
30th July 2025
ಬೆಂಗಳೂರು ಜುಲೈ.30. ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ವಿಧಾನಸೌಧದಲ್ಲಿ ನಡೆದ 2025-26 ನೇ ಸಾಲಿನ ಆಯವ್ಯಯದಲ್ಲಿ ಘೋಷಣೆಮಾಡಲಾದ ಮುಖ್ಯಮಂತ್ರಿಯವರ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರಕ್ಕೆ ರೂ.50 ಕೋಟಿಗಳ ಅನುದಾನ ಹಂಚಿಕೆ ಕುರಿತು ನಡೆದ ಸಭೆಯಲ್ಲಿ ಮಾಜಿ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಶಾಸಕರಾದ ಬಿ.ನಾಗೇಂದ್ರ ಅವರು ಭಾಗವಹಿಸಿ, ಕ್ಷೇತ್ರದಲ್ಲಿ ಕೈಗೊಳ್ಳಬಹುದಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಗೆ ಮಾಹಿತಿ ನೀಡಿದರು.
ನಂತರ ಮುಖ್ಯಮಂತ್ರಿಗಳು ಶಾಸಕರಾದ ಬಿ.ನಾಗೇಂದ್ರ ಅವರ ಜೊತೆ ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಅಭಿವೃದ್ಧಿ ಯೋಜನೆಗಳ ಸ್ಥಿತಿಗತಿ, ಅನುದಾನ ಬಳಕೆ ಹಾಗೂ ಮುಂದಿನ ದಿನಗಳಲ್ಲಿ ಅಗತ್ಯ ಕಾರ್ಯಕ್ರಮಗಳನ್ನು ಆದ್ಯತೆ ಮೇರೆಗೆ ಅನುಷ್ಠಾನಕ್ಕೆ ತರುವ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು.
ಈ ಸಭೆಯಲ್ಲಿ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಝಡ್ ಜಮೀರ್ ಅಹ್ಮದ್ ಖಾನ್ ಅವರ ಸೇರಿದಂತೆ ಸಚಿವರು ಹಾಗೂ ಶಾಸಕರ ಉಪಸ್ಥಿತರಿದ್ದರು.
29th July 2025
ಬಳ್ಳಾರಿ ಜುಲೈ 22. ರಾಜ್ಯಸಭಾ ವಿರೋಧ ಪಕ್ಷದ ನಾಯಕರು, ಹಾಗೂ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ 83ನೇ ಹುಟ್ಟುಹಬ್ಬದ ಸಂಭ್ರಮಾಚರಣೆಯನ್ನು ಬಳ್ಳಾರಿ ನಗರ ಕಾಂಗ್ರೆಸ್ ಕಚೇರಿಯಲ್ಲಿ ಬಳ್ಳಾರಿ ಗ್ರಾಮೀಣ ಶಾಸಕರಾದ ಬಿ. ನಾಗೇಂದ್ರ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಹುಮಾಯೂನ್ ಖಾನ್ ಸಮ್ಮುಖದಲ್ಲಿ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಬಳ್ಳಾರಿ ನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷರಾದ ಬೋಯಪಾಟಿ ವಿಷ್ಣುವರ್ಧನ್, ಡಿಸಿಸಿ ಉಪಾಧ್ಯಕ್ಷರಾದ ಕೆ. ಶ್ರೀನಿವಾಸಲು, ಬಳ್ಳಾರಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಸ್. ಮಂಜುಳಾ, ಕಾಂಗ್ರೆಸ್ ಹಿರಿಯ ನಾಯಕರಾದ ಎಲ್. ಮಾರಣ್ಣ, ಕಾರ್ಪೊರೇಟರ್ಗಳಾದ ಪ್ಯಾರಂ ವಿವೇಕ್, ಆಸಿಫ್ ಗೋವಿಂದರಾಜುಲು, ಬಳ್ಳಾರಿ ಜಿಲ್ಲಾ ಅಸಂಘಟಿತ ಕಾರ್ಮಿಕ ವಿಭಾಗದ ಅಧ್ಯಕ್ಷರಾದ ಅಲಿವೇಲು ಸುರೇಶ್, ಬಳ್ಳಾರಿ ಜಿಲ್ಲಾ ಸೋಶಿಯಲ್ ಮೀಡಿಯಾ ಅಧ್ಯಕ್ಷರಾದ ಅಫಾಕ್ ಅಹಮದ್, ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಎಸ್.ಸಿ. ಘಟಕದ ಅಧ್ಯಕ್ಷರಾದ ಎರುಕುಲ ಸ್ವಾಮಿ, ಗ್ಯಾರೆಂಟಿ ಯೋಜನೆಗಳ ತಾಲೂಕು ಅಧ್ಯಕ್ಷರಾದ ಗೋನಾಲ್ ನಾಗಭೂಷಣ ಗೌಡ, ಡಿಸಿಸಿ ಕಾರ್ಯದರ್ಶಿ ವೀರನಗೌಡ, ಬಳ್ಳಾರಿ ಜಿಲ್ಲಾ ಡಿಕೆ ಶಿವಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷರು ಸಂತೋಷ್ ಸ್ವಾಮಿ, ಸಂಗನಕಲ್ಲು ವಿಜಯ್ ಕುಮಾರ್, ರಾಜೇಶ್, ಶ್ರೀಕಾಂತ್, ಹಾಗೂ ಕಾಂಗ್ರೆಸ್ ಪಕ್ಷದ ನಾಯಕರು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಡಿದ್ದರು.
29th July 2025
ಬಳ್ಳಾರಿ ಜುಲೈ 27. ಬಳ್ಳಾರಿ ನಗರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕರ್ನಾಟಕ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಮತಿ ಸೌಮ್ಯ ರೆಡ್ಡಿ ಅವರು ಪತ್ರಿಕಾಗೋಷ್ಠಿ ನಡೆಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳು ಹುಮಾಯೂನ್ ಖಾನ್ ಅವರು, ಡಿಸಿಸಿ ಅಧ್ಯಕ್ಷರು ಅಲ್ಲಂ ಪ್ರಶಾಂತ್, ಡಿಸಿಸಿ ಕಾರ್ಯಾಧ್ಯಕ್ಷರು ಬೋಯಪಾಟಿ ವಿಷ್ಣುವರ್ಧನ, ಡಿಸಿಸಿ ಉಪಾಧ್ಯಕ್ಷರು ಕೆ. ಶ್ರೀನಿವಾಸಲು, ಮಹಿಳಾ ಕಾಂಗ್ರೆಸ್ ಅಧ್ಯಕ್ಷರು ಶ್ರೀಮತಿ ಮಂಜುಳಾ, ಮಾಜಿ ರೂರಲ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷರು ಶ್ರೀಮತಿ ಆಶಾಲತಾ, ರಾಜ್ಯ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳು ಶ್ರೀಮತಿ ಪದ್ಮಾವತಿ, ಗ್ಯಾರೆಂಟಿ ಯೋಜನೆಗಳ ಪ್ರಾಧಿಕಾರ ಉಪಾಧ್ಯಕ್ಷರು ಗೊನಳ್ ನಾಗಭೂಷಣ್ ಗೌಡ, ಸೋಶಿಯಲ್ ಮೀಡಿಯಾ ಅಧ್ಯಕ್ಷರು ಅಫಾಕ್ ಅಹಮದ್, ಯಶೋಧ, ವಿಜಯಲಕ್ಷ್ಮಿ, ವಿಜಯ ಕುಮಾರಿ, ಪರ್ವೀನ್ ಭಾನು, ವೀರಸೇನಾರೆಡ್ಡಿ, ರಾಜೇಶ್ ಹಾಗೂ ಮಹಿಳಾ ಕಾರ್ಯಕರ್ತರು ಉಪಸ್ಥಿತರಿದ್ದರು.
29th July 2025
ಬಳ್ಳಾರಿ ಜುಲೈ 28. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಶವ ರಾಜಕೀಯ ಮಾಡುತಾ ಇದ್ದಾರೆ.
ರೈತರಿಗೆ ರಸಗೊಬ್ಬರ ನೀಡದೆ ಅನ್ಯಾಯ ಮಾಡಿದ್ದಾರೆ. ಕೇಂದ್ರ ಸಚಿವರನ್ನು ಕುಮಾರಸ್ವಾಮಿ ಅವರನ್ನು ನಿಂದನೆ ಮಾಡೋದು ಅವರ ಕೆಲಸ ಆಗಿದೆ. ವಿಜಯನಗರದಲ್ಲಿ ಸಾಧನ ಸಮಾವೇಶ ಮಾಡಿದ್ದೂ ಅಲ್ಲಿ ಡ್ಯಾಮ್ ಗೇಟ್ ಗಳು ಸರಿಪಡಿಸಲು ಹೇಳಿ ಮೋಸ ಮಾಡಿದ್ದಾರೆ.
ಯುರಿಯ ಗೊಬ್ಬರ ಸಿಗದೇ ರೈತರು ಪರದಾಡುವ ವಾತಾವರಣ ಸೃಷ್ಟಿಯಾಗಿದೆ.
ಗೊಬ್ಬರ ಕಾಳ ಸಂತೆಯಲ್ಲಿ ಮಾರಾಟ ವಾಗಿದೆ, ಹೊರ ದೇಶಗಳಿಗೆ ಗೊಬ್ಬರ ಹೋಗ್ತಾ ಇದೇ ಎಂದು ಆರೋಪ ಮಾಡಿದ್ದಾರೆ.
ಆರ್. ಸಿ.ಬಿ ಘಟನೆ ಯಲ್ಲಿ 20 ಕ್ಕು ಹೆಚ್ಚು ಮರಣಗಳಾದವು, ದುಬಾರಿ ಧರದಲ್ಲಿ ಗೊಬ್ಬರ ಮಾರಾಟ ಆಗುತಾ ಇದೇ, ಅಗ್ರಿಕಲ್ಚರ್ ಅಧಿಕಾರಿಗಳು ನಿದ್ದೆಮಾಡುತ ಇದ್ದಾರೆ ಎಂದು ಆರೋಪ ಮಾಡಿದ್ದಾರೆ.
ರಾಜ್ಯದಲ್ಲಿ 3400 ರೈತರ ಆತ್ಮಹತ್ಯೆಗಳು ಹಲವಾರು ಘಟನೆಗಳು ದಿಂದ ಆಗಿದ್ದಾವೆ, ಇದು ನನ್ನ ಆರೋಪ ಆಗಿದೆ ಎಂದು, ಕೊಪ್ಪಳ ದಲ್ಲಿ ರೈತ ಮಣ್ಣು ತಿಂದು ಆಕ್ರೋಶ ಹೊರಗೆ ಹಾಕಿದ್ದಾರೆ ಎಂದರು.
ಸೋಮವಾರ ಬಳ್ಳಾರಿಯ ಅವರ ನಿವಾಸದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ್ದರೆ. ಈ ಸಂದರ್ಭದಲ್ಲಿ ದರೂರ ಪುರುಷೋತ್ತಮ್ ಗೌಡ, ಶ್ರೀಧರಗಡ್ಡ ಗೌಡ, ಐನಾಥ್ ರೆಡ್ಡಿ, ಬೊಗರಾಜು, ಗುರುಲಿಂಗನ ಗೌಡ, ಓಬಳೇಶ್ ಮತ್ತು ಇತರ ರೈತ ಮುಖಂಡರು ರೈತರು ಉಪಸ್ಥಿತರಿದ್ದರು.
29th July 2025
ಬಳ್ಳಾರಿ ಜುಲೈ 29. ಸಿರುಗುಪ್ಪ ನಗರದ ಭಾರತೀಯ ಜನತಾ ಪಾರ್ಟಿ ಕಚೇರಿಯಿಂದ ಕಾಲ್ನಡಿಗೆ ಮುಖಾಂತರ ಗಾಂಧಿ ವೃತ್ತದ ವರೆಗೆ ಬೃಹತ್ ಪ್ರತಿಭಟನೆಯನ್ನು ಮಾಜಿ ಶಾಸಕರಾದ ಎಂ ಎಸ್ ಸೋಮಲಿಂಗಪ್ಪ ಅವರ ನೇತೃತ್ವದಲ್ಲಿ ಹಾಗೂ ಭಾರತೀಯ ಜನತಾ ಪಾರ್ಟಿ ತಾಲೂಕ ಅಧ್ಯಕ್ಷರಾದ ಮಲ್ಲಿಕಾರ್ಜುನ ಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಹಾಗೂ ತಾಲೂಕ ರೈತ ಮೋರ್ಚಾ ವತಿಯಿಂದ ರೈತರ ಭತ್ತದ ಗದ್ದೆಗಳಿಗೆ ಬೇಕಾಗಿರುವ ವಿರಿಯ ಹಾಗೂ ರಸಗೊಬ್ಬರ ರೈತರಿಗೆ ಬಹಳ ಅವಶ್ಯಕತೆ ಇದ್ದು ರಾಜ್ಯ ಸರ್ಕಾರ ಸರಿಯಾದ ರೀತಿಯಲ್ಲಿ ಒದಗಿಸದೆ ಇರುವ ಕಾರಣ ರಾಜ್ಯ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆಯನ್ನು ಮಾಡಲಾಯಿತು.
ಈ ಪ್ರತಿಭಟನೆಯಲ್ಲಿ ತಾಲೂಕ ರೈತ ಮೋರ್ಚಾ ಅಧ್ಯಕ್ಷರಾದ ಶಿವರಾಮ ಗೌಡ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ ಎಂಎಸ್ ಸಿದ್ದಪ್ಪ, ನಗರಸಭೆಯ ಸದಸ್ಯರಾದ ಮೇಕೆಲಿ ವೀರೇಶ್, ಮೋಹನ್ ರೆಡ್ಡಿ, ಮಹಾದೇವ್ ,ನಟರಾಜ್ ,ವಿಕ್ರಂ, ಜೈ ಹಿರಿಯರಾದ ಉಡೆಗೋಳ ಖಾಜಾಸಾಬ್, ಇಬ್ರಾಂಪುರ ವೀರನಗೌಡ, ಎಚ್ ಶೇಕಪ್ಪ, ರುದ್ರಮನಿ ಗೌಡ, ಶಿವ ರೆಡ್ಡಿ ಗೌಡ,ಎಸ್ಟಿ ಮೋರ್ಚ ತಾಲೂಕ್ ಅಧ್ಯಕ್ಷರಾದ ಶಿವಪ್ಪ, ಮಾಜಿ ಎಪಿಎಂಸಿ ಅಧ್ಯಕ್ಷರಾದ ಶರಣಬಸವ, ಮಾಜಿ ತಾಲೂಕ ಪಂಚಾಯತ್ ಸದಸ್ಯರಾದ ಕೋರಿ ಪಿಡ್ಡಯ್ಯ, ಶರಣಬಸು, ಸಾವಕಾರ್ ಲಕ್ಷ್ಮಿಪತಿ ಗೌಡ, ವೀರೇಂದ್ರ ಸಾಹುಕಾರ್ ,ಹಳೆಕೋಟೆ ಶಂಕ್ರಪ್ಪ, ಈರಣ್ಣ, ಪ್ರಧಾನ ಕಾರ್ಯದರ್ಶಿಗಳಾದ ಬಸವರಾಜ, ಫಕೀರಯ್ಯ, ಗಾದಿಲಿಂಗ, ಹನುಮಂತಪ್ಪ, ಮುದುಕಪ್ಪ, ಹೊನ್ನೂರಪ್ಪ, ಶ್ರೀಧರ, ಹೊನ್ನಪ್ಪ, ಅಯ್ಯಪ್ಪ ,ರಾಜಶೇಖರ ಗೌಡ ಮತ್ತು ರೈತರು ಮುಖಂಡರು, ಕಾರ್ಯಕರ್ತರು ಯುವಕರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಪ್ರತಿಭಟನೆಯನ್ನು ಯಶಸ್ವಿಗೊಳಿಸಿದರು.
29th July 2025
ಬಳ್ಳಾರಿ, ಜು.29: ಮಂಗಳವಾರ ಬೆಳಿಗ್ಗೆ ಬಳ್ಳಾರಿಯ ಬಾಪೂಜಿ ನಗರದಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟ ವಿಕ್ಕಿ (03) ಪೋಷಕರನ್ನು ನಗರ ಶಾಸಕ ನಾರಾ ಭರತ್ ರೆಡ್ಡಿ ಮಧ್ಯಾಹ್ನ ಬಿಎಂಆರ್'ಸಿಯ ಶವಾಗಾರದ ಬಳಿ ಭೇಟಿಯಾಗಿ ಸಾಂತ್ವನ ಹೇಳಿದರು.
ಮೃತ ಬಾಲಕನ ಕುಟುಂಬಕ್ಕೆ ಶಾಸಕ ನಾರಾ ಭರತ್ ರೆಡ್ಡಿ 50 ಸಾವಿರ ರೂ.ಗಳ ವೈಯಕ್ತಿಕ ಪರಿಹಾರ ನೀಡಿದರು, ಇನ್ನೂ ಹೆಚ್ಚಿನ ಪರಿಹಾರವನ್ನು ಸಿಎಂ ಅವರ ನಿಧಿಯಿಂದ ಕೊಡಿಸುವುದಾಗಿ ಭರವಸೆ ನೀಡಿದರು.
ಮೃತ ಬಾಲಕನ ಕುಟುಂಬದ ಸದಸ್ಯರೊಬ್ಬರಿಗೆ ಮಹಾನಗರ ಪಾಲಿಕೆಯಲ್ಲಿ ಉದ್ಯೋಗ ಕೊಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಅಪಘಾತಕ್ಕೆ ಕಾರಣನಾದ ಪಾಲಿಕೆಯ ಕಸ ವಿಲೇವಾರಿ ವಾಹನದ ಚಾಲಕನನ್ನು ಅಮಾನತು ಮಾಡಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭ ಪಾಲಿಕೆಯ ಸದಸ್ಯರಾದ ಜಬ್ಬಾರ್, ಮಿಂಚು ಸೀನಾ, ಕಾಂಗ್ರೆಸ್ ಮುಖಂಡರಾದ ಶಿವರಾಜ್, ಸುಬ್ಬರಾಯುಡು ಮೊದಲಾದವರು ಹಾಜರಿದ್ದರು.
29th July 2025
ಕೊಪ್ಪಳ.
ಮುಂಗಾರು ಒಂದು ತಿಂಗಳ ಮುಂಚೆಯೇ ಪ್ರಾರಂಭವಾಗಿರುವುದರಿಂದ ರೈತರು ಬಿತ್ತನೆ ಕಾರ್ಯ ಪೂರ್ಣಗೊಳಿಸಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಯೂರಿಯಾ ಗೊಬ್ಬರ ಅಭಾವವಾಗಿದೆ. ತಕ್ಷಣ ಗೊಬ್ಬರ ಪೂರೈಸಲು ನಾವು ಕ್ರಮ ಕೈಗೊಂಡಿದ್ದೇವೆ. ಆದರೆ ಬಿಜೆಪಿ ನಾಯಕರು ರೈತರ ಮೇಲೆ ರಾಜಕಾರಣ ಮಾಡುವ ಛಾಳಿ ಬಿಟ್ಟಿಲ್ಲ. ಗೊಬ್ಬರ ಅಭಾವದ ವಿರುದ್ಧ ರಾಜ್ಯದಲ್ಲಿ ಪ್ರತಿಭಟನೆ ಮಾಡಲು ಮುಂದಾಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ಬಿಜೆಪಿ ನಾಯಕರು ದೆಹಲಿಗೆ ಹೋಗಿ ಮೋದಿ ಮನೆ ಮುಂದೆ ಪ್ರತಿಭಟನೆ ಮಾಡಿ ರಾಜ್ಯಕ್ಕೆ ಬೇಕಾಗಿರುವ ಗೊಬ್ಬರ ಕೇಂದ್ರ ಸರಕಾರ ಪೂರೈಕೆ ಮಾಡಿಸಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ಮಂಗಳವಾರ ಜಿಲ್ಲಾಡಳಿತ ಭವನದಲ್ಲಿ ಯೂರಿಯಾಬ ಗೊಬ್ಬರ ದಾಸ್ತಾನು ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿ ಬಿಜೆಪಿ ಹೋರಾಟದ ಕುರಿತು ಪ್ರತಿಕ್ರೀಯೆ ನೀಡಿದರು. ರೈತರ ಬಗ್ಗೆ ನಮ್ಮ ಕಾಂಗ್ರೆಸ್ ಸರಕಾರಕ್ಕೆ ಅಪಾರ ಕಾಳಜಿ ಇದೆ. ಬಿಜೆಪಿಗರಿಗೆ ಮಾಡಲು ಯಾವುದೇ ಕೆಲಸವಿಲ್ಲದ ಕಾರಣ ಈಗ ಗೊಬ್ಬರದ ವಿಷಯ ಎತ್ತಿಕೊಂಡು ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲೆಯಲ್ಲೂ ಮುಂಗಾರು ಒಂದು ತಿಂಗಳ ಮುಂಚೆ ಬಂದು ರೈತರು ಬಿತ್ತನೆ ಕಾರ್ಯ ಮಾಡಿದ್ದಾರೆ. ಹೀಗಾಗಿ ಜುಲೈ ತಿಂಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗೊಬ್ಬರ ಬಳಕೆಯಾಗಿದೆ. ಆದರೂ ಕೊಪ್ಪಳ ಜಿಲ್ಲೆಯಲ್ಲಿ ಅಧಿಕಾರಿಗಳು ಯೂರಿಯಾ ಗೊಬ್ಬರ ಕೊರತೆಯಾಗದಂತೆ ಜಾಗೃತಿವಹಿಸಿದ್ದಾರೆ. ಕೆಲವು ಹಳ್ಳಿಗಳಲ್ಲಿ ಸೋಸೈಟಿ ಮೂಲಕ ವಿತರಣೆಯಾಗುವಲ್ಲಿ ವಿಳಂಬವಾಗಿದೆ. ರೈತರು ಗೊಬ್ಬರಕ್ಕಾಗಿ ಸಹಜವಾಗಿ ಧ್ವನಿ ಎತ್ತಿದ್ದಾರೆ. ಇದನ್ನೆ ಬಂಡವಾಳ ಮಾಡಿಕೊಂಡಿರುವ ಬಿಜೆಪಿ ಮುಖಂಡರು ಜಿಲ್ಲೆಯಲ್ಲಿ ರೈತರ ಬಳಿ ಹೋಗಿ ಕಣ್ಣೊರಿಸುವ ಕೆಲಸ ಮಾಡಿದ್ದಾರೆ. ಅವರಿಗೆ ಗೊಬ್ಬರ ಪೂರೈಕೆ ಮತ್ತು ದಾಸ್ತಾನು ಬಗ್ಗೆ ಮಾಹಿತಿಯೇ ಇಲ್ಲ. ಕೇಂದ್ರ ಸರಕಾರ ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯದ ಬಗ್ಗೆ ಮೌನವಹಿಸಿರುವ ಬಿಜೆಪಿಗರು ವಿನಾಕಾರಣ ಕಾಂಗ್ರೆಸ್ ಸರಕಾರದ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಬಿಜೆಪಿಗರ ಹಾರಾಟ ಚಿರಾಟದ ಬಗ್ಗೆ ಜನರಿಗೆ ಅರ್ಥ ಆಗಿದೆ. ನಾವು ಯಾವುದೇ ಕಾರಣಕ್ಕೂ ರೈತರಿಗೆ ತೊಂದರೆಯಾಗಿದಂತೆ ಗೊಬ್ಬರ ಪೂರೈಕೆ ಮಾಡುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ಇಂದು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಎಲ್ಲಾ ಮಾಹಿತಿ ಪಡೆದುಕೊಂಡು ಗೊಬ್ಬರ ಪೂರೈಕೆಯಲ್ಲಿ ಯಾವುದೇ ಲೋಪವಾಗದಂತೆ ನಿಗಾವಹಿಸಲು ಸೂಚಿಸಿದ್ದೇನೆ. ಎಲ್ಲವು ಸರಿಯಾಗುತ್ತದೆ ಎಂದು ತಂಗಡಗಿ ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣ ಇಟ್ಟಂಗಿ, ಗ್ಯಾರಂಟಿ ಅನುಷ್ಟಾನ ಸಮಿತಿ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ ಮತ್ತಿತರು ಇದ್ದರು.
ಬಾಕ್ಸ್;
ಶರಣೇಗೌಡ ಕೆಸರಹಟ್ಟಿ ವಿರುದ್ಧ ಕಿಡಿ
ಗೊಬ್ಬರ ವಿಷಯ ಕುರಿತು ಸಭೆ ನಡೆಸಿದ ಸಚಿವ ಶಿವರಾಜ ತಂಗಡಗಿ ಮಾಧ್ಯಮ ಗೋಷ್ಟಿ ನಡೆಸಲು ಮುಂದಾಗುತ್ತಿದ್ದಂತೆ ರೈತ ಮುಖಂಡ ಶರಣೇಗೌಡ ಕೆಸರಹಟ್ಟಿ ಆಗಮಿಸಿ ಮೊದಲು ರೈತರ ಸಮಸ್ಯೆ ಆಲಿಸಿ. ಮಾಧ್ಯಮದವರು ಸಚಿವರ ಮಾತು ಕೇಳಿ ಹೋಗುತ್ತಾರೆ. ರೈತರ ಸಮಸ್ಯೆ ತೊರಿವುದಿಲ್ಲ ಎಂದು ಧ್ವನಿ ಎತ್ತುತ್ತಿದ್ದಂತೆ ಎಚ್ಚತ್ತ ಸಚಿವ ಶಿವರಾಜ ತಂಗಡಗಿ ಗೊಬ್ಬರ ದಾಸ್ತಾನು ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಲಾಗುತ್ತಿದೆ. ರೈತರೊಂದಿಗೆ ಚರ್ಚಿಸುತ್ತೇನೆ. ಸ್ವಲ್ಪ ಹೊತ್ತು ತಾಳ್ಮೆಯಿಂದ ಇರಿ ಎಂದು ಸಮಾಧಾನಪಡಿಸಿದರು. ಈ ಮಧ್ಯ ಜಿಲ್ಲಾಧಿಕಾರಿಗಳು ಶರಣೇಗೌಡ ಮುಂಚಿತವಾಗಿಯೇ ಗೊಬ್ಬರ ಪಡೆದುಕೊಂಡು ಹಂಚಿಕೆ ಮಾಡಿದ್ದಾನೆ ಎಂದು ಮಾಹಿತಿ ನೀಡುತ್ತಿದ್ದಂತೆ ಗರ್ಂ ಆದ ಸಚಿವ ತಂಗಡಗಿ ಅವರ ಟ್ರೇಡರ್ಸ್ ರದ್ದುಪಡಿಸಿ. ಈ ರೀತಿ ಮಾಡುವವರಿಗೆ ಅವಕಾಶ ಕೊಡಬೇಡಿ ಎಂದು ಸೂಚನೆ ನೀಡಿದರು.
27th July 2025
ಕೊಪ್ಪಳ
ಜಿಲ್ಲೆಯಲ್ಲಿ ಯೂರಿಯಾ ಗೊಬ್ಬರದ ಕೊರತೆಯುಂಟಾಗಿ ಆಹಾಕಾರವಾಗಗುತ್ತಿದೆ. ರೈತರಿಗೆ ಗೊಬ್ಬರ ಸಿಗುತ್ತಿಲ್ಲ ಆದರೆ ಕಾಂಗ್ರೆಸ್ ಬೆಂಬಲಿಗರ ಗೋದಾಮುಗಳಲ್ಲಿ ಸ್ಟಾಕ್ ಇದೆ. ಇದರಿಂದ ರೈತರು ಮಣ್ಣು ತಿನ್ನುವ ಪರಿಸ್ಥಿತಿ ಬಂದಿದೆ ಎಂದು ಆರೋಪಿಸಿರುವ ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸೂಗೂರ ಗಂಭಿರವಾಗಿ ಆರೋಪಿಸಿದ್ದು, ತಕ್ಷಣ ಸಂಬಂಧಿಸಿದ ಅಧಿಕಾರಿಗಳು ರೈತರಿಗೆ ಗೊಬ್ಬರ ಪೂರೈಕೆ ಮಾಡದಿದ್ದರೆ ಬಿಜೆಪಿ ಜಿಲ್ಲೆಯಾದ್ಯಂತ ಹೊರಾಟ ನಡೆಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಭಾನುವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ಮುಂಗಾರು ಆರಂಭವಾಗಿದೆ. ಆದರೆ ರೈತರಿಗೆ ಗೊಬ್ಬರ ಸಿಗುತ್ತಿಲ್ಲ, ಗೊಬ್ಬರಕ್ಕಾಗಿ ರೈತರು ಪರದಾಡುವಂತಾಗಿದೆ. ಖಾಸಗಿ ಗೊಬ್ಬರದ ಅಂಗಡಿಗಳಲ್ಲಿ ದುಬಾರಿ ಬೆಲೆಗೆ ಮಾರಾಟವಾಗುತ್ತಿದೆ. ಸರ್ಕಾರಿ ಮಾರಾಟ ಮಳಿಗೆಗಳಲ್ಲಿ ಗೊಬ್ಬರ ಖಾಲಿ ಎನ್ನುವ ಫಲಕಗಳನ್ನು ಹಾಕಲಾಗಿದೆ. ಯೂರಿಯಾ ಗೊಬ್ಬರ ಸಿಗದೆ ರೈತರು ಮಣ್ಣು ತಿಂದು ಸರ್ಕಾರದ ವಿರುದ್ಧ ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ ಸರ್ಕಾರದ ಸಿಎಂ ಹಾಗೂ ಕೃಷಿ ಸಚಿವರು ರಾಜ್ಯಕ್ಕೆ ದಾಸ್ತಾನು ಮಾಡಿಲ್ಲ ಎಂದು ಕೇಂದ್ರ ಸರಕಾರದ ಕಡೆ ಬೆರಳು ತೋರಿಸುತ್ತಾ ಸುಳ್ಳು ಆರೋಪ ಮಾಡುತ್ತಿದ್ದಾರೆ. ಈಗಾಗಲೇ ನಮ್ಮ ರಾಜ್ಯಕ್ಕೆ ಯುರಿಯಾ ರಸಗೊಬ್ಬರ 6.30 ಲಕ್ಷ ಮೆಟ್ರಿಕ್ ಟನ್ ಅಗತ್ಯವಿದ್ದು, ಕೇಂದ್ರ ಸರ್ಕಾರ 8.73 ಲಕ್ಷ ಮೆಟ್ರಿಕ್ ಟನ್ ರಾಜ್ಯಕ್ಕೆ ರಫ್ತು ಮಾಡಿದೆ. ಆದರೆ ಉಳಿದ 2.43 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ರಾಜ್ಯದ ರೈತರಿಗೆ ನೀಡದೆ ಕಾಂಗ್ರೆಸ್ ಬೆಂಬಲಿಗರ ಗೋದಾಮುಗಳಲ್ಲಿ ಸಂಗ್ರಹಿಸಿಡಲಾಗಿದ್ದು, ಗೊಬ್ಬರ ಸ್ಟಾಕ್ ಇಲ್ಲೆಂದು ರೈತರಿಗೆ ಸಬೂಬ ಹೇಳುತ್ತಾ ದುಬಾರಿ ಬೆಲೆಗೆ ಮಾರಾಟ ಮಾಡಲಾಗುತ್ತಿದೆ.
ರಾಜ್ಯದಲ್ಲಿ ರಸಗೊಬ್ಬರ ಅವೈಜ್ಞಾನಿಕ ದಾಸ್ತಾನು ಶೇಖರಣೆ ಮಾಡಲಾಗಿದೆ ಇದರಿಂದ ರಾಜ್ಯದಲ್ಲಿ ರಸಗೊಬ್ನರ ಅಭಾವ ಉಂಟಾಗಿದೆ. ಹಾಗಾಗಿ ರಾಜ್ಯದೆಲ್ಲಡೆ ರೈತರ ಸಮ್ಮುಖದಲ್ಲಿ ಬಿಜೆಪಿ ರೈತ ಮೋರ್ಚಾದಿಂದ ಉಗ್ರ ಪ್ರತಿಭಟನೆ ಮಾಡಲಿದೆ ಎಂದ ದಢೇಸೂಗೂರ ಬಲ್ಡೋಟಾ ಭದ್ರತಾ ಸಿಬ್ಬಂದಿಗಳು ಕುರಿಗಾಯಿಗಳ ಮೇಲೆ ದೌರ್ಜನ್ಯ ನಡೆಸಿರುವ ಘಟನೆ ಖಂಡನೀಯವಾಗಿದೆ. ಘಟನೆ ನಡೆದಾಗ ನಾವು ಊರಲ್ಲಿ ಇರಲಿಲ್ಲ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಬಸವರಾಜ ಕ್ಯಾವಟರ್ ಮಾತನಾಡಿ, ಜಿಲ್ಲೆಯಲ್ಲಿ ರೈತರ ಸಮಸ್ಯ ಆಲಿಸಲು ಶಾಸಕರು, ಸಚಿವರು ಮುಂದಾಗುತ್ತಿಲ್ಲ. ಅವರಿಗೆ ಅಧಿಕಾರವೇ ಮುಖ್ಯವಾಗಿದೆ. ಅಧಿಕಾರಕ್ಕಾಗಿ ಜಿಲ್ಲೆಯ ರೈತರನ್ನು ಮರೆತಿದ್ದಾರೆ. ಕಾಂಗ್ರೆಸ್ ಸರಕಾರ ಜನಪರ ಕಾಳಜಿ ಮರೆತಿದೆ ಎಂದು ಆರೋಪಿಸಿದರು.
ಗೋಷ್ಟಿಯಲ್ಲಿ ಬಿಜೆಪಿ ಮುಖಂಡ ಮಲ್ಲಿಕಾರ್ಜುನಸ್ವಾಮಿ, ಜಿಲ್ಲಾ ಎಸ್ ಸಿ ಮೋರ್ಚಾ ಅಧ್ಯಕ್ಷ ಗಣೇಶ್ ಹೊರತಟ್ನಾಳ್ ಇದ್ದರು.
27th July 2025
ಯಲಬುರ್ಗಾ.
ಜಿಲ್ಲೆಯ ಯಲಬುರ್ಗಾ ತಾಲೂಕಿನ ಕೊಳಿಹಾಳ ಸೀಮಾದಲ್ಲಿ ಸರ್ವೆ ನ.109 ರಲ್ಲಿ 220 ಕೆವಿ ವಿದ್ಯುತ್ ಕಂಬಕ್ಕೆ ಲೈನ್ ಎಳೆಯುವ ಕಾಮಗಾರಿಗೆ ಅಡ್ಡಿ ಪಡಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬ ದೂರಿನನ್ವಯ ಯಲಬುರ್ಗಾದ ಬಿಜೆಪಿ ಮುಖಂಡ ಶರಣಪ್ಪ ಗುಂಗಾಡಿ ವಿರುದ್ದ ಪ್ರಕರಣ ದಾಖಲಾಗಿದೆ.
ಈ ಕುರಿತು ಎಸ್ ಪಿ ಕಚೇರಿಯಿಂದ ಮಾಹಿತಿ ಲಭ್ಯವಾಗಿದೆ. ಜು. 26 ರಂದು ಸಂಜೆ ಕೊಳಿಹಾಳ ಸೀಮಾದ ಸರ್ವೆ ನಂ: 109 ರಲ್ಲಿ ನಿರ್ಮಿಸಿದ್ದ 220 ಕೆ.ವಿ ವಿದ್ಯುತ್ ಕಂಬಕ್ಕೆ ಲೈನ್ ಎಳೆಯುವ ಕೆಲಸ ಮಾಡುತ್ತಿರುವಾಗ ಶರಣಪ್ಪ ಗುಂಗಾಡಿ ಹಾಗೂ ಇತರೆ 5-6 ಜನರು ಏಕಾಏಕೀಯಾಗಿ ಬಂದು ಗುಂಪು ಕಟ್ಟಿಕೊಂಡು ವಿದ್ಯುತ್ ಕಂಬದ ಹತ್ತಿರ ಬಂದು ನಮಗೆ ಪ್ರತಿ ಕಂಬಕ್ಕೆ 50 ಲಕ್ಷ ರೂಪಾಯಿಗಳನ್ನು ಕೊಟ್ಟು ಕಾಮಗಾರಿ ಮಾಡೀರಿ, ಇಲ್ಲಾ ಅಂದರೆ ಕೆಲಸ ಮಾಡಲು ಬೀಡುವುದಿಲ್ಲ, ಇಲ್ಲಿಯೇ ಮುಗಿಸಿ ಬಿಡ್ತೀವಿ ಎಂದು ಕಾಮಗಾರಿಗೆ ಅಡ್ಡಿಪಡಿಸಿರುವ ಕುರಿತು ಸೆರೆಂಟಿಕಾ ಕಂಪನಿಯಲ್ಲಿ ರೈಟ್ ಆಫ್ ವೇ ಆಫೀಸರ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಕ್ಯಾದಿಗುಪ್ಪಾದ ಬುಡ್ಡಪ್ಪ ಹಿರೇಮನಿ ದೂರು ನೀಡಿರುವ ಹಿನ್ನೆಲೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.
ಈ ಹಿಂದೆ ಅಪಾದಿತ ಶರಣಪ್ಪ ತಂದೆ ತೋಟಪ್ಪ ಗುಂಗಾಡಿ ತನ್ನ ಫೇಸ್ಬುಕ್ ಖಾತೆಯಲ್ಲಿ ದ್ವೇಷ ಹರಡುವಂತೆ ಸುಳ್ಳು ಆಪಾದನೆ ಮಾಡಿ ಪೊಸ್ಟ್ ಮಾಡುತ್ತಿರುವುದರ ಕುರಿತು ಬೇವೂರ ಠಾಣೆಯಲ್ಲಿ ದಿನಾಂಕ-06.06.2025 ರಂದು ಗುನ್ನೆ ನಂ:82/2025 ಕಲಂ: 353(2), 352 ಬಿಎನ್ಎಸ್-2023 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಮತ್ತು 29.06.2025 ರಂದು ವಿದ್ಯುತ್ ಲೈನ್ ಕಾಮಗಾರಿ ಸ್ಥಳದಲ್ಲಿ ಹಣಕ್ಕೆ ಬೇಡಿಕೆ ಇಟ್ಟಿದ್ದರಿಂದ ಬೇವೂರ ಠಾಣೆಯಲ್ಲಿ 89/2025 :189(2), 191(2), 126(2), 308(2), 352 & 190 -2023 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಪದೇ ಪದೇ ಹಲವಾರು ಅಪರಾಧಿಕ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವುದರಿಂದ ಆರೋಪಿತನ ವಿರುದ್ದ ಮುಂಜಾಗ್ರತ ಕ್ರಮವಾಗಿ ದಿನಾಂಕ-22.06.2025 ರಂದು ಪಿ.ಎ.ಆರ್ ನಂ: 18/2025 ಕಲಂ:126 ಬಿ.ಎನ್.ಎಸ್.ಎಸ್-2023 ಸೇರಿ ಗುಂಗಾಡಿ ವಿರುದ್ಧ 4 ಪ್ರಕರಣ ದಾಖಲಿಸಿ ಮುಂಜಾಗೃತ ಕ್ರಮವನ್ನು ಕೈಗೊಳ್ಳಾಗಿದೆ.
20th July 2025
ಬಳ್ಳಾರಿ ಜುಲೈ 19. ಕೃಷಿಯನ್ನು ಪ್ರಾರಂಭಿಸುವ ಮೊದಲು ರೈತರ ಆದ್ಯ ಕರ್ತವ್ಯ ಮಣ್ಣು ಸಂರಕ್ಷಣೆ ಬಹು ಮುಖ್ಯವಾಗಿದೆ, ಮಣ್ಣು ಫಲವತ್ತತೆಯಾಗಿದ್ದರೆ ರೈತರು ಭೂಮಿಯಲ್ಲಿ ಬಂಗಾರ ಬೆಳೆಯಬಹುದು.
ಆಧುನಿಕ ತಂತ್ರಜ್ಞಾನದೊಂದಿಗಿನ ಸಮಗ್ರ ಕೃಷಿ ಪದ್ದತಿ ಬೇಸಾಯ ಅಳವಡಿಕೆಯಿಂದ ಸುಸ್ಥಿರ ಹಾಗೂ ಲಾಭದಾಯಕ ಕೃಷಿಗೆ ದಾರಿಯಾಗಿದೆ, ರೈತರು ಈ ನಿಟ್ಟಿನಲ್ಲಿ ಗಮನ ಹರಿಸುವ ಅಗತ್ಯವಿದೆ ಎಂದು ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತರಾದ ಡಾ.ಬಿಜಿ ಕೆರೆ ವೀರಭದ್ರಪ್ಪನವರು ಕೃಷಿ ಅಧ್ಯಯನ ಪ್ರವಾಸಕ್ಕೆ ಚಾಲನೆ ನೀಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿಸಿ ಟ್ರಸ್ಟ್(ರಿ) ಬಳ್ಳಾರಿ-1 ತಾಲ್ಲೂಕಿನ ಗಾಂಧಿನಗರ ವಲಯದ ಅವಂಬಾವಿ ಮತ್ತು ಒಕ್ಕರಣಿ ಕ್ಯಾಂಪಿನ ಸ್ವ ಸಹಾಯ ಸಂಘದ ಆಸಕ್ತಿಯುಳ್ಳ 50 ಜನ ಸದಸ್ಯರು ಸೇರಿ ಸಮಗ್ರ ಮಿಶ್ರಿತ ವಿಶಿಷ್ಠವಾದ ಪದ್ದತಿಯಲ್ಲಿ ಕೃಷಿ ಹೊಟ್ಟೆಗೆ ಇತರೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ಕುರಿ ಸಾಕಾಣಿಕೆ, ರೇಷ್ಮೆ,ನುಗ್ಗೆ,ಅಜೋಲಾ,ಹೀಗೆ ಹಲವಾರು ತೋಟಗಾರಿಕೆ ಬೆಳೆಗಳನ್ನು ಬೆಳೆದು ಯಶಸ್ವಿಯಾಗಿ ಅಧಿಕ ಲಾಭವನ್ನು ಪಡೆಯುತ್ತಿರುವ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲ್ಲೂಕಿನ ಬಿಜಿ ಕೆರೆ ಗ್ರಾಮದ ಬರಗಾಲದ ವೈದ್ಯ,ರೈತರ ಮಿತ್ರ,ನೇಗಿಲ ಯೋಗಿ ಎಂದೆ ಪ್ರಖ್ಯಾತಿಯಾದ ಕೃಷಿ ರಂಗದಲ್ಲಿ ಹಲವಾರು ಪ್ರಶಸ್ತಿ ವಿಜೇತರಾದ ಬಿಜಿ ಕೆರೆ ಡಾ.ಎಸ್.ಸಿ.ವೀರಭದ್ರಪ್ಪ ನವರ ತೋಟಕ್ಕೆ ಭೇಟಿ ನೀಡಿ ಮಾಹಿತಿ ಪಡೆಯಲಾಯಿತು.
ರೈತರು ಮನಸ್ಸು ಮಾಡಿದ್ರೆ ವರ್ಷದ 365 ದಿನ ಆದಾಯ ಗಳಿಸಬಹುದಾದ
ಹೈನುಗಾರಿಕೆ,ತರಕಾರಿ ಕೃಷಿ, ಹೂವಿನ ಬೇಸಾಯ, ರೇಷ್ಮೆ ಕೃಷಿ, ಮುಂಗಾರು & ಹಿಂಗಾರು ಬೆಳೆ, ಹುಣಸೆ, ಮಾವು,ತೆಂಗು ಹೀಗೆ ಮಿಶ್ರಿತ ಬೇಸಾಯ ಮಾಡುವುದರಿಂದ ಒಂದು ಬೆಳೆ ನಷ್ಟ ಆದರೂ ಇನ್ನೊಂದರಲ್ಲಿ ಲಾಭ ಪಡೆಯಬಹುದು ಎಂದು ಅಧ್ಯಯನ ಪ್ರವಾಸಕ್ಕೆ ಬಂದ ರೈತರಿಗೆ
ಡಾ/ ಎಸ್.ಸಿ.ವೀರಭದ್ರಪ್ಪ ನವರು ಮಾಹಿತಿ ನೀಡಿದರು
ಈ ಸಂದರ್ಭದಲ್ಲಿ
ಬೋರಯ್ಯ ಮೊಳಕಾಲ್ಮೂರು ತಾಲ್ಲೂಕಿನ ಕೃಷಿ ಮೇಲ್ವಿಚಾರಕರು.
ಮಹೇಶ್ ಎಸ್.ಬಳ್ಳಾರಿ ತಾಲ್ಲೂಕಿನ ಕೃಷಿ ಮೇಲ್ವಿಚಾರಕರು.
ಶ್ರೀಮತಿ ಗೌಸೀಯಾ ಹವಂಬಾವಿ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿಗಳು.
ಶ್ರೀಮತಿ ನಾಗವೇಣಿ ಅಧ್ಯಕ್ಷರು ಒಕ್ಕರಣಿ ಕ್ಯಾಂಪಿನ ಒಕ್ಕೂಟ ಒಕ್ಕೂಟದ ಸದಸ್ಯರು ಶ್ರೀಮತಿ ಅನಿತಾ,ಬಸಮ್ಮ,ಶಿವಮ್ಮ ಹಾಗೂ ಸಂಘ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು