


14th October 2025
ಗಂಗಾವತಿ.
ನಗರದ ಗದ್ವಾಲ್ ಕ್ಯಾಂಪಿನ ಚರ್ಚಿನಲ್ಲಿ 2020ರಲ್ಲಿ ನಡೆದಿದ್ದ ಬಾಲ್ಯ ವಿವಾಹ ಪ್ರಕರಣದಲ್ಲಿ ಚರ್ಚ್ ಫಾದರ್ ಸೇರಿ ಆರು ಜನ ಆರೋಪಿಗಳಿಗೆ ಎರಡು ವರ್ಷ ಜೈಲು ಶಿಕ್ಷೆ ಮತ್ತು ತಲಾ ಹತ್ತು ಸಾವಿರ ರೂಪಾಯಿಗಳ ದಂಡ ವಿಧಿಸಿ ಗಂಗಾವತಿಯ ಪ್ರಧಾನ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶ ನಾಗೇಶ ಪಾಟೀಲ್ ಅವರು ತೀರ್ಪು ಪ್ರಕಟಿಸಿ ಆದೇಶಿಸಿದ್ದಾರೆ.
ಅ.14 ರಂದು ಮಂಗಳವಾರ ತೀರ್ಪು ಪ್ರಕಟಿಸಿರುವ ಕುರಿತು ಸರಕಾರಿ ಸಹಾಯಕ ಅಭಿಯೋಜಕ ನಿರಂಜನಸ್ವಾಮಿ ಹಿರೇಮಠ ಮಾಹಿತಿ ನಿ೮ಡಿದ್ದಾರೆ. ಪ್ರಕರಣದ 4ನೇ ಆರೋಪಿ ಶ್ರೀರಾಮನಗರದ ಯೇಸು ಮತ್ತು 5ನೇ ಆರೋಪಿ ಶ್ರೀರಾಮನಗರದ ಶಾಂತಮ್ಮ ಗಂಡ ಯೇಸು ಅವರು ತಮ್ಮಅಪ್ರಾಪ್ತ 14 ವಯಸ್ಸಿನ ಮಗಳ ಮದುವೆಯನ್ನು 2ನೇ ಆರೋಪಿ ಗಂಗಾವತಿ ತಾಲೂಕಿನ ಗದ್ವಾಲ್ ಕ್ಯಾಂಪಿನ ಆನಂದ ತಂದೆ ಏರುಮಿಚನೊಂದಿಗೆ 1ನೇ ಆರೋಪಿ ಗದ್ವಾಲ್ಕ್ಯಾಂಪಿನ ಕುರುಪಣ್ಣ ತಂದೆ ಆನಂದನೊಂದಿಗೆ ಗಂಗಾವತಿ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಬರುವ ಗದ್ವಾಲ್ ಕ್ಯಾಂಪ್ ಗ್ರಾಮದ ಚರ್ಚಿನಲ್ಲಿ ದಿನಾಂಕ 22-05-2020 ರಂದು ಚರ್ಚ್ ಫಾದರ್ 6ನೇ ಆರೋಪಿ ಅಬ್ರಾಹಿಂ ನೇತೃತ್ವದಲ್ಲಿ ಬಾಲ್ಯ ವಿವಾಹವನ್ನು ನಡೆಸಿದ್ದಾರೆ. ಆರೋಪಿತರೆಲ್ಲರೂ ಕಲಂ 09,10,11 ಬಾಲ್ಯ ವಿವಾಹ ನಿಷೇಧ ಕಾಯ್ದೆ 2006ರ ಅಡಿಯಲ್ಲಿ ಅಪರಾಧ ಮಾಡಿರುವ ಕುರಿತು ಅಂದು ಕರ್ತವ್ಯದಲ್ಲಿದ್ದ ಗಂಗಾವತಿ ಠಾಣೆಯ ಎಸ್.ಐ ದೊಡ್ಡಪ್ಪ ಜೆ.ಪಿ ಅವರು ಸಾಕ್ಷಿ ಸಮೇತ ಆರೋಪಿತರ ವಿರುದ್ಧ ದೋಷಾರೋಪಣ ಪತ್ರವನ್ನು ಸಲ್ಲಿಸಿದ್ದರು. ನಂತರ ಪ್ರಕರಣದ ಸವಿಸ್ತಾರ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ನಾಗೇಶ ಪಾಟೀಲ್ ಪ್ರಕರಣದ ಆರೋಪಿ 1) ಕುರಪಣ್ಣ ತಂದೆ ಆನಂದ ಸಾಃ ಗಾದ್ವಾಲ ಕ್ಯಾಂಪ್ ತಾಃ ಗಂಗಾವತಿ ಜಿಃ ಕೊಪ್ಪಳ 2) ಆನಂದ ತಂದೆ ಏರಮಿಚಿಯಾ ಸಾಃ ಗಾದ್ವಾಲ ಕ್ಯಾಂಪ್ ತಾಃ ಗಂಗಾವತಿ ಜಿಃ ಕೊಪ್ಪಳ 3) ಆಶಿರ್ವಾದಮ್ಮ ಗಂಡ ಆನಂದ ಸಾಃ ಗಾದ್ವಾಲ ಕ್ಯಾಂಪ್ ತಾಃ ಗಂಗಾವತಿ 4) ಯೇಸು ಸಾಃ ಶ್ರೀರಾಮನಗರ 5) ಶಾಂತಮ್ಮ ಗಂಡ ಯೇಸು ಸಾಃ ಶ್ರೀರಾಮನಗರ 6) ಅಂಬ್ರಾಹಿಂ ಡಿ. ತಂದೆ ಬಡಗಪ್ಪ ದಾದೆಪಾಲ್, ಸಾಃ ಗದ್ವಾಲ್ ಕ್ಯಾಂಪ್ ತಾಃ ಗಂಗಾವತಿ ಇವರನ್ನು ದೋಷಿಯೆಂದು ಪರಿಗಣಿ ತೀರ್ಪು ನೀಡಿದೆ. ಆರೋಪಿತರಿಗೆ ಬಾಲ್ಯ ವಿವಾಹ ನಿಷೇಧ ಕಾಯ್ದೆ ಕಲಂ 09,10 ಮತ್ತು 11ರ ಅಡಿಯಲ್ಲಿ ಆರೋಪಿತರಲ್ಲರಿಗೂ 2 ವರ್ಷಗಳ ಕಾಲ ಸೆರೆಮನೆವಾಸ ಶಿಕ್ಷೆ ಮತ್ತು ತಲಾ ರೂ.10,000 ಸಾವಿರ ದಂಡ ವಿಧಿಸಿ ಆದೇಶಿಸಿದ್ದಾರೆ. ಪ್ರಕರಣವನ್ನು ನ್ಯಾಯಾಲಯದ ಮುಂದೆ ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ನಿರಂಜನಸ್ವಾಮಿ ಡಾ:ದೇವಯ್ಯ ಸ್ವಾಮಿ ಹಿರೇಮಠ ಇವರು ವಾದ ಮಂಡಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿಗಳಾದ ಆಂಜನೇಯ, ವೆಂಕಟೇಶ, ಶ್ರೀಶೈಲ್ ಅವರುಗಳು ಪ್ರಕರಣದ ವಿಚಾರಣೆಯ ಸಮಯದಲ್ಲಿ ಸಾಕ್ಷಿಗಳನ್ನು ಸಮಯಕ್ಕೆ ಸರಿಯಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಸಹಕಾರ ನೀಡಿದ್ದಾರೆ.
ಬಾಲ್ಯ ವಿವಾಹ ನಿಷೇಧ ಕಾಯ್ದೆ ಇದ್ದರು ಸಹ ಗಂಗಾವತಿ ತಾಲೂಕ ಸೇರಿದಂತೆ ಜಿಲ್ಲೆಯಾದ್ಯಂತ ಹೆಚ್ಚು ಬಾಲ್ಯ ವಿವಾಹಗಳು ನಿರಂತರವಾಗಿ ನಡೆಯುತ್ತವೆ. ಆದರೆ ಇಂದು ಹೊರಬಿದ್ದಿರುವ ನ್ಯಾಯಾಧೀಶರ ತೀರ್ಪು ಬಾಲ್ಯ ವಿವಾಹ ನಡೆಸುವ ಮತ್ತು ಅದರಲ್ಲಿ ಭಾಗಿಯಾಗುವ ವ್ಯಕ್ತಿಗಳಿಗೆ ಎಚ್ಚರಿಕೆಯ ಗಂಟೆಯಾಗಿದ್ದು, ಅಪರಾಧಿಗಳಿಗೆ ತಡವಾದರೂ ಸಹ ನ್ಯಾಯಾಲಯದಿಂದ ಶಿಕ್ಷೆ ನಿಶ್ಚಿತ ಎಂಬ ಸಂದೇಶ ಸಮಾಜಕ್ಕೆ ರವಾನೆಯಾಗಿದೆ. ಹೀಗಾಗಿ ಜಿಲ್ಲೆಯ ಜನರು ಬಾಲ್ಯ ವಿವಾಹಗಳ ಬಗ್ಗೆ ಈ ತೀರ್ಪಿನಿಂದ ಜಾಗೃತರಾಬೇಕು ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಅಭಿಪ್ರಾಯ ವ್ಯಕ್ತವಾಗುತ್ತಿದೆ.

28th September 2025
ಕಾರಟಗಿ
ಪಟ್ಟಣದ ಸೌಂದರ್ಯೀಕರಣಕ್ಕೆ ತಮ್ಮದೆ ಆದ ರೀತಿಯಲ್ಲಿ ಕಾರ್ಯ ನಿರ್ವಹಿಸುವ ಪುರಸಭೆಯ ಸಮಸ್ತ ಪೌರ ಕಾರ್ಮಿಕರಿಗೆ ವಸತಿ ಸೌಲಭ್ಯ ಕಲ್ಪಿಸಲು ನಾನು ಪ್ರಮಾಣಿಕ ಪ್ರಯತ್ನ ಮಾಡುತ್ತಿದ್ದೆನೆ. 15 ಎಕರೆ ಭೂಮಿಯಲ್ಲಿ ಎರಡುವರೆ ಎಕರೆ ಭೂಮಿಯನ್ನು ಪೌರ ಕಾರ್ಮಿಕ ವಸತಿಗೆ ಮಿಸಲಿರಿಸುತ್ತೇನೆ. ಮತ್ತು ಕಾರಟಗಿ ಪುರಸಭೆಯನ್ನು ನಗರಸಭೆಯನ್ನಾಗಿ ಮಾಡಬೇಕೆಂಬ ಜನರ ಬೇಡಿಕೆಯ ಪ್ರಸ್ತಾವನೆಯನ್ನು ಸಚಿವ ಸಂಪುಟದಲ್ಲಿ ತರುತ್ತೇನೆ. ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.
ಜಿಲ್ಲಾಡಳಿತ ಹಾಗೂ ನಗರಾಭಿವೃದ್ಧಿ ಕೋಶ ಕೊಪ್ಪಳ, ಪುರಸಭೆ ಕಾರ್ಯಾಲಯ ಕಾರಟಗಿ, ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸಂಘ ಕಾರಟಗಿ ತಾಲ್ಲೂಕು ಘಟಕ ಸಂಯುಕ್ತಾಶ್ರಯದಲ್ಲಿ ಪದ್ಮಶ್ರೀ ಕನ್ವೆನ್ಷನ್ ಹಾಲ್ ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ನಾನು ಮೊದಕ ಭಾರಿ ಶಾಸಕನಾಗಿ ಸಚಿವನಾದ ನಂತರ ಗ್ರಾಪಂ ನಿಂದ ಕಾರಟಗಿ ಪುರಸಭೆಯನ್ನಾಗಿ ಮೇಲ್ದರ್ಜೆಗೆರಿಸಿದೆ. ಪುರಸಭೆ ನೌಕರರ ಖಾಯಾಂತಿಗೂ ನಾನು ವಿಶೇಷ ಪ್ರಯತ್ನ ಮಾಡಿದ್ದೇನೆ. ನೇಮಕಾತಿಯಲ್ಲು ಸಹ ಈಗಾಗಲೆ ಸಿಎಂರೊಂದಿಗೆ ಮಾತನಾಡಿದ್ದು, ಶೀರ್ಘ ಈ ಕೆಲಸವನ್ನು ಪೂರ್ಣಗೊಳಿಸು ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ. ಜೊತೆಗೆ ಇಲ್ಲಿನ ಪುರಭೆ ನಗರಸಭೆ ಮಾಡಲು ನಾನು ಸಹ ಉತ್ಸುಕನಾಗಿದ್ದೇನೆ. ಪ್ರಸ್ತಾವನೆಯನ್ನು ಸರಕಾರದ ಸಚಿವ ಸಂಪುಟದಲ್ಲಿ ಅನುಮೊದನೆಗೆ ಮುಂದಾಗುತ್ತೇನೆ. ನಗರಸಭೆಯಾದರೆ ಕಾರಟಗಿ ಜಿಲ್ಲೆಯ ಸದೃಢ ತಾಲೂಕ ಆಗುತ್ತದೆ. ಜನರ ಆದಯ ಹೆಚ್ಚಳಕ್ಕೂ ಪೂರಕವಾಗುತ್ತದೆ. ಊರಿನ ಅಭಿವೃದ್ದಿಗಾಗಿ ಜನರು ಬದಲಾವಣೆಗೆ ಹೊಂದಿಕೊಳ್ಳಬೇಕು. ನಮ್ಮ ಸರಕಾರ ಅಭಿವೃದ್ದಿಗೆ ಹೆಚ್ಚು ಒತ್ತು ಕೊಡುತ್ತದೆ. ಕಾರಟಗಿ ತಾಲೂಕಿಗೆ ಹೊಸ ಹೊಸ ಯೋಜನೆಗಳನ್ನು ತರುವ ಪ್ರಯತ್ನ ಮಾಡುತ್ತಿದ್ದೇನೆ ಎಂದರು.
ಪುರಸಭೆ ಅಧ್ಯಕ್ಷೆ ಅಧ್ಯಕ್ಷತೆ ರೇಖಾ ಆನೆಹೊಸರು ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೌರ ಕಾರ್ಮಿಕರ ಬಗ್ಗೆ ನಿವೃತ ಶಿಕ್ಷಕ ಗುರುಬಸಪ್ಪ ಪಟ್ಟಣಶೆಟ್ಟಿ ಉಪನ್ಯಾಸ ನೀಡಿದರು. ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಈಶಪ್ಪ ಇಟ್ಟಂಗಿ ಮಾತನಾಡಿ, ಪೌರಕಾರ್ಮಿಕರಾಗಿ ನಿವೇಶನ, ಪುರಸಭೆ ನೂತನ ಕಟ್ಟಡಕ್ಕಾಗಿ ಅನುಧಾನ ಹಾಗೂ ಪುರಸಭೆಗೆ ಅನುದಾನ ನೀಡುವಂತೆ ಸಚಿವರಲ್ಲು ಮನವಿ.ಮಾಡಿದರು.
ಪೌರ ಕಾರ್ಮಿಕ ಸೇವ ನೌಕರ ಸಂಘದ ಅದ್ಯಕ್ಷ ಸಣ್ಣ ಈರಪ್ಪ ಚೌಡ್ಕಿ ಮಾತನಾಡಿ ಪೌರ ಕಾರ್ಮುಕರ ಬೇಡಿಕೆ ಈಡೇರಿಸಬೇಕು ಎಂದು ಸಚಿವರಿಗೆ ಮನವಿ ನೀಡಿದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ದೇವಮ್ಮ ಗಂಗಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಎಚ್. ಈಶಪ್ಪ, ಸದಸ್ಯರಾದ ಹಿರೇಬಸಪ್ಪ ಸಜ್ಜನ, ಸೋಮಶೇಖರ್ ಬೇರಿಗ, ದೊಡ್ಡಬಸವರಾಜ ಬೂದಿ, ಮಂಜುನಾಥ್ ಮೇಗೂರು, ರಾಮಣ್ಣ, ಪಕೀರಪ್ಪ ನಾಯಕ, ಆನಂದ ಮ್ಯಾಗಲಮನಿ, ಹನುಮಂತರೆಡ್ಡಿ, ಪೌರ ಕಾರ್ಮಿಕರ ಸಂಘದ ಸಣ್ಣ ವೀರಪ್ಪ ಚೌಡ್ಕಿ,
ಸರಕಾರಿ ನೌಕರರ ಸಂಘದ ಅಧ್ಯಕ್ಷ ಹನುಮಂತಪ್ಪ ತೊಂಡಿಹಾಳ, ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ್, ಉಪಾಧ್ಯಕ್ಷ ನಾಗರಾಜ ಅರಳಿ,
ರೈಸ್ ಮಿಲ್ ಸಂಘದ ಅಧ್ಯಕ್ಷ ಎನ್. ಶ್ರೀನಿವಾಸ್, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಶರಣೆಗೌಡ ಮಾಲಿ ಪಾಟೀಲ್, ಮುಖಂಡರಾದ ಬಸವರಾಜ್ ಎತ್ತಿನಮನಿ, ಜಮಾದಗ್ನಿ ಚೌಡಕಿ, ನಾಗರಾಜ ಈಡಿಗೇರ್, ಶರಣಪ್ಪ ಪರಕಿ, ರಾಜು ದೇವಿಕ್ಯಾಂಪ್, ಮರಿಯಪ್ಪ ಸಾಲೋಣಿ, ಮಹಿಬೂಬ್ ಮೇಸ್ತ್ರಿ, ಧನಂಜಯ ಎಲಿಗಾರ್, ಶಕುಂತಲಾ, ರೇಣುಕಮ್ಮ ನಾಯಕ, ಗಾಯಕ ದ್ಯಾಮೇಶ್, ಡಾ. ಪ್ರಿಯಾಂಕ ಪಟ್ಟಣ ಶೆಟ್ಟಿ, ಡಾ. ನಾಗರಾಜ, ಸರಿಗಮಪ ಕಾರ್ಯಕ್ರಮದಲ್ಲಿ ಭಾಗವಹಿಸಿದ ದ್ಯಾಮೇಶ್ ಸೇರಿ ಇನ್ನಿತರರು ಇದ್ದರು.
ಬಾಕ್ಸ್.
ಕಾರಟಗಿ ಪುರಸಭೆ ನಗರಸಭೆನ್ನಾಗಿಸಲು ಪ್ರಯತ್
ಕೊಪ್ಪಳ ಜಿಲ್ಲೆಯ ಪ್ರಮುಖ ಪಟ್ಟಣವಾಗಿರುವ ಕಾರಟಗಿಯ ಸರ್ವಾಂಗೀಣ ಅಭಿವೃದ್ದಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಈ ದಿಸೆಯಲ್ಲಿ ಇಲ್ಲಿನ ಪುರಸಭೆಯನ್ನು ನಗರಸಭೆಯನ್ನಾಗಿಸುವ ಕೆಲಸ ಪ್ರಮಾಣಿಕವಾಗಿ ಮಾಡುತ್ತೇನೆ. ಪ್ರಸ್ತಾವನೆಯನ್ನು ಸಚಿವ ಸಂಪುಟದಲ್ಲಿ ಅನುಮೊದನೆ ಪಡೆಯುವ ಕೆಲಸ ಮಾಡುತ್ತೇನೆ. ನಗರಸಭೆಯಾದರೆ ಆದಾಯ ಹೆಚ್ಚುತ್ತದಲ್ಲದೇ ಬೃಹತ್ ಯೋಜನೆಗಳು ಮಂಜೂರಾಗುತ್ತವೆ. ಅಭಿವೃದ್ದಿ ಕಾರ್ಯದಲ್ಲಿ ಜನರು ವೈಯಕ್ತಿಕ ಹಿತಾಶಕ್ತಿ ಬಿಡಬೇಕು. ಊರಿನ ಹಿತಕ್ಕಾಗಿ ಸಹಕಾರ ನೀಡಬೇಕು.
ಶಿವರಾಜ ತಂಗಡಗಿ, ಜಿಲ್ಲಾ ಉಸ್ತುವಾರಿ ಸಚಿವರು, ಕೊಪ್ಪಳ.

25th September 2025
ಕೊಪ್ಪಳ.
ರಾಜ್ಯ ಸರಕಾರ ಕಳೆದ ಮೂರು ದಿನಗಳಿಂದ ನಡೆಸುತ್ತಿರುವ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಗೆ ಮನೆ ಬಂದವರಿಗೆ ಕುಕನೂರಿನ ಮಂಗಳೂರು ಗ್ರಾಮದ ಯುವಕ ರಾಮಣ್ಣ ನಿರಾಕರಿಸಿ ಪತ್ರ ಬರೆದು ಕೊಡುವ ಮೂಲಕ ಗಣತಿದಾರರಿಗೆ ಶಾಖ್ ನೀಡಿದ್ದಾರೆ ಮತ್ತು ಗಣತಿದಾರರು ಕೇಳುವ ೬೦ ಪ್ರಶ್ನೇಗಳಲ್ಲಿ ವೈಯಕ್ತಿ ವಿವರ, ಜಾತಿ ಮತ್ತಿತರ ಸಂಗತಿಗಳು ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಗುರುವಾರ ಘಟನೆ ನಡೆದಿದೆ. ಹಿಂದುಳಿದ ಆಯೋಗದಿಂದ ನಡೆಯುತ್ತಿರುವ ಸಮೀಕ್ಷೆಯಲ್ಲಿ ಗಣತಿದಾರರು ಆಗಮಿಸಿದ್ದ ಸಂದರ್ಭದಲ್ಲಿ ಯುವಕ ರಾಮಣ್ಣ ಹಲವು ಪ್ರಶ್ನೇಗಳನ್ನು ಕೇಳುವುದಕ್ಕೆ ವಿರೋಧಿಸಿದ್ದಾರೆ. ಅನ್ಯ ವ್ಯಕ್ತಿಗಳು ಬಂದು ಜಾತಿ ಕೇಳುವುದು ಸುಪ್ರೀಂಕೋರ್ಟ್ ಆದೇಶ ಉಲ್ಲಂಘನೆಯಾಗುತ್ತದೆ. ಮತ್ತು ಮನೆಯಲ್ಲಿ ವಿಧವೆಯರು ಇದ್ದಾರೆಯೇ ಎಂಬ ಪ್ರಶ್ನೇಯಿಂದ ಮಹಿಳೆಯರಿಗೆ ತೀವ್ರ ಮುಜುಗರವಾಗುತ್ತಿದೆ. ರಾಜ್ಯ ಸರಕಾರ ಅವೈಜ್ಞಾನಿವಾಗಿ ಮತ್ತು ದೋಷಪೂರಿತವಾಗಿ ೬೦ ಪ್ರಶ್ನೇಗಳನ್ನು ಕೇಳುವುದು ಸರಿಯಲ್ಲ. ಕಾಲಂ ೧೨ರಲ್ಲಿ ಜಾತಿ ಮತ್ತು ಉಪ ಜಾತಿ ನೋಂದಣಿ ಮಾಡಬಾರದು. ಮನೆಗಳಲ್ಲಿ ಶೌಚಾಲಯ, ದೀಪಗಳು ಮತ್ತಿತರ ಅಸಂಬದ್ಧವಾದ ಪ್ರಶ್ನೇಗಳಿರುವುದರಿಂದ ನಾನು ಇದನ್ನು ವಿರೋಧಿಸಿ ಸಮೀಕ್ಷೆಯಲ್ಲಿ ಮಾಹಿತಿ ಕೊಡುವುದಿಲ್ಲ ಎಂದು ಸಮೀಕ್ಷೆಗೆ ಬಂದವರಿಗೆ ಪತ್ರ ನೀಡಿದ್ದೇನೆ. ರಾಜ್ಯ ಸರಕಾರ ಇದನ್ನು ಪರಿಶೀಲಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

24th September 2025
ಗಂಗಾವತಿ.
2023 ರಲ್ಲಿ ನಗರದ ಸಾರ್ವಜನಿಕ ಸರಕಾರಿ ಉಪ ವಿಭಾಗ ಆಸ್ಪತ್ರೆಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣದಲ್ಲಿ ಗಂಗಾವತಿ ಪ್ರಧಾನ ಸಿವಿಲ್ ಜೆ.ಎಂ.ಎಫ್ .ಸಿ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯಲ್ಲಿ ನಾಲ್ಕು ಜನ ಆರೋಪಿಗಳಾದ ಅಬ್ದುಲ್ ಸಮೀರ್, ಮಂಜುನಾಥ, ಅಲ್ತಾಫ್ ಮತ್ತು ಖಾಜಾಪಾಷ ಅವರು ದೋಷಿಗಳೆಂದು ಸಾಬೀತುಪಡಿಸಿ ಮೂರು ವರ್ಷ ಸೆರೆಮನೆ ವಾಸ ಮತ್ತು ರೂ.5000 ದಂಡ ವಿಧಿಸಿ ನ್ಯಾಯಾಧೀಶ ನಾಗೇಶ ಪಾಟೀಲ್ ಅವರು ತೀರ್ಪು ನೀಡಿದ್ದಾರೆ.
ಬುಧವಾರ ಸೆ.24 ರಂದು ತೀರ್ಪು ಪ್ರಕಟವಾಗಿದೆ. ದಿನಾಂಕ:- 18-08-2023 ರಂದು ಮಧ್ಯಾಹ್ನ 2-00 ಗಂಟೆಯ ಸುಮಾರಿಗೆ ಹಾಗೂ ಅದೇ ದಿನದಂದು ಸಂಜೆ 6-00 ಗಂಟೆಯ ಸುಮಾರಿಗೆ ಗಂಗಾವತಿ ನಗರದ ಸರಕಾರಿ ಉಪ-ವಿಭಾಗ ಆಸ್ಪತ್ರೆಯ ಕಂಪೌಂಡ್ ಒಳಗೆ ಪ್ರವೇಶ ಮಾಡಿ ಆಸ್ಪತ್ರೆಯಲ್ಲಿನ 1) ಮಾಡ್ಯುಲರ್ ಶಸ್ತ್ರ ಚಿಕಿತ್ಸೆ ಕೊಠಡಿಯ ಎ.ಸಿಂ ಕಾಪರ್ ಪೈಪ್ ಲೈನ್ ರೂ. 40.000=00, 2) ಮುಖ್ಯ ವೈದ್ಯಾಧಿಕಾರಿ ಕೊಠಡಿಯ 02 ಟನ್ ಎ.ಸಿಯ 04 Mtr ಕಾಪರ್ ಪೈಪ್ ಲೈನ್ ರೂ.6,000=00 ಬೆಲೆಯ, 3) ಲಿಕ್ವಿಡ್ ಬ್ಯಾಂಕನ 42 MM ಕಾಪರ್ ಪೈಪ ಲೈನ್ 40 ಫಿಟ್ ಉದ್ದದ ರೂ.50,000-00 ಬೆಲೆಯ, 4) ಆಕ್ಸಿಜನ್ ಜನರೇಷನ್ ಪ್ಲಾಂಟ್ಸ 42 MM ಕಾಪರ್ ಪೈಪ್ ಲೈನ್ 40 ಫಿಟ್ ಉದ್ದ ರೂ. 50,000-00 ಬೆಲೆಯ, ಮತ್ತು ಆಕ್ಸಿಜನ್ ಮ್ಯಾನಿಪೋಲ್ಡ್ ಕೊಠಡಿಯಲ್ಲಿ ಕಾಪರ್ ಟೆಲ್ ಪೈಪುಗಳು ರೂ 25,000-00 ಬೆಲೆಯ ಒಟ್ಟು 1,71,000-00 ರೂಪಾಯಿ ಬೆಲೆ ಬಾಳುವ ವಸ್ತಗಳನ್ನು ಕಳ್ಳತನ ಮಾಡಿ ತೆಗೆದುಕೊಂಡು ಹೋಗಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತರ ವಿರುದ್ಧ ಕಲಂ 380 ಐಪಿಸಿ ಅಡಿ ಅಪರಾಧ ಕಂಡುಬಂದಿದ್ದರಿಂದ ದೋಷಾರೋಪಣ ಪಟ್ಟಿಯನ್ನು ಅಂದಿನ ತನಿಖಾಧಿಕಾರಿಯಾದ ಗಂಗಾವತಿ ನಗರ ಪೊಲೀಸ್ ಠಾಣೆಯ ಕಾಮಣ್ಣ ಅವರು ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ನಂತರ ಪ್ರಕರಣದ ಸವಿಸ್ತಾರ ವಿಚಾರಣೆ ನಡೆಸಿದ ನ್ಯಾಯಾಧೀಶರು ಶಿಕ್ಷೆಯನ್ನು ವಿಧಿಸಿ ಆದೇಶಿಸಿದ್ದಾರೆ.
ಪ್ರಕರಣವನ್ನು ನ್ಯಾಯಾಲಯದ ಮುಂದೆ ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ನಿರಂಜನಸ್ವಾಮಿ ಹಿರೇಮಠ ಅವರು ವಾದ ಮಂಡಿಸಿದ್ದರು. ಗಂಗಾವತಿ ನಗರ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿಯವರಾದ ಶುಭಾಷ್ , ಯಮನೂರಪ್ಪ, ಬೀಮಣ್ಣ, ಯಲ್ಲರೆಡ್ಡಿ ಪ್ರಕರಣದ ವಿಚಾರಣೆಯ ಸಮಯದಲ್ಲಿ ಸಾಕ್ಷಿಗಳನ್ನು ಸಮಯಕ್ಕೆ ಸರಿಯಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು ಎಂದು ಸರಕಾರಿ ಅಭಿಯೋಜಕ ನಿರಂಜನಸ್ವಾಮಿ ಹಿರೇಮಠ ತಿಳಿಸಿದ್ದಾರೆ.

18th September 2025
ಗಂಗಾವತಿ.
ತಾಲೂಕಿನ ಆನೆಗೊಂದಿ ಸಮೀಪದ ತುಂಗಭದ್ರಾ ನದಿ ತಟದಲ್ಲಿರುವ ನವ ವೃಂದಾವನಗಡ್ಡೆಯಲ್ಲಿರುವ ಒಂಬತ್ತು ಯತಿಗಳ ವೃಂದಾವನಗಳಿಗೆ ಯತಿ ದ್ವಾದಶಿ ಕಾರ್ಯಕ್ರಮ ನಡೆಯಿತು.
ಗುರುವಾರ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳವರ ಮಠದ ಪೀಠಾಧಿಪತಿ ಶ್ರೀ ಶ್ರೀಸುಬುಧೇಂದ್ರ ತೀರ್ಥಶ್ರೀಪಾದಂಗಳವರ ಆದೇಶದಂತೆ ಆನೆಗೊಂದಿ ರಾಯರ ಮಠದ ಪೂರ್ವೀಕ ಗುರುಗಳ ಮೂಲ ವೃಂದಾವನಗಳಿಗೆ ಅತ್ಯಂತ ವಿಜೃಂಭಣೆಯಿಂದ ಆಚರಿಸಾಲಾಯಿತು. ಮೂಲಬೃಂದಾವನಗಳಿಗೆ ನಿರ್ಮಲ್ಯ ಅಭಿಷೇಕ ಮಹಾಪಂಚಾಮೃತಾಭಿಷೇಕ, ವಿಶೇಷ ಪುಷ್ಪಾಲಂಕಾರ, ವಸ್ತ್ರಲಂಕಾರ ಹಸ್ತೋದಕ ನೆರವೇರಿದವು. ನಂತರ ಭಕ್ತರಿಗೆ ತೀರ್ಥಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಮಂತ್ರಾಲಯ ಮಠದಿಂದ ವಿದ್ವಾಂಸ ಸುನಾದಿ ಹನುಮೇಶ ಆಚಾರ್ ನವೃಂದಾವನ ಯತಿಗಳ ಕುರಿತು ಮಾತನಾಡಿದರು. ಮಂತ್ರಾಲಯದ ರಾಘವೇಂದ್ರ ಆಚಾರ್, ಪ್ರಲ್ಲಾದಾಚಾರ್, ಲಕ್ಷ್ಮಿಕಾಂತ್ ಆಚಾರ್ , ಸಂಜೀವ್ ಕುಲಕರ್ಣಿ ಇಡುಪನೂರ್, ಆನೆಗುಂದಿ ಶ್ರೀ ಮಠದ ಶ್ರೀನಿವಾಸ್ ಆಚಾರ್, ಅರ್ಚಕ ನರಸಿಂಹಾಚಾರ್, ವಾದಿರಾಜ ದೇಸಾಯಿ ಗೋತಗಿ, ಅರವಿಂದ ಆಚರ್, ಆನೆಗುಂದಿ ಶ್ರೀಪಾದರಾಜ ಮಠದ ವ್ಯವಸ್ಥಾಪಕ ವಿಜಯ ದೇಸಾಯಿ, ಆನೆಗುಂದಿ ಶಾಖಾಮಠ ವ್ಯವಸ್ಥಾಪಕ ಸುಮಂತ್ ಕುಲಕರ್ಣಿ ಮತ್ತಿತರು ಇದ್ದರು.

13th September 2025
ಗಂಗಾವತಿ.
ಗಣಪತಿ ಮೆರವಣಿಗೆ ಡಿಜೆ ಹಾಕುವ ಸಂಬಂಧ ಪೊಲೀಸರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಆದರೂ ಕೆಲವು ಗಣಪತಿ ಸಮಿತಿ ಯುವಕರು ಡಿಜೆ ಸಂಗೀತ ಮುಂದುವರೆಸಿದ್ದರಿಂದ ಪೊಲೀಸರು
ಲಾಠಿ ಏಟು ನೀಡಿದ್ದರಿಂದ ಪೊಲೀಸರ ವಿರುದ್ಧ ಯುವಕರು ಆಕ್ರೋಶ ವ್ಯಕ್ತಪಡಿಸಿರುವ ಘಟನೆ
ಗಂಗಾವತಿ ನಗರದಲ್ಲಿ ನಡೆದಿದೆ.
ಸೆ.೧೨ ರಂದು ೧೫ನೇ ದಿನದದ ಗಣಪತಿ ವಿಸರ್ಜನೆ ನಡೆಯಿತುತು. ಒಂದೇ ದಿನ ನಗರದ ವಿವಿಧ
ಕಡೆ ೧೫ಕ್ಕೂ ಹೆಚ್ಚು ಗಣಪತಿ ವಿಸರ್ಜನೆ ಮೆರವಣಿಗೆ ನಡೆಯಿತು. ಎಲ್ಲಾ ಗಣಪತಿ
ಮೆರವಣಿಗೆಯಲ್ಲೂ ಡಿಜೆಯೊಂದಿಗೆ ಯುವಕರು ಕುಣಿಯುತ್ತಾ ಸಂಭ್ರಮಾಚರಣೆ ಮಾಡಿದ್ದಾರೆ.
ರಾತ್ರಿ ೧೧ ಗಂಟೆಗೆ ಎಲ್ಲಾ ಮೆರವಣಿಗೆ ಬಂದ್ ಮಾಡಬೇಕೆಂದು ಪೊಲೀಸರು ಮೊದಲೇ ಎಲ್ಲಾ
ಸಮಿತಿಯವರಿಗೆ ಸೂಚನೆ ನೀಡಿದ್ದಾರೆ. ಆದರೆ ಹತ್ತಾರು ಗಣಪತಿ ಮೆರವಣಿಗೆ ಒಂದೇ
ಸಮಯದಲ್ಲಿ ನಡೆಯುತ್ತಿರುವುದರಿಂದ ಗಾಂಧಿ ವೃತ್ತಕ್ಕೆ ಬರುವಷ್ಟರಲ್ಲಿ ರಾತ್ರಿ ೧
ಗಂಟೆಯಾಗಿದೆ. ಈ ಸಮಯದಲ್ಲಿ ಕೂಡಾ ಕೆಲ ಯುವಕರು ಡಿಜೆ ಸೌಂಡ್ ಹಾಕಲು ಮುಂದಾದಾಗ
ಪೊಲೀಸ್ ಅಧಿಕಾರಿಗಳು ಅಡ್ಡಿಪಡಿಸಿದ್ದಾರೆ. ಆದರೆ ಯುವಕರು ಇದಕ್ಕೆ ಸೊಪ್ಪು ಹಾಕದ
ಪರಿಣಾಮ ಪೊಲೀಸರು ಲಾಠಿಯಿಂದ ಚದುರಿಸುವ ಕೆಲಸ ಮಾಡಿದ್ದಾರೆ. ಗಾಂಧಿವೃತ್ತದಲ್ಲಿ
ಪಂಪಾನಗರದಲ್ಲಿನ ಗಣಪತಿ ಸಮಿತಿ ಯುವಕನೊಬ್ಬನಿಗೆ ಲಾಠಿ ಏಟು ಜೋರಾಗಿ ಬಿದ್ದಿದ್ದು,
ಅದರ ಫೋಟೋ ಈಗ ಯುವಕರು ಹಂಚಿಕೊಳ್ಳುತ್ತಿದ್ದಾರೆ. ಮತ್ತು ಅದೇ ರೀತಿ ಇನ್ನೊಂದು
ಗಣಪತಿ ಸಮಿತಿಯ ಯುವಕ ದಲಿತ ಗಣಪತಿ ಮೆರವಣಿಗೆ ಎನ್ನುವ ಕಾರಣಕ್ಕೆ ನಮಗೆ
ಅಡ್ಡಿಪಡಿಸುತ್ತಿದ್ದಾರೆ ಎಂದು ಮಾತನಾಡಿರುವ ವಿಡಿಯೋ ಈಗ ವೈರಲ್ ಆಗಿದೆ. ರಾತ್ರಿ
ಯಾವುದೇ ಗೊಂದಲವಿಲ್ಲದೇ ಎಲ್ಲರು ಮನೆಗೆ ತೆರಳಿದ್ದಾರೆ. ಗಣಪತಿ ಮೆರವಣಿಗೆ ಶಾಂತವಾಗಿ
ನಡೆದಿದೆಯಾದರೂ ಕೆಲವೊಂದು ಕಡೆ ಪೊಲೀಸರು ಯುವಕರಿಗೆ ಆಕ್ಷೇಪ ವ್ಯಕ್ತಪಡಿಸಿರುವ ಸಂಗತಿ
ಶನಿವಾರ ಬೆಳೆಗ್ಗೆ ಸುದ್ದಿಯಾಗುತ್ತಿದೆ. ಈ ವಿಷಯ ಈಗ ಎಲ್ಲೆಡೆ ಹರಿದಾಡುತ್ತಿದೆ.
ಪೊಲೀಸರು ಗಣಪತಿ ಮೆರವಣಿಗೆ ಆಕ್ಷೇಪ ವ್ಯಕ್ತಪಡಿಸಿದರೂ ನಮ್ಮ ಪರವಾಗಿ ಯಾವುದೇ
ಜನನಾಯಕರು ಅಥವಾ ಹಿಂದುಪರ ಸಂಘಟನೆ ಮುಖಂಡರೊಂದು ಬಂದಿಲ್ಲ ಎಂದು ಕೆಲವು ಯುವಕರು
ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಗಂಗಾವತಿಯಲ್ಲಿ ಗಣಪತಿ ವಿಸರ್ಜನೆ
ಮೆರವಣಿಗೆ ಶಾಂತತೆಯಿಂದ ನಡೆಸರು ಸಾಕಷ್ಟು ಶ್ರಮಿಸಿದ್ದಾರೆ. ಕೆಲವೊಂದು ಕಡೆ ಸಣ್ಣ
ಪುಟ್ಟ ಮಾತಿನ ಚಕಮಕಿ ನಡೆದಿದ್ದರೂ ಅದರ ಬಗ್ಗೆ ಯಾರು ಹೆಚ್ಚು ಆತಂಕಕ್ಕಿಡಾಗದೇ
ಗಣೇಶೋತ್ಸವದ ಯಶಸ್ವಿಗೆ ಎಲ್ಲರು ಸಂತಸ ವ್ಯಕ್ತಪಡಿಸಬೇಕು. ಕಳೆದ ಒಂದು ತಿಂಗಳಿಂದ
ಪೊಲೀಸರು ಸಹ ಅತ್ಯಂತ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಿದ್ದಾರೆ. ಅವರೊಂದಿಗೆ
ಯುವಕರು ಸಹನೆಯಿಂದ ನಡೆದುಕೊಳ್ಳಬೇಕು ಎಂದು ಕೆಲವು ಸಮಾಜದ ಹಿರಿಯರು ಸಲಹೆ
ನೀಡಿದ್ದಾರೆ.

13th September 2025
ಹರೀಶ ಕುಲಕರ್ಣಿ
ಕೊಪ್ಪಳ.
ಮೌಲ್ಯಮಾಪನ(ಅರ್ದ ವಾರ್ಷಿಕ) ಪರೀಕ್ಷೆ ಮತ್ತು ದಸಾರ ಕ್ರೀಡಾಕೂಟಗಳನ್ನು ಒಂದೆ
ದಿನಾಂಕದಂದು ಆಯೋಜಿಸಿ ಶಾಲಾ ಶಿಕ್ಷಣ ಇಲಾಖೆಗಳ ಅಧಿಕಾರಿಗಳ ಎಡವಟ್ಟಿಗೆ ಪ್ರತ್ಯಕ್ಷ
ಸಾಕ್ಷಿಯಾಗಿದ್ದು, ಶಿಕ್ಷಣ ಮತ್ತು ಕ್ರೀಡಾ ಇಲಾಖೆಗಳ ಅಧಿಕಾರಿಗಳ ಸಮನ್ವಯ
ಕೊರತೆಯಿಂದ ವಿದ್ಯಾರ್ಥಿಗಳು ಮತ್ತು ಪಾಲಕರಲ್ಲಿ ಆತಂಕ ಮೂಡಿದೆ.
ಕೊಪ್ಪಳದ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಸರಕಾರದ ಆದೇಶನ್ವಯ ೨೦೨೫-೨೬ನೇ
ಸಾಲಿನ ೧ ರಿಂದ ೧೦ನೇ ತರಗತಿಯ ೧ನೇ ಸಂಕಲನ ಮೌಲ್ಯಮಾಪನ(ಅರ್ದ ವಾರ್ಷಿಕ)
ಪರೀಕ್ಷೆಯನ್ನು ಎಲ್ಲಾ ಸರಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ, ಪ್ರೌಢ
ಶಾಲೆಗಳಲ್ಲಿ ಸೆ.೧೨ ರಿಂದ ೧೯ರವರೆಗೆ ನಡೆಸಲು ಅಧಿಕೃತ ಆದೇಶ ಮಾಡಿದ್ದಾರೆ. ಇದೇ
ಸಂದರ್ಭದಲ್ಲಿ ಕೊಪ್ಪಳದ ಯುವ ಸಬಲೀಕರ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಗಳು
ಈಗಾಗಲೇ ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ೨೦೨೫-೨೬ನೇ ಸಾಲಿನ ಕಲಬುರ್ಗಿ ವಿಭಾಗಮಟ್ಟದ
ದಸರಾ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ವಿವಿಧ ಜಿಲ್ಲೆಗಳಲ್ಲಿ ವಿವಿಧ ಕ್ರೀಡೆಗಳ
ಆಯೋಜನೆ ಕುರಿತು ಗುಂಪು ಮತ್ತು ವೈಯಕ್ತಿಕ ವಿಭಾಗದಲ್ಲಿ ಜಿಲ್ಲಾ ಮಟ್ಟದಲ್ಲಿ
ಆಯ್ಕೆಯಾದ ಪ್ರಥಮ, ದ್ವೀತಿಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿದ್ದು,
ಈ ವಿಭಾಗಮಟ್ಟದ ಕ್ರೀಡಾಕೂಗಳು ಸಹ ಸೆ.೧೫ರಂದು ವಿವಿಧ ಜಿಲ್ಲೆಗಳಲ್ಲಿ ನಡೆಸಲು ದಿನಾಂಕ
ನಿಗದಿಪಡಿಸಿದ್ದಾರೆ. ಪರೀಕ್ಷೆ ಮತ್ತು ಕ್ರೀಡಾಕೂಟಗಳು ಒಂದೇ ಸಮಯದಯಲ್ಲಿ
ಆಯೋಜಿಸಿರುವುದರಿಂದ ಮತ್ತು ಸೆ.೧೫ ರಂದು ಕ್ರೀಡೆಗಳಲ್ಲಿ ಪಾಲ್ಗೊಳ್ಳುವ
ವಿದ್ಯಾರ್ಥಿಗಳಿಗೆ ಸೆ.೧೫ ರಂದು ನಡೆಯುವ ಪರೀಕ್ಷೆಗೆ ಹಾಜರಾಗಲು ಸಮಸ್ಯೆಯಾಗಿದೆ.
ಇಲಾಖೆಯ ಅಧಿಕಾರಿಗಳ ಯತಾವತ್ತ ಆದೇಶವನ್ನು ಆಯಾ ಶಾಲೆಗಳ ಶಿಕ್ಷಕರು ತಮ್ಮ
ವಿದ್ಯಾರ್ಥಿಗಳ ಪಾಲಕರಿಗೆ ರವಾನಿಸಿದ್ದಾರೆ. ಸೆ.೧೫ ರಂದು ಒಂದೇ ದಿನ ವಿಭಾಗಮಟ್ಟದ
ಕ್ರೀಡಾಕೂಟ ಮತ್ತು ಮೌಲ್ಯಮಾಪನ( ಅರ್ದವಾರ್ಷಿಕ) ಪರೀಕ್ಷೆಗಳು ನಡೆಯುತ್ತಿರುವುದರಿಂದ
ತಮ್ಮ ಕ್ರೀಡಾಶಕ್ತಿ ಇರುವ ಮತ್ತು ಈಗಾಗಲೇ ವಿವಿಧ ಕ್ರೀಡೆಯಲ್ಲಿ ಜಿಲ್ಲಾಮಟ್ಟದಲ್ಲಿ
ಜಯಗಳಿಸಿ ವಿಭಾಗಮಟ್ಟಕ್ಕೆ ಆಯ್ಕೆಯಾಗಿರುವ ಮಕ್ಕಳಿಗೆ ಯಾವುದು ಆಯ್ಕೆ ಮಾಡಿಕೊಳ್ಳಲು
ಸೂಚಿಸಬೇಕೆಂಬ ಗೊಂದಲದಲ್ಲಿದ್ದಾರೆ. ಹೀಗಾಗಿ ಮಕ್ಕಳಿಗೆ ಪರೀಕ್ಷೆ ಮುಖ್ಯವಾಗಿದ್ದು,
ಅದೇ ರೀತಿ ಕ್ರೀಡೆಯಲ್ಲೂ ಅವರ ಆಸಕ್ತಿ ಕ್ಷೀಣಿಸಬಾರದು ಎಂದು ಆತಂಕ
ವ್ಯಕ್ತಪಡಿಸಿದ್ದು, ಶಿಕ್ಷಣ ಮತ್ತು ಕ್ರೀಡಾ ಇಲಾಖೆ ಅಧಿಕಾರಿಗಳು ಈ ಕುರಿತು ಯೋಚನೆ
ಮಾಡಿ ಕ್ರೀಡೆಗಳನ್ನು ಪರೀಕ್ಷೆ ಇಲ್ಲದ ದಿನಾಂಕದಂದು ನಡೆಸಲಿ ಎಂದು ಅಗ್ರಹಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ಪ್ರತಿಯೊಂದು ಇಲಾಖೆಯ ಅಧಿಕಾರಿಗಳಲ್ಲಿ ಸಮನ್ವಯ ಕೊರತೆ ಮೊದಲನಿಂದಲೂ
ಇದೆ. ಶಿಕ್ಷಣ ಮತ್ತು ಕ್ರೀಡಾ ಇಲಾಖೆ ಅಧಿಕಾರಿಗಳು ಇದಕ್ಕೆ ಪ್ರತ್ಯಕ್ಷ
ಸಾಕ್ಷಿಯಾಗಿದ್ದಾರೆ. ಈಗಲಾದರೂ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಮತ್ತು ಕ್ರೀಡಾ
ಇಲಾಖೆಯ ಸಾಹಯಕ ನಿರ್ದೇಶಕರು ಒಮ್ಮತದ ನಿರ್ದಾರ ಕೈಗೊಂಡು ಈಗ ಸೃಷ್ಟಿಯಾಗಿರುವ
ಸಮಸ್ಯೆಗೆ ಮುಕ್ತಿ ಹಾಡಿ ಪರೀಕ್ಷೆ ಮತ್ತು ಕ್ರೀಡೆ ಎರಡರಲ್ಲೂ ಮಕ್ಕಳು
ಪಾಲ್ಗೊಳ್ಳುವಂತೆ ದಿನಾಂಕ ನಿಗದಿಪಡಿಸಿ ಅವಕಾಶ ಮಾಡಿಕೊಡಬೇಕೆಂಬುದು ಪತ್ರಿಕೆಯ
ಆಶಯವಾಗಿದೆ.
ಬಾಕ್ಸ್:
ಪರೀಕ್ಷೆ ದಿನ ಕ್ರೀಡಾಕೂಟ ಆಯೋಜನೆ ಗಮನಕ್ಕಿಲ್ಲ
ಸೆ.೧೨ ರಿಂದ ಸೆ.೧೯ರವರೆಗೆ ೨೦೨೫-೨೬ನೇ ಸಾಲಿ ಮೌಲ್ಯಮಾಪನ ಪರೀಕ್ಷೆಯನ್ನು ೧ರಿಂದ
೧೦ನೇ ತಗರತಿ ವಿದ್ಯಾರ್ಥಿಗಳಿಗೆ ನಿಗದಪಡಿಸಿದೆ. ಪರೀಕ್ಷೆ ನಡೆಯುವ ದಿನದಂದು
ಕ್ರೀಡಾಕೂಟ ಇರುವ ಮಾಹಿತಿ ನನ್ನ ಗಮನಕ್ಕೆ ಇಲ್ಲ. ಈ ಕುರಿತು ಮೇಲಾಧಿಕಾರಿಗಳ
ಗಮನಕ್ಕೆ ತಂದು ಕ್ರೀಡಾಕೂಟ ದಿನಾಂಕವನ್ನು ಬದಲಾಯಿಸುವ ಪ್ರಯತ್ನ ಮಾಡತ್ತೇನೆ.
ನಟೇಶ, ಹೆಚ್.ಬಿ. ಕ್ಷೇತ್ರ ಶಿಕ್ಷಣಾಧಿಕಾರಿಗಳು, ಗಂಗಾವತಿ.
ಬಾಕ್ಸ್:
ನನ್ನ ಮಗಳು ವಿಭಾಗ ಮಟ್ಟದ ದಸರಾ ಕ್ರೀಡಾಕೂಟದ ಯೋಗದಲ್ಲಿ ಆಯ್ಕೆಯಾಗಿದ್ದಾಳೆ.
ಬಿದರನಲ್ಲಿ ಸೆ.೧೫ ರಂದು ಯೋಗ ಮತ್ತು ವಾಲಿಬಾಲ್ ಕ್ರೀಡೆ ನಡೆಸಲಾಗುತ್ತಿದೆ. ಇದೇ
ಸಮಯದಲ್ಲಿ ಅವಳ ಪರೀಕ್ಷೆ ಸೆ.೧೫ರಂದು ನಡೆಸುವ ಕುರಿತು ಶಾಲೆಯಿಂದ ಮಾಹಿತಿ
ನೀಡಿದ್ದಾರೆ. ಇದರಿಂದ ನಮಗೆ ಆತಂಕವಾಗಿದೆ. ಮಗಳು ಶಿಕ್ಷಣದ ಪ್ರಗತಿಯೊಂದಿಗೆ ಅವಳ
ಆಯ್ಕೆ ಪ್ರಕಾರ ಅತ್ಯುತ್ತಮ ಯೋಗಪಟುವಾಗಲಿ ಎಂಬುದು ನಮ್ಮ ಆಪೇಕ್ಷೆ. ಈಗ ಒಂದೇ
ಸಮಯದಲ್ಲಿ ಪರೀಕ್ಷೆ ಮತ್ತು ಕ್ರೀಡಾಕೂಟ ನಡೆಸುತ್ತಿರುವುದರಿಂದ ನಮಗೆ ಸಮಸ್ಯೆಯಾಗಿದೆ.
ಭೀಮೇಶ, ವಿದ್ಯಾರ್ಥಿನಿ ಪಾಲಕ, ಗಂಗಾವತಿ.

10th September 2025
ಗಂಗಾವತಿ
ಇಂದಿನಿಂದ ಸೆ.20ರವರೆಗೆ ಹತ್ತು ದಿನಗಳ ಕಾಲ ನಗರದಲ್ಲಿ ಆಯೋಜಿಸಿರುವ ಹಾನಹಲ್ ಕುಮಾರ ಶಿವಯೋಗಿಗಳ 158 ನೇ ಜಯಂತೋತ್ವಕ್ಕೆ ಶ್ರೀಮಠದಿಂದ ಆಗಮಿಸಿದ್ದ ಸ್ವಾಮಿಗಳು ಗಂಗಾವತಿ ಪುರ ಪ್ರವೇಶ ಮಾಡಿದರು. ಸ್ವಾಮಿಗಳನ್ನು ಸ್ವಾಗತಿಸಿದ ಆಯೋಜಕರು ಮತ್ತು ಹಾಲಿ, ಮಾಜಿ ಶಾಸಕರು, ಮಾಜಿ ಸಂಸದರು ಗಣ್ಯರು ಜಲಾದ್ದೂರಿಯಾಗಿ ಜ್ಯೋತಿ ಮೆರವಣಿಗೆ ನಡೆಸಿದರು.
ಬುಧವಾರ ಸಂಜೆ ಕನಕಗಿರಿ ರಸ್ತೆಗೆ ಆಗಮಿಸುತ್ತಿಂದ ಸ್ವಾಮಿಗಳನ್ನು ಸ್ವಾಗತಿಸಿ ಚನ್ನಬಸವಸ್ವಾಮಿಗಳ ಮಠದವರೆಗೆ ಮೆರವಣಿಗೆ ಮೂಲಕ ಸ್ವಾಮಿಗಳನ್ನು ಕರೆದುಕೊಂಡು ಬಂದರು.
ಗಂಗಾವತಿಯ ಈರಣ್ಣ ದೇವಸ್ಥಾನದಿಂದ ಆರಂಭವಾದ ಉತ್ಸವ ಜ್ಯೋತಿಯ ಮೆರವಣಿಗೆಯಲ್ಲಿ ಸುಮಾರು 50ಕ್ಕೂ ಹೆಚ್ಚು ಸ್ವಾಮೀಜಿಗಳು ಪಾದಯಾತ್ರೆ ಮೂಲಕ ಪುರಾಣ ಮಂಟಪಕ್ಕೆ ಆಗಮಿಸಿದರು.
ನಂತರ ಜಯಂತೋತ್ಸವದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮುಂಡರಗಿ ಮಠದ ಅನ್ನದಾನ ಸ್ವಾಮಿಗಳು, ಹೆಬ್ಬಾಳ ಮಠದ ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಅರಳಹಳ್ಳಿಯ ಗವಿಸಿದ್ದಯ್ಯ ತಾತನವರು, ಶಿವಕುಮಾರ ದೇವರು, ಚಂದ್ರಶೇಖರ ದೇವರು ಸಾನ್ನಿಧ್ಯ ವಹಿಸಿದ್ದರು. ಶಾಸಕ ಜನಾರ್ಧನರೆಡ್ಡಿ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಮಾಜಿ ಸಂಸದ ಶಿವರಾಮಗೌಡ, ಸಮಾಜದ ಮುಖಂಡರಾದ ತಿಪ್ಪೇರುದ್ರಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕಾಧ್ಯಕ್ಷ ಎಚ್.ಗಿರಿಗೌಡ, ಪ್ರಧಾನ ಕಾರ್ಯದರ್ಶಿ ಮನೋಹರಸ್ವಾಮಿ ಹಿರೇಮಠ, ನಿಕಟಪೂರ್ವ ಅಧ್ಯಕ್ಷ ಅಶೋಕಸ್ವಾಮಿ ಹೇರೂರು, ಮಹಿಳಾ ಘಟಕದ ಅಧ್ಯಕ್ಷೆ ನಂದಿನಿ ಮುದಗಲ್, ಜಿಲ್ಲಾಧ್ಯಕ್ಷ ಕಳಕನಗೌಡ ಪಾಟೀಲ್, ಸಮಾಜದ ಮುಖಂಡರಾದ ವಿರೂಪಾಕ್ಷಪ್ಪ ಸಿಂಗನಾಳ, ಸೋಮನಾಥ ಮಟ್ಟಣಶೆಟ್ಟಿ ಇದ್ದರು. ವೀರಶೈವ ಲಿಂಗಾಯತ ಸೇರಿದಂತೆ ವಿವಿಧ ಸಮಾಜದ ಮುಖಂಡರು, ಯುವಕರು, ಮಹಿಳೆಯರು ಮೆರವಣಿಗೆಯಲ್ಕಿ ಭಾಗವಹಿದ್ದರು.
ಹತ್ತು ದಿನಗಳ ಕಾಲ ಧಾರ್ಮಿಕ ಪ್ರವಚನ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಪ್ರತಿಭಾ ಪುರಸ್ಕಾರ ನಡೆಯಲ್ಲಿದ್ದು, ನೂರಾರು ಸ್ವಾಮಿಗಳು ದುಶ್ಚಟ ಬಿಡುವಂತೆ ನಿತ್ಯ ಬೆಳೆಗ್ಗೆ ನಗರ ಮತ್ತು ಹಳ್ಳಿಗಳಲ್ಲಿ ಜೊಳಿಗೆ ಹಿಡಿದು ಪಾದಯಾತ್ರೆ ನಡೆಸಲಿದ್ದಾರೆ.
ಬಾಕ್ಸ್::::
ಕೆಲವರು ಹೆಸರಿಗೆ ಬಸವಣ್ಣನ ಅನುಯಾಯಿಗಳು
ಬಸವಣ್ಣ ಅವರು ನುಡಿದರೆ ಮುತ್ತಿನ ಹಾರದಂತೆ ಇರಬೇಕು ಎಂದು ಹೇಳಿದ್ದಾರೆ. ಆದರೆ, ಬಸವಣ್ಣನ ಅನುಯಾಯಿಗಳು ಎಂದು ಹೇಳಿಕೊಳ್ಳುವ ಕೆಲವರು ಕುಮಾರ ಶಿವಯೋಗಿಗಳ ಬಗ್ಗೆ ಅತ್ಯಂತ ಕೀಳು ಮಟ್ಟದಲ್ಲಿ ಮಾತನಾಡುತ್ತಿದ್ದಾರೆ. ಇದು ಸರಿಯಲ್ಲ. ಬಸವಣ್ಣ ಅವರ ವಚನ ಹೆಚ್ಚು ಪ್ರಚಾರ ಮಾಡಿದ್ದು ಕುಮಾರೇಶ್ವರರು
ನಾಡೋಜ ಡಾ.ಅನ್ನದಾನ ಮಹಾ ಶಿವಯೋಗಿಗಳು, ಅನ್ನದಾನೇಶ್ವರ ಸಂಸ್ಥಾನಮಠ, ಮುಂಡರಗಿ

10th September 2025
ಗಂಗಾವತಿ.
ನಿಗದಿತ ಶುಲ್ಕ ಪಾವತಿಸದೇ ವಿಳಂಬ ಮಾಡಿರುವ ನರ್ಸಿಂಗ್ ಕಾಲೇಜ್ ವಿದ್ಯಾರ್ಥಿನಿಯ ತಾಯಿ ಮಾಂಗಲ್ಯ ಸರ ಸೇರಿದಂತೆ ಮೈಮೇಲಿನ ಇನ್ನಿತರ ಬಂಗಾರದ ಒಡೆವೆಗಳನ್ನು ಕಾಲೇಜ್ ಆಡಳಿತ ಮಂಡಳಿ ಅಧ್ಯಕ್ಷ ಡಾ|| ಸಿ.ಬಿ.ಚಿನಿವಾಲರ್ ಅವರು ಪಡೆದುಕೊಂಡಿದ್ದು, ಅವರ ಹಣದ ಹಪಹಪಿತನ ಬಹಿರಂಗವಾಗಿದ್ದು, ನಗರದ ಬಿಬಿಸಿ ನರ್ಸಿಂಗ್ ಕಾಲೇಜಿನಲ್ಲಿ ಹೃದಯ ವಿದ್ರಾಹಕ ಘಟನೆ ನಡೆದಿದೆ.
ಶುಲ್ಕ ಪಾವತಿ ಮಾಡದ ಕಾರಣ ಮೈಮೇಲಿನ ತಾಳಿ ಮತ್ತಿತರ ಬಂಗಾರದ ಒಡೆವೆಗಳನ್ನು ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರ ಕೈಗೆ ಕೊಟ್ಟು ಬಂದಿರುವುದಾಗಿ ಬಿಬಿಸಿ ನರ್ಸಿಂಗ್ ಕಾಲೇಜಿನಲ್ಲಿ ಪ್ರವೇಶ ಪಡೆದುಕೊಂಡಿರುವ ವಿದ್ಯಾರ್ಥಿನಿಯ ತಾಯಿ ಮತ್ತು ತಂದೆ ಆರೋಪಿಸಿ ಮಾಧ್ಯಮಗಳ ಮುಂದೆ ಅಳಲು ತೊಡಿಕೊಂಡಿದ್ದಾರೆ. ತಮ್ಮ ಕಾಲೇಜಿನ ನಿಯಮಾನುಸಾರ ಬಾಕಿ ಶುಲ್ಕವನ್ನೇ ಪಡೆಯಬೇಕಿದ್ದ ವೈದ್ಯ ಪಾಲಕರಿಂದ ಬಂಗಾರದ ಒಡವೆಗಳನ್ನು ಪಡೆದುಕೊಂಡು ಈಗ ಇಕಟ್ಟಿನಲ್ಲಿ ಸಿಲುಕಿದ್ದಾರೆ.
ನಗರದ ರಾಯಚೂರು ರಸ್ತೆಯ ಮಾರ್ಗದಲ್ಲಿರುವ ಬಿಬಿಸಿ ಕಾಲೇಜು ಆಫ್ ನರ್ಸಿಂಗ್ ಸಂಸ್ಥೆಯಲ್ಲಿ ಬಿಎಸ್ಸಿ ನರ್ಸಿಂಗ್ ಪ್ರಥಮ ಸೆಮೆಸ್ಟಿರ್ನಲ್ಲಿ ಮುಸಲಾಪುರ ಗ್ರಾಮದ ರೇಣುಕಮ್ಮ ಹನುಮಂತಪ್ಪ ವಾಲೇಕಾರ ಅವರ ಪುತ್ರಿ ಕಾವೇರಿ ತನಗೆ ಗದಗಿನ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಪ್ರವೇಶ ದೊರೆತಿದ್ದರಿಂದ ಬಿಬಿಸಿ ಕಾಲೇಜಿಗೆ ಬಂದು ಪಾಲಕರೊಂದಿಗೆ ಮೂಲ ಪ್ರಮಾಣ ಪತ್ರಗಳನ್ನು ಹಿಂದಕ್ಕೆ ಕೊಡುವಂತೆ ಮನವಿ ಮಾಡಿದ್ದಾಳೆ. ಆದರೆ ಕಾಲೇಜಿನ ಚೇರಮನ್ ಡಾ|| ಸಿ.ಬಿ ಚಿನಿವಾಲರ್ ಅವರು ಕೇವಲ ರೂ.೧೦ ಸಾವಿರ ಮಾತ್ರ ಪಾವತಿಸಿದ್ದೀರಿ. ನಾಲ್ಕು ವರ್ಷದ ಶುಲ್ಕ ಪೂರ್ಣ ಪಾವತಿ ಮಾಡಿದರೆ ಮಾಡಿದರೆ ಮಾತ್ರ ನಿಮ್ಮ ಟಿಸಿ. ಮಾರ್ಕ್ಸ್ ಕಾರ್ಡು ಸೇರಿದಂತೆ ಪ್ರಮಾಣ ಪತ್ರ ನೀಡುತ್ತೇವೆ ಎಂದು ಪಾಲಕರಿಗೆ ತಿಳಿಸಿದ್ದಾರೆ. ತಮಗೆ ಸುಮಾರು ನಾಲ್ಕು ಲಕ್ಷ ಹಣ ಪಾವತಿಸಲು ಸಾಧ್ಯವಿಲ್ಲ. ನಮಗೆ ಪ್ರಮಾಣಪತ್ರಗಳನ್ನು ಕೊಡಿ ಎಂದು ಮನವಿ ಮಾಡಿದ್ದು, ಹಣ ಇಲ್ಲದ ಕಾರಣ ತಮ್ಮಲ್ಲಿರುವ ಒಡವೆಗಳನ್ನು ನೀಡುತ್ತೇವೆ ಎಂದು ಕೊರಿಕೊಂಡಿದ್ದಾರೆ. ಪಾಲಕರ ಮನವಿಗೆ ಹಿಂದೆ ಮುಂದೆ ನೋಡದ ಕಾಲೇಜ್ ಅಧ್ಯಕ್ಷ ಡಾ|| ಚಿನಿವಾಲ್ ವಿದ್ಯಾರ್ಥಿನಿಯ ತಾಯಿಯ ಕೊರಳಲ್ಲಿನ ಮಾಂಗಲ್ಯ, ಬೆಂಡವಾಲಿ ಮತ್ತಿತರ ಒಡೆವೆಗಳನ್ನು ಪಡೆದುಕೊಂಡಿದ್ದಾರೆ. ಪುತ್ರಿಯ ಶಿಕ್ಷಣದ ಶುಲ್ಕ ಪಾವತಿಸದ ಕಾರಣ ಪತಿ ಪಕ್ಕದಲ್ಲಿರುವಾಗಲೆ ಪತ್ನಿಯ ತಾಳಿಯನ್ನು ಚೇರಮನ್ ಬಿಚ್ಚಿಸಕೊಂಡಿದ್ದಾರೆ. ಮಗಳ ಶೈಕ್ಷಣಿಕ ಪ್ರಗತಿಗಾಗಿ ನಾವು ಹಣದ ಬದಲಾಗಿ ಮೇಮೇಲಿನ ಒಡವೆ ನೀಡಿದ್ದೇವೆ ಎಂದು ಪಾಲಕರು ತಿಳಿಸಿದ್ದಾರೆ.
ನಿಯಮಾನುಸಾರ ಶುಲ್ಕ ಪಾವತಿ ಮಾಡಿಕೊಳ್ಳುವುದು ಕಾಲೇಜ್ ಆಡಳಿತ ಮಂಡಳಿಯ ಜವಬ್ದಾರಿಯಾಗಿದೆ. ಆದರೆ ಪಾಲಕರು ಹಣದ ಬದಲಾಗಿ ಒಡವೆ ನೀಡಿದ ಸಂದರ್ಭದಲ್ಲಿ ಮೌನಕ್ಕೆ ಶರಣಾಗಿ ಒಡವೆಗಳನ್ನು ಪಡೆದುಕೊಂಡಿರುವ ಬಿಬಿಸಿ ನರ್ಸಿಂಗ್ ಕಾಲೇಜಿನ ಚೇರ್ಮನ್ ಈಗ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ.
ಆದರೆ ಶಿಕ್ಷಣ ಮುಂದುವರಿಸಬೇಕೆಂಬ ಕಾರಣಕ್ಕೆ ವಿದ್ಯಾರ್ಥಿನಿ ರೂ. ೧೦ ಸಾವಿರ ರು ಪಾವತಿಸಿ ಕಾಲೇಜು ಸೇರಿದ್ದರು. ಈಗ ಸರಕಾರಿ ಕಾಲೇಜು ದೊರೆತಿದ್ದರು ಸಹ ಪ್ರಮಾಣ ಪತ್ರ ಪಡೆಯವಾಗ ತಾಯಿ ತಾಳಿ ಬಿಚ್ಚಿಸಿಕೊಂಡಿದ್ದಾರೆ. ಪತಿ ಪಕ್ಕದಲ್ಲಿಟ್ಟು ಕೊಂಡು ತಾಳಿ ಬಿಚ್ಚಿರುವದು ಸ್ತ್ರೀ ಕುಲಕ್ಕೆ ಅಪಮಾನವಾಗಿದೆ. ನಗರ ಸೇರಿದಂತೆ ರಾಜ್ಯದಲ್ಲಿ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಕಾಲೇಜು ಶುಲ್ಕ ಪಾವತಿಸದಿದ್ದರೆ ದಂಡ, ಮನೆಗೆ ಕಳಿಸುವದು, ಬಿಸಿಲಲ್ಲಿ ನಿಲ್ಲಿಸುವದು, ಫಲಿತಾಂಶ ಪ್ರಕಟಿಸದೇ ಇರುವದು ಸಾಮಾನ್ಯ.
ಬಾಕ್ಸ್:
ಹಣ ಇಲ್ಲ ಎಂದಿದಕ್ಕೆ ಒಡವೆ ಪಡೆದುಕೊಂಡಿದ್ದಾರೆ
ಇಲ್ಲಿಯ ಬಿಬಿಸಿ ನರ್ಸಿಂಗ್ ಕಾಲೇಜಿನ ಚೇರಮನ್ ಅವರು ಮಗಳ ಶುಲ್ಕ ಪಾವತಿಸದ ಕಾರಣ ನನ್ನ ಕೊರಳಲ್ಲಿದ್ದ ತಾಳಿ ಸೇರಿದಂತೆ ಚಿನ್ನದ ಆಭರಣಗಳನ್ನು ಬಿಚ್ಚಿಸಿಕೊಂಡಿದ್ದಾರೆ. ನಿನಗೆ ಶುಲ್ಕ ಕಟ್ಟದು ಆಗದಿದ್ದರೆ ನಿನ್ನ ಕೊರಳಲ್ಲಿರುವ ತಾಳಿ ಬಿಟ್ಟಿಕೊಟ್ಟು ಹೋಗಿರಿ ಎಂದು ಡಾ. ಸಿ.ಬಿ ಚಿನಿವಾಲರ ಅವರು ತಮಗೆ ತರಾಟೆಗೆ ತೆಗೆದು ಕೊಂಡಿದ್ದಾರೆ. ಈ ಕಾರಣಕ್ಕಾಗಿ ತಾಳಿ ಸೇರಿದಂತೆ ಚಿನ್ನದ ಆಭರಗಳನ್ನು ಬಿಚ್ಚಿಕೊಟ್ಟಿದ್ದೇನೆ.ಪತಿ ಇರುವಾಗಲೆ ತಾಳಿ ಬಿಚ್ಚಿಸಿಕೊಂಡಿರುವದು ಅಘಾತವಾಗಿದೆ.
ರೇಣುಕಮ್ಮ, ವಿದ್ಯಾರ್ಥಿನಿ ತಾಯಿ
ಬಾಕ್ಸ್:
ನಾವು ಕಾಲೇಜಿನ ಶುಲ್ಕ ಕಟ್ಟುವಂತೆ ಪದೇ ಪದೇ ಹೇಳುತ್ತಾ ಬಂದಿದ್ದೇನೆ. ಆದರೆ ಅವರು ಶುಲ್ಕ ಪಾವತಿಸಿಲ್ಲ. ಪ್ರಮಾಣ ಪತ್ರಗಳು ಬೇಕಾದರೆ ಶುಲ್ಕ ಪಾವತಿಸಿರಿ ಎಂದು ಸೂಚಿಸಿದ್ದೇನೆ. ನಾನು ಅವರಲ್ಲಿನ ಬಂಗಾರದ ಒಡೆವೆಗಳನ್ನು ಕೇಳಿಲ್ಲ. ತಾವೇ ತಕ್ಷಣ ಹಿಂದು ಮುಂದು ನೋಡದೇ ತಾಳಿ ಸೇರಿದಂತೆ ಚಿನ್ನದ ವಸ್ತುಗಳನ್ನು ಬಿಚ್ಚಿ ನಮ್ಮ ಮುಂದೆ ಇಟ್ಟು ಹೋಗಿ ಈಗ ಮಾಧ್ಯಮಗಳ ಮುಂದೆ ಸುಳ್ಳು ಆರೋಪ ಮಾಡಿದ್ದಾರೆ. ಪಾಲಕರು ಮಾಡುವ ಆರೋಪ ಸತ್ಯಕ್ಕೆ ದೂರಾಗಿದೆ. ಹಣವಿಲ್ಲದಿದ್ದರೂ ನಾವು ವಿದ್ಯಾರ್ಥಿನಿಗೆ ಪ್ರವೇಶ ನೀಡಿದ್ದೇವೆ. ಆದರೆ ನಮ್ಮ ಗಮನಕ್ಕೆ ತರದೇ ಏಕಾ ಏಕಿ ಪ್ರಮಾಣಪತ್ರಗಳನ್ನು ವಾಪಸ್ಸು ಕೊಡು ಎಂದರೆ ನಿಯಮಾನುಸಾರು ಕೊಡಬೇಕಾಗುತ್ತದೆ. ಇದಕ್ಕೆ ಅವರು ಸುಳ್ಳು ಆರೋಪ ಮಾಡಿದ್ದಾರೆ. ಇದರ ಹಿಂದೆ ಕೆಲವರ ಕುತಂತ್ರವಿದೆ.
ಡಾ|| ಸಿ.ಬಿ.ಚಿನಿವಾಲ್, ಚೇರಮನ್, ಬಿಬಿಸಿ ಕಾಲೇಜು ಆಫ್ ನರ್ಸಿಂಗ್, ಗಂಗಾವತಿ

9th September 2025
ಗಂಗಾವತಿ
ನಗರದಲ್ಲಿ ನಾಳೆಯಿಂದ ಹಾನಗಲ್ ಕುಮಾರ ಮಹಾಶಿವಯೋಗಿಗಳ ಜಯಂತೋತ್ಸವ ಪ್ರಾರಂಭವಾಗಲಿದೆ. ಜಯಂತೋತ್ಸವ ನಿಮತ್ಯ ಪ್ರತಿನಿತ್ಯ ಒಂದೊಂದು ವಾರ್ಡನಲ್ಲಿ ನೂರಾರು ಸ್ವಾಮಿಗಳು ದುಶ್ಚಟ ಬಿಡಿಸುವ ಜಾಗೃತಿಯ ಪಾದಯಾತ್ರೆ ಹಮ್ಮಿಕೊಂಡಿರುವುದು ನಮಗೆಲ್ಲ ತಿಳಿದಿದೆ. ಈ ಪಾದಯಾತ್ರೆ ಹಿರೇಜಂತಕಲ್ ನಲ್ಲ ಗುರುವಾರ ನಡೆಯಲಿದ್ದು, ವೀರಶೈವ ಲಿಂಗಾಯತ ಸಮಾಜ ಸೇರಿದಂತೆ ವಿವಿಧ ಸಮಾಜ ಬಾಂಧವರು ಭಾಗವಯಿಹಿಸಿ ಯಶಸ್ವಿಗೊಳಿಸಬೇಕು ಎಂದು ಹಿರೇ ಜಂತಕಲ್ ವೀರಶೈವ ಸಮಾಜದ ಮುಖಂಡ ಬಸವರಾಜ ಅಂಗಡಿ ಕರೆ ನೀಡಿದರು.
ಮಂಗಳವಾರ ಹಿರೇಜಂತಕಲ್ ಶ್ರೀ ಪಂಪಾ ವಿರೂಪಾಕ್ಷೇಶ್ವ ದೇವಸ್ಥಾನದಲ್ಲಿ ಶ್ರೀ 158 ನೇ ಪೂಜ್ಯಶ್ರೀ ಲಿಂ ಹಾನಗಲ್ಲ ಕುಮಾರ ಮಹಾಶಿವಯೋಗಿಗಳ ಜಯಂತಿ ಪ್ರಯುಕ್ತ ಡೆದ ಪೂರ್ವ ಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಜಯಂತೋತ್ಸವ ನಮ್ಮ ಗಂಗಾವತಿಯಲ್ಲಿ ಹಮ್ಮಿಕೊಂಡಿರುವುದು ನಮ್ಮ ಭಾಗ್ಯ. ಜಯಂತಿ ನಿಮಿತ್ಯ ಸ್ವಾಮಿಗಳು ಪಾದಯಾತ್ರೆ ನಮ್ಮ ಜಂತಕಲ್ ನಲ್ಲಿ ಹಮ್ಮಿಕೊಂಡಿರುವುದು ನಮಗೆ ಸಂತಸವಾಗಿದೆ. ಈ ಪಾದಯಾತ್ರೆ ಐತಿಹಾಸಿಕವಾಗಿ ಯಶಸ್ವಿಗೋಳಿಸೋಣ ಎಂದರು.
ಈ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಸಮಾಜದ ಹಿರಿಯ ಮುಖಂಡರಾದ ಎಸ್.ಬಿ.ಹಿರೇಮಠ, ವಿನಯ ಪಾಟೀಲ್, ಬಸವರಾಜ ಕೋರಿಶೆಟ್ಟರ್, ಹುಚ್ಚಯ್ಯಸ್ವಾಮಿ ಹಾಲಿನಡೈರಿ, ಆದಯ್ಯಸ್ವಾಮಿ ಹಿರೇಮಠ, ವೀರಯ್ಯಸ್ವಾಮಿ, ಗವಿಸಿದ್ದಪ್ಪ ಆರಾಳ, ನಾಗರಾಜ, ಮಂಜುನಾಥ ಕುಂಬಾರ, ಹನುಮಂತಪ್ಪ ತಳಗೇರಿ, ಮಂಜುನಾಥ ಕೆಂಬಾವಿಮಠ, ಶಿವಯ್ಯಸ್ವಾಮಿ ಹಿರೇಮಠ, ಸಂತೋಷ, ಸೋಮಶೇಖರ್ ಗೌಡ ಪಾಟೀಲ್ ಸೇರಿದಂತೆ ಇತರರು ಇದ್ದರು