

24th December 2024

ಮಂಡ್ಯ: ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಅವಹೇಳನವಾಗಿ ಮಾತಾಡಿದ್ದನ್ನ ಸಿಬಿಐ ವಹಿಸುವ ಬಗ್ಗೆ ಸರ್ಕಾರ ತೀರ್ಮಾನ ಮಾಡಲಿದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅದು ವಿಧಾನಸಭೆಯಲ್ಲಿ ದಾಖಲಾಗಿಲ್ಲ ಎಂಬುದು ಬಳಸಿಕೊಂಡು ಸಿ.ಟಿ.ರವಿ ಮಾತನಾಡುತಿದ್ದಾರೆ . ವಿಧಾನ ಸಭೆಯಲ್ಲಿ ಇಂತಹ ವಿಷಯಗಳನ್ನ ಮಾತನಾಡಿದ್ದಾರೆ ಎಂದು ದಾಖಲು ಮಾಡಲಾಗುವುದಿಲ್ಲ. ಆದರೆ ಅಲ್ಲಿದ್ದ ಎಲ್ಲಾ ಸದಸ್ಯರಿಗೂ ಅವರು ಮಾತನಾಡಿರುವುದು ಗೊತ್ತಿದೆ ಎಂದರು.
ಸಿ.ಟಿ.ರವಿ ಈ ರೀತಿ ಮಾತನಾಡಬಾರದಿತ್ತು ಎಂದು ಅವರಪಕ್ಷದವರೇ ನನ್ನ ಜೊತೆ ಹೇಳಿಕೊಂಡಿದ್ದಾರೆ. ಸೀನಿಯರ್ ಲೀಡರಾಗಿ ಆ ರೀತಿ ಮಾತನಾಡುವುದು ಮಹಾ ಅಪರಾಧ ಎಂದು ಬಣ್ಣಿಸಿದರು.
ಇದು ಆಕಸ್ಮಿಕ, ಯಾಕಾಯ್ತೊ, ಏನಾಯ್ತೊ ಮಾತನಾಡಿದ್ದೇನೆ. ಇದಕ್ಕೆ ಕ್ಷಮೆ ಕೇಳುತ್ತೇನೆ ಎಂದು ಹೇಳಿದರೆ ಮರ್ಯಾದೇ ಹೋಗೋದು ಸ್ವಲ್ಪ ಕಡಿಮೆ ಆಗುತ್ತಿತ್ತು. ಆದರೂ ಇನ್ನು ಮಾತನಾಡುತಿದ್ದಾರೆ. ಯಾರೇ ಆಗಲಿ ಇಂತಹ ಪದಗಳನ್ನ ಉಪಯೋಗಿಸೋದು ಗೌರವ ಅಲ್ಲ ಎಂದು ಹೇಳಿದರು.
ಆ ರೀತಿ ನಿಂತು ಮಾತನಾಡಿಕೊಂಡು ಸವಾಲು ಹಾಕೋದಾದರೆ ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಬೇಕಲ್ಲವೇ. ಲಕ್ಷೀ ಹೆಬ್ಬಾಳ್ಕರ್ ಹೇಳಿದಂತೆ ಪ್ರಮಾಣ ಮಾಡಲಿ ಎಂದರು.
ಎನ್ಕೌಂಟರ್ ಗೂ ಪ್ರಕಾರಣಕ್ಕೂ ಏನು ಸಂಬಂಧ?
ಎನ್ಕೌಂಟರ್ ಗೂ ಸದರಿ ಪ್ರಕಾರಣಕ್ಕೂ ಏನು ಸಂಬಂಧ ಇದೆ. ಬಿಜೆಪಿ ಬಳಿ ಅನೇಕ ಏಜೆನ್ಸಿ ಇದೆಯಲ್ಲ ತನಿಖೆ ಮಾಡಿಸಲಿ ಎಂದು ಸಿ.ಟಿ.ರವಿ ಎನ್ಕೌಂಟರ್ ಗೆ ಪ್ಲಾನ್ ಮಾಡಲಾಗಿತ್ತು ಎಂಬ ಪ್ರಹ್ಲಾದ್ ಜೋಷಿ ಹೇಳಿಕೆಗೆ ತಿರುಗು ಬಾಣ ಬಿಟ್ಟರು.
ಅವರು ತಪ್ಪು ಮಾಡಿಕೊಂಡಿದ್ದಾರೆ, ಈ ರೀತಿ ಸ್ಟೇಟ್ಮೆಂಟ್ ಕೊಟ್ರೆ ಡೈವರ್ಟ್ ಆಗುತ್ತೆ ಎಂದು ಆ ತಪ್ಪು ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರೆ. ಸಾರ್ವಜನಿಕ ಹಿತವನ್ನ ಕಾಪಾಡುವುಸುದು ಸರ್ಕಾರ ಹಾಗೂ ಪೊಲೀಸ್ ಇಲಾಖೆ ಜವಾಬ್ದಾರಿ. ಕಾನೂನು ದುರುಪಯೋಗ ಪಡಿಸಿಕೊಳ್ಳುವ ಕೆಲಸ ಮಾಡಿಲ್ಲ ಎಂದು ಪ್ರಶ್ನೆಗೆ ಉತ್ತರ ನೀಡಿದರು.
ಬಿಜೆಪಿಯವರು ಈ ವಿಚಾರವನ್ನ ಬೆಳೆಸುವ ಕೆಲಸ ಮಾಡುತ್ತಿರೋದು. ಪ್ರತಿಭಟನೆ, ಹೇಳಿಕೆ ನೀಡುತ್ತಿರೋರು ಅವರೇ. ಸಿ.ಟಿ.ರವಿ ಆಗಲಿ, ಬಿಜೆಪಿ, ಜೆಡಿಎಸ್ ನವರು ಇದನ್ನು ಮುಂದುವರೆಯುವ ಕೆಲಸ ಮಾಡುತಿದ್ದಾರೆ ಎಂದರು.
ಸರ್ಕಾರ ಬಂದಾಗಿನಿಂದಲೂ ಇಲ್ಲದೇ ಇರೋ ವಿಚಾರವನ್ನ ಹೇಳಿಕೊಂಡು ಬರುವ ಕೆಲಸ ಮಾಡುತ್ತಿದ್ದಾರೆ. ಅದನ್ನೇ ಮುಂದುವರೆಸಿದ್ದಾರೆ. ಸುಮ್ಮನೆ ರಾಜಕೀಯ ಪ್ರೇರಿತರಾಗಿ ಎಷ್ಟೇ ಮಾತನಾಡಿದರೂ ಪ್ರಯೋಜನ ಇಲ್ಲ ಎಂದು ಕುಟುಕಿದರು.

ನನ್ನ ಸೋಲಿಗೆ ಜಿಲ್ಲೆಯ ಕಾಂಗ್ರೆಸ್ ಶಾಸಕರು ಕಾರಣ.!! ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಮತ್ತೊಮ್ಮೆ ಬಹಿರಂಗ- ಕಾಂಗ್ರೆಸ್ ಸೋಲಿಸಲು ನನಗೆ ಎರಡು ಸೆಕೆಂಡ್ ಸಾಕು..!

ಕಾಂಗ್ರೆಸ್ ಕಚೇರಿ ಮೇಲೆ ದಾಂದಲೆ: ಬಿಜೆಪಿ ವಿರುದ್ಧ ದೂರು- ಎಂಎಲ್ಸಿ ಹೇಮಲತಾ ನಾಯಕ ಸೇರಿ ೧೬ ಜನರ ಮೇಲೆ ಎಫ್ಐಆರ್

ರಾಜಕೀಯ ಜೀವನದ 25 ನೇ ವರ್ಷದಲ್ಲಿ ಬಿಜೆಪಿಯ ಶಿಸ್ತಿನ ಸಿಪಾಯಿ ವೀರಭದ್ರಯ್ಯ ಬಾಬು ಪೂಜಾರ*