

9th August 2025

ದಳಾಲಿ ವರ್ತಕರ ನಡುವೆ, ಮತ್ತು ಖರೀದಿ ಮಾಡುವ ಅವರು ಮದ್ಯ ಭಿನ್ನ ಅಭಿಪ್ರಾಯ
ದಿಂದ ಖರೀದಿಯಲ್ಲಿ ಧರ ಹೆಚ್ಚು ಕಡಿಮೆ ಆಗಿತ್ತು, ರೈತರು ಗಲಾಟೆ ಮಾಡಿದ್ದರು,
ಬಳ್ಳಾರಿ ಮಾರುಕಟ್ಟೆಯಲ್ಲಿ ಖರೀದಿ ನಿಂತುಹೋಗಿತ್ತು, ಬಳ್ಳಾರಿ ಕೃಷಿ ಉತ್ಪನ್ನ ಮಾರುಕಟ್ಟೆಗೆ ಆಂಧ್ರ ಮತ್ತು ಇತರ ರಾಜ್ಯಗಳಿಂದ ದೊಡ್ಡಮಟ್ಟದಲ್ಲಿ ಶೇಂಗ ಬರುತ್ತಿದೆ.
ಈ ಹಿಂದೆ ರೈತರು ಹಸಿ ಇರುವ ಶೇಂಗವನ್ನು ತಂದು ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಮುಂದಾಗಿದ್ದರು,
ಆಸಂದರ್ಭದಲ್ಲಿ ಖರೀದಿದಾರರು ಹಸಿ ಶೇಂಗವನ್ನು ಖರೀದಿ ಮಾಡಲು ಆಗುವುದಿಲ್ಲ ಮತ್ತು ಅದನ್ನು ಒಣಗಿಸಿ ಮಾರುಕಟ್ಟೆಗೆ ಕಳಿಸಲು ತುಂಬಾ ಕಷ್ಟವಾಗುತ್ತದೆ ಇದರಿಂದ ಗುಣಮಟ್ಟದ ಶೇಂಗಾ ಕೂಡ ನಷ್ಟಕ್ಕೆ ಗುರಿಯಾಗುತ್ತದೆ ಎಂದು ಅದನ್ನು ಖರೀದಿ ಮಾಡಲು ಆಗುವುದಿಲ್ಲವೆಂದು ನಿಲ್ಲಿಸಲಾಗಿತ್ತು.
ಇದರಿಂದ ಕಂಗಾಲಾದ ರೈತರು ಬಳ್ಳಾರಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಅನ್ಯಾಯ ಆಗಿದೆ ಮೋಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿ ವಿಡಿಯೋಗಳ ಮೂಲಕ ಪ್ರಚಾರ ಆಗಿತ್ತು.
ಅದರಿಂದ ಮಾರುಕಟ್ಟೆ ಗೊಂದಲಕ್ಕೀಡಾಗಿತ್ತು.
ತದನಂತರ ನೂತನವಾಗಿ ಬಂದಿರುವಂತಹ ಮಾರ್ಕೆಟ್ ಸೆಕ್ರೆಟರಿ ವಿ. ಆರ್. ಜಯ ಕುಮಾರ್ ಅವರು ರೈತರಿಂದ ಯಾವುದೇ ಕಮಿಷನ್ ತೆಗೆದುಕೊಳ್ಳಬಾರದೆಂದು ದಳಾಲಿ ಅಂಗಡಿಯ ಮಾಲೀಕರ ಮೇಲೆ ನಿರ್ಬಂಧವನ್ನು ಏರಿದ್ದರು, ದಳಾಲಿ ಅಂಗಡಿ ಮಾಲೀಕರು ಏನಿದ್ದರೂ ಶೇಂಗ ಖರೀದಿ ಮಾಡಲು ಬರುವ ಟೆಂಡರ್ ದಾರರ ಬಳಿ ತಮ್ಮ ಕಮಿಷನ್ ಪಡಿಬೇಕಂದು ಆದೇಶ ಮಾಡಿದ್ದರು.
ಇದರಿಂದ ಕಂಗಾಲದ ಅಂಗಡಿ ಮಾಲೀಕರು ಕಮಿಷನ್ ಇಲ್ಲವೆಂದರೆ ನಾವು ಏನು ಮಾಡುವುದೆಂದು ಹಳೆ ಪದ್ದತಿಯಲ್ಲಿ ಖರೀದಿ ಮಾಡಲು ಕಷ್ಟವಾಗುತ್ತದೆ ಎಂದು ವಾದ ಮಾಡುತ್ತಾ ಮಾರ್ಕೆಟನ್ನು ನಿಲ್ಲಿಸಲಾಗಿತ್ತು.
ಕೊನೆಗೆ ಶುಕ್ರವಾರ ಮಾರ್ಕೆಟ್ ಸಮಿತಿ ಅಧ್ಯಕ್ಷರಾಗಿರುವಂತಹ ಕಟ್ಟೆಮನೆ ನಾಗೆಂದ್ರ, ಉಪಾಧ್ಯಕ್ಷ ಕಪ್ಪಗಲ್ ರಾಮಣ್ಣ ಸೆಕ್ರೆಟರಿ ಜಯ ಕುಮಾರ್ ಅವರು ದಳಾಲಿ ಮತ್ತು ಟೆಂಡರ್ ದಾರರನ್ನು ಅಂಗಡಿಯ ಮಾಲೀಕರನ್ನು ಸೇರಿಸಿ ಸಮಾವೇಶ ನಡೆಸಿ ರೈತರಿಂದ ನಯಾ ಪೈಸ ಕಮಿಷನ್ ತೆಗೆದುಕೊಳ್ಳಬಾರದೆಂದು ತಾವು ಏನಿದ್ದರೂ ಶೇಂಗ ಖರೀದಿ ಮಾಡಲು ಬಂದಿರುವ ಅವರಿಂದಲೇ ಪಡೆಬೇಕೆಂದು ತೀರ್ಮಾನ ಮಾಡಿದರು.
ಈ ಸಂದರ್ಭದಲ್ಲಿ ಖರೀದಿ ದಾರರು ಯಾರು ಬರುತ್ತಿಲ್ಲವೆಂದು , ಹೀಗಾದರೆ ಮಾರುಕಟ್ಟೆ ಬೀಗ ಹಾಕಬೇಕಾಗುತ್ತದೆ ಎಂದು ಕೆಲವರು ಹೇಳುಲಾಗಿತ್ತು, ಇದಕ್ಕೆ ಆಕ್ರೋಶ ಗೊಂಡ,ಅಧ್ಯಕ್ಷ ನಾಗೇಂದ್ರ ಅವರು ಮಾರುಕಟ್ಟೆಗೆ ಬೀಗ ಹಾಕಬೇಕಾಗುತ್ತದೆ ಎಂದು ಹೇಳಲು ನೀವು ಯಾರು ಸರ್ಕಾರ ಇದೆ. ಖರೀದಿದಾರನ್ನು ಬೇರೆ ಕಡೆಯಿಂದ ಖರೀದಿ
ಸಿ ವ್ಯಾಪಾರ ವಹಿವಾಟು ಮಾಡಬೇಕಾಗುತ್ತದೆ, ಮಾಡುತ್ತೇವೆ ಎಂದು ಹೆದರಿಕೆ ಗಳನ್ನು ಮಾಡಬೇಡಿ ಎಂದು ತಿಳಿಸಿದರು.
ಶುಕ್ರವಾರ ಬಳ್ಳಾರಿ ಮಾರುಕಟ್ಟೆಯಲ್ಲಿ ಶೇಂಗಾ ಖರೀದಿಯಾಗಿದ್ದು ಸಂತೋಷದ ಸುದ್ದಿ ಆಗಿದೆ.
ಇನ್ನು ಮುಂದೆ ರೈತರಿಗೆ ಯಾವುದೇ ತೊಂದರೆ ಆಗದಂತೆ ಯಾವುದೇ ದಳಾಲಿ ಕಮಿಷನ್ ಇಲ್ಲದಂತೆ ಅನುಕೂಲ ಮಾಡಿಕೊಡಲಾಗುತ್ತದೆ ಎಂದು , ಸೆಕ್ರೆಟರಿ ಅವರು ಅಧ್ಯಕ್ಷರು ನಾಗೇಂದ್ರ ತಿಳಿಸಿದ್ದಾರೆ. ಒಂದು ವಾರ ದಿಂದ ಮಾರುಕಟ್ಟೆ ಬಂದ್ ಆಗಿತ್ತು, ಹಮಾಲಿರ ಗೆ ಕೂಡ ತೊಂದ್ರೆ ಆಗಿದೆ ಅವರು ಗೆ ಕೂಡ ಅನುಕೂಲ ಮಾಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಕರೂರು ಮಾಧವರೆಡ್ಡಿ ರೈತ ಸಂಘ. ಎಪಿಎಂಸಿ ಮುಖಂಡರು, ಬುಡಾ ಮಾಜಿ ಅಧ್ಯಕ್ಷರು ಪಾಲಣ್ಣ,ಎಪಿಎಂಸಿ ಉಪಾಧ್ಯಕ್ಷರು ಕಪ್ಪಗಲ್ ರಾಮಣ್ಣ, ಪೊಲ ಬಸವರಾಜ್,ಡಿಡಿ ಓಂಕಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಎಡನೀರು ಶ್ರೀಗಳಿಂದ ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನದ ಪ್ರಚಾರ ಕಾರ್ಯಕ್ಕೆ ವಿದ್ಯುತ್ವ ಚಾಲನೆ......!

ನೇಸರಗಿ- ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ (ರಿ) ಬೆಳಗಾವಿ 1 ಜಿಲ್ಲೆಯ ಬೈಲಹೊಂಗಲ ಯೋಜನಾ ಕಚೇರಿ ವ್ಯಾಪ್ತಿಯ

ಬರೀ ಪದವಿ ಸಾಲದು, ಪ್ರಾಯೋಗಿಕ ಕೌಶಲ್ಯ ಬೆಳೆಸಿಕೊಂಡು ಸ್ವಾವಲಂಬಿಗಳಾಗಿ: ಯುವ ಇಂಜಿನಿಯರ್ಗಳಿಗೆ ಪತ್ರಕರ್ತ ಅಜಿತ್ ಹನಮಕ್ಕನವರ ಕರೆ