
17th July 2025
ಹೆಸರು ಬೆಳೆಗಳಿಗೆ ಅಲ್ಲಲ್ಲಿ ಹಳದಿ ನಂಜಾಣು ರೋಗದ ಭಾದೆ ಕಾಣಿಸಿಕೊಂಡಿದ್ದು, ರೈತರು ಇದರ ತಡೆಗೆ ಕೃಷಿ ಇಲಾಖೆ ಸೂಚಿಸಿದ ನಿರ್ವಹಣಾ ಕ್ರಮಗಳನ್ನು ಪಾಲಿಸಬೇಕೆಂದು ಸಹಾಯಕ ಕೃಷಿ ನಿರ್ದೇಶಕ ಸುರೇಶ ಬಿ. ಹೇಳಿದ್ದಾರೆ.
5th July 2025
ಕೇಂದ್ರ ಸರ್ಕಾರ ಇತ್ತೀಚೆಗೆ ಅಂಗೀಕರಿಸಿದ ವಕ್ಫ್ (ತಿದ್ದುಪಡಿ) ಮಸೂದೆ 2025 ಅನ್ನು ಬಲವಾಗಿ ವಿರೋಧಿಸಲು ಈ ಶಾಂತಿಯುತ ಪ್ರದರ್ಶನವನ್ನು ನಡೆಸಲಾಯಿತು. ಸಂಸತ್ತಿನಲ್ಲಿ ತಡರಾತ್ರಿ 3:30 ರ ಸುಮಾರಿಗೆ ವಿವಾದಾತ್ಮಕವಾಗಿ ಅಂಗೀಕರಿಸಲ್ಪಟ್ಟ ಮಸೂದೆಯು ಮಸೀದಿಗಳು, ಮದರಸಾಗಳು ಮತ್ತು ಸ್ಮಶಾನಗಳು ಸೇರಿದಂತೆ ವಕ್ಫ್ ಆಸ್ತಿಗಳನ್ನು ಕಾನೂನುಬದ್ಧವಾಗಿ ಅತಿಕ್ರಮಿಸಲು ಪ್ರಯತ್ನಿಸುತ್ತಿದೆ
ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ಮೊಹಮ್ಮದ್ ಫೈಜ್ ದರ್ಜಿ,
"ವಕ್ಫ್ ಆಸ್ತಿ ಸರ್ಕಾರಿ ಆಸ್ತಿಯಲ್ಲ ಅದು ಅಲ್ಲಾಹನ ಆಸ್ತಿ. ಅದನ್ನು ವಶಪಡಿಸಿಕೊಳ್ಳುವ ಅಥವಾ ಖಾಸಗೀಕರಣಗೊಳಿಸುವ ಹಕ್ಕು ಯಾರಿಗೂ ಇಲ್ಲ. ಈ ಮಸೂದೆಯು ಮೋದಿ ಸರ್ಕಾರವು ಮುಸ್ಲಿಂ ಭೂಮಿಯನ್ನು ವಶಪಡಿಸಿಕೊಂಡು ತಮ್ಮ ಕಾರ್ಪೊರೇಟ್ ಮಿತ್ರರಿಗೆ ಹಸ್ತಾಂತರಿಸುವ ಸ್ಪಷ್ಟ ಪ್ರಯತ್ನವಾಗಿದೆ. ಈ ಅನ್ಯಾಯ ಯಶಸ್ವಿಯಾಗಲು ನಾವು ಬಿಡುವುದಿಲ್ಲ. ಈ ಮಸೂದೆಯನ್ನು ಹಿಂತೆಗೆದುಕೊಳ್ಳುವವರೆಗೆ ನಮ್ಮ ಪ್ರತಿಭಟನೆ ಶಾಂತಿಯುತವಾಗಿ ಮತ್ತು ಕಾನೂನುಬದ್ಧವಾಗಿ ಮುಂದುವರಿಯುತ್ತದೆ ಎಂದು
ಡಾ. ಮೊಹಮ್ಮದ್ ಫೈಜ್ ದರ್ಜಿ, ಅವರು ಹೇಳಿಕೆ ನೀಡಿದಾರೆ. ಕಾರ್ಯಕ್ರಮದಲ್ಲಿ ಹಾಜರಿದ್ದ ಮೌಲಾನಾ ನಿಜಾಮುದ್ದೀನ್ ಸಾಹಬ್ ಮಸೂದೆಯು ಮುಸ್ಲಿಂ ಸಮುದಾಯದ ಧಾರ್ಮಿಕ ಹಕ್ಕುಗಳಿಗೆ ಬೆದರಿಕೆ ಹಾಕುವುದಲ್ಲದೆ, ಧಾರ್ಮಿಕ ದತ್ತಿಗಳ ಮೇಲೆ ಸರ್ಕಾರ ಅತಿಕ್ರಮಣ ಮಾಡುವ ಅಪಾಯಕಾರಿ ಪೂರ್ವನಿದರ್ಶನವನ್ನು ಸಹ ಸ್ಥಾಪಿಸುತ್ತದೆ ಎಂದು ಅವರು ಮನವಿ ಮಾಡಿದ್ದಾರೆ
ವಕ್ಫ್ ಮಸೂದೆಯನ್ನು ರದ್ದುಗೊಳಿಸುವವರೆಗೆ ಕಾನೂನು ಮತ್ತು ಪ್ರಜಾಸತ್ತಾತ್ಮಕ ಹೋರಾಟವನ್ನು ಮುಂದುವರಿಸುವ ಸಾಮೂಹಿಕ ಪ್ರತಿಜ್ಞೆಯೊಂದಿಗೆ ಪ್ರತಿಭಟನೆ ಕೊನೆಗೊಂಡಿತು.
27th June 2025
ನಿಜವಾದ ಫಲಾನುಭವಿಗಳಿಗೆ ಯಾವುದೇ ತೊಂದರೆ ಮಾಡುವುದಿಲ್ಲ, ಅಕ್ರಮವಾಗಿ ಆಶ್ರಯ ನಿವೇಶನವನ್ನು ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿ ಮಾರಾಟ ಮಾಡಿದವರ ವಿರುದ್ಧ ಕಠಿಣ ಕ್ರಮಕೈಗೊಳ್ಳಾಗುವುದು, ಇದರಲ್ಲಿ ಯಾವುದೇ ಮುಲಾಜಿ ಇಲ್ಲವೆಂದು ಸ್ಥಳದಲ್ಲಿದ್ದವರಿಗೆ ಹೇಳಿದರು.
ಸ್ಥಳ ಪರಿಶೀಲನೆ ವೇಳೆ ಸುಮಾರು ೩೦ಕ್ಕೂ ಹೆಚ್ಚು ಖಾಲಿ ನಿವೇಶನಗಳು ಕಂಡು ಬಂದರೆ, ಇದೇ ವೇಳೆ ಜೆಸ್ಕಾಂ ಮೇನ್ ಲೈನ್ ವಿದ್ಯುತ್ ಸರಬರಾಜಿಗಾಗಿ ಹಾಕಲಾಗಿರುವು ಹೈಟೆನ್ಸ್ನ್ ವೈರ್ ಕೆಳಗೆ ಕೆಲವು ಜನರು ಅಕ್ರಮವಾಗಿ ಮನೆಗಳನ್ನು ನಿರ್ಮಿಸಿಕೊಂಡಿರುವುದು ಬೆಳಕಿಗೆ ಬಂದಿದ್ದು, ಇದರಿಂದ ಕುಪಿತರಾದ ಅಧ್ಯಕ್ಷರು, ಇಂತಹ ಅಪಾಯ ಸ್ಥಳದಲ್ಲಿ ಮನೆ ನಿರ್ಮಿಸಿಕೊಂಡಿದ್ದೀರಿ, ಇದರಿಂದ ಅನಾಹುತವಾದರೆ ಯಾರು ಹೊಣೆ ಕೂಡಲೇ ಜೆಸ್ಕಾಂ ಇಲಾಖೆಗೆ ಪತ್ರ ಬರೆದು ಕ್ರಮಕೈಗೊಳ್ಳವಂತೆ ಸ್ಥಳದಲ್ಲಿದ್ದ ಪೌರಾಯುಕ್ತ ಉಮೇಶ ಚವ್ಹಾಣ ಅವರಿಗೆ ಸೂಚಿಸಿದರು.
ಆಶ್ರಯ ಲೇಔಟ್ನಲ್ಲಿ ಯಾರೂ ಅತಿಕ್ರಮಿಸಬಾರದು, ಒಂದು ವೇಳೆ ಯಾರಾದರೂ ಅಕ್ರಮವಾಗಿ ಲೇಔಟ್ನಲ್ಲಿ ಮನೆ ನಿರ್ಮಿಸಿಕೊಂಡಿದ್ದರೆ ಅಂತಹವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು, ಹೈಟೆನ್ಸ್ನ್ ವೈರ್ ಕೆಳಗಡೆ ಮನೆ ನಿರ್ಮಿಸಿಕೊಂಡವರು ವಿರುದ್ದ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷ ರುಖಿಯಾ ಬೇಗಂ, ಸದಸ್ಯರಾದ ವಿಜಯಲಕ್ಷಿö್ಮÃ, ಮಂಜುನಾಥ ದಾಸನಕೇರಿ, ಅಂಬಯ್ಯ ಶಾಬಾದಿ, ಚನ್ನಕೇಶಗೌಡ ಬಾಣತಿಹಾಳ, ಮಶೆಪ್ಪ ನಾಯಕ, ಹಣಮಂತ ನಾಯಕ, ಹಣಮಂತ ಇಟಗಿ, ವಾಹಬ್, ಇಸ್ಮಾಯಿಲ್ಖಾನ್, ವೆಂಕಟರಡ್ಡಿ ಹೊನಕೇರಿ, ಮನ್ಸೂರ್ ಅಹ್ಮದ್, ಗಣೇಶ ದುಪ್ಪಲ್ಲಿ, ಖಲೀಂ, ಚಂದ್ರಕಾAತ ಮಡ್ಡಿ, ನಗರಸಭೆ ಎಇಇ ರಜನಿಕಾಂತ ಶೃಂಗೇರಿ, ಪರಿಸರ ಅಭಿಯಂತರ ಪ್ರಶಾಂತ, ಕಂದಾಯ ಅಧಿಕಾರಿ ಅಂಬಿಕೇಶ್ವರ, ಮಲ್ಲಿಕಾರ್ಜುನ ಕುರಕುಂಬಳ ಸೇರಿದಂತೆ ನಗರಸಭೆ ಸಿಬ್ಬಂದಿಗಳು ಇದ್ದರು.
18th June 2025
ರಾಜ್ಯ ಕಾರ್ಯಾಲಯದಲ್ಲಿ ನೂತನ ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ವಿಭೂತಿಹಳ್ಳಿ ಅಭಿನಂದನೆ.
ಯಾದಗಿರಿ:ಯಾದಗಿರಿ ಜಿಲ್ಲೆಯ ನೂತನ ಬಿಜೆಪಿ ಜಿಲ್ಲಾ ಅಧ್ಯಕ್ಷ ಬಸವರಾಜ ವಿಭೂತಿಹಳ್ಳಿ ಅವರಿಗೆ ರಾಜ್ಯಾಧ್ಯಕ್ಷ ಹಾಗೂ ಶಿಕಾರಿಪುರ ಶಾಸಕ ಬಿ.ವೈ.ವಿಜಯೇಂದ್ರ ಅವರು
ನೇಮಕಾತಿ ಆದೇಶಪತ್ರವನ್ನು ನೀಡಿ, ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದರು ಹಾಗೂ ಪಕ್ಷದ ಸಂಘಟನೆಗಾಗಿ ಮತ್ತು ಬಲವರ್ಧನೆಗೆ ನಿರಂತರವಾಗಿ ಕೆಲಸ ಮಾಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯ ಸ್ವಾಮಿ
ಮಾಜಿ ಸಚಿವ ಸಿ.ಟಿ. ರವಿ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಪಿ. ರಾಜೀವ್, ನಂದೀಶ್ ರೆಡ್ಡಿ, ಪ್ರೀತಮ್ ಗೌಡ, ಪಕ್ಷದ ಚುನಾವಣಾ ಸಂಚಾಲಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ರಾಜ್ಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
17th June 2025
ಚಾಡಿ ಹೇಳುವ ಸಂಸ್ಕೃತಿ ನಮ್ಮದಲ್ಲ, ನಿಮ್ಮದು
ಜೆಡಿಎಸ್ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಕಟಕಟಿ
ಯಾದಗಿರಿ : ಈ ಹಿಂದೆ ಜನತಾ ಪರಿವಾರದಲ್ಲಿದ್ದಾಗ ನಮ್ಮ ನಾಯಕರಾದ ಸದಾಶಿವರಡ್ಡಿ ಕಂದಕೂರ ರವರ ಬಗ್ಗೆ ಚಾಡಿ ಹೇಳಿ ಅವರಿಗೆ ಅಧಿಕಾರಿ ತಪ್ಪಿಸಿದವರು ಯಾರು?, ಕಾಂಗ್ರೆಸ್ನಲ್ಲಿದ್ದಾಗ ಮಾಜಿ ಸಚಿವ ಡಾ.ಎ.ಬಿ.ಮಾಲಕರಡ್ಡಿಯವರ ಬಗ್ಗೆ ಹಿರಿಯ ನಾಯಕರಿಗೆ ಕಿವಿ ಊದಿ ಟಿಕೆಟ್ ತಪ್ಪಿಸಿದ್ದು ಯಾರೆಂಬದು ಯಾದಗಿರಿ ಜಿಲ್ಲೆಯ ಜನರಿಗೆ ಗೊತ್ತಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷರಾದ ಸುಭಾಶ್ಚಂದ್ರ ಕಟಕಟಿ ರವರು ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಯಾದಗಿರಿ ಶಾಸಕ ಚನ್ನಾರಡ್ಡಿ ತುನ್ನೂರ ರವರು ಕುಮಾರಸ್ವಾಮಿಯವರ ಹೇಳಿಕೆಗೆ ಸಂಬAಧಿಸಿದAತೆ ನೀಡಿದ ಪ್ರತಿಕ್ರಿಯೆಗೆ ಖಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಇನ್ನೊಬ್ಬರ ಬಗ್ಗೆ ಚಾಡಿ ಹೇಳುವ ಸಂಸ್ಕೃತಿ ನಮ್ಮ ನಾಯಕರದ್ದಲ್ಲ ಎನ್ನುವುದು ಜನರಿಗೆ ಗೊತ್ತಿದೆ, ತಾವುಗಳು ಇನ್ನೊಬ್ಬರ ಬಗ್ಗೆ ಚಾಡಿ ಹೇಳಿ ಪಕ್ಷಗಳಲ್ಲಿ ಗುರುತಿಸಿಕೊಂಡು ಅಧಿಕಾರ ಪಡೆಯುವ ಹಂತಕ್ಕೆ ಬಂದಿದ್ದೀರಿ ಎಂದು ಪ್ರತಿಕ್ರೀಯಿಸಿದ್ದಾರೆ.
ಮಾಜಿ ಮುಖ್ಯಮಂತ್ರಿಗಳು, ಕೇಂದ್ರ ಸಚಿವರಾಗಿದ್ದ ಹೆಚ್.ಡಿ.ಕುಮಾರಸ್ವಾಮಿಯವರು ಯಾರೋ ಚಾಡಿ ಹೇಳಿದ್ದನ್ನು ಕೇಳಿ ಪ್ರತಿಕ್ರೀಯಿಸಿದ್ದಲ್ಲ, ಯಾದಗಿರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ.ಮಲ್ಲಿಕಾರ್ಜುನ ಖರ್ಗೆಯವರು ಮಾತನಾಡಿದ್ದನ್ನು ಗಮನಿಸಿ, ಅಷ್ಟು ವರ್ಷಗಳಿಂದ ಇರದ ಅಭಿವೃದ್ಧಿ ಕಾಳಜಿ ಈಗ ಬಂದಿತೆ ಎಂದು ಹೇಳಿಕೆ ನೀಡಿದ್ದಾರೆ, ಅಷ್ಟೇ ಅಲ್ಲದೇ ಕುಮಾರಸ್ವಾಮಿಯವರು ತಮ್ಮ ಅಧಿಕಾರ ಅವಧಿಯಲ್ಲಿ ಚಂಡ್ರಿಕಿಯಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದಾಗ ಇಲ್ಲಿನ ಅಭಿವೃದ್ಧಿಯನ್ನು ಕಣ್ಣಾರೆ ಕಂಡಿದ್ದಾರೆ ಹಾಗಾಗಿ ಖರ್ಗೆಯವರ ಬೆಂಗಳೂರು ಮೈಸೂರು ಹೇಳಿಕೆಗೆ ಪ್ರತಿಕ್ರೀಯಿಸಿದ್ದಾರೆ ಎಂದಿದ್ದಾರೆ.
ನಿಮ್ಮ ನಾಯಕರು ಕಳೆದ ೫೦ ವರ್ಷಗಳಲ್ಲಿ ಗುರುಮಠಕಲ್ ಕ್ಷೇತ್ರದಲ್ಲಿ ಎಷ್ಟು ಅಭಿವೃದ್ಧಿ ಮಾಡಿದ್ದಾರೆ ಎಂದು ಗೊತ್ತಿದೆ, ಅವರು ಮಾಡಿದ ಅಭಿವೃದ್ಧಿಯಿಂದಲೇ ಇನ್ನೂ ನಮ್ಮ ಭಾಗದ ಜನತೆ ಗುಳೆ ಹೋಗುವುದು ತಪ್ಪುತ್ತಿಲ್ಲ, ನಮ್ಮ ಜನರು ಬದುಕಲು ಗುಳೆ ಹೋಗುವಂತಹ ವಾತಾವರಣ ಮಾಡಿದ್ದು ನಿಮ್ಮ ನಾಯಕರ ಅಭಿವೃದ್ಧಿಯೇ ಎಂದು ವ್ಯಂಗವಾಡಿದ್ದಾರೆ.
ಚಾಡಿ ಹೇಳುವ ಸಂಸ್ಕೃತಿ ಮತ್ತು ಇನ್ನೊಬ್ಬರನ್ನು ಓಲೈಕೆ ಮಾಡುವ ಸಂಸ್ಕೃತಿ ಬಿಟ್ಟು ಜನರ ಅಭಿವೃದ್ಧಿಗೆ ಶ್ರಮಿಸಿ, ತಾವು ಬಾಯಿ ಚಪಲಕ್ಕೆ ಯಾರದ್ದೋ ಹೇಳಿಕೆಗಳಿಗೆ ಪ್ರತಿಕ್ರಿಯಿಸುವುದನ್ನು ಬಿಡಿ, ೫೦ ವರ್ಷಗಳಲ್ಲಿ ಅಭಿವೃದ್ಧಿ ಎಷ್ಟಾಗಿದೆ ಎನ್ನುವುದು ಜನರಿಗೆ ಗೊತ್ತಿದೆ,
ತಾವು ಭ್ರಷ್ಟಾಚಾರದ ಜನಕರಾಗಿದ್ದೀರಿ ನಿಮ್ಮ ಅವಧಿಯಲ್ಲಿ ಒಂದೊAದು ಇಲಾಖೆಯಲ್ಲಿ ನಿಮ್ಮ ಭ್ರಷ್ಟಾಚಾರದ ಮೇನು ಕಾರ್ಡ್ ಅತ್ಯಂತ ಜನಪ್ರೀಯವಾಗಿದ್ದು, ಅದನ್ನು ಮುಚ್ಚಿಕೊಳ್ಳಲು ತಾವು ಆಗಾಗ ಇನ್ನೊಬ್ಬರ ಬಗ್ಗೆ ಹೇಳಿಕೆ ಕೊಟ್ಟು ಜನರಲ್ಲಿ ಪರಿಚಿತರಾಗಲು ಪ್ರಯತ್ನಿಸುವುದನ್ನು ಬಿಡಿ ಎಂದು ಸಲಹೆ ನೀಡಿದ್ದಾರೆ.
ಬೇರೆಯವರ ಅಕ್ಕಪಕ್ಕ ಕುಳಿತು ಯಾರನ್ನೋ ಖುಷಿ ಪಡಿಸಲು ಚಾಡಿ ಹೇಳುವುದು ನಿಮ್ಮ ಸಂಸ್ಕೃತಿ ನಮ್ಮ ನಾಯಕರ ಸಂಸ್ಕೃತಿಯಲ್ಲ ಅದನ್ನು ಬಿಟ್ಟು ಯಾದಗಿರಿ ಜನರ ಒಳಿತಿಗಾಗಿ ಕೆಲಸ ಮಾಡಿ ಎಂದು ತಿವಿದಿದ್ದಾರೆ.
17th June 2025
ಪರೋಪಕಾರ ಬಳಗ ಸೇವಾ ಸಂಸ್ಥೆ .(ರಿ) ಯಾದಗಿರಿ ಸಂಸ್ಥಾಪಕ-ಅಧ್ಯಕ್ಷರಾದ –ಲಕ್ಷ್ಮಣ ತಂದೆ ಶಂಕರಲಿಂಗ ಬಾವೂರ ಅವರಿಂದ ವಿವಿಧ ಹುದ್ದೆಗಳಿಗೆ ಪದಾಧಿಕಾರಿಗಳನ್ನು ನೇಮಿಸಲಾಯಿತು.
ಉಪಾಧ್ಯಕ್ಷರು-ಶ್ರೀ ವೀರುಪಾಕ್ಷ ತಂದೆ ರಾಜಶೇಖರ ಹೂಗಾರ,ಪ್ರಧಾನ ಕಾರ್ಯದರ್ಶಿ-ಶ್ರೀ ಪ್ರಶಾಂತ ತಂದೆ ಮೌನೇಶ ಗುತ್ತೇದಾರ,ಖಜಾಂಚಿ-ಶ್ರೀ ಈಶ್ವರ ತಂದೆ ವೆಂಕಟೇಶ ಚವ್ಹಾಣ,ಶ್ರೀ ಅನಿಲ ತಂದೆ ಶರಣಪ್ಪ ಬಾಗ್ಲಿ -ಸಹ-ಕಾರ್ಯದರ್ಶಿ,ಸಹ-ಖಜಾಂಚಿ-ಶ್ರೀ ನರಸಪ್ಪ ಪೂಜಾರಿ,ಸಂಚಾಲಕರು-ಶ್ರೀ ನರಸಿಂಗ ಕಲಾಲ,ಸಹ-ಸಂಚಾಲಕರು-ಶ್ರೀ ಗಂಗು ಮಡಿವಾಳ,ಸದಸ್ಯರುಗಳನ್ನಾಗಿ ಶ್ರೀ ಶಿವಕುಮಾರ ತಂದೆ ನರಸಿಂಗಪ್ಪ ಚಿನ್ನಾಕಾರ ,ಶ್ರೀ ಹಸೇನ ತಂದೆ ಲಾಲಸಾಬ ನದಾಫ,ಶ್ರೀ ಸುಮೀತ್ ತಂದೆ ದೇವಿಂದ್ರಪ್ಪ,ಶ್ರೀ ಪ್ರದೀಪ ತಂದೆ ಮಲ್ಲಯ್ಯ ಗುತ್ತೇದಾರ ,ಶ್ರೀ ಸಂಜಯ ತಂದೆ ಮಾಂತೇಶ ಕಲಾಲ,ಶ್ರೀ ಅಚ್ಯುತ ಪುರೋಹಿತ,ಶ್ರೀ ರವಿಕುಮಾರ ಹುಂಡೇಕಲ
ಶ್ರೀ ಜಮಾಲ್ ತಂದೆ ಕಾಸಿಂಸಾಬ್,ಶ್ರೀ ಲೋಹಿತ ನಾಟೇಕಾರ,ಶ್ರೀ ಶಿವಕುಮಾರ ಬಿರಾದಾರ,ಶ್ರೀ ವಿಜಯ ಕಂದಳ್ಳಿ,ಶ್ರೀ ಭೀಮು ಚವ್ಹಾಣ,ಶ್ರೀ ಮಲ್ಲಿಕಾರ್ಜುನ ಬೀರನಾಳ,ಶ್ರೀ ಚೇತನ ಪಾಟೀಲ,ಶ್ರೀ ಗೌತಮ ಯಣ್ಣೋರ್,ಶ್ರೀ ಶ್ರವಣ ,ಶ್ರೀ ಸುನೀಲ,ಶ್ರೀ ಸಂದೇಶ ಲಿಂಗೇರಿ,ಶ್ರೀ ರಾಜು,ಶ್ರೀ ನಾಗು ಪೂಜಾರಿ ಮತ್ತು ಶ್ರೀ ಭರತ ನೇಮಕಾತಿ ಮಾಡಿ ಆದೇಶ ಹೊರಡಿಸಲಾಯಿತು.
3rd June 2025
ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳದಿಂದ ಬೇಸತ್ತು ಪೊಲೀಸ್ ಮೆಟಿಲೇರಿದ. ಮಹಿಳೆಯರು. ಯಾದಗಿರಿ ತಾಲೂಕಿನ ಯರಗೋಳ ಗ್ರಾಮದಲ್ಲಿ ಮಂಗಳವಾರ. ನಡೆದಿದೆ.
ಪದ್ಮಾವತಿ ಗಂಡ ಬಸವರಾಜ್. ಒಟ್ಟು ಫೈನಾನ್ಸ್ಗಳಲ್ಲಿ ₹75 ಸಾವಿರ ಸಾಲ ಮಾಡಿದ್ದು, ಸಾಲ ಮರು ಪಾವತಿಸುವಂತೆ ಫೈನಾನ್ಸ್ ಸಿಬ್ವಂದಿಯರು ಕಿರುಕುಳ ನೀಡ್ತಾ ಇದ್ದಾರೆ. ನಾವೇನ್ ಮಾಡೋದು ಸರಿಯಾದ ಸಮಯಕ್ಕೆ. ತಕೊಂಡಿರುವಂತ ಸಾಲ. ಕಟ್ಟಿದೀವಿ ಸದ್ಯಕ್ಕೆ ಬೇಸಿಗೆ. ಇರೋದರಿಂದ ನಮಗೆ ಯಾವುದೇ ರೀತಿ ಕೆಲಸ ಇಲ್ಲ. ಕೆಲಸ ಮಾಡಬೇಕು ಅಂದ್ರೆ ಕೂಲಿ ಕಾರ್ಮಿಕರಿಗೆ. ಸರಿಯಾಗಿ ಕೆಲಸ ಕೊಡುತ್ತಿಲ್ಲ.
ನಾವೇನ್ ಮಾಡೋದು ಸರ್. ಕೆ ಬಿ ಎಸ್ ಬ್ಯಾಂಕಿನ ಸಿಬ್ಬಂದಿಯವರು ಪ್ರತಿದಿನ ಮನೆ ಬಾಗಿಲಿಗೆ ಬಂದು ಕಿರುಕುಳ ನೀಡುತ್ತಿದ್ದಾರೆ.
ಹಿಂಗಾದ್ರೆ ಏನು ಮಾಡಬೇಕು ಸರ್ ನಮಗೆ ಇವಾಗ ಕೆಲಸ ಇಲ್ಲ. ಇನ್ನು ಸ್ವಲ್ಪ ದಿನ ಆದರೆ. ಕೆಲಸಗಳು ಪ್ರಾರಂಭವಾಗುತ್ತವೆ. ಅದಾದ್ಮೇಲೆ ಏನಾದರೂ. ಮಾಡಿತಿವಿ. ಅಂದ್ರೂನು ಸಿಬ್ಬಂದಿ ಅವರು ಕೇಳುತ್ತಿಲ್ಲ. ಎಂದು ಗ್ರಾಮೀಣ ಪೊಲೀಸ್ ಠಾಣೆಗೆ. 15 ಕ್ಕೂ ಹೆಚ್ಚು ಮಹಿಳೆಯರು.
ದೂರು ಸಲ್ಲಿಸಲು. ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
23rd April 2025
ಯಾದಗಿರಿ
ಜಮ್ಮು ಕಾಶ್ಮೀರದಲ್ಲಿ ಯಾದಗಿರಿ ಪ್ರವಾಸಿಗರು ಸೇಪ್..!
ಯಾದಗಿರಿ ಯಾತ್ರಿಕರು ದಾಳಿಯಾದ ಸ್ಥಳದಲ್ಲೇ ಇದ್ದು ಬಚ್ಛಾವ್..!
ಜಮ್ಮು ಕಾಶ್ಮೀರದ ಭಯೋತ್ಪಾದಕರ ದಾಳಿಯಲ್ಲಿ ಯಾದಗಿರಿಯ ನಾಲ್ವರು ಸೇಪ್
19th April 2025
ಯಾದಗಿರಿ: ಆರ್ಥಿಕ ಸ್ವಾತಂತ್ರಕ್ಕೆ ಸಹಕಾರಿ ಕ್ಷೇತ್ರವೇ ಹೆಬ್ಬಾಗಿಲು. ಪತ್ರಕರ್ತರ ಆರ್ಥಿಕ ಸುಧಾರಣೆಯಲ್ಲಿ ಸಹಕಾರ ಸಂಘ ಪ್ರಮುಖವಾದ ಪಾತ್ರ ನಿರ್ವಹಿಸುತ್ತದೆ.ಇದನ್ನು ಮನಗಂಡು ಸಹಕಾರಿ ಸಂಘ ಸ್ಥಾಪಿಸಲಾಗುತ್ತದೆ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಲ್ಲಪ್ಪ ಸಂಕೀನ್ ಹೇಳಿದರು.
28th February 2025
ಯಾದಗಿರಿ..
ದೈಹಿಕ ಶಿಕ್ಷಕ. ಅಮಾನತು ಮಾಡಿದ್ದೂ ರದ್ದು ಪಡಿಸಿ ಮರು ಮುಂದುವರಿಸಿ.ದೇವನೂರು ಗ್ರಾಮಸ್ಥರು, ಹಾಗೂ 250ಕ್ಕೂ ಹೆಚ್ಚು. ವಿದ್ಯಾರ್ಥಿಗಳಿಂದ ಪ್ರತಿಭಟನೆ
ಸೇಡಂ ತಾಲೂಕಿನ ದೇವನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ದೇವೇಂದ್ರಪ್ಪ. ಮುಸ್ಟೂರು.ಕರ ಅವರನ್ನು. 13/02/2025 ರಂದು ದೇವನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ಅಮಾನತು
ಆಗಿರ್ತಾರೆ. ಕಾರಣ. ಸ್ಥಳೀಯ ಎಸ್ ಡಿ ಎಂ ಸಿ ಅಧ್ಯಕ್ಷ. ಸುಳ್ಳಿನ ಆರೋಪಗಳಿಂದ.
ದಿನನಿತ್ಯ. ಶಾಲೆಯಿಂದ ಹಾಲಿನ ಪ್ಯಾಕೆಟ್ ಇನ್ನಿತರ ಸಾಮಗ್ರಿಗಳಿಂದ ಕೊಡದೆ ಇದ್ದ ಪಕ್ಷದಲ್ಲಿ.
ಕೆಲವು ಸಾಮಗ್ರಿಗಳನ್ನು. ಪ್ರತಿ ತಿಂಗಳು. ಕೊಡಬೇಕೆಂದು ಬೇಡಿಕೆಗಳು ಇಟ್ಟಿದ್ದರಂತೆ ಎಸ್ ಡಿ ಎಂ ಸಿ. ಅಧ್ಯಕ್ಷರು.
ಇವರ ಮೇಲೆ ಇಲ್ಲದ ಆರೋಪಗಳನ್ನು ಸೃಷ್ಟಿ ಮಾಡಿ. ಶಾಲೆಗೆ ಸರಿಯಾದ ಸಮಯಕ್ಕೆ ಬರುವುದಿಲ್ಲವೆಂದು.
ಅಲ್ಲಿಪೂರ್ ಗ್ರಾಮದಿಂದ ದಿನ ನಿತ್ಯ. ಸರಿಸುಮಾರು 20 ವರ್ಷಗಳಿಂದ
ಸೇಡಂ ತಾಲೂಕಿನ ದೇವನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ.
ದಿನಾಲು ಇವ್ರು. Up and down. ಮಾಡ್ತಾ ಇದ್ದಿದ್ದು ಸ್ಥಳೀಯ.ಡಿಡಿಎಂಸಿ ಅಧ್ಯಕ್ಷರಿಗೆ ಹಾಗೂ ಸ್ಥಳೀಯ ಗ್ರಾಮಸ್ಥರು ಕೂಡ.ಗೊತ್ತಿರುವಂತ ವಿಷಯ. ಇದಾಗಿದೆ.
ಇನ್ನು ಇದರಲ್ಲಿ ಸ್ಥಳೀಯವಾಗಿ ಯಾವುದೇ ರೀತಿಯಾಗಿ ತಪ್ಪು ಮಾಡಿಲ್ಲ ಸರಿಯಾದ ಸಮಯಕ್ಕೆ ಹೋಗದೆ ಇರುವ ಕಾರಣಕ್ಕೆ ಈ ರೀತಿಯಾದಂತಹ ಒದಂತಿಗಳು ಸೃಷ್ಟಿ ಮಾಡಿದಾರೆ ಅವರ್ ಮೇಲೆ ಯಾವುದೇ ರೀತಿಯಾಗಿ. ಪ್ರಕರಣಗಳು ದಾಖಲಾಗಿಲ್ಲ
ಮುಖ್ಯ ಗುರುಗಳಾಗಿ ಕಾರ್ಯನಿರ್ವಹಿಸಿದ್ದು
ಶಾಲಾ ಕಟ್ಟಡ ನಿರ್ಮಾಣ ಮಾಡಿದ್ದು ಅಲ್ಲದೇ ಮಕ್ಕಳಿಗೆ ಶುದ್ಧ
ಕುಡಿಯುವ ನೀರು ಪೂರೈಕೆ ಧರ್ಮಸ್ಥಳ ಕ್ಷೇತ್ರ ಅವರ ಅನುದಾನದಲ್ಲಿ.
ಬಿಡುಗಡೆಗೊಳಿಸಿದ್ದು ಇರುತ್ತದೆ.
ಪ್ರತ್ಯೇಕ. ಮಕ್ಕಳಿಗೆ ಗ್ರಾಮ ಪಂಚಾಯತ್ ಅನುದಾನದಿಂದ. ಶೌಚಲಯ. ಕಾಮಗಾರಿ ನಿರ್ಮಾಣ.ಮಾಡಿರುತ್ತಾರೆ.
ಪ್ರತಿ ವರ್ಷ. ಆಟೋಟ ಸ್ಪರ್ಧೆಗಳನ್ನು ಕ್ರೀಡಾ ಕೂಟ ಮಕ್ಕಳಿಗೆ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದಾರೆ.
ಮತ್ತು ಶಾಲಾ ಸುತ್ತಮುತ್ತಲಿನ ಗಿಡ ಗಂಟೆಗಳನ್ನು ಸ್ವತಹ ತಾವೇ ಮುಂದೆ ನಿಂತುಕೊಂಡು. ಸ್ವಚ್ಛತೆಗೊಳಿಸಿದರು. ಇವರು
2016.2017.ಸಾಲಿನಿಂದ.20/21 ಸಾಲಿನವರೆಗೂ ಕಾರ್ಯನಿರ್ವಹಿಸುತ್ತಾರೆ.
ಇದನ್ನು ಗುರುತಿಸಿ ಶಾಲಾ ಶಿಕ್ಷಣ. ಸಂಸ್ಥೆ ವತಿಯಿಂದ ಅತ್ಯುತ್ತಮ ತಾಲೂಕು ಶಿಕ್ಷಕ ಎಂದು ಇವರಿಗೆ ಪ್ರಶಸ್ತಿ ಕೂಡ ಕೊಟ್ಟಿರುತ್ತಾರೆ.
20 21ನೇ ಸಾಲಿನ. ನಂತರ ದೈಹಿಕ ಶಿಕ್ಷಕನಾಗಿ ಕಾರ್ಯನಿರ್ವಸ್ಥ ಇದ್ದರು.
ಏನೋ ಸುಖ ಸುಮ್ಮನೆ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೋ ಒಂದು ವಿಡಿಯೋಗಳನ್ನು ಫೋಟೋಸ್ಗಳನ್ನು ಅರಿಬಿಟ್ಟಿದ್ದಾರೆ ಅನ್ನುವ ನೆಪವಾಗಿಸಿಕೊಂಡು.
ಇವರನ್ನು ದಿನಾಂಕ 13/02/2025 ರಂದು. ಅವನತ್ತು ಮಾಡಿರುತ್ತಾರೆ.