20th June 2025
ವರದಿ:ರಾಜಶೇಖರ ಡೋಣಜಮಠ.
ಚಡಚಣ;ಬ್ರೀಟಿಷರ ಕಾಲದ ೧೮೪೫ ರಲ್ಲಿ ಪ್ರಾರಂಭವಾಗಿರುವ ಚಡಚಣದ ಹಿರಿಯ ಪ್ರಾಥಮಿಕ ಶಾಲೆ,ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣದೊಂದಿಗೆ ನೈತಿಕ ಮೌಲ್ಯಗಳನ್ನು ಕಲಿಸುತ್ತ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದೆ ನಮ್ಮೂರ ನಮ್ಮ ಶಾಲೆ.
ಸರಕಾರಿ ಶಾಲೆಗಳೆಂದರೆ ಮೂಗು ಮುರಿಯುವ ಇಂದಿನ ಪೀಳಿಗೆಯು ಇಂಥ ಸಂದರ್ಭದಲ್ಲಿ ಈ ಶಾಲೆ ಮಕ್ಕಳಿಗೆ ಒಳ್ಳೆಯ ಶಿಕ್ಷಣದೊಂದಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ನೀಡಿ ಭೇಷ ಎನಿಸಿಕೊಂಡಿದೆ.
ಬ್ರಿಟೀಷರ ಕಾಲದಲ್ಲಿ ಅಂದರೆ ೧೮೪೫ ರಲ್ಲಿ ಪ್ರಾರಂಭವಾದ ಶಾಲೆ ಸುಮಾರು ೧೮೦ ವರ್ಷಗಳ ಇತಿಹಾಸವನ್ನು ಹೊಂದಿದೆ. ೧೮೪೫ ರ ಸಂದಭದಲ್ಲಿ ಮೋಡಿ ಭಾಷೆಯಲ್ಲಿ ಬರೆದ ಶಾಲೆಯ ಕಾಗದ ಪತ್ರಗಳನ್ನು ಮುಖ್ಯ ಶಿಕ್ಷಕರು ಇಲ್ಲಿಯವರೆಗೆ ಅತ್ಯಂತ ಜೋಪಾನವಾಗಿ ಇಟ್ಟಿರುವದು ತುಂಬಾ ವಿಶೇಷವಾಗಿದೆ.
ಈ ಶಾಲೆಯಲ್ಲಿ ೧ ನೇ ತರಗತಿಯಿಂದ ೮ ನೇ ತರಗತಿಯವರೆಗೆ ಸುಮಾರು ೨೫೦ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಶಾಲೆಯ ಮುಖ್ಯ ಶಿಕ್ಷಕ ಎಸ್ಎಸ್ ಪಾಟೀಲ ಇವರ ವಿಶೇಷ ಪ್ರಯತ್ನದ ಫಲವಾಗಿ ಶಾಲೆ ಎಲ್ಲ ರೀತಿಯ ಸೌಲಭ್ಯಗಳನ್ನು ಹೊಂದಿದೆ.
ಮುಖ್ಯ ಶಿಕ್ಷಕರ ವಿಶೇಷ ಕಾಳಜಿ ಫಲವಾಗಿ ಕಿರ್ಲೋಸ್ಕರ ಕಂಪನಿಯ ಎಂಡಿ ಗುಮಾಸ್ತೆ ಇವರು ಶಾಲೆಗೆ ವಿದ್ಯಾರ್ಥಿಗಳಿಗೆ ಕೂರಲು ಡೆಸ್ಕುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ ಶಾಲೆಯ ಸೌಲಭ್ಯಗಳನ್ನು ಹೆಚ್ಚಿಸಲು ರೂ ೧.೫ ಲಕ್ಷ ವಿಶೇಷ ಅನುದಾನವನ್ನು ನೀಡಿದ್ದಾರೆ. ಕೆನರಾ ಬ್ಯಾಂಕ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ಮತ್ತು ಕೆಲವರು ವೈಯಕ್ತಿಕವಾಗಿ ಶಾಲೆಯ ಅಭಿವೃದ್ದಿಗೆ ಕಾಣಿಕೆಯನ್ನು ನೀಡಿದ್ದಾರೆ.
ಶಾಲೆಯ ಆವರಣದಲ್ಲಿ ಬೆಳೆದಿರುವ ದೊಡ್ಡ ಗಿಡಮರಗಳು ಶಾಲೆಯ ಸೌದರ್ಯವನ್ನು ಹೆಚ್ಚಿಸಿವೆ. ಶಾಲೆಯ ಆವರಣವನ್ನು ಪ್ರವೇಶಿಸಿದರೆ ಮಲೆನಾಡಿನ ಅನುಭವವಾಗುತ್ತದೆ. ಎಲ್ಲ ಶಿಕ್ಷಕರು ಮತ್ತು ಮಕ್ಕಳ ಪ್ರಯತ್ನದ ಫಲವಾಗಿ ಶಾಲೆಯ ಆವರಣ ಹಚ್ಚು ಹಸಿರಿನಿಂದ ನಳನಳಿಸುತ್ತಿದೆ.ಕನ್ನಡ ನಾಡಿನ ಖ್ಯಾತ ಸಾಹಿತಿ, ಜನಪದ ಭೀಷ್ಮ ಡಾ.ಸಿಂಪಿ ಲಿಂಗಣ್ಣನವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಇದೆ ಶಾಲೆಯಲ್ಲಿ ಮುಗಿಸಿರುವದು ಶಾಲೆಯ ಶಿಕ್ಷಕರಿಗೆ ಹೆಮ್ಮಯ ವಿಷಯವಾಗಿದೆ.
ಸರಕಾರದ ಯೋಜನೆ ಸದ್ಬಳಕೆ.
ಸರಕಾರಿ ಯೋಜನೆಗಳನ್ನು ಅತ್ಯಂತ ವ್ಯವಸ್ಥಿತವಾಗಿ ಸದುಪಯೋಗ ಪಡೆಸಿಕೊಳ್ಳುತ್ತಿದೆ. ಸಮವಸ್ತ್ರ, ಬಿಸಿಯೂಟ, ಬಾಳೆಹಣ್ಣು ಸೇರಿದಂತೆ ಎಲ್ಲ ಯೋಜನೆಗಳೊಂದಿಗೆ ದಾನಿಗಳಿಂದಲೂ ಸಾಕಷ್ಟು ವಸ್ತುಗಳನ್ನು ಪಡೆದುಕೊಂಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿರುವದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.
*ಖಾಸಗಿ ಶಾಲೆಗಳಲ್ಲಿ ದೊರೆಯುವ ಎಲ್ಲ ಸೌಕರ್ಯಗಳು ನಮ್ಮ ಶಾಲೆಯ ಮಕ್ಕಳಿಗೂ ದೊರೆಯುವಂತೆ ಮಾಡಬೇಕು ಎನ್ನವದು ನನ್ನ ಆಸೆ.ಈ ದಿಸೆಯಲ್ಲಿ ನಾನು ಪ್ರಯತ್ನ ಮಾಡುತ್ತಿದ್ದೆನೆ. ಗುಣಮಟ್ಟದ ಶಿಕ್ಷಣ ನೀಡಿದರೆ ಮಕ್ಕಳು ಖಂಡಿತ ಸರಕಾರಿ ಶಾಲೆಗಳಿಗೆ ಬರುತ್ತಾರೆ. ನಮ್ಮ ಶಾಲೆ ಇದಕ್ಕೆ ಒಂದು ಉದಾರಹಣೆ. ಶಾಲೆಯ ಅಭಿವೃದ್ಧಿಗೆ ಶಾಸಕ ವಿಠ್ಠಲ ಕಟಕಧೋಂಡ ಅವರು ಅನುದಾನವನ್ನು ನೀಡಿದ್ದಾರೆ.
ಇನ್ನು ಸುಧಾರಣೆ ಮಾಡಬೇಕೆಂದರೆ ಹೋರಾಂಗಣದ ಕೊರತೆ ಇದೆ ಎಂದರು.ಪ.ಪ0.ಯವರು ನಮ್ಮ ಕನ್ನಡ ಶಾಲೆಗೆ ಮೀಸಲಿಟ್ಟ ೨.೨೯ ಎಕರೆ ಜಮಿನಿನ ಪೈಕಿ ಸುಮಾರು ೧.೦೦ ಎಕರೆ ಭೂ ಕಬಳಿಸಿ ವ್ಯಾಪಾರ ಮಳಿಗೆ ಹಾಗೂ ಇನ್ನಿತರೆ ಕೆಲಸಗಳಿಗಾಗಿ ಜಾಗ ಅಕ್ರಮ ಮಾಡಿದ್ದರಿಂದ ಜಾಗದ ಕೊರತೆಯಾಗಿದೆ. * ಎಸ್.ಎಸ್.ಪಾಟೀಲ ಮುಖ್ಯ ಗುರುಗಳು.
*ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎನ್ನುವದು ನನ್ನ ಮತ್ತು ಮುಖ್ಯ ಗುರುಗಳ ಕನಸಾಗಿದೆ. ಈ ದಿಸೆಯಲ್ಲಿ ಶಾಲೆಯ ಮುಖ್ಯ ಗುರುಗಳು ಮತ್ತು ಎಲ್ಲ ಶಿಕ್ಷಕರೊಂದಿಗೆ ಕೂಡಿ ನಾನು ಮತ್ತು ನಮ್ಮ ಎಸ್ಡಿಎಂಸಿ ಸದಸ್ಯರು ಪ್ರಯತ್ನಿಸುತ್ತೆವೆ.
* ಪ್ರಕಾಶ.ಬ.ಪಾಟೀಲ ಎಸ್ಡಿಎಂಸಿ ಅಧ್ಯಕ್ಷ ಹಾಗೂ ಪ.ಪಂ.ಸದಸ್ಯ.
undefined
ಗಂಡುಮೆಟ್ಟಿನ ನಾಡಿನಲ್ಲಿ ಜಾನಪದ ಕಲೆಯ ಜೊತೆಗೆ ಬಸವಣ್ಣನವರ ಆದರ್ಶಗಳನ್ನು ಪಾಲಿಸೋಣ- ಎನ್.ಎಚ್ ಕೊನರಡ್ಡಿ
ವೈ ಬಿ ಕಡಕೋಳರಿಗೆ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಡಾಕ್ಟರೇಟ್ : ಸನ್ಮಾನ