
8th January 2025
ಮಂಡ್ಯ: ದೇಸಿ ಗೋ ತಳಿಗಳ ಬಗ್ಗೆ ಪ್ರಚಾರ ನೀಡುವ ಸಲುವಾಗಿ ರಾಜ್ಯದಲ್ಲಿ ನಂದಿ ರಥಯಾತ್ರೆ ನಡೆಯುತ್ತಿದ್ದು, ಮಾಚ್ ೦೩, ೦೪, ೦೫ರಂದು ಮಂಡ್ಯ ಜಿಲ್ಲೆಯಲ್ಲಿ ಯಾತ್ರೆ ಸಂಚರಿಸಲಿದೆ. ಇದರ ಅಂಗವಾಗಿ ಜನವರಿ ೧೨ರಂದು ಸಂಜೆ ೦೪ಕ್ಕೆ ನಾಗಮಂಗಲ ತಾಲೂಕಿನ ಬಿಂಡಿಗನವಿಲೆ ಗ್ರಾಮದಲ್ಲಿ ನಂದಿಗಳ ಭವ್ಯ ಮೆರವಣಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಶ್ರೀ ಲಕ್ಷ್ಮಿ ಗೋಮಾತಾ ಮಂದಿರದ ಸಂಸ್ಥಾಪಕ ಹಾಗೂ ನಾಗಮಂಗಲ ಗೋ ಸೇವಾ ಪ್ರಮುಖ್ ಶಶಿಕುಮಾರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲೆನಾಡು ಗಿಡ್ಡ ಸಂರಕ್ಷಣ ಮತ್ತು ಸಂವರ್ಧನ ಆಶ್ರಯದಲ್ಲಿ, ಗೋ ಸೇವಾ ಗತಿವಿಧಿಯ ಸಹಕಾರದಿಂದ ಶ್ರೀ ಲಕ್ಷ್ಮಿ ಗೋಮಾತಾ ಮಂದಿರ ಪಂಚಗವ್ಯ ಉತ್ಪನ್ನ ಕೇಂದ್ರದ ನೇತೃತ್ವದಲ್ಲಿ ನಂದಿಯಾತ್ರೆ ನಡೆಯುತ್ತಿದ್ದು, ಗೃಹ ಬಳಕೆಯ ಗವ್ಯೊತ್ಪನ್ನಗಳ ತಯಾರಿಕೆಯ ತರಬೇತಿ ನೀಡುವ ಉದ್ದೇಶ ಹೊಂದಿದ್ದು, ದೇಶಿ ಗೋ ತಳಿಗಳನ್ನು ಉಳಿಸುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದರು.
ಜನವರಿ ೧೨ರಂದು ಬಿಂಡಿಗನವಿಲೆ ಗ್ರಾಮದಲ್ಲಿ ನಂದಿಗಳ ಭವ್ಯ ಮೆರವಣಿಗೆ ಜತೆಗೆ ವಿಷ್ಣು ಸಹಸ್ರನಾಮ ಪಟಣ ಮತ್ತು ಅಗ್ನಿಹೋತ್ರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮಲೆನಾಡು ಗಿಡ್ಡ ಗವ್ಯೋತ್ಪನ್ನ ಸಹಕಾರ ಸಂಘವನ್ನು ಉದ್ಘಾಟಿಸಲಾಗುವುದು ಎಂದು ಹೇಳಿದರು.
ಗೋ ಸಂರಕ್ಷಣಾ ಸಮಿತಿಯ ರಾಜ್ಯ ಸಂಚಾಲಕ ಮಳವಳ್ಳಿ ಮಂಜುನಾಥ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸರ್ಕಾರ, ಪಶು ಇಲಾಖೆ, ಸಂಘ ಸಂಸ್ಥೆಗಳು ಪ್ರಾಂತೀಯ ತಳಿಗಳ ಬಗ್ಗೆ ಆಸಕ್ತಿ ತೋರದೇ ಕ್ಷೀರ ಕ್ರಾಂತಿಯ ಬದಲಿಗೆ ರೋಗ ಕ್ರಾಂತಿ ಪ್ರಾರಂಭವಾಗಿದೆ. ಸದರಿ ತಳಿಗಳನ್ನು ಉಳಿಸುವ ನಿಟ್ಟಿನಲ್ಲಿ ಸರ್ಕಾರ ದೇಶಿ ಹಾಗೂ ಪ್ರಾಂತೀಯ ತಳಿಗಳ ಬಗ್ಗೆ ಪಠ್ಯ ಪುಸ್ತಕಗಳಲ್ಲಿ ಸೇರಿಸುವಂತೆ ಒತ್ತಾಯಿಸಿದರು.
ಗೋಷ್ಠಿಯಲ್ಲಿ ಬಜರಂಗ ಸೇನೆಯ ಮಂಜುನಾಥ್ ಇದ್ದರು.
ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ಜೆಡಿಎಸ್ ಮುಖಂಡ ಬಿ ಪುಟ್ಟಸ್ವಾಮಿ ಅವರ 48ನೇ ಹುಟ್ಟುಹಬ್ಬದ ಪ್ರಯುಕ್ತ ಬಿ ಪುಟ್ಟಸ್ವಾಮಿ ಅಭಿಮಾನಿ ಬಳಗ ಸೇವಾ ಟ್ರಸ್ಟ್ ನ ವತಿಯಿಂದ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮತ್ತು ಗಿಡ ನೆಡುವ ಕಾರ್ಯಕ್ರಮವನ್ನು ಗುರುವಾರ ಹಮ್ಮಿಕೊಳ್ಳಲಾಗಿತ್ತು.