

3rd October 2025

ಕೊಪ್ಪಳ
2015 ರಲ್ಲಿ ರಾಜ್ಯಾದಾದ್ಯಂತ ಸದ್ದು ಮಾಡಿದ್ದ ಜಿಲ್ಲೆಯ ಕನಕಗಿರಿ ತಾಲೂಕಿನ ಹುಲಿಹೈದರ ಗ್ರಾಮದ ವ ವಿದ್ಯಾರ್ಥಿ ಯಲ್ಲಾಲಿಂಗ ಕೊಲೆ ಪ್ರಕರಣದ ತೀರ್ಪು ಹೊರ ಬಿದ್ದಿದ್ದು, ಸಚಿವ ಶಿವರಾಜ ತಂಗಡಗಿ ಬೆಂಬಲಿತ ಮಾಜಿ ಜಿಪಂ ಸದಸ್ಯ ಹನುಮೇಶ ನಾಯಕ ಸೇರು 9 ಆರೋಪಿಗಳು ನಿರ್ದೂಷಿ ಎಂದು ನ್ಯಾಯಾಲಯ ಆದೇಶ ಹೊರಡಿಸಿದೆ.
ಸದ್ಯ 10 ವರ್ಷ 8 ತಿಂಗಳ ಸುದಿರ್ಘ ವಿಚಾರಣೆಯ ಬಳಿಕ, ಹನುಮೇಶ ನಾಯಕ ಸೇರಿ 9 ಜನರು ನಿರ್ದೂಷಿ ಎಂದು ಕೊಪ್ಪಳ ಜಿಲ್ಲಾ ಸತ್ರ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಆದೇಶ ಹೊರಡಿಸಿ, ಪ್ರಕರಣ ಖುಲಾಸೆ ಗೊಳಿಸಿದ್ದಾರೆ. ಆದೇಶದ ಬಳಿಕ ಪ್ರಕರಣದ ವಕಾಲತ್ತು ವಹಿಸಿಕೊಂಡಿದ್ದ ವಕೀಲ ಗಂಗಾಧರ ಮಾದ್ಯಮಗಳಿಗೆ ಮಾಹಿತಿ ನೀಡಿದ್ದು, ರಾಜಕಿದ ದುರುದ್ದೇಶದಿಂದ ಸುಳ್ಳು ಪ್ರಕರಣ ದಾಖಲಿಸಲಾಗಿತ್ತು, ಈ ಹಿನ್ನೆಲೆ ಸಾಕ್ಷಾಧಾರಗಳ ಕೊರತೆಯ ಹಿನ್ನೆಲೆ ಕೇಸ್ ಖುಲಾಸೆಯಾಗಿದೆ ಎಂದು ತಿಳಿಸಿದ್ದಾರೆ...
2015 ಜನೆವರಿ 11 ರಂದು ಕೊಪ್ಪಳ ರೈಲ್ವೆ ನಿಲ್ದಾಣದಲ್ಲಿ ಕನಕಾಪುರ ಗ್ರಾಮದ ವಿದ್ಯಾರ್ಥಿ ಯಲ್ಲಾಲಿಂಗನ ಶವ ಪತ್ತೆಯಾಗಿತ್ತು, ಈ ಕೊಲೆಯ ಆರೋಪವನ್ನ ಕಾಂಗ್ರೆಸ್ ಮುಖಂಡ, ಸಚಿವ ಶಿವರಾಜ ತಂಗಡಗಿ ಬೆಂಬಲಿಗ ಹನುಮೇಶ ನಾಯಕ ಕುಟುಂಬ ಹಾಗೂ ಅವರ ಬೆಂಬಲಿಗರ ಮೇಲೆ ಹಾಕಲಾಗಿತ್ತು, ವಿದ್ಯಾರ್ಥಿ ಯಲ್ಲಾಲಿಂಗ ಕೊಲೆಯಾಗೊ ಮುಂಚೆ ಗ್ರಾಮದ ಅವ್ಯವಸ್ಥೆಯ ಬಗ್ಗೆ ಸರ್ಕಾರದ ವಿರುದ್ದ ಮಾತನಾಡಿದ್ದ, ಅಸಮಾಧಾನ ಹೊರಹಾಕಿದ್ದ, ಇದಾದ ಬಳಿಕ ಕೆಲವು ದಿನಗಳ ನಂತರ ರೈಲ್ವೆ ಹಳಿಯಲ್ಲಿ ಶವವಾಗಿ ಪತ್ತೆಯಾಗಿರೋದು ಹಲವು ಅನುಮಾನಗಳಿಗೆ ಕಾರಣವಾಗಿತ್ತು, ಸಚಿವ ಶಿವರಾಜ ತಂಗಡಗಿ ಬೆಂಬಲಿಗ ಹನುಮೇಶ ನಾಯಕ ಕುಟುಂಭದವರು ಹಾಗೂ ಬೆಂಬಲಿಗರೂ ಕೊಲೆ ಮಾಡಿದ ಆರೋಪ ಎದುರಿಸಿದ್ದರು, ಅಷ್ಟೆ ಅಲ್ಲದೆ ಈ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡು ಬಳಿಕ, ಸಿಐಡಿ ತನಿಖೆಗೆ ಒತ್ತಾಯಿಸಿ ಕೊಪ್ಪಳದಿಂದ ಕನಕಗಿರಿ ಯಿಂದ ಕನಕಾಪುರ ಗ್ರಾಮದ ವರೆಗೆ ಬಿಜೆಪಿ ನಾಯಕರಾದ, ಮಾಜಿ ಸಿ ಎಂ ಯಡಿಯೂರಪ್ಪ, ಮಾಜಿ ಡಿ ಎಂ ಕೆ ಎಸ್ ಈಶ್ವರಪ್ಪ, ಜಗದೀಶ್ ಶೆಟ್ಟರ್, ಶ್ರೀರಾಮುಲು ಸೇರಿ ರಾಜ್ಯ ಬಿಜೆಪಿ ನಾಯಕರು ಪಾದಯಾತ್ರೆ ನಡೆಸಿ, ಸಿಐಡಿ ತನಿಖೆಗೆ ಒಳಪಡಿಸುವಂತೆ ಆಗ್ರಹಿಸಿದ್ರು, ಇದಾದ ಬಳಿಕ ಸಚಿವ ಸಂಪುಟ ವಿಸ್ತರಣೆಯ ವೇಳೆ ಸಚಿವ ಶಿವರಾಜ ತಂಗಡಗಿ ಸಚಿವ ಸ್ಥಾನ ಕಳೆದುಕೊಳ್ಳುವಲ್ಲಿ ಯಲ್ಲಾಲಿಂಗ ಕೊಲೆ ಪ್ರಕರಣ ಸದ್ದು ಮಾಡಿತ್ತು,
ಕೆಸ್ ಖುಲಾಸೆಯ ಬಳಿಕ ಮಾದ್ಯಮಗಳ ಜೊತೆ ಮಾತನಾಡಿದ ಹನುಮೇಶ ನಾಯಕ ಮತ್ತು ಸಹೊದರ ರಮೇಶ ನಾಯಕ ಮಾತನಾಡಿ, ನಮ್ಮ ಕುಟುಂಭದ ಮೇಲೆ ಸುಳ್ಳು ಕೇಸ್ ದಾಖಲು ಮಾಡಿದ್ದರು. ಯಲ್ಲಾಲಿಂಗ ಕೊಲೆ ಕೇಸ್ ನಲ್ಲಿ ನಮ್ಮ ಯಾವುದೆ ಪಾತ್ರವಿಲ್ಲ, ಕೊನೆಗೂ ನ್ಯಾಯ ನಮ್ಮ ಪರವಾಗಿದೆ ಎಂದರು.

ಪತ್ರಕರ್ತರಿಗೆ ಅಗೌರವ ತೋರಿದ ಮಾಜಿ ಶಾಸಕ ಡಿ.ಜಿ. ಪಾಟೀಲ ಹೇಳಿಕೆ ಖಂಡಿಸಿ ಬಹಿರಂಗ ಕ್ಷಮೆಗೆ ಆಗ್ರಹ

ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಶಿವಶರಣಪ್ಪಗೌಡ್ರ ಪಾಟೀಲ್ ನಿಧನ.