
12th June 2025
ಅದು ಯಾರೊಂದಿಗೂ ಆಗಬಹುದು, ಅನೇಕ ಬಾರಿ ನಮ್ಮ ಅರಿವಿಲ್ಲದೆಯೇ. ಅದಕ್ಕೆ ವಯಸ್ಸು, ಭಾಷೆ, ಧರ್ಮ, ವರ್ಣದ ಯಾವುದೇ ಮಿತಿಯಿಲ್ಲ. ಅಂತಹ ಒಂದು ಅನನ್ಯ ಸ್ನೇಹದ ಕಥೆಯು ವಾಣಿಶ್ರೀ ಫಿಲ್ಮ ಪ್ರೊಡಕ್ಷನ್ಸ್ನ 'ಆಲ್ ಇಸ್ ವೆಲ್' ಮರಾಠಿ ಚಲನಚಿತ್ರದ ಮೂಲಕ ಮರಾಠಿ ಬೆಳ್ಳಿ ಪರದೆಯ ಮೇಲೆ ಮೂಡಿಬರಲಿದೆ.
ಇದು ಅಮರ್, ಅಕ್ಟರ್ ಮತ್ತು ಆಂಟನಿ ಅವರ ಸ್ನೇಹದ ಕಥೆಯಾಗಿದೆ. ಮನರಂಜನೆ ಮತ್ತು ಮಸ್ತಿಯ ಅದ್ಭುತ ಪ್ಯಾಕೇಜ್ ಹೊಂದಿರುವ 'ಆಲ್ ಇಸ್ ವೆಲ್' ಚಲನಚಿತ್ರವನ್ನು ಯೋಗೇಶ್ ಜಾಧವ್ ನಿರ್ದೇಶಿಸಿದ್ದು, ಪ್ರಿಯದರ್ಶನ್ ಜಾಧವ್ ಬರೆದಿದ್ದಾರೆ. ಬೆಳಗಾವಿಯವರಾದ ನಿರ್ಮಾಪಕರು ಅಮೊದ್ ಮುಚಂಡಿಕರ್, ವಾಣಿ ಹಲಪ್ಪನವರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಸಹ-ನಿರ್ಮಾಪಕರು ಮಲ್ಲೇಶ್ ಸೋಮನಾಥ ಮರುಚೆ, ವಿನಾಯಕ ಪಟ್ಟಣಶೆಟ್ಟಿ. ನಿರ್ಮಾಣ ಮೇಲ್ವಿಚಾರಕರು ದೀಪಕ್ ಸಾಂಬ್ರೇಕರ್, ಅಮಿತ್ ಜಾಧವ್. ಮುಂಬರುವ ಜೂನ್ 27 ರಂದು 'ಆಲ್ ಇಸ್ ವೆಲ್' ಚಲನಚಿತ್ರ ಎಲ್ಲೆಡೆ ಬಿಡುಗಡೆಯಾಗಲಿದೆ. ಇದು ಕುಟುಂಬದೊಂದಿಗೆ ಆನಂದಿಸಬಹುದಾದ ಹಾಸ್ಯದ ಔತಣವಾಗಿದ್ದು, 'ಆಲ್ ಇಸ್ ವೆಲ್' ಚಲನಚಿತ್ರವು ಮನರಂಜನೆಯ ಅದ್ಭುತ ಕೊಡುಗೆಯಾಗಲಿದೆ ಎಂದುಆನಂದ, ಕೋಪ, ಮನಸ್ಸಿನ ರಹಸ್ಯಗಳನ್ನು ವ್ಯಕ್ತಪಡಿಸಲು ಆತ್ಮೀಯ ಸ್ನೇಹಿತರಿದ್ದರೆ ಜೀವನವು ವರ್ಣರಂಜಿತವಾಗುತ್ತದೆ ಎಂಬ ಆಶಯವನ್ನು ಎತ್ತಿಹಿಡಿಯುವ 'ಆಲ್ ಇಸ್ ವೆಲ್' ಚಿತ್ರದ ಮೂಲಕ ಪ್ರಿಯದರ್ಶನ್ ಜಾಧವ್, ಅಭಿನಯ್ ಬೇರ್ಡೆ, ರೋಹಿತ್ ಹಳದಿಕರ್ ಈ ಅದ್ಭುತ ತ್ರಿಮೂರ್ತಿಗಳು ಮೊದಲ ಬಾರಿಗೆ ಒಂದಾಗಿದ್ದಾರೆ. ಇವರೊಂದಿಗೆ ಸಯಾಜಿ ಶಿಂಧೆ, ಅಭಿಜಿತ್ ಚವಾಣ್, ನಕ್ಷತ್ರಾ ಮೇಧೇಕರ್, ಸಾಯಲಿ ಫಾಟಕ, ಮಾಧವ್ ವಾಯ್ಲಿ, ಅಜಯ್ ಜಾಧವ್, ಅಮೈರಾ ಗೋಸ್ವಾಮಿ, ದಿಶಾ ಕಟ್ಕರ್ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. 'ಆಲ್ ಇಸ್ ವೆಲ್' ಚಲನಚಿತ್ರದ ಕಾರ್ಯಕಾರಿ ನಿರ್ಮಾಪಕರು ಸಂಜಯ್ ಥುಬೆ. ಸಂಗೀತ ಚಿನಾರ್-ಮಹೇಶ್, ಅರ್ಜುನ್ ಜನ್ಯಾ ಅವರದ್ದು. ಛಾಯಾಗ್ರಹಣ ಮಯೂರೇಶ್ ಜೋಶಿ ಮತ್ತು ಸಂಕಲನ ಅಥಶ್ರೀ ಥುಬೆ ಅವರದ್ದು. ನೃತ್ಯ ನಿರ್ದೇಶಕ ರಾಜೇಶ್ ಬಿಡ್ಡೆ ಮತ್ತು ಸಾಹಸ ದೃಶ್ಯಗಳು ಅಜಯ್ ಠಾಕೂರ್ ಪಠಾಣಿಯಾ ಅವರದ್ದು. ವಸ್ತ್ರ ವಿನ್ಯಾಸ ಕೀರ್ತಿ ಜಂಗಮ್ ಮತ್ತು ಮೇಕಪ್ ಅತುಲ್ ಶಿಧಾಯೆ ಅವರದ್ದು. ಗೀತ ರಚನೆಕಾರ ಮಂದಾರ್ ಚೋಲ್ಕರ್. ಗಾಯಕ ರೋಹಿತ್ ರಾವುತ್, ಗಾಯಕಿ ಅಪೇಕ್ಷಾ ದಾಂಡೇಕರ್ ಚಿತ್ರದ ಹಾಡುಗಳನ್ನು ಹಾಡಿದ್ದಾರೆ.ಯುವಕರ ಕಥಾಹಂದರ ಹೊಂದಿರುವ 'ಆಲ್ ಇಸ್ ವೆಲ್' ಚಲನಚಿತ್ರವು ಕಲಾವಿದರ ಸುಂದರ ಅಭಿನಯ, ಮಧುರ ಸಂಗೀತ ಮತ್ತು ನಯನಮನೋಹರ ಪ್ರಸ್ತುತಿಯಿಂದ ಶ್ರೀಮಂತವಾಗಿದೆ.
12th June 2025
ಬೆಳಗಾವಿಯ ಹಿರಿಯ ಸಾಹಿತಿ ನೀಲಗಂಗಾ ಚಿರತೆ ಮಠದ ಕಥೆ ಆಧಾರಿತ ಚುರುಮುರಿಯಾ ಕಲಾತ್ಮಕ ಚಲನಚಿತ್ರ ಬೆಳಗಾವಿಯಲ್ಲಿ ಶುಕ್ರವಾರ ಬಿಡುಗಡೆಯಾಗಲಿದೆ
ಈ ಕುರಿತು ಬುಧವಾರ ನಡೆದ ಮಧ್ಯಮ ಗೋಷ್ಠಿಯಲ್ಲಿ ಚಿತ್ರಕ್ಕೆ ಕಥೆ ಬರೆದಿರುವ ಹಿರಿಯ ಸಾಹಿತಿ ನೀಲಗಂಗಾ ಚರಂತಿಮಠ ಮಾತನಾಡಿ, ಚಿತ್ರ ಸಾಮಾನ್ಯ ಮನುಷ್ಯನ ಬದುಕಿನ ಸುತ್ತ ಹೆಣದಂತ ಕಥೆ ಚುರುಮುರಿ ಮಾರುವ ಅಸಮಾನ್ಯ ಮನುಷ್ಯ ಬದುಕಿನ ಸಂಧ್ಯಾಕಾಲದ ತ್ಯಾಗ ಹಾಗೂ ಸ್ವಾಭಿಮಾನದ ಕಥಾ ವಸ್ತುವನ್ನು ಒಳಗೊಂಡ ಕಲಾತ್ಮಕ ಚಿತ್ರವಾಗಿದ್ದು, ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತದೆ ಎಲ್ಲರೂ ನೋಡಬೇಕೆಂದು ಮನವಿ ಮಾಡಿದರು.
ಚಿತ್ರದ ನಿರ್ದೇಶಕಿ ಸುಪ್ರಿಯಾ ನಿಪ್ಪಾಣಿ ಸೇರಿದಂತೆ ಚಿತ್ರತಂಡದ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು
9th June 2025
🪶"ಸುದ್ದಿ ಸದ್ದು" ಪತ್ರಿಕೆಗೆ ಶುಭ ಹಾರೈಕೆಗಳು
.. ಸಹೃದಯಿ, ಸಂವೇದನಾಶೀಲ, ಜನಪರ ನಿಲುವಿನ , ಗ್ರಾಮೀಣ ಸಂಸ್ಕೃತಿ, ಪರಂಪರೆ, ಜಾತ್ರೆ, ಚರಿತ್ರೆ ಹಾಗೂ ಗ್ರಾಮೀಣ ಸಮಸ್ಯೆ ಮೊದಲಾದ ವಿಷಯಗಳ ಕುರಿತು ಉಪಯುಕ್ತ ಲೇಖನ, ಸಂಶೋಧನೆ, ಪುಸ್ತಕಗಳನ್ನು ಹಾಗೂ ಇನ್ನಿತರ ಸುದ್ದಿಗಳನ್ನು ಬರೆದ ಅನುಭವಿಯಾದ ಸಮಾಜಮುಖಿಯ, ಕ್ರಿಯಾಶೀಲ ಮನದ ಸಾಹಿತಿ ಸಿ.ವಾಯ್. ಮೆಣಸಿನಕಾಯಿ ಇವರು ಈಗಾಗಲೇ ನಾಡಿಗೆ ಚಿರಪರಿಚಿತರಾಗಿದ್ದಾರೆ...
ಪ್ರಸ್ತುತ ಸಂದರ್ಭದಲ್ಲಿ ಜನಜಾಗೃತಿ, ಸಾಹಿತ್ಯ ಸಂಸ್ಕೃತಿಯ ಸಂವರ್ಧನೆಯ ದಿಸೆಯಲ್ಲಿ ಪತ್ರಿಕೆಗೆ ಅಗ್ರಸ್ಥಾನವಿದೆ. ಇದನ್ನರಿತ ಮೆಣಸಿನಕಾಯಿ ಇವರು ತಮ್ಮ ಸಂಪಾದಕತ್ವದಲ್ಲಿ ನೂತನವಾದ "ಸುದ್ದಿ ಸದ್ದು" ಎಂಬ ಪಾಕ್ಷಿಕ ಪತ್ರಿಕೆಯನ್ನು ಹೊರತಂದಿದ್ದಾರೆ...
ಮಾನ್ಯರು ನಮ್ಮ ನಿವಾಸಕ್ಕೆ ಆಗಮಿಸಿ ಪ್ರಥಮ ಸಂಚಿಕೆಯನ್ನು ನನ್ನ ಕೈಗೆ ನೀಡಿದರು..
ಪತ್ರಿಕೆಯನ್ನು ಅವಲೋಕಿಸಿದೆ.. ಇದರ ಸತ್ವಯುತ ಹೂರಣವನ್ನರಿತು ಅಭಿಮಾನಪಟ್ಟೆನು. ಇದು ಓದುಗರ ಮನ ಗೆಲ್ಲುವಲ್ಲಿ ಯಶಸ್ವಿಯಾಗುತ್ತದೆ ಎಂಬ ಭರವಸೆ ನನಗಿದೆ..ಸತ್ಯ ಹಾಗೂ ಸತ್ವದ ಪತ್ರಿಕಾ ಧರ್ಮದ ದಾರಿಯಲ್ಲಿ ಸಾಗಿ ಸುದ್ದಿಯಲ್ಲಿ ತನ್ನದೇಯಾದ ಜನಜಾಗೃತಿಯ, ಅರಿವಿನ ಸದ್ದು ಮಾಡಲೆಂದು ನನ್ನ ಆಶಯ. ಶುಭ ಹಾರೈಕೆಗಳು..
.. ✍️ .ಶಿ.ಗು.ಕುಸುಗಲ್ಲ
9th June 2025
⭐ ಬೆಳಗಾವಿ ಜಿಲ್ಲಾ ಕ ಸಾ ಪ ವತಿಯಿಂದ ಸಾಹಿತ್ಯದ ಚಿಂತನ ಮಂಥನ ಕಾರ್ಯಕ್ರಮ - ನೀಲಗಂಗಾ ಚರಂತಿಮಠರ ಸಾಹಿತ್ಯ ಸೇವೆ ಅಗಣಿತೀಯವಾದದ್ದು - ಸಾಹಿತಿ ಸುನಂದ ಎಮ್ಮಿ ಅಭಿಮತ⭐
ಸಾಹಿತ್ಯದಎಲ್ಲ ಪ್ರಕಾರಗಳಲ್ಲಿ ನೂರಕ್ಕೂ ಹೆಚ್ಚು ಕೃತಿ ರಚಿಸಿ ನಮ್ಮ ಸಹಜ ಬದುಕಿನ ಜೀವಂತಿಕೆಯನ್ನು ತಮ್ಮ ಕೃತಿಗಳಲ್ಲಿ ತೋರಿಸಿದ ನೀಲಗಂಗಾ ಚರಂತಿಮಠರ ಸಾಹಿತ್ಯ ಸೇವೆ ನಿಜಕ್ಕೂ ಅಗಣಿತೀಯವಾದದ್ದು ಎಂದು ಹಿರಿಯ ಸಾಹಿತಿ ಸುನಂದಾ ಎಮ್ಮಿ ರವಿವಾರ ದಿ 8 ರಂದು ಬೆಳಗಾವಿ ನಗರದ ಕನ್ನಡ ಭವನದಲ್ಲಿ ಜಿಲ್ಲಾ ಕ ಸಾ ಪ ಮತ್ತು ಕನ್ನಡ ಸಾಂಸ್ಕೃತಿಕ ಭವನದ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ಬೆಳಗಾವಿ ಜಿಲ್ಲೆಯ ಸಾಹಿತಿಗಳ ಸಾಹಿತ್ಯದ ಚಿಂತನ ಮಂಥನ ' ನುಡಿ ತೆರಿಗೆ ನೂರೊಂದು ನಮನ ' ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ನೀಲಗಂಗಾ ಚರಂತಿಮಠ ಅವರ ಬದುಕು ಬರಹ ಕುರಿತಾಗಿ ವಿಶೇಷ ಉಪನ್ಯಾಸ ಕೊಡುತ್ತಾ ಮಾತನಾಡಿದರು. ನೀಲಗಂಗಾ ರವರು ಚುಟುಕು, ಮಕ್ಕಳ ಸಾಹಿತ್ಯ, ಪರಿಸರ,ಯಾತ್ರೆ,ಕಾದಂಬರಿ ಚರಿತ್ರೆ,ಶರಣ ಸಾಹಿತ್ಯ, ಕೃಷಿ, ಆರೋಗ್ಯ,ನೆಲ,ಜಲ ದೇಶಾಭಿಮಾನ, ಬದುಕು, ಸ್ತ್ರೀ ಹೀಗೆ ವಿವಿಧ ವಿಷಯಗಳ ಕುರಿತು ತಮ್ಮದೇ ಆದ ಕೃತಿಗಳನ್ನು ರಚಿಸಿದ್ದಾರೆ. ಪ್ರತಿ ಕಾವ್ಯ ರಚಿಸುವಾಗ ಅದರ ಕುರಿತು ನೈಜ ಸಂಶೋಧನೆ ಮಾಡಿ ರಚಿಸುವ ಅವರ ಸಂಶೋಧನಾ ಮನೋಭಾವ ಕಿರಿಯರಿಗೆ ಮಾದರಿಯಾಗಿದೆ.ಮುಕ್ತಾಂಗನೆ ಎಂಬ ಬೃಹತ್ ಕಾವ್ಯವನ್ನು ಸಹ ರಚಿಸಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿಯಾಗಿ ಕನ್ನಡ ಸಾಹಿತ್ಯ ಭವನ, ಗಾಂಧೀ ಸ್ಮಾರಕ ಭವನ, ಕುಮಾರ ಗಂಧರ್ವ ರಂಗ ಮಂದಿರ ಮುಂತಾದವುಗಳ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಲ್ಲದೆ ಕಿತ್ತೂರು ಉತ್ಸವ ಬೆಳವಡಿ ಮಲ್ಲಮ್ಮ ಉತ್ಸವಗಳು ಕೂಡ ಇವರ ಕಾರ್ಯಾವಧಿಯಲ್ಲಿಯೇ ಪ್ರಾರಂಭವಾಗಿವೆ ಎಂಬುದು ಸಹ ಇವರ ನಾಡು ನುಡಿಗೆ ಇರುವ ಕಳಕಳಿಗೆ ಸಾಕ್ಷಿಯಾಗಿವೆ. ಇವರ ಅನನ್ಯಸೇವೆಗೆ ಅನೇಕ ಸಂಘ ಸಂಸ್ಥೆ, ಸರ್ಕಾರದ ವತಿಯಿಂದ ಪ್ರಶಸ್ತಿಗಳು ಲಭಿಸಿವೆ ಎಂದು ಅವರ ಬದುಕು ಬರಹ ಕುರಿತು ವಿವರಿಸಿದರು.
ಜಿಲ್ಲಾ ಘಟಕದ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ನೀಲಗಂಗಾ ಚರಂತಿಮಠ ಜೀವನದ ಮೌಲ್ಯಗಳನ್ನು ಕೃತಿಗಳಿಂದ ಕಟ್ಟುವ ಕೆಲಸ ಮಾಡಿದ್ದೇನೆ ಇನ್ನೂ ಮಾಡುವದು ಸಾಕಷ್ಟಿದೆ ಎಂದರು. ಜಿಲ್ಲಾ ಘಟಕದ ಕಾರ್ಯದರ್ಶಿಎಂ. ವೈ. ಮೆಣಸಿನಕಾಯಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಹಕಾರ್ಯದರ್ಶಿ ವೀರಭದ್ರ ಅಂಗಡಿ,ಆರ್ ಬಿ ಬನಶಂಕರಿ ಸುರೇಶ ನರಗುಂದ, ಬಿ ಬಿ ಮಠಪತಿ, ಸುಧಾ ಪಾಟೀಲ ವಾಸಂತಿ ಮೇಳೇದ,ಎಂ. ಎ. ದೇಸಾಯಿ, ನಿತಿನ್ ಮೆಣಸಿನಕಾಯಿ, ಜಿ ಎಸ್ ರೇವಣ್ಣವರ ಸೇರಿದಂತೆ ಅನೇಕ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಶಿವಾನಂದ ತಲ್ಲೂರ ಸ್ವಾಗತಿಸಿದರು ಜ್ಯೋತಿ ಬದಾಮಿ ಪರಿಚಯಿಸಿದರು, ಡಾ.ಹೇಮಾ ಸೋನೋಳ್ಳಿ ನಿರೂಪಿಸಿದರು. ದೀಪಿಕಾ ಚಾಟೆ ವಂದಿಸಿದರು.
8th June 2025
ನಿತ್ಯ ಪರಿಸರ ಪ್ರೀತಿಸುವ ಗುಣವಿರಬೇಕು.
ರಾಮತೀರ್ಥನಗರದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ನಿವ್ರತ್ತ ಜಿಲ್ಲಾಧಿಕಾರಿ ಎಮ್ ಜಿ ಹಿರೇಮಠ ಅಭಿಮತ.
ಅಂಕಲಗಿ. ೦೮- ಪರಿಸರ ನಮ್ಮ ಬದುಕಿಗೆ ಕೊಡುವ ಸಂಪತ್ತು ಅತ್ಯಮೂಲ್ಯವಾಗಿದ್ದು, ನಿತ್ಯ ಪರಿಸರ ಪ್ರೀತಿ ನಮ್ಮದಾಗಬೇಕು. ಪರಿಸರವೇ ದೇವರು ಎಂದು ಬೆಳಗಾವಿ ನಿವ್ರತ್ತ ಜಿಲ್ಲಾಧಿಕಾರಿ ಎಮ್ ಜಿ ಹಿರೇಮಠ ಹೇಳಿದರು. ಅವರು ಶನಿವಾರ ಸಂಜೆ ಬೆಳಗಾವಿಯ ರಾಮತೀರ್ಥನಗರ ದ ಶ್ರೀ ಕಾರ್ಯಸಿದ್ದಿ ಆಂಜನೇಯ ಸ್ವಾಮಿ ದೇವಸ್ಥಾನ ದ ಆವರಣದಲ್ಲಿ ವನ್ಯಜೀವಿ ಪರಿಸರ ಅಭಿವ್ರದ್ಧಿ ವೇದಿಕೆ ಮತ್ತು ಸ್ನೇಹ ಸಮಾಜ ಸೇವಾ ಸಂಘಗಳ ಸಂಯುಕ್ತಾಶ್ರಯದಲ್ಲಿ ಜರುಗಿದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದ. ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಗಿಡ ನೆಟ್ಟು ಪರಿಸರ ಪ್ರೀಯರನ್ನುದ್ದೇಶಿಸಿ ಮಾತನಾಡಿದರು. ಉಸಿರಿಗೊಂದಾದರೂ ಗಿಡ ನೆಡಬೇಕು. ಊರಿಗೊಂದಾದರೂ ವನವಿರಬೇಕು. ಪ್ರತಿಯೊಬ್ಬರಲ್ಲೂ ನೆಟ್ಟ ಗಿಡದ ಬೆಳವಣಿಗೆ ಬಗ್ಗೆ ಉತ್ಸುಕತೆ ಇರಬೇಕು. ಪರಿಸರದ ಮುಖ್ಯ ಭಾಗಗಳೆನಿಸಿದ ಭೂಮಿ, ನೀರು, ಗಾಳಿ, ಬೆಟ್ಟ, ಗುಡ್ಡ ಸೇರಿದಂತೆ ವನ್ಯಜೀವಿ ಗಳ ಸಂರಕ್ಷಣೆ ನಮ್ಮ ಹೊಣೆಯಾಗಿದ್ದು, ಈ ಮೌಲ್ಯಯುತ ಸಂಪತ್ತು ಮುಂದಿನ ನಮ್ಮ ಪೀಳಿಗೆಯ ಅತೀ ದೊಡ್ಡ ಆಸ್ತಿ ಎಂಬುದನ್ನು ನಾವು ಅರಿಯಬೇಕು. ಇಲ್ಲಿಯ ದೇವಸ್ಥಾನ, ಗ್ರಂಥಾಲಯ,ಪರಿಸರ ನಮ್ಮ ಸುಂದರ ಬದುಕಿಗೆ ಧಾರೆ ಎರೆಯಬಲ್ಲ ಶಕ್ತಿ ಸಾಗರವಾಗಿವೆ ಎಂದರಲ್ಲದೆ, ಸನ್ಮಾನ ಕೊಟ್ಟಿದ್ದಕ್ಕೆ ಧನ್ಯವಾದ ಹೇಳಿದರು. ವೇದಿಕೆಯಲ್ಲಿದ್ದ ಅತಿಥಿಯಾಗಿ ಪಾಲ್ಗೊಂಡಿದ್ದ ಪರಿಸರ ವೇದಿಕೆಯಜ್ ಪ್ರಧಾನ ಕಾರ್ಯದರ್ಶಿ ಡಾ ಡಿ ಎನ್ ಮಿಸಾಳೆ ಮಾತನಾಡಿ, ಪರಿಸರದ ಬಗ್ಗೆ ಪ್ರತಿಯೊಬ್ಬರಲ್ಲೂ ಅರಿವು ಇರಬೇಕು. ನಿತ್ಯ ಪರಸ್ಪರರ ನಡುವೆ ಪರಿಸರದ ಕುರಿತು ಚಿಂತನ, ಮಂಥನಗಳು ನಡೆಯಬೇಕಲ್ಲದೆ, ಮಕ್ಕಳಿಗೆ ಪರಿಸರದ ಅರಿವು ಮೂಡಿಸಬೇಕು ಎಂದರು.
ವೇದಿಕೆಯ ಖಜಾಂಚಿ ಜಗದೀಶ ಮಠದ ವೇದಿಕೆಯಲ್ಲಿದ್ದರು. ವೇದಿಕೆಯ ಅಧ್ಯಕ್ಷ ಸುರೇಶ ಉರಬಿನಹಟ್ಟಿ ಸ್ವಾಗತಿಸಿ ವೇದಿಕೆಯ ಕಾರ್ಯ ವೈಖರಿ ಬಗ್ಗೆ ಮಾತನಾಡಿದರು.
ಪ್ರೊ ಎ ಕೆ ಪಾಟೀಲ ನಿರೂಪಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ದೇವಸ್ಥಾನ ಕಮಿಟಿಯ ಉಪಾಧ್ಯಕ್ಷ ಎಸ್ ಜಿ ಕಲ್ಯಾಣಿ, ಖಜಾಂಚಿ ಮನೋಹರ ಕಾಜಗಾರ, ಶಿವಾನಂದ ಮಠಪತಿ, ಸದಸ್ಯರಾದ ಡಿ ಎಮ್ ಟೊಣ್ಣೆ, ಎಸ್ ಎಲ್ ಸನದಿ, ಕ್ರಷ್ಣಾ ಪಾಟೀಲ, ಎನ್ ಬಿ ಹಣ್ಣಿಕೇರಿ, ಬಸವರಾಜ ಹಿರೇಮಠ, ಜಿ ಎಸ್ ಪಾಟೀಲ, ಎಸ್ ಎಂ ಮೇಲಿನಮನಿ, ದಿಲೀಪ ಟಕ್ಕಳೆ, ಮಲ್ಹಾರ ದಿಕ್ಷಿತ್, ಪ್ರಶಾಂತ ಸಂಗೊಳ್ಳಿ, ಆನಂದ ಹಣ್ಣಿಕೇರಿ ಮತ್ತು ತನುಜಾ ಹಿರೇಮಠ, ಸುಧಾ ಮಠದ, ಶ್ರೀ ದುರ್ಗಾ ಮಹಿಳಾ ಮಂಡಳ ದ ನಿರ್ಮಲಾ ಉರಬಿನಹಟ್ಟಿ, ಕಾವ್ಯಾ ಚಿಟಗಿ ಮಹಾದೇವಿ ಕಮತ್ ಲತಾ ಕಾಜಗಾರ ಉಮಾ ಖಾನವಾಡೆ, ಸುಮಂಗಲಾ ಪುನ್ನೂರಿ, ಸುಮಂಗಲಾ ತೋಂಟಾಪೂರ , ಸುಜಾತಾ ಜುಟ್ಟನ್ನವರ, ಜಯಶ್ರೀ ,ಶಶಿರೇಖಾ ನಾಯರ್, ಸೇರಿದಂತೆ ಸದ್ಭಕ್ತರು, ಕಮಿಟಿ ಸದಸ್ಯರು, ಪರಿಸರ ಪ್ರೀಯರು ಉಪಸ್ತಿತರಿದ್ದರು.
ದೇವಸ್ಥಾನ ಅರ್ಚಕ ಪ್ರಕಾಶ ದೀಕ್ಷಿತ್
ಪೂಜೆ ಸಲ್ಲಿಸಿದರು.
8th June 2025
ಬೆಳಗಾವಿ- ನಗರದ ರಾಮತೀರ್ಥ ನಗರದ ಶಿವಾಲಯ ಮುಖ್ಯರಸ್ತೆಯಲ್ಲಿ ಗಿಡವೊಂದು ಬೀಳುವ ಸ್ಥಿತಿಯಲ್ಲಿದ್ದು ವಾಹನ ಸವಾರರಿಗೆ ಅಪಾಯವನ್ನು ತದ್ದೊಡಿದೆ.
ಹಲವು ದಿನಗಳಿಂದ ಈ ರಸ್ತೆಯಲ್ಲಿ ಈ ಗಿಡ ವಾಲಿದ ಸ್ಥಿತಿಯಲ್ಲಿದ್ದರೂ ಸಹ ಸಂಬಂಧಿಸಿದ ಮಹಾನಗರ ಪಾಲಿಕೆ ಮತ್ತು ಬುಡಾ ಸಿಬ್ಬಂದಿ ನೋಡದಿರುವದು ಹಲವು ಅವಘಡ ಸಂಬಂವಿಸುವ ಕ್ಷಣ ದೂರವಿಲ್ಲ. ಕೂಡಲೇ ಗಿಡವನ್ನು ತೆರವುಗೊಳಿಸಿ ಮುಂದಾಗುವ ಪ್ರಾಣ ಹಾನಿಯನ್ನು ತಪ್ಪಿಸಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.
8th June 2025
⭐ ಲಿಂಗಾಯತ ಸಂಘಟನೆ ವತಿಯಿಂದ ವಾರದ ಸಾಮೂಹಿಕ ಪ್ರಾರ್ಥನೆ - ಸನ್ನಡತೆಯೇ ಶರಣರ ಪಥ -ಶಂಕರ್ ಗುಡಸ ⭐.
ರವಿವಾರ ದಿ 8 ರಂದು ಬೆಳಗಾವಿ ನಗರದ ಹಳಕಟ್ಟಿ ಭವನದಲ್ಲಿ ಲಿಂಗಾಯತ ಸಂಘಟನೆ ವತಿಯಿಂದ ವಾರದ ಸಾಮೂಹಿಕ ಪ್ರಾರ್ಥನೆ ಜರಗಿತು.ಕಾರ್ಯಕ್ರಮದಲ್ಲಿ ವಚನ ನಿವ೯ಚನ ಮಾಡಿ ಶಂಕರ ಗುಡಸ ಮಾತನಾಡಿ 12ನೇ ಶತಮಾನದಲ್ಲಿ ಅಲ್ಲಮಪ್ರಭುಗಳು ಮಾಡಿದ ಕ್ರಾಂತಿ ನಿಜಕ್ಕೂ ಅದ್ಭುತವಾದದ್ದು. ಎಲ್ಲ ಶರಣರ ನೇತೃತ್ವ ವಹಿಸಿ ಶರಣರನ್ನು ಒಗ್ಗೂಡಿಸುವ, ಬೆಳೆಸುವ ಮತ್ತು ಕಾಯಕ ಕರ್ಮವನ್ನು ತಿಳಿದುಕೊಳ್ಳುವ ಕೆಲಸ ಮಾಡಿದರು. ಶರಣರಲ್ಲಿಯೂ ಸಹ ಇದ್ದ ತೊಡಕುಗಳ ನಿವಾರಣೆಗೆ ಶ್ರಮಿಸಿದರು. ನಮ್ಮ ದೇಹವೇ ಒಂದು ಹೊಲವಿದ್ದಂತೆ ಅದನ್ನೇ ನಿಜವಾಗಿ ಕೃಷಿ ಮಾಡಿದರೆ ಎಲ್ಲವನ್ನು ಸಾಧಿಸಬಹುದು. ಮನಸ್ಸೆಂಬುದನ್ನು ನಿಯಂತ್ರಣದಲ್ಲಿಟ್ಟು ಕೃಷಿ ಮಾಡಿದರೆ ಬೇಕಾದನ್ನು ಸಾಧಿಸಬಹುದು,ಸನ್ನಡತೆಯೇ ಶರಣರ ಪಥವಾಗಿತ್ತು ಎಂದು ವಿವಿಧ ವಿಚಾರಗಳನ್ನು ವಿಶ್ಲೇಷಣೆ ಮಾಡುತ್ತ ತಿಳಿ ಹೇಳಿದರು. ಇದೇ ಸಂದರ್ಭದಲ್ಲಿ ಫಕಿರಪ್ಪ ಕರಿಕಟ್ಟಿ ಅವರ 75 ನೇ ಜನ್ಮದಿನಾಚರಣೆ ಆಚರಿಸಲಾಯಿತು. ಯೋಗ ಗುರುಗಳಾದ ಶ್ರೀ ಸಿದ್ದಪ್ಪ ಸಾರಾಪೂರೆ ಯವರು ಬಿಗಿಯಾದ ನರಗಳನ್ನು ಸಡಿಲಗೊಳಿಸುವ ಕಾರ್ಯ ತಂತ್ರವನ್ನು ಪ್ರಾತ್ಯಕ್ಷಿಕೆ ಮೂಲಕ ಪ್ರಸ್ತುತಪಡಿಸಿದರು. ಶರಣ ಸುನೀಲ ಸಾಣಿಕೊಪ್ಪ ರವರು ನಾವು ಆಡುವ ನುಡಿಯಿಂದ ಆಗುವ ಒಳ್ಳೆಯತನ ಮತ್ತು ಕೆಡಕುಗಳ ವಿಶ್ಲೇಷಣೆಯನ್ನು ನುಡಿ ಕುರಿತಾದ ವಚನಗಳನ್ನು ವಿವರಿಸುತ್ತಾ ಹೇಳಿದರು. ಅಕ್ಕಮಹಾದೇವಿ ತೆಗ್ಗಿ, ಬಿ.ಪಿ.ಜೇವಣಿ,ವಿ.ಕೆ. ಪಾಟೀಲ,ಮಹಾದೇವಿ ಅರಳಿ, ಬಸವರಾಜ ಬಿಜ್ಜರಗಿ,ಕುಮಾರಿ ಕರಿಕಟ್ಟಿ ,ಮಹಾದೇವ ಕೆ೦ಪಿಗೌಡರ,ಸೇರಿದಂತೆ ಹಲವು ಶರಣರು ವಚನಗಳ ವಿಶ್ಲೇಷಣೆ ಮಾಡಿದರು. ಸದಾಶಿವ ದೇವರಮನಿ, ಶ೦ಕ್ರಣ್ಣ ಮೆಣಸಗಿ, ಗುರುಸಿದ್ದಪ್ಪ ರೇವಣ್ಣವರ, ಆನಂದ ಕರ್ಕಿ,ಬಸವರಾಜ ಪೂಜೇರಿ,ಮಹಾಂತೇಶ ಇಂಚಲ,.ಎಫ್ ಬಿ ಕರಿಕಟ್ಟಿ.
ಪ್ರಸಾದ ಹಿರೇಮಠ,ಮಹಾಂತೇಶ ಮೆಣಸಿನಕಾಯಿ,ದೊಡಗೌಡ ಪಾಟೀಲ,,ರುದ್ರಗೌಡ ಪಾಟೀಲ,ಗಂಗಪ್ಪ ಉಣಕಲ್,ಶಿವಾನಂದ ನಾಯಕ,ಬಸವರಾಜ ಕರಡಿಮಠ, ಶ೦ಕರ ರಾವಳ,ಕೆಂಪಣ್ಣಾ ರಾಮಾಪೂರೆ,ಶೇಖರ ವಾಲಿಇಟಗಿ, ದಂಪತಿಗಳು,ಶಿವಾನಂದ ನಾಯಕ,ಎಸ್ ಎಸ್ ಪೂಜೇರ , ಗಂಗಾಧರ ಹಿತ್ತಲಮನಿ,ಶಿವಾನಂದ ತಲ್ಲೂರ, ಸುದೀಪ ಪಾಟೀಲ ಸೇರಿದಂತೆ,ಶರಣಶರಣೆಯರು ಉಪಸ್ಥತರಿದ್ದರು. ಸುರೇಶ ನರಗುಂದ ಸ್ವಾಗತಿಸಿ ವಚನ ಪ್ರಾರ್ಥನೆ ನಡೆಸಿಕೊಟ್ಟರು ಸಂಗಮೇಶ ಅರಳಿ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.