
14th May 2025
ಬೀದರ. ಮೇ. 13 :- ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂದು ಭಾಲ್ಕಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯೆ ಡಾ. ಹೇಮಾವತಿ ಪಾಟೀಲ ಸಲಹೆ ಮಾಡಿದರು.
ನಗರದ ಓಡವಾಡದಲ್ಲಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರದ ಪ್ರಯುಕ್ತ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಿಸ್ತು, ದೃಢ ಸಂಕಲ್ಪ, ಸಮರ್ಪಣಾ ಭಾವ ಹಾಗೂ ಕಠಿಣ ಪರಿಶ್ರಮದಿಂದ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯವಿದೆ ಎಂದು ತಿಳಿಸಿದರು.
ಬ್ರಿಮ್ಸ್ನ ಒಬಿಜಿ ವಿಭಾಗದ ಡಾ. ಸಂಗೀತಾ ಹಲಮಂಡಗೆ ಮಾತನಾಡಿ, ದೇಹ ಸದೃಢವಾಗಿದ್ದರೆ ಮನಸ್ಸು ಆರೋಗ್ಯಕರವಾಗಿರುತ್ತದೆ ಎಂದು ಹೇಳಿದರು.
ಮಹಿಳೆಯರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಸ್ವಚ್ಛತೆಗೆ ಪ್ರಾಮುಖ್ಯತೆ ಕೊಡಬೇಕು ಎಂದು ತಿಳಿಸಿದರು.
ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥೆ ವಿಜಯಲಕ್ಷ್ಮಿ ಅಧ್ಯಕ್ಷೆ ವಹಿಸಿದ್ದರು.
ಕಾಲೇಜಿನ ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿಗಳಾದ ಡಾ. ವಿದ್ಯಾ ಪಾಟೀಲ, ಶ್ರೀನಿವಾಸ್ ರೆಡ್ಡಿ, ಕನ್ನಡ ಪ್ರಾಧ್ಯಾಪಕಿ ವಿಜಯಕುಮಾರಿ ಉಪಸ್ಥಿತರಿದ್ದರು.
13th May 2025
ಮಲ್ಲಮ್ಮ ನುಡಿ ವಾರ್ತೆ
ಕುಕನೂರ : ಪತ್ರಕರ್ತರಿಗೆ ಭದ್ರತೆ ಹಾಗೂ ವಿವಿಧ ಸೌಲಭ್ಯಗಳನ್ನು ಕಲ್ಪಿಸಲು ಹಗಲಿರುಳು ಶ್ರಮಿಸುತ್ತಿರುವ ಕರ್ನಾಟಕದ ಏಕೈಕ ವ್ಯಕ್ತಿ ಮಲ್ಲಿಕಾರ್ಜುನ ಬಂಗ್ಲೆ ಎಂದು ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ತಾಲೂಕಘಟಕದ ಗೌರವ ಅಧ್ಯಕ್ಷ ಮಹೇಶ ಕಲ್ಮಠ ಹೇಳಿದರು.
ಜಿಲ್ಲೆಯ ಕುಕನೂರು ಪಟ್ಟಣದ ಕಾರ್ಯನಿರತ ಪತ್ರಕರ್ತರ ದ್ವನಿ ಕುಕನೂರು ತಾಲೂಕ ಘಟಕದ ಕಾರ್ಯಾಲಯದಲ್ಲಿ ಸದಸ್ಯರಿಗೆ 2025-26 ನೇ ಸಾಲಿನ ಸದಸ್ಯತ ನೊಂದಣಿ ಗುರುತಿನ ಚೀಟಿ ವಿತರಿಸಿ ಮಹೇಶ್ ಕಲ್ಮಠ ಮಾತನಾಡುತ್ತಾ ಕಾರ್ಯನಿರತ ಪತ್ರಕರ್ತರ ದ್ವನಿ ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಬಂಗ್ಲೆ ಅವರ ನೇತೃತ್ವದಲ್ಲಿ ಇದೆ ಮೇ. 24ರಂದು ಪತ್ರಕರ್ತರ ಚಾರಿ ಟೇಬಲ್ ಟ್ರಸ್ಟ್ ನೋಂದಣಿಯಾಗಿದ್ದು ಪತ್ರಕರ್ತರಿಂದ ಪತ್ರಕರ್ತರಿಗಾಗಿ ನೋಂದಣಿಯಾಗಿರುವ ಟ್ರಸ್ಟ್ ಇದಾಗಿದ್ದು ಈ ಟ್ರಸ್ಟ್ ನಲ್ಲಿ ಜಮಾವಣೆ ಗೊಳ್ಳುವ ಮೊತ್ತವನ್ನು ಪತ್ರಕರ್ತರ ತುರ್ತು ಆರೋಗ್ಯ ಪರಿಸ್ಥಿತಿಯ ಔಷಧೋಪಚಾರ ಸೇರಿದಂತೆ ತುರ್ತು ಪರಿಸ್ಥಿತಿಯ ಅವಶ್ಯಕತೆಗಳಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಮತ್ತು ಅಕಾಲಿಕ ಮೃತ ಹೊಂದಿದ ಪತ್ರಕರ್ತರ ಕುಟುಂಬಕ್ಕೆ ಅಲ್ಪಮಟ್ಟಿನ ಸಹಾಯ ಹಸ್ತ ಚಾಚುವ ಉದ್ದೇಶವನ್ನು ಈ ಟ್ರಸ್ಟ್ ಹೊಂದಿದ್ದು ಇದನ್ನು ಕಾರ್ಯರೂಪಕ್ಕೆ ತಂದಂತಹ ಮಲ್ಲಿಕಾರ್ಜುನ ಬಂಗ್ಲೆ ಅವರಿಗೆ ರಾಜ್ಯದ ಪ್ರತಿಯೊಬ್ಬ ಪತ್ರಿಕರ್ತರ ವತಿಯಿಂದ ಕೃತಜ್ಞತೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಈ ವೇಳೆಯಲ್ಲಿ ಪ್ರಮುಖರಾದ ವೀರಯ್ಯ ಕುರ್ತಕೋಟಿ ಮಾತನಾಡುತ್ತಾ ಪತ್ರಕರ್ತರ ಹಬ್ಬವಾದ ಕಾರ್ಯನಿರತ ಪತ್ರಕರ್ತರ ಧ್ವನಿ ಮೂರನೇ ರಾಜ್ಯ ಮಟ್ಟದ ಸಮ್ಮೇಳನವನ್ನು ದಿನಾಂಕ 24ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದು ಎಲ್ಲಾ ಪತ್ರಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ವಿನಂತಿಸಿದರು
ಈ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಧ್ವನಿ ಕುಕನೂರು ತಾಲೂಕ ಘಟಕದ ಅಧ್ಯಕ್ಷ ಸುನಿಲ್ ಕುಮಾರ ಮಠದ, ಉಪಾಧ್ಯಕ್ಷ ಚಂದ್ರು ಭಾನಪುರ, ಪ್ರಧಾನ ಕಾರ್ಯದರ್ಶಿ ವೀರಯ್ಯ ವಿ ಹಿರೇಮಠ, ಪ್ರಮುಖರಾದ ವಿಶ್ವನಾಥ ಪಟ್ಟಣಶೆಟ್ಟಿ, ಮುತ್ತಯ್ಯ ತೋಂಟದಾರ್ಯ ಮಠ, ಮಲ್ಲಯ್ಯ ಗದಗಿನ, ವಿಶ್ವನಾಥ ಕೋಟೆ ಸೇರಿದಂತೆ ಇನ್ನೇತರರು ಪಾಲ್ಗೊಂಡಿದ್ದರು.
13th May 2025
ಮಲ್ಲಮ್ಮ ನುಡಿ ವಾರ್ತೆ
ಭಾಲ್ಕಿ: ಮನುಷ್ಯಜೀವನದಲ್ಲಿರುವ ಮೂಲ ಭೂತ ಸೌಕರ್ಯಗಳಾದ ಅನ್ನ, ಬಟ್ಟೆ, ವಸತಿ, ಶಿಕ್ಷಣದ ಜೊತೆಗೆ ಸಂಸ್ಕಾರ ಉಳಿಸಿ, ಬೆಳೆಸಿಕೊಂಡು ಹೋಗುವ ಕಾರ್ಯಕ್ಕೂ ದುಡಿಯಬೇಕಿದೆ. ಈ ನಿಟ್ಟಿನಲ್ಲಿ ದುಡಿಯುವ ಕಾರ್ಯ ನಮ್ಮದಾಗಲಿ ಎಂದು ಕಸಾಪ ಬೆಂಗಳೂರಿನ ಮಹಿಳಾ ಪ್ರತಿನಿಧಿ ಮಲ್ಲಮ್ಮ ಆರ್.ಪಾಟೀಲ ಅಭಿಪ್ರಾಯಪಟ್ಟರು.
ಪಟ್ಟಣದ ಕನ್ನಡ ಭವನದಲ್ಲಿ ರವಿವಾರ ನಡೆದ ಕನ್ಡನ ಸಾಹಿತ್ಯ ಪರಿಷತ್ತಿನ ೧೧೧ನೇ ಸಂಸ್ಥಾಪನ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಕ.ಸಾ.ಪ ದುಡೀತಾಇದೆ. ಮೊದಲು ಕರ್ನಾಟಕ ಸಾಹಿತ್ಯ ಪರಿಷತ್ ಹೆಸರಿನಲ್ಲಿದ್ದ ಕನ್ನಡ ಸಾಹಿತ್ಯ ಪರಿಷತ್ತು ೧೧೧ ವಸಂತಗಳನ್ನು ದಾಟಿದೆ. ೧೯೫೮ನೇ ಸಾಲಿನಲ್ಲಿ ಕರ್ನಾಟಕ ಸಾಹಿತ್ಯ ಪರಿಷತ್ನ್ನು ಕನ್ನಡ ಸಾಹಿತ್ಯ ಪರಿಷತ್ ಎಂದು ನಾಮಕರಣ ಮಾಡಲಾಯಿತು. ಕೇಂದ್ರ ಸಾಹಿತ್ಯ ಪರಿಷತ್ ವತಿಯಿಂದ ೮೭ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ನಡೆಸಲಾಗಿದೆ. ೮೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಬೆಳಗಾವಿಯಲ್ಲಿ ನಡೆಸಲು ನಿರ್ಧರಿಸಲಾಗಿದೆ. ಕೇಂದ್ರ ಸಾಹಿತ್ಯ ಪರಿಷತ್ನಲ್ಲಿ ಸುಮಾರು ೧೭೫೦ ಸಾವಿರ ಪುಸ್ತಕಗಳ ಭಂಡಾರವಿದೆ. ದೇಶದಲ್ಲಿಯೇ ಅತಿ ಹಳೆಯದಾದ, ಬ್ರಹತ್ ಪರಿಷತ್ ಕನ್ನಡ ಸಾಹಿತ್ಯ ಪರಿಷತ್ ಆಗಿದೆ ಎಂದು ಹೇಳಿದರು.
ವಿಶೇಷ ಉಪನ್ಯಾಸ ಮಂಡಿಸಿದ ಹಿರಿಯ ಸಾಹಿತಿ ವಿರಶೆಟ್ಟಿ ಬಾವುಗೆ, ಭಾಲ್ಕಿಯಲ್ಲಿ ಇದುವರೆಗೆ ೧೦ಜನ ಕಸಾಪ ಅಧ್ಯಕ್ಷರಾಗಿದ್ದಾರೆ, ಆದರೆ ಕೇವಲ ೬ ತಾಲೂಕು ಮಟ್ಟದ ಸಮ್ಮೇಳನಗಳನ್ನು ನಡೆಸಲಾಗಿದೆ. ಸದ್ಯದ ಅಧ್ಯಕ್ಷರು ಆದಷ್ಟುಬೇಗ ಮಹಿಳಾ ಸಾಹಿತ್ಯ ಸಮ್ಮೇಳನ ಆಯೋಜಿಸುವ ಮೂಲಕ ತಾಲೂಕಿನಲ್ಲಿ ಮಹಿಳಾ ಸಾಹಿತಿಗಳಿಗೆ ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು. ಹಾಗು ಕನ್ನಡ ಸಾಹಿತ್ಯ ಪರಿಷತ್ತು ಬೆಳೆದು ಬಂದ ದಾರಿಯ ಬಗ್ಗೆ ಮಾತನಾಡಿದರು.
ಕಸಾಪ ತಾಲೂಕು ಅಧ್ಯಕ್ಷ ನಾಗಭೂಷಣ ಮಾಮಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಸಾಪ ಕಾರ್ಯದರ್ಶಿ ಹಣಮಂತ ಕಾರಾಮುಂಗೆ ಆಶಯ ನುಡಿ ನುಡಿದರು. ಇದೇವೇಳೆ ಬಿಆರ್ಪಿ ಚೇತನಾ ಚನಶೆಟ್ಟಿ ರಚಿಸಿದ ನವಚೇತನ ಕವನ ಸಂಕಲನ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಕಸಾಪ ಮಾಜಿ ಅಧ್ಯಕ್ಷ ಸುಭಾಷ ಹುಲಸೂರೆ, ನೇಕಾರ ಸಮಾಜದ ಗೌರವಾಧ್ಯಕ್ಷ ಬಾಬುರಾವ ಖ್ಯಾಡೆ, ಭದ್ರೇಶ ಗುರಯ್ಯಾ ಸ್ವಾಮಿ, ಚಂದ್ರಕಾAತ ತಳವಾಡೆ, ಅಕ್ಷಯಕುಮಾರ ಮುದ್ದಾ, ನಗರ ಘಟಕದ ಅಧ್ಯಕ್ಷ ಸಂತೋಷ ಬಿಜಿ.ಪಾಟೀಲ, ಜಯರಾಜ ದಾಬಶೆಟ್ಟಿ, ಸಂತೋಷಕುಮಾರ ಚನಶೆಟ್ಟಿ ಉಪಸ್ಥಿತರಿದ್ದರು.
ಭದ್ರೇಶ ಸ್ವಾಮಿ ಸ್ವಾಗತಿಸಿದರು. ಹಣಮಂತ ಕಾರಾಮುಂಗೆ ನಿರೂಪಿಸಿದರು. ಸಂತೋಷ ಬಿಜಿಪಾಟೀಲ ವಂದಿಸಿದರು.
13th May 2025
ಮಲ್ಲಮ್ಮ ನುಡಿ ವಾರ್ತೆ
ಕುಕನೂರು : ತಾಲೂಕಿನ ಬನ್ನಿಕೊಪ್ಪ ರೈಲು ನಿಲ್ದಾಣಕ್ಕೆ ಹಂಪಿ ವೇಗದೋತ ರೈಲು ನಿಲ್ಗಡೆ ನೋಡುವಂತೆ ರೈಲ್ವೆ ಮಂತ್ರಿಗಳಾದ ವಿ ಸೋಮಣ್ಣ ಅವರಿಗೆ ಒತ್ತಾಯಿಸಲಾಗುವುದು ಎಂದು ಭಾರತೀಯ ಕ್ರಾಂತಿಕಾರಿ ಕಿಸಾನ್ ಸೇನೆಯ ಸಂಸ್ಥಾಪಕ ರಾಷ್ಟ್ರ ಅಧ್ಯಕ್ಷ ಎಂ ಎನ್ ಕುಕನೂರು ಹೇಳಿದರು.
ಜಿಲ್ಲೆಯ ಕುಕನೂರು ಪಟ್ಟಣದಲ್ಲಿ ವರದಿಗಾರರೊಂದಿಗೆ ಭಾರತೀಯ ಕ್ರಾಂತಿಕಾರಿ ಕಿಸಾನ್ ಸೇನೆ ರಾಷ್ಟ್ರೀಯ ಅಧ್ಯಕ್ಷ ಎಂ ಎನ್ ಕುಕನೂರು ಮಾತನಾಡುತ್ತಾ ರೈಲ್ವೆ ಇಲಾಖೆಯಿಂದ ಮೇ 15 ರಂದು ಗದಗ ವಾಡಿ ರೈಲು ಮಾರ್ಗದ ಪ್ರಥಮ ಹಂತದ ತಳಕಲ್ ಕುಷ್ಟಗಿ ಮಾರ್ಗ ಲೋಕಾರ್ಪಣೆಗೊಳಿಸುತ್ತಿರುವುದು ಸಂತಸದ ವಿಷಯವಾಗಿದ್ದು ಇದರ ಜೊತೆ ಕುಷ್ಟಗಿ, ಯಲಬುರ್ಗಾ ಹಾಗೂ ಕುಕುನೂರು ತಾಲೂಕುಗಳ ಜನತೆಯು ಕೆಲಸ ಕಾರ್ಯದ ನಿಮಿತ್ಯ ಬೆಂಗಳೂರಿಗೆ ತೆರಳಲು ಅನುಕೂಲವಾಗಲು ಹಂಪಿ ಎಕ್ಸ್ಪ್ರೆಸ್ ರೈಲು ಗಾಡಿಯನ್ನು ಕುಕನೂರು ತಾಲೂಕಿನ ಬನ್ನಿಕೊಪ್ಪ ರೈಲು ನಿಲ್ದಾಣದಲ್ಲಿ ನಿಲುಗಡೆ ನೀಡಬೇಕು ಎಂದು ನೂತನ ಮಾರ್ಗ ಲೋಕಾರ್ಪಣೆಗೆ ಆಗಮಿಸುವ ರಾಜ್ಯ ರೈಲ್ವೆ ಸಚಿವ ವಿ ಸೋಮಣ್ಣ ಅವರಿಗೆ ಒತ್ತಾಯಿಸುತ್ತಾ ಮನವಿ ಪತ್ರವನ್ನು ಸಲ್ಲಿಸುವುದಾಗಿ ತಿಳಿಸಿದರು.
ಕೋವಿಡ್ ಪೂರ್ವದಲ್ಲಿ ಹಂಪಿ ಎಕ್ಸ್ಪ್ರೆಸ್ ರೈಲು ಗಾಡಿ ಬನ್ನಿಕೊಪ್ಪ ರೈಲು ನಿಲ್ದಾಣದಲ್ಲಿ ನಿಲುಗಡೆ ಹೊಂದಿದ್ದು ಈ ಭಾಗದ ಜನತೆಗೆ ಬಹಳಷ್ಟು ಅನುಕೂಲವಾಗಿದ್ದು ಇಲ್ಲಿಯ ಜನ ಈ ರೈಲು ಗಾಡಿಯ ಪ್ರಯೋಜನವನ್ನು ಸಹ ಪಡೆದಿರುತ್ತಾರೆ.ಆದರೆ ಕೋವಿಡ್ ಲಾಕ್ಡೌನ್ ಸಮಯದಲ್ಲಿ ರೈಲು ಸಂಚಾರವನ್ನು ನಿಲ್ಲಿಸಿ ಪುನರ್ ಪ್ರಾರಂಭಗೊಳಿಸಿದಾಗ ಈ ರೈಲುಗಾಡಿಯನ್ನು ಬನ್ನಿಕೊಪ್ಪ ರೈಲು ನಿಲ್ದಾಣದಲ್ಲಿ ನಿಲುಗಡೆಯನ್ನು ರದ್ದುಪಡಿಸಿದ್ದು ಇಲ್ಲಿನ ಜನತೆ ಪರದಾಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಇದೀಗ ರೈಲ್ವೆ ಇಲಾಖೆ ಕುಷ್ಟಗಿ ಪಟ್ಟಣವರೆಗೆ ರೈಲು ಸಂಚಾರ ಆರಂಭಿಸುತ್ತಿರುವುದು ಅತ್ಯಂತ ಸಂತಸ ಹಾಗೂ ಈ ಭಾಗದ ಜನತೆಯ ಬಹು ದಿನಗಳ ಕನಸು ನನಸಾಗುವ ಸಂಭ್ರಮದೊಂದಿಗೆ ಹಂಪಿ ಎಕ್ಸ್ಪ್ರೆಸ್ ರೈಲು ಗಾಡಿಯನ್ನು ಕುಷ್ಟಗಿ ರೈಲ್ವೆ ಗಾಡಿ ಜೊತೆ ಲಿಂಕ್ ಮಾಡಿ ಬೆಂಗಳೂರಿಗೆ ಹೋಗಲು ಅನುಕೂಲ ಮಾಡಿಕೊಟ್ಟಲ್ಲಿ ಈ ಭಾಗದ ರೈತರ ಕೃಷಿ ಚಟುವಟಿಕೆಗೆ ಸೇರಿದಂತೆ ವ್ಯಾಪಾರ ವಾಣಿಜ್ಯ ದೃಷ್ಟಿಯಿಂದ ಉಪಯುಕ್ತವಾಗಲಿದೆ ಎಂದು ತಿಳಿಸಿದರು.
ಈ ವೇಳೆಯಲ್ಲಿ ಚಂದ್ರಕಾಂತ್ ಪಾಟೀಲ್ ರಾಜ್ಯ ಉಪಾಧ್ಯಕ್ಷರು, ಯಶೋದಾ ಸಿ ರಾಜ್ಯ ಉಪಾಧ್ಯಕ್ಷರು ಮಹಿಳಾ ಘಟಕ, ಮಂಜುಳಾ ರಾಮೇಗೌಡ ಮೈಸೂರು ಜಿಲ್ಲಾ ಉಪಾಧ್ಯಕ್ಷರು, ಪಿಟ್ಟನಗೌಡ ಮಾಲಿ ಪಾಟೀಲ್ ಕೊಪ್ಪಳ ಜಿಲ್ಲಾ ಕಾರ್ಯಧ್ಯಕ್ಷರು, ಬಸವರಾಜ ಅಡವಿ, ಮೆಹಬೂಬ್ ಮಾಳೆಕೊಪ್ಪ, ಹನುಮೇಶ್, ಹೊನ್ನಪ್ಪ, ವೆಂಕಟೇಶ್ ಇಳಿಗೆರ್, ಬರ್ಮಣ್ಣ, ಅಂಬರೀಶ್, ಮತ್ತು ಭಾರತೀಯ ಕ್ರಾಂತಿಕಾರಿ ಕಿಸಾನ್ ಸೇನಾ. ರಿ. ದೆಹಲಿ ಸಂಘಟನೆಯ ಸದಸ್ಯರು ಪಾಲ್ಗೊಂಡಿದ್ದರು.
13th May 2025
ಮಲ್ಲಮ್ಮ ನುಡಿ ವಾರ್ತೆ
ಬಾಗಲಕೋಟೆ,ಮೇ.12-ಯುದ್ಧ ಸನ್ನಿವೇಶ ಹಾಗೂ ತುರ್ತು ಪರಿಸ್ಥಿತಿ ಸಂದರ್ಭಗಳಲ್ಲಿ ಸಾರ್ವಜನಿಕರು ವಹಿಸಬೇಕಾದ ಮುನ್ನಚ್ಚರಿಕೆ ಕುರಿತಾಗಿ ಜಿಲ್ಲಾಡಳಿತ ಭವನದ ಆವರಣದಲ್ಲಿ ಸೋಮವಾರ ನಾಗರಿಕ ಸುರಕ್ಷತಾ ಅಣಕು ಕಾರ್ಯಾಚರಣೆ ನಡೆಸಲಾಯಿತು.
ಜಿಲ್ಲಾಡಳಿತ ಭವನದಲ್ಲಿ ಬೆಳಿಗ್ಗೆ 9 ಗಂಟೆಗೆ ವಿವಿಧೆಡೆ ಸ್ಪೋಟಗೊಂಡ ಡಮ್ಮಿ ಬುಲೆಟ್ಗಳ ಸದ್ದು ಕೇಳಿದ ತಕ್ಷಣ ಆಡಳಿತ ಭವನದಲ್ಲಿರುವ ಅಧಿಕಾರಿ ಹಾಗೂ ಸಿಬ್ಬಂದಿಗಳು ಗಾಬರಿಗೊಂಡು ಓಡುತ್ತಿರುವುದು, ಉಗ್ರಗಾಮಿಗಳು ಆಡಳಿತ ಭವನ ಪ್ರವೇಶ ಮಾಡಿರುವ ಮಾಹಿತಿಯನ್ನು ಪೊಲೀಸ್ ಕಂಟ್ರೋಲ್ ರೂಮ್ಗೆ ಸಂದೇಶ ರವಾನೆಯಾಯಿತು. ಆ ವೇಳೆಗಾಗಲೇ ಬಾಂಬ್ ಸ್ಪೋಟಗೊಂಡು ಹಲವು ವ್ಯಕ್ತಿಗಳು ಮೃತಪಟ್ಟಿರುವ ಸನ್ನವೇಶ ಉಂಟು ಮಾಡಲಾಯಿತು. ಈ ವೇಳೆ ರಕ್ಷಣಾ ಕಾರ್ಯ ವಿಳಂಬವಿಲ್ಲದೇ ನಡೆಯಿತು.
ಕಾರ್ಯಾಚರಣೆಗೆ ಪೊಲೀಸ್, ಅಗ್ನಿಶಾಮಕ ದಳ, ಗೃಹರಕ್ಷಕ ದಳ, ಸಂಚಾರಿ ಪೊಲೀಸ್, ಎನ್.ಸಿ.ಸಿ ಕಮಾಂಡ ತಂಡ ಧಾವಿಸಿ ರಕ್ಷಣಾ ಕಾರ್ಯ ಆರಂಭಿಸಿದರು. ಆರೋಗ್ಯ ಇಲಾಖೆಯ ಅಂಬುಲೆನ್ಸ್ ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಗಾಯಾಳುಗಳನ್ನು ರಕ್ಷಣೆ ಮಾಡಿದರು. ಆಡಳಿತ ಭವನದಲ್ಲಿ ರಕ್ಷಣೆ ತಂಡ ಸುತ್ತುವರೆದಿರುವ ಸನ್ನಿವೇಶ, ಭವನದಲ್ಲಿ ಅಡಗಿಕೊಂಡಿರುವ ಉಗ್ರರನ್ನು ಸದೆಬಡೆದು ಜನರನ್ನು ರಕ್ಷಿಸುವ ಅಣಕು ಪ್ರಾತ್ಯಕ್ಷಿಕೆಯ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಯಿತು. ತುರ್ತು ಪರಿಸ್ಥಿತಿಯಲ್ಲಿ ಸೈರನ್ಗಳು ಮೊಳಗಿಸಿರುವ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಸೈರನ್ ಮೊಳಗಿದಾಗ ನಾಗರಿಕರು ಹೇಗೆ ಪ್ರತಿಕ್ರಿಯಿಸಬೇಕು. ಬಾಂಬ್ ಸ್ಪೋಟವಾದರೆ ಏನು ಮಾಡಬೇಕು. ಅವಶೇಷಗಳಡಿ ಸಿಲುಕಿರುವವರನ್ನು ಹೇಗೆ ರಕ್ಷಿಸಬೇಕು. ವೈದ್ಯಕೀಯ ತುರ್ತು ಸೇವೆಗಳನ್ನು ಒದಗಿಸುವುದು ಹೇಗೆ ಎಂಬುದನ್ನು ಅಣಕು ಪ್ರದರ್ಶನದ ಮೂಲಕ ತಿಳಿಸಿಕೊಡಲಾಯಿತು.
ಜಿಲ್ಲಾಡಳಿತ ಭವನದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂದರ್ಭದಲ್ಲಿಯೇ ಇಂತಹದೊAದು ಅಣಕು ಪ್ರದರ್ಶನ ನಡೆದ ಹಿನ್ನಲೆಯಲ್ಲಿ ದಾಳಿ ನಡೆದ ಸಂದರ್ಭದಲ್ಲಿ ಆಡಳಿತ ಭವನದಲ್ಲಿರುವ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಸುರಕ್ಷಿತವಾಗಿ ಹೊರಗೆ ಕರೆದುಕೊಂಡು ಹೋಗುವ ದೃಶ್ಯ ನಂತರ ಅಲ್ಲಿನ ಕಾರ್ಯಾಚರಣೆ ಸನ್ನಿವೇಶಗಳನ್ನು ಕುತೂಹಲದಿಂದ ವೀಕ್ಷಣೆ ಮಾಡಿದರು.
ಅಣಕು ಪ್ರದರ್ಶನದಲ್ಲಿ ಪೊಲೀಸ್, ಗೃಹರಕ್ಷಕ ದಳ, ಅಗ್ನಿಶಾಮಕ ದಳ, ಬಾಂಬ್ ನಿಷ್ಕಿçÃಯ ದಳ, ಸ್ವಾನಗಳ ತಂಡ, ಸಂಚಾರಿ ಪೊಲೀಸ್, ಎನ್.ಸಿ.ಸಿ ಕಮಾಂಡರ ಹಾಗೂ ವಿವಿಧ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಸೇರಿ 300ಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದರು.
ಈ ವೇಳೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮೊಹಮ್ಮದ ಮೊಹಸಿನ್, ಜಿಲ್ಲಾಧಿಕಾರಿ ಜಾನಕಿ ಕೆ.ಎಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಜಿ.ಪಂ ಸಿಇಓ ಶಶಿಧರ ಕುರೇರ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಪ್ರಸನ್ನ ದೇಸಾಯಿ, ಮಹಾಂತೇಶ್ವರ ಜಿದ್ದಿ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.
13th May 2025
ತಾಳಿಕೋಟಿ: ಪಟ್ಟಣದ ತಹಸಿಲ್ದಾರ್ ಕಾರ್ಯಾಲಯ ಸಭಾಂಗಣದಲ್ಲಿ ಭಗವಾನ್ ಬುದ್ಧರ 2588 ನೇ ಜಯಂತಿಯನ್ನು ಸೋಮವಾರ ಆಚರಿಸಲಾಯಿತು. ಜಯಂತಿ ಅಂಗವಾಗಿ ಭಗವಾನ್ ಬುದ್ಧರ ಭಾವಚಿತ್ರಕ್ಕೆ ಬೌದ್ಧ ಧರ್ಮದ ವಿಧಿ ವಿಧಾನಗಳೊಂದಿಗೆ ಪೂಜೆಯನ್ನು ಮುಖಂಡ ಬಸವರಾಜ ಕಟ್ಟಿಮನಿ ನೆರವೇರಿಸಿ ಕೊಟ್ಟರು. ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಜೈ ಭೀಮ ಮುತ್ತಗಿ ಹಾಗೂ ಮಹೇಶ ಚಲವಾದಿ ಅವರು ಭಗವಾನ್ ಬುದ್ಧರ ಜೀವನದ ಸಂದೇಶದ ಕುರಿತು ಮಾತನಾಡಿ ಭಗವಾನ್ ಬುದ್ಧರು ಪ್ರಾಯೋಗಿಕ ನೀತಿ ಸಂಹಿತೆ ಮತ್ತು ಸಾಮಾಜಿಕ ಸಮಾನತೆಯ ತತ್ವಕ್ಕೆ ಹೆಚ್ಚಿನ ಒತ್ತು ನೀಡಿದರು ಎಲ್ಲರೂ ಸಮಾನರು ಜಾತಿ ಲಿಂಗ ಅಥವಾ ಯಾವುದೇ ಇತರ ಅಂಶಗಳ ಆಧಾರದ ಮೇಲೆ ಯಾರು ತಾರತಮ್ಯ ಮಾಡಬಾರದು ಎಂದು ಅವರು ಬೋಧಿಸಿದರು. ಅವರ ಬೋಧನೆಗಳು ಎಲ್ಲಾ ಜೀವಿಗಳ ಬಗ್ಗೆ ದಯೆ, ಕರುಣೆ ಮತ್ತು ಸಹಾನುಭೂತಿಯನ್ನು ಉತ್ತೇಜಿಸುತ್ತವೆ, ಅವರು ಮನುಷ್ಯನ ದುಃಖಕ್ಕೆ ಮೂಲ ಕಾರಣ ಹಾಗೂ ಅದರಿಂದ ಹೇಗೆ ಹೊರ ಬರಬೇಕೆಂದು ಎಂಬುದನ್ನು ಪ್ರಾಯೋಗಿಕವಾಗಿ ತೋರಿಸಿಕೊಟ್ಟಿದ್ದಾರೆ, ಅವರ ಶಾಂತಿಯ ಸಂದೇಶದಲ್ಲಿ ಇಡೀ ಮನುಕುಲದ ಏಳಿಗೆ ಅಡಗಿದೆ ಎಂದರು. ತಹಸಿಲ್ದಾರ್ ಡಾ.
ವಿನಯಾ ಹೂಗಾರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಸಿ.ಆರ್.ಸಿ. ರಾಜು ವಿಜಾಪುರ ನಿರೂಪಿಸಿದರು. ಸಮಯದಲ್ಲಿ ಗಣ್ಯರಾದ ಬಿ.ಬಿ. ಕಟ್ಟಿಮನಿ,ಜಿ.ಜಿ.ಮದರಕಲ್ಲ, ದೇವೇಂದ್ರ ಹಾದಿಮನಿ, ನಾಗೇಶ ಎಂ. ಕಟ್ಟಿಮನಿ,ಸಾಮಾಜಿಕ ಕಾರ್ಯಕರ್ತ ಅಬೂಬಕರ ಲಾಹೊರಿ, ಗೋಪಾಲ ಕಟ್ಟಿಮನಿ, ಮಶಾಕ್ ಜಮಾದಾರ, ಅಲ್ತಾಫ್ ಬಿಜಾಪುರ,ತಾಪಂ ನ ಮಹಾಂತಗೌಡ ದೊರೆಗೋಳ, ಸಿರಸ್ತೆದಾರ ಜೆ.ಆರ್.ಜೈನಾಪೂರ, ಮುಖ್ಯ ಶಿಕ್ಷಕಿ ಆರ್.ಬಿ.ಆಲೂರ, ಪುರಸಭೆ, ಕಂದಾಯ,ಶಿಕ್ಷಣ ಇಲಾಖೆ ಹಾಗೂ ಹೆಸ್ಕಾಂ ಅಧಿಕಾರಿಗಳು ಮತ್ತು ಸಮಾಜದ ಗಣ್ಯರು ಇದ್ದರು.
13th May 2025
ಬೀದರ. ಮೇ. 12 :- ಸಮಾಜದಲ್ಲಿ ಶಾಂತಿ, ಸು-ವ್ಯವಸ್ಥೆ ಮತ್ತು ಅಪರಾಧಗಳನ್ನು ತಡೆಯುವಲ್ಲಿ ಜಿಲ್ಲೆಯ ರೌಡಿ ಜನರ ಮಟ್ಟ ಹಾಕುವುದು ಅತೀ ಅವಶ್ಯಕ ಮತ್ತು ಯಾವುದೇ ರೀತಿಯ ಕಳ್ಳತನ ಪ್ರಕರಣಗಳು ಜರುಗದಂತೆ ಎಮ್.ಓ.ಬಿ ಜನರ ಮೇಲೆ ನಿಗಾ ವಹಿಸುವುದು ಅತೀ ಅವಶ್ಯಕವಾಗಿರುತ್ತದೆ. ಈ ನಿಟ್ಟಿನಲ್ಲಿ ಶ್ರೀ ಪ್ರದೀಪ್ ಗುಂಟಿ, ಐ.ಪಿ.ಎಸ್. ಪೊಲೀಸ್ ವರಿಷ್ಠಾಧಿಕಾರಿಗಳು, ಬೀದರ ಜಿಲ್ಲೆ ಬೀದರ. ರವರು ಜಿಲ್ಲೆಯನ್ನು ಅಪರಾಧ ಮುಕ್ತ ಜಿಲ್ಲೆಯನ್ನಾಗಿಸಲು ಜಿಲ್ಲೆಯಲ್ಲಿರುವ ರೌಡಿ ಮತ್ತು ಎಮ್.ಓ.ಬಿ ಜನರ ಮೇಲೆ ನಿಗಾ ವಹಿಸುವ ಸಲುವಾಗಿ ಬೀದರ ಜಿಲ್ಲಾ ಪೊಲೀಸ್ ಕಛೇರಿ ಕವಾಯತು ಮೈದಾನದಲ್ಲಿ ರೌಢಿ ಜನರ ಕವಾಯತು ನಡೆಸಿ, ಯಾರಾದರೂ ಸಮಾಜ ಘಾತಕ, ಅಪರಾಧಿಕ ಚಟುವಟಿಕೆಯಲ್ಲಿ ಭಾಗಿಯಾದಲ್ಲಿ ಅಂತವರಿಗೆ ಕಟ್ಟೆಚ್ಚರಿಸಲಾಗಿದೆ.
ಬೀದರ ಜಿಲ್ಲೆಯಲ್ಲಿ ಅಪರಾಧ ಮುಕ್ತ ಮತ್ತು ಅಪರಾಧ ನಿಯಂತ್ರಣಕ್ಕಾಗಿ ಜಿಲ್ಲೆಯ ಪೊಲೀಸರ ಕಾರ್ಯಾಚರಣೆಯು ಮುಂದುವರೆಯುತ್ತದೆ.
13th May 2025
ಬೀದರ. ಮೇ. 12 :- ನಗರ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಭಾನುವಾರ ಸಂಜೆ ಗುಡುಗು ಸಹಿತ ಬಿರುಸಿನ ಮಳೆಯಾಗಿದೆ.
ದಿನವಿಡೀ ಪ್ರಖರವಾದ ಬಿಸಿಲು ಇತ್ತು. ಸಂಜೆ ದಟ್ಟ ಕಾರ್ಮೋಡ ಕವಿದು, ಬಿರುಗಾಳಿಯೊಂದಿಗೆ ಗುಡುಗು ಸಹಿತ ಬಿರುಸಿನ ಮಳೆಯಾಗಿದೆ. ಬಿರುಗಾಳಿ ಮಳೆಗೆ ನಗರದ ಹಳ್ಳದಕೇರಿ ಸಮೀಪ ರಿಂಗ್ರೋಡ್ನಲ್ಲಿ ಬುಡಸಮೇತ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದು, ವಾಹನ ಸಂಚಾರಕ್ಕೆ ತೊಡಕಾಯಿತು.
ಬಿದಿರಿನ ಹೋಟೆಲ್ವೊಂದು ಸಂಪೂರ್ಣ ನೆಲಕಚ್ಚಿದೆ.
ಅರ್ಧಗಂಟೆಗೂ ಹೆಚ್ಚು ಸಮಯ ಸುರಿದ ಜೋರು ಮಳೆಗೆ ವಾತಾವರಣ ಸಂಪೂರ್ಣ ತಂಪಾಗಿದೆ. ಬಿಸಿಲಿನಿಂದ ಕಂಗೆಟ್ಟಿದ್ದ ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟರು.
ಬೀದರ್ ತಾಲ್ಲೂಕಿನ ಅಮಲಾಪೂರ, ಚಿಟ್ಟಾ, ಘೋಡಂಪಳ್ಳಿ, ಯದಲಾಪೂರ, ಯಾಕತಪೂರ, ಕಮಠಾಣ ಹಾಗೂ ಔರಾದ್ ತಾಲ್ಲೂಕಿನ ಹಲವೆಡೆ ಮಳೆಯಾಗಿದೆ.
ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನಲ್ಲಿಯೂ ಬಿರುಸಿನ ಮಳೆ ಸುರಿದಿದೆ.
ಸಿಡಿಲಿಗೆ ಇಬ್ಬರು ಮಹಿಳೆಯರ ಸಾವು
ಸವದತ್ತಿ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಹಿಟ್ಟಣಗಿ ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ ಸಿಡಿಲಿನ ಅಬ್ಬರಕ್ಕೆ ಗಂಗವ್ವ ಶೇಖಪ್ಪ ಜಿರಗವಾಡ (55) ಹಾಗೂ ಕಲಾವತಿ ವಿರೂಪಾಕ್ಷಿ ಜಿರಗವಾಡ (42) ಮೃತಪಟ್ಟಿದ್ದಾರೆ. 'ಇವರಿಬ್ಬರು ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದು ಕೃಷಿ ಚಟುವಟಿಕೆಗಾಗಿ ತಮ್ಮ ಜಮೀನಿಗೆ ತೆರಳಿದ ಸಂದರ್ಭದಲ್ಲಿ ಸಿಡಿಲು ಬಡಿದಿದೆ. ಘಟನಾ ಸ್ಥಳ ಪರಿಶೀಲಿಸಿ ಪರಿಹಾರ ನೀಡಲಾಗುವುದು' ಎಂದು ತಹಶೀಲ್ದಾರ್ ಎಂ.ಎನ್. ಹೆಗ್ಗನ್ನವರ ತಿಳಿಸಿದ್ದಾರೆ.
13th May 2025
ಯಾದಗಿರಿ: ಕೆಲ ದಿನಗಳ ಹಿಂದೆ ಮೃತಪಟ್ಟ ಸಹೋದರನ ಅಂತ್ಯಕ್ರೀಯೆಯಲ್ಲಿ ಭಾಗವಹಿಸಲು ಸ್ವಗ್ರಾಮಕ್ಕೆ ಆಗಮಿಸಿದ್ದ, ದೇಶದ ಭೂಸೇನಾದಲ್ಲಿ ಸೈನಿಕನಾಗಿ ಸೇವೆ ಸಲ್ಲಿಸುತ್ತಿರುವ ಬಸವರಾಜ ಅಲ್ಲೂರ್(ಕೆ) ಅವರಿಗೆ ದೇಶದಲ್ಲಿ ಈಗಾಗಲೇ ಭಾರತ-ಪಾಕಿಸ್ತಾನ ಮಧ್ಯೆ ಯುದ್ದದ ಕಾರ್ಮೋಡ ಸೃಷ್ಟಿಯಾಗಿದ್ದು, ಮೇಲಾಧಿಕಾರಿಗಳ ತುರ್ತು ಕರೆ ಬಂದ ಹಿನ್ನಲೆಯಲ್ಲಿ ಕರ್ತವ್ಯಕ್ಕೆ ಹಾಜರಾಗಲು ರವಿವಾರ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ತೆರಳುತ್ತಿರುವ ಅವರನ್ನು ತಾಲೂಕಿನ ಹತ್ತಿಕುಣಿ ಗ್ರಾಮದಲ್ಲಿ ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಮಲ್ಲಣ್ಣಗೌಡ ಮಾಲಿ ಪಾಟೀಲ್ ಹಾಗೂ ಗ್ರಾಮಸ್ಥರು ಅವರ ನಿವಾಸದಲ್ಲಿ ಸನ್ಮಾನಿಸಿ ಆತ್ಮೀಯವಾಗಿ ಬಿಳ್ಕೋಟ್ಟರು.
ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ಅಲ್ಲೂರ (ಕೆ), ಗ್ರಾಮದ ಯುವ ಸೈನಿಕರಾಗಿರುವ ಬಸವರಾಜ ಕೊರಳ್ಳಿ ಅವರು ಜಮ್ಮು ಮತ್ತು ಕಾಶ್ಮೀರದ ಉದಂಪೂರ ಜಿಲ್ಲೆಯಲ್ಲಿ ಸೈನಿಕರಾಗಿ ಕೆಲಸ ಮಾಡುತ್ತಿದ್ದಾರೆ. ಅವರ ತಾಯಿ ಹತ್ತಿಕುಣಿ ಗ್ರಾಮದವರಾಗಿದ್ದು, ಕರ್ತವ್ಯಕ್ಕೆ ತೆರಳುವ ಮೋದಲು ಬಂದು ಬಳಗದವರನ್ನು ಭೇಟಿಯಾಗಲು ಹತ್ತಿಕುಣಿಗೆ ಆಗಮಿಸಿದ ಸಂದರ್ಭದಲ್ಲಿ ಗ್ರಾಮದ ಪ್ರಮುಖರು ಅವರಿಗೆ ಶುಭಕೋರಿದರು.
ಸೈನಿಕನನ್ನು ಸನ್ಮಾನಿಸಿ ಮಾತನಾಡಿದ ಮಲ್ಲಣ್ಣಗೌಡ ಪಾಟೀಲ್ ಹತ್ತಿಕುಣಿ, ದೇಶದ ಸೈನ್ಯದಲ್ಲಿ ಕೆಲಸ ಮಾಡುವ ಅವಕಾಶ ಕೆಲವರಿಗೆ ಮಾತ್ರ ಸಿಗುತ್ತದೆ. ನಮ್ಮ ಗ್ರಾಮದ ಮೊಮ್ಮಗನಾಗಿರುವ ಬಸವರಾಜ ಕೊರಳ್ಳಿ ಅವರು ದೇಶದ ಶಕ್ತಿಶಾಲಿಯಾಗಿರುವ ಭೂ ಸೇನಾದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದು ಹೆಮ್ಮೆಯ ವಿಷಯ ಅವರು, ಪಾಕಿಸ್ತಾನ ಗಡಿ ಭಾಗದ ಸೂಕ್ಷ್ಮ ಪ್ರದೇಶದಲ್ಲಿ ಸುಮಾರು ೧೩ ವರ್ಷಗಳಿಂದ ಕೆಲಸ ಮಾಡಿ ದೇಶದ ರಕ್ಷಣೆಗೆ ಶ್ರಮಿಸುತ್ತಿರುವ ಅವರ ಕಾರ್ಯ ಶ್ಲಾಘನೀಯ ಈ ಕದನದಲ್ಲಿ ಈಗಾಗಲೇ ಭಾರತ ಭಯೋತ್ಪಾದಕರನ್ನು ಬೆಂಬಲಿಸುತ್ತಿರುವ ಪಾಕಿಸ್ತಾನದ ವಿರುದ್ದ ಮೇಲುಗೈಯ ಸಾಧಿಸಿದ್ದಾರೆ. ಪ್ರತಿಯೊಬ್ಬ ಸೈನಿಕನ ಸೇವೆ ದೇಶಕ್ಕೆ ಇಂದು ಅವಶ್ಯಕವಾಗಿದೆ. ಭಾರತ ಈ ಕದನದಲ್ಲಿ ಪಾಕಿಸ್ತಾನಕ್ಕೆ ಸೂಕ್ತ ಉತ್ತರ ನೀಡಿ ಹಿನಾಯವಾಗಿ ಸೋಲಿಸುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಅಮೃತರೆಡ್ಡಿ ಪಾಟೀಲ್, ಮಲ್ಲರೆಡ್ಡಿಗೌಡ ಮಾಲಿ ಪಾಟೀಲ್, ಚಂದ್ರಾರೆಡ್ಡಿ ದಳಪತಿ, ಮಲ್ಲಿಕಾರ್ಜುನ ಗೌಡಗೇರಾ, ಯಂಕಾರೆಡ್ಡಿ ಜಟ್ಟೂರ್, ದೇವಿಂದ್ರಪ್ಪ ಖಂಡಪ್ಪನೋರ್, ರವಿ ಪಾಟೀಲ್, ಹಣಮಂತ ಶಂಕ್ರಪ್ಪನೋರ್, ಸಿದ್ದು ನಾಯಕ, ಮಂಜುನಾಥರೆಡ್ಡಿ ಗಡೇದ, ನರಸಪ್ಪ ಭೀಮನಳ್ಳಿ, ಕ್ಷೀರಲಿಂಗ ಗಣಪೂರ್, ಶಿವಶರಣಪ್ಪ ನಿಶಾನಿ, ಸುಭಾಶ ನಾಯಕ, ಯಂಕಾರೆಡ್ಡಿ ಕೊಳ್ಳಿ, ಬಸಣ್ಣಗೌಡ ಮಾಲಿಪಾಟೀಲ್, ಕಮಲರೆಡ್ಡಿ ಬೂದಿ, ಶರಣು ಗಡೇದ, ಸಾಹೇಬಗೌಡ ಮಾಲಿಪಾಟೀಲ್, ಮಲ್ಲಿಕಾರ್ಜುನ ಖಂಡಪ್ಪನೋರ್, ಯಂಕಾರೆಡ್ಡಿ ರಾಂಪೂರಳ್ಳಿ, ರಾಮಯ್ಯ ಕಲ್ಲಪ್ಪನೋರ್, ದೇವಪ್ಪ ಕವಲ್ದಾರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
13th May 2025
ಯಾದಗಿರಿ : ಪ್ರಸಕ್ತ ದಿನಗಳಲ್ಲಿ ನಾವೂ ಎಲ್ಲಾ ಕ್ಷೇತ್ರಗಳಲ್ಲಿ ತೀವ್ರ ಸ್ಪರ್ಧೆಗಳನ್ನು ಕಾಣುತ್ತಿದ್ದೇವೆ, ಕಾರಣ ಪೋಷಕರು ತಮ್ಮ ಹೆಣ್ಣು ಮಕ್ಕಳಿಗೆ ತಪ್ಪದೇ ಶಿಕ್ಷಣ ಒದಗಿಸಲು ಪ್ರಯತ್ನಿಸಿ, ಅದರಿಂದ ಮಾತ್ರ ನಾವೂ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಅಖಿಲ ಕರ್ನಾಟಕ ಹೇಮರಡ್ಡಿ ಮಲ್ಲಮ್ಮ ಮಹಿಳಾ ಅಭಿವೃದ್ಧಿ ಸಂಸ್ಥೆ ಕಲಬುರಗಿ ಅಧ್ಯಕ್ಷರಾದ ಡಾ. ವಿಶಾಲಾಕ್ಷಿ ಕರಡ್ಡಿ ಹೇಳಿದರು.
ಕಲಬುರಗಿಯ ಜೆಮಶೆಟ್ಟಿ ಕಾಲೋನಿಯಲ್ಲಿ ಜಿಲ್ಲಾ ರಡ್ಡಿ ಸಮಾಜದ ವತಿಯಿಂದ ಪದವಿ ಅಭ್ಯಾಸ ಮಾಡುವ ವಿಧ್ಯಾರ್ಥಿನಿಯರಿಗೆ ಅನುಕೂಲವಾಗುವ ದೃಷ್ಟಿಯಿಂದ ಅಂದಾಜು ೩ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಹೇಮರಡ್ಡಿ ಮಲ್ಲಮ್ಮ ಮಹಿಳಾ ವಸತಿ ನಿಲಯ ವಾಸ್ತು ಪೂಜೆ ಹಾಗೂ ಮಲ್ಲಮ್ಮಳ ಜಯಂತಿ ಸಮಾರಂಭದಲ್ಲಿ ಮಾತನಾಡಿದರು.
ಇಂದು ವಿಶ್ವದಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಪುರಷರಿಗಿಂತ ಮೇಲಾಗಿ ತಮ್ಮ ಜ್ಞಾನ, ಕೌಶಲ್ಯ ಪ್ರದರ್ಶಿಸುವ ಮೂಲಕ ಎಲ್ಲಾ ಗಮನ ಸೆಳೆಯುತ್ತಿದ್ದಾರೆ, ಜಿಲ್ಲೆಯಲ್ಲಿ ವಸತಿ ನಿಲಯ ಆರಂಭದಿAದ ಗ್ರಾಮೀಣ ಭಾಗದ ವಿಧ್ಯಾರ್ಥಿನಿಯರಿಗೆ ಎಸ್ಎಸ್ಎಲ್ಸಿ ಅಭ್ಯಾಸದ ನಂತರ ಕಲಬುರಗಿ ನಗರದಲ್ಲಿ ಪಿಯುಸಿ, ಪದವಿ ಅಭ್ಯಾಸ ಮಾಡಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶ್ರೀಮತಿ ಭಾರತಿ ಶರಣಬಸಪ್ಪಗೌಡ ದರ್ಶನಾಪೂರ ಮಾತನಾಡಿ, ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಸ್ತಿçà ಕುಲದ ಅನರ್ಘ್ಯ ರತ್ನವಾಗಿದ್ದಾಳೆ, ಲೌಕಿಕ ಜೀವನದಲ್ಲಿ ಸಾರ್ಥಕ ಬದುಕು ಸಾಗಿಸಿ, ಮೋಕ್ಷದ ಮಾರ್ಗ ತೋರಿ, ಇನ್ನೂ ಎಲ್ಲರ ಮನಸ್ಸಿನಲ್ಲಿ ಶಾಸ್ವತವಾಗಿ ಉಳಿದುಕೊಂಡು, ಪೂಜಿಸಿಕೊಳ್ಳುತ್ತಿದ್ದಾರೆ, ಅವಳು ಸಮಾಜಕ್ಕೆ ಮಾನವೀಯ ಮೌಲ್ಯ ಸಂದೇಶಗಳನ್ನು ನೀಡಿದ್ದಾಳೆ, ಎಲ್ಲರೂ ಬದುಕಿನಲ್ಲಿ ಅಳವಡಿಸಿಕೊಂಡು ಬದಲಾವಣೆ ಸಾಧಿಸಬೇಕೆಂದು ಸಲಹೆ ನೀಡಿದರು.
ಸಮಾರಂಭದಲ್ಲಿ ರಾಜ್ಯ ಸಣ್ಣ ಕೈಗಾರಿಕೆ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ, ಯಾದಗಿರಿ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ, ಕಲಬುರಗಿ ಜಿಲ್ಲಾ ರಡ್ಡಿ ಸಮಾಜದ ಜಿಲ್ಲಾಧ್ಯಕ್ಷ ಡಾ.ಎಸ್.ಬಿ ಕಾಮರಡ್ಡಿ, ಲಿಂಗಾರಡ್ಡಿ ಬಾಸರಡ್ಡಿ, ಡಾ. ವೀರಭದ್ರಪ್ಪ ಪಾಟೀಲ್, ಡಾ. ವಿಶ್ವನಾಥರಡ್ಡಿ ಪಾಟೀಲ್, ಡಾ. ವಿಕ್ರಮ್ ಸಿದ್ದಾರಡ್ಡಿ, ಶಾಂತರಡ್ಡಿ ವನಕೇರಿ, ಗೀತಾ ಚನ್ನಾರಡ್ಡಿ ಪಾಟೀಲ್, ಡಾ. ಶೈಲಜಾ ಬಾಗೇವಾಡಿ, ಡಾ. ಪ್ರತಿಮಾ ಎಸ್. ಕಾಮರಡ್ಡಿ, ಶರಣಮ್ಮ ಪಾಟೀಲ್, ಭಾಗಣಗೌಡ ಸಂಕನೂರ, ವೀರಣಗೌಡ ಪರಸರಡ್ಡಿ, ರಮೇಶ ರಬ್ಬನಳ್ಳಿ, ಶಿವಲಿಂಗರಡ್ಡಿ ಬೆನಕನಳ್ಳಿ, ಡಾ. ರಾಜಶ್ರೀ ವಿಶ್ವನಾಥರಡ್ಡಿ ಪಾಟೀಲ್, ಚನ್ನಾರಡ್ಡಿ ಪಾಟೀಲ್ ಕುರಕುಂದಿ, ವೀರಾರಡ್ಡಿ ಪಾಟೀಲ್ ಬಟಗೇರಾ, ಶೈಲಜಾ ಪಾಟೀಲ್, ಶಂಕರಗೌಡ ಪಾಟೀಲ್ ನೀಡಗಿ, ಬಂಡೇಶರಡ್ಡಿ ಮರಕÀಲ್, ಅಂಬಿಕಾ ಪಾಟೀಲ್, ಸೀಮಾ ಶಶಿ ಶೇಖರರಡ್ಡಿ, ಸರೋಜಾ ಜಾಕರಡ್ಡಿ, ಪ್ರಭಾವತಿ ದಾಮೋದರರಡ್ಡಿ, ಬಿ.ಎಸ್ ದೇಸಾಯಿ, ವಿಶ್ವನಾಥರಡ್ಡಿ ಇಟಗಿ ಸೇರಿದಂತೆ ಸಮಾಜದ ಬಂದುಗಳು ಉಪಸ್ಥಿತರಿದ್ದರು.