
25th December 2024
10th December 2024
ಮಾರ್ಗಶಿರ ಶುದ್ಧ ಏಕಾದಶಿ ಗೀತಾ ಜಯಂತಿ, ಒಂದು ವಿಚಾರ ನೋಡೋಣ ಬನ್ನಿ,
ಶ್ರೀಮದ್ ಭಗವದ್ಗೀತೆಯಲ್ಲಿ ಹೇಳಿದ ಹಾಗೆ ನಡೆದಲ್ಲಿ ಪ್ರತಿಯೊಬ್ಬರ ಜೀವನ ಸಾರ್ಥಕವಾದೀತು,
ಸ್ವಾಮಿ ವಿವೇಕಾನಂದರು ಹೇಳುತ್ತಿದ್ದರು ಶ್ರೀ ಭಗವದ್ಗೀತೆ ಓದುವುದರಿಂದ, ಕಂಟಸ್ತ ಮಾಡುವುದರಿಂದ, ಪಾರಾಯಣ ಮಾಡುವುದರಿಂದ ಪುಣ್ಯ ಬರುವುದಿಲ್ಲ ಹೆಚ್ಚಿನ ಏನು ಲಾಭ ಆಗುವುದಿಲ್ಲ,
ಸ್ವಾಮೀಜಿ ಹೇಳುತ್ತಿದ್ದರು
Geeta is a road map
ಗೀತೆ ನಮಗೆ ದಾರಿ ತೋರಿಸುತ್ತದೆ, ಒದುವದರಿಂದ, ಪಾರಾಯಣ ಮಾಡುವುದರಿಂದ ಪುಣ್ಯ ಬರುವುದಿಲ್ಲ, ಗೀತೆಯಲ್ಲಿ ಹೇಳಿದ್ದು ನಾವು ನಮ್ಮ ಜೀವನದಲ್ಲಿ ಆಚರಿಸಬೇಕು ಆಗ ಮಾತ್ರ ನಮಗೆ ಲಾಭವಾದಿತು,
ನಾವು ಎಷ್ಟು ತೀರ್ಥಯಾತ್ರೆ ಮಾಡಿದರು, ಎಷ್ಟು ಸ್ವಾಮಿಗಳ ಪ್ರವಚನ ಕೇಳಿದರು, ಎಷ್ಟು ಮಡಿ ಆಚರಣೆ ದೇವರ ಪೂಜೆ ಮಾಡಿದರು ಎಲ್ಲಿಯವರೆಗೆ ಮನಸ್ಸು ಶುದ್ದಿಯಾಗಿ ಅದು ನಮ್ಮ ನಡತೆ ಯಲ್ಲಿ ಕಾಣುವದಿಲ್ಲವೋ ಅಲ್ಲಿಯವರಿಗೆ ನಮ್ಮ ಕರ್ಮಗಳು ಯಾಂತ್ರಿಕ ರೂಢಿ ಯಾಗಿ ಉಳಿದುಬಿಡುತ್ತವೆ,
ಹೆಸಿ ಬುದ್ದಿ ಬಿಡದವನು
ಕಾಶಿ ಗೆ ಹೋದರೇನು ಫಲ,
ಮಡಿ ಮಡಿ ಎನ್ನುತ ಮೂರಡಿ ಹಾರುತ ಹೂಲಯ ಬಂದರೆ ಹೋಗೆನ್ನುವಿರಿ, ಮನಸ್ಸಿನಲ್ಲಿರುವ ಕಾಮ, ಕ್ರೋಧ, ಮೋಹ,ಲೋಭ ಹೊಲಸುಗಳು ಹೂಲಿಯನಲ್ಲವೇ?
ಗೀತೆ ಇದನ್ನೇ ಹೇಳಿದೆ ನೋಡೋಣ ಬನ್ನಿ
ಭಗವದ್ಗೀತೆಯಲ್ಲಿ ಹೇಳಿದ ಧರ್ಮದ ದಶ ಲಕ್ಷಣಗಳು.
1, ದೃತಿ, ಕ್ಷಮಾ, ದಮ, ಆಸ್ತಿಯ, ಶೌಚಮ್, ಇಂದ್ರಿಯ ನಿಗ್ರಹ, ಧಿಯ, ವಿದ್ಯಾ, ಸತ್ಯ, ಅಕ್ರೋದ ಇವು ಧರ್ಮದ ದಶ ಲಕ್ಷಣಗಳು,
1, ಧೈರ್ಯ, ಧೈರ್ಯ ದಿಂದ ಇರಬೇಕು ಧೈರ್ಯ ಎಂದರೆ ಉದ್ದಟ್ಟತನವಲ್ಲ. ಜೀವನದಲ್ಲಿ ಬಂದ ಸಮಸ್ಯೆಗಳನ್ನು ಎದುರಿಸುವ ಶಕ್ತಿ ಹೊಂದಿರಬೇಕು, ಗಾಬರಿಯಾಗಿ ಆತ್ಮಹತ್ಯೆ ವರೆಗೆ ಹೋಗ ಬಾರದು,
2, ಕ್ಷಮಾ, ಕ್ಷಮಾ ಗುಣ ಹೊಂದಿರಬೇಕು, ಇನ್ನೊಬ್ಬರಿಂದ ನಮಗೆ ಅಪಮಾನ ಆದಾಗ, ಹಾನಿ ಸಂಭವಿಸಿದಾಗ ಅವರನ್ನು ಕ್ಷಮೆ ಮಾಡಿಬಿಡಬೇಕು, ಅವರು ತಮ್ಮ ಕರ್ಮಫಲ ಉಣ್ಣುತ್ತಾರೆ, ಜೀವನಪರ್ಯಂತ ದ್ವೇಷ ಸಾಧಿಸುತ್ತಾ ಕೂಡಬಾರದು, ಅದು ನಮಗೆ ಹಾನಿಯಾಗುತ್ತದೆ ಹಾಗೂ ನಮ್ಮ ಆತ್ಮ ಉದ್ಧಾರ ದಲ್ಲಿ ಬಾಧೆ ತರುತ್ತವೆ, ಬುದ್ಧ ಇದನ್ನೇ ಹೇಳಿದ್ದಾನೆ, ಸದಾ ಸಹನಶೀಲರಾಗಿರಬೇಕು.
3, ದಮ, ದಮ ಎಂದರೆ ಮನಸ್ಸನ್ನು ಯಾವಾಗಲೂ ಧರ್ಮ ಮಾರ್ಗದಲ್ಲಿ ಇಟ್ಟಿರಬೇಕು, ಅಧರ್ಮ ವಿಚಾರಗಳು ತಲೆಯಲ್ಲಿ ಬರಕೂಡದು ಅವುಗಳನ್ನು ನಿಯಂತ್ರಿಸುತ್ತ ಇರಬೇಕು.
4, ಆಸ್ತೆಯ, ಆಸ್ತೆಯ ವೇದ ವಿರುದ್ಧವಾದ ಕಾರ್ಯಗಳನ್ನು ಮಾಡದೇ ಇರುವುದು, ಛಲ, ಕಪಟ ಮಾಡದೇ ಇರುವುದು.
5, ಶೌಚ ಇಂದ್ರಿಯ ನಿಗ್ರಹ,
ಇಂದ್ರಿಯಗಳನ್ನು ನಿಗ್ರಹದಲ್ಲಿಟ್ಟುಕೊಂಡು ಸದಾ ಧರ್ಮ ಮಾರ್ಗದಲ್ಲಿ ನಡೆಯುವುದು, ಮನುಷ್ಯ ಮನಸ್ಸಿನ ಒಳಗಿನ ಕಡೆ ಸದಾ ಚಿಂತಿಸುತ್ತಿರುವುದು.
6, ಇಂದ್ರಿಯ ನಿಗ್ರಹ, ಅಧರ್ಮ ಆಚರಣೆ ಇಂದ ದೂರ ಸರಿದು ಸದಾ ಧರ್ಮ ಮಾರ್ಗದಲ್ಲಿ ನಡೆಯುವುದು. ನಮ್ಮ ಇಂದ್ರಿಯ ನಿಗ್ರಹದಲ್ಲಿಟ್ಟುಕೊಳ್ಳುವುದುಯಾವುದೇ ಕಾರಣಕ್ಕೂ ನಮ್ಮ ಮನಸ್ಸು ಕರ್ಮೇಂದ್ರಿಯಗಳು ತಪ್ಪು ಹಾದಿ ಹಿಡಿಯದಂತೆ ನೋಡಿಕೊಳ್ಳುವುದು.
7, ಧಿಯ,ಮಾದಕ ದ್ರವ್ಯ, ಬುದ್ಧಿ ನಾಶಕ, ಅಲ್ಪರ ಸಂಘ ಮಾಡದೆ ಇರುವುದು, ಆಲಸ್ಸಿ ತನ ಬಿಡುವುದು, ಶ್ರೇಷ್ಠ ವಿಚಾರಗಳಿಂದ ಜೀವಿಸುವುದು, ಸತ್ಪುರುಷರ ಸಂಘದಲ್ಲಿ ಇರುವುದು.
8, ವಿದ್ಯಾ, ಪೃಥ್ವಿಯಿಂದ ಹಿಡಿದು, ಪರಮೇಶ್ವರನವರೆಗೆ ಯಥಾರ್ಥ್ ಜ್ಞಾನ ಸಂಪಾದಿಸಿಕೊಳ್ಳುವುದು, ಮಾತಾಡಿದಂತೆ ನಡೆಯುತ್ತಾ ಇರಬೇಕು. ಇದರ ವಿರುದ್ಧ ನಡೆದರೆ ಅವಿದ್ಯ ಅದು ವಿದ್ಯಾವಂತ ಲಕ್ಷಣ ಅಲ್ಲ.
9, ಸತ್ಯ, ಯಾವ ಪದಾರ್ಥ ಹೇಗಿದೆಯೋ ಹಾಗೆ ತಿಳಿದುಕೊಳ್ಳುವುದು, ಸತ್ಯಮಾರ್ಗದಲ್ಲಿ ನಡೆಯುವುದು, ಸತ್ಯ ಮಾತಾಡುವುದು ಸತ್ಯವಾಗಿ ನಡೆಯುವುದು,
10, ಅಕ್ರೋಧ, ಕ್ರೋಧಾದಿ ದೋಷಗಳನ್ನು ಗುಣಗಳನ್ನು ಬಿಟ್ಟು ಬಿಡುವುದು, ಸತ್ಯ, ಶಾಂತಿ ಗುಣಗಳನ್ನು ಅಳವಡಿಸಿಕೊಳ್ಳುವುದು, ಸದಾ ಶಾಂತವಾಗಿರುವುದು.
ಇದನ್ನು ನಾವು ಸದಾ ಜ್ಞಾಪಕದಲ್ಲಿಡಬೇಕು , ಧರ್ಮದ ದಶ ಲಕ್ಷಣಗಳು ಗೀತೆಯಲ್ಲಿ ಹೇಳಿದ್ದಾರೆ, ಈ ಲಕ್ಷಣಗಳು ನಮ್ಮ ಜೀವನ ದಲ್ಲಿ ನಮ್ಮ ನಡತೆಯಲ್ಲಿ ಕಾಣುವಹಾಗೆ ನಾವು ಪ್ರಯತ್ನ ಮಾಡುತ್ತಿರಬೇಕು,
"ಅಹಿಂಸೂ ಪರಮೋಧರ್ಮಹ, ಧರ್ಮಹಿಂಸೋ ಥಥೈವಚ"
ಸದಾ ಅಹಿಂಸ ಮಾರ್ಗದಲ್ಲಿ ನಡೆಯಬೇಕು, ಅಹಿಂಸೆ ಚಿಂತನೆಯಲ್ಲಿರಬೇಕು ಆದರೆ ಸಮಯ ಬಂದಾಗ ಧರ್ಮಕ್ಕಾಗಿ ಕೆಲಸ ಮಾಡಬೇಕಾದಾಗ ಧರ್ಮ ಉಳಿವಿಗಾಗಿ ಮಾಡಬೇಕಾದ ಹಿಂಸೆ ಅಹಿಂಸೆ ಗಿಂತ ಶ್ರೇಷ್ಠವಾದದ್ದು.
ಯಾರೂ ದುಷ್ಟ ನಮ್ಮ ಹೆಂಡತಿ ಕೈ ಹಿಡಿದಾಗ ಅಲ್ಲಿ ಅಹಿಂಸೆ ಕೆಲಸಕ್ಕೆ ಬರುವುದಿಲ್ಲ, ಅವನ ತಲೆ ಒಡೆಯುವುದೇ ಅಲ್ಲಿ ಧರ್ಮ ಅದು ಅಹಿಂಸೆ ಗಿಂತ ಶ್ರೇಷ್ಠವಾದ ಧರ್ಮ ,
"ಸಮಸ್ತ ಹಿತ ಇತಿ ಸತ್ಯಹ"
ಸತ್ಯ ಎಂದರೆ ಇದ್ದದ್ದು ಇದ್ದ ಹಾಗೆ ಹೇಳುವುದು ಮಾತ್ರ ಸತ್ಯ ಅಲ್ಲ, ನಾಲ್ಕು ಜನರಿಗೆ ಹಿತವಾಗುವ ಕೆಲಸ ಅದರಲ್ಲಿ ನಮ್ಮ ಲಾಭ ಇಲ್ಲದಿರುವುದು ಅದೆಲ್ಲ ಸತ್ಯ ಶ್ರೀ ಕೃಷ್ಣ ಪರಮಾತ್ಮ ಗೀತೆಯಲ್ಲಿ ಇದೆ ಹೇಳಿದ್ದಾನೆ, ಒಮ್ಮೊಮ್ಮೆ ನಾಲ್ಕು ಜನರಿಗೆ ಹಿತವಾಗುತ್ತಿದ್ದರೆ ಅಲ್ಲಿ ಸುಳ್ಳು ಹೇಳಿದರು ಪರವಾಗಿಲ್ಲ ಅಲ್ಲಿ ಅದೇ ಸತ್ಯ,
ಶ್ರೀ ಕೃಷ್ಣ ಅಶ್ವತ್ಥಾಮ ಹತೂಹತಹ ದಲ್ಲಿ, ಕರ್ಣನ ಸಂಹಾರದಲ್ಲಿ, ಭೀಷ್ಮ, ಜಯದರತರ ಸಮ
ಹಾರದಲ್ಲಿ ಇದನ್ನೇ ಮಾಡಿದ್ದಾನೆ,
ಇನ್ನು 12ನೇ ಅಧ್ಯಾಯ ಗೀತೆಯಲ್ಲಿ ಹೇಳಿದ ಭಕ್ತಿ ಯೋಗ ನಾವು ತಪ್ಪದೇ ತಿಳಿದುಕೊಳ್ಳಬೇಕು.
ಭಕ್ತಿ ಎಂದರೆ ಕೇವಲ ಭಜನೆ, ಪೂಜೆ, ಅಲಂಕಾರ, ಲಕ್ಷ ಬಿಲ್ವಾರ್ಚನೆ, ಕೋಟಿ ಪುಷ್ಪಾರ್ಚನೆ, ಸಹಸ್ರ ಕುಂಭ ಕ್ಷೀರ ಅಭಿಷೇಕ, ಕೇಸರಿ ಬಟ್ಟೆ ಧರಿಸುವುದು, ಕರಿ ಬಟ್ಟೆ ಧರಿಸುವುದು, ಯಾವಾಗಲೂ ಮಡಿಯಲ್ಲಿರುವುದು, ಪುಣ್ಯತಿಥಿ ,ಆರಾಧನೆಗಳನ್ನು ವಿಜ್ರಂಭಣೆಯಿಂದ ಮಾಡುವುದು ಏಕಾದಶಿ ಉಪವಾಸ ಮಾಡುವುದು ಇಷ್ಟು ಮಾತ್ರ ಭಕ್ತಿ ಅಲ್ಲ,
ಇವು ತಪ್ಪು ಎಂದು ನಾನು ಹೇಳುತ್ತಿಲ್ಲ ಇಷ್ಟು ಮಾತ್ರ ಸಾಲದು ಇದು ಪೂರ್ಣ ಅಲ್ಲ, ಇವುಗಳು ಸ್ವಲ್ಪಮಟ್ಟಿಗೆ ಮಾನಸಿಕ ಸಮಾಧಾನ ಕೊಡಬಹುದು ಅಷ್ಟೇ, ಇದಕ್ಕೆ ಭಗವಂತನ ಪೂರ್ಣ ಸಮ್ಮತ ಇಲ್ಲ,
ಗೀತೆ ಹನ್ನೆರಡನೇ ಅಧ್ಯಾಯದಲ್ಲಿ ಶ್ರೀ ಕೃಷ್ಣ ಪರಮಾತ್ಮ ಹೇಳುತ್ತಾರೆ,
ನಿಜವಾದ ನನ್ನ ಭಕ್ತ ಹೇಗಿರುತ್ತಾನೆ ಎಂದು.
ಶುಭ ಅಶುಭ ಪರಿತ್ಯಾಗಿ, ನ ದೃಷ್ಟಿ, ನ ದೃಷ್ಟಿತಿ, ನ ಕಾಂಕ್ಷತಿ, ನ ಷೂಚಿತಿ, ಇಂತಹ ಮೌಲ್ಯವಾದ ಪವಿತ್ರವಾದ ಗುಣಗಳು ಹೊಂದಿದ ವ್ಯಕ್ತಿ ನನ್ನ ನಿಜವಾದ ಭಕ್ತ ಎಂದು ಭಗವದ್ಗೀತೆ 12ನೇ ಅಧ್ಯಾಯದಲ್ಲಿ 20 ಶ್ಲೋಕಗಳಲ್ಲಿ ವಿವರಿಸಿದ್ದಾರೆ,
ಲಾಭ, ಹಾನಿ, ಜಯ, ಅಪಜಯ ಗಳಲ್ಲಿ ಸಮಾನ ದೃಷ್ಟಿಯನ್ನು ಇಡುವಾತ ನನ್ನ ನಿಜವಾದ ಭಕ್ತ,
ಜೀವನದಲ್ಲಿ ಏನು ಬಂದರು, ಸುಖ ಮತ್ತು ದುಃಖಗಳನ್ನು ಸಮಾನವಾಗಿ ಅನುಭವಿಸುವ ವ್ಯಕ್ತಿ ನನ್ನ ನಿಜವಾದ ಭಕ್ತ,
ಸುಖ ಬಂದಾಗ ಹಿಗ್ಗುವುದು, ದುಃಖ ಬಂದಾಗ ಕುಗ್ಗದೆ ಇರುವ ವ್ಯಕ್ತಿ ನನ್ನ ನಿಜವಾದ ಭಕ್ತ,
ಯಾವುದನ್ನು ಚಿಂತಿಸಿದೆ ಇರುವುದು, ಯಾವುದನ್ನು ಅಪೇಕ್ಷೆ ಮಾಡದೆ ಇರುವುದು, ದೇವರು ಕೊಟ್ಟದ್ದರಲ್ಲಿ ತೃಪ್ತಿಯಿಂದ ಇರುವಾತ ಇಂತಹ ವ್ಯಕ್ತಿ ನನ್ನ ನಿಜವಾದ ಭಕ್ತ,
ಪ್ರಾಲಬ್ಧದಲ್ಲಿ ಬಂದದ್ದನ್ನು ಸ್ವೀಕರಿಸುತ್ತಾ ಜೀವನ ಸಾಗಿಸುವವನು ನನ್ನ ನಿಜವಾದ ಭಕ್ತ.
ಧಾರ್ಮಿಕ ವ್ಯಕ್ತಿ, ಪೂಜೆ ಪುನಸ್ಕಾರ ಮಾಡುವ ವ್ಯಕ್ತಿ, ಮಡಿ ಆಚರಣೆ ಮಾಡುವ ವ್ಯಕ್ತಿ, ತೀರ್ಥ ಯಾತ್ರೆ ಮಾಡುವ ವ್ಯಕ್ತಿ, ಪುಣ್ಯ ತಿಥಿ ಆರಾಧನೆಗಳನ್ನು ವಿಜ್ರಂಬಣೆಯಿಂದ ಮಾಡುವ ವ್ಯಕ್ತಿ ಗಳಲ್ಲಿ ಗೀತೆಯಲ್ಲಿ ಹೇಳಿದ 10 ಧರ್ಮ ಲಕ್ಷಣಗಳಲ್ಲಿ ಹಾಗೂ ಭಕ್ತಿಯಲ್ಲಿ ಸ್ವಲ್ಪಾದರೂ ಆತನ ನಡತೆಯಲ್ಲಿ ಕಾಣಬೇಕು, ಪರಿಪೂರ್ಣ ಇಲ್ಲದಿದ್ದರೂ ಸ್ವಲ್ಪವಾದರೂ ಕಾಣಬೇಕು, 10 ಲಕ್ಷಣಗಳು ಪೂರ್ಣ ಹೊಂದುವ ಕಡೆ ಇವರ ಪ್ರಯಾಣ, ಪ್ರಯತ್ನ ನಡೆದಿರಬೇಕು ಆಗ ಮಾತ್ರ ಅಂತಹ ವ್ಯಕ್ತಿಯನ್ನು ನಾವು ಧಾರ್ಮಿಕ ವ್ಯಕ್ತಿ ನಿಜವಾದ ಭಕ್ತ ಎಂದು ಹೇಳಬಹುದು ಇಲ್ಲವಾದಲ್ಲಿ
ನಮ್ಮ ದಾಸರು ಸಂತರು ಹೇಳಿದ ಹಾಗೆ,
"ಉದರ ವೈರಾಗ್ಯವಿದು ನಮ್ಮ ಪದುಮ ನಾಭನಲ್ಲಿ ಲೆಶ ಭಕ್ತಿ ಇಲ್ಲ ಉದರ ವೈರಾಗ್ಯವಿದು,"
ಎಂಬಂತೆ ನಮ್ಮ ಜೀವನ ಕಾಣಿಸುತ್ತದೆ.
ಇದನ್ನು ನಾವು ಆತ್ಮ ವಿಮರ್ಶ ಮಾಡಿಕೊಳ್ಳಬೇಕು, ಅರವತ್ತು ವಯಸ್ಸು ದಾಟಿದವರು ಒಮ್ಮೆ ಹಿಂತಿರುಗಿ ನೋಡಬೇಕು, ಇದನ್ನು "ಸಿಂಹ ಅವಲೋಕನ" ಎನ್ನುತ್ತಾರೆ, ನಾವು ನಮ್ಮ ಜೀವನದಲ್ಲಿ ಇದುವರೆಗೆ ನಡೆದು ಬಂದ ದಾರಿ ಸರಿಯಾದದ್ದ, ನಮ್ಮಿಂದ ಜೀವನದಲ್ಲಿ ತಪ್ಪುಗಳೆನಾದರೂ ಆಗಿವೆಯಾ, ಅವುಗಳನ್ನು ಸರಿ ಮಾಡಿಕೊಳ್ಳುವ ಪ್ರಯತ್ನ ಮಾಡಬೇಕು ಇದೇ "ಸಾರ್ಥಕ ಜೀವನದ" ಲಕ್ಷಣ,
ಮನುಷ್ಯ ತಪ್ಪು ಮಾಡುವುದು ಸಹಜ ಅದು ಪುನರಾ ವೃತ್ತಿ ಆಗಬಾರದು,
ಶ್ರೀ ಭಗವದ್ಗೀತೆಯಲ್ಲಿ ,"ಉದ್ದ ರೇತ ಆತ್ಮನಾತ್ಮಾನಂ", ಎಂದಿದ್ದಾರೆ ನಮ್ಮ ಉದ್ಧಾರ ನಾವೇ ಸ್ವ ಪ್ರಯತ್ನದಿಂದ ಮಾಡಿಕೊಳ್ಳಬೇಕು, ಇದನ್ನೇ ಸಂತ ಶ್ರೀ ಬಸವೇಶ್ವರ"ಅರಿವೇ ಗುರು"ಎಂದಿದ್ದಾರೆ ನಮ್ಮ ತಿಳುವಳಿಕೆ ನಮ್ಮ ಜ್ಞಾನ ಅದೇ ನಿಮಗೆ ಗುರು ಅದನ್ನು ಹೆಚ್ಚಿಸಿಕೊಳ್ಳಬೇಕು ನಮ್ಮ ಜ್ಞಾನ ನಮಗೆ ಮಾರ್ಗದರ್ಶನವಾಗಬೇಕು,
ಎಲ್ಲಾ ಗುರುಗಳನ್ನು ಸಂತರನ್ನು, ಸನ್ಯಾಸಿಗಳನ್ನು, ಸ್ವಾಮಿಗಳನ್ನು ಗೌರವಿಸಬೇಕು, ನಮಸ್ಕರಿಸಬೇಕು, ಆದರ ಸತ್ಕಾರ ಮಾಡಬೇಕು, ಆದರೆ ಅವರ ಹಿಂದೆ ಬಾಲ ಅಲ್ಲಾಡಿಸುತ್ತಾ ಗುರು ಗುರು ಎಂದು ತಿರುಗಬಾರದು. ಅವರು ಹೇಳಿದ್ದೆ ವೇದ ವಾಕ್ಯ ಎಂದು ಅಂಧ ಭಕ್ತರಾಗಬಾರದು, ನಾವು ಸ್ವಂತ ಆಲೋಚಿಸಬೇಕು ತಿಳಿದುಕೊಳ್ಳಬೇಕು,
ಯಾವ ಸನ್ಯಾಸಿ ಗಳಿಂದ, ಯಾವ ಸ್ವಾಮಿ ಗಳಿಂದ ನಮ್ಮ ಉದ್ದಾರ ಆಗುವದಿಲ್ಲ ಇದು ಜ್ಞಾಪಕ ಇಟ್ಟುಕೊಳ್ಳಬೇಕು, ನಮ್ಮ ಸಾಧನೆ ನಮ್ಮ ಸ್ವ ಪ್ರಯತ್ನ ದಿಂದ ಮಾತ್ರ ನಮ್ಮ ಆತ್ಮ ಉದ್ಧಾರ ಮಾಡಿಕೊಳ್ಳಲು ಸಾಧ್ಯ,
ಯಾವ ಮಂತ್ರಕ್ಷತೆ ಯಾವ ಕಲ್ ಸಕ್ಕರೆ ಕೆಲಸ ಮಾಡುವುದಿಲ್ಲ,
ಹೀಗೆಂದು ನಾನು ಯಾವ ಗುರುಗಳನ್ನು, ಸ್ವಾಮಿಗಳನ್ನು ನಿಂದಿಸುತ್ತಿಲ್ಲ, ಅಲ್ಲಗಳಿಯುತ್ತಿಲ್ಲ ಅವರು ನಮಗೆ ದಾರಿ ತೋರಿಸುತ್ತಾರೆ ಅಷ್ಟೇ ನಡೆಯಬೇಕಾದದ್ದು ನಾವೇ, ಅವರು ನಮ್ಮನ್ನು ಎತ್ತಿಕೊಂಡು ನಡೆಯುವುದಿಲ್ಲ,
ಶ್ರೀ ಭಗವದ್ಗೀತೆಯಲ್ಲಿ ಹೇಳಿದ ಹಾಗೆ "ಗಹನೂ ಗತಿಹಿ"ಈ ಬ್ರಹ್ಮಾಂಡದ, ಪ್ರಪಂಚದ ವಿಷಯ ಬಹಳ ಘಹನ ವಾದದ್ದು ಯಾರಿಗೂ ಅರ್ಥ ಆಗುವುದಿಲ್ಲ ,
ಮನುಷ್ಯರಿಗೆ ಮರಣ ತಪ್ಪಿದ್ದಲ್ಲ ಆದರೆ ಮರಣ ಭಯ ಹೋಗಬೇಕು ಇದು ನಮ್ಮ ಸಾಧನೆಯಾಗಬೇಕು ಮರಣ ಸಮಯದಲ್ಲಿ ನಮ್ಮ ಬಾಯಲ್ಲಿ ರಾಮನಾಮ ಬರಬೇಕಾದರೆ ಈಗಿಂದಲೇ ನಾವು ಸದಾ ಬಾಯಿಯಲ್ಲಿ ರಾಮ ನಾಮ ಅನ್ನುತ್ತಾ ಇರಬೇಕು,
ಇದನ್ನೇ ಜಗದ್ಗುರು ಶ್ರೀ ಶಂಕರ ಭಗವತ್ಪಾದರು "ಭಜ ಗೋವಿಂದಮ "ಶ್ಲೋಕ ಗಳಲ್ಲಿ ಹೇಳುತ್ತಾರೆ.
ಬನ್ನಿ ಮೂಡನಂಬಿಕೆ, ಅಜ್ಞಾನ, ಢಂಬಾಚಾರ, ಪಾಖಂಡಿ, ರೂಢಿ ಗಳಿಂದ ಹೊರಬಂದು ಜ್ಞಾನವನ್ನು ಬೆಳೆಸಿಕೊಂಡು ಜೀವಿಸೋಣ,
ಗೀತೆ ಅದನ್ನೇ ಹೇಳುತ್ತದೆ
"ನ ಜ್ಞಾನೇನ ಸದೃಶಂ"
ಈ ಜಗತ್ತಿನಲ್ಲಿ ಜ್ಞಾನಕ್ಕಿಂತ ಮಿಗಿಲಾದ ವಸ್ತು ಇನ್ನೊಂದು ಇಲ್ಲ, ಎಲ್ಲ ದುಃಖಗಳಿಗೆ ನಮ್ಮ ಅಜ್ಞಾನವೇ ಕಾರಣ ಜ್ಞಾನವಾಯಿತು ಅಂದರೆ ದುಃಖವಿಲ್ಲ, ಇದೇ ಗೀತೆಯ ಸಾರ,
ಭಾರತ್ ಮಾತಾಕಿ ಜೈ
ಅಮರ ದೀಕ್ಷಿತ ಕೃಷ್ಣ
9448 7575 87