


30th September 2025
"ಸಾಹಿತಿ ಡಾ.ಸುಧಾಕರ್ ಗೆ ಸನ್ಮಾನ"
ಶಿವಮೊಗ್ಗ:ಕುವೆಂಪು ವಿಶ್ವವಿದ್ಯಾಲಯ,ಜ್ಞಾನ ಸಹ್ಯಾದ್ರಿ,ಶಂಕರಘಟ್ಟ, ಶಿವಮೊಗ್ಗ.ದೈಹಿಕ ಶಿಕ್ಷಣ ವಿಭಾಗದ ವತಿಯಿಂದ ದೈಹಿಕ ಮತ್ತು ಆರೋಗ್ಯ ಶಿಕ್ಷಣದ ಲೇಖಕ,ಸಾಹಿತಿ,ಅಂಕಣಕಾರ ವಿಶ್ವವಿದ್ಯಾನಿಲಯದ ಹಿರಿಯ ವಿದ್ಯಾರ್ಥಿ,ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆ (ರಿ,.)ಸಿರಿಗೆರೆ. ಹೊನ್ನಾಳಿ ತಾಲೂಕು, ಬೆನಕನಹಳ್ಳಿಯ ಶ್ರೀ ವಿನಾಯಕ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಡಾ.ಸುಧಾಕರ್.ಜಿ.ಲಕ್ಕವಳ್ಳಿ.ಇವರನ್ನು ಸನ್ಮಾನಿಸಲಾಯಿತು.
ಸೆ,26 ರಂದು ಸಂಶೋಧನಾರ್ಥಿ ಸಂಜೀವ್ ಕುಮಾರ್ ಇವರ ಸಂಶೋಧನಾ ಪ್ರಬಂಧ ಮಂಡನೆ ಕಾರ್ಯಕ್ರಮದಲ್ಲಿ ಡಾ.ಸುಧಾಕರ್ ಇವರನ್ನು ಗೌರವಿಸಲಾಯಿತು.
ದೈಹಿಕ ಶಿಕ್ಷಣ ಸಾಹಿತ್ಯ ಕ್ಷೇತ್ರಕ್ಕೆ ಈಗಾಗಲೇ ಬರಹಗಳ ಮೂಲಕ
ಕೊಡುಗೆಗಳನ್ನು ನೀಡುತ್ತಿರುವ ಡಾ.ಸುಧಾಕರ್ ರವರು ಮುಂದೆಯೂ ಬರವಣಿಗೆ ಮುಂದುವರಿಸಲಿ,ಪ್ರಸ್ತುತ ದೈಹಿಕ ಶಿಕ್ಷಣ ವಿಷಯದಲ್ಲಿ ಕನ್ನಡ ಬರಹಗಳ ಅವಶ್ಯಕತೆ ಇದೆ ಇದು ಕಲಿಕಾರ್ಥಿಗಳಿಗೆ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರಿಗೆ ಸದುಪಯೋಗವಾಗುತ್ತದೆ ಎಂದು ಸಹಾಯಕ ನಿರ್ದೇಶಕರಾದ ಡಾ.ರವೀಂದ್ರ ಗೌಡ ಎಸ್,ಎಂ.ತಿಳಿಸಿದರು.
ಸದರಿ ಕಾರ್ಯಕ್ರಮದಲ್ಲಿ ಮಾತನಾಡಿದ ಡಾ.ಸುಧಾಕರ್ ಶಿಕ್ಷಕರ,ಗುರುಗಳ ಕೃಪೆಯಿಂದ ಎಲ್ಲವೂ ಸಾಧ್ಯ ಈ ಮಟ್ಟದ ಬೆಳವಣಿಗೆಗೆ ಅವರು ನೀಡಿದ ಅಕ್ಷರ ಜ್ಞಾನ ಹಾಗೂ ಮಾರ್ಗದರ್ಶನ ಸಹಕಾರಿಯಾಗಿದೆ.ದೈಹಿಕ ಶಿಕ್ಷಣ ವಿಭಾಗವನ್ನು ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಆರಂಭಿಸಿದ ಪ್ರಥಮ ಅಧ್ಯಕ್ಷರಾದ ದಿವಂಗತ ಹಳ್ಳದ್ ಸರ್ ರವರನ್ನು ನೆನೆದು,ನನ್ನ ಬೆಳವಣಿಗೆಗೆ ಸಹಕರಿಸಿದ,ಸಹಕರಿಸುತ್ತಿರುವ ಶಿಕ್ಷಕರಿಗೆ,ಕುಟುಂಬ ವರ್ಗ, ಸ್ನೇಹಿತರಿಗೂ,ಪತ್ರಿಕಾ ಸಂಪಾದಕರಿಗೆ, ಹಿರಿಯ ಮತ್ತು ಕಿರಿಯರಿಗೆ ನಾನು ಕೃತಜ್ಞ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಶ್ವವಿದ್ಯಾನಿಲಯದ ಕ್ರೀಡಾ ವಿಭಾಗದ ನಿರ್ದೇಶಕರಾದ ಡಾ.ಎನ್,ಡಿ.ವಿರುಪಾಕ್ಷರವರು,ಗುಲ್ಬರ್ಗ ವಿಶ್ವವಿದ್ಯಾನಿಲಯದ ಕುಲಸಚಿವರು ಪರೀಕ್ಷಾಂಗ ವಿಭಾಗ
ಹಾಗೂ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾದ ಪ್ರೊ,ನಿಂಗಪ್ಪ
ಕಣ್ಣೂರ್ ರವರು,ದೈಹಿಕ ಶಿಕ್ಷಣ ವಿಭಾಗದ ಅಧ್ಯಕ್ಷರಾದ ಪ್ರೊ,ಗಜಾನನ ಪ್ರಭು ರವರು,ಸಹಾಯಕ ನಿರ್ದೇಶಕರಾದ ಡಾ.ರವೀಂದ್ರ ಗೌಡ ಎಸ್,ಎಂ.ರವರು,ಡಾ.ಬಸವರಾಜ್ ಕುಂಸಿ.ಬಾಲಾಜಿ ವಿಶ್ವವಿದ್ಯಾನಿಲಯ,ಪುಣೆ. ಡಾ. ನಾಗರಾಜ್ ದಾಸರ ಬಳ್ಳಾರಿ,ವಿಭಾಗದ ಸಂಶೋಧನಾರ್ಥಿಗಳು,ಹಿರಿಯ ವಿದ್ಯಾರ್ಥಿಗಳು ಹಾಗೂ ಪ್ರಸಕ್ತ ಸಾಲಿನ ಎಂ,ಪಿ,ಇಡಿ. ವಿದ್ಯಾರ್ಥಿಗಳು ಹಾಜರಿದ್ದು ವಿಭಾಗದ ಸಹಾಯಕ ನಿರ್ದೇಶಕರಾದ ಡಾ.ರವೀಂದ್ರ ಗೌಡ ರವರು ಸ್ವಾಗತಿಸಿ ಸಂಜೀವ್ ಕುಮಾರ್ ವಂದಿಸಿದರು.

3rd September 2025
ಬೆಳಗಾವಿ ದರ್ಪಣ ರೋಟರಿ ಕ್ಲಬ್ – “ಜೀವನ ಆರಿಸಿ, ವ್ಯಸನ ಬಿಡಿ”
ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮ
ಬೆಳಗಾವಿ ದರ್ಪಣ ರೋಟರಿ ಕ್ಲಬ್ ವತಿಯಿಂದ “ಜೀವನ ಆರಿಸಿ, ವ್ಯಸನ ಬಿಡಿ” ಎಂಬ ವಿಷಯದ ಮೇಲೆ ವ್ಯಸನ ವಿರೋಧಿ ಜಾಗೃತಿ ಕಾರ್ಯಾಗಾರವನ್ನು ೨ ಸೆಪ್ಟೆಂಬರ್ ೨೦೨೫ರಂದು ಆರ್.ಎಲ್.ಎಸ್. ಕಾಲೇಜು, ಬೆಳಗಾವಿಯಲ್ಲಿ ಆಯೋಜಿಸಲಾಯಿತು. ಈ ಉಪಕ್ರಮದ ಉದ್ದೇಶ ವಿದ್ಯಾರ್ಥಿಗಳಿಗೆ ಹೆಚ್ಚುತ್ತಿರುವ ಮಾದಕವಸ್ತು ವ್ಯಸನದ ಅಪಾಯಗಳ ಕುರಿತು ಜಾಗೃತಿ ಮೂಡಿಸುವುದು ಮತ್ತು ಆರೋಗ್ಯಕರ ಜೀವನವನ್ನು ಆರಿಸಲು ಪ್ರೇರೇಪಿಸುವುದಾಗಿತ್ತು.
ಈ ಕಾರ್ಯಾಗಾರವನ್ನು ಕ್ಲಬ್ ಅಧ್ಯಕ್ಷೆ ರೊಟರಿ ಅಡ್ವ. ವಿಜಯಲಕ್ಷ್ಮಿ ಮನ್ನಿಕೇರಿ ಅವರ ನೇತೃತ್ವದಲ್ಲಿ ಹಾಗೂ ಕಾರ್ಯದರ್ಶಿ ರೊಟರಿ ಕಾವೇರಿ ಕರೂರ್ ಅವರ ಸಕ್ರಿಯ ಸಹಕಾರದೊಂದಿಗೆ ನಡೆಸಲಾಯಿತು.
ಕಾರ್ಯಕ್ರಮಕ್ಕೆ ಡಾ. ಜ್ಯೋತಿ ಕಾವ್ಲೇಕರ್, ಆರ್.ಎಲ್.ಎಸ್. ಕಾಲೇಜಿನ ಪ್ರಾಚಾರ್ಯರು, ಉಪಸ್ಥಿತರಿದ್ದು, ಯುವಜನತೆಗೆ ಸಂಬಂಧಿಸಿದ ಗಂಭೀರ ಸಾಮಾಜಿಕ ಸಮಸ್ಯೆಗಳ ವಿರುದ್ಧ ಜಾಗೃತಿ ಮೂಡಿಸುತ್ತಿರುವ ರೋಟರಿ ಕ್ಲಬ್ನ ಪ್ರಯತ್ನಗಳನ್ನು ಮೆಚ್ಚಿದರು.
ಕಾರ್ಯಾಗಾರದ ಮುಖ್ಯ ಆಕರ್ಷಣೆ ಅತಿಥಿ ಭಾಷಣಕಾರ್ತಿ ರೊಟರಿ ಡಾ. ಸ್ಪೂರ್ತಿ ಮಸ್ತಿಹೋಳಿ ಅವರ ಪ್ರಭಾವಿ ಉಪನ್ಯಾಸವಾಗಿತ್ತು. ಅವರು ವಿದ್ಯಾರ್ಥಿಗಳಿಗೆ ವ್ಯಸನದ ಕಾರಣಗಳು ಹಾಗೂ ಪರಿಣಾಮಗಳ ಬಗ್ಗೆ ತಿಳಿಸಿದರು. ಒತ್ತಡ, ತಪ್ಪು ಸ್ನೇಹಿತರ ಒತ್ತಾಯ ಹಾಗೂ ಅರಿವು ಕೊರತೆ ಇತ್ಯಾದಿ ಕಾರಣಗಳಿಂದ ಯುವಕರು ವ್ಯಸನದ ಮಾರ್ಗಕ್ಕೆ ತಳ್ಳಲ್ಪಡುತ್ತಾರೆ ಮತ್ತು ಅದು ಅವರ ಶೈಕ್ಷಣಿಕ ಬೆಳವಣಿಗೆಯ ಜೊತೆಗೆ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೂ ಹಾನಿಕಾರಕವಾಗಿದೆ ಎಂದು ಅವರು ವಿವರಿಸಿದರು. ವಿದ್ಯಾರ್ಥಿಗಳು ಜವಾಬ್ದಾರಿಯುತ ನಿರ್ಧಾರಗಳನ್ನು ಕೈಗೊಳ್ಳಬೇಕು, ಎಚ್ಚರಿಕೆಯಿಂದ ಇರಬೇಕು ಮತ್ತು ಅಗತ್ಯವಿದ್ದರೆ ಸಹಾಯ ಪಡೆಯಬೇಕು ಎಂದು ಅವರು ಮನವಿ ಮಾಡಿದರು.
ಕಾರ್ಯಕ್ರಮಾಧ್ಯಕ್ಷೆ ರೊಟರಿ ಗೀತಾ ಗಾಯಕ್ವಾಡ ಅವರು ಯಶಸ್ವಿ ಸಂಯೋಜನೆ ಮಾಡಿದ್ದು, ಉಪನ್ಯಾಸ ಸಂವಾದಾತ್ಮಕವಾಗಿದ್ದು ವಿದ್ಯಾರ್ಥಿ ಮತ್ತು ಅಧ್ಯಾಪಕರ ಸಕ್ರಿಯ ಭಾಗವಹಿಸುವಿಕೆಯಿಂದ ಕಾರ್ಯಕ್ರಮ ಪರಿಣಾಮಕಾರಿ ಆಯಿತು.
ಕಾರ್ಯಕ್ರಮಕ್ಕೆ ರೊಟರಿ ಶೀಲಾ ಪಾಟೀಲ್ ಅವರ ಅಮೂಲ್ಯ ಹಾಜರಾತಿಯಿಂದ ಹೆಚ್ಚಿನ ಮಹತ್ವ ದೊರಕಿತು.
ಬೆಳಗಾವಿ ದರ್ಪಣ ರೋಟರಿ ಕ್ಲಬ್ ಯುವಕರಲ್ಲಿ ಜಾಗೃತಿ ಮೂಡಿಸುವ ಮತ್ತು ಅವರಿಗೆ ವ್ಯಸನರಹಿತ, ಆರೋಗ್ಯಕರ ಜೀವನವನ್ನು ನಡೆಸಲು ಪ್ರೇರೇಪಿಸುವಂತಹ ಕಾರ್ಯಕ್ರಮಗಳನ್ನು ಮುಂದುವರಿಸಲು ತನ್ನ ಬದ್ಧತೆಯನ್ನು ಪುನರುಚ್ಚರಿಸಿದೆ.

15th August 2025
ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದಲ್ಲಿ ವಾಣಿಜ್ಯಶಾಸ್ತ್ರ ಹಾಗೂ ನಿರ್ವಹಣಾ ಶಾಸ್ತ್ರ ವಿಭಾಗದ ವತಿಯಿಂದ ರಾಷ್ಟ್ರೀಯ ಶೇರು ಮಾರುಕಟ್ಟೆ ಸಂಸ್ಥೆಯ ಅಡಿಯಲ್ಲಿ ಹೂಡಿಕೆಯ ಅರಿವು ಎಂಬ ವಿಷಯದ ಕುರಿತು ಎರಡು ದಿನಗಳ ಕಾರ್ಯಾಗಾರವನ್ನು ಬುಧವಾರ ಉದ್ಘಾಟಿಸಲಾಯಿತು ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ನಿರ್ವಹಣಾ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಮಹಂತೇಶ್ ಕುರಿ ಉದ್ಘಾಟಿಸಿ ಬಿಕಾಂ ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದರು ವಿದ್ಯಾರ್ಥಿಗಳಲ್ಲಿ ಹಣಕಾಸಿನ ಅರಿವು ಮತ್ತು ಶಿಕ್ಷಣವನ್ನು ಒದಗಿಸುವುದಕ್ಕಾಗಿ ರಾಷ್ಟ್ರೀಯ ಶೇರು ಮಾರುಕಟ್ಟೆ ಸಂಸ್ಥೆಯು ಹಲವಾರು ಕಾರ್ಯಾಗಾರಗಳನ್ನು ಆಯೋಜಿಸಲಾಗುತ್ತಿದ್ದು ವಿದ್ಯಾರ್ಥಿಗಳು ಅದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು ಈ ಈ ಕಾರ್ಯಗಾರವು ಎರಡು ದಿನಗಳ ಎಂಟು ಗೋಷ್ಠಿಗಳಲ್ಲಿ ನಡೆಯಲಿದ್ದು ಹಣಕಾಸಿನ ಯೋಜನೆ ಉಳಿತಾಯ ಮತ್ತು ಹೂಡಿಕೆಯ ತಂತ್ರಗಳು ಶೇರುಪೇಟೆಯನಿಯಂತ್ರಣ ವ್ಯವಸ್ಥೆಯ ಚೌಕಟ್ಟು ವಿಷಯಗಳ ಅರಿವನ್ನು ಮೂಡಿಸುವುದಾಗಿದೆ ಎಂದು ಅಭಿಪ್ರಾಯಪಟ್ಟರು ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಮುಕುಂದ ಮುಂಡರಗಿ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಬದಲಾಗುತ್ತಿರುವ ಹಣಕಾಸಿನ ಮಾರುಕಟ್ಟೆಯಲ್ಲಿ ಹೂಡಿಕೆದಾರರಿಗೆ ಹಣಕಾಸಿನ ಶಿಕ್ಷಣ ಮತ್ತು ಅರಿವಿನ ಅವಶ್ಯಕತೆ ಇದ್ದು ಈ ನಿಟ್ಟಿನಲ್ಲಿ ವಿಭಾಗವು ಕಾರ್ಯನಿರ್ವಹಿಸುತ್ತಿದೆ ಎಂದರು ಕಾರ್ಯಕ್ರಮದಲ್ಲಿ 70ಕ್ಕೂ ಹೆಚ್ಚು ಬಿಕಾಂ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡು ಕಾರ್ಯಗಾರವನ್ನು ಯಶಸ್ವಿಗೊಳಿಸಿದರು. ವಿದ್ಯಾರ್ಥಿನಿಯರಾದ ಹಿನಾ ಜಿಂಜುವಾದ್ ನಿರೂಪಿಸಿದರು ಫಲಕ್ ನಾಜ್ ಅತಿಥಿಗಳನ್ನು ಪರಿಚಯಿಸಿದರು ಸಂಜನಾ ಮುದಿಗೌಡರ್ ವಂದಿಸಿದರು ವಾಣಿಜ್ಯಶಾಸ್ತ್ರ ಹಾಗೂ ನಿರ್ವಹಣಾ ಶಾಸ್ತ್ರ ವಿಭಾಗದ ಉಪನ್ಯಾಸಕರು ಉಪಸ್ಥಿತರಿದ್ದರು.

13th August 2025
ಜಿ.ಎಂ.ವಿಶ್ವವಿದ್ಯಾಲಯದಲ್ಲಿ ಸ್ಟಾರ್ಟ್ಆಪ್ ಕಾರ್ಯಾಗಾರ
ದಾವಣಗೆರೆ : ಪ್ರಸ್ತುತ ಹೊಸತನಕ್ಕೆ ಹೆಚ್ಚು ಪ್ರಾಮುಖ್ಯತೆ ಇದ್ದು, ನವೀನ ಬುದ್ಧಿ ಶಕ್ತಿ, ಚಿಂತನೆಯುಳ್ಳವರಿಗೆ ಸುವರ್ಣಾವಕಾಶವಿದೆ ಎಂದು ಜಿ.ಎಂ. ಇನ್ಸ್ಟಿಟ್ಯೂಟ್ ಆಫ್ ಫಾರ್ಮಾಸ್ಯೂಟಿಕಲ್ ಸೈನ್ಸ್ ಮತ್ತು ರಿಸರ್ಚ್ ನ ಪ್ರಾಂಶುಪಾಲರಾದ ಡಾ. ಗಿರೀಶ್ ಬೋಳಕಟ್ಟಿ ತಿಳಿಸಿದರು.
ಜಿ.ಎಂ. ಇನ್ಸ್ಟಿಟ್ಯೂಟ್ ಆಫ್ ಫಾರ್ಮಾಸ್ಯೂಟಿಕಲ್ ಸೈನ್ಸ್ & ರಿಸರ್ಚ್ (GMIPSR), ಸಂಸ್ಥೆಯ ಇನೋವೇಶನ್ ಕೌನ್ಸಿಲ್ (ಆವಿಷ್ಕಾರ ಮಂಡಳಿ)ಯ ಸಹಯೋಗದಲ್ಲಿ ಜಿಎಂ ಫಾರ್ಮಸಿ ಕಾಲೇಜಿನ ಸಭಾಂಗಣದಲ್ಲಿ ಆಗಸ್ಟ್ 13,2025 ರಂದು ಆಯೋಜಿಸಲಾಗಿದ್ದ ‘ಸ್ಟಾರ್ಟ್ಅಪ್ಗಳಿಗೆ ಬೌದ್ಧಿಕ ಸರ್ವಸ್ವ ಹಕ್ಕುಗಳ ರಕ್ಷಣಾ ಮತ್ತು ಐಪಿಒ ನಿರ್ವಹಣೆ’ ಕುರಿತು ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಯುಗದಲ್ಲಿ ಸಾಧನೆ ಯಾವುದೂ ಅಸಾಧ್ಯವಾದುದ್ದಿಲ್ಲ. ಸಾಧಿಸುವುದು ನಿಮ್ಮ ಜ್ಞಾನ, ಅನುಭವ ಮತ್ತು ಕನಸ್ಸಿನ ಮೇಲಿದೆ. ಪ್ರತಿ ದಿನ ಜ್ಞಾನ ಮತ್ತು ಅನುಭವ ಹೆಚ್ಚು ಬೆಳೆಸಿಕೊಂಡು ಪ್ರಸ್ತುತಪಡಿಸಬೇಕು. ಜೊತೆಗೆ ಅಂತೆಯೇ ಕನಸು ದೊಡ್ಡದಾಗಿರಬೇಕು, ಈಗಿನ ಯುಗಕ್ಕೆ ಪೂರಕವಾದ ಆಲೋಚನೆ, ಚಿಂತನೆಗಳು ವಿಶೇಷವಾಗಿರಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಪ್ರತಿ ವೈಫಲ್ಯ ಯಶಸ್ಸಿಗೆ ಅನುಭವವಾಗಲಿದೆ. ಹಾಗಾಗಿ ಹೊಸದಾದ ಸಕಾರಾತ್ಮಕ ಚಿಂತನೆ, ಆಲೋಚನೆಗಳ ಮೂಲಕ ನಿಮ್ಮ ಕ್ಷೇತ್ರದ ಜೊತೆಗೆ ಸಾಮಾಜಿಕ ಕ್ಷೇತ್ರಕ್ಕೆ ಸಕಾರಾತ್ಮಕ ಕೊಡುಗೆ ನೀಡಲು ಮುಂದಾಗಿ. ಮನಸ್ಸು, ವಿಭಿನ್ನ ಮಾರ್ಗ, ಹೊಸ ವಿಚಾರವನ್ನು ಚರ್ಚಿಸಿ. ನವೋದ್ಯಮಗಳಿಗೆ ಸರ್ಕಾರ ಬೆಂಬಲ ನೀಡುತ್ತದೆ. ಅದನ್ನು ಸದ್ಭಳಕೆ ಮಾಡಿಕೊಳ್ಳಲು ಹೊಸ ಕಲ್ಪನೆ, ನವೀನ ಚಿಂತನೆಗೆ ಮುಂದಾಗುವಂತೆ ಕಿವಿಮಾತು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿ.ಎಂ. ವಿಶ್ವವಿದ್ಯಾಲಯದ ಸಂಯುಕ್ತ ಸಂಶೋಧನಾ ಡೀನ್ ಡಾ. ಸ್ವರೂಪ್ ಕೆ ಅವರು, ಬೌದ್ಧಿಕ ಸರ್ವಸ್ವ ಹಕ್ಕುಗಳ ಮಹತ್ವ ಮತ್ತು ಪೇಟೆಂಟ್, ಟ್ರೇಡ್ಮಾರ್ಕ್, ಕಾಪಿರೈಟ್ ಮುಂತಾದ ಹಕ್ಕುಗಳ ಅಧ್ಯಯನ ಮತ್ತು ನಿರ್ವಹಣೆಯ ತಂತ್ರಗಳನ್ನು ವಿವರಿಸಿದರು.
ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಯುವ ಉದ್ಯಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಸುಮಾರು 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಈ ವೇಳೆ ಔಷಧ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಯುಸುಫ್ ಮಲಿಕ್ ಡಿ ಕಾರ್ಯಕ್ರಮದ ಸಂಯೋಜಕರಾಗಿ ಕಾರ್ಯನಿರ್ವಹಿಸಿದರು. ಉಪಪ್ರಾಚಾರ್ಯರು ಮತ್ತು ಔಷಧ ತಯಾರಿಕೆ (Pharmaceutics) ವಿಭಾಗದ ಮುಖ್ಯಸ್ಥರು ಡಾ. ಜೆ. ತಿಮ್ಮಶೆಟ್ಟಿ ಹಾಗೂ ಔಷಧ ಜ್ಞಾನ (Pharmacognosy) ವಿಭಾಗದ ಮುಖ್ಯಸ್ಥರು ಡಾ. ಅಮಿತ್ ಕುಮಾರ್ ಬಿ. ಸಹ ಹಾಜರಿದ್ದರು. ಕಾರ್ಯಕ್ರಮದ ಸಂಯೋಜಕರಾದ ಪ್ರತೀಕ್ಷಾ ಸಿ ವಂದಿಸಿದರು.

13th August 2025
ಹುಬ್ಬಳ್ಳಿಯಲ್ಲಿ ಹರಶ್ರಾವಣ ಯಶಸ್ವಿ
ಹುಬ್ಬಳ್ಳಿ:
ಹರಿಹರ ಪಂಚಮಸಾಲಿ ಪೀಠದ
ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳವರ ದಿವ್ಯಸಾನಿದ್ಯದಲ್ಲಿ ಮಂಗಳವಾರ ನಗರದಲ್ಲಿ
ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ರಾಜ್ಯಾಧ್ಯಕ್ಷ ಸೋಮನಗೌಡ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಹರಶ್ರಾವಣ ಕಾರ್ಯಕ್ರಮ
ಅತ್ಯಂತ ಯಶಸ್ವಿಯಾಗಿ ಜರುಗಿತು. ಬಸವಾದಿ ಶರಣರನ್ನು ಸ್ಮರಿಸಲಾಯಿತು.ಹಾಗೂ ಸಮುದಾಯದ ಅಭ್ಶುದಯ ಕುರಿತು ಚರ್ಚಿಸಲಾಯಿತು.
ಮಹಿಳಾ ಘಟಕ ಅಧ್ಯಕ್ಷೆ ಲಲಿತಾ ಪಾಟೀಲ, ರೇಣುಕಾ ಶಿರಗಂಬಿ, ಶಾಂಭವಿ ಯಲ್ಲಾಪುರ,ಅರುಣಾ ಶಿರಗುಪ್ಪಿ, ಧಾರವಾಡ ಜಿಲ್ಲಾಧ್ಯಕ್ಷ ಡಾ. ಮೋಹನ ನುಚ್ಚಿನ,
ಪ್ರಧಾನ ಕಾರ್ಯದರ್ಶಿ ಜಿ.ಜಿ.ದ್ಯಾವನಗೌಡ್ರ ರಾಜಶೇಖರ ಕರ್ಕನವರ, ನಿಂಗಣ್ಣ ಬಿರಾದಾರ, ಮೋಹನ್ ಅಂಬಿಕಾಯಿ, ಗಿರೀಶ ನಲವಡಿ, ವಿಜಯ ಗುಡ್ಡದ, ಬಾಳಾಸಾಹೇಬ ಪಾಟೀಲ, ಕೊಟ್ರೇಶ್, ಪದಾಧಿಕಾರಿಗಳು,ಸಮುದಾಯದ ಪ್ರಮುಖರು,ಸದ್ಭಕ್ತರು ಉಪಸ್ಥಿತರಿದ್ದರು.

3rd August 2025
*ಡಾ. ಸುನೀಲ ಪರೀಟರವರ ಎರಡು ಕೃತಿಗಳ ಲೋಕಾರ್ಪಣೆ*
ಬೆಳಗಾವಿ - ಶಿವಾ ಆಫಸೆಟ್ ಪ್ರಿಂಟರ್ಸ್ ಮತ್ತು ಪಬ್ಲಿಷರ್ಸ್, ಬೆಳಗಾವಿ ಹಾಗೂ ಶ್ರೀ ಗುರುದೇವ ಪ್ರಕಾಶನ, ಬೆಳಗಾವಿ ಸಂಯುಕ್ತ ಆಶ್ರಯದಲ್ಲಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಡಾ. ಸುನೀಲ ಪರೀಟ ಅವರು ಸಂಪಾದಿಸಿದ "ನಮ್ಮ ವೈದ್ಯೋನಾಾರಾಯಣ" ಕವನ ಸಂಕಲನ ಹಾಗೂ ಅವರ ಸ್ವರಚಿತ"ಕ್ಷಣ ಹೊತ್ತಿನ ಕಥೆಗಳು" ಎಂಬ ಸಣ್ಣ ಕಥೆಗಳ ಸಂಗ್ರಹ ಲೋಕಾರ್ಪಣೆ ಮಾಡಲಾಯಿತು. ಕೃತಿಗಳ ಬಿಡುಗಡೆ ಮಾಡಿ ಹಿರಿಯ ಸಾಹಿತಿಗಳು ಎಂ.ಎಸ್. ಇಂಚಲ ಅವರು ಮಾತನಾಡಿದರು, ಕನ್ನಡ ಭಾಷೆಯು ಶಾಸ್ತ್ರೀಯ ಭಾಷೆಯಾಗಿ ಸ್ಥಾನಮಾನವನ್ನು ಗಳಿಸಿದೆ, ಪಂಪ ರನ್ನರಂತಹ ಆದಿ ಕವಿಗಳು ಈ ಭಾಷೆಯನ್ನು ಸಮೃದ್ಧಗೊಳಿಸಿದರು, ಈ ಆಧುನಿಕ ಯುಗದಲ್ಲಿಯೂ ಇಂತಹ ಅದ್ಭುತ ಕೃತಿಗಳು ನಮ್ಮ ಕನ್ನಡ ಸಾಹಿತ್ಯವನ್ನು ಮತ್ತಷ್ಟು ಶ್ರೀಮಂತಗೊಳಿಸುತ್ತಿವೆ. "ನಮ್ಮ ವೈದ್ಯೋನಾರಾಯಣ" ಕೃತಿಯನ್ನು ಪರಿಚಯಿಸುತ್ತ ಡಾ . ರಾಜಶೇಖರ ಬಿರಾದಾರ ಹೇಳಿದರು, ಈ ಕೃತಿಯಲ್ಲಿ 88 ಕವಿಗಳ ಕವನಗಳನ್ನು ಸಂಗ್ರಹಿಸಿ ಸಾರಸ್ವತ ಲೋಕಕ್ಕೆ ಸಮರ್ಪಿಸುತ್ತಿರುವುದು ಅದ್ಭುತ ಕೆಲಸ. ಇದರಿಂದ ವೈದ್ಯ ಲೋಕದಲ್ಲಿ ಹೊಸ ಸಂಚಲನ ಮೂಡುವುದು ಹಾಗೂ ವೈದ್ಯರ ಕುರಿತು ಮನ ಮನದಲ್ಲಿ ಅಭಿಮಾನ ಹೆಚ್ಚುವುದು. ಈ ನಡುವೆ ವೈದ್ಯರ ಕುರಿತು ಸ್ವರಚಿತ ಕವನವನ್ನು ಶ್ರೀಮತಿ ನಿರ್ಮಲಾ ಪಾಟೀಲ ಅವರು ಹಾಡಿ ಸಬೀಕರನ್ನು ಮಂತ್ರಮುಗ್ಧಗೊಳಿಸಿದರು. ಬೆಳಗಾವಿ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಆಂಜನೇಯ ಅವರು ತಮ್ಮ ಅತಿಥಿ ಭಾಷಣದಲ್ಲಿ ಹೇಳಿದರು, ಶಿಕ್ಷಣ ಇಲಾಖೆಯಲ್ಲಿ ಇಂತಹ ಅಪರೂಪದ ಶಿಕ್ಷಕರು ಬಹಳ ಕಡಿಮೆ ಕಂಡುಬರುವರು, ಶೈಕ್ಷಣಿಕ ಪ್ರಗತಿಯ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡುವುದು ಎಂದರೆ ಅತ್ಯಂತ ಪ್ರಶಂಸನೀಯ ಕೆಲಸ. ಪರೀಟ ಅವರ ಸಾಹಿತ್ಯವು ಈ ಸಮಾಜಕ್ಕೆ ಮಾತ್ರವಲ್ಲ ವಿದ್ಯಾರ್ಥಿಗಳಿಗೆ ದಾರಿದೀಪವಾಗಲಿ ಎಂದು ಹಾರೈಸುತ್ತೇವೆ. ಇನ್ನೊಂದು ಕೃತಿ "ಕ್ಷಣ ಹೊತ್ತಿನ ಕಥೆಗಳು"ಯನ್ನು ಪರಿಚಯಿಸುತ್ತ ಗೋಕಾಕ ತಾಲೂಕಿನ ಕಸಾಪ ಅಧ್ಯಕ್ಷರು ಶ್ರೀಮತಿ ಭಾರತಿ ಮದಬಾವಿ ಅವರು ಹೇಳಿದರು, ಈ ಕೃತಿ ಚಿಕ್ಕದಾಗಿ ಕಂಡ ಬಂದರೂ ಚೊಕ್ಕದಾದ ಜ್ಞಾನವನ್ನು ನೀಡುವ ಸಂಗ್ರಹವಾಗಿದೆ. ಇದರಲ್ಲಿ ಅತ್ಯಂತ ಕಡಿಮೆ ಶಬ್ದಗಳಲ್ಲಿ ಕಥೆ ರೂಪದಲ್ಲಿ ಒಂದು ಘಟನೆಯನ್ನು ಸರಿ ಹಿಡಿದು ಓದುಗರ ಮನಸ್ಸಿಗೆ ಸ್ಪರ್ಶಿಸುವಂತೆ ವರ್ಣಿಸಿದ್ದಾರೆ. ಸರ್ಕಾರಿ ವೈದ್ಯರಾದ ಡಾ. ಜಯಾನಂದ ಧನವಂತ ಅವರು ತಮ್ಮ ಅತಿಥಿಯ ಭಾಷಣದಲ್ಲಿ, ಸಾಹಿತ್ಯವು ಕಲ್ಪನೆಗೆ ಮೀರಿದ್ದಾಗಿರುತ್ತದೆ ಎಂಬುದಕ್ಕೆ ಈ ಎರಡು ಕೃತಿಗಳು ಸಾಕ್ಷಿಯಾಗಿವೆ, ವೈದ್ಯರನ್ನು ಹಾಡಿ ಹೊಗಳಿದ ಈ ಕೃತಿಯು ವಿಸ್ಮಯಕ್ಕೆ ಸಾಕ್ಷಿಯಾಗಿದೆ. ವೈದ್ಯರೆಂದರೆ ಉದಾಸೀನತೆ ಭಾವನೆ ಹೊಂದಿರುವ ಈ ಸಂದರ್ಭದಲ್ಲಿ ವೈದ್ಯರ ಕುರಿತು ಇಂತಹ ಕೃತಿಗಳು ನಮ್ಮೆಲ್ಲರ ಅಭಿಮಾನವನ್ನು ಹೆಚ್ಚಿಸುತ್ತವೆ ಎಂದು ಹೇಳಿದರು.
ಅತಿಥಿಗಳಾದ ನಿವೃತ್ತ ಮುಖ್ಯೋಪಾಧ್ಯಾಯರು ಶ್ರೀ ಡಿ . ಎಸ್. ಪೂಜಾರ ಅವರು ತಮ್ಮ ಮಾತುಗಳಲ್ಲಿ ಇಂದಿನ ಸಮಾಜಕ್ಕೆ ಹಾಗೂ ಸಾಹಿತ್ಯಕ್ಕೆ ಇಂತಹ ಧಾರ್ಮಿಕ, ದಾರ್ಶನಿಕ ಹಾಗೂ ಆಧ್ಯಾತ್ಮಿಕ ಕೃತಿಗಳು ಬಹಳ ಅತ್ಯವಶ್ಯಕ. ಹಿರಿಯ ಮರಗಳು ಕಿರಿಯ ಸಸಿಗಳಿಗೆ ಆಧಾರವಾಗಿ ನಿಂತು ಎಲ್ಲರನ್ನೂ ಸಾಮಾಜಿಕವಾಗಿ ಧಾರ್ಮಿಕವಾಗಿ ಹಾಗೂ ಆಧ್ಯಾತ್ಮಿಕವಾಗಿ ಮುನ್ನಡೆಯುವಂತೆ ದಾರಿ ತೋರಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಶಿವಾ ಅಪ್ಸೇಟಿನ ಮಾಲೀಕರಾದ ಡಾ. ಶಿವು ನಂದಗಾಂವ ಅವರು ತಮ್ಮ ಮಾತುಗಳಲ್ಲಿ ಮಕ್ಕಳನ್ನು ಮೊಬೈಲ್ ಗಳಿಂದ ದೂರ ಇಡಲು ಉಪಾಯವೆಂದರೆ ಅದು ಸಾಹಿತ್ಯ ಜಗತ್ತಿನ ಇಂತಹ ಕೃತಿಗಳು, ಅತಿಯಾದ ಮೊಬೈಲ್ ಬಳಕೆ ಆರೋಗ್ಯಕ್ಕೆ ಹಾನಿಕರ ಜೊತೆಗೆ ಆರ್ಥಿಕವಾಗಿ ಅನೇಕ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ ಆದ್ದರಿಂದ ಮಕ್ಕಳ ಕೈಯಲ್ಲಿ ಮೊಬೈಲ್ ಬದಲಾಗಿ ಇಂತಹ ಕೃತಿಗಳನ್ನು ನೀಡುವುದು ಒಳಿತು ಎಂದು ಹೇಳಿದರು. ಇನ್ನೋರ್ವ ಮುಖ್ಯ ಅತಿಥಿಗಳಾದ ಶ್ರೀ ಎಂ. ವೈ. ಮೆಣಸಿನಕಾಯಿಯವರು ಸಾಹಿತ್ಯ ಜಗತ್ತಿಗೆ ಇಂಥ ಕೃತಿಗಳು ಮೆರಗನ್ನು ನೀಡುತ್ತವೆ, ಇಂತಹ ಉಪಯುಕ್ತವಾದಂತಹ ಕೃತಿಗಳು ನಾವೆಲ್ಲರೂ ಓದಿ ನಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು, ಸಾಹಿತಿಗಳಿಗೆ ಪ್ರೋತ್ಸಾಹವನ್ನು ನೀಡಬೇಕು ಎಂದು ಹೇಳಿದರು. ಕೃತಿಕಾರರಾದ ಡಾ. ಸುನೀಲ ಪರೀಟ ರವರು ತಮ್ಮ ಭಾಷಣದಲ್ಲಿ ಹೇಳಿದರು, ಇಂದಿನ ಕಾಲದಲ್ಲಿ ಕೃತಿಗಳನ್ನು ಸಂಪಾದನೆ ಮಾಡಿ ಅವುಗಳನ್ನು ಪ್ರಕಟಿಸುವುದು ಅತ್ಯಂತ ಕಷ್ಟದ ಕೆಲಸವಾದರೂ, ಸಾಹಿತ್ಯ ಸೇವೆ ಎಂದು ನಿಸ್ವಾರ್ಥ ಭಾವನೆಯಿಂದ ಮಾಡಿದ ಕೆಲಸವೂ ಯಶಸ್ವಿಯಾಗುತ್ತದೆ. ಕಥೆಗಳು ಸಾಂದರ್ಭಿಕ ಹಾಗೂ ಅನುಭಾವಿಕವಾಗಿರಬೇಕು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷರು ಡಾ. ಹೇಮಾ ಸೊನಳ್ಳಿ ತಮ್ಮ ಅಧ್ಯಕ್ಷತೆಯ ನುಡಿಯಲ್ಲಿ ಹೇಳಿದರು, ಇವತ್ತಿನ ಎರಡು ಕೃತಿಗಳು ಕನ್ನಡ ಸಾರಸ್ವತ ಜಗತ್ತಿಗೆ ಸಮರ್ಪಿತಗೊಂಡಿದ್ದು ಇವು ಸಮಾಜವನ್ನು ಸನ್ಮಾರ್ಗದತ್ತ ಕೊಂಡೊಯ್ಯುವ ಪ್ರಯತ್ನ ಮಾಡುತ್ತವೆ. ಸಂದರ್ಭೊಚಿತವಾದ ಅನುಭವಜನ್ಯ ಕಥೆಗಳು ಇಲ್ಲಿ ಮೂಡಿಬಂದಿವೆ. ಈ ಕಥೆಗಳು ಓದಿ ಬಿಡುವಂತಹ ಕಥೆಗಳು ಅಲ್ಲ ಇವುಗಳು ನೈತಿಕ ಮೌಲ್ಯವನ್ನು ವೃದ್ಧಿಸುವ ಕೆಲಸ ಮಾಡುತ್ತವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಆಗಮಿಸಿದ ಕವಿ ಮನಸುಗಳಿಗೆ ಪ್ರಶಸ್ತಿ ಪತ್ರ, ಅಭಿನಂದನಾ ಪತ್ರ, ಸ್ಮರಣಿಕೆ, ಪುಸ್ತಕ ನೀಡಿ ಶಾಲು ಹೊದಿಸಿ ಗೌರವಿಸಲಾಯಿತು. ಅನುರಾಧಾ ಕೋಲಕಾರ ವಿದ್ಯಾರ್ಥಿನಿ ನಾಡಗೀತೆಯನ್ನು ಹಾಡಿದಳು, ಪ್ರೊ. ಮಂಜುನಾಥ್ ಕಲಾಲ ಅವರು ನಿರೂಪಿಸಿದರು ಹಾಗೂ ಎಸ್. ಎಮ್. ಮಠದ ಅವರು ವಂದಿಸಿದರು.

3rd August 2025
ಸೆಂಟ್ರಲ್ ರೋಟರಿ ಕ್ಲಬ್, ಜಿಲ್ಲಾ ಸಂವಹನ ನಾಯಕತ್ವ ವೇದಿಕೆಯಾದ NETRUTVA-25
ಹುಬ್ಬಳ್ಳಿ :
ಭಾನುವಾರ, ಆಗಸ್ಟ್ 3, 2025 ರಂದು ಆಯೋಜಿಸಿತ್ತು. ಈ ಕಾರ್ಯಕ್ರಮವು ಹುಬ್ಬಳ್ಳಿಯ ಬಿವಿಬಿ ಸಿಟಿ ಕ್ಯಾಂಪಸ್ನ ಬಯೋಟೆಕ್ ಆಡಿಟೋರಿಯಂನಲ್ಲಿ ನಡೆಯಿತು.
ಲೀಡರ್ಶಿಪ್ ಫೋರಮ್ 12 ರಿಂದ 18 ವರ್ಷದೊಳಗಿನ ಇಂಟರ್ಯಾಕ್ಟ್ ಕ್ಲಬ್ಗಳ ಸದಸ್ಯರಾದ ಇಂಟರ್ಯಾಕ್ಟರ್ಗಳಿಗೆ ನಾಯಕತ್ವ ಕೌಶಲ್ಯ ಮತ್ತು ಸಮುದಾಯ ತೊಡಗಿಸಿಕೊಳ್ಳುವಿಕೆಯನ್ನು ಅಭಿವೃದ್ಧಿಪಡಿಸಲು ಒಂದು ವೇದಿಕೆಯನ್ನು ಒದಗಿಸಿತು. ರೋಟರಿ ಡಿಸ್ಟ್ರಿಕ್ಟ್ 3170 ರಾದ್ಯಂತ 60 ವಿಶೇಷ ಅಗತ್ಯವಿರುವ ಮಕ್ಕಳು ಸೇರಿದಂತೆ ಸುಮಾರು 800 ಇಂಟರ್ಯಾಕ್ಟರ್ಗಳು ದಿನವಿಡೀ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದರು, ಇದು ಈ ಪ್ರದೇಶದ ಇಂಟರ್ಯಾಕ್ಟ್ ಯುವಕರ ಅತಿದೊಡ್ಡ ಕೂಟಗಳಲ್ಲಿ ಒಂದಾಗಿದೆ.
ಮುಖ್ಯ ಅತಿಥಿ ಡಾ. ಶಿವಾಜಿ ಕೆ. ಜಾಧವ್, ಪಿಎಚ್ಡಿ, ಎನ್ಐಆರ್ಆರ್ಎಚ್ (ಐಸಿಎಂಆರ್), ತಮ್ಮ ಭಾಷಣದಲ್ಲಿ, ವಿನಮ್ರ ಸರ್ಕಾರಿ ಶಾಲೆಯಿಂದ ಹಾರ್ವರ್ಡ್ ವಿಶ್ವವಿದ್ಯಾಲಯಕ್ಕೆ ತಮ್ಮ ಪ್ರಯಾಣವನ್ನು ಹಂಚಿಕೊಂಡರು, ವಿಜ್ಞಾನ ಮತ್ತು ಸಂಶೋಧನೆಯಲ್ಲಿ ತಮ್ಮನ್ನು ಸಮರ್ಪಣಾಭಾವದಿಂದ ತೊಡಗಿಸಿಕೊಂಡರು ಮತ್ತು ಉತ್ತಮ ಅಭ್ಯಾಸಗಳನ್ನು ಬೆಳೆಸಿಕೊಳ್ಳಲು, ಆಯ್ಕೆಮಾಡಿದ ಕೆಲಸದ ಕ್ಷೇತ್ರದ ಬಗ್ಗೆ ಉತ್ಸಾಹವನ್ನು ಹೊಂದಲು ಮತ್ತು ಪೋಷಕರು ಮತ್ತು ಸಮಾಜವನ್ನು ಗೌರವಿಸಲು ಸಂವಾದಕರನ್ನು ಒತ್ತಾಯಿಸಿದರು.
ಉತ್ತಮ ಸಂವಹನವನ್ನು ಬೆಳೆಸಿಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದ ಅವರು, ಮಕ್ಕಳು ಚರ್ಚೆಗಳು ಮತ್ತು ಇತರ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಕೇಳಿಕೊಂಡರು.
ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತ್ಯಂತ ಆದ್ಯತೆಯಾಗಿರಬೇಕು ಎಂದು ಡಾ. ಶಿವಾಜಿ ಹೇಳಿದರು.
ಗೌರವಾನ್ವಿತ ಅತಿಥಿ: ಪಿಡಿಜಿ ಆರ್ಟಿಎನ್. ಅವಿನಾಶ್ ಪೋತ್ದಾರ್, ಹಿಂದಿನ ಆರ್ಆರ್ಎಫ್ಸಿ, ಹೈಲೈಟ್ ಮಾಡಿದರು.
ವಿಶೇಷ ಆಹ್ವಾನಿತ, ಜಿಲ್ಲಾ ಗವರ್ನರ್ ಆರ್.ಟಿ.ಎನ್. ಅರುಣ್ ಭಂಡಾರೆ (2025-26) ಮೌಲ್ಯಗಳು ಮತ್ತು ಸಂಸ್ಕೃತಿಯ ಮಹತ್ವದ ಬಗ್ಗೆ ಚಿಂತನೆ ನಡೆಸಿದರು. ಆಸಕ್ತಿದಾಯಕ ಕಥೆಯನ್ನು ಹಂಚಿಕೊಂಡ ಅವರು, ವಿದ್ಯಾರ್ಥಿಗಳು ಪೋಷಕರನ್ನು ಗೌರವಿಸಬೇಕು ಮತ್ತು ಅವರು ತಮ್ಮ ಮಕ್ಕಳಲ್ಲಿ ತುಂಬಲು ಪ್ರಯತ್ನಿಸುವ ಪಾಠಗಳನ್ನು ಎಂದಿಗೂ ತಪ್ಪಾಗಿ ಅರ್ಥೈಸಿಕೊಳ್ಳಬಾರದು ಎಂದು ವಿನಂತಿಸಿದರು. ಈ ಸಂದರ್ಭದಲ್ಲಿ ಆರ್.ಟಿ.ಎನ್. ಗೌರಿ ಶಿರಗಾಂವ್ಕರ್ ಅವರು ಜಿಲ್ಲಾ ಸಂವಹನ ಪ್ರತಿನಿಧಿಯಾಗಿ ಇಶಾ ಕಾಮತ್ ಅವರನ್ನು ನೇಮಿಸಿದರು. ಉಪಸ್ಥಿತರಿದ್ದ ಜಿಲ್ಲಾ ರೋಟರಾಕ್ಟ್ ಪ್ರತಿನಿಧಿ ಆರ್.ಟಿ.ಆರ್. ಹರ್ಷ ಶಿಂಧೆ ಅವರು ಸಮುದಾಯ ಸೇವೆಗಾಗಿ ನಿಧಿಸಂಗ್ರಹದ ಮಹತ್ವದ ಬಗ್ಗೆ ಮಾತನಾಡಿದರು.
ದಿನದ ತರಬೇತುದಾರರು ಜಿಎಸ್ಆರ್ ಆರ್.ಟಿ.ಎನ್. ವಾಸುಕಿ ಸಂಜಿ ಮತ್ತು ಜಿಲ್ಲಾ ಇಂಟರ್ಯಾಕ್ಟ್ ಅಧ್ಯಕ್ಷೆ ಗೌರಿ ಶಿರಗಾಂವ್ಕರ್ ತಮ್ಮ ರೋಟರಿ ಅನುಭವಗಳನ್ನು ಹಂಚಿಕೊಂಡರು ಮತ್ತು ವಿವಿಧ ರೋಟರಿ ಪ್ರಕ್ರಿಯೆಗಳು ಮತ್ತು ಕಾರ್ಯಕ್ರಮಗಳ ಬಗ್ಗೆ ಸಂವಹನಕಾರರೊಂದಿಗೆ ಮಾತನಾಡಿದರು. ಸಹಾಯಕ ಗವರ್ನರ್, ಆರ್.ಟಿ.ಎನ್. ಕೌಸ್ತಭ್ ಸೌನ್ಶಿಕರ್ ಅವರು ಆತಿಥೇಯ ಕ್ಲಬ್ಗೆ ತಮ್ಮ ಬೆಂಬಲವನ್ನು ನೀಡುವ ಮೂಲಕ ಈ ಸಂದರ್ಭವನ್ನು ಅಲಂಕರಿಸಿದರು.
ಮಧ್ಯಾಹ್ನ ಊಟದ ನಂತರ ಲೋಕ ನೃತ್ಯ ಎಂಬ ಜಾನಪದ ನೃತ್ಯ ಸ್ಪರ್ಧೆ ನಡೆಯಿತು. ಒಟ್ಟು 20 ತಂಡಗಳು ಇದಕ್ಕಾಗಿ ನೋಂದಾಯಿಸಿಕೊಂಡವು. ನೃತ್ಯ ಸ್ಪರ್ಧೆಯ ತೀರ್ಪುಗಾರರಾಗಿ ಹುಬ್ಬಳ್ಳಿಯ ಪ್ರಸಿದ್ಧ ನೃತ್ಯ ಸಂಯೋಜಕಿ ಮೇಘನಾ ಆರ್ಸಿ ಮತ್ತು ರಾಧಿಕಾ ಗೋಖಲೆ ಇದ್ದರು.
ಸಂಘಟನಾ ಸಮಿತಿಯಲ್ಲಿ ಅಧ್ಯಕ್ಷರು: ಗೌರವಾನ್ವಿತ ಅಂಜನಾ ಬಸನಗೌಡರ್, ಕಾರ್ಯದರ್ಶಿ: ಗೌರವಾನ್ವಿತ ಸ್ಮಿತಾ ಮಹೇಶ್, ಯುವ ಸೇವಾ ನಿರ್ದೇಶಕಿ: ಗೌರವಾನ್ವಿತ ಡಾ. ಶಶಿ ಹೊಸ್ಮನಿ, ಕಾರ್ಯಕ್ರಮದ ಅಧ್ಯಕ್ಷರು: ಗೌರವಾನ್ವಿತ ಸಂಜನಾ ಮಹೇಶ್ವರಿ, ಕಾರ್ಯಕ್ರಮ ಕಾರ್ಯದರ್ಶಿ: ಗೌರವಾನ್ವಿತ ರಾಜೇಶ್ವರಿ ಸಂಜಿ, ಖಜಾಂಚಿ: ಗೌರವಾನ್ವಿತ ನಯನ ಗೋಟಡ್ಕೆ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಆರ್ಸಿಎಚ್ಸಿ ಸದಸ್ಯರು, ಸ್ನೇಹಿತರು ಮತ್ತು ಇತರ ಆಹ್ವಾನಿತರು ಉಪಸ್ಥಿತರಿದ್ದರು.

30th July 2025
ಬೆಳಗಾವಿ ಜಿಲ್ಲಾ ಕ.ಸಾ.ಪ ವತಿಯಿಂದ 'ನುಡಿ ತೆರಿಗೆ ನೂರೊಂದು ಕಾರ್ಯಕ್ರಮ' - ಶಿರಿಷ ಜೋಶಿಯವರ ಬಹುಮುಖ ಸಾಹಿತ್ಯಕ ಸೇವೆ ಶ್ಲಾಘನೀಯ.- ಡಾ. ಗುರುದೇವಿ ಹುಲ್ಲೆಪ್ಪನವರ ಮಠ ಅಭಿಮತ
ಹಿರಿಯ ಸಾಹಿತಿ ಶಿರಿಷ್ ಜೋಶಿ ಯವರ ಸಾಹಿತ್ಯ ಸೇವೆ ಬಹುಮುಖಿಯಾಗಿದ್ದು ರಂಗಭೂಮಿ ಚಲನಚಿತ್ರ, ಕ್ಷೇತ್ರ ದರ್ಶನ ಕಾದಂಬರಿಗಳು, ವ್ಯಕ್ತಿ ಚಿತ್ರಣಗಳು, ನಾಡು ನುಡಿ ಕುರಿತಾದ ಗ್ರಂಥಗಳು ವಿಶೇಷವಾಗಿ ಕರ್ನಾಟಕದ ಏಳು ಜನ ಸಂಗೀತ ಲೋಕದ ದಿಗ್ಗಜರ ಕುರಿತಾದ ಮಾಹಿತಿ ಪೂರ್ವಕ ಕೃತಿಗಳು ನಿಜಕ್ಕೂ ಅವರ ಅಧ್ಯಯನ ಶೀಲತೆ ಮತ್ತು ಸಾಹಿತ್ಯ ಸೇವೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಸೋಮವಾರ ದಿ. 28ರಂದು ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಸಂಸ್ಕೃತಿಕ ಭವನದ ಕ್ಷೇಮಾಭಿವೃದ್ಧಿ ಸಂಘದ ಸಂಯುಕ್ತ ಆಶ್ರಯದಲ್ಲಿ ಬೆಳಗಾವಿಯ ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾದ 'ನುಡಿ ತೇರಿಗೆ ನೂರೊಂದು ನಮನ 'ಸರಣಿ ಕಾರ್ಯಕ್ರಮ ಮಾಲಿಕೆಯಲ್ಲಿ ಹಿರಿಯ ಸಾಹಿತಿಗಳಾದ 'ಶಿರಿಷ್ ಜೋಶಿ ಅವರ ಬದುಕು ಬರಹ' ಕುರಿತು ಹಿರಿಯ ಸಾಹಿತಿ ಡಾ ಗುರುದೇವಿ ಹುಲ್ಲೆಪ್ಪನವರಮಠ ರವರು ಮಾತನಾಡಿದರು. ಶಿರಿಷ್ ಜೋಶಿ ಅವರ ಪ್ರತಿ ಕೃತಿಗಳು ಆಳವಾಗಿ ಅಧ್ಯಯನ ಮಾಡಿ ಸಂಶೋಧನಾತ್ಮಕ ರೀತಿಯಲ್ಲಿ ಅವನ್ನು ಅರಿತು ರಚಿಸಿದಂತವುಗಳಾಗಿವೆ.ಅವರ ನಡೆ ನುಡಿ,ಆದರ್ಶ ಎಲ್ಲರ ಕುರಿತಾದ ಗೌರವ ನಿಜಕ್ಕೂ ಅನುಕರನಣೀಯ. ಅವರ ವಿಶೇಷ ಕಲೆ ನಿರ್ದೇಶನ. ಅವರ ನಿರ್ದೇಶನದಲ್ಲಿ ಮೂಡಿಬಂದ ಅನೇಕ ನಾಟಕಗಳು ಅನೇಕ ಪ್ರಶಸ್ತಿಗಳಿಗೆ ಭಾಜನವಾಗಿದೆ. ಅವರು ಬರೆದ ಸಂಭಾಷಣೆಯಲ್ಲಿ ಮೂಡಿ ಬಂದ ಇಂಗಳೇಮಾರ್ಗ,ಸಾವಿತ್ರಿಬಾಯಿ ಪುಲೆ 1947 ಜುಲೈ 22 ಚಲನಚಿತ್ರಗಳು ರಾಜ್ಯ ಚಲನಚಿತ್ರ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಪಡೆದಿವೆ. ಅವರಿಂದ ಭಾಷಾಂತರವಾದ ಅನೇಕ ಕೃತಿಗಳು ಮೂಲ ಕೃತಿಯನ್ನೇ ಹೋಲುವಂತಹ ಉತ್ಕೃಷ್ಟತೆ ಹೊಂದಿವೆ. ಸೂಕ್ಷ್ಮ ಗುಣಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಕುತೂಹಲ ಕೆರಳಿಸುವ ಅವರ ಕಾದಂಬರಿ ರಚನೆ ನಿಜಕ್ಕೂ ಎಲ್ಲರಿಗೂ ಮಾದರಿಯಾಗಿದೆ ಅಂತಹ ಮಹಾನ್ ಕೃತಿಗಳ ಅಧ್ಯಯನ ಈಗಿನ ಯುವ ಜನತೆ ಮಾಡಿದ್ದೇ ಆದರೆ ಯುವ ಜನರು ಸಹ ಈ ಸಾಹಿತ್ಯ ಅಭಿರುಚಿ ಯನ್ನು ಬೆಳೆಸಿಕೊಳ್ಳಬಹುದು.ಆ ನಿಟ್ಟಿನಲ್ಲಿ ಈ ದಿನ ಇಟ್ಟಿರುವ ಅವರ ಬದುಕು ಗುರಿತಾದ ಮೆಲಕು ಹಾಕುವ ಕಾರ್ಯಕ್ರಮ ನಿಜಕ್ಕೂ ಅವರ ಸಾಹಿತ್ಯ ಸೇವೆಗೆ ನಾವು ಕೊಟ್ಟಿರುವ ಗೌರವ ಎನ್ನಬಹುದು ಎಂದು ಅವರ ಬದುಕು ಬರಹವನ್ನು ವಿವರಿಸಿದರು. ಇದೇ ಸಂದರ್ಭದಲ್ಲಿ ಸಾಹಿತಿ ಪಿ. ಬಿ. ಸ್ವಾಮಿ ಜೋಶಿಯವರ ಕುರಿತಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಂ.ಎಸ್ ಇಂಚಲ್ ರವರು ಜೋಶಿಯವರ ಸಮಗ್ರ ಕೃತಿಗಳು ಅತ್ಯಂತ ಗುಣಮಟ್ಟ ಹೊಂದಿದವುಗಳಾಗಿವೆ ಎಂದರು. ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳಾದ ಬಸವರಾಜ ಜಗಜಂಪಿ,ಪಿ ಜಿ ಕೆಂಪಣ್ಣವರ, ಎ. ಎ. ಸನದಿ, ಸುಭಾಷ ಏಣಗಿ, ಅರವಿಂದ ಹುನಗುಂದ,ಜ್ಯೋತಿ ಬದಾಮಿ, ಎಲ್ಎಸ್ ಶಾಸ್ತ್ರಿ ಮಧುಕರ ಗುಂಡೇನಟ್ಟಿ, ಶಾರದಾ ಭೋಜ, ಅನಂತ ಪಪ್ಪು, ಶ್ವೇತಾ ನರಗುಂದ, ಶೈಲಜಾ ಬಿಂಗೆ, ಭಾಗ್ಯಶ್ರೀ ಕುಲಕರ್ಣಿ, ಡಾ ಜಯಂತ ಕಿತ್ತೂರ,ಎಸ್. ಬಿ. ದಳವಾಯಿ,ಶ್ರೀನಿವಾಸ ಪಂಡಿತ, ಎಸ್. ಆರ್, ಕ್ಷಿರಸಾಗರ, ಇಂದಿರಾ ಮೂಟೆಬೆನ್ನೂರು, ಎ. ಆರ್. ಕುಲಕರ್ಣಿ, ಶ್ರೀರಂಗ ಜೋಶಿ ಬಿ ಬಿ ಮಠಪತಿ, ಎಂ. ಬಿ. ಮರಲಕ್ಕನವರ ಸೇರಿದಂತೆ ಅನೇಕ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು ಕಾರ್ಯಕ್ರಮದ ಆರಂಭದಲ್ಲಿ ವೀರಭದ್ರ ಅಂಗಡಿ ಸ್ವಾಗತಿಸಿದರು ಜಿಲ್ಲಾ ಕಾರ್ಯದರ್ಶಿ ಎಂ.ವೈ ಮೆಣಸಿನಕಾಯಿ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಆರ್. ಬಿ. ಬನಶಂಕರಿ ಪರಿಚಯಿಸಿದರು. ಡಾ.ಹೇಮಾವತಿ ಸೋನೋಳ್ಳಿ ನಿರೂಪಿಸಿದರು ಕೊನೆಯಲ್ಲಿ ಶಿವಾನಂದ ತಲ್ಲೂರ ವಂದಿಸಿದರು

29th July 2025
ಹುಕ್ಕೇರಿ ತಾಲೂಕಿನ ಸಾಹಿತಿಗಳಿಗೆ ಕಿತ್ತೂರಿನ ಕಲ್ಮಠದಲ್ಲಿ ಬರಹವೇ ಶಕ್ತಿ ವೇದಿಕೆಯಿಂದ ಚೆನ್ನಮ್ಮ ಬರಹಸಿರಿ ಪ್ರಶಸ್ತಿ ಪ್ರಧಾನ ಸಮಾರಂಭ ಪ್ರಶಸ್ತಿ ಪಡೆದ ತಾಲೂಕಿನ ಕವಿಯತ್ರಿಯರು
ಗೀತಾ ಅಶೋಕ ಶೇಠಿ ಹುಕ್ಕೇರಿ
ವೇಣು ತಾಯಿ ಸಾ ತಪ್ಪ ಚೌಗುಲಾ
ಅರುಂಧತಿ ಶಿರಿಗೆ
ಸುಧಾ ಬಾಗಲಕೋಟೆ
ಮಾಯ ನಂದಿ
ಪಾರ್ವತಿ ದೇವಿ ತುಪ್ಪದ್ ಬೆಳಗಾವಿ
ಶೈಲಾ ತುಕ್ಕನ್ನವರ್ ಕಿತ್ತೂರ್
ಇದೆ ವೇದಿಕೆಯಲ್ಲಿ ಈ ಸಾಹಿತಿಗಳಿಂದ ಪ್ರಾರ್ಥನಾ ಗೀತೆ ನಾಡಗೀತೆ ಚೆನ್ನಮ್ಮನ ಗೀತೆ ಹೇಳಲಾಯಿತು ಅದರ ಜೊತೆಗೆ ಬೆಳಗಾವಿ ಘಟಕ ಉದ್ಘಾಟನೆಯಾಯಿತು ಈ ಘಟಕದಲ್ಲಿ ಸಂಘಟನಾ ಕಾರ್ಯದರ್ಶಿಯಾಗಿ ಗೀತಾಅಶೋಕ ಶೇ ಠಿ ಪದಗ್ರಹಣ ಮಾಡಿದರು
ಈ ಸಂಘಟನೆಯ ಸಂಸ್ಥಾಪಕರು ಚಂದ್ರಕಾಂತ್ ಚೌಹನ್ ಈ ವೇದಿಕೆಯ ಸರ್ವಾಧ್ಯಕ್ಷರು ಡಾಕ್ಟರ್ ಎಸ್ ಬಿ ದಳವಾಯಿ
ಪ್ರಧಾನ ಕಾರ್ಯದರ್ಶಿ ಜೇನು ಜ್ಯೋತಿ ನಾಯಕ್
ರಾಜ್ಯಾಧ್ಯಕ್ಷರು ಎಚ್ಎಸ್ ಗೌಡರ್
ರಾಜ್ಯ ಕಾರ್ಯದರ್ಶಿ ಮಂಜುಳಾ ಶೆಟ್ಟರ್ ಮಠದ ಪೀಠಾಧೀಶರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಲ್ಲರಿಗೂ ಆಶೀರ್ವಚನ ನೀಡಿದರು ಚೆನ್ನಮ್ಮ ನಾಟಕದ ನಿರ್ದೇಶಕರಾದ ಪರ್ವೀನ್ ನಾಯಕರು ಕೂಡ ಉಪಸ್ಥಿತರಿದ್ದರು ಹಿರಿಯ ಸಾಹಿತಿಗಳ ಸಮ್ಮುಖದಲ್ಲಿ ಈ ಪ್ರಶಸ್ತಿ ಪ್ರಧಾನ ಮಾಡಲಾಯಿತು
ಇದೇ ವೇದಿಕೆಯಲ್ಲಿ ಕವಿಗೋಷ್ಠಿ ಪದಗ್ರಹಣ ವಚನಧಾರೆ ಪುಸ್ತಕ ಬಿಡುಗಡೆ ಕಾರ್ಯಕ್ರಮಗಳು ಜರುಗಿದವು ಸ್ಥಳೀಯ ಸಂಘಟನೆಯಿಂದ ಚಂದ್ರಶೇಖರ್ ಚೆನ್ನಂಗಿ ಇನ್ನಿತರರು ತನುಮನದಿಂದ ಸಹಾಯ ಮಾಡಿದರು ರಂದು ನಡೆದ ಜಾನ್ ಕರ್ನಾಟಕ ರಾಜ್ಯ ಜಾನಪದ ಜಾಣರ ವೇದಿಕೆ ಹರಪನಹಳ್ಳಿ ಪದಗ್ರಹಣ ಕಾರ್ಯಕ್ರಮ ಹಾಗೂ ಜನಪದ ಸಿರಿ ಪ್ರಶಸ್ತಿಗೂ ಕೂಡ ಭಾಜನರಾಗಿದ್ದಾರೆ ಗೀತಾ ಅಶೋಕ ಶೇಠಿ ನಿರ್ದೇಶಕರಾಗಿ ಪದಗ್ರಹಣ ಮಾಡಿದ್ದಾರೆ

28th July 2025
ಶೀರ್ಷಿಕೆ: *ಭಕ್ತಿಯ ಪರಾಕಾಷ್ಟೆ ಶ್ರಾವಣ ಮಾಸ*
ಶ್ರಾವಣ ಮಾಸ ಧಾರ್ಮಿಕ ದಿವಸವು
ಶುಭದಿನದ ಪೂಜೆಕಂಕೈರ್ಯವು
ಆಧ್ಯಾತ್ಮಿಕ ಕೀರ್ತನೆ ಪುರಾಣವು
ದೇವ ಸ್ಮರಣೆ, ಭಕ್ತಿ ಮಾರ್ಗವು
ಭಕ್ತರಿಗೆ ಶಾಂತಿ ನೆಮ್ಮದಿಯು
ನಿಗೂಢ ಅಗೋಚರ ಶಕ್ತಿಯು
ಹರಕೆಯು ಫಲಿಸಲು, ನಂಬಿಕೆಯು
ಭಗವಂತನಲ್ಲಿ ಶ್ರದ್ಧೆ ವಿಶ್ವಾಸವು
ನಾಗರ ಪಂಚಮಿ ಹಬ್ಬದಲ್ಲಿ
ಹೆಣ್ಣು ಮಕ್ಕಳು ಹಾಲೆರೆಯಲು
ನಾಗರ ದೇವರ ನೈವೇದ್ಯ ಅರ್ಪಿಸಲು
ಮಕ್ಕಳ ಭಾಗ್ಯ, ಕನಕ ವೃಷ್ಟಿಯ ಬೇಡಲು
ಶ್ರೀ ವರಮಹಾಲಕ್ಷ್ಮಿ ದೇವಿ ಹಬ್ಬವು
ಮನೆ ಮಂದಿಗೆ ಸಡಗರ ಸಂಭ್ರಮವು
ಶ್ರೀ ಲಕ್ಷ್ಮಿ ಕಟಾಕ್ಷ ಅಪೇಕ್ಷೆಯ ಮನವು
ಮುತ್ತೈದೆಯರಿಗೆ ಉಡಲಕ್ಕಿ ತುಂಬಿ ಸತ್ಕಾರವು
ಮನೆ ದೇವರ ಜಾತ್ರೆಗಳಲ್ಲಿ
ವೈಭವ ಭಕ್ತರ ಭಕ್ತಿಯು ಮನದಲ್ಲಿ
ಹೂ ಹಾರ ಪ್ರಸಾದ ಅರ್ಪಣೆ ಗುಡಿಯಲ್ಲಿ
ರಥೋತ್ಸವದ ವೀಕ್ಷಣೆ ಸಂಭ್ರಮದಲ್ಲಿ
✍️✍️
*ಶ್ರೀಮತಿ ಪಾರ್ವತಿದೇವಿ ಎಂ ತುಪ್ಪದ ಬೆಳಗಾವಿ*