
15th July 2025
ಬಳ್ಳಾರಿ ಜುಲೈ15.ಬಳ್ಳಾರಿ ನಗರದ ಸಂಗನಕಲ್ಲು ರಸ್ತೆಯಲ್ಲಿರುವ ಸುಬ್ಬರಾವ್ ಕ್ಯಾಂಪ್ ನಲ್ಲಿ ನೆಲೆಸಿರುವ ಶ್ರೀ ರೇಣುಕಾ ಯಲ್ಲಮ್ಮ ದೇವಿಯ 4ನೇಯ ವರ್ಷದ ಜಾತ್ರ ಮಹೋತ್ಸವ ಇದೇ ತಿಂಗಳು ಜುಲೈ 22 ನೇಯ ಆಷಾಢ 4ನೇ ಮಂಗಳವಾರ ನಡೆಯಲಿದೆ.
ಭಕ್ತರು ಈ ಜಾತ್ರಾ ಮಹೋತ್ಸವಕ್ಕೆ ಪಾಲ್ಗೊಂಡು ಯಲ್ಲಮ್ಮ ದೇವಿಯ ಕೃಪಗೆ ಪಾತ್ರರಾಗಬೇಕೆಂದು ದೇವಸ್ಥಾನದ ದೇವಿಯ ಆರಾಧಕರು ಶ್ರೀ ಸದ್ಗುರು ಜುಮಾರಿ ತಾತನವರು ತಿಳಿಸಿದ್ದಾರೆ.
ಜುಲೈ 21ರಂದು ಬೆಳಗ್ಗೆ ವಿಶೇಷ ಪೂಜೆ ಆನಂತರ ಪಲ್ಲಕ್ಕಿ ಉತ್ಸವ ಹಾಗೂ ಸಾಯಂಕಾಲ 5:00ಗೆ ವಾದ್ಯ ವೈಭಗಳೊಂದಿಗೆ ನಡೆಯಲಿದೆ ಎಂದು ತಿಳಿಸಿದ್ದಾರೆ. ಜುಲೈ 22 ಆಷಾಢ ನಾಲ್ಕನೆಯ ಮಂಗಳವಾರ ಸಾಯಂಕಾಲ ಮಹಾ ರಥೋತ್ಸವ, ಕಳಸ, ಕುಂಭ ಮೆರವಣಿಗೆ ನಡೆಯಲಿದೆ .ನಂತರ ಲಂಕಾ ದಹನ, ಪಟಾಕಿ ಉತ್ಸವ ನಂತರ ವಿವಿಧ ಪೂಜೆಗಳು ವಿಜೃಂಭಣೆಯಿಂದ ನಡೆಯಲಿದೆ ಎಂದು ತಿಳಿಸಿದ್ದಾರೆ.
ಈ ಜಾತ್ರಾ ಮಹೋತ್ಸವಕ್ಕೆ ಎಲ್ಲಾ ಪ್ರತಿ ಪೂಜೆಗಳು ಶ್ರೀ ಸದ್ಗುರು ಜುಮಾರಿ ತಾತನವರ ನೇತೃತ್ವದಲ್ಲಿ ನಡೆಯಲಿದೆ. ಈ ಜಾತ್ರಾ ಮಹೋತ್ಸವಕ್ಕೆ ಈ ವರ್ಷ ವಿಶೇಷವಾಗಿ ರಕ್ತದಾನ ಶಿಬಿರ, ಉಚಿತ ಆರೋಗ್ಯ ತಪಾಸಣೆ ನಡೆಯಲಿದೆ ಎಂದು ತಿಳಿಸಿದ್ದಾರೆ. ಮುಖ್ಯವಾಗಿ ದೇವಿಯ ಜಾತ್ರಾ ಮಹೋತ್ಸವ ಸಂದರ್ಭವಾಗಿ ವಿವಿಧ ಪುರಸ್ಕೃತರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.
ವಿಶ್ವ ಹಿಂದೂ ಪರಿಷತ್ತಿನ ಬಳ್ಳಾರಿ ಜಿಲ್ಲೆಯ ಹೊಸ ಜಿಲ್ಲಾಧ್ಯಕ್ಷರಾಗಿ ಕಲ್ಲೂರು ವೆಂಕಟೇಶುಲು ಶೆಟ್ಟಿ
ಶ್ರೀ ರಾಮರಾಜು ಫೌಂಡೇಶನ್ ವತಿಯಿಂದ ಬೃಹತ್ ರಕ್ತದಾನ ಶಿಬಿರ- 500ಕ್ಕೂ ಹೆಚ್ಚು ಜನರಿಂದ ರಕ್ತದಾನ ಶಿಬಿರ ಯಶಸ್ವಿ-ರಾಮರಾಜು