

8th May 2026

ಗಂಗಾವತಿ.
ತಾಲೂಕಿನ ಐತಿಹಾಸಿಕ ಅಂಜನಾದ್ರಿ ಪರ್ವತದ ಶ್ರೀ ಆಂಜನೇಯ ಮೂರ್ತಿಗೆ ರೂ.2.5 ಕೋಟಿ ಮೌಲ್ಯದ ಚಿನ್ನದ ಆಭರಣಗಳನ್ನು ಶಾಸಕ ಜನಾರ್ಧನರೆಡ್ಡಿ ಆಪ್ತರಾದ ಬೆಂಗಳೂರಿನ ಎಎಂಆರ್ ಗ್ರುಪ್ ನ ಡಾ.ಎ.ಮಹೇಶರೆಡ್ಡಿ ಸಮರ್ಪಣೆ ಮಾಡಿದ್ದಾರೆ.
ಶುಕ್ರವಾರ ಶಾಸಕ ಗಾಲಿ ಜನಾರ್ಧನರೆಡ್ಡಿ ದಂಪತಿಗಳೊಂದಿಗೆ ಆಗಮಿಸಿದ ಉದ್ಯಮಿ ಮಹೇಶರೆಡ್ಡಿ ತಮ್ಮ ಕುಟುಂಬಸ್ಥರೊಂದಿಗೆ ವಿಶೇಷ ಪೂಜೆ ನೇರವೆರಿಸಿ ಆಭರಣಗಳನ್ನು ಭಕ್ತಿ, ಭಾವಗಳಿಂದ ಸಮರ್ಪಣೆ ಮಾಡಿದರು.
ರೂ.2.5 ಕೋಟಿ ಮೌಲ್ಯದ ಅತ್ಯಂತ ಕಲಾತ್ಮಕವಾಗಿ ವಿನ್ಯಾಸಗೊಳಿಸಲಾದ ಬಂಗಾರದ ಪ್ರಭಾವಳಿ, ಛತ್ರಿ, ಕಿರೀಟ ಹಾಗೂ ಗದೆಗಳಗಳಿಗೆ ಅರ್ಚಕರು ವೇದಮಂತ್ರಗಳೊಂದಿಗೆ ವಿಶೇಷ ಪೂಜೆ ಸಲ್ಲಸಿ ಶ್ರೀ ಆಂಜನೇಯ ಮೂರ್ತಿಗೆ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಗಂಗಾವತಿ ತಹಸಿಲ್ದಾರ ವಸಂತಕುಮಾರಿ, ಕನಕಗಿರಿ ತಹಸಿಲ್ದಾರ ವಿಶ್ವನಾಥ ಮುರಡು, ಗ್ರೇಡ್ 2 ತಹಶೀಲ್ದಾರ ಮಹಾಂತಗೌಡ ಪಾಟೀಲ್, ಮಾಜಿ ಸಂಸದ ಶಿವರಾಮೇಗೌಡ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಚಂದ್ರು ಹಿರೂರು,ಜೆಪಿ ಮುಖಂಡಾದ ವಿರುಪಾಕ್ಷಪ್ಪ ಸಿಂಗನಾಳ್, ತಿಪ್ಪೇರುದ್ರಸ್ವಾಮಿ, ಮನೋಹರಗೌಡ ಹೇರೂರು, ಯಮನೂರು ಚೌಡ್ಕಿ, ವೀರೇಶ್ ಬಲಕುಂದಿ, ಮಲ್ಲಿಕಾರ್ಜುನಸ್ವಾಮಿ, ಬಾಬು ರೆಡ್ಡಿ, ಗಂಗಾಧರ ಸ್ವಾಮಿ, ಸಂಗಮೇಶ್ ಬಾದವಾಡಿಗಿ, ವೆಂಕಟೇಶ್ ಜಬ್ಬಲಗುಡ್ಡ, ರಮೇಶ್ ಹೊಸಮಲಿ, ಮಂಜುನಾಥ ಗೊಂದಿ, ಮಂಜುನಾಥ ಕಲಾಲ್, ಅರ್ಜುನ್ ರಾಯ್ಕರ್, ವೀರೇಶ್ ಅಂಜನಾದ್ರಿ ಮತ್ತಿತರರು ಇದ್ದರು.

ಗಂಗಾವತಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ- ನಾಗರಾಜ ನಂದಾಪುರ ನೇಮಕ: ಡಿಕೆಶಿ ಆದೇಶ- ದಲಿತ ಬಲಗೈ ಸಮುದಾಯಕ್ಕೆ ಕಾಂಗ್ರೆಸ್ ಮನ್ನಣೆ

ಪಂಚರಾಜ್ಯ ಚುನಾವಣೆ ಫಲಿತಾಂಶ ಮೋದಿಗೆ ಜನ ಬೆಂಬಲ- ಬಿಜೆಪಿ ರಾಜ್ಯ ಸದಸ್ಯ ಡಾ. ಬಸವರಾಜ.ಕೆ ಹೇಳಿಕೆ

ಪ್ರಧಾನಿಗೆ ವ್ಯಂಗ್ಯ: ತಂಗಡಗಿ ಅಸಭ್ಯ ವರ್ತನೆ ಬಹಿರಂಗ- ಬಿಜೆಪಿ ಜಿಲ್ಲಾಧ್ಯಕ್ಷ ನವೀನಕುಮಾರ ಗುಳಗಣ್ಣನವರ ಕಿಡಿ

ಕುರುಬ ಸಮುದಾಯದ ವಿರುದ್ದ ಹೇಳಿಕೆ ಖಂಡನೀಯ ಸಿ.ಸಿ.ಪಾಟೀಲ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು : ರುದ್ರಣ್ಣ ಗುಳಗುಳಿ