಿಕಾರ್ಮಿಕರು ಸಿಗುತ್ತಿಲ್ಲ ಎಂಬ ನೋವು ರೈತರದ್ದಾಗಿದೆ.ಭಾರತದ ೧೪೦ ಕೋಟಿ ಮ್ಯಾನ್ ಪಾವರ್ ಇದೆ ಅದನ್ನು ಸರಿಯಾಗಿ ಬಳಸಿಕೊಳ್ಳಬೇಕಾಗಿದೆ,ವಿದೇಶದಲ್ಲಿ ಅಹಂ ಭಾವ(ಟ್ರಂಪ್) ಹೊದಿರುವವರ ಕೈಯಲ್ಲಿ ನೋಕರಿ ಮಾಡುವದಕ್ಕಿಂತ ನಮ್ಮ ದೇಶದಲ್ಲಿ ತಮ್ಮ ಕೌಶಲ್ಯವನ್ನು ತೋರಿಸಬೇಕೆಂದು ನಿವೃತ್ ಪ್ರಾಚಾರ್ಯ ಎಸ್ ಎಸ್ ಚೊರಗಿ ಯುವಕರಿಗೆ ಕರೆಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷರಾದ ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ ಅವರು ಮಾತನಾಡಿ ಜನಸೇವೆಯೆ ಜನಾರ್ಧನಸೇವೆ ಎಂದು ಯುವಕ ಯುವತಿಯರಿಗೆ ಉದ್ಯೋಗ ಕಲ್ಪಿಸುವದು ಒಂದು ಜನಸೇವೆ ಎಂದು ಭಾವಿಸಿ ಭಾರತ ಒಕ್ಕಲುತನವೆ ಮೂಲ ಉದ್ಯೋU ಆದರೆ ವರ್ಷಕ್ಕೊಮ್ಮೆ ಸಂಬಳ ಸಿಗುತ್ತದೆ.ಶಿಕ್ಷಣದಲ್ಲಿ ಕೌಶಲ್ಯ ಕಲಿತರೆ ಅದರಲ್ಲಿ ಪ್ರಾಯೋಗಿಕ ಸ್ಕಿಲ್ ಬಹಳ ಪ್ರಾಮುಖ್ಯ ಪಡೆದಿದೆ ಉದ್ಯೋಗಕ್ಕಾಗಿ ಕಲಿಯಿರಿ ಆದರೆ ಮಾರ್ಕ್ಸಗೋಸ್ಕರ ಬೇಡಾ ಅರ್ದಂಬರ್ದ ಕಲಿತರೆ ಅಗಸನ ನಾಯಿ ಇತ್ತ ಮನೆಯು ಕಾಯಲಿಲ್ಲ ಅತ್ತ ಹೊಲ(ಜಮೀನು) ಕಾಯಲಿಲ್ಲ ಎಂಬAತಾಗುತ್ತದೆ ಕೌಶಲ್ಯ ತರಬೇತಿ ಪಡೆಯಲೆ ಬೇಕು ಅರ್ಹತೆಯ ಕೊರತೆಯಿಂದ ಕೆಲಸ ಸಿಗದೆಇರಬಹುದು ಶಿಕ್ಷಣದ ಜೊತೆಗೆ ಅತ್ಯುತ್ತಮ ತರಬೇತಿ ಪಡೆದರೆ ಉದ್ಯೋಗ ಖಚಿತ ಎಂದರು.ಕೆಪಿಎಸ್ಸಿ ಶಾಲೆಗಳನ್ನು ತೆರೆಯಲಿದ್ದು ಅಲ್ಲಿ ಕನ್ನಡ,ಇಂಗ್ಲೀಷ ಭಾಷೆಯಲ್ಲಿ ಪಿಯುಸಿ ಯವರೆಗೆ ಕೌಶಲ್ಯಾಧಾರಿತ ಉಚಿತ ಶಿಕ್ಷಣ ಸಿಗಲಿದೆ ಮಾದರಿ ಶಾಲೆ ಮಾಡುವ ಉದ್ದೇಶವಿದೆ ಎಂದರು.
ಉದ್ಯೋಗ ಸಿಗದಿದ್ದರು ಪರವಾಗಿಲ್ಲ ಜೀವನದಲ್ಲಿ ನಿರಾಶೆಯಾಗಬೇಡರಿ ಸರಕಾರದ ಸಬ್ಸಿಡಿ ಹಣದೊಂದಿಗೆ ಸ್ವಉದ್ಯೋಗ ಮಾಡಬಹುದು ಎಂದರು.ನೀವು ನಿರಾಶೆಯಾದರೆ ದೇಶವೆ ನಿರಾಶೆಯಾದಂತೆ ಎಂದರು.
ಕೌಶಲ್ಯಾಭಿವೃದ್ಧಿ ಅಧಿಕಾರಿ ಸಿ ಬಿ ಕುಂಬಾರ ಅವರು ಪತ್ರಿಕಾ ಹೇಳಿಕೆ ೪೩ ಕಂಪನಿಗಳ ಪೈಕಿ ೨೫ ಕಂಪನಿಗಳು ಹಾಜರಿದ್ದರು, ನೊಂದಾಯಿತರು ೨೫೪೨ ರಲ್ಲಿ ಹಾಜರಾದವರು ೧೪೫೮ ಉದ್ಯೋಗಾಕಾಂಕ್ಷಿಗಳಲ್ಲಿ ೨೪೩ಸೆಲೆಕ್ಟ ಆಗಿದ್ದು ೨೧೪ ಶರ್ಟ ಲಿಸ್ಟನಲ್ಲಿ ಇದ್ದಾರೆ.
ಕೌಶಲ್ಯಾಭಿವೃದ್ಧಿ ಅಧಿಕಾರಿ ಸಿ ಬಿ ಕುಂಬಾರ, ಬಿ ಎಸ್ ರಾಠೋಡ,ಸಂಜಯ ಖಡಗೇಕರ,ಚಡಚಣ ತಾಲೂಕ ಕಾಂಗ್ರೆಸ್ ಅಧ್ಯಕ್ಷ ಆರ್.ಡಿ.ಹಕ್ಕೆ,ಪಪಂ ಪ.ಪಂ ಅಧ್ಯಕ್ಷ ಮಲ್ಲಿಕಾರ್ಜುನ ಧೊತ್ರೆ,ಪಪಂ ಉಪಾಧ್ಯಕ್ಷ ಇಲಾಯಿ ನಧಾಫ,ಬಾಬುಗೌಡ ಪಾಟೀಲ್, ವ್ಹಿ ಎಸ್ ಗಿಡವೀರ, ಎಸ್ ಎಸ್ ಚೋರಗಿ, ನಾಗಮ್ಮ ಅಂಕದ, ವಿದ್ಯಾರಾಣಿ ತುಂಗಳ,,ಬಿ.ಎಸ್.ರಾಠೋಡ್, ರವಿ ಜಾಧವ,ಖಾಸಗಿ ಹಾಗೂ ಗೌರಮೆಂಟ್ ಐಟಿಐ ಸಿಬ್ಬಂಧಿಯವರು ಸೇರಿದಂತೆ ಎಲ್ಲ ಪ.ಪಂ.ಸದಸ್ಯರು,ಕೆಎಸ್ಡಿಸಿ ವಿಜಯಪುರ ಸಿಬ್ಬಂಧಿ ಇದ್ದರು.