ಹಲಗೂರು: ಹಲಗೂರು ಹೋಬಳಿಯ ಗ್ರಾಮ ಪಂಚಾಯಿತಿಗಳಾದ ನಿಟ್ಟೂರು,ಲಿಂಗಪಟ್ಟಣ್ಣ,ಡಿ.ಕೆ.ಹಳ್ಳಿ,
ಹೆಚ್.ಬಸಾಪುರ,ಬ್ಯಾಡರಹಳ್ಳಿ, ತೊರೆಕಾಡನಹಳ್ಳಿ ,ಹಲಗೂರು ಹಾಗೂ ಕಸಬ ಹೋಬಳಿಯ ಹಲವು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ರಥಕ್ಕೆ ಭವ್ಯ ಸ್ವಾಗತ ಕೋರಲಾಯಿತು.
ಇಂದು ಬೆಳಿಗ್ಗೆ ಹಲಗೂರು ಗ್ರಾಮ ಪಂಚಾಯಿ ಬಳಿ ಗ್ರಾಮ ಪಂಚಾಯಿತಿ ಸದಸ್ಯರು, ಸಿಬ್ಬಂಧಿಗಳು , ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರು ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ಕನ್ನಡ ಅಭಿಮಾನಿಗಳು ನಾಡ ದೇವಿ ಭುವನೇಶ್ವರಿ ದೇವಿಗೆ ಹಲಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ.ಆರ್.ಶ್ರೀನಿವಾಸಚಾರಿ ಪುಷ್ಪಾರ್ಚನೆ ಮಾಡುವ ಮೂಲಕ ಭವ್ಯ ಸ್ವಾಗತ ಕೋರಲಾಯಿತು.ಹಲಗೂರಿನ ಪ್ರಮುಖ ಬೀದಿಗಳಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ರಥವು ಸಂಚರಿಸಿತು.ಹಲಗೂರಿನ ಮುಖ್ಯ ವೃತ್ತದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ರಥದ ಪ್ರಚಾರ ಕಲಾ ತಂಡದ ಕನ್ನಡ ನಾಡು ನುಡಿಗೆ ಸಂಬಂಧಿಸಿದ ನೃತ್ಯ ರೂಪಕವನ್ನ ಕಲಾವಿದರು ಪ್ರದರ್ಶಿದರು.
ಇದೇ ವೇಳೆ ಮಾತಾನಾಡಿದ ಅವರು ಕನ್ನಡ ಸಾಹಿತ್ಯ ಸಮ್ಮೇಳನ ಕಳೆದ ಮೂವತ್ತು ವರ್ಷಗಳ ನಂತರ ನಮ್ಮ ಜಿಲ್ಲೆಯಲ್ಲಿ ಮತ್ತೊಮ್ಮೆ ಮಾಡಿರುವುದು ಬಹಳ ಹೆಮ್ಮೆಯ ವಿಚಾರ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಗೊ.ರು.ಚನ್ನಬಸಪ್ಪ ಅಧ್ಯಕ್ಷತೆಯಲ್ಲಿ ಜರುಗಲಿದ್ದು ಕನ್ನಡ ಜಾತ್ರೆಯನ್ನ ಯಶಸ್ವಿಗೊಳಿಸಲು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು.
ನಿವೃತ್ತ ಶಿಕ್ಷಕರು ಮತ್ತು ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರು ಡಿ.ರಾಮು ಮಾತಾನಾಡಿದ ಅವರು ಇದೆ ಡಿ.20,21,22 ಮಂಡ್ಯ ಜಿಲ್ಲೆಯಲ್ಲಿ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಗೊಂಡಿರುವ ಪ್ರಯುಕ್ತವಾಗಿ ಹಲಗೂರು ಹೋಬಳಿಯ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯುಲ್ಲಿ 87 ನೇಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ರಥಕ್ಕೆ ಹೋಬಳಿಯ ಎಲ್ಲಾ ಕನ್ನಡ ಅಭಿಮಾನಿಗಳು ಅದ್ದೂರಿ ಸ್ವಾಗತವನ್ನ ಕೋರಲಾಯಿತು.ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡ ಹಬ್ಬದಲ್ಲಿ ಭಾಗವಹಿಸ ಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಜಿಲ್ಲಾ ಉಪ್ಯಾಧ್ಯಕ್ಷ ದೇವರಾಜು ಕೊದೇನ ಕೊಪ್ಪಲು,
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಆರ್.ಶ್ರೀನಿವಾಸಚಾರಿ,ಉಪಾಧ್ಯಕ್ಷೆ ಲತಾ ಮಹದೇವ್,ಕಾರ್ಯದರ್ಶಿ ಶಿವಕುಮಾರ್. ಎನ್,
ಗ್ರಾಮ ಪಂಚಾಯಿತಿ ಸದಸ್ಯರುಗಳಾದ ರವೀಶ್,ಗುಲ್ನಾಜ್ ಭಾನು,ಗ್ರಾಮ ಪಂಚಾಯಿತಿ
ಪಂಚಾಯತ್ ಎಸ್ ಡಿಎ ಮಂಜುನಾಥ್,ಬಿಲ್ ಕಲೆಕ್ಟರ್ ಆನಂದ,ಪಂಚಾಯತಿ ಸಿಬ್ಬಂಧಿಗಳಾದ ಶಿವನಂಜು,ಲಕ್ಷ್ಮಮ್ಮ,ಗಣೇಶ್,ಸಿಬಕತ್,ರಾಜನ್ ಹಾಗೂ ಪದ್ಮನಾಬ್,ಹೆಚ್.ವಿ ರಾಜಣ್ಣ,ಎನ್.ಕೆ.ಕುಮಾರ್,ಹೋಟೆಲ್ ಬಾಬು,
ಡಿ.ಎಲ್.ಮಾದೇಗೌಡ,ಗಂಗರಾಜು,ಮನೋಹರ್,ಎ.ವಿ.ಟಿ.ಕುಮಾರ್,ನವೀನ್,ಗಂಗಾಧರ್,ಕೃಷ್ಣ,
ಗಿರೀಶ್ ಕನ್ನಡ,ಶ್ರೀನಿವಾಸಚಾರಿ ಚಿಕ್ಕಮಾದು ಸೇರಿದಂತೆ ಇತರರು ಇದ್ದರು.







