
9th July 2025
ಬಳ್ಳಾರಿ ಜುಲೈ 06. ಡಾ.ಬಾಬು ಜಗಜೀವನ್ ರಾಂ ರವರು 38ನೇ ಪುಣ್ಯ ಸ್ಮರಣೆ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ನಮನಗಳನ್ನು ಸಲ್ಲಿಸಿದರು.
ನಂತರ ವೆಂಕಟೇಶ್ ಹೆಗಡೆ ರವರು ಮಾತನಾಡಿ ಭಾರತದ ಇತಿಹಾಸದಲ್ಲೇ ಅತಿ ಹೆಚ್ಚು ಅವಧಿ ಅಂದರೆ 30 ವರ್ಷ ಸಚಿವರಾಗಿ ಸೇವೆ ಸಲ್ಲಿಸಿದ ಹೆಗ್ಗಳಿಕೆ ಬಾಬು ಜಗಜೀವನ್ ರಾಮ್ ಅವರು ಎಂದು ಹೇಳಿದರು.
ಉಪ ಪ್ರಧಾನಿ ಆಗಿ ಹಸಿರು ಕ್ರಾಂತಿ ಮಾಡಿದ ಮಹನೀಯ. ಆಹಾರ ಸಮಸ್ಯೆ ಎದುರಾದಾಗ ಎದೆಗುಂದದೆ ಸವಾಲಾಗಿ ಸ್ವೀಕರಿಸಿದ ಸಚಿವ. ಹಿಂದುಳಿದವರು ಎಂಬ ಕಾರಣಕ್ಕೆ ಅವರ ಪರ ಹೆಚ್ಚು ಪ್ರಚಾರ ಮಾಡಲಾಗಲಿಲ್ಲ. ನಮ್ಮ ಜನಾಂಗ ಎಂದು ಹೆಚ್ಚು ವಿದ್ಯಾಭ್ಯಾಸ ಮಾಡಿದವರಲ್ಲ ಎಂಬ ಕಾರಣಕ್ಕೆ ಅವರ ಬಗ್ಗೆ ಜಗತ್ತಿಗೆ ಹೇಳುವಲ್ಲಿ ನಾವು ವಿಫಲ ಅದೆವು.
ಅಂಬೇಡ್ಕರ್, ಜಗಜೀವನ್ ರಾಮ್ ಈ ದೇಶದ ದೊಡ್ಡ ಆಸ್ತಿ. ನಾವು ಯುವ ಜನಾಂಗಕ್ಕೆ ಇದನ್ನು ಹೇಳಬೇಕಿದೆ. ಸ್ವಾಭಿಮಾನ ಬೆಳೆಸಿಕೊಳ್ಳಲು ಇಂತಹ ನಾಯಕರ ಬಗ್ಗೆ ಹೆಚ್ಚು ಹೇಳಬೇಕು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದವರು ಟಿ.ಆನಂದ್,ರಾಜು, ಹುಲುಗಪ್ಪ, ಲೋಕೇಶ್, ಸೀನ, ರಮೇಶ್, ನಾಗ, ಮದನ್, ಮುಂತಾದವರು ಉಪಸ್ಥಿತರಿದ್ದರು.
ಲೋಕ ಕಲ್ಯಾಣಾರ್ಥಕ್ಕಾಗಿ 365 ದಿನಗಳ ಕಾಲ ವಿಷ್ಣು ಸಹಸ್ರನಾಮ ಪಾರಾಯಣ-ಕಲ್ಲೂರು ವೆಂಕಟೇಶುಲು ಶೆಟ್ಟಿ
ಕೇಂದ್ರ ಸರ್ಕಾರದಿಂದ ಉದ್ಯೋಗ ಆಧಾರಿತ ಪ್ರೋತ್ಸಾಹಧನ ಯೋಜನೆಗೆ ಜಾರಿಗೆ ಹೊಸ ಉದ್ಯೋಗಿಗಳು ಹಾಗೂ ಉದ್ಯೋಗದಾತರು ಯೋಜನೆಯ ಪ್ರಯೋಜನ ಪಡೆದುಕೊಳ್ಳಿ: ಕೆ.ವಿ.ಪ್ರವೀಣ್
ಜಿ ಪಲ್ಲವಿ ಅವರನ್ನು ಅಲೆಮಾರಿ ಅರೆ ಅಲೆಮಾರಿ ನಿಗಮದ ಅಧ್ಯಕ್ಷ ಸ್ಥಾನದಿಂದ ವಜಾ ಗೊಳಿಸಿ : ಎಸ್ ಎಮ್ ಮಹೇಶ್ ಆಗ್ರಹ
ಪೊಲೀಸ್ ರಮೇಶ್ 5300 ಕಿಲೋ ಮೀಟರ್ ಬೈಕ್ ರೈಡಿಂಗ್, ಹೆಲ್ಮೆಟ್ ಜಾಗ್ರತಿ ಅಭಿಯಾನ ಶ್ಲಾಘನೀಯ : ಎಸ್ಪಿ ಶೋಭರಾಣಿ
ಶಿಕ್ಷಕರ ಆನ್ ಲೈನ್ ಹಾಜರಾತಿ "ಪ್ರತ್ಯಕ್ಷ" ಕಾರ್ಯಕ್ರಮಕ್ಕೆ ಶಿಕ್ಷಣ ಸಚಿವ ಎಸ್ ಮಧು ಬಂಗಾರಪ್ಪ ಚಾಲನೆ