

18th August 2024

ಬಳ್ಳಾರಿ:ಮುಖ್ಯಮಂತ್ರಿರವರ ಪತ್ನಿ ಭೂಮಿ ಕಿತ್ತುಕೊಂಡಿದ್ದು ಬಿಜೆಪಿ ಸರ್ಕಾರ, ಅದನ್ನು ನಿವೇಶನ ಮಾಡಿ ಹಂಚಿಕೆ ಮಾಡಿದ್ದು ಬಿಜೆಪಿ ಸರ್ಕಾರ, ಪರ್ಯಾಯ ನಿವೇಶನ ಕೊಟ್ಟಿದ್ದು ಬಿಜೆಪಿ ಸರ್ಕಾರ, ಕಿತಾಪತಿ ಮಾಡಿದ್ದೆಲ್ಲಾ ಬಿಜೆಪಿ, ಆದರೆ, ಹೊಣೆ ಹೊರಿಸುವುದು ಇಂದಿನ ಮುಖ್ಯಮಂತ್ರಿ ಮೇಲೆ! ಇದೆಂತಹ ವಿಪರ್ಯಾಸ ಅಲ್ಲವೇ. ಇದು ಸದ್ಯ ರಾಜ್ಯದಲ್ಲಿ ಬಿಜೆಪಿ ನಡೆದುಕೊಳ್ಳುತ್ತಿರುವ ರೀತಿ. ಹರಿಯಾಣ, ಜಮ್ಮು ಕಾಶ್ಮೀರ ಸೇರಿದಂತೆ ನಾಲ್ಕು ರಾಜ್ಯಗಳ ಚುನಾವಣೆ ನಿನ್ನೆಯಷ್ಟೇ ಘೋಷಣೆ ಆಗಿದೆ.
ಇದರ ಬೆನ್ನಲ್ಲೇ ಇಂದು ಪ್ರಾಸಿಕ್ಯೂಷನ್ ಗೆ ರಾಜ್ಯಪಾಲ ಅನುಮತಿ ನೀಡಿರುವುದು ಬಿಜೆಪಿಯ ಹೀನ ರಾಜಕೀಯ ಪಟ್ಟುಗಳನ್ನು ತೋರುತ್ತದೆ ಎಂದು ಕೆಪಿಸಿಸಿ ರಾಜ್ಯ ಮಾಧ್ಯಮ ವಕ್ತಾರರು ವೆಂಕಟೇಶ್ ಹೆಗಡೆ ಬಳ್ಳಾರಿ ಆಗ್ರಹಿಸಿದರು. ಸಮಾಜವಾದದ ಮೂಲಕ ರಾಜಕೀಯಕ್ಕೆ ಬಂದ ಸಿದ್ದರಾಮಯ್ಯ ಬಡವರ ಪರ ಎಂಬುದನ್ನು ತೋರಿದ್ದಾರೆ. ಭ್ರಷ್ಟ ಮುಕ್ತ ಆಡಳಿತ ನೀಡಿದ್ದಾರೆ. ಇದೆ ಮುಖ್ಯಮಂತ್ರಿಯ ಸಾಧನೆ ಮುಂದಿನ ನಾಲ್ಕು ರಾಜ್ಯಗಳ ಚುನಾವಣೆ ವಿಷಯ ವಸ್ತು ಆಗಲಿದೆ ಎಂದರು.
ಮಾದರಿ ಕರ್ನಾಟಕ ಸರ್ಕಾರದ ಉದಾಹರಣೆ ಕೊಟ್ಟು ಚುನಾವಣೆ ಎದುರಿಸಿದ್ದೆ ಅದಲ್ಲಿ ನಮ್ಮ ಸೋಲು ಖಚಿತ ಎಂದು ಅರಿತ ಕುಯುಕ್ತಿ ಬಿಜೆಪಿ ನಾಯಕರು ಇಂದು ರಾಜ್ಯಪಾಲರ ಮೂಲಕ ತನಿಖೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಇದು ಸೇಡಿನ ರಾಜಕಾರಣ ಅಲ್ಲದೆ ಬೇರೆ ಏನೂ ಅಲ್ಲ ಸಿದ್ದರಾಮಯ್ಯ ರಾಷ್ಟ್ರಮಟ್ಟದಲ್ಲಿ ಹೆಸರು ವಾಸಿ ಆಗಿದ್ದಾರೆ. ದೆಹಲಿಯಲ್ಲಿ ಎಎಪಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರನ್ನು ಸುಳ್ಳು ಆರೋಪ ಹೊರಿಸಿ ಜೈಲಿಗೆ ಕಳುಹಿಸಿದರು. ಇದೀಗ 40 ವರ್ಷ ರಾಜಕಾರಣದಲ್ಲಿ ಇದ್ದರೂ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದ ರಾಜರಕಾರಣ ಮಾಡಿ ಕೊಂಡು ಬಂದ ಒಬ್ಬ ದಕ್ಷ, ಪ್ರಾಮಾಣಿಕ ರಾಜಕಾರಣ ಮಾಡಿಕೊಂಡು ಬಂದವರು.

ಜಮೀರ್ ಅಹ್ಮದ್ ಗೆ ಸಚಿವ ಸ್ಥಾನ ನೀಡಲು ಸೈಯದ್ ಮೀರಾ ಅಗ್ರಹ- ಕಡೆಗಣಿಸಿದರೆ ಕಾಂಗ್ರೆಸ್ ಗೆ ದೊಡ್ಡ ನಷ್ಟ

ಟಿಎಪಿಸಿಎಂಎಸ್ ಚುನಾವಣೆ: ಸಂದಾನ ಯಶಸ್ವಿ ಅಧ್ಯಕ್ಷರಾಗಿ ಚೆನ್ನಪ್ಪ ಮಳಿಗಿ, ಉಪಾಧ್ಯಕ್ಷರಾಗಿ ಕನಕಪ್ಪ ಆಯ್ಕೆ

ಎಸ್ಐಆರ್ ಸಭೆಗೆ ಗೈರಾದ ಪದಾಧಿಕಾರಿಗಳಿಗೆ ಕಾಂಗ್ರೆಸ್ ಕೊಕ್- ಮಾಜಿ ಎಂಎಲ್ಸಿ ಹೆಚ್.ಆರ್.ಶ್ರೀನಾಥ ವಜಾ: ಡಿಕೆಶಿ ಆದೇಶ- ಕೆಪಿಸಿಸಿ 3 ಉಪಾಧ್ಯಕ್ಷರು 29 ಪ್ರಧಾನ ಕಾರ್ಯದರ್ಶಿಗಳ ವಿರುದ್ಧ ಕ್ರಮ