


22nd July 2026
ಕೊಪ್ಪಳ (ಸಮರ್ಥವಾಣಿ ನ್ಯೂಜ್)
ಜಿಲ್ಲೆಯಲ್ಲಿ ಭೀಕರ ಬರಗಾಲ ಉಂಟಾಗಿದೆ. ತಾಲೂಕಿನ ರೈತರು ಗುಳೆ ಹೋಗುತ್ತಿದ್ದಾರೆ. ಮತ್ತು ಆತಂಕದಲ್ಲಿ ಜಿವನ ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕ್ಷೇತ್ರದಲ್ಲಿದ್ದು ರೈತರ ಮತ್ತು ಜನರ ಕಷ್ಟಗಳನ್ನು ಆಲಿಸಿ ಸರಕಾರದ ಗಮನಕ್ಕೆ ತರಬೇಕಾಗಿರುವ ಶಾಸಕ ರಾಘವೇಂದ್ರ ಹಿಟ್ನಾಳ ನಾಪತ್ತೆಯಾಗಿದ್ದಾರೆ. ಜನರ ಸಮಸ್ಯೆಗೆ ಸ್ಪಂದುಸದೆ ಸಚಿವ ಸ್ಥಾನಕ್ಕಾಗಿ ದೆಹಲಿಯಲ್ಲಿ ಬೀಡು ಬಿಟ್ಟಿರುವುದು ಅಕ್ಷಮ್ಯ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ್ ಆರೋಪಿಸಿದ್ದಾರೆ.
ಈ ಕುರಿತು ಅವರು ಮಾಧ್ಯಮಗಳಿಗೆ ಪ್ರಕಟಣೆ ನೀಡಿ ಶಾಸಕರ ನಡೆಯನ್ನು ತೀವ್ರವಾಗಿ ಖಂಡಿಸುದ್ದಾರೆ. ತಾಲೂಕಿನಲ್ಲಿ ಶೇ.4೦ ರಷ್ಟು ರೈತರು ಬಿತ್ತನೆಯನ್ನೇ ಮಾಡಿಲ್ಲ. ಬಿತ್ತನೆ ಮಾಡಿರುವ ರೈತರು ಮಳೆ ಇಲ್ಲದೆ ಕಂಗಾಲಾಗಿದ್ದಾರೆ. ಕುಡಿಯಲು ನೀರು ಸಿಗದಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಇದ್ದು ಬರ ಪರಿಹಾರ ಕಾಮಗಾರಿಗಳ ಕಾರ್ಯಕ್ಕೆ ವೇಗ ನೀಡುವ ಕೆಲಸ ಮಾಡುವುದು ಶಾಸಕರ ಜವಾಬ್ದಾರಿ. ಆದರೆ ಶಾಸಕರು ಕ್ಷೇತ್ರದಿಂದ ನಾಪತ್ತೆಯಾಗಿದ್ದಾರೆ ಎಂದು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜನರ ಸಮಸ್ಯೆಗಳಿಗಿಂತ ಅಧಿಕಾರವೇ ಇವರಿಗೆ ಮುಖ್ಯವಾಗಿದೆ.
ಕೊಪ್ಪಳದಲ್ಲಿ ಕಾರ್ಖಾನೆಗಳು ಬೇಡ ಎಂದು ಜನತೆ ಕಳೆದ ಒಂದು ವರ್ಷದ ಹಿಂದೆ ಪ್ರತಿಭಟನೆ ಆರಂಭಿಸಿ ಬೀದಿಗೆ ಇಳಿದಿದ್ದಾರೆ. ತುಂಗಭದ್ರಾ ನದಿಯ ನೀರನ್ನು ಕೃಷಿ ಚಟುವಟಿಕೆಗಳಿಗೆ ಬಿಡಬೇಕು ಎಂದು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ತಮ್ಮ ನಾಯಕರೊಂದಿಗೆ ದೆಹಲಿಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಜೈಲುವಾಸ ಅನುಭವಿಸಲು ಸಮಯ ಇರುವ ಸಂಸದ ರಾಜಶೇಖರ್ ಹಿಟ್ನಾಳ್ ಅವರಿಗೆ ತಮ್ಮ ಕ್ಷೇತ್ರದ ಜನರ ಪ್ರತಿಭಟನೆ
ಗಮನಿಸಲು ಸಮಯ ಇಲ್ಲವೇ ಎಂದು ಪ್ರಶ್ನಿಸಿರುವ ಸುವಿಸಿ ಅವರು ಇಲ್ಲಿನ ಪ್ರತಿಭಟನಾಕಾರರೊಂದಿಗೆ ಮಾತನಾಡಿ ಅವರ ಸಮಸ್ಯೆ ಬಗೆಹರಿಸುವ ಮನಸ್ಸಿಲ್ಲವೇ? ಕೊಪ್ಪಳ ಕ್ಷೇತ್ರದ ಜನರ ಪ್ರತಿಭಟನೆಯಲ್ಲಿ ಪಾಲ್ಗೊಂಡು ಜೈಲುವಾಸ ಅನುಭವಿಸಲು ಸಿದ್ಧರಿದ್ದಾರೆಯೇ? ಕೊನೆಯ ಪಕ್ಷ ಸಂಸತ್ತಿನಲ್ಲಿ ಲೋಕಸಭಾ ಕ್ಷೇತ್ರದ ಸಮಸ್ಯೆಗಳಿಗೆ ಉತ್ತರ ಕಂಡುಹಿಡಿಯುವ ನಿಟ್ಟಿನಲ್ಲಿ ಪ್ರಶ್ನೆಗಳನ್ನು ಕೇಳಿದ್ದಾರೆಯೆ? ಎಂದು ಪ್ರಶಸಿದ್ದಾರೆ.
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ದೇಶಕ್ಕೆ ಗಂಭೀರ ಸಮಸ್ಯೆ ಬಂದಾಗ ವಿದೇಶ ಪ್ರವಾಸದಲ್ಲಿ ಇರುತ್ತಾರೆ. ಅವರ ಹಿಂಬಾಲಕರಾದ ಶಾಸಕರು ಮತ್ತು ಸಂಸದರು ಕೊಪ್ಪಳ ಹೊತ್ತಿ ಉರಿಯುವಾಗ ದೆಹಲಿಯಲ್ಲಿ ಬಿಡು ಬಿಟ್ಟಿರುತ್ತಾರೆ. ಕೊಪ್ಪಳದ ರಾಹುಲ್ ಗಾಂಧಿಗಳಾದ ಇವರ ದುರಾಡಳಿತದ ವಿರುದ್ಧ ಜೆಡಿಎಸ್ ಕ್ಷೇತ್ರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಿದೆ ಎಂದು ಎಚ್ಚರಿಸಿದ್ದಾರೆ.

18th July 2026
ಕೊಪ್ಪಳ (ಸಮರ್ಥವಾಣಿ ನ್ಯೂಜ್)
ಎರಡು ವರ್ಷಗಳ ಅವಧಿಯ ಕೊಪ್ಪಳ ಜಿಲ್ಲಾ ವಕೀಲರ ಸಂಘದ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಜಿಲ್ಲಾಧ್ಯಕ್ಷರಾಗಿ ಪ್ರಕಾಶ ಆನಂದಳ್ಳಿ ಗೆಲುವು ಸಾಧಿಸಿದ್ದಾರೆ. ಇವರ ಪ್ರತಿಸ್ಷರ್ಧಿಯಾಗಿದ್ದ ಹನುಮೇಶ ಮುರಡಿ, ಓಂಕಾರಪ್ಪ ಕುಷ್ಟಗಿ ಪರಾಭವಗೊಂಡಿದ್ದಾರೆ. ಅದೇ ರೀತಿ ವಿಜೇತ ಪ್ರಕಾಶ ಆನಂದಳ್ಳಿ ಗುಂಪಿನಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಬಿ.ವಿ. ಸಜ್ಜನ, ಖಜಾಂಚಿ ಸ್ಥಾನದಲ್ಲಿ ಪುಷ್ಪಾ ಬೇವೂರ ಗೆಲವು ಸಾಧಿಸಿದ್ದರೆ. ಪರಾಜಿತ ಅಭ್ಯರ್ಥಿ ಹೆಚ್.ಹೆಚ್.ಮುರಡಿ ಗುಂಪಿನಿಂದ ಸ್ಪರ್ದಿಸಿದ್ದ ಅಂದಾನಗೌಡ ಪಾಟೀಲ್ ಉಪಾಧ್ಯಕ್ಷ, ಬಸವರಾಜ ಮೇಲುಸಕ್ಕರಿ ಜಂಟಿ ಕಾರ್ಯದರ್ಶಿ ಸ್ಥಾನದಲ್ಲಿ ಜಯ ಗಳಿಸಿದ್ದಾರೆ.
ಶನಿವಾರ 4 ಗಂಟೆಯವರೆಗೆ ಚುನಾವಣೆ ನಡೆದು ನಂತರ ಮತ ಎಣಿಕೆ ಪ್ರಾರಂಭಗೊಂಡು ರಾತ್ರಿ 10 ಗಂಟೆ ನಂತರ ಫಲಿತಾಂಶ ಪೂರ್ಣಗೊಂಡಿತು. ಜಿಲ್ಲಾಧ್ಯಕ್ಷ ಸ್ಥಾನದಲ್ಲಿ ಸ್ಪರ್ಧಿಸಿದ್ದ ಪ್ರಕಾಶ ಆನಂದಳ್ಳಿ 321 ಮತ ಪಡೆದು 114 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಹೆಚ್.ಹೆಚ್.ಮುರಡಿ 207, ಓಂಕಾರಪ್ಪ ಕುಷ್ಟಗಿ 05 ಮತ ಪಡೆದುಕೊಂಡು ಪರಾಭವಹೊಂಡಿದ್ದಾರೆ. ಪ್ರಧಾನ ಕಾರ್ಯದರ್ಶಿ ಸ್ಥಾನದಲ್ಲಿ ಬಿ.ವಿ.ಸಜ್ಜನ 271ಮತ ಪಡೆದು 110 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರೆ. ಇವರ ಪ್ರತಿಸ್ಪರ್ದಿಯಾಗಿದ್ದ ಜಿ.ಎಂ.ಶಿವಪೂರ 160, ಚಿದಾನಂದ ಪಾಟೀಲ್ 100 ಮತ ಪಡೆದು ಪರಾಭವಗೊಂಡಿದ್ದಾರೆ. ಅದೇ ರೀತಿ ಉಪಾಧ್ಯಕ್ಷ ಸ್ಥಾನದಲ್ಲಿ ಮುರಡಿ ಗುಂಪಿನ ಅಂದಾನಗೌಡ 288 ಮತ ಪಡೆದು 43 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದು, ಆನಂದಳ್ಳಿ ಗುಂಪಿನ ಡಿ.ಎಂ.ಪೂಜಾರ 245 ಮತ ಪಡೆದು ಪರಾಭವಗೊಂಡಿದ್ದಾರೆ. ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಸವರಾಜ ಮೇಲುಸಕ್ಕರಿ 292 ಮತ ಪಡೆದು 42 ಮತಗಳ ಅಂತರದಲ್ಲಿ ಆಯ್ಜೆಯಾಗಿದ್ದರೆ ಇವರ ಎದುರಾಳಿ ಆನಂದಳ್ಳಿ ಗುಂಪಿನ ನೂರ್ ಅಹ್ಮದ್- 249 ಮತ ಪಡೆದು ಪರಾಭವಗೊಂಡಿದ್ದಾರೆ. ಖಜಾಂಚಿ ಸ್ಥಾನದಲ್ಲಿ ಆನಂದಳ್ಳಿ ಗುಂಪಿನ ಪುಷ್ಪಾ ಬೇವೂರು 240 ಮತ ಪಡೆದು 53 ಮತಗಳ ಅಂತರದಲ್ಲಿ ಜಯ ಸಾಧಿಸಿದ್ದರೆ, ಇವರ ಪ್ರತಿ ಸ್ಪರ್ಧಿಯಾಗಿದ್ದ ವೀಣಾ ವಾಲ್ಮಕಿ 187, ಕವಿತಾ ಎಂಟಿ 100 ಮತ ಪಡೆದು ಪರಾಭವಗೊಂಡಿದ್ದಾರೆ.
ಗ್ರಂಥಾಲಯ ಕಾರ್ಯದರ್ಶಿಯಾಗಿ ಮಂಜುನಾಥ ಗಡದ ಅವಿರೋಧವಾಗಿ ಆಯ್ಕೆಯಾಗಿದ್ದರು.

4th July 2026

19th June 2026

19th June 2026

9th June 2026
undefined

3rd June 2026
undefined

3rd June 2026
undefined

27th May 2026

19th May 2026
undefined