

19th October 2025
ಕೊಪ್ಪಳ.
ಇತ್ತಿಚಿಗೆ ಗಂಗಾವತಿ ನಗರದಲ್ಲಿ ನಡೆದಿರುವ ಬಿಜೆಪಿ ಯುವ ಮೋರ್ಚಾ ಮುಖಂಡ ಕೆ.ವೆಂಕಟೇಶ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿ ರವಿ ಪತ್ನಿ ಚೈತ್ರಾ ಸೇರಿ ಮೂರು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಮುಖ ಆರೋಪಿ ರವಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದು, ಇದುವರೆಗೂ ರವಿ ಪತ್ತೆಯಾಗಿಲ್ಲ.
ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಿಂದ ಮಾಹಿತಿ ಲಭ್ಯವಾಗಿದೆ. ಕಳೆದ ಅ.೮ ರಂದು ಕೆ.ವೆಂಕಟೇಶನನ್ನು ಗಂಗಾವತಿ ನಗರದ ರಾಯಚೂರು ರಸ್ತೆಯಲ್ಲಿ ಐದಾರು ಜನ ಆರೋಪಿಗಳು ಮಚ್ಚಿನಿಂದ ಕೊಲೆ ಮಾಡಿದ್ದರು. ಮರುದಿನವೇ ನಾಲ್ವರು ಆರೋಪಿಗಳು ಪೊಲೀಸರಿಗೆ ಶರಣಾಗಿದ್ದರು. ಆದರೆ ಈ ಪ್ರಕರಣದಲ್ಲಿ ರವಿ ಎಂಬ ವ್ಯಕ್ತಿ ಮತ್ತು ಆತನ ಕೆಲವು ಸಹಚರರು ಭಾಗಿಯಾಗಿದ್ದು, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೊಲೆಯಾದ ವೆಂಕಟೇಶ ತಂದೆ ದೂರು ನೀಡಿದ್ದರು. ಹೀಗಾಗಿ ರವಿ ಬಂಧನಕ್ಕೆ ಗಂಗಾವತಿ ಪೊಲೀಸರು ಸ್ಕೆಚ್ ಹಾಕಿದ್ದರೂ ಇದುವರೆಗೂ ರವಿ ಸಿಗದೇ ತಲೆ ಮರೆಸಿಕೊಂಡಿದ್ದಾನೆ. ಈ ನಡುವೆ ಬಳ್ಳಾರಿಯ ರಾಘವೇಂದ್ರ ಕಾಲೋನಿಯ ಮಹ್ಮದ್ ಅಲ್ತಫ್ ತಂದೆ ಮೆಹಬೂಬ್ ಪಾಷಾ, ದಾದಾಫೀರ್ ತಂದೆ ಅಬ್ದುಲ್ ರವೂಫ್ ಮತ್ತು ಗಂಗಾವತಿ ನಗರದ ಲಿಂಗರಾಜ ಕ್ಯಾಂಪಿನ ಪ್ರಸ್ತುತ ಬಳ್ಳಾರಿ ರಾಘವೇಂದ್ರ ಕಾಲೋನಿಯಲ್ಲಿ ವಾಸವಾಗಿದ್ದ ಚೈತ್ರ ರವಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|| ರಾಮ ಅರಸಿದ್ದಿ ಅವರು ಮಾಹಿತಿ ನೀಡಿದ್ದು, ಕೆ.ವೆಂಕಟೇಶ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಆರೋಪಿಗಳನ್ನು ಬಂಧಿಸಲಾಗುತ್ತಿದೆ. ನಾಲ್ವರು ಕೊಲೆಯಾದ ದಿನವೇ ಬಂಧಿಸಿ ನ್ಯಾಯಾಂಗಕ್ಕೆ ಒಪ್ಪಿಸಿದ್ದು, ಇಂದು ಮೂರು ಜನರನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿ ರವಿಯನ್ನು ಪತ್ತೆ ಹಚ್ಚಿ ಬಂಧಿಸಲಾಗುವುದು ಎಂದರು.

ಪತ್ರಕರ್ತರಿಗೆ ಅಗೌರವ ತೋರಿದ ಮಾಜಿ ಶಾಸಕ ಡಿ.ಜಿ. ಪಾಟೀಲ ಹೇಳಿಕೆ ಖಂಡಿಸಿ ಬಹಿರಂಗ ಕ್ಷಮೆಗೆ ಆಗ್ರಹ

ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಶಿವಶರಣಪ್ಪಗೌಡ್ರ ಪಾಟೀಲ್ ನಿಧನ.

ದಲಿತ ಮುಖಂಡ ಹಾಗೂ ಕೆಪಿಸಿಸಿ ಸದಸ್ಯ ಗಾಳೆಪ್ಪ ಹಿರೇಮನಿಗೆ- ಠಾಣೆಯಲ್ಲೆ ಹಲ್ಲೆ: ದಲಿತ ಮುಖಂಡರ ಪ್ರತಿಭಟನೆ- ರಾತ್ರೋ ರಾತ್ರಿ ಕುಕನೂರ ಪಿಎಸ್ಐ ಗುರುರಾಜ ಅಮಾನತ್