
2nd June 2025
೩೩೦ ನೇ ಕವಿಗೋಷ್ಠಿ
ಮನೆಮನೆ ಕವಿಗೋಷ್ಠಿಯು ಕನ್ನಡ ಸಾಹಿತಿಗಳು ಉದ್ಯೋನ್ಮುಖ ಕವಿಗಳಿಗೆ ಸೃಜನಾತ್ಮಕ ಸಾಹಿತ್ಯ ರಚಿಸುವ ನಿಟ್ಟಿನಲ್ಲಿ ಒಂದು ಉತ್ತಮ ವೇದಿಕೆಯಾಗಿದೆ ಎಂದು ಮನೆಮನೆ ಕವಿಗೋಷ್ಠಿಯ ಸಂಚಾಲಕಿ ಲೇಖಕಿ ಸುಕನ್ಯಾ ಮುಕುಂದ ರವರು ತಿಳಿಸಿದರು. ಅವರು ಕಳೆದ ಭಾನುವಾರ ೩೩೦ ನೇ ಮನೆಮನೆ ಕವಿಗೋಷ್ಠಿ ಕರ್ಯಕ್ರಮದಲ್ಲಿ ಅಧ್ಯಕ್ಷೀಯ ನುಡಿಗಳನ್ನು ಹಾಡುತ್ತಾ ಹೇಳಿದರು. ಕುಮಾರಿ ಶ್ರೀಲಕ್ಷ್ಮಿಯವರ ಪ್ರರ್ಥನೆಯೊಂದಿಗೆ ಪ್ರಾರಂಭವಾದ ಕರ್ಯಕ್ರಮದಲ್ಲಿ ಗಿಡಕ್ಕೆ ನೀರೆರೆಯುವುದರ ಮೂಲಕ ಉದ್ಘಾಟನೆ ನೆರವೇರಿಸಲಾಯಿತು. ಕನ್ನಡ ಸಾರಸ್ಯತ ಲೋಕದ ದಿಗ್ಗಜರಾದ ಎಚ್ಎಸ್ ವೆಂಕಟೇಶಮರ್ತಿಯವರ ನಿಧನಕ್ಕೆ ಮೌನಚರಣೆಯನ್ನು ಆಚರಿಸಲಾಯಿತು. ನಂತರ ಡಾಕ್ಟರ್ ಶಾಂತ ಅತ್ನಿಯವರ ಕಷ್ಟಗಳಿಗೂ ಸಾವಿದೆ ಕಥಾ ಸಂಕಲನವನ್ನು ಲೇಖಕಿ ವಾಣಿ ಮಹೇಶ್ ರವರು ಒಂದು ಕಥೆಯನ್ನು ಬರೆಯಬೇಕಾದಾಗ ವಾಸ್ತವ ಸಂಗತಿ ೭೦ ಭಾಗ ಹಾಗೂ ಕವಿಕಲ್ಪನೆ ೩೦ ಭಾಗ ಸೇರಿದಾಗ ಮಾತ್ರ ಒಂದು ಸುಂದರ ಕಥೆಯು ಸಾಕಾರವಾಗುತ್ತದೆ ಎಂದು ಕೃತಿಯನ್ನು ವಿಶ್ಲೇಷಣೆ ಮಾಡಿದರು ತಮ್ಮ ಕೃತಿಯ ಕಥೆಗಳು ತಮ್ಮ ಊರಿನ ಮತ್ತು ವೃತ್ತಿಯ ಅನುಭವದ ಮೂಸೆಯಲ್ಲಿ ಮೂಡಿಬಂದ ಕಥೆಗಳಾಗಿವೆ ಎಂದು ಡಾಕ್ಟರ್ ಶಾಂತ ಅತ್ನಿ ಮಾತನಾಡಿದರು ಲೇಖಕಿ ಶ್ರೀಮತಿ ಎಂ. ಕುಸುಮರವರು ತಮ್ಮ ಸಂವಾದಿ ಕವನ ಸಂಕಲನವನ್ನು ಮನೆಮನೆ ಕವಿಗೋಷ್ಠಿ, ಕರ್ಯಕ್ರಮದಲ್ಲಿ ಬಿಡುಗಡೆ ಮಾಡಿದ್ದು ತೃಪ್ತಿ ತಂದಿದೆ ಎಂದು ಸಂತಸವನ್ನು ವ್ಯಕ್ತಪಡಿಸಿದರು ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ ಗಳಿಸಿದ ಹಾಸನ ಜಿಲ್ಲೆಯ ಹೆಸರಾಂತ ಸಾಹಿತಿ ಬಾನು ಮುಷ್ತಾಕ್ ಅವರಿಗೆ ಅಭಿನಂದಿಸಲಾಯಿತು. ಕುಮಾರವ್ಯಾಸ ಪ್ರಶಸ್ತಿಗೆ ಶ್ರೀಯುತ ಚೆನ್ನೇಗೌಡರು ಹಾಗೂ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಭಾಜನರಾದ ಉದಯ ವರದಿ ಪತ್ರಿಕೆ ಸಂಪಾದಕರಾದ ಶ್ರೀಯುತ ವೆಂಕಟೇಶ್ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು. ನಂತರ ನಡೆದ ಕವಿಗೋಷ್ಠಿಯಲ್ಲಿ ಆಗಮಿಸಿದ ಕವಿಗಳಿಂದ ಕವನ ವಾಚನ ನಡೆಯಿತು ಪ್ರಕೃತಿ, ಪ್ರೇಮ ,ದೇಶಭಕ್ತಿ ,ಅಪ್ಪ ಮುಂತಾದ ವಸ್ತು ವಿಷಯಗಳಲ್ಲಿ ಇರುವ ಕವನಗಳಿಗೆ ಗೋಷ್ಠಿಯಲ್ಲಿನ ಹಿರಿಯ ಕವಿಗಳು ವಿರ್ಶೆ ಮಾಡಿದರು. ಕವಿಗೋಷ್ಠಿಯಲ್ಲಿ ನೀಲಾವತಿ ಸಿ.ಎನ್, ಸುಧೀರ್ ಹೆಜ್ಮಾಡಿ, ಹೆಚ್.ಎನ್ ಭಾರತಿ, ಸುಂದರೇಶ ಡಿ ಉಡುವಾರೆ, ಎನ್.ಎಲ್ ಚನ್ನೇಗೌಡ, ಚಿದಾನಂದ. ಕೆ.ಎನ್, ತಬಸುಮ್ ಬಾನು, ಕಮಲಮ್ಮ, ಜಯರಮೇಶ, ಗಿರಿಜಾ ನರ್ವಾಣಿ, ಶಾಂತ ಅತ್ನಿ, ಎಂ.ಕುಸುಮ, ಪದ್ಮಾವತಿ ವೆಂಕಟೇಶ್, ಮಲ್ಲೇಶ್ ಜಿ, ಗೊರೂರು ಅನಂತರಾಜು, ಪರಮೇಶ ಮಡಬಲು ಕವನ ವಾಚಿಸಿದರು. ಹೊಸ ಕವಿಗಳ ಆಗಮನ ಮತ್ತು ಕವನ ವಾಚನ ಗಮನರ್ಹವಾಗಿತ್ತು. ಲೇಖಕಿ ಶ್ರೀಮತಿ ರೇಖಾ ಪ್ರಕಾಶ್ ರವರ ಪ್ರಾಯೋಜಕತ್ವದಲ್ಲಿ ವಿಜಯನಗರದ ಅವರ ನಿವಾಸದಲ್ಲಿ ಕರ್ಯಕ್ರಮ ಉತ್ತಮವಾಗಿ ಮೂಡಿ ಬಂದಿದ್ದು ಆಗಮಿಸಿದ ಎಲ್ಲಾ ಕವಿಗಳಿಗೂ ತಮ್ಮ ಕೃತಿಯನ್ನು ನೀಡಿದರು. ಕರ್ಯಕ್ರಮದಲ್ಲಿ, ರಾಜೇಶ್ವರಿ ವಿಶ್ವನಾಥ, ಗಾಯತ್ರಿ, ಮಹೇಶ್ ಹೆಚ್.ಆರ್, ಮುಕುಂದ ಎಂ, ಮಧುಸೂದನ್, ಜೆ.ಆರ್ ರವಿಕುಮಾರ್,ಮಲ್ಲಿಗಮ್ಮ ಸಿ.ಆರ್, ಸುನೀತ, ಶೃತಿ, ಮಂಜುಳ ಕುಮಾರಸ್ವಾಮಿ, ಲೋಕಪಾಲ, ಯಾಕೂಬ್ ಗೊರೂರು ಮತ್ತಿತರರು ಭಾಗವಹಿಸಿದ್ದರು. ಕರ್ಯಕ್ರಮದ ನಿರೂಪಣೆಯನ್ನು ಸಾಹಿತಿ ಸಮುದ್ರವಳ್ಳಿ ವಾಸು ಹಾಗೂ ಲೇಖಕಿ ಗಿರಿಜಾ ನರ್ವಾಣಿ ನರ್ವಹಿಸಿದ್ದು ರೇಖಾ ಪ್ರಕಾಶ್ ಸ್ವಾಗತಿಸಿ ,ಸುಧೀರ್ ಹೆಜ್ಮಾಡಿ ವಂದನರ್ಪಣೆ ಸಲ್ಲಿಸಿದರು.
2nd June 2025
ನನ್ನದು ಎಂಬ ಮನೆ ಬೇಕು
ಮನೆಯದುವೆ ಇರುವುದದು ನನ್ನದದು ಆಗಿರಲಿ
ಸನಿಹದಲಿ ಆಸೆಗಳ ಬುಟ್ಟಿಯಿರಲು
ದನಿಕನನು ಗಮನಿಸುತ ಒಳ್ಳೆಯದೆ ಬಯಸುತಲಿ
ಹನಿಯಾಗಿ ಬಯಕೆಗಳು ಲಕ್ಷ್ಮಿದೇವಿ.......
ಹೆಣ್ಣಾಗಿ ಹುಟ್ಟಿದ ಮೇಲೆ ಹೆಣ್ಣಿನ ಮನೆ ಯಾವುದಿದೆ. ಒಂದು ಹುಟ್ಟಿದ ಮನೆಯಾದರೆ, ಮದುವೆ ನಂತರದಲ್ಲೇ ಗಂಡನ ಮನೆ. ಹೆಣ್ಣಿನ ಮನೆ ಮನೆ ಎಂಬದು ಶಾಶ್ವತವಾಗಿ ಯಾವುದು ಇಲ್ಲ ಎಂಬುದಾಗಿ ಹೇಳುವ ಹಲವರಿದ್ದಾರೆ. ಅಂತಹದರಲ್ಲಿ ಹೆಣ್ಣಿನ ಸ್ವಂತ ದುಡಿಮೆಯಲ್ಲಿ ಯಾರ ಹಂಗಿಲ್ಲದೆ ಪುಟ್ಟ ಗೂಡನ್ನು ಮಾಡಿಕೊಂಡರು ಸಹ ಅದು ಆಕೆಗೆ ಅರಮನೆ. ಸಮಯದಲ್ಲಿ ಆಸೆಗಳ ಬುತ್ತಿಯನ್ನು ಇಟ್ಟುಕೊಂಡು ದನಿಕನನ್ನು ನೋಡುತ್ತ ಒಳ್ಳೆಯದನ್ನು ಬಯಸುತ್ತಾ ಸಾಗುತ್ತಿರುತ್ತಾಳೆ. ಬಯಕೆಗಳೆಲ್ಲ ಯಾವುದೋ ದೊಡ್ಡ ರೀತಿಯಲ್ಲಿ ಇರದೆ ಹನಿಯಾಗಿ ಮೂಡಿ ಬರುತ್ತಿರುತ್ತದೆ. ಇದು ಕೇವಲ ಆಕೆಯ ಆಸೆಯಾಗಿರುತ್ತದೆ, ಕನಸಾಗಿರುತ್ತದೆ, ಜೀವನದ ಪ್ರಮುಖ ಘಟ್ಟ ಹೊಂದಿರುವ ಅಪೇಕ್ಷಿಯಾಗಿರುತ್ತದೆ.
ಸರಳ ಮಧ್ಯಮ ರ್ಗದ ಕುಟುಂಬದಲ್ಲಿ ಜನಿಸಿದವಳು. ವಿದ್ಯೆ,ಬುದ್ಧಿ ಸಂಸ್ಕಾರಗಳಲ್ಲಿ ಮುಂದಿರುವ ಹೆಣ್ಣುಮಗಳು. ಕಷ್ಟ ಸುಖಗಳನ್ನು ಅರಿತವಳು. ಬದುಕಿನ ಬವಣೆಗಳನ್ನು ಅರಿಯುತ್ತಾ ಸಂಸಾರಿಕ ಜೀವನದಲ್ಲಿ ಕಾಲಿಟ್ಟು ಗೆದ್ದವಳು. ಎರಡು ಹೆಣ್ಣು ಮಕ್ಕಳ ತಾಯಾದ ನಂತರದಲ್ಲಿ ಗಂಡನನ್ನು ಕಳೆದುಕೊಂಡರು ಸಹ ಬಹಳ ಶಕ್ತಿಶಾಲಿಯಾಗಿ ಜೀವನದಲ್ಲಿ ನಿಂತವಳು. ಬದುಕಿನಲ್ಲಿ ಎಷ್ಟೇ ಕಷ್ಟಗಳು ಬಂದರು ಅದಕ್ಕೆ ಹೆದರಿಕೊಳ್ಳದಂತೆ ಜೀವನ ಮಾಡುವಂತ ಶಕ್ತಿಯನ್ನು ಪಡೆದವಳು. ಗಂಡಿಗಿಂತ ಹೆಚ್ಚಾಗಿ ಎರಡು ಹೆಣ್ಣು ಮಕ್ಕಳಿಗೂ ಸಹ ತಂದೆಯ ಸ್ಥಾನಕ್ಕೆ ಕಡಿಮೆ ಇಲ್ಲ ಎಂಬ ರೀತಿಯಲ್ಲಿ ದುಡಿದು ಬದುಕಿದವಳು. ಆದರೆ ಒಂದು ದಿನ ಗಂಡ ಮಾಡಿದ ಸಾಲಕ್ಕೆ ಆಕೆಯು ಬಲಿಯಾಗುವಂತ ಪರಿಸ್ಥಿತಿ ಬಂದಿತು .
ಗಂಡನ ಮನೆಯಲ್ಲಿ ಆತ ಸತ್ತರೂ ಸಾಲ ಸತ್ತಿರಲಿಲ್ಲ. ಅದಕ್ಕೆ ಜೀವ ಕೊಡುವ ಶಕ್ತಿಯು ಆಕೆಯಲ್ಲಿರಲಿಲ್ಲ. ಇತ್ತಾ ತವರು ಮನೆಯಲ್ಲಿ ಈಕೆಗೆ ಆಶ್ರಯ ನೀಡುವಂತಹ ಪರಿಸ್ಥಿತಿಯಲ್ಲೂ ಮುಂದೆ ಬರದೇ ಬೀದಿಗೆ ಬಿದ್ದರು ಬಾಳಲು ಪ್ರಯತ್ನಿಸಿದವಳು. ಗಂಡನ ಮನೆಯಿಂದ ಹೊರ ಹಾಕಿದರು, ಅತ್ತ ತವರು ಮನೆಯವರು ಸಹ ಈಕೆಯನ್ನು ಆದರಿಸಿ ಆಹ್ವಾನಿಸಲಿಲ್ಲ. ಬದುಕಿನ ಬವಣೆಗಳಲ್ಲಿ ಬದುಕಿದವಳು ಇವಳು . ಕಷ್ಟ ಎಷ್ಟೇ ಬಂದರೂ ಎದೆಗುಂದದೆ ಸಾಗಿದವಳು. ಹೆಸರು ಸರಳ ಇಂತಹ ಹೆಣ್ಣು ಮಕ್ಕಳು ಮಾತ್ರ ವಿರಳ.
ಬದುಕೆಂಬ ಅಲೆಗಳ ಮಧ್ಯೆ ಹೋರಾಟ ಮಾಡಿ ಗೆದ್ದವಳಿವಳು. ಮೊದಲೇ ದುಡಿಯುತ್ತಿದ್ದ ಸರಳ ಹೊರಬಂದು ತನ್ನದೇ ಆದ ಮನೆ ಮಾಡಿಕೊಳ್ಳಬೇಕೆಂಬ ಬಯಕೆಯಲ್ಲಿ ಹಗಲು-ರಾತ್ರಿಗಳನ್ನದೇ ಕಷ್ಟಪಟ್ಟು ದುಡಿದವಳು. ಮಕ್ಕಳಿಗೆ ತಾನಿಲ್ಲದಿದ್ದಾಗ ಹೇಗೆ ರಕ್ಷಣೆಯಲ್ಲಿ ಬದುಕಬೇಕೆಂಬುದನ್ನು ಕಲಿಸಿಕೊಟ್ಟವಳು. ಹಂತ ಹಂತವಾಗಿಯೇ ಹಣ ಕೂಡಿಸಿಕೊಂಡು ಪುಟ್ಟ ಗುಡಿಸಲನ್ನು ಖರೀದಿ ಮಾಡಿಕೊಂಡು ಬದುಕಿದವಳಿವಳು.
ತನ್ನ ಗುಡಿಸಿಲಿನಲ್ಲಿ ಅರಮನೆಯಂತೆ ಜೀವನದಲ್ಲಿ ಬಂದ ಸನ್ನಿವೇಶವನ್ನು ಎದುರಿಸಿದವಳು. ತನ್ನ ಮನೆಯನ್ನು ಬಹಳಷ್ಟು ರ್ಷಗಳ ನಂತರದಲ್ಲಿ ಖರೀದಿ ಮಾಡಿದರು ಸಹ ಹೇಳಿಕೊಂಡಿದ್ದು ಒಂದೇ
" ಹುಟ್ಟಿದ ಮನೆ ನನ್ನದಲ್ಲ,
ಮೆಟ್ಟಿದ ಮನೆ ನನ್ನದಲ್ಲ
ಯಾವುದು ನನ್ನ ಮನೆ
ಇರುವವರೆಗೂ ನಾ ಖರೀದಿ ಮಾಡಿದ್ದೆ ನನ್ನ ಮನೆ".
ಆಕೆ ಅದನ್ನು ಅರಿತು ಜೀವನದಲ್ಲಿ ಮುನ್ನಡೆಯುತ್ತಾ ಸಾಗುತ್ತಿರುವಾಗ ತನ್ನ ಎರಡು ಹೆಣ್ಣು ಮಕ್ಕಳಿಗೂ ಅವಳು ಹೇಳಿಕೊಟ್ಟದ್ದು ತನಗೆ ತಾನೇ ಗುರುವಾಗಬೇಕು, ಜೀವನ ಹೇಗೆ ಸಾಗಿಸಬೇಕೆಂಬುದನ್ನು ಹೆಣ್ಣು ಮಕ್ಕಳು ಹೇಗೆ ಬದುಕಬೇಕೆಂಬದನ್ನು ಸರಳ ಮಾಡುತ್ತಿದ್ದ ಕೆಲಸಗಳನ್ನು ನೋಡಿ ಅರಿತು ಕಲಿತ ಮಕ್ಕಳು ರ್ಕಾರಿ ಶಾಲೆಯಲ್ಲಿ ಓದಿದರು ಸಹ ಒಳ್ಳೆಯ ಕೆಲಸಗಳಿಗೆ ಸೇರಿ ರ್ಕಾರಿ ಹುದ್ದೆಗಳಿಗೆ ಸೇರುತ್ತಾರೆ. "ಅಮ್ಮ ನಿನ್ನ ಮನೆ ಗುಡಿಸಿಲಾದರೆ
ನಾವು ಸೇರಿ ಒಂದು ಅಂತಸ್ತಿನ
ಮನೆ ಕಟ್ಟುವೆವಮ್ಮ
ಅದೇ ನಿನಗೆ ಅರಮನೆಯಮ್ಮ
ಅಲ್ಲಿಂದ ನಿನಗೆ ಯಾರು ಹೋಗು ಎನ್ನಲಾರರು
ಬದುಕಲ್ಲಿ ನಿನ್ನ ಹೊರ ಹಾಕಲಾರರು" ಎಂದು ಹೇಳುತ್ತಾ ಎರಡು ಹೆಣ್ಣು ಮಕ್ಕಳು ಸಹ ಆಕೆಯನ್ನು ಗಂಡು ಮಕ್ಕಳಂತೆ ತಾಯಿಯನ್ನು ನೋಡಿಕೊಳ್ಳುತ್ತಾರೆ." ನನ್ನದು ಎಂಬ ಮನೆ ಬೇಕು" ಎಂಬ ಹಂಬಲದಲ್ಲಿ ಬದುಕಿನ ಬವಣೆಗಳನ್ನು ಕಷ್ಟ ನಷ್ಟಗಳನ್ನು ಅರಿಯುತ್ತ ಮಕ್ಕಳಿಗೆ ಬುದ್ಧಿ ಕಲಿಸುತ್ತಾ ಸಾಗಿದವಳು ನಮ್ಮ ಈ ಸರಳ. ಹೆಣ್ಣು ಮಕ್ಕಳು ಎಂದಿಗೂ ಶಕ್ತಿಶಾಲಿ ಯಾದವಳು ಆಕೆಯನ್ನು ಯಾರು ಸಹ ಜರಿಯದಿರಿ. ಆದರೆ ಹೆಣ್ಣು ಮಕ್ಕಳಿಗೆ ಸಹಕಾರ ನೀಡಿ ನಿಮ್ಮ ಪಾಡಿಗೆ ನೀವು ಸುಮ್ಮನಿದ್ದು ಬಿಡಿ ಸಬಲೆಯಾದ ಹೆಣ್ಣಿಗೆ ಸಹಕಾರ ನೀಡಿ, ಅಬಲೆ ಎಂದು ಆಕೆಯನ್ನು ಕೀಳಾಗಿ ನೋಡದಿರಿ ಆಕೆಗೂ ನೀಡಿ ಸಾಗಿ . ಎನ್ನುತ್ತಾ? ಜೈ ಹಿಂದ್ ಜೈ ರ್ನಾಟಕ ಮಾತೆ.
ಹೆಚ್. ಎಸ್. ಪ್ರತಿಮಾ ಹಾಸನ್.
ಶಿಕ್ಷಕಿ,ಸಾಮಾಜಿಕ ಚಿಂತಕಿ, ಸಾಹಿತಿ, ಹಾಸನ.
2nd June 2025
ಬೆಂಗಳೂರು : ನಾಟ್ಯೇಶ್ವರ ನೃತ್ಯ ಶಾಲೆ ಹಾಗೂ ನೃತ್ಯ ಕುಟೀರ ಇವುಗಳ ಸಂಯುಕ್ತಾಶ್ರಯದಲ್ಲಿ ಮೇ ೩೧ರಂದು ಮಲ್ಲೇಶ್ವರ ಶ್ರೀಕೃಷ್ಣದೇವರಾಯ ಕಲಾಮಂದಿರ(ತೆಲುಗು ವಿಜ್ಞಾನ ಸಮಿತಿ)ದಲ್ಲಿ ಗುರು ಕೆ.ಪಿ ಸತೀಶ್ ಬಾಬುರವರ ಹಿರಿಯ ವಿದ್ಯರ್ಥಿನಿ ಕು|| ಕೆ. ಹರಿಣಿ ಹಾಗೂ ನೃತ್ಯ ಕುಟೀರದ ಗುರು ವಿ|| ಲಿಖಿತಾರವರ ಶಿಷ್ಯೆ ಕು|| ಕೆ. ಪ್ರಗತಿ ಇವರುಗಳ ಭರತನಾಟ್ಯ ರಂಗಪ್ರವೇಶ ಕರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಮೂಡಿಬಂತು.
ವಾದ್ಯವೃಂದದಲ್ಲಿ : ಗುರುಗಳಾದ ಕಲಾಯೋಗಿ ಶ್ರೀ ಕೆ.ಪಿ. ಸತೀಶ್ ಬಾಬು ಮತ್ತು ವಿ|| ಯು.ಕೆ. ಲಲಿತಾ (ನಟುವಾಂಗ), ವಿದ್ವಾನ್ ಶ್ರೀವತ್ಸ (ಹಾಡುಗಾರಿಕೆ), ವಿ|| ಪಿ. ಜನರ್ದನ (ಮೃದಂಗ), ವಿ|| ಆರ್ ಪಿ ಪ್ರಶಾಂತ್ (ವೀಣೆ), ವಿ|| ರಘುಸಿಂಹ {ಕೊಳಲು}, ವಿ|| ಧನುಷ್ (ರಿದಂ ಪ್ಯಾಡ್). ಕರ್ಯಕ್ರಮ ನರ್ವಹಣೆ ಮತ್ತು ನಿರೂಪಣೆ ವಾಣಿ ಸತೀಶ್ ಬಾಬು. ಪಾರಂಪರಿಕ ನೃತ್ಯ ಬಂಧಗಳಾದ ಪುಷ್ಪಾಂಜಲಿ, ವಿನಾಯಕ ಸ್ತುತಿ, ಗುರುಶ್ಲೋಕ, ರಸಿಕಪ್ರಿಯ, ಜತಿಸ್ವರ, ದಶಾವತಾರ, ವೆಂಕಟೇಶ್ವರ ಪದರ್ಣ, ಶಿವಕರ್ತನೆ, ದೇವಿಸೃತಿ ಹಾಗೂ ಕೊನೆಯಲ್ಲಿ ಕದನ ಕೂತೂಹಲ ತಿಲ್ಲಾನ, ಶ್ರೀರಾಮಚಂದ್ರನ ಮಂಗಳದೊಂದಿಗೆ ಸುಸಂಪನ್ನವಾಯಿತು. ಅತಿಥಿಗಳಾಗಿ ಕಲಾಯೋಗಿ ಶ್ರೀಮತಿ ರೇಖಾ ಜಗದೀಶ್ (ನರ್ದೇಶಕರು, ಶ್ರೀ ಲಲಿತ ಕಲಾ ನಿಕೇತನ), 'ಕಲಾಯೋಗಿ' ಶ್ರೀ ಎಸ್ . ರಘುನಂದನ್ (ನರ್ದೇಶಕರು ಕೇಶವ ಸಂಗೀತ ಮತ್ತು ನೃತ್ಯ ಶಾಲೆ ಹಾಗೂ ಡಾ॥ ಶ್ರೀಮತಿ ಮಾನಸಿ ರಘುನಂದನ್ (ನರ್ದೇಶಕರು, ಅಭಿವ್ಯಕ್ತಿ ಸಾಂಸ್ಕೃತಿಕ ಸಂಸ್ಥೆ) ನೃತ್ಯ ಕರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇಡೀ ಸಭಾಂಗಣ ಕಿರಿಯ, ಹಿರಿಯ ವಿದ್ಯರ್ಥಿ ವೃಂದ , ಕಲಾರಸಿಕರು ಪೋಷಕರಿಂದ ತುಂಬಿ ಕರತಾಡನದಿಂದ ಕಂಗೊಳಿಸಿತು. ಕರ್ಯಕ್ರಮವನ್ನು ಪೋಷಕರಾದ ಡಾ॥ ಕುಮಾರ್ ಮತ್ತು ಶ್ರೀಮತಿ ಎಸ್. ಜಯಶ್ರೀ ಅಚ್ಚುಕಟ್ಟಾಗಿ ನರ್ವಹಿಸಿದರು.