Skip to main content
ಸಮರ್ಥವಾಣಿ
News

ರೈತನ ಭೂಮಿಗೆ ಪರಿಹಾರ ಹಣ ನೀಡಲು ವಿಳಂಬ ಜಿಪಂ ಕುಡಿಯುವ ನೀರು ವಿಭಾಗದ ವಾಹನ ಜಪ್ತಿ

07 Jul 2026

News

ಗಂಗಾವತಿಯಲ್ಲಿ ಅ.೨೪ ರಿಂದ ೨೬ರವರೆಗೆ- ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಸಮ್ಮೇಳನ

19 Oct 2025

ಗಂಗಾವತಿ. 

  ಭಾರತೀಯ ವೈದ್ಯಕೀಯ ಸಂಘದ ೯೧ನೇ ರಾಜ್ಯ ಸಮ್ಮೇಳನ ಅ.೨೪,೨೫ ಮತ್ತು ೨೬ ರಂದು ಗಂಗಾವತಿಯಲ್ಲಿ ಆಯೋಜಿಸಲಾಗಿದೆ. ಭಾರತೀಯ ವೈದ್ಯಕೀಯ ಸಂಘದ ರಾಷ್ಟ್ರೀಯ ಅಧ್ಯಕ್ಷರು ಸೇರಿದಂತೆ ಜಿಲ್ಲಾಧಿಕಾರಿಗಳು ಮತ್ತಿತರ ಗಣ್ಯರು ಉದ್ಘಾಟನೆ ಮಾಡಲಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಘದ ರಾಜ್ಯಾಧ್ಯಕ್ಷ ಹಿರಿಯ ವೈದ್ಯ ವಿ.ವಿ.ಚಿನಿವಾಲ್ ಹೇಳಿದರು. 

ಸಮ್ಮೇಳನ ಕುರಿತು ಭಾನುವಾರ ನಗರದ ಐಎಂಎ ಭವನದಲ್ಲಿ ನಡೆದ ಪೂರ್ವಭಾವಿ ಸಭೆಯ ನಂತರ ಅವರು ಅಹ್ವಾನ ಪತ್ರಿಕೆ ಬಿಡುಗಡೆ ಮಾಡಿ ಸುದ್ದಿಗಾರರಿಗೆ ಮಾಹಿತಿ ನೀಡಿದರು. ಪ್ರತಿ ವರ್ಷವು P ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಮಟ್ಟದ ಸಮ್ಮೇಳನವನ್ನು ನಡೆಸಿಕೊಂಡು ಬರಲಾಗುತ್ತಿದೆ. ಪ್ರಸಕ್ತ ವರ್ಷದ ೯೧ನೇ ಸಮ್ಮೇಳನ ಗಂಗಾವತಿಯಲ್ಲಿ ಆಯೋಜಿಸಲಾಗಿದ್ದು, ಸ್ಥಳೀಯ ಐಎಂಎ ಘಟಕ ಸಮ್ಮೇಳನದ ಯಶಸ್ವಿಗೆ ಸಜ್ಜಾಗಿದೆ ಎಂದರು. 

ಕಾರ್ಯಕ್ರಮ ಕುರಿತು ಐಎಂಎ ಗಂಗಾವತಿ ಘಟಕದ ಅಧ್ಯಕ್ಷ ಡಾ.ಎ.ವಿ.ಎನ್.ರಾಜು ಮತ್ತು ಕಾರ್ಯದರ್ಶಿ ಡಾ.ಅಮರೇಶ ಪಾಟೀಲ್ ಮಾತನಾಡಿ, ಭಾರತೀಯ ವೈದ್ಯಕೀಯ ಸಂಘ ತನ್ನದೇ ಆದ ರೀತಿಯ ಕಾರ್ಯ ಚಟುವಟಿಕೆ ನಡೆಸುತ್ತದೆ. ಆರೋಗ್ಯ ಶಿಬಿರ ಸೇರಿದಂತೆ ಇನ್ನಿತರ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದೆ. ಗಂಗಾವತಿ ಐಎಂಎ ಸರ್ವ ಪದಾಧಿಕಾರಿಗಳು ಕ್ರೀಯಾಶೀಲರಾಗಿದ್ದು, ನಮ್ಮ ಗಂಗಾವತಿಯ ಹಿರಿಯ ವೈದ್ಯರು ರಾಜ್ಯಾಧ್ಯಕ್ಷರಾಗಿರುವುದು ನಮಗೆಲ್ಲ ಹೆಮ್ಮೆಯ ವಿಷಯವಾಗಿದೆ. ಅವರ ಮಾರ್ಗದರ್ಶನ ಮತ್ತು ನೇತೃತ್ವದಲ್ಲಿ ನಗರದ ರಾಯಚೂರು ರಸ್ತೆಯ ಅಮರ್ ಗಾರ್ಡನ್ ಸಭಾಂಗಣದಲ್ಲಿ ಅ.೨೪ ರಿಂದ ೨೬ರವರೆಗೆ ನಡೆಸಲು ನಿರ್ಧರಿಸಲಾಗಿದೆ. ರಾಜ್ಯದ ಹಿರಿಯ ವೈದ್ಯರು ಮತ್ತು ಐಎಂಎದ ವಿವಿಧ ಜಿಲ್ಲೆಗಳ ಪದಾಧಿಕಾರಿಗಳು ಆಗಮಿಸಲಿದ್ದಾರೆ. ಅವರೆಲ್ಲರಿಗೂ ಆತಿಥ್ಯ ನೀಡುವುದು ನಮ್ಮ ಜವಬ್ದಾರಿಯಾಗಿದೆ. ರಾಜ್ಯ ಮಟ್ಟದ ಸಮ್ಮೇಳನ ನಮ್ಮ ತಾಲೂಕು ಕೇಂದ್ರದಲ್ಲಿ ನಡೆಯುತ್ತಿರುವುದು ವಿಶೇಷವಾಗಿದೆ. ಅ.೨೪ ರಂದು ಈ ಸಮ್ಮೇಳವನ್ನು ಕೊಪ್ಪಳ ಗವಿಸಿದ್ದೇಶ್ವರ ಸ್ವಾಮಿಗಳ ಸಾನಿಧ್ಯದಲ್ಲಿ ಮತ್ತು ರಾಜ್ಯಾಧ್ಯರಾದ ಡಾ.ವಿ.ವಿ.ಚಿನಿವಾಲ ಅವರ ನೇತೃತ್ವದಲ್ಲಿ ಐಎಂಎ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷರು ಉದ್ಘಾಟಿಸಲಿದ್ದಾರೆ. ಮೂರು ದಿನಗಳ ಕಾಲ ನಡೆಯುವ ಈ ಸಮ್ಮೇಳನದಲ್ಲಿ ನವೀನ ತಂತ್ರಜ್ಞಾನದ ಚಿಕಿತ್ಸಾ ಪದ್ಧತಿ, ವೈದ್ಯರ ಸಮಸ್ಯೆಗಳು ಮತ್ತು ಐಎಂಎ ಮೂಲಕ ವಿವಿಧ ಸೇವಾ ಕಾರ್ಯಗಳು ಮತ್ತು ಆರೋಗ್ಯ ಮತ್ತಿತರ ಶಿಬಿರಗಳ ಆಯೋಜನೆ ಕುರಿತು ಚರ್ಚಿಸಲಾಗುತ್ತದೆ. ಗಂಗಾವತಿಯ ಸಮಸ್ಥ ವೈದ್ಯರು, ನಾಗರೀಕರು ಸಹಕಾರ ನೀಡಬೇಕು ಎಂದು ಕೊರಿದರು. ಈ ಸಂದರ್ಭದಲ್ಲಿ ಡಾ.ಮಲ್ಲನಗೌಡ, ಡಾ.ಮಧುಸೂದನ್, ಡಾ.ಸೂರಿರಾಜು ಮತ್ತಿತರು ಇದ್ದರು. 

News

ಬಿಎಸ್‌ಎನ್‌ಎಲ್: “ಫ್ರೀಡಂ ಪ್ಲಾನ್” ಸೇವೆ ಪಡೆದುಕೊಳ್ಳಿ

13 Aug 2025

ಬಳ್ಳಾರಿ,ಆ.13.ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ಬಳ್ಳಾರಿಯ ಸಿಜಿಎಂ, ಪಿಜಿಎಂ, ಡಿಜಿಎಂ ಮತ್ತು ಮಾರ್ಕೆಟಿಂಗ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಆಗಸ್ಟ್-2025 ತಿಂಗಳಿಗೆ ಸೀಮಿತ ಅವಧಿಗೆ ಮಾತ್ರ “ಫ್ರೀಡಂ ಪ್ಲಾನ್” ಮೂಲಕ ಗ್ರಾಹಕರು ರೂ.1/- ಗೆ 4ಜಿ ಸೇವೆ ಪಡೆಯಬಹುದು ಎಂದು ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ಬಳ್ಳಾರಿಯ ಉಪಪ್ರಧಾನ ವ್ಯವಸ್ಥಾಪಕರು ತಿಳಿಸಿದ್ದಾರೆ.

ಈ ಪ್ಲಾನ್ ನಲ್ಲಿ ಅನಿಯಮಿತ ಧ್ವನಿ ಕರೆಗಳು, ದಿನಕ್ಕೆ 2ಜಿಬಿ ಡೇಟಾ ಮತ್ತು 100 ಎಸ್‌ಎಂಎಸ್, ಉಚಿತ ಸಿಮ್ ಪಡೆಯಬಹುದು(30 ದಿನಗಳಿಗೆ ಮಾತ್ರ). ಈ ಸೌಲಭ್ಯವನ್ನು ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಎಲ್ಲಾ ಗ್ರಾಹಕ ಸೇವಾ ಕೇಂದ್ರಗಳಲ್ಲಿ ಪಡೆಯಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

News

ಮೆಕ್ಕೆಜೋಳ ಬೆಳೆಗೆ ಹೊಸ ಕಳೆನಾಶಕ "ಅಶಿತಕ"

11 Aug 2025

ಹಾವೇರಿ ಆ 12. ಭಾರತದ ಪ್ರಮುಖ ವೈವಿಧ್ಯಮಯ ಕೃಷಿ ಉದ್ಯಮಗಳಲ್ಲಿ ಒಂದಾಗಿರುವ ಗೋದ್ರೇಜ್ ಅಗ್ರೋವೆಟ್ ಲಿಮಿಟೆಡ್ (ಗೋದ್ರೇಜ್ ಅಗ್ರೋವೆಟ್), ವಿಶೇಷವಾಗಿ ಮೆಕ್ಕೆಜೋಳ ಬೆಳೆಗೆ ಹೊಸ ಕಳೆನಾಶಕವನ್ನು ಪರಿಚಯಿಸಿದೆ.


ಐಎಸ್‍ಕೆ ಜಪಾನ್ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿರುವ ಕಳೆನಾಶಕ 'ಅಶಿತಕ' ಭಾರತದಲ್ಲಿ ಮೆಕ್ಕೆಜೋಳ ರೈತರು ಎದುರಿಸುತ್ತಿರುವ ಪ್ರಮುಖ ಸವಾಲಾಗಿರುವ ಹುಲ್ಲು ಮತ್ತು ಅಗಲವಾದ ಎಲೆ ಹೊಂದಿರುವ ಕಳೆಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ಹೊಸ ಪರಿಹಾರವಾಗಿದೆ. ಮೆಕ್ಕೆಜೋಳ ಬೆಳೆಗೆ ಕಳೆ ಬಾಧೆ ಪ್ರಮುಖ ಸಮಸ್ಯೆಯಾಗಿದ್ದು, ಆರಂಭಿಕ ಬೆಳವಣಿಗೆಯ ಹಂತಗಳಲ್ಲಿ, ಅಶಿತಕವನ್ನು 2 ರಿಂದ 4 ಎಲೆಗಳ ಹಂತದಲ್ಲಿ ಅನ್ವಯಿಸಿದರೆ, ಕಳೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು. ಎಂದು ಗೋದ್ರೇಜ್ ಅಗ್ರೋವೆಟ್ ಬೆಳೆ ಸಂರಕ್ಷಣಾ ವಹಿವಾಟಿನ ಸಿಇಒ ರಾಜವೇಲು ಎನ್.ಕೆ. ಪ್ರಕಟಣೆಯಲ್ಲಿ ಹೇಳಿದ್ದಾರೆ.

ಮೆಕ್ಕೆಜೋಳದಲ್ಲಿ ಅಶಿತಕದ ಪರಿಣಾಮಕಾರಿ ಕಳೆ ನಿಯಂತ್ರಣವು ಬೆಳೆ-ಕಳೆ ಸ್ಪರ್ಧೆಯನ್ನು ನಿಯಂತ್ರಿಸುತ್ತದೆ. ಸೀಮಿತ ಪ್ರಮಾಣದಲ್ಲಿ ಮಣ್ಣಿನ ತೇವಾಂಶ ಮತ್ತು ಪೋಷಕಾಂಶಗಳು ಉತ್ತಮ ಬಳಕೆಗೆ ಚಾಲನೆ ನೀಡುತ್ತದೆ.


 ಹೂಬಿಡುವ ಮತ್ತು ಧಾನ್ಯ ಭರ್ತಿಯಾಗುವ ಮಹತ್ವದ ಹಂತಗಳಲ್ಲಿ ಸಸ್ಯದ ಆರೋಗ್ಯವನ್ನು ರಕ್ಷಿಸುತ್ತದೆ ಎಂದು ವಿವರಿಸಿದ್ದಾರೆ.

2 ರಿಂದ 4 ಎಲೆಗಳ ಹಂತದಲ್ಲಿ ಎಕರೆಗೆ 400 ಮಿಲಿ ದ್ರಾವಕದೊಂದಿಗೆ ಬಳಸಿ ಕಳೆಗಳನ್ನು ಮೊದಲೇ ನಿಯಂತ್ರಿಸಬಹುದಾಗಿದೆ. ಇದು ಹೆಚ್ಚು ಸ್ಥಿರವಾದ ಉತ್ಪಾದನೆ, ಉತ್ತಮ ಧಾನ್ಯದ ಗುಣಮಟ್ಟ ಮತ್ತು ವಿಶೇಷವಾಗಿ ಮಳೆಯಾಶ್ರಿತ ಪ್ರದೇಶಗಳಲ್ಲಿ ಏರಿಳಿತದಿಂದ ಕೂಡಿರುವ ಕೃಷಿ ಆದಾಯದ ವಿರುದ್ಧ ಬಲಿಷ್ಠ ರಕ್ಷಣೆ ಒದಗಿಸುತ್ತದೆ ಎಂದು ಹೇಳಿದ್ದಾರೆ.