

20th June 2026

undefined
ಕೊಪ್ಪಳ.(ಸಮರ್ಥವಾಣಿ ನ್ಯೂಜ್)
ತಾಲೂಕಿನ ಐತಿಹಾಸಿಕ ಶ್ರೀ ಕ್ಷೇತ್ರ ಹುಲಿಗೇಮ್ಮ ದೇವಸ್ಥಾನದ ಹುಂಡಿ ತೆರೆದಿದ್ದು ಇಪ್ಪತ್ತು ದಿನಗಳಲ್ಲಿ 1,03,93,851.00 ರೂಪಾಯಿ ಹಣ ಸಂಗ್ರಹವಾಗಿದ್ದು, 70 ಗ್ರಾಂ ಕಚ್ಚಾ ಬಂಗಾರ 3ಕೆಜಿ ಬೆಳ್ಳಿ ಹುಂಡಿಯಲ್ಲಿ ದೇಣಿಗೆ ಬಂದಿದೆ.
ಶನಿವಾರ ದೇವಸ್ಥಾನದ 1 ರಿಂದ 25 ಹುಂಡಿಗಳನ್ನು ತೆರೆದು ಸೂಕ್ತ ಭದ್ರತೆಯಲ್ಲಿ ಎಣಿಕೆ ಮಾಡಿರುವ ಕುರಿತು ಶ್ರೀ ಹುಲಿಗೇಮ್ಮ ದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಹೆಚ್. ಪ್ರಕಾಶರಾವ್ ತಿಳಿಸಿದ್ದಾರೆ. ಕಳೆದ ಮೇ ತಿಂಗಳು 30 ರಂದು ತೆರೆಯಲಾಗಿತ್ತು. ಅಂದಿನಿಂದ ಇಪ್ಪತ್ತು ದಿನಗಳ ನಂತರ ಇಂದು ಜೂ.20 ರಂದು ಹುಂಡಿ ತೆರೆಯಲಾಗಿದೆ. ಈ ಸಂದರ್ಭದಲ್ಲಿ ಪ್ರಾಧಿಕಾರದ ಕೆಲವು ಸದಸ್ಯರು, ಭಕ್ತರು ಇದ್ದರು ಎಂದು ತಿಳಸಿದ್ದಾರೆ

ಬಿ.ಕೆ. ಹರಿಪ್ರಸಾದ್ ಪದಗ್ರಹಣಕ್ಕೆ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ: ಎ.ವಿ. ಉಮಾಪತಿ ಕರೆ