

12th August 2025

ಬಳ್ಳಾರಿ ಆ 12. ದೇಶದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಜಿ ಅವರ ಕರೆಯ ಮೇರೆಗೆ ಮನೆ ಮನೆಗೆ ತ್ರಿವರ್ಣ ಅಭಿಯಾನದ ಭಾಗವಾಗಿ ಸಿರುಗುಪ್ಪ ಮಂಡಲದಲ್ಲಿ ಬೈಕ್ ರ್ಯಾಲಿ ಮೂಲಕ ತಿರಂಗಾ ಯಾತ್ರೆಯಲ್ಲಿ ಬಳ್ಳಾರಿ ಜಿಲ್ಲೆಯ ಬಿಜೆಪಿ ಯುವಮೋರ್ಚ ಅಧ್ಯಕ್ಷರಾದ ಸಿದ್ದಪ್ಪನವರು ಭಾಗವಹಿಸಿದ್ದರು.
ಮಂಡಲ ಅಧ್ಯಕ್ಷರ ಅಧ್ಯಕ್ಷರಾದ ಮಲ್ಲಿಕಾರ್ಜುನ ಸ್ವಾಮಿ ಅಧ್ಯಕ್ಷತೆಯಲ್ಲಿ ಹಾಗೂ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ ಎಂ ಎಸ್ ಸಿದ್ದಪ್ಪ ಮತ್ತು ಮಂಡಲ ಯುವ ಮೋರ್ಚಾ ಅಧ್ಯಕ್ಷರಾದ ಶೇಖರಗೌಡ ಅವರ ನೇತೃತ್ವದಲ್ಲಿ ತಿರಂಗಾ ರ್ಯಾಲಿಯನ್ನು ಯಶಸ್ಸು ಗೊಳಿಸಲಾಯಿತು.
ಮಂಡಲದ ಹಿರಿಯರಾದ ವೀರನಗೌಡ, ಖಾಜಾಸಾಬ್, ನಗರಸಭೆಯ ಸದಸ್ಯರಾದ ಮೇಕೆಲ್ ವೀರೇಶ್, ಮೋಹನ್ ರೆಡ್ಡಿ, ನಟರಾಜ್, ಹೆಚ್ಚು ಶೇಕಪ್ಪ ,ಶಂಕ್ರಪ್ಪ ,ನವೀನ್ ರೆಡ್ಡಿ, ಬಸವರಾಜ ,ಬೆಳಗಲ್ ಶಿವಪ್ಪ, ಹೊನ್ನಪ್ಪ, ಮಾರೇಶ, ಮಂಜು, ಸೋಮಯ್ಯ, ರಾಘವೇಂದ್ರ, ಮಂಜುನಾಥ, ಸಿದ್ದನಗೌಡ, ಬಸವನ ಗೌಡ, ಮಾರಪ್ಪ ,ಜುಬಲ್ ಸಾಬ್, ಈರಣ್ಣ ,ನಲ್ಲಾರೆಡ್ಡಿ, ವೆಂಕನಗೌಡ ,ಎಲ್ನಗೌಡ ,ಪ್ರಶಾಂತ, ದೇವೇಂದ್ರ, ಗೋಪಾಲ್ ರೆಡ್ಡಿ, ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ರ್ಯಾಲಿಯಲ್ಲಿ ಭಾಗವಹಿಸಿದ್ದರು.

ನನ್ನ ಸೋಲಿಗೆ ಜಿಲ್ಲೆಯ ಕಾಂಗ್ರೆಸ್ ಶಾಸಕರು ಕಾರಣ.!! ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಮತ್ತೊಮ್ಮೆ ಬಹಿರಂಗ- ಕಾಂಗ್ರೆಸ್ ಸೋಲಿಸಲು ನನಗೆ ಎರಡು ಸೆಕೆಂಡ್ ಸಾಕು..!

ಕಾಂಗ್ರೆಸ್ ಕಚೇರಿ ಮೇಲೆ ದಾಂದಲೆ: ಬಿಜೆಪಿ ವಿರುದ್ಧ ದೂರು- ಎಂಎಲ್ಸಿ ಹೇಮಲತಾ ನಾಯಕ ಸೇರಿ ೧೬ ಜನರ ಮೇಲೆ ಎಫ್ಐಆರ್

ರಾಜಕೀಯ ಜೀವನದ 25 ನೇ ವರ್ಷದಲ್ಲಿ ಬಿಜೆಪಿಯ ಶಿಸ್ತಿನ ಸಿಪಾಯಿ ವೀರಭದ್ರಯ್ಯ ಬಾಬು ಪೂಜಾರ*