


4th March 2026

27th February 2026

26th February 2026

25th February 2026
ಗಂಗಾವತಿ.
ಕೊಪ್ಪಳ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಅವರ ಕಡಕ್ ವಾರ್ನಿಂಗ್ ಗೆ ಎಚ್ಚೆತ್ತ ಅರಣ್ಯ ಇಲಾಖೆ ಅಧಿಕಾರಿಗಳು ತಾಲೂಕಿನ ಸಾಣಾಪುರ ಗ್ರಾಮದ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿರುವ ಅಕ್ರಮ ರೇಸಾರ್ಟ್ ಗಳನ್ನು ನೆಲಸಮ ಮಾಡಿದ್ದಾರೆ.
ಜಿಲ್ಲೆಯಲ್ಲಿರುವ ಅನಧಿಕೃತ ರೇಸಾರ್ಟ್ ಗಳನ್ನು ತೆರವು ಮಾಡುವಂತೆ ಮಂಗಳವಾರ ವಿವಿಧ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಸೂಚಿಸಿದ್ದ ಹಿನ್ನೆಲ್ಲೆಯಲ್ಲಿ ಬುಧವಾರ ಕಾರ್ಯಾಚರಣೆ ನಡೆಸಲಾಗಿದೆ.
ಕೊಪ್ಪಳ ಉಪ ಅರಣ್ಯ ಸಂರಕ್ಷಣಾಧಿಕಾರಿ ನಿರ್ಮಲಾ, , ಸಹಾಯಕ ಅರಣ್ಯ ಸಂರಕ್ಷಣ ಅಧಿಕಾರಿ ಅಬ್ದುಲ್ ಖಾದರ್ ಮುಲ್ಲಾ ಅವರ ಮಾರ್ಗದರ್ಶನದಲ್ಲಿ ಗಂಗಾವತಿ ಪ್ರಾದೇಶಿಕ ವಲಯದ ಅರಣ್ಯಾಧಿಕಾರಿ ಬಸವರಾಜ ಪೂಜಾರ, ನೇತೃತ್ವದಲ್ಲಿ ಸಣಾಪುರ ಗ್ರಾಮದ ಸರ್ವೆ ನಂಬರ್ - 13 ಅರಣ್ಯ ಪ್ರದೇಶದಲ್ಲಿ ಅನಧಿಕೃತವಾಗಿ ನಿರ್ಮಿಸಿದ ಮೂರು ರೆಸಾರ್ಟ್ ಗಳನ್ನು ತೆರವು ಮಾಡಿ ಅರಣ್ಯ ಪ್ರದೇಶದ ಭಾಗವನ್ನು ವಶಕ್ಕೆ ಪಡೆದಿದ್ದಾರೆ. ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯ ಅಧಿಕಾರಿ ಗುಂಡಪ್ಪ, ಚಂದ್ರಶೇಖರ, ಜಾವೆದ್ ಬಾಷ, ದೇವಪ್ಪ ಉಮೇಶ್ವರ, ಗಸ್ತು ಅರಣ್ಯ ಪಾಲಕರಾದ ಶಿವಾನಂದ, ಜ್ಞಾನಗೌಡ, ಶಿವಶರಣ ಕೋಳಿ, ಮಹಾಂತೇಶ್, ಲವ ಕುಂಬಾರ ಮಂಜುನಾಥ್ ನರೇದ್ ಶಿವುಕುಮಾರ್ ವಾಲಿ ಶಿವರಡ್ಡಿ ಮತ್ತು ಅರಣ್ಯ ವೀಕ್ಷಕರು ಇದ್ದರು.

16th February 2026
ಗಂಗಾವತಿ.
ಕಳೆದ ಹನ್ನೊಂದು ತಿಂಗಳ ಹಿಂದೆ ತಾಲೂಕಿನ ಸಾಣಾಪುರ ಬಳಿ ಪ್ರವಾಸಕ್ಕೆ ಬಂದಿದ್ದ ಇಸ್ರೇಲ್ ಸೇರಿದಂತೆ ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ ಮಾಡಿ ಮತ್ತು ಒಬ್ಬ ವಿದೇಶಿ ಪ್ರಜೆಯನ್ನು ಕೊಲೆ ಮಾಡಿರುವ ಪ್ರಕರಣ ಸಾಬೀತಾಗಿದ್ದು, ಪ್ರಕರಣದಲ್ಲಿ ಭಾಗಿಯಾಗಿದ್ದ ಮೂರು ಜನ ಆರೋಪಿಗಳು ದೋಷಿ ಎಂದು ಪರಿಗಣಿಸಿ ಮೂರು ಜನ ಆರೋಪಿಗಳಿಗೆ ಗಂಗಾವತಿಯ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯಕ ಅವರು ಮರಣ ದಂಡನೆಯ ತೀರ್ಪು ನೀಡಿದ್ದಾರೆ. ನ್ಯಾಯಾಲಯದ ಐತಿಹಾಸಿಕ ತೀರ್ಪಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿ ಶ್ಲಾಘಿಸುತ್ತಿದ್ದಾರೆ.
ಸೋಮವಾರ ಮದ್ಯಾಹ್ನ ಮೂರು ಗಂಟೆಗೆ ನ್ಯಾಯಾಧೀಶರು ತೀರ್ಪು ಪ್ರಕಟಿಸಿದರು. ಕಟಕಟೆಯಲ್ಲಿ ನಿಂತಿದ್ದ ಅಪರಾಧಿಗಳು ನ್ಯಾಯಾಧೀಶರ ಆದೇಶ ಹೊರ ಬರುತ್ತಿದ್ದಂತೆ ಅಘಾತಗೊಂಡರಲ್ಲದೇ ಬಿಕ್ಕಿ ಬಿಕ್ಕಿ ಅಳಲು ಸುರು ಮಾಡಿದರು. ಮರಣ ದಂಡನೆ ತೀರ್ಪಿ ನೀಡಿದ ನ್ಯಾಯಾಧೀಶರು ಹೈಕೋರ್ಟ್ಗೆ ಹೋಗುವ ಅವಕಾಶ ಒದಗಿಸಿಕೊಟ್ಟಿದ್ದಾರೆ.
ಗಂಗಾವತಿ ತಾಲೂಕಿನ ಅಂಜನಾದ್ರಿ ಹತ್ತಿರದ ಸಣಾಪುರ ಬಳಿ ವಿದೇಶಿ ಮಹಿಳೆ ಮೇಳೆ ಸಾಮೂಹಿಕ ಅತ್ಯಾಚಾರ ಹಾಗೂ ಒಡಿಶಾದ ಬಿಬಾಸ್ ಕುಮಾರ್ ನಾಯಕ್ ಎಂಬುವವರನ್ನು ೨೧ ವರ್ಷದ ಮಲ್ಲೇಶ ಅಲಿಯಾಸ್ ಹಂದಿ ಮಲ್ಲ, ಸಾಯಿ ಅಲಿಯಾಸ್ ಚೈತನ್ಯ ಸಾಯಿ, ೨೭ ವರ್ಷದ ಶರಣಪ್ಪ ಅಲಿಯಾಸ್ ಶರಣಬಸವರಾಜ ಎಂಬ ಆರೋಪಿಗಳು ವಿದೇಶಿಗರೊಂದಿಗೆ ಹಣಕ್ಕಾಗಿ ಜಗಳ ಮಾಡಿ ಮಹಿಳೆಯ ರಕ್ಷಣೆಗೆ ಬಂದವರನ್ನ ಹತ್ತಿರದ ಕಾಲುವೆಗೆ ತಳ್ಳಿ ವಿದೇಶಿ ಮಹಿಳೆಯ ಮೇಲೆ ಗ್ಯಾಂಗ್ ರೇಪ್ ಮಾಡಿದ್ದಾರೆ. ಕಾಲುವೆಗೆ ಬಿದ್ದವರಲ್ಲಿ ಒಡಿಶಾದ ಬಿಭಾಸ್ ಕುಮಾರ್ ನಾಯಕ್ ಸಾವಿಗೀಡಾಗಿದ್ದನು. ಗ್ಯಾಂಗ್ ರೇಪ್, ರಾಬರಿ ಘಟನೆ ಸಂಬಂಧಿಸಿದಂತೆ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಯಾಧೀಶರು ಕೂಲಂಕುಷವಾಗಿ ಪರಿಶೀಲಿಸಿ ಆರೋಪಿಗಳನ್ನು ದೋಷಿ ಎಂದು ಪರಿಗಣಿಸಿ ಮೂರು ಜನ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ ಆದೇಶ ಮಾಡಿದ್ದಾರೆ ಎಂದು ಸರಕಾರಿ ವಕೀಲೆ ನಾಗಲಕ್ಷ್ಮಿ ತಿಳಿಸಿದ್ದಾರೆ.
ಈ ಪ್ರಕರಣ ಕುರಿತು ಕೊಪ್ಪಳ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಅರಸಿದ್ದಿ ಮಾತನಾಡಿ, ಕಳೆದ ವರ್ಷ ಗಂಗಾವತಿ ಪೊಲೀಸ್ ಠಾಣೆಯಲ್ಲಿ ಕಳೆದ ೨೦೨೫ರ ಮಾರ್ಚ್ನಲ್ಲಿ ಘಟನೆಗೆ ಸಂಬಂಧಿಸಿದಂತೆ ಮರ್ಡರ್, ಗ್ಯಾಂಗ್ ರೇಪ್, ರಾಬರಿ ಹಾಗೂ ಅಟೆಂಪ್ಟ್ಟು ಮರ್ಡರ್ ಕೇಸ್ ದಾಖಲಾಗಿತ್ತು. ನಂತರ ೨೪ ಗಂಟೆಗಳಲ್ಲಿ ಇಬ್ಬರನ್ಮು ಅರೆಸ್ಟ್ ಬಂಧಿಸಲಾಗಿತ್ತು. ಮತ್ತು ಒಬ್ಬನನ್ನು ಚೆನ್ನೈ ರೇಲ್ವೆ ಸ್ಟೇಶನ್ನಲ್ಲಿ ಬಂಧಿಸಲಾಗಿತ್ತು. ಮೂರು ಜನ ಆರೋಪಿಗಳ ವಿರುದ್ಧ ೭೫೦ ಪುಟಗಳ ಚಾರ್ಜ್ ಸೀಟ್ನ್ನು ಕೋರ್ಟ್ಗೆ ಸಲ್ಲಿಸಲಾಗಿತ್ತು. ಈ ಪ್ರಕರಣವನ್ನು ಪರಿಶೀಲಿಸಿದ ನ್ಯಾಯಾಧೀಶರು ಮೂರು ಜನ ಆರೋಪವನ್ನು ಸಾಬೀತುಪಡಿಸಿ ಅಪರಾಧಿಗಳಿಗೆ ಮರಣ ದಂಡನೆ ವಿಧಿಸಿದ್ದಾರೆ. ಅಂಜನಾದ್ರಿಯಂತಹ ಪವಿತ್ರ ಕ್ಷೇತ್ರದ ಹತ್ತಿರ ಇಂತಹ ಹೀನ ಕೃತ್ಯ ಎಸಗುವವರಿಗೆ ಈ ತೀರ್ಪು ಒಂದು ಎಚ್ಚರಿಕೆಯ ಗಂಟೆಯಾಗಿದೆ. ಕೇವಲ ೯ ತಿಂಗಳಲ್ಲಿ ಗಲ್ಲು ಶಿಕ್ಷೆಯ ಆದೇಶ ಹೊರಬಿದ್ದಿರುವುದು ನ್ಯಾಯಾಂಗ ವ್ಯವಸ್ಥೆಯ ಮೇಲಿನ ನಂಬಿಕೆ ಮತ್ತಷ್ಟು ಹೆಚ್ಚಿಸಿದೆ ಎಂದರು.
ಬಾಕ್ಸ್:
ನ್ಯಾಯಾಧೀಶರ ತೀರ್ಪು ಸ್ವಾಗತಾರ್ಹ
ನನ್ನ ಗಂಗಾವತಿ ವಿಧಾನಸಭೆ ಕ್ಷೇತ್ರದಲ್ಲಿ ಐತಿಹಾಸಿಕ ಅಂಜನಾದ್ರಿ ದೇವಸ್ಥಾನವಿದೆ. ಮತ್ತು ಆನೆಗೊಂದಿ, ಹಂಪಿ ಪವಿತ್ರ ಕ್ಷೇತ್ರಗಳಿಗೆ ನಿತ್ಯ ಸಾವಿರಾರು ಪ್ರವಾಸಿಗರು ಬರುತ್ತಾರೆ. ಆದರೆ ಕಳೆದ ಹನ್ನೊಂದು ತಿಂಗಳ ಹಿಂದೆ ವಿದೇಶಿ ಮಹಿಳೆಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆಯ ಘಟನೆಗೆ ನಮಗೆ ಶಾಖ್ ನೀಡುತ್ತು ಮತ್ತು ಇದು ಅಂತರಾಷ್ಟ್ರೀಯಮಟ್ಟದಲ್ಲಿ ಸುದ್ದಿಯಾಗಿತ್ತು. ಆರೋಪಿಗಳನ್ನು ಬಂಧಿಸಿ ಪೊಲೀಸರು ಕೋರ್ಟ್ಗೆ ವರದಿ ಸಲ್ಲಿಸಿದ್ದರು. ನ್ಯಾಯಾಧೀಶರು ಕೊಲೆಗಾರರ ವಿರುದ್ಧ ಮರಣ ದಂಡನೆ ತೀರ್ಪು ನೀಡಿರುವುದು ಸ್ವಾಗತಿಸುತ್ತೇನೆ. ಇದು ಪ್ರತಿಯೊಬ್ಬ ದುಷ್ಕರ್ಮಿಗಳಿಗೆ ಎಚ್ಚರಿಕೆಯ ಗಂಟೆಯಾಗಿದೆ. ಐತಿಹಾಸಿಕ ಆನೆಗೊಂದಿ ಸುತ್ತ ಇಂತಹ ಘಟನೆ ಮರುಕಳಿಸದಂತೆ ಸರಕಾರ ಎಚ್ಚರಿಕೆವಹಿಸಬೇಕು. ಇಲ್ಲಿ ಖಾಯಂ ಪೊಲೀಸ್ ಠಾಣೆ ಪ್ರಾರಂಭಿಸಲು ನಾನು ಸರಕಾರಕ್ಕೆ ಒತ್ತಾಯಿಸುತ್ತೇನೆ.
ಗಾಲಿ ಜನಾರ್ಧನರೆಡ್ಡಿ, ಶಾಸಕರು, ಗಂಗಾವತಿ.

14th October 2025
ಗಂಗಾವತಿ.
ನಗರದ ಗದ್ವಾಲ್ ಕ್ಯಾಂಪಿನ ಚರ್ಚಿನಲ್ಲಿ 2020ರಲ್ಲಿ ನಡೆದಿದ್ದ ಬಾಲ್ಯ ವಿವಾಹ ಪ್ರಕರಣದಲ್ಲಿ ಚರ್ಚ್ ಫಾದರ್ ಸೇರಿ ಆರು ಜನ ಆರೋಪಿಗಳಿಗೆ ಎರಡು ವರ್ಷ ಜೈಲು ಶಿಕ್ಷೆ ಮತ್ತು ತಲಾ ಹತ್ತು ಸಾವಿರ ರೂಪಾಯಿಗಳ ದಂಡ ವಿಧಿಸಿ ಗಂಗಾವತಿಯ ಪ್ರಧಾನ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶ ನಾಗೇಶ ಪಾಟೀಲ್ ಅವರು ತೀರ್ಪು ಪ್ರಕಟಿಸಿ ಆದೇಶಿಸಿದ್ದಾರೆ.
ಅ.14 ರಂದು ಮಂಗಳವಾರ ತೀರ್ಪು ಪ್ರಕಟಿಸಿರುವ ಕುರಿತು ಸರಕಾರಿ ಸಹಾಯಕ ಅಭಿಯೋಜಕ ನಿರಂಜನಸ್ವಾಮಿ ಹಿರೇಮಠ ಮಾಹಿತಿ ನಿ೮ಡಿದ್ದಾರೆ. ಪ್ರಕರಣದ 4ನೇ ಆರೋಪಿ ಶ್ರೀರಾಮನಗರದ ಯೇಸು ಮತ್ತು 5ನೇ ಆರೋಪಿ ಶ್ರೀರಾಮನಗರದ ಶಾಂತಮ್ಮ ಗಂಡ ಯೇಸು ಅವರು ತಮ್ಮಅಪ್ರಾಪ್ತ 14 ವಯಸ್ಸಿನ ಮಗಳ ಮದುವೆಯನ್ನು 2ನೇ ಆರೋಪಿ ಗಂಗಾವತಿ ತಾಲೂಕಿನ ಗದ್ವಾಲ್ ಕ್ಯಾಂಪಿನ ಆನಂದ ತಂದೆ ಏರುಮಿಚನೊಂದಿಗೆ 1ನೇ ಆರೋಪಿ ಗದ್ವಾಲ್ಕ್ಯಾಂಪಿನ ಕುರುಪಣ್ಣ ತಂದೆ ಆನಂದನೊಂದಿಗೆ ಗಂಗಾವತಿ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಬರುವ ಗದ್ವಾಲ್ ಕ್ಯಾಂಪ್ ಗ್ರಾಮದ ಚರ್ಚಿನಲ್ಲಿ ದಿನಾಂಕ 22-05-2020 ರಂದು ಚರ್ಚ್ ಫಾದರ್ 6ನೇ ಆರೋಪಿ ಅಬ್ರಾಹಿಂ ನೇತೃತ್ವದಲ್ಲಿ ಬಾಲ್ಯ ವಿವಾಹವನ್ನು ನಡೆಸಿದ್ದಾರೆ. ಆರೋಪಿತರೆಲ್ಲರೂ ಕಲಂ 09,10,11 ಬಾಲ್ಯ ವಿವಾಹ ನಿಷೇಧ ಕಾಯ್ದೆ 2006ರ ಅಡಿಯಲ್ಲಿ ಅಪರಾಧ ಮಾಡಿರುವ ಕುರಿತು ಅಂದು ಕರ್ತವ್ಯದಲ್ಲಿದ್ದ ಗಂಗಾವತಿ ಠಾಣೆಯ ಎಸ್.ಐ ದೊಡ್ಡಪ್ಪ ಜೆ.ಪಿ ಅವರು ಸಾಕ್ಷಿ ಸಮೇತ ಆರೋಪಿತರ ವಿರುದ್ಧ ದೋಷಾರೋಪಣ ಪತ್ರವನ್ನು ಸಲ್ಲಿಸಿದ್ದರು. ನಂತರ ಪ್ರಕರಣದ ಸವಿಸ್ತಾರ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ನಾಗೇಶ ಪಾಟೀಲ್ ಪ್ರಕರಣದ ಆರೋಪಿ 1) ಕುರಪಣ್ಣ ತಂದೆ ಆನಂದ ಸಾಃ ಗಾದ್ವಾಲ ಕ್ಯಾಂಪ್ ತಾಃ ಗಂಗಾವತಿ ಜಿಃ ಕೊಪ್ಪಳ 2) ಆನಂದ ತಂದೆ ಏರಮಿಚಿಯಾ ಸಾಃ ಗಾದ್ವಾಲ ಕ್ಯಾಂಪ್ ತಾಃ ಗಂಗಾವತಿ ಜಿಃ ಕೊಪ್ಪಳ 3) ಆಶಿರ್ವಾದಮ್ಮ ಗಂಡ ಆನಂದ ಸಾಃ ಗಾದ್ವಾಲ ಕ್ಯಾಂಪ್ ತಾಃ ಗಂಗಾವತಿ 4) ಯೇಸು ಸಾಃ ಶ್ರೀರಾಮನಗರ 5) ಶಾಂತಮ್ಮ ಗಂಡ ಯೇಸು ಸಾಃ ಶ್ರೀರಾಮನಗರ 6) ಅಂಬ್ರಾಹಿಂ ಡಿ. ತಂದೆ ಬಡಗಪ್ಪ ದಾದೆಪಾಲ್, ಸಾಃ ಗದ್ವಾಲ್ ಕ್ಯಾಂಪ್ ತಾಃ ಗಂಗಾವತಿ ಇವರನ್ನು ದೋಷಿಯೆಂದು ಪರಿಗಣಿ ತೀರ್ಪು ನೀಡಿದೆ. ಆರೋಪಿತರಿಗೆ ಬಾಲ್ಯ ವಿವಾಹ ನಿಷೇಧ ಕಾಯ್ದೆ ಕಲಂ 09,10 ಮತ್ತು 11ರ ಅಡಿಯಲ್ಲಿ ಆರೋಪಿತರಲ್ಲರಿಗೂ 2 ವರ್ಷಗಳ ಕಾಲ ಸೆರೆಮನೆವಾಸ ಶಿಕ್ಷೆ ಮತ್ತು ತಲಾ ರೂ.10,000 ಸಾವಿರ ದಂಡ ವಿಧಿಸಿ ಆದೇಶಿಸಿದ್ದಾರೆ. ಪ್ರಕರಣವನ್ನು ನ್ಯಾಯಾಲಯದ ಮುಂದೆ ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ನಿರಂಜನಸ್ವಾಮಿ ಡಾ:ದೇವಯ್ಯ ಸ್ವಾಮಿ ಹಿರೇಮಠ ಇವರು ವಾದ ಮಂಡಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿಗಳಾದ ಆಂಜನೇಯ, ವೆಂಕಟೇಶ, ಶ್ರೀಶೈಲ್ ಅವರುಗಳು ಪ್ರಕರಣದ ವಿಚಾರಣೆಯ ಸಮಯದಲ್ಲಿ ಸಾಕ್ಷಿಗಳನ್ನು ಸಮಯಕ್ಕೆ ಸರಿಯಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಸಹಕಾರ ನೀಡಿದ್ದಾರೆ.
ಬಾಲ್ಯ ವಿವಾಹ ನಿಷೇಧ ಕಾಯ್ದೆ ಇದ್ದರು ಸಹ ಗಂಗಾವತಿ ತಾಲೂಕ ಸೇರಿದಂತೆ ಜಿಲ್ಲೆಯಾದ್ಯಂತ ಹೆಚ್ಚು ಬಾಲ್ಯ ವಿವಾಹಗಳು ನಿರಂತರವಾಗಿ ನಡೆಯುತ್ತವೆ. ಆದರೆ ಇಂದು ಹೊರಬಿದ್ದಿರುವ ನ್ಯಾಯಾಧೀಶರ ತೀರ್ಪು ಬಾಲ್ಯ ವಿವಾಹ ನಡೆಸುವ ಮತ್ತು ಅದರಲ್ಲಿ ಭಾಗಿಯಾಗುವ ವ್ಯಕ್ತಿಗಳಿಗೆ ಎಚ್ಚರಿಕೆಯ ಗಂಟೆಯಾಗಿದ್ದು, ಅಪರಾಧಿಗಳಿಗೆ ತಡವಾದರೂ ಸಹ ನ್ಯಾಯಾಲಯದಿಂದ ಶಿಕ್ಷೆ ನಿಶ್ಚಿತ ಎಂಬ ಸಂದೇಶ ಸಮಾಜಕ್ಕೆ ರವಾನೆಯಾಗಿದೆ. ಹೀಗಾಗಿ ಜಿಲ್ಲೆಯ ಜನರು ಬಾಲ್ಯ ವಿವಾಹಗಳ ಬಗ್ಗೆ ಈ ತೀರ್ಪಿನಿಂದ ಜಾಗೃತರಾಬೇಕು ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಅಭಿಪ್ರಾಯ ವ್ಯಕ್ತವಾಗುತ್ತಿದೆ.

28th September 2025
ಕಾರಟಗಿ
ಪಟ್ಟಣದ ಸೌಂದರ್ಯೀಕರಣಕ್ಕೆ ತಮ್ಮದೆ ಆದ ರೀತಿಯಲ್ಲಿ ಕಾರ್ಯ ನಿರ್ವಹಿಸುವ ಪುರಸಭೆಯ ಸಮಸ್ತ ಪೌರ ಕಾರ್ಮಿಕರಿಗೆ ವಸತಿ ಸೌಲಭ್ಯ ಕಲ್ಪಿಸಲು ನಾನು ಪ್ರಮಾಣಿಕ ಪ್ರಯತ್ನ ಮಾಡುತ್ತಿದ್ದೆನೆ. 15 ಎಕರೆ ಭೂಮಿಯಲ್ಲಿ ಎರಡುವರೆ ಎಕರೆ ಭೂಮಿಯನ್ನು ಪೌರ ಕಾರ್ಮಿಕ ವಸತಿಗೆ ಮಿಸಲಿರಿಸುತ್ತೇನೆ. ಮತ್ತು ಕಾರಟಗಿ ಪುರಸಭೆಯನ್ನು ನಗರಸಭೆಯನ್ನಾಗಿ ಮಾಡಬೇಕೆಂಬ ಜನರ ಬೇಡಿಕೆಯ ಪ್ರಸ್ತಾವನೆಯನ್ನು ಸಚಿವ ಸಂಪುಟದಲ್ಲಿ ತರುತ್ತೇನೆ. ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.
ಜಿಲ್ಲಾಡಳಿತ ಹಾಗೂ ನಗರಾಭಿವೃದ್ಧಿ ಕೋಶ ಕೊಪ್ಪಳ, ಪುರಸಭೆ ಕಾರ್ಯಾಲಯ ಕಾರಟಗಿ, ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸಂಘ ಕಾರಟಗಿ ತಾಲ್ಲೂಕು ಘಟಕ ಸಂಯುಕ್ತಾಶ್ರಯದಲ್ಲಿ ಪದ್ಮಶ್ರೀ ಕನ್ವೆನ್ಷನ್ ಹಾಲ್ ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ನಾನು ಮೊದಕ ಭಾರಿ ಶಾಸಕನಾಗಿ ಸಚಿವನಾದ ನಂತರ ಗ್ರಾಪಂ ನಿಂದ ಕಾರಟಗಿ ಪುರಸಭೆಯನ್ನಾಗಿ ಮೇಲ್ದರ್ಜೆಗೆರಿಸಿದೆ. ಪುರಸಭೆ ನೌಕರರ ಖಾಯಾಂತಿಗೂ ನಾನು ವಿಶೇಷ ಪ್ರಯತ್ನ ಮಾಡಿದ್ದೇನೆ. ನೇಮಕಾತಿಯಲ್ಲು ಸಹ ಈಗಾಗಲೆ ಸಿಎಂರೊಂದಿಗೆ ಮಾತನಾಡಿದ್ದು, ಶೀರ್ಘ ಈ ಕೆಲಸವನ್ನು ಪೂರ್ಣಗೊಳಿಸು ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ. ಜೊತೆಗೆ ಇಲ್ಲಿನ ಪುರಭೆ ನಗರಸಭೆ ಮಾಡಲು ನಾನು ಸಹ ಉತ್ಸುಕನಾಗಿದ್ದೇನೆ. ಪ್ರಸ್ತಾವನೆಯನ್ನು ಸರಕಾರದ ಸಚಿವ ಸಂಪುಟದಲ್ಲಿ ಅನುಮೊದನೆಗೆ ಮುಂದಾಗುತ್ತೇನೆ. ನಗರಸಭೆಯಾದರೆ ಕಾರಟಗಿ ಜಿಲ್ಲೆಯ ಸದೃಢ ತಾಲೂಕ ಆಗುತ್ತದೆ. ಜನರ ಆದಯ ಹೆಚ್ಚಳಕ್ಕೂ ಪೂರಕವಾಗುತ್ತದೆ. ಊರಿನ ಅಭಿವೃದ್ದಿಗಾಗಿ ಜನರು ಬದಲಾವಣೆಗೆ ಹೊಂದಿಕೊಳ್ಳಬೇಕು. ನಮ್ಮ ಸರಕಾರ ಅಭಿವೃದ್ದಿಗೆ ಹೆಚ್ಚು ಒತ್ತು ಕೊಡುತ್ತದೆ. ಕಾರಟಗಿ ತಾಲೂಕಿಗೆ ಹೊಸ ಹೊಸ ಯೋಜನೆಗಳನ್ನು ತರುವ ಪ್ರಯತ್ನ ಮಾಡುತ್ತಿದ್ದೇನೆ ಎಂದರು.
ಪುರಸಭೆ ಅಧ್ಯಕ್ಷೆ ಅಧ್ಯಕ್ಷತೆ ರೇಖಾ ಆನೆಹೊಸರು ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೌರ ಕಾರ್ಮಿಕರ ಬಗ್ಗೆ ನಿವೃತ ಶಿಕ್ಷಕ ಗುರುಬಸಪ್ಪ ಪಟ್ಟಣಶೆಟ್ಟಿ ಉಪನ್ಯಾಸ ನೀಡಿದರು. ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಈಶಪ್ಪ ಇಟ್ಟಂಗಿ ಮಾತನಾಡಿ, ಪೌರಕಾರ್ಮಿಕರಾಗಿ ನಿವೇಶನ, ಪುರಸಭೆ ನೂತನ ಕಟ್ಟಡಕ್ಕಾಗಿ ಅನುಧಾನ ಹಾಗೂ ಪುರಸಭೆಗೆ ಅನುದಾನ ನೀಡುವಂತೆ ಸಚಿವರಲ್ಲು ಮನವಿ.ಮಾಡಿದರು.
ಪೌರ ಕಾರ್ಮಿಕ ಸೇವ ನೌಕರ ಸಂಘದ ಅದ್ಯಕ್ಷ ಸಣ್ಣ ಈರಪ್ಪ ಚೌಡ್ಕಿ ಮಾತನಾಡಿ ಪೌರ ಕಾರ್ಮುಕರ ಬೇಡಿಕೆ ಈಡೇರಿಸಬೇಕು ಎಂದು ಸಚಿವರಿಗೆ ಮನವಿ ನೀಡಿದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ದೇವಮ್ಮ ಗಂಗಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಎಚ್. ಈಶಪ್ಪ, ಸದಸ್ಯರಾದ ಹಿರೇಬಸಪ್ಪ ಸಜ್ಜನ, ಸೋಮಶೇಖರ್ ಬೇರಿಗ, ದೊಡ್ಡಬಸವರಾಜ ಬೂದಿ, ಮಂಜುನಾಥ್ ಮೇಗೂರು, ರಾಮಣ್ಣ, ಪಕೀರಪ್ಪ ನಾಯಕ, ಆನಂದ ಮ್ಯಾಗಲಮನಿ, ಹನುಮಂತರೆಡ್ಡಿ, ಪೌರ ಕಾರ್ಮಿಕರ ಸಂಘದ ಸಣ್ಣ ವೀರಪ್ಪ ಚೌಡ್ಕಿ,
ಸರಕಾರಿ ನೌಕರರ ಸಂಘದ ಅಧ್ಯಕ್ಷ ಹನುಮಂತಪ್ಪ ತೊಂಡಿಹಾಳ, ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ್, ಉಪಾಧ್ಯಕ್ಷ ನಾಗರಾಜ ಅರಳಿ,
ರೈಸ್ ಮಿಲ್ ಸಂಘದ ಅಧ್ಯಕ್ಷ ಎನ್. ಶ್ರೀನಿವಾಸ್, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಶರಣೆಗೌಡ ಮಾಲಿ ಪಾಟೀಲ್, ಮುಖಂಡರಾದ ಬಸವರಾಜ್ ಎತ್ತಿನಮನಿ, ಜಮಾದಗ್ನಿ ಚೌಡಕಿ, ನಾಗರಾಜ ಈಡಿಗೇರ್, ಶರಣಪ್ಪ ಪರಕಿ, ರಾಜು ದೇವಿಕ್ಯಾಂಪ್, ಮರಿಯಪ್ಪ ಸಾಲೋಣಿ, ಮಹಿಬೂಬ್ ಮೇಸ್ತ್ರಿ, ಧನಂಜಯ ಎಲಿಗಾರ್, ಶಕುಂತಲಾ, ರೇಣುಕಮ್ಮ ನಾಯಕ, ಗಾಯಕ ದ್ಯಾಮೇಶ್, ಡಾ. ಪ್ರಿಯಾಂಕ ಪಟ್ಟಣ ಶೆಟ್ಟಿ, ಡಾ. ನಾಗರಾಜ, ಸರಿಗಮಪ ಕಾರ್ಯಕ್ರಮದಲ್ಲಿ ಭಾಗವಹಿಸಿದ ದ್ಯಾಮೇಶ್ ಸೇರಿ ಇನ್ನಿತರರು ಇದ್ದರು.
ಬಾಕ್ಸ್.
ಕಾರಟಗಿ ಪುರಸಭೆ ನಗರಸಭೆನ್ನಾಗಿಸಲು ಪ್ರಯತ್
ಕೊಪ್ಪಳ ಜಿಲ್ಲೆಯ ಪ್ರಮುಖ ಪಟ್ಟಣವಾಗಿರುವ ಕಾರಟಗಿಯ ಸರ್ವಾಂಗೀಣ ಅಭಿವೃದ್ದಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಈ ದಿಸೆಯಲ್ಲಿ ಇಲ್ಲಿನ ಪುರಸಭೆಯನ್ನು ನಗರಸಭೆಯನ್ನಾಗಿಸುವ ಕೆಲಸ ಪ್ರಮಾಣಿಕವಾಗಿ ಮಾಡುತ್ತೇನೆ. ಪ್ರಸ್ತಾವನೆಯನ್ನು ಸಚಿವ ಸಂಪುಟದಲ್ಲಿ ಅನುಮೊದನೆ ಪಡೆಯುವ ಕೆಲಸ ಮಾಡುತ್ತೇನೆ. ನಗರಸಭೆಯಾದರೆ ಆದಾಯ ಹೆಚ್ಚುತ್ತದಲ್ಲದೇ ಬೃಹತ್ ಯೋಜನೆಗಳು ಮಂಜೂರಾಗುತ್ತವೆ. ಅಭಿವೃದ್ದಿ ಕಾರ್ಯದಲ್ಲಿ ಜನರು ವೈಯಕ್ತಿಕ ಹಿತಾಶಕ್ತಿ ಬಿಡಬೇಕು. ಊರಿನ ಹಿತಕ್ಕಾಗಿ ಸಹಕಾರ ನೀಡಬೇಕು.
ಶಿವರಾಜ ತಂಗಡಗಿ, ಜಿಲ್ಲಾ ಉಸ್ತುವಾರಿ ಸಚಿವರು, ಕೊಪ್ಪಳ.

25th September 2025
ಕೊಪ್ಪಳ.
ರಾಜ್ಯ ಸರಕಾರ ಕಳೆದ ಮೂರು ದಿನಗಳಿಂದ ನಡೆಸುತ್ತಿರುವ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಗೆ ಮನೆ ಬಂದವರಿಗೆ ಕುಕನೂರಿನ ಮಂಗಳೂರು ಗ್ರಾಮದ ಯುವಕ ರಾಮಣ್ಣ ನಿರಾಕರಿಸಿ ಪತ್ರ ಬರೆದು ಕೊಡುವ ಮೂಲಕ ಗಣತಿದಾರರಿಗೆ ಶಾಖ್ ನೀಡಿದ್ದಾರೆ ಮತ್ತು ಗಣತಿದಾರರು ಕೇಳುವ ೬೦ ಪ್ರಶ್ನೇಗಳಲ್ಲಿ ವೈಯಕ್ತಿ ವಿವರ, ಜಾತಿ ಮತ್ತಿತರ ಸಂಗತಿಗಳು ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಗುರುವಾರ ಘಟನೆ ನಡೆದಿದೆ. ಹಿಂದುಳಿದ ಆಯೋಗದಿಂದ ನಡೆಯುತ್ತಿರುವ ಸಮೀಕ್ಷೆಯಲ್ಲಿ ಗಣತಿದಾರರು ಆಗಮಿಸಿದ್ದ ಸಂದರ್ಭದಲ್ಲಿ ಯುವಕ ರಾಮಣ್ಣ ಹಲವು ಪ್ರಶ್ನೇಗಳನ್ನು ಕೇಳುವುದಕ್ಕೆ ವಿರೋಧಿಸಿದ್ದಾರೆ. ಅನ್ಯ ವ್ಯಕ್ತಿಗಳು ಬಂದು ಜಾತಿ ಕೇಳುವುದು ಸುಪ್ರೀಂಕೋರ್ಟ್ ಆದೇಶ ಉಲ್ಲಂಘನೆಯಾಗುತ್ತದೆ. ಮತ್ತು ಮನೆಯಲ್ಲಿ ವಿಧವೆಯರು ಇದ್ದಾರೆಯೇ ಎಂಬ ಪ್ರಶ್ನೇಯಿಂದ ಮಹಿಳೆಯರಿಗೆ ತೀವ್ರ ಮುಜುಗರವಾಗುತ್ತಿದೆ. ರಾಜ್ಯ ಸರಕಾರ ಅವೈಜ್ಞಾನಿವಾಗಿ ಮತ್ತು ದೋಷಪೂರಿತವಾಗಿ ೬೦ ಪ್ರಶ್ನೇಗಳನ್ನು ಕೇಳುವುದು ಸರಿಯಲ್ಲ. ಕಾಲಂ ೧೨ರಲ್ಲಿ ಜಾತಿ ಮತ್ತು ಉಪ ಜಾತಿ ನೋಂದಣಿ ಮಾಡಬಾರದು. ಮನೆಗಳಲ್ಲಿ ಶೌಚಾಲಯ, ದೀಪಗಳು ಮತ್ತಿತರ ಅಸಂಬದ್ಧವಾದ ಪ್ರಶ್ನೇಗಳಿರುವುದರಿಂದ ನಾನು ಇದನ್ನು ವಿರೋಧಿಸಿ ಸಮೀಕ್ಷೆಯಲ್ಲಿ ಮಾಹಿತಿ ಕೊಡುವುದಿಲ್ಲ ಎಂದು ಸಮೀಕ್ಷೆಗೆ ಬಂದವರಿಗೆ ಪತ್ರ ನೀಡಿದ್ದೇನೆ. ರಾಜ್ಯ ಸರಕಾರ ಇದನ್ನು ಪರಿಶೀಲಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

24th September 2025
ಗಂಗಾವತಿ.
2023 ರಲ್ಲಿ ನಗರದ ಸಾರ್ವಜನಿಕ ಸರಕಾರಿ ಉಪ ವಿಭಾಗ ಆಸ್ಪತ್ರೆಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣದಲ್ಲಿ ಗಂಗಾವತಿ ಪ್ರಧಾನ ಸಿವಿಲ್ ಜೆ.ಎಂ.ಎಫ್ .ಸಿ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯಲ್ಲಿ ನಾಲ್ಕು ಜನ ಆರೋಪಿಗಳಾದ ಅಬ್ದುಲ್ ಸಮೀರ್, ಮಂಜುನಾಥ, ಅಲ್ತಾಫ್ ಮತ್ತು ಖಾಜಾಪಾಷ ಅವರು ದೋಷಿಗಳೆಂದು ಸಾಬೀತುಪಡಿಸಿ ಮೂರು ವರ್ಷ ಸೆರೆಮನೆ ವಾಸ ಮತ್ತು ರೂ.5000 ದಂಡ ವಿಧಿಸಿ ನ್ಯಾಯಾಧೀಶ ನಾಗೇಶ ಪಾಟೀಲ್ ಅವರು ತೀರ್ಪು ನೀಡಿದ್ದಾರೆ.
ಬುಧವಾರ ಸೆ.24 ರಂದು ತೀರ್ಪು ಪ್ರಕಟವಾಗಿದೆ. ದಿನಾಂಕ:- 18-08-2023 ರಂದು ಮಧ್ಯಾಹ್ನ 2-00 ಗಂಟೆಯ ಸುಮಾರಿಗೆ ಹಾಗೂ ಅದೇ ದಿನದಂದು ಸಂಜೆ 6-00 ಗಂಟೆಯ ಸುಮಾರಿಗೆ ಗಂಗಾವತಿ ನಗರದ ಸರಕಾರಿ ಉಪ-ವಿಭಾಗ ಆಸ್ಪತ್ರೆಯ ಕಂಪೌಂಡ್ ಒಳಗೆ ಪ್ರವೇಶ ಮಾಡಿ ಆಸ್ಪತ್ರೆಯಲ್ಲಿನ 1) ಮಾಡ್ಯುಲರ್ ಶಸ್ತ್ರ ಚಿಕಿತ್ಸೆ ಕೊಠಡಿಯ ಎ.ಸಿಂ ಕಾಪರ್ ಪೈಪ್ ಲೈನ್ ರೂ. 40.000=00, 2) ಮುಖ್ಯ ವೈದ್ಯಾಧಿಕಾರಿ ಕೊಠಡಿಯ 02 ಟನ್ ಎ.ಸಿಯ 04 Mtr ಕಾಪರ್ ಪೈಪ್ ಲೈನ್ ರೂ.6,000=00 ಬೆಲೆಯ, 3) ಲಿಕ್ವಿಡ್ ಬ್ಯಾಂಕನ 42 MM ಕಾಪರ್ ಪೈಪ ಲೈನ್ 40 ಫಿಟ್ ಉದ್ದದ ರೂ.50,000-00 ಬೆಲೆಯ, 4) ಆಕ್ಸಿಜನ್ ಜನರೇಷನ್ ಪ್ಲಾಂಟ್ಸ 42 MM ಕಾಪರ್ ಪೈಪ್ ಲೈನ್ 40 ಫಿಟ್ ಉದ್ದ ರೂ. 50,000-00 ಬೆಲೆಯ, ಮತ್ತು ಆಕ್ಸಿಜನ್ ಮ್ಯಾನಿಪೋಲ್ಡ್ ಕೊಠಡಿಯಲ್ಲಿ ಕಾಪರ್ ಟೆಲ್ ಪೈಪುಗಳು ರೂ 25,000-00 ಬೆಲೆಯ ಒಟ್ಟು 1,71,000-00 ರೂಪಾಯಿ ಬೆಲೆ ಬಾಳುವ ವಸ್ತಗಳನ್ನು ಕಳ್ಳತನ ಮಾಡಿ ತೆಗೆದುಕೊಂಡು ಹೋಗಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತರ ವಿರುದ್ಧ ಕಲಂ 380 ಐಪಿಸಿ ಅಡಿ ಅಪರಾಧ ಕಂಡುಬಂದಿದ್ದರಿಂದ ದೋಷಾರೋಪಣ ಪಟ್ಟಿಯನ್ನು ಅಂದಿನ ತನಿಖಾಧಿಕಾರಿಯಾದ ಗಂಗಾವತಿ ನಗರ ಪೊಲೀಸ್ ಠಾಣೆಯ ಕಾಮಣ್ಣ ಅವರು ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ನಂತರ ಪ್ರಕರಣದ ಸವಿಸ್ತಾರ ವಿಚಾರಣೆ ನಡೆಸಿದ ನ್ಯಾಯಾಧೀಶರು ಶಿಕ್ಷೆಯನ್ನು ವಿಧಿಸಿ ಆದೇಶಿಸಿದ್ದಾರೆ.
ಪ್ರಕರಣವನ್ನು ನ್ಯಾಯಾಲಯದ ಮುಂದೆ ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ನಿರಂಜನಸ್ವಾಮಿ ಹಿರೇಮಠ ಅವರು ವಾದ ಮಂಡಿಸಿದ್ದರು. ಗಂಗಾವತಿ ನಗರ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿಯವರಾದ ಶುಭಾಷ್ , ಯಮನೂರಪ್ಪ, ಬೀಮಣ್ಣ, ಯಲ್ಲರೆಡ್ಡಿ ಪ್ರಕರಣದ ವಿಚಾರಣೆಯ ಸಮಯದಲ್ಲಿ ಸಾಕ್ಷಿಗಳನ್ನು ಸಮಯಕ್ಕೆ ಸರಿಯಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು ಎಂದು ಸರಕಾರಿ ಅಭಿಯೋಜಕ ನಿರಂಜನಸ್ವಾಮಿ ಹಿರೇಮಠ ತಿಳಿಸಿದ್ದಾರೆ.

18th September 2025
ಗಂಗಾವತಿ.
ತಾಲೂಕಿನ ಆನೆಗೊಂದಿ ಸಮೀಪದ ತುಂಗಭದ್ರಾ ನದಿ ತಟದಲ್ಲಿರುವ ನವ ವೃಂದಾವನಗಡ್ಡೆಯಲ್ಲಿರುವ ಒಂಬತ್ತು ಯತಿಗಳ ವೃಂದಾವನಗಳಿಗೆ ಯತಿ ದ್ವಾದಶಿ ಕಾರ್ಯಕ್ರಮ ನಡೆಯಿತು.
ಗುರುವಾರ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳವರ ಮಠದ ಪೀಠಾಧಿಪತಿ ಶ್ರೀ ಶ್ರೀಸುಬುಧೇಂದ್ರ ತೀರ್ಥಶ್ರೀಪಾದಂಗಳವರ ಆದೇಶದಂತೆ ಆನೆಗೊಂದಿ ರಾಯರ ಮಠದ ಪೂರ್ವೀಕ ಗುರುಗಳ ಮೂಲ ವೃಂದಾವನಗಳಿಗೆ ಅತ್ಯಂತ ವಿಜೃಂಭಣೆಯಿಂದ ಆಚರಿಸಾಲಾಯಿತು. ಮೂಲಬೃಂದಾವನಗಳಿಗೆ ನಿರ್ಮಲ್ಯ ಅಭಿಷೇಕ ಮಹಾಪಂಚಾಮೃತಾಭಿಷೇಕ, ವಿಶೇಷ ಪುಷ್ಪಾಲಂಕಾರ, ವಸ್ತ್ರಲಂಕಾರ ಹಸ್ತೋದಕ ನೆರವೇರಿದವು. ನಂತರ ಭಕ್ತರಿಗೆ ತೀರ್ಥಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಮಂತ್ರಾಲಯ ಮಠದಿಂದ ವಿದ್ವಾಂಸ ಸುನಾದಿ ಹನುಮೇಶ ಆಚಾರ್ ನವೃಂದಾವನ ಯತಿಗಳ ಕುರಿತು ಮಾತನಾಡಿದರು. ಮಂತ್ರಾಲಯದ ರಾಘವೇಂದ್ರ ಆಚಾರ್, ಪ್ರಲ್ಲಾದಾಚಾರ್, ಲಕ್ಷ್ಮಿಕಾಂತ್ ಆಚಾರ್ , ಸಂಜೀವ್ ಕುಲಕರ್ಣಿ ಇಡುಪನೂರ್, ಆನೆಗುಂದಿ ಶ್ರೀ ಮಠದ ಶ್ರೀನಿವಾಸ್ ಆಚಾರ್, ಅರ್ಚಕ ನರಸಿಂಹಾಚಾರ್, ವಾದಿರಾಜ ದೇಸಾಯಿ ಗೋತಗಿ, ಅರವಿಂದ ಆಚರ್, ಆನೆಗುಂದಿ ಶ್ರೀಪಾದರಾಜ ಮಠದ ವ್ಯವಸ್ಥಾಪಕ ವಿಜಯ ದೇಸಾಯಿ, ಆನೆಗುಂದಿ ಶಾಖಾಮಠ ವ್ಯವಸ್ಥಾಪಕ ಸುಮಂತ್ ಕುಲಕರ್ಣಿ ಮತ್ತಿತರು ಇದ್ದರು.