

1st September 2025

ಗಂಗಾವತಿ.
ಕಳೆದ ಆ.26 ರಂದು ಗಂಗಾವತಿ ನಗರದಲ್ಲಿ ನಡೆದ ಪಡಿತರ ಅಕ್ಕಿ ಅಕ್ರಮ ಸಾಗಾಟ ಪ್ರಕರಣದಲ್ಲಿ ಮರೆಮಾಚಿದ್ದ ರೈಸ್ ಮಿಲ್ ಮಾಲೀಕ ಉಮೇಶ ಸಿಂಗನಾಳ ಮತ್ತು ಎಪ್ ಸಿ ಐ ಗೊದಾಮು ಸಹಾಕ ಮಹ್ಮದ್ ಜುಬೇರ್ ಭರಣಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ನಗರ ಠಾಣೆಯಲ್ಲಿ ಕೊನೆಗೂ ಲಿಖಿತ ದೂರು ನೀಡಲಾಗಿದೆ.
ಅಕ್ಕಿ ಅಕ್ರಮ ದಂಧೆಯಲ್ಲಿ ರೈಸ್ ಮಿಲ್ ಹೆಸರು ಮಾತ್ರ ನಮೂದಿಸಿ ಮಾಲೀಕನ ಹೆಸರು ಕೈಬಿಟ್ಟು ದೂರು ದಾಖಲಿಸಿದ್ದ ಗೊಲ್ ಮಾಡಿರುವ ಕುರಿತು ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ ಎಚ್ಚೆತ್ತ ಜಿಲ್ಲಾಧಿಕಾರಿಗಳು ಮಾಲೀಕನ ಹೆಸರು ಸಮೇತ ದೂರು ನೀಡುವಂತೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಗಂಗಾವತಿ ಆಹಾರ ನಾಗರಿಕ ಸರಬರಾಜು ಇಲಾಕೆಯ ಶಿರಸ್ತೇದಾರ ಸುಹಾಸ್ ಏರಿಸೀಮೆ ಅವರು ಕಳೆದ ದಿನ.ಆ.31 ರಂದು ಹೆಸರು ಸಮೇತ ಮತ್ತೊಂದು ದೂರು ಸಲ್ಲಿಸಿದ್ದಾರೆ. ಕಳದ ಆ.26 ರಂದು ನೀಡಿದ್ದ ದೂರಿನನ್ವಯ ಶಿರಸ್ತೇದಾರ ಸುಹಾಸ್ ನಗರಠಾಣೆ ಲಿಖಿತ ದೂರು ಸಲ್ಲಿಸಿದ್ದು, ಸದರಿ ಪ್ರಕರಣದಲ್ಲಿ ಪ್ರಥಮ ಹಂತವಾಗಿ ರೈಸ್ ಮಿಲ್ ಹೆಸರು ಮಾತ್ರ ನಮೂದು ಮಾಡಲಾಗಿತ್ತು. ಪ್ರಕರಣವನ್ನು ವಿಚಾರಣೆ ಮಾಡಿದ ಸಂದರ್ಭದಲ್ಲಿ ಅಕ್ರಮದಲ್ಲಿ ಗೌರಿಶಂಕರ ಶ್ರೀ ಉಮಾಶಂಕರ ಆಗ್ರೋ ಪುಡ್ ಇದ್ದು ಇದರ ಮಾಲೀಕ ಉಮೇಶ ಸಿಂಗನಾಳ ಇದ್ದು, ಅವರ ವಿರುದ್ದ ಮತ್ತು ಗೊದಾಮು ಸಹಾಯಕ ಮಹ್ಮದ್ ಜುಬೇರ್ ಭರಣಿ ಅವರು ಈ ಕೃತ್ಯದಲ್ಲಿ ಭಾಗಿಯಾಗಿರುವುದು ಮೇಲ್ನೊಟಕ್ಕೆ ಕಂಡುಬಂದಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರು ಸಲ್ಲಿಸಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತದೆಯೋ ಕಾದು ನೋಡಬೇಕಿದೆ.

ನನ್ನ ಸೋಲಿಗೆ ಜಿಲ್ಲೆಯ ಕಾಂಗ್ರೆಸ್ ಶಾಸಕರು ಕಾರಣ.!! ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಮತ್ತೊಮ್ಮೆ ಬಹಿರಂಗ- ಕಾಂಗ್ರೆಸ್ ಸೋಲಿಸಲು ನನಗೆ ಎರಡು ಸೆಕೆಂಡ್ ಸಾಕು..!

ಕಾಂಗ್ರೆಸ್ ಕಚೇರಿ ಮೇಲೆ ದಾಂದಲೆ: ಬಿಜೆಪಿ ವಿರುದ್ಧ ದೂರು- ಎಂಎಲ್ಸಿ ಹೇಮಲತಾ ನಾಯಕ ಸೇರಿ ೧೬ ಜನರ ಮೇಲೆ ಎಫ್ಐಆರ್

ರಾಜಕೀಯ ಜೀವನದ 25 ನೇ ವರ್ಷದಲ್ಲಿ ಬಿಜೆಪಿಯ ಶಿಸ್ತಿನ ಸಿಪಾಯಿ ವೀರಭದ್ರಯ್ಯ ಬಾಬು ಪೂಜಾರ*