Skip to main content
ಸಮರ್ಥವಾಣಿ
News

ಕಮಿಷನ್ ಹೊಡೆಯುವ ಹುನ್ನಾರದ ಈ ಕಾಮಗಾರಿಯನ್ನು ತಕ್ಷಣ ನಿಲ್ಲಿಸಲು ಮನವಿ

09 Aug 2025

ಬಳ್ಳಾರಿ. ಆ. ೦8: ನಗರದ 29ನೇ ವಾರ್ಡಿನ ಬಂಡಿಹಟ್ಟಿ ಸಿದ್ದರಾಮೇಶ್ವರ ಕಾಲೋನಿಯಲ್ಲಿ ನಡೆಯುತ್ತಿರುವ ತೆರೆದ ಚರಂಡಿ ಕಾಮಗಾರಿಗೆ ಸ್ಥಳ ತಪಾಸಣೆ ಇಲ್ಲದೆ ಅಂದಾಜು ಪಟ್ಟಿ ಇಲ್ಲದೆ ಸುಮಾರು 40 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ತಿರು ಚರಂಡಿಯನ್ನು ನಿರ್ಮಿಸುತ್ತಿದ್ದಾರೆ ಇದು ಕೇವಲ ಸರ್ಕಾರದ ಹಣ ಪೋಲು ಮಾಡುವ ಅಥವಾ ಕಮಿಷನ್ ಹೊಡೆಯುವ ಹುನ್ನಾರವಾಗಿದೆ ಕೂಡಲೇ ಈ ಕಾಮಗಾರಿಯನ್ನು ರದ್ದು ಪಡಿಸಬೇಕೆಂದು ಬಂಡಿಹಟ್ಟಿ ಪ್ರದೇಶದ ಸಿದ್ಧರಾಮೇಶ್ವರ ಕಾಲೋನಿಯ ಸಾರ್ವಜನಿಕರು ಇಂದು ಮಹಾನಗರ ಪಾಲಿಕೆಯ ಆಯುಕ್ತರಾದ ಕಲಿಸಬ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿ ಒತ್ತಾಯಿಸಿದರು.


 ಭೀಮ ವಾದ ದಲಿತ ಸಂಘರ್ಷ ಸಮಿತಿಯಿಂದ ವಿವರವಾದ ಮನವಿ ಪತ್ರವನ್ನು ಸಲ್ಲಿಸಿ ಮಾತನಾಡಿದ, ಗಾದಿಲಿಂಗಪ್ಪ ಮತ್ತು ಪ್ರಸಾದ್ 

ಬಳ್ಳಾರಿ ನಗರದ 29ನೇ ವಾರ್ಡ್ ನ ಕನಕ ನಗರದಿಂದ ಹೀರಾ ಫಂಕ್ಷನ್ ಅವರಿಗೆ ಅಂದಾಜು ಪಟ್ಟಿಯನ್ನು ತಯಾರಿಸಿ ಅದೇ ಕಡಿಮೆ ಅಳತೆ ಇರುವ ಸಿದ್ದರಾಮೇಶ್ವರ ಕಾಲೋನಿಯಲ್ಲಿ ತೆರೆದ ಚರಂಡಿಯನ್ನು ನಿರ್ಮಾಣ ಮಾಡುತ್ತಿದ್ದಾರೆ. ಆದರೆ ಅಲ್ಲಿರುವ ನಿವಾಸಿಗಳು ನಮಗೆ ಈ ತೆರೆದ ಚರಂಡಿ ನಿರ್ಮಾಣದಿಂದ ಕಸ ಕಡ್ಡಿ ಸಂಗ್ರಹಗೊಂಡು 

ಮತ್ತು ಸೊಳ್ಳೆಗಳು ಬರುವ ಸಂಭವವಿದೆ ಇದರಿಂದ ಸಾಂಕ್ರಾಮಿಕ ರೋಗಗಳು ನಮ್ಮ ಪ್ರದೇಶದಲ್ಲಿ ಹರಡುವ ಸಾಧ್ಯತೆ ಇದ್ದು ಈ ತೆರೆದ ಚರಂಡಿಯನ್ನು ಯಾವುದೇ ಕಾರಣಕ್ಕೂ ನಡೆಸಬಾರದು ಕೂಡಲೇ ರದ್ದು ಪಡಿಸಬೇಕೆಂದು ಸ್ಥಳೀಯ ನಾಗರಿಕರು ಹಲವಾರು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಮೌಖಿಕವಾಗಿ ಮತ್ತು ಲಿಖಿತವಾಗಿ ಮನವಿ ಮಾಡಿದರು ಸಹ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೇವಲ ಕಮಿಷನ್ ಆಸೆಗಾಗಿ ಈ ಕಾಮಗಾರಿಯನ್ನು ನಡೆಸಲು ಮುಂದಾಗಿದ್ದಾರೆ, ಇದರಿಂದ ನಮಗೆ ಯಾವುದೇ ಅನುಕೂಲವಿಲ್ಲ ಅನಾನುಕೂಲವೇ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಕೂಡಲೇ ರದ್ದುಪಡಿಸಿ ಎಂದು ಒತ್ತಾಯಿಸಿದರು.


 ಅಷ್ಟೇ ಅಲ್ಲದೆ ಆ ಪ್ರದೇಶದಲ್ಲಿ 8 ರಿಂದ 10 ಅಡಿಯ ರಸ್ತೆ ಇದ್ದು  ಕಿರಿದಾಗಿ ಜನ ಓಡಾಡಲು ತೊಂದರೆ ಆಗುತ್ತದೆ ಈಗಲೇ ನಾಲ್ಕು ಚಕ್ರದ ವಾಹನ ಮತ್ತು ಲಗೇಜ್ ಆಟಗಳು ಶಾಲೆಗೆ ಬರುವ ಬಿಸಿ ಊಟದ ವಾಹನಗಳು ಹಾಗೂ ಆಂಬುಲೆನ್ಸ್ ಹೋಗಲು ಪ್ರಯೋಜನವಾಗುತ್ತಿಲ್ಲ ಈಗ ತೆರೆದ ಚರಂಡಿಗಳು ನಿರ್ಮಾಣ ಮಾಡಿದರೆ 5_6 ಅಡಿಗಳು ಮಾತ್ರ ಉಳಿದು ಇನ್ನಷ್ಟು ಕಷ್ಟವಾಗುತ್ತದೆ ಇದನ್ನೆಲ್ಲ ಪ್ರಶ್ನಿಸಿ ಅಲ್ಲಿನ ವಾಸಿಗಳು ಕೇಳಿದಾಗ  ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಅದಕ್ಕೆ ಸಂಬಂಧಿಸಿದ ದಾಖಲಾತಿಗಳನ್ನು ಕೊಟ್ಟಿರುತ್ತಾರೆ ಆ ದಾಖಲಾತಿಗಳ ಪ್ರಕಾರ ಬಂಡಿಹಟ್ಟಿ ನಗರದ ನಾಗಪ್ಪ ಕಟ್ಟೆಯಿಂದ ಹೀರಾ ಫಂಕ್ಷನ್ ಹಲ್ ವರೆಗೂ ವರ್ಕ್ ಆರ್ಡರ್ ಆಗಿರುತ್ತದೆ ಆದರೆ ಲೋಕೋಪಯೋಗಿ ಇಲಾಖೆಯವರು ಸಿದ್ದರಾಮೇಶ್ವರ ಕಾಲೋನಿಯಲ್ಲಿ ಅನಾವಶ್ಯಕವಾಗಿ ಕಾಮಗಾರಿಕೆ ಕೆಲಸವನ್ನು ಮಾಡುತ್ತಿದ್ದಾರೆ ಇದಕ್ಕೆ ಸಂಬಂಧಿಸಿದ ಗ್ರಾಮ ನಿವಾಸಿಗಳು ಕಾಮಗಾರಿಕೆ ರದ್ದುಪಡಿಸಬೇಕೆಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ 

 ಕಾಮಗಾರಿಗೆ ಕೆಲಸವನ್ನು ಮಾಡಲು ಅನುಮತಿ ಕೊಟ್ಟಿರುವುದು ನಾಗಪ್ಪ ಕಟ್ಟೆಯಿಂದ ಹೀರಾ ಫಂಕ್ಷನ್ ಹಾಲ್ ವರೆಗೆ ಮಾತ್ರ ಎಂದು ನಮಗೆ ತಿಳಿಸಿರುತ್ತಾರೆ ಹಾಗೂ ಆಯುಕ್ತರು ಕೂಡಲೇ ಅವರಿಗೆ ನೋಟಿಸ್ ಅನ್ನು ಕಳಿಸಲು ಕೂಡ ತಿಳಿಸಿರುತ್ತಾರೆ ಆದ್ದರಿಂದ ಕೂಡಲೇ ರಸ್ತೆ ಕಾಮಗಾರಿಕೆಯನ್ನು ತಡೆಯಬೇಕೆಂದು ಜಿಲ್ಲಾ ಸಂಚಾಲಕರಾದ ಗಾದಿಲಿಂಗಪ್ಪ ಹಾಗೂ ಸಂಘಟನಾ ಸಂಚಾಲಕರದ ಪ್ರಸಾದ್ ರವರು ಪಾಲಿಕೆ ಆಯಿತರಲ್ಲಿ ಮನವಿ ಮಾಡಿದ್ದಾರೆ.

News

ಸರ್ಕಾರಕ್ಕೆ ಮಾತೃ ಹೃದಯವಿರಬೇಕು ; ಮಾದಿಗರು ಸಮಾಜಕ್ಕೆ ಮಾದರಿಯಾಗಬೇಕು ಎನ್.ಡಿ ವೆಂಕಮ್ಮ

08 Aug 2025

ಬಳ್ಳಾರಿ ಆ 07. ಸುಪ್ರೀಮ್ ಕೋರ್ಟ್ ಆದೇಶವಾಗಿ ಒಂದು ವರ್ಷ ಕಳೆದರೂ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಯಲ್ಲಿ ಮಾದಿಗ ಮತ್ತು ಇತರೆ ಜಾತಿಗಳಿಗೆ ಒಳ ಮೀಸಲಾತಿಯನ್ನು ಕಲ್ಪಿಸದೇ ವೃಥಾ ಕಾಲಹರಣ ಮಾಡುತ್ತಿದೆ, ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಮತ್ತು ಕಾಂತರಾಜ್ ವರದಿಯ ಅಂಕಿ ಅಂಶಗಳನ್ನು ಪಡೆದುಕೊಂಡು ಒಳ ಮೀಸಲಾತಿಯನ್ನು ಶೀಘ್ರ ಜಾರಿಗೊಳಿಸಬೇಕೆಂದು ಹಿರಿಯ ಸಾಹಿತಿ ಎನ್.ಡಿ ವೆಂಕಮ್ಮ ಸರ್ಕಾರವನ್ನು ಒತ್ತಾಯಿಸಿದರು.


ಅವರು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿ ಮಾತನಾಡಿ, ಸರ್ಕಾರಕ್ಕೆ ಮಾತೃ ಹೃದಯವಿರಬೇಕು ಸಮ ಸಮಾಜವನ್ನು ನಿರ್ಮಾಣ ಮಾಡಲು ಕ್ರಮಕೈಗೊಳ್ಳಬೇಕು ಒಳ ಮೀಸಲಾತಿಯಿಂದ ಮಾತ್ರ ಸಮಾದಲ್ಲಿ ಎಲ್ಲರನ್ನು ಮುನ್ನೆಲೆಗೆ ತರಲು ಸಾಧ್ಯ, ಇದು ಸರ್ಕಾರದ ಮುಖ್ಯಮಂತ್ರಿಗಳಿಗೆ ವಿಶಾಲವಾದ ಮಾತೃ ಹೃದಯವಿದ್ದಲ್ಲಿ ಮಾತ್ರ ಇದು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.


ಈ ಸಂದರ್ಭದಲ್ಲಿ ಕರಿಯಪ್ಪ ಗುಡಿಮನಿ ಮಾತನಾಡಿ, ಒಳ ಮೀಸಲಾತಿ ಹೋರಾಟವನ್ನು ಇದೇ ತಿಂಗಳು 11ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಅನಿರ್ಧಾಷ್ಟವಾಧಿ ಅಹೋರಾತ್ರಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ, ಈ ಹೋರಾಟಕ್ಕೆ ಮನೆಗೊಬ್ಬ ವ್ಯಕ್ತಿ ಜೊತೆಯಲ್ಲಿ ಪ್ರತಿಯೊಬ್ಬರು ಕೈಯಲ್ಲಿ ಬುತ್ತಿ ಹಿಡಿದುಕೊಂಡು ಹೋರಾಟಕ್ಕೆ ಬರಬೇಕು ಎಂದು ಅವರು ಕರೆ ನೀಡಿದರು. ಪ್ರತಿಪಕ್ಷಗಳು ನಮ್ಮ ಹೋರಾಟವನ್ನು ದುರುಪಯೋಗ ಮಾಡಿಕೊಳ್ಳಬಾರದು ಎಂದು ಬಿ.ಜೆ.ಪಿ ಮತ್ತು ಜೆ.ಡಿ.ಎಸ್ ಪಕ್ಷಗಳ ಮುಖಂಡರ ವಿರುದ್ಧ ಕಿಡಿಕಾರಿದರು.


ಈ ಪತ್ರಿಕಾಗೋಷ್ಟಿಯಲ್ಲಿ ಬಸವರಾಜ್ ಕೌತಾಳ್, ಅಂಬಣ್ಣ ಆರೋಲಿಕರ್ , ಸಣ್ಣ ಮಾರೆಪ್ಪ , ಗೆಸ್ಟ್ ಹಾಸ್ ಈಶ್ವರಪ್ಪ, ರಾಮಕೃಷ್ಣ, ಆಂಜಿನೇಯ, ಹುಸೇನಪ್ಪ, ಸೇರಿದಂತೆ ಹಲವರಿದ್ದರು.

News

ಬಳ್ಳಾರಿ ನಗರ ಕ್ಷೇತ್ರಕ್ಕೆ 50 ಕೋಟಿ ರೂ.ಗಳ ಅನುದಾನ ಹಂಚಿಕೆ- ಶಾಸಕ ನಾರಾ ಭರತ್ ರೆಡ್ಡಿ

01 Aug 2025

ಬಳ್ಳಾರಿ, ಜು.31. ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗಾಗಿ 50 ಕೋಟಿ ರೂ.ಗಳನ್ನು ಹಂಚಿಕೆ ಮಾಡಿರುವ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ ಹಾಗೂ ಪಕ್ಷದ ವರಿಷ್ಠರಿಗೆ ಶಾಸಕ ನಾರಾ ಭರತ್ ರೆಡ್ಡಿ ಧನ್ಯವಾದ ತಿಳಿಸಿದ್ದಾರೆ.


ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಕ್ಷೇತ್ರದ ಅಭಿವೃದ್ಧಿ ಹಾಗೂ ಬಳ್ಳಾರಿ ಜಿಲ್ಲೆಗೆ ಸಂಬಂಧಿಸಿದ ಹಲವು ವಿಷಯಗಳ ಕುರಿತು ಚರ್ಚೆ ಮಾಡಿದ್ದರು. ಈ ವೇಳೆ ಸಿಎಂ ಸಿದ್ದರಾಮಯ್ಯ ಅವರು ಬಳ್ಳಾರಿ ನಗರ ಕ್ಷೇತ್ರದ ಅಭಿವೃದ್ಧಿಗೆ ಎಲ್ಲ ನೆರವು ನೀಡುವುದಾಗಿ ಭರವಸೆ ನೀಡಿರುವುದಾಗಿ ಗುರುವಾರ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.


ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ವಿಧಾನಸೌಧದಲ್ಲಿ ನಡೆದ 2025-26ನೇ ಸಾಲಿನ ಆಯವ್ಯಯದಲ್ಲಿ ಘೋಷಣೆ ಮಾಡಲಾದ ಮುಖ್ಯಮಂತ್ರಿಯವರ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರಕ್ಕೆ 50 ಕೋಟಿ ರೂ.ಗಳ ಅನುದಾನ ಹಂಚಿಕೆ ಆಗಿರುವುದರಿಂದ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಕ್ಷೇತ್ರದ ಜನರ ಪರವಾಗಿ ಧನ್ಯವಾದ ತಿಳಿಸುವೆ ಎಂದಿದ್ದಾರೆ.

News

ರಾಘವರ ಜಯಂತಿಯಂದು ರಂಗಭೂಮಿಯ ಅನರ್ಘ್ಯ ರತ್ನ ಬಳ್ಳಾರಿ ರಾಘವ ಕೃತಿ ಲೋಕಾರ್ಪಣೆ

01 Aug 2025

ಬಳ್ಳಾರಿ : ಆ 01 .ರಾಘವರ 145ನೇ ಜಯಂತಿಯ ಅಂಗವಾಗಿ ರಾಘವ ಕಲಾಮಂದಿರದಲ್ಲಿ ಆಗಷ್ಟ್ 2 ಶನಿವಾರ ಸಂಜೆ 6 ಗಂಟೆಗೆ ನಡೆಯುವ

ರಾಘವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಲೇಖಕ ಸಿದ್ದರಾಮ ಕಲ್ಮಠ ವೀರಚಿತ ರಂಗಭೂಮಿಯ ಅನರ್ಘ್ಯ ರತ್ನ ಬಳ್ಳಾರಿ ರಾಘವ ಕೃತಿಯು ಬಿಡುಗಡೆಯಾಗಲಿದೆ ಎಂದು ರಾಘವ ಕಲಮಂದಿರದ ವ್ಯವಸ್ಥಾಪಕರಾದ ರಮಣಪ್ಪ ಬಜಂತ್ರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಆ ದಿನ ಸನಾರಂಭವನ್ನು ಉದ್ಘಾಟಿಸಲಿರುವ ಬಳ್ಳಾರಿ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಸಚಿವರಾದ

ಸಿ.ನಾಗರಾಜ್ ಅವರು ಕೃತಿ ಲೋಕಾರ್ಪಣೆ ಮಾಡುವರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪ್ರಸಿದ್ದ ಜನಪದ ಗಾಯಕರು, ಕರ್ನಾಟಕ ಜಾನಪದ ಅಕಾಡೆಮಿಯ ಮಾಜಿ ಅಧ್ಯಕ್ಷರಾದ

ಪಿಚ್ಚಳ್ಳಿ ಶ್ರೀನಿವಾಸ ಅವರು ಪಾಲ್ಗೊಳ್ಳುವರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಘವ ಮೆಮೋರಿಯಲ್ ಅಸೋಸಿಯೇಷನ್ ನ ಗೌರವಾಧ್ಯಕ್ಷರಾದ

ಕೆ ಚನ್ನಪ್ಪ ವಹಿಸುವರು.

ಅಸೋಸಿಯೇಷನ್ ನ ಪದಾಧಿಕಾರಿಗಳು ಉಪಸ್ಥಿತರಿರುವರು.

ಬಳ್ಳಾರಿ ರಾಘವ ರಾಜ್ಯ ಪ್ರಶಸ್ತಿಯನ್ನು

ಡಿಂಗ್ರಿ ನಾಗರಾಜ್, ಬೆಂಗಳೂರು

ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವದು.


ಕಲಾ ಸಂಗಮ ಸಂಸ್ಥೆ, ಧಾರವಾಡ ಇವರ

"ಸಮರ ಸಿಂಹ ಸಂಗೊಳ್ಳಿ ರಾಯಣ್ಣ"

ಕನ್ನಡ ಐತಿಹಾಸಿಕ ನಾಟಕದ ಪ್ರದರ್ಶನವಿದೆ.

ಕಲಾಸಕ್ತರು,ಸರ್ವರೂ ಆಗಮಿಸಿ ಸಮಾರಂಭವನ್ನು ಯಶಸ್ವಿ ಗೊಳಿಸಬೇಕೆಂದು ಅವರು ಕಲಾ ಪೋಷಕರು ಮತ್ತು ಕಲಾಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

News

ಗಣಿಗಾರಿಕೆ ಪ್ರದೇಶಗಳಿಗಾಗಿ ವಿಶೇಷ ರಾಕ್‍ರಾಡ್ ಟೈರ್

01 Aug 2025

ಬಳ್ಳಾರಿ ಆ 01. ಭಾರತದ ಪ್ರಮುಖ ಟೈರ್ ತಯಾರಕ ಕಂಪನಿಯಾದ ಸಿಯೆಟ್ ಇಂದು ಗಣಿಗಾರಿಕೆ ಪ್ರದೇಶಗಳಂತಹ ಕಠಿಣ ಭೂಪ್ರದೇಶಗಳಲ್ಲಿ ಬಳಸಲು ವಿಶೇಷವಾಗಿ ವಿನ್ಯಾಸಗೊಳಿಸಲಾಗಿರುವ ತನ್ನ ಮೊದಲ ರೇಡಿಯಲ್ ಟೈರ್ ಆದ ಸಿಯೆಟ್ ರಾಕ್‍ರಾಡ್ ಬಿಡುಗಡೆ ಮಾಡಿದೆ.

ಈ ಹೊಸ ಉತ್ಪನ್ನ ಬಿಡುಗಡೆ ಮಾಡುವ ಮೂಲಕ ಸಿಯೆಟ್ ಕಂಪನಿಯು ತನ್ನ ಟ್ರಕ್ ಮತ್ತು ಬಸ್ ರೇಡಿಯಲ್ (ಟಿಬಿಆರ್) ವಿಭಾಗದಲ್ಲಿ ತಂತ್ರಜ್ಞಾನ ಶಕ್ತಿಯನ್ನು ಬಲಪಡಿಸಿಕೊಂಡಿದೆ ಮತ್ತು ಅತ್ಯಂತ ಕಠಿಣ ಪರಿಸ್ಥಿತಿಗಳಲ್ಲಿ ಬಳಸಬಹುದಾದ ಉತ್ಪನ್ನ ಬಿಡುಗಡೆ ಮಾಡುವ ಮೂಲಕ ಒಂದು ಅತಿ ಬೇಡಿಕೆಯ ವಿಭಾಗಕ್ಕೆ ಪ್ರವೇಶ ಮಾಡಿದೆ. ರಾಕ್‍ರಾಡ್ ಟೈರ್ ಅನ್ನು ಒರಿಸ್ಸಾದ ಬಾರ್ ಬಿಲ್ ನಲ್ಲಿರುವ ಗಣಿಗಳಿಂದ ಹಿಡಿದು ಇಂಡೋನೇಷ್ಯಾದ ಒರಟಾದ ಭೂಪ್ರದೇಶಗಳವರೆಗೆ ವಿವಿಧ ರೀತಿಯ ಕಠಿಣ ಭೂಪ್ರದೇಶಗಳಲ್ಲಿ ಪರೀಕ್ಷಿಸಲಾಗಿದೆ ಎಂದು ಪ್ರಕಟಣೆ ಹೇಳಿದೆ.

ಈ ಟೈರ್ ಅನ್ನು ಹೆಚ್ಚಿನ ಬಾಳಿಕೆ ಬರಲು, ಉತ್ತಮ ಗ್ರಿಪ್ ಹೊಂದಲು ಮತ್ತು ದೀರ್ಘ ಮೈಲೇಜ್ ಒದಗಿಸಲು ವಿನ್ಯಾಸಗೊಳಿಸಲಾಗಿದ್ದು, ಭಾರಿ ಭಾರದ ವಾಹನ ಕಾರ್ಯಾಚರಣೆಗಳಿಗೆ ಸೂಕ್ತ ಆಯ್ಕೆಯಾಗಿದೆ.

ಕರ್ನಾಟಕ ಸೇರಿದಂತೆ ಪ್ರಮುಖ ಗಣಿಗಾರಿಕಾ ವಲಯಗಳಲ್ಲಿ ಇದು ಬಿಡುಗಡೆ ಆಗಿದ್ದು, ಇದು ದೀರ್ಘ ಬಾಳಿಕೆ ಬರುವುದರಿಂದ ತ್ಯಾಜ್ಯ ವಸ್ತು ಪರಿಸರ ಸೇರುವುದನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ವಾಣಿಜ್ಯ ವಲಯಗಳಲ್ಲಿ ಸಿಯೆಟ್ ನ ಸುಸ್ಥಿರ ಕ್ರಮಗಳಿಗೆ ಬೆಂಬಲ ಒದಗಿಸುತ್ತದೆ ಎಂದು ವಿವರಿಸಿದೆ.

News

ಶಾಲೆಯ ಗುರುಗಳಿಗೆ ಭಾರತೀಯ ಸಂಪ್ರದಾಯ, ಸಂಸ್ಕೃತಿಯಂತೆ ಗೌರವ ಸನ್ಮಾನ

01 Aug 2025

ಬಳ್ಳಾರಿ ಆ 01. ದಿನಾಂಕ: 01/08/2025 ರಂದು ಬಳ್ಳಾರಿ ನಗರದ ಪ್ರತಿಷ್ಠಿತ ಶಾಲೆಗಳಲ್ಲಿ ಒಂದಾದ ಶ್ರೀನಂದ ವಸತಿ ಶಾಲೆ ವಿದ್ಯಾನಗರ. ಈ ಶಾಲೆಯಲ್ಲಿ ಹಲವಾರು ವರ್ಷಗಳಿಂದ ಶಾಲೆಯ ಗುರುಗಳಿಗೆ ಶುಭ ಶ್ರಾವಣ ಮಾಸದಲ್ಲಿ ಶುಕ್ರವಾರದಂದು ಪ್ರತಿವರ್ಷದಂತೆ ಈದಿನ ಭಾರತೀಯ ಸಂಪ್ರದಾಯ, ಸಂಸ್ಕೃತಿಯಂತೆ ಗುರುಮಾತೆಯರಿಗೆ ಹಾಗೂ ಶಾಲೆಯ ಸಿಬ್ಬಂದಿ ವರ್ಗದವರಿಗೆ ಹರಿಶಿಣ ಕುಂಕುಮದೊಂದಿಗೆ ಶಾಲೆಯ ಅಧ್ಯಕ್ಷರಾದ ಗಾಂಧಿರವರು ನೂತನ ಸಮವಸ್ತ್ರಗಳನ್ನು ಕೊಡುವುದರ ಮೂಲಕ ಗೌರವಿಸಿದರು. ಇಂತಹ ಸಂಸ್ಕೃತಿಯ ಕಾರ್ಯಕ್ರಮಗಳನ್ನು ಮಾಡುತ್ತ ಬರುತ್ತಿರುವುದು ಶ್ಲಾಘನೀಯ. ಈ ಕಾರ್ಯಕ್ರಮದಲ್ಲಿ ಶಾಲೆಯ ಉಪಾಧ್ಯಕ್ಷರಾದ ವಿ.ಮುರಳಿಕೃಷ್ಣ ಮತ್ತು ಕಾರ್ಯದರ್ಶಿಗಳಾದ ವಿ.ರಮಣಕುಮಾರ್‌ರವರು ಭಾಗವಹಿಸಿದರು.

News

ವಾಲ್ಮೀಕಿ ಮುಖಂಡರಿಂದ ಎಸ್ಪಿಗೆ ದೂರು

29 Jul 2025

ಬಳ್ಳಾರಿ ಜುಲೈ 26: ನಗರದ ಹರಿಚಂದ್ರ ಘಾಟ್ ಪ್ರದೇಶದಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಪರಿಶಿಷ್ಟ ಪಂಗಡ ಮತ್ತು ಇತರೆ ಜನಾಂಗದವರ ಮಾರಾಮಾರಿಯಿಂದಾಗಿ ವಾಲ್ಮೀಕಿ ಜನಾಂಗದ ಹೆಂಗಸರು ಮತ್ತು ಗಂಡಸರಿಗೆ ದೈಹಿಕ ಗಾಯಗಳಾಗಿ ಬಿಎಮ್ಆರ್ಸಿಯಲ್ಲಿ ಚಿಕಿತ್ಸೆ ಪಡೆದುಕೊಂಡು ಎಂಎಲ್ಸಿ ಮಾಡಿಸಿದ್ದರು ಸಹ ಗ್ರಾಮೀಣ ಠಾಣೆಯ ಪೊಲೀಸರು ಎಫ್ ಐ ಆರ್ ದಾಖಲಿಸದೆ ಕಳೆದ ಮೂರು ದಿನಗಳಿಂದ ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ ಇಂದು ಜಿಲ್ಲಾ ಪೊಲೀಸ್ ಅಧಿಕಾರಿಗಳಿಗೆ ದೂರನ್ನು ಸಲ್ಲಿಸಿದರು.


ಮನೆ ಮುಂದಿನ ರಸ್ತೆಯಲ್ಲಿ

ದ್ವಿಚಕ್ರ ವಾಹನವನ್ನು ಓಡಿಸುವ ಘಟನೆ ಯಿಂದ ಆರಂಭವಾದ ಜಗಳ ಮಾರ ಮಾರಿಗೆ ತಿರುಗಿ ದ್ವಿಚಕ್ರ ವಾಹನ ಸವಾರರದ ರಾಮ್ ಬಾಬು ಮತ್ತು ಉಮೇಶ್ ಮತ್ತು ಇತರ 15 -20 ಜನರು ನಮ್ಮ ಮನೆಗೆ ಬಂದು ಹೆಂಗಸರು ಗಂಡಸರು ಎನ್ನದಂತೆ ಬಡಿಗೆ ರಾಡುಗಳಿಂದ ಹಲ್ಲೆ ಮಾಡಿ, ಅವಾಚ್ಚ ಮತ್ತು ಅಶ್ಲೀಲ ಪದಗಳಿಂದ ನಿಂದಿಸಿ ಜಾತಿ ನಿಂದನೆ ಮಾಡಿ ಕೊಲೆ ಬೆದರಿಕೆ ಹಾಕಿರುತ್ತಾರೆ. ಘಟನೆಯಲ್ಲಿ ಗಾಯಗೊಂಡ ನಾವುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದೇವೆ ಮತ್ತು ನಮ್ಮ ಕುಟುಂಬದ ಇತರ ಸದಸ್ಯರು ಒಳ ರೋಗಿಯಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.


ಈ ಘಟನೆ ಕುರಿತು ಈಗಾಗಲೇ ಎಂಎಲ್ಸಿ ಆಗಿರುತ್ತದೆ ಎಫ್ಐಆರ್ ದಾಖಲಿಸುವಂತೆ ಗ್ರಾಮೀಣ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಸತೀಶ್ ಅವರನ್ನು ನಾವು ಕೇಳಿಕೊಂಡಾಗ ಕಳೆದ ಮೂರು ನಾಲ್ಕು ದಿನಗಳಿಂದ ಅವರು ನಮ್ಮನ್ನು ಠಾಣೆಗೆ ಅಲೆದಾಡಿಸುತ್ತಿದ್ದಾರೆ ಎಂದು ದೂರಿದ ಅವರು ಸೂರಿ ಅಂಜಿ ವೆಂಕಟೇಶ್ ರಾಮ್ ಬಾಬು ಉಮೇಶ್ ಮತ್ತು ಇತರರ ಮೇಲೆ ಎಫ್ ಐ ಆರ್ ದಾಖಲಿಸಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಅಡಿಷನಲ್ ಎಸ್ ಪಿ ರವಿಕುಮಾರ್ ದೂರುದಾರರನ್ನು ಉದ್ದೇಶಿಸಿ ಮಾತನಾಡಿ ಈಗಾಗಲೇ ಎಂಎಲ್ಸಿ ಆಗಿದೆ ಮುಂದುವರೆದು ನಾವು ಎಫ್ ಐ ಆರ್ ಮಾಡೇ ಮಾಡುತ್ತೇವೆ ಗಾಯಾಳು ಯಾರಾದರೂ ಠಾಣೆಗೆ ಬಂದು ದೂರು ನೀಡಿ ತಕ್ಷಣವೇ ಎಫ್ಐಆರ್ ದಾಖಲಿಸಲಾಗುವುದು ಎಂದು ಭರವಸೆ ನೀಡಿದರು.


ಈ ಸಂದರ್ಭದಲ್ಲಿ ಅಖಂಡ ಕರ್ನಾಟಕ ವಾಲ್ಮೀಕಿ ನಾಯಕರ ಒಕ್ಕೂಟದ ರಾಜ್ಯಾಧ್ಯಕ್ಷ ತಿಮ್ಮಪ್ಪ ಜೋಳದ ರಾಶಿ, ಪ್ರಧಾನ ಕಾರ್ಯದರ್ಶಿ ಎನ್ ಸತ್ಯನಾರಾಯಣ, ವಾಲ್ಮೀಕಿ ಜನಾಂಗದ ಮುಖಂಡರುಗಳಾದ ವಿಕೆ ಬಸಪ್ಪ, ವಕೀಲರಾದ ಬಿ ಜಯಾರಾಮ್, ಬಿ ರುದ್ರಪ್ಪ, ಎರಗುಡಿ ಮುದಿಮಲ್ಲಯ್ಯ, ಹಗರಿ ಜನಾರ್ದನ, ಮಿಂಚೇರಿ ರಾಮಾಂಜನಿ, ಕಾಯಿ ಗಡ್ಡೆ ಬಸವರಾಜ, ದುರ್ಗಪ್ಪ, ಬೆಣಕಲ್ ಸುರೇಶ್ ಸೇರಿದಂತೆ ಹಲವಾರು ವಾಲ್ಮೀಕಿ ಮುಖಂಡರಿದ್ದರು.

News

ಆಗಸ್ಟ್ 5ರಂದು ಪ್ರಗತಿನಗರ ಹಿರಿಯ ನಾಗರಿಕರ ಸಂಘಧ ಚುನಾವಣೆ

29 Jul 2025

ಹೈದ್ರಾಬಾದ,ಜು.28-ಹೈದ್ರಾಬಾದದ ಪ್ರಗತಿನಗರ ಹಿರಿಯ ನಾಗರಿಕರ ಸಂಘದ ಚುನಾವಣೆಯು ಆಗಸ್ಟ್ 5ರಂದು ಮಂಗಳವಾರ ಬೆಳಗಿನ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿದೆ. ಅಂದು ಸಂಜೆ 5 ಗಂಟೆಯವರೆಗೆ ಫಲಿತಾಂಶ ಪ್ರಕಟಿಸಲಾಗುವುದು.


ಸಂಘದ ಅಧ್ಯಕ್ಷ, ಉಪಾಧ್ಯಕ್ಷ, ಜನರಲ್ ಸೆಕ್ರೆಟರಿ, ಜಾಯಿಂಟ್ ಸೆಕ್ರೆಟರಿ, ಟ್ರೆಜರರ್, ಮತ್ತು ನಾಲ್ಕು ಸದಸ್ಯರ ಆಯ್ಕೆಗಾಗಿ ಚುನಾವಣೆಯ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಜುಲೈ 30 ರಿಂದ ಆಗಸ್ಟ್ 2 ರವರೆಗೆ ಬೆಳಗಿನ 10 ರಿಂದ ಮಧ್ಯಾಹ್ನ 1 ರವರೆಗೆ ನಡೆಯಲಿದೆ. ನಾಮಪತ್ರ ಸಲ್ಲಿಸುವ ಅಭ್ಯರ್ಥಿಗಳು ನಾಮಪತ್ರ ದೊಂದಿಗೆ ಓಟರ್ ಮತ್ತು ಆಧಾರ ಕಾರ್ಡ್ ಪ್ರತಿ ಸಲ್ಲಿಸುವುದು ಕಡ್ಡಾಯವಾಗಿದೆ.


ಆಗಸ್ಟ್ 3 ರಂದು ಸಂಜೆ 4 ಗಂಟೆಯವರೆಗೆ ನಾಮಪತ್ರಗಳ ಪರಿಶೀಲನೆ ಕೈಗೊಂಡು, ಅಂದು ಸಂಜೆ 5 ಗಂಟೆಗೇ ಅರ್ಹ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗುವುದು.ಸಂಘದ ಈಗಿನ ಕಾರ್ಯಕಾರಿ ಸಮಿತಿಯ ಅವಧಿಯು ಜುಲೈ 27 ರಂದು ಕೊನೆಗೊಂಡ ಪ್ರಯುಕ್ತ ಈ ಚುನಾವಣೆ ಘೋಷಿಸಲಾಗಿದೆ ಎಂದು ಚುನಾವಣಾ ಸಮಿತಿ ಸದಸ್ಯರಾದ ಜಿ.ಕಾಮೇಶ್ವರರಾವ, ಪಿ.ವೆಂಕಟೇಶ್ವರಲುಗಾರು,ಪಿ.ವಿ.ಸೀತಾರಾಮರಾವಗಾರು ಮತ್ತು ಕೆ.ಹರನಾಥ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

News

ವಿಶ್ವ ಹಿಂದೂ ಪರಿಷತ್ತಿನ ಬಳ್ಳಾರಿ ಜಿಲ್ಲೆಯ ಹೊಸ ಜಿಲ್ಲಾಧ್ಯಕ್ಷರಾಗಿ ಕಲ್ಲೂರು ವೆಂಕಟೇಶುಲು ಶೆಟ್ಟಿ

29 Jul 2025

ಬಳ್ಳಾರಿ ಜುಲೈ 29. ವಿಶ್ವ ಹಿಂದೂ ಪರಿಷದ್ ಲಿಂಗರಾಜಪ್ಪ ಅಪ್ಪಜಿ. ಉತ್ತರ ಪ್ರಾಂತ ಅಧ್ಯಕ್ಷರು, ಶ್ರೀಮತಿ ವಿಜಯಲಕ್ಷ್ಮಿ ಹಿರೇಮರ್.ಪ್ರಾಂತ ಉಪಾಧ್ಯಕ್ಷರು, ವಿನಾಯಕ ತಲೆಗೇರಿಜಿ, ಉತ್ತರ ಪ್ರಾಂತ ಸಹಕಾರ್ಯದರ್ಶಿ, ಕೆ.ಅಶೋಕ್ ಜಿ, ಬಳ್ಳಾರಿ ವಿಭಾಗ ಕಾರ್ಯದರ್ಶಿಗಳು ಈ ನಾಲ್ವರ ಉಪಸ್ಥಿತಿಯಲ್ಲಿ, ಪ್ರಾಂತದ ಟೋಳಿಯ ಅನುಮತಿಯ ಮೇರೆಗೆ ಬಳ್ಳಾರಿ ಜಿಲ್ಲೆಯ ಹೊಸ ಜಿಲ್ಲಾ ಅಧ್ಯಕ್ಷರನ್ನು ಪೋಲಪ್ಯಾರಡೈಸ್ ಹೋಟೆಲ್ ನ ಡೈಮಂಡ್ ಹಾಲ್ ನಲ್ಲಿ ದಿನಾಂಕ 21.07.2025 ರಂದು ಸೋಮವಾರ ವಿಶ್ವ ಹಿಂದೂ ಪರಿಷತ್‌ ಉತ್ತರ ಪ್ರಾಂತ ಅಧ್ಯಕ್ಷರಾದ ಲಿಂಗರಾಜಪ್ಪಾಜಿರವರು ವಿಶ್ವ ಹಿಂದೂ ಪರಿಷತ್‌ನ ಬಳ್ಳಾರಿ ಜಿಲ್ಲಾ ಅಧ್ಯಕ್ಷರಾಗಿ ಕಲ್ಲೂರು ವೆಂಕಟೇಶುಲು ಶೆಟ್ಟಿ ಜಿ ರವರನ್ನು ಘೋಷಣೆ ಮಾಡಿರುತ್ತಾರೆ.

News

ಶ್ರೀ ರಾಮರಾಜು ಫೌಂಡೇಶನ್ ವತಿಯಿಂದ ಬೃಹತ್ ರಕ್ತದಾನ ಶಿಬಿರ- 500ಕ್ಕೂ ಹೆಚ್ಚು ಜನರಿಂದ ರಕ್ತದಾನ ಶಿಬಿರ ಯಶಸ್ವಿ-ರಾಮರಾಜು

21 Jul 2025

ಬಳ್ಳಾರಿ ಜುಲೈ 20. ಬಳ್ಳಾರಿ ನಗರದ ಸಂಗನಕಲ್ಲು ರಸ್ತೆಯಲ್ಲಿರುವ ಕೆ ಆರ್ ಎಸ್ ಕಲ್ಯಾಣ ಮಂಟಪದಲ್ಲಿ ಶ್ರೀ ರಾಮರಾಜು ಫೌಂಡೇಶನ್ ಮತ್ತು ಗೋಪಿ ಬ್ಲಡ್ ಬ್ಯಾಂಕ್ ವತಿಯಿಂದ ಹಮ್ಮಿಕೊಂಡಿದ್ದ ಬೃಹತ್ ರಕ್ತದಾನ ಶಿಬಿರದಲ್ಲಿ ಸುಮಾರು 500ಕ್ಕೂ ಹೆಚ್ಚು ಜನ ರಕ್ತದಾನ ಮಾಡಿದ್ದಾರೆ ಎಂದು ಶ್ರೀ ರಾಮರಾಜು ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ  ಶ್ರೀರಾಮರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


 ಈ ಶಿಬಿರದಲ್ಲಿ ಮಾತನಾಡಿದ ಶ್ರೀ ರಾಮರಾಜು, ನಮ್ಮ ಫೌಂಡೇಶನ್ ವತಿಯಿಂದ ಸತತ ಮೂರು ವರ್ಷಗಳಿಂದ ರಕ್ತದಾನ ಶಿಬಿರವನ್ನು ಏರ್ಪಡಿಸುತ್ತೇವೆ, ಕಳೆದ ವರ್ಷ ಸುಮಾರು 250ಕ್ಕೂ ಹೆಚ್ಚು ಜನ ರಕ್ತದಾನ ಮಾಡಿದ್ದರು, ಈ ಬಾರಿ 500 ಜನಕ್ಕೂ ಹೆಚ್ಚು ಜನರು ರಕ್ತ ನೀಡುವ ಮೂಲಕ ಈ ಕಾರ್ಯಕ್ರಮ ಯಶಸ್ವಿಯಾಗಿದೆ. ಈ ಶಿಬಿರದಲ್ಲಿ ರಕ್ತದಾನ ಮಾಡಿದವರೆಲ್ಲರಿಗೂ ಪ್ರಮಾಣ ಪತ್ರದ ಜೊತೆ ತಮ್ಮ ಮತ್ತು ತಮ್ಮ ಕುಟುಂಬದ ರಕ್ಷಣೆಗಾಗಿ ಒಂದು ಹೆಲ್ಮೆಟ್ ಅನ್ನು ನೀಡಿ ಸಮಾಜಕ್ಕೆ ನನ್ನ ಅಳಿಲು ಸೇವೆಯನ್ನು ಮಾಡುತ್ತಿದ್ದೇನೆ ಎಂದರು.


 ಈ ರಕ್ತದಾನ ಶಿಬಿರಕ್ಕೆ ಮಾಜಿ ಸಚಿವರಾದ ಬಿ ನಾಗೇಂದ್ರ ಭೇಟಿ ನೀಡಿ ರಕ್ತ ದಾನಿಗಳನ್ನು ವಿಚಾರಿಸಿ ರಕ್ತದಾನದ ಮಹತ್ವದ ಬಗ್ಗೆ ತಿಳಿಸಿಕೊಟ್ಟು ನಾವು ಮತ್ತೊಂದು ಜೀವವನ್ನು ಉಳಿಸುವುದಕ್ಕಾಗಿ ಪ್ರತಿಯೊಬ್ಬರು ರಕ್ತದಾನ ಮಾಡಬೇಕೆಂದು ಪ್ರೇರೇಪಿಸಿದರು. ಇದರಲ್ಲಿ ಕಾಂಗ್ರೆಸ್ ಮುಖಂಡರರಾದ ಬೋಯಪಾಟಿ ವಿಷ್ಣುವರ್ಧನ್ ಅವರು ಕೂಡಾ ರಕ್ತದಾನ ಮಾಡಿದರು.


 ಈ ರಕ್ತದಾನ ಶಿಬಿರದಲ್ಲಿ ಸಾರ್ವಜನಿಕರು, ವಿದ್ಯಾರ್ಥಿಗಳು, ಯುವಕರು, ವಕೀಲರು, ರಾಜಕಾರಣಿಗಳು ಸೇರಿದಂತೆ ಸುಮಾರು 500ಕ್ಕೂ ಹೆಚ್ಚು ಜನ ರಕ್ತದಾನ ಮಾಡಿದರು.  


 ಈ ರಕ್ತದಾನ ಶಿಬಿರದಲ್ಲಿ ಜಿಲ್ಲಾ ಆಸ್ಪತ್ರೆಯ ಲ್ಯಾಬ್ ಟೆಕ್ನಿಷಿಯನ್ ವೈದ್ಯರು ಮತ್ತು ನರ್ಸ್ ಗಳು ಭಾಗವಹಿಸಿ ಶಿಬಿರದ ಯಶಸ್ಸಿಗೆ ಸಹಕರಿಸಿದರು. ಸಾರ್ವಜನಿಕರಿಗೆ ಊಟದ ವ್ಯವಸ್ಥೆಯನ್ನು ಸಹ ಮಾಡಿ ಯಾವುದೇ ಸಮಸ್ಯೆ ಮತ್ತು ತೊಂದರೆ ಇಲ್ಲದಂತೆ ಶಿಬಿರವನ್ನು ನಡೆಸಲಾಯಿತು.