

20th June 2026

undefined
ಕೊಪ್ಪಳ.(ಸಮರ್ಥವಾಣಿ ನ್ಯೂಜ್)
ತಾಲೂಕಿನ ಐತಿಹಾಸಿಕ ಶ್ರೀ ಕ್ಷೇತ್ರ ಹುಲಿಗೇಮ್ಮ ದೇವಸ್ಥಾನದ ಹುಂಡಿ ತೆರೆದಿದ್ದು ಇಪ್ಪತ್ತು ದಿನಗಳಲ್ಲಿ 1,03,93,851.00 ರೂಪಾಯಿ ಹಣ ಸಂಗ್ರಹವಾಗಿದ್ದು, 70 ಗ್ರಾಂ ಕಚ್ಚಾ ಬಂಗಾರ 3ಕೆಜಿ ಬೆಳ್ಳಿ ಹುಂಡಿಯಲ್ಲಿ ದೇಣಿಗೆ ಬಂದಿದೆ.
ಶನಿವಾರ ದೇವಸ್ಥಾನದ 1 ರಿಂದ 25 ಹುಂಡಿಗಳನ್ನು ತೆರೆದು ಸೂಕ್ತ ಭದ್ರತೆಯಲ್ಲಿ ಎಣಿಕೆ ಮಾಡಿರುವ ಕುರಿತು ಶ್ರೀ ಹುಲಿಗೇಮ್ಮ ದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಹೆಚ್. ಪ್ರಕಾಶರಾವ್ ತಿಳಿಸಿದ್ದಾರೆ. ಕಳೆದ ಮೇ ತಿಂಗಳು 30 ರಂದು ತೆರೆಯಲಾಗಿತ್ತು. ಅಂದಿನಿಂದ ಇಪ್ಪತ್ತು ದಿನಗಳ ನಂತರ ಇಂದು ಜೂ.20 ರಂದು ಹುಂಡಿ ತೆರೆಯಲಾಗಿದೆ. ಈ ಸಂದರ್ಭದಲ್ಲಿ ಪ್ರಾಧಿಕಾರದ ಕೆಲವು ಸದಸ್ಯರು, ಭಕ್ತರು ಇದ್ದರು ಎಂದು ತಿಳಸಿದ್ದಾರೆ

ಕನ್ನಡದ ಪ್ರಥಮ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ನೆಲೆಸಿದ ರಾಷ್ಟ್ರಕವಿ ನಿವಾಸ "ಗಿಳಿವಿಂಡು "ಸಮಗ್ರ ಅಭಿವೃದ್ದಿಗಾಗಿ ಕೇರಳ - ಕರ್ನಾಟಕ ಮುಖ್ಯ ಮಂತ್ರಿಯವರಲ್ಲಿಗೆ ನಿಯೋಗ ಬೇಟಿಗೆ ನಿರ್ಧಾರ.

ಕಂಪ್ಲಿ ಶಾಸಕ ಜೆ.ಎನ್. ಗಣೇಶ್ಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಬಳ್ಳಾರಿಯಲ್ಲಿ ಬೃಹತ್ ಪಾದಯಾತ್ರೆ