
12th December 2024
Pampana Gouda
5th December 2024
ಕಟ್ಟೆಮನೆ ನಾಗೇಂದ್ರ ನೇತೃತ್ವದಲ್ಲಿ ಸೂರ್ಯನಾರಾಯಣ ರೆಡ್ಡಿ ಹುಟ್ಟು ಹಬ್ಬ ಅಧ್ದೂರಿ ಆಚರಣೆ
ಅನ್ನದಾನ ಕಾರ್ಯಕ್ರಮ,ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ
ಬಳ್ಳಾರಿ ಡಿ ೦೫. ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಶಾಸಕ ನಾರಾ ಸೂರ್ಯನಾರಾಯಣ ರೆಡ್ಡಿ ೭೧ ನೇ ಜನ್ಮ ದಿನಾಚರಣೆ ಅಂಗವಾಗಿ ನಗರದ ಎಪಿಎಂಸಿಯಲ್ಲಿ ಎಪಿಎಂಸಿ ಅಧ್ಯಕ್ಷ ಕಟ್ಟೆಮನೆ ನಾಗೇಂದ್ರ ನೇತೃತ್ವದಲ್ಲಿ ಹುಟ್ಟುಹಬ್ಬವನ್ನು ಕೇಕ್ ಕಟ್ಮಾಡುವುದರ ಮೂಲಕ ಅಧ್ದೂರಿಯಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಅನ್ನದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಡಿ ೦೫ ರಂದು ಬೆಳಿಗ್ಗೆ ೯ ಗಂಟೆಯಿAದ ಸಂಜೆ ೫ ಗಂಟೆಯ ವರೆಗೆ ಎಪಿಎಂಸಿ ಆವರಣದಲ್ಲಿ ಐದು ನೂರಕ್ಕೂ ಹೆಚ್ಚಿನ ಜನರಿಗೆ ಆರೋಗ್ಯ ತಪಾಸಣೆ ನಡೆಸಲಾಯ್ತು. ನಂತರ ಬಿಮ್ಸ್ ಆಸ್ಪತ್ರೆಗೆ ತೆರಳಿ ಅಲ್ಲಿನ ರೋಗಿಗಳ ಸಂಬ0ಧಿಕರಿಗೆ ಅನ್ನದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ವೇಳೆ ಕಾಂಗ್ರೆಸ್ ಪಕ್ಷದ ಮುಖಂಡ ಬಿ.ರಾಂಪ್ರಸಾದ್, ಎಪಿಎಂಸಿ ಉಪಾಧ್ಯಕ್ಷ ರಾಮಣ್ಣ, ಸದಸ್ಯರು, ಮುಖಂಡರುಗಳಾದ ಅಬ್ದುಲ್ ಬಾರಿ, ವೆಂಕಟನಾಯ್ಡು, ತನ್ವೀರ್, ಕೇಶವ, ಯಲ್ಲಪ್ಪ, ಪ್ರಭಾಕರ್ ರೆಡ್ಡಿ, ಅಂಜೀರ್, ಅಬ್ದುಲ್, ಸಮೀರ್ ಬಾಷ,ಅಕ್ಕಿಶಿವಕುಮಾರ್, ವಿಶ್ವನಾಥ ಇನ್ನಿತರರು ಉಪಸ್ಥಿತರಿದ್ದರು.
5th December 2024
ಸೂರ್ಯ ನಾರಾಯಣರೆಡ್ಡಿ ಹುಟ್ಟು ಹಬ್ಬದ ಪ್ರಯುಕ್ತ ಕಟ್ಟಿಮನೆ ನಾಗೇಂದ್ರ ನೇತೃತ್ವದಲ್ಲಿ ಉಚಿತ ಆರೋಗ್ಯ ಶಿಬಿರ
ಬಳ್ಳಾರಿ ಡಿ ೦೪. ಮಾಜಿ ಶಾಸಕ, ಕಾಂಗ್ರೆಸ್ ಹಿರಿಯ ಮುಖಂಡರಾದ ನಾರಾ ಸೂರ್ಯನಾರಾಯಣರೆಡ್ಡಿಯವರ ಹುಟ್ಟು ಹಬ್ಬದ ಪ್ರಯುಕ್ತ ಎಪಿಎಂಸಿ ಅಧ್ಯಕ್ಷರಾದ ಕಟ್ಟೆಮನೆ ನಾಗೇಂದ್ರ ಅವರ ನೇತೃತ್ವದಲ್ಲಿ ಎಪಿಎಂಸಿಯ ಆವರಣದಲ್ಲಿ ಡಿ ೦೫ ಗುರುವಾರರಂದು ಬೆಳಿಗ್ಗೆ ೯ ಗಂಟೆಯಿಂದ ಸಾಯಂಕಾಲ ೫ ಗಂಟೆಯ ವರೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಿದ್ದಾರೆ.
ಈ ಶಿಬಿರದಲ್ಲಿ ಜನರಲ್ ಹೆಲ್ತ್ ಚೆಕಪ್, ಸುಗರ್,ರಕ್ತದೊತ್ತಡ,ಮತ್ತಿತರ ರೋಗಗಳಿಗೆ ನುರಿತ ವ್ಶೆದ್ಯರಿಂದ ತಪಾಸಣೆ,ಇಸಿಜಿ, ಇನ್ನಿತರ ರಕ್ತ ಪರೀಕ್ಷೆಗಳು,ಉಚಿತ ಔಷದಗಳ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ, ಮತ್ತು ಬಿಮ್ಸ್ ಆಸ್ಪತ್ರೆಯಲ್ಲಿ ಅನ್ನದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಎಪಿಎಂಸಿ ಅಧ್ಯಕ್ಷರಾದ ಕಟ್ಟೆಮನೆ ನಾಗೇಂದ್ರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಅವಕಾಶವನ್ನು ಬಳ್ಳಾರಿಯ ನಾಗರೀಕರು ಸದ್ಭಳಕೆ ಮಾಡಿಕೊಳ್ಳಬೇಕೆಂದು ಅವರು ಮನವಿ ಮಾಡಿದ್ದಾರೆ.