
6th March 2026
ಬೆಂಗಳೂರು: ಈ
ಸಾಲಿನ ಬಜೆಟ್ನಲ್ಲಿ ಮಕ್ಕಳ
ಕಾಳಜಿಗೆ ಆದ್ಯತೆ ನೀಡಿರುವ
ಮುಖ್ಯಮಂತ್ರಿ ಸಿದ್ಧರಾಮಯ್ಯ
ಅವರು, ೧೬ ವರ್ಷದೊಳಗಿನ
ಮಕ್ಕಳಿಗೆ ಸಾಮಾಜಿಕ
ಜಾಲತಾಣ ಬಳಕೆಯನ್ನು
ನಿಷೇಧಿಸುವ ಘೋಷಣೆ
ಮಾಡಿದ್ದಾರೆ.
ಹೆಚ್ಚುತ್ತಿರುವ ಮೊಬೈಲ್
ಬಳಕೆಯಿಂದ ಮಕ್ಕಳ ಮೇಲೆ
ಬೀರು ತ್ತಿರುವ ಅಡ್ಡ ಪರಿಣಾಮಗಳನ್ನು ತಡೆಗಟ್ಟುವ ಉದ್ದೇಶದಿಂದ
೧೬ ವರ್ಷ ದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲಣತಾಣದ
ಬಳಕೆಯನ್ನು ನಿಷೇಧಿಸಲಾಗಿದೆ ಎಂದು ಬಜೆಟ್ ಭಾಷಣದಲ್ಲಿ
ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣ ಬಳಕೆ ಮಕ್ಕಳ ಮೇಲೆ ಗಂಭೀರ
ಪರಿಣಾಮ ಬೀರುತ್ತಿದ್ದು, ಇದರಿಂದ ಮಕ್ಕಳ ಸರ್ವಾಂಗೀಣ
ಬೆಳವಣಿಗೆಗೂ ಅಡ್ಡಿಯಾಗಿದ್ದು, ಮಕ್ಕಳು ಸಾಮಾಜಿಕ ಜಾಲತಾಣಗಳ
ವ್ಯಸನಕ್ಕೆ ಒಳಗಾಗುವುದನ್ನು ತಪ್ಪಿಸಲು ಮುಖ್ಯಮಂತ್ರಿ ಸಿದ್ಧರಾಮಯ್ಯ
೧೬ ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆಯನ್ನು
ನಿಷೇಧಿಸುವ ಘೋಷಣೆ ಮಾಡಿದ್ದಾರೆ.
ಮಕ್ಕಳಿಗೆ ಶಾಲೆಯಲ್ಲಿ ಆನ್ಲೈನ್ ಕ್ಲಾಸ್ಗಳಲ್ಲೂ ಮೊಬೈಲ್
ಕೊಡಿಸಿದರೆ ಅದನ್ನು ಸೋಷಿಯಲ್ ಮೀಡಿಯಾಗೆ ಬಳಕೆ ಮಾಡುತ್ತಿದ್ದು,
ಸೋಷಿಯಲ್ ಮಿಡಿಯಾಗೆ ತಮ್ಮದೇ ಲಾಗ್ಇನ್ ಮಾಡಿಕೊಳ್ಳುತ್ತಿದ್ದರು.
ಆದರೆ ಇದೀಗ ೧೬ ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣ
ದಲ್ಲಿ ಲಾಗ್ಇನ್ ಮಾಡುವುದಕ್ಕೂ ಮುನ್ನ ವಯಸ್ಸಿನ ದೃಢೀಕರಣ
ಮಾಡುವುದನ್ನು ಕಡ್ಡಾಯ ಮಾಡಲಾಗುತ್ತಿದೆ