
20th July 2025
ಬಳ್ಳಾರಿ ಜುಲೈ 19. ಕೃಷಿಯನ್ನು ಪ್ರಾರಂಭಿಸುವ ಮೊದಲು ರೈತರ ಆದ್ಯ ಕರ್ತವ್ಯ ಮಣ್ಣು ಸಂರಕ್ಷಣೆ ಬಹು ಮುಖ್ಯವಾಗಿದೆ, ಮಣ್ಣು ಫಲವತ್ತತೆಯಾಗಿದ್ದರೆ ರೈತರು ಭೂಮಿಯಲ್ಲಿ ಬಂಗಾರ ಬೆಳೆಯಬಹುದು.
ಆಧುನಿಕ ತಂತ್ರಜ್ಞಾನದೊಂದಿಗಿನ ಸಮಗ್ರ ಕೃಷಿ ಪದ್ದತಿ ಬೇಸಾಯ ಅಳವಡಿಕೆಯಿಂದ ಸುಸ್ಥಿರ ಹಾಗೂ ಲಾಭದಾಯಕ ಕೃಷಿಗೆ ದಾರಿಯಾಗಿದೆ, ರೈತರು ಈ ನಿಟ್ಟಿನಲ್ಲಿ ಗಮನ ಹರಿಸುವ ಅಗತ್ಯವಿದೆ ಎಂದು ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತರಾದ ಡಾ.ಬಿಜಿ ಕೆರೆ ವೀರಭದ್ರಪ್ಪನವರು ಕೃಷಿ ಅಧ್ಯಯನ ಪ್ರವಾಸಕ್ಕೆ ಚಾಲನೆ ನೀಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿಸಿ ಟ್ರಸ್ಟ್(ರಿ) ಬಳ್ಳಾರಿ-1 ತಾಲ್ಲೂಕಿನ ಗಾಂಧಿನಗರ ವಲಯದ ಅವಂಬಾವಿ ಮತ್ತು ಒಕ್ಕರಣಿ ಕ್ಯಾಂಪಿನ ಸ್ವ ಸಹಾಯ ಸಂಘದ ಆಸಕ್ತಿಯುಳ್ಳ 50 ಜನ ಸದಸ್ಯರು ಸೇರಿ ಸಮಗ್ರ ಮಿಶ್ರಿತ ವಿಶಿಷ್ಠವಾದ ಪದ್ದತಿಯಲ್ಲಿ ಕೃಷಿ ಹೊಟ್ಟೆಗೆ ಇತರೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ಕುರಿ ಸಾಕಾಣಿಕೆ, ರೇಷ್ಮೆ,ನುಗ್ಗೆ,ಅಜೋಲಾ,ಹೀಗೆ ಹಲವಾರು ತೋಟಗಾರಿಕೆ ಬೆಳೆಗಳನ್ನು ಬೆಳೆದು ಯಶಸ್ವಿಯಾಗಿ ಅಧಿಕ ಲಾಭವನ್ನು ಪಡೆಯುತ್ತಿರುವ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲ್ಲೂಕಿನ ಬಿಜಿ ಕೆರೆ ಗ್ರಾಮದ ಬರಗಾಲದ ವೈದ್ಯ,ರೈತರ ಮಿತ್ರ,ನೇಗಿಲ ಯೋಗಿ ಎಂದೆ ಪ್ರಖ್ಯಾತಿಯಾದ ಕೃಷಿ ರಂಗದಲ್ಲಿ ಹಲವಾರು ಪ್ರಶಸ್ತಿ ವಿಜೇತರಾದ ಬಿಜಿ ಕೆರೆ ಡಾ.ಎಸ್.ಸಿ.ವೀರಭದ್ರಪ್ಪ ನವರ ತೋಟಕ್ಕೆ ಭೇಟಿ ನೀಡಿ ಮಾಹಿತಿ ಪಡೆಯಲಾಯಿತು.
ರೈತರು ಮನಸ್ಸು ಮಾಡಿದ್ರೆ ವರ್ಷದ 365 ದಿನ ಆದಾಯ ಗಳಿಸಬಹುದಾದ
ಹೈನುಗಾರಿಕೆ,ತರಕಾರಿ ಕೃಷಿ, ಹೂವಿನ ಬೇಸಾಯ, ರೇಷ್ಮೆ ಕೃಷಿ, ಮುಂಗಾರು & ಹಿಂಗಾರು ಬೆಳೆ, ಹುಣಸೆ, ಮಾವು,ತೆಂಗು ಹೀಗೆ ಮಿಶ್ರಿತ ಬೇಸಾಯ ಮಾಡುವುದರಿಂದ ಒಂದು ಬೆಳೆ ನಷ್ಟ ಆದರೂ ಇನ್ನೊಂದರಲ್ಲಿ ಲಾಭ ಪಡೆಯಬಹುದು ಎಂದು ಅಧ್ಯಯನ ಪ್ರವಾಸಕ್ಕೆ ಬಂದ ರೈತರಿಗೆ
ಡಾ/ ಎಸ್.ಸಿ.ವೀರಭದ್ರಪ್ಪ ನವರು ಮಾಹಿತಿ ನೀಡಿದರು
ಈ ಸಂದರ್ಭದಲ್ಲಿ
ಬೋರಯ್ಯ ಮೊಳಕಾಲ್ಮೂರು ತಾಲ್ಲೂಕಿನ ಕೃಷಿ ಮೇಲ್ವಿಚಾರಕರು.
ಮಹೇಶ್ ಎಸ್.ಬಳ್ಳಾರಿ ತಾಲ್ಲೂಕಿನ ಕೃಷಿ ಮೇಲ್ವಿಚಾರಕರು.
ಶ್ರೀಮತಿ ಗೌಸೀಯಾ ಹವಂಬಾವಿ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿಗಳು.
ಶ್ರೀಮತಿ ನಾಗವೇಣಿ ಅಧ್ಯಕ್ಷರು ಒಕ್ಕರಣಿ ಕ್ಯಾಂಪಿನ ಒಕ್ಕೂಟ ಒಕ್ಕೂಟದ ಸದಸ್ಯರು ಶ್ರೀಮತಿ ಅನಿತಾ,ಬಸಮ್ಮ,ಶಿವಮ್ಮ ಹಾಗೂ ಸಂಘ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು
undefined
ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಅಭಿವೃದ್ಧಿಗೆ ₹50 ಕೋಟಿ ಅನುದಾನ ಬಿಡುಗಡೆ ಮಾಡಿದ ಸಿಎಂ ಸಿದ್ದರಾಮಯ್ಯ
ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ 83ನೇ ಹುಟ್ಟುಹಬ್ಬ ಆಚರಣೆ-ಬೋಯಪಾಟಿ ವಿಷ್ಣುವರ್ಧನ್
ಕಾಂಗ್ರೆಸ್ ಸರ್ಕಾರದ ಸಾಧನ ಸಮಾವೇಶ ಯಾವ ಪುರುಷಾರ್ಥಕ್ಕೆ?? 3400 ರೈತರು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ, ಪರಿಹಾರ ಕೊಡಿ ಮೊದಲು. ಕೃಷಿ ಸಚಿವ ರಾಜೀನಾಮೆ ಕೊಡಲಿ-ಶ್ರೀರಾಮುಲು