
13th June 2025
ಬೆಂಗಳೂರು ನಗರ ಜಿಲ್ಲೆ, ಜೂ.13 (ಕರ್ನಾಟಕ ವಾರ್ತೆ): ಅಬಕಾರಿ ಇಲಾಖೆಯ ಬೆಂಗಳೂರು ಉತ್ತರ ವಿಭಾಗದ ಅಬಕಾರಿ ಜಂಟಿ ಆಯುಕ್ತರಾದ ಫಿರೋಜ್ ಖಾನ್ ಖಿಲ್ಲೇದಾರ್, ಬೆಂಗಳೂರು ನಗರ ಜಿಲ್ಲೆ-3 ಅಬಕಾರಿ ಉಪ ಆಯುಕ್ತರು ಡಾ.ಕೆ.ಎಸ್.ಮುರಳಿ, ಉಪವಿಭಾಗ-05 ಅಬಕಾರಿ ಉಪ ಅಧೀಕ್ಷಕರಾದ ಸಿ.ಲಕ್ಷ್ಮೀಶ, ಕಂದಾಯ, ಕೆ.ಎಸ್.ಬಿ.ಸಿ.ಎಲ್ ಹಾಗೂ ಇಲಾಖಾ ಅಧಿಕಾರಿಗಳ ಮತ್ತು ಸಿಬ್ಬಂದಿ ವರ್ಗದವರ ಸಮಕ್ಷಮದಲ್ಲಿ ಜಪ್ತು ಪಡಿಸಿದ ಅಕ್ರಮ ವಿದೇಶಿ ಮದ್ಯವನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡಿದ್ದು ಜೂನ್ 12 ರಂದು ಅಲೈಡ್ ಬ್ಲೆಂಡರ್ಸ್ ಮತ್ತು ಡಿಸ್ಟಿಲರೀಸ್ ಪರಾಂಗಣದಲ್ಲಿ ಒಟ್ಟು 516 ಬಾಟಲ್ ಗಳಲ್ಲಿ ಇದ್ದಂತಹ 516 ಲೀಟರ್ ವಿದೇಶಿ ಮದ್ಯವನ್ನು, ಸಿಗರೇಟ್ ಜಪ್ತು ಪಡಿಸಿದ ಖಾಲಿ ಬಾಟಲ್ ಗಳನ್ನು ನಾಶ ಪಡಿಸಲಾಯಿತು, ನಾಶ ಪಡಿಸಿದ ವಸ್ತುಗಳ ಒಟ್ಟು ಮೌಲ್ಯ 39 ಲಕ್ಷ ರೂಗಳು. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಅಂದಾಜು 30 ಲಕ್ಷ ನಷ್ಟ ಉಂಟಾಗುವುದನ್ನು ತಡೆಯಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಮಾನವನ ಸೇವನೆಗೆ ಯೋಗ್ಯವಲ್ಲದ 362.14 ಲೀಟರ್ ಮದ್ಯ, ವೈನ್ ಹಾಗೂ ಬಿಯರ್ ನ್ನು ನಾಶಪಡಿಸಲಾಗಯಿತು ಎಂದು ಬೆಂಗಳೂರು ನಗರ ಜಿಲ್ಲೆ-3 ಅಬಕಾರಿ ಉಪ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
13th June 2025
ಜುಮಾಲಾಪುರ್ ತಾಂಡಾ : ಬಾಗಲಕೋಟೆ ಕೇರೋಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ವೆಂಕಟೇಶ್ .ಎಂ. ರಾಠೋಡ
ಅಂತ್ಯಕ್ರಿಯೆ ಸಕಲ ರ್ಕಾರಿ ಗೌರವಗಳೊಂದಿಗೆ ಸ್ವಗ್ರಾಮ ಜುಮಾಲಾಪುರ್ ತಾಂಡದಲ್ಲಿ ಶುಕ್ರವಾರ ನೆರವೇರಿತು.
ಬಾಗಲಕೋಟೆ ಕೇರೋಡಿ ಆಸ್ಪತ್ರೆಯಲ್ಲಿ ಬಿಳಿರಕ್ತ ಕಣಗಳು ಕಡಿಮೆ ಆಗಿರೋದರಿನ ಯೋಧ ಮೃತಪಟ್ಟಿದ್ದರು.
ಮೃತರ ಪರ್ಥಿವ ಶರೀರವು ಬಾಗಲಕೋಟ ಆಸ್ಪತ್ರೆಯಿಂದ ಗುರುವಾರ ಮದ್ಯರಾತ್ರಿ ಬಾಗಲಕೋಟದಿಂದ ಬಂದು ಶುಕ್ರವಾರ ಬೆಳಿಗ್ಗೆ ಜುಮಾಲಾಪುರ್ ತಾಂಡಕ್ಕೆ
ತರಲಾಯಿತು. ಅಲ್ಲಿಂದ ರಸ್ತೆ ಮೂಲಕ ಆಂಬುಲೆನ್ಸ್ ವಾಹನದ ಮೂಲಕ ತರಲಾಯಿತು.
ನಾರಾಯಣಪುರದಿಂದ ಸುಮಾರ ೧೫ ಕಿ.ಮೀ ದೂರವಿರುವ ಯೋಧನ ಸ್ವಗ್ರಾಮ. ಜುಮಾಲಾಪುರ್ ತಾಂಡವರೆಗೆ ಪರ್ಥಿವ ಶರೀರದ ಮೆರವಣಿಗೆ ಮಾಡಲಾಯಿತು.
ಮೆರವಣಿಗೆ ಉದ್ದಕ್ಕೂ ವೆಂಕಟೇಶ ಅಮರ ರಹೇ, ಬೋಲೊ ಭಾರತ್ ಮಾತಾಕಿ ಜೈ’ ಘೋಷಣೆಗಳು ಮೊಳಗಿದವು. ಮೆರವಣಿಗೆಯಲ್ಲಿ ಮಾಜಿ ಸೈನಿಕರು, ಯುವಕರು, ಗ್ರಾಮಸ್ಥರು ಹಾಗೂ ಸರ್ವಜನಿಕರು ಪಾಲ್ಗೊಂಡಿದ್ದರು.
ಮೃತ ಯೋಧನ ಪರ್ಥಿವ ಶರೀರ ಕಂಡು ಕುಟುಂಬಸ್ಥರು ಆಕ್ರಂದನ ಮುಗಿಲು ಮುಟ್ಟಿತ್ತು. ಯೋಧನ ಅಗಲಿಕೆಗೆ ಗ್ರಾಮಸ್ಥರು ಕಂಬಣಿ ಮಿಡಿದರು.
ಸ್ವಗ್ರಾಮದ ಹೊರವಲಯದಲ್ಲಿ ಸರ್ವಜನಿಕರಿಗೆ ಯೋಧನ ಪರ್ಥಿವ ಶರೀರದ ಅಂತಿಮ ರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ಹುಣಸಗಿ ತಶೀಲದಾರರು ಹುಸೇನಾ.ಎ. ರ್ಕಾವಾಸ್, ಕೊಡೇಕಲ್ ಉಪ ತಶೀಲದಾರರು ಕಾಲಪ್ಪ ಜಂಜಿಗಡ್ಡಿ. ಗ್ರಾಮ ಆಡಳಿತ ಅಧಿಕಾರಿ ಪರಶುರಾಮ, ಹುಣಸಗಿ ಪೊಲೀಸ್ ಸಿ.ಪಿ.ಐ ರವಿಕುಮಾರ್ , ಕೊಡೇಕಲ್ ಪಿ.ಎಸ್.ಐ ಅಯ್ಯಣ್ಣ ನವರು ಪೊಲೀಸ್ ಬಂದೋಬಸ್ತಾ ನೀಡಿದರು ಜೊತೆಯಲ್ಲಿ
ಮೃತ ಯೋಧನಿಗೆ ಅಂತಿಮ ನಮನ ಸಲ್ಲಿಸಿದರು.
ಸಕಲ ರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ ಮಾಡಲಾಯಿತು.
ಸಕಲ ರ್ಕಾರಿ ಗೌರವಗಳೊಂದಿಗೆ ಮೃತ ಯೋಧ ವೆಂಕಟೇಶ ಎಂ ರಾಠೋಡ ಅವರ ಅಂತ್ಯಕ್ರಿಯೆ ನೆರವೇರಿತು. ವರದಿಗಾರ : ಶಿವು ರಾಠೋಡ
10th June 2025
ಶುಭೋದಯ ವರ್ತೆ ಚಿಟಗುಪ್ಪಾ ಯುನಿರ್ಸೆಲಸ ನ್ಯಾನೊ ಸಾಫಟೆಕ ಕಂಪ್ಯೂಟರ ಎಜ್ಯುಕೆಶನ ಸೆಂಟರ್ ಹಾಗೂ ಗ್ರಾಮೀಣ ನಗರಾಭಿವೃದ್ಧಿ ಸಂಸ್ಥೆ ಬೀದರ ಇವರ ಆಯೋಜಿಸಿದ ಸ್ವಾಗತ ಹಾಗೂ ಬೀಳ್ಕೊಡುಗೆ ಕರ್ಯಕ್ರವನ್ನು ಯು ಎನ್ ಎಸ್ ಟಿ ಕಂಪ್ಯೂಟರನಲ್ಲಿ ಚಿಟಗುಪ್ಪಾನಲ್ಲಿ ಹಮ್ಮಿಕೊಳ್ಳಲಾಯಿತ್ತು ಗಣಕಯಂತ್ರ ಎಂಬುದು ಮಾಹಿತಿಯನ್ನು ಸಂಗ್ರಹಿಸುವು ಸಂಸ್ಕರಿಸುವುದು ಹಾಗೂ ಪ್ರರ್ಶಿಸುವುದು ಇತ್ಯಾದಿ ಕರ್ಯಗಳನ್ನು ವೇಗವಾಗಿ ಮತ್ತು ನಿಖರವಾಗಿ ನರ್ವಹಿಸುವ ಎಲೆಕ್ಟ್ರಾನಿಕ ಸಾಧನವಾಗಿದೆ ವೇಗ ಗಣಕಯಂತ್ರವು ಹೆಚ್ಚಿನ ವೇಗದಲ್ಲಿ ಗಣನೆ ಮತ್ತು ಡೇಟಾ ಸಂಸ್ಕರಣೆ ಮಾಡುತ್ತದೆಯೆಂದು ಕನ್ನಡ ಸಾಹಿತ್ಯ ಪರಿಪತ್ತಿನ ತಾಲ್ಲೂಕ ಅಧ್ಯಕ್ಷರಾದ ಅನೀಲ ಕುಮಾರ ಸಿಂಧೆ ಮಾತನಾಡಿದ್ದರು. ಮುಖ್ಯ ಅತಿಥಿಗಳಾಗಿ ಸಂಜೀವನ ಬೋಸ್ಲೆ ಮಾತನಾಡಿ ನಿಖರತೆ ದೋಷರಹಿತವಾಗಿ ಕೆಲಸ ನರ್ವಹಿಸುತ್ತದೆ ಬಹುಮುಖತೆ ಶಿಕ್ಷಣ ವ್ಯವಹಾರ ಆರೋಗ್ಯ ವಿಜ್ಞಾನ ಸಂಶೋಧನೆ ರ್ಥಿಕ ಕ್ಷೇತ್ರ ಉಪಯೋಗಿಸಬಹುದು ಮಾಹಿತಿ ಸಂಗ್ರಹಣೆ ಸಹಾಯಕಾರಿಯಾಗಿದ್ದೆ ಎಂದು ನುಡಿದ್ದರು. ಸಂಸ್ಥೆಯ ಉಪಾಧ್ಯಕ್ಷರಾದ ಗಣೇಶ ಎಸ್ ಮಡ್ಡೆ ಮಾತನಾಡಿ ಮಾಹಿತಿಯನ್ನು ಸಂಗ್ರಹಿಸುವುದು ಮತ್ತು ಸಂಸ್ಕರಿಸುವುದು ಆಡಳಿತ ಲೆಕ್ಕ ಚುಕ್ಕಿ ಹೀಗೆ ಹಲವು ಕ್ಷೇತ್ರಗಳಲ್ಲಿ ಪರಿಣಾಮಕಾರಿತ್ವ ಹೆಚ್ಚಿಸುವುದು ಕರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿರುವ ಶರಣಮ್ಮಾ ಎಸ್ ಮಡ್ಡೆ ರವರು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ನೂತನ ಅವಿಷ್ಕಾರಗಳಿಗೆ ಪೂರಕವಾಗಿ ದೈನಂದಿನ ಕೆಲಸಗಳಲ್ಲಿ ಪರಿಣಾಮಕಾರಿಯಾಗಿ ಸಹಾಯ ಮಾಡುವುದೆಂದು ಹೇಳಿದ್ದರು. ಈ ಕರ್ಯಕ್ರಮದಲ್ಲಿ ಮುನಿಶ ಶ್ರೀನಿವಾಸ ಶಿವಾನಂದ ಆನಂದ ಅವಿನಾಶ ಮನೋಹರ ಅರಣು ಕುಮಾರ ಸತೀಷ ರ್ಜುನ ಸಂಜೀವಕುಮಾರ ಮಮಿತಾ ಹಾಗೂ ವಿದ್ಯರ್ಥಿ ವಿದ್ಯರ್ಥಿನಿ ಭಾಗವಹಿಸಿದ್ದರು
10th June 2025
ಬಳ್ಳಾರಿ ಜೂ. ೦೯: ತುಂಗಭದ್ರಾ ಜಲಾಶಯಕ್ಕೆ ೧೯೫೩ ರಲ್ಲಿ ನರ್ಮಾಣ ಮಾಡಿ ಅಂದು ಆ ಜಲಾಶಯಕ್ಕೆ ೩೩ ಗೇಟುಗಳನ್ನು ಅಳವಡಿಸಿಲಾಗಿತ್ತು. ಆ ಗೇಟ್ಗಳನ್ನು ಅಳವಡಿಸಿ ಇಂದಿಗೆ ಸುಮಾರು ೭೨ ರ್ಷಗಳಾಗಿವೆ. ಈಗಾಗಲೇ ಗೇಟುಗಳ ಗುಣಮಟ್ಟ ಕಳೆದುಕೊಂಡು ಹಿಂದಿನ
ರ್ಷ ೧೯ನೇ ಗೇಟು ಮುರಿದು ಬಿದ್ದಾಗ ಗೇಟಿಗೆ ಸ್ಟಾಪ್ಲಾಗ್ ಅಳವಡಿಸಿ ರೈತರಿಗೆ ನೀರಿನ ವ್ಯವಸ್ಥೆ ಮಾಡಲಾಗಿತ್ತು ಮತ್ತು ಮುಂದಿನ ರ್ಷಕ್ಕೆ ಎಲ್ಲಾ ೩೩ ಹೊಸ ಗೇಟುಗಳನ್ನು ಅಳವಡಿಸುತ್ತೇವೆ
ಎಂದು ತಿಳಿಸಿದ್ದೀರಿ, ಆದರೇ ಇದುವರೆಗೂ ಯಾವುದೇ ಗೇಟು ಅಳವಡಿಸಲಾಗಿಲ್ಲ ಈಗ ಅಳವಡಿಸಲು ಸಹ ಸಮಯವಿಲ್ಲ ವೃಥಾ ಸಮಯ ಹಾಳು ಮಾಡದೆ ೧೯ನೇ ಗೀತಂ ಸಹ ಮುಂದಿನ ರ್ಷದಲ್ಲಿ ಎಲ್ಲಾ ೩೩ ಗೇಟು ಅಳವಡಿಸುವ ಸಂರ್ಭದಲ್ಲಿ ಅದನ್ನು ಅಳವಡಿಸಿರಿ, ಈಗ ಜಲಾಶಯದಲ್ಲಿ ೨೫ಣmಛಿ ನೀರು ಸಂಗ್ರಹಗೊಂಡ ತಕ್ಷಣ ಕಾಲುವೆಗಳಿಗೆ ಬಿಡುಗಡೆ ಮಾಡಿ ಎಂದು ತುಂಗಭದ್ರ ರೈತ ಸಂಘದ ಜಿಲ್ಲಾಧ್ಯಕ್ಷ ದರು ಪುರುಷೋತ್ತಮ್ ಗೌಡ ಟಿಬಿ ಬರ್ಡ್ ಅನ್ನು ಒತ್ತಾಯಿಸಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಮೂಲಕ ಜಲ ಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿ ಸಲ್ಲಿಸಿ ಮಾತನಾಡಿ, ಈಗಾಗಲೇ ತುಂಗಭದ್ರ ಜಯಲಾಶಯದಲ್ಲಿ ೨೨ ಟಿ.ಎಮ್.ಸಿ ನೀರು ಶೇಖರಣೆ ಆಗಿದ್ದು
ಜಲಾಶಯಕ್ಕೆ ಸತತವಾಗಿ ನೀರು ಹರಿದು ಬರುತ್ತದೆ. ತಜ್ಞರ ಸಮೀತಿಯು ಈ ರ್ಷ ೮೦% ಮಾತ್ರ ಜಲಾಶಯದಲ್ಲಿ
ನೀರಿನ ಶೇಖರಣೆ ಮಾಡುತ್ತೇವೆ ಎಂದು ತಿಳಿಸಿರುವುದರಿಂದ ಬಳ್ಳಾರಿ ವಿಜಯನಗರ, ಕೊಪ್ಪಳ
ಹಾಗೂ ರಾಯಚೂರು ಜಿಲ್ಲೆಗಳ ರೈತರು ಆತಂಕ ಗೊಂಡಿದ್ದಾರೆ ಮಾನ್ಯ ಸಚಿವರು ಒಂದು ನರ್ಧಾರವನ್ನು ಕೈಗೊಂಡು ರೈತರ ಆತಂಕವನ್ನು ದೂರ ಮಾಡಬೇಕೆಂದು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರಲ್ಲಿ ಮನವಿ ಮಾಡಿದರು.
9th June 2025
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ ಕುವೆಂಪು ಸಭಾಂಗಣ ಚಾಮರಾಜಪೇಟೆ ಬೆಂಗಳೂರುನಲ್ಲಿ ನಡೆದ ' ನದಿ ತಟದ ವೃಕ್ಷ ' ಡಾ ಪ್ರವೀಣ್ ರಾಜ್ ಕವನ ಸಂಕಲನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶ್ ಎಂ ಪ್ರಕಾಶ್ ಮೂರ್ತಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರಾದ ಮತ್ತು ಉದಂತ ಶಿವಕುಮಾರ್ ರಾಜರಾಜೇಶ್ವರಿ ನಗರದ ವಿಧಾನಸೌಧದ ಕ್ಷೇತ್ರದ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರು ಮತ್ತು ಡಾ ನಾಗರಾಜ್ ತಂಬ್ರಹಳ್ಳಿ ಹಾಗೂ ಅನೇಕ ವಿದ್ವಾಂಸರು ಭಾಗವಹಿಸಿ ಈ ಕಾರ್ಯಕ್ರಮದಲ್ಲಿ ಮಾನಮ್ ಫೌಂಡೇಷನ್ ಹೈದರಾಬಾದ್ ರವರ ಕೋಡುವ ಗೌತಮ್ ಬುಧ್ಧ ಸೇವಾ ಶಾಂತಿ ರಾಷ್ಟ್ರೀಯ ಪ್ರಶಸ್ತಿ 2025 ಪ್ರಶಸ್ತಿ ಪ್ರಧಾನ ಮಾಡಿದರು.
ಈ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಡಾ ಗಣೇಶ್ ಗೌಡ್ರು ಸಂಸ್ಥಾಪಕ ಅಧ್ಯಕ್ಷರು ಕರ್ನಾಟಕ ಮಾನವ ಹಕ್ಕುಗಳ ಸಂರಕ್ಷಣಾ ಸಂಸ್ಥೆಯ ಮತ್ತು ಡಾ ಮಲ್ಕಪ್ಪ ಅಲಿಯಾಸ್ ಮಹೇಶ್ ಪ್ರಧಾನ ಕಾರ್ಯದರ್ಶಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ರಿ ಬೆಂಗಳೂರು ಘಟಕ ಮತ್ತು ಡಾ ಎಂ ಎಸ್ ಗಿರೀಶ್ ಮುಖ್ಯಸ್ಥರು ಚರ್ಮರೋಗ ತಜ್ಞ ಇಎಸ್ಐ ಆಸ್ಪತ್ರೆ ರಾಜಾಜಿನಗರ ಬೆಂಗಳೂರು ರವರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
9th June 2025
ಕೇಂದ್ರ ವರ್ತಾ ಮತ್ತು ಪ್ರಸಾರ ಮತ್ತು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾದ ಡಾ. ಎಲ್. ಮುರುಗನ್ ಅವರು ಜೂನ್ ೦೯, ೨೦೨೫ ರಂದು ಪುದುಚೇರಿ ವಿಧಾನಸಭೆಗಾಗಿ ರಾಷ್ಟ್ರೀಯ ಇ-ವಿಧಾನ್ ಅಪ್ಲಿಕೇಶನ್ (ಓeಗಿಂ) ಅನ್ನು ಉದ್ಘಾಟಿಸಿದರು. ಇದು ಪಾರರ್ಶಕ, ದಕ್ಷ ಮತ್ತು ಪರಿಸರ ಸ್ನೇಹಿ ಆಡಳಿತದತ್ತ ಒಂದು ಪ್ರಮುಖ ಹೆಜ್ಜೆಯಾಗಿದೆ. ಪುದುಚೇರಿ ಲೆಫ್ಟಿನೆಂಟ್ ಗರ್ನರ್ ಶ್ರೀ ಕೆ. ಕೈಲಾಶನಾಥನ್, ಪುದುಚೇರಿ ಮುಖ್ಯಮಂತ್ರಿ ಶ್ರೀ ಎನ್. ರಂಗಸಾಮಿ, ಪುದುಚೇರಿ ವಿಧಾನಸಭೆಯ ಸ್ಪೀಕರ್ ಶ್ರೀ ಆರ್. ಸೆಲ್ವಂ ಅವರು ಕರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಈ ಉದ್ಘಾಟನೆಯೊಂದಿಗೆ, ಪುದುಚೇರಿಯು ಪ್ರಧಾನಿ ನರೇಂದ್ರ ಮೋದಿಯವರ ಡಿಜಿಟಲ್ ಇಂಡಿಯಾ ದೃಷ್ಟಿಕೋನಕ್ಕೆ ಅನುಗುಣವಾಗಿ ಓeಗಿಂ ವೇದಿಕೆಯನ್ನು ಅಳವಡಿಸಿಕೊಂಡ ದೇಶದ ೧೯ ನೇ ಶಾಸನಸಭೆಯಾಗಿದೆ. ಕಾಗದರಹಿತ ಶಾಸಕಾಂಗ ಕರ್ಯವನ್ನು ಸಕ್ರಿಯಗೊಳಿಸುವ ಈ ಉಪಕ್ರಮಕ್ಕೆ ಸಂಸದೀಯ ವ್ಯವಹಾರಗಳ ಸಚಿವಾಲಯವು ಶೇ.೧೦೦ ಕೇಂದ್ರ ನೆರವಿನ ಹಣಕಾಸು ಒದಗಿಸುತ್ತದೆ.
ಕರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಡಾ. ಎಲ್. ಮುರುಗನ್, "ಓeಗಿಂ ಒಂದು ಪರಿರ್ತನಾಶೀಲ ಉಪಕ್ರಮವಾಗಿದ್ದು, ಇದು ಶಾಸಕಾಂಗ ಪ್ರಕ್ರಿಯೆಗಳಿಗೆ ನೈಜ-ಸಮಯದ ಪ್ರವೇಶವನ್ನು ಖಚಿತಪಡಿಸುತ್ತದೆ ಮತ್ತು ನಮ್ಮ ಪ್ರಜಾಪ್ರಭುತ್ವವನ್ನು ಬಲಪಡಿಸುತ್ತದೆ. ಇದು 'ಒಂದು ರಾಷ್ಟ್ರ, ಒಂದು ಅಪ್ಲಿಕೇಶನ್' ತತ್ವವನ್ನು ಪ್ರತಿಬಿಂಬಿಸುತ್ತದೆ, ಜೊತೆಗೆ 'ಒಂದು ರಾಷ್ಟ್ರ, ಒಂದು ಪಡಿತರ ಚೀಟಿ' ಮತ್ತು ಪ್ರಸ್ತಾವಿತ 'ಒಂದು ರಾಷ್ಟ್ರ, ಒಂದು ಚುನಾವಣೆ' ಯಂತಹ ಮಹತ್ವದ ಸುಧಾರಣೆಗಳನ್ನು ಪ್ರತಿಬಿಂಬಿಸುತ್ತದೆ. ಕಾನೂನುಗಳನ್ನು ಹೇಗೆ ರಚಿಸಲಾಗುತ್ತದೆ ಎಂಬುದನ್ನು ತಿಳಿದುಕೊಳ್ಳುವ ಮತ್ತು ವೀಕ್ಷಿಸುವ ಹಕ್ಕು ಸರ್ವಜನಿಕರಿಗೆ ಇದೆ" ಎಂದು ಹೇಳಿದರು.
ಪ್ರಧಾನಮಂತ್ರಿ ಮೋದಿಯವರ ನೇತೃತ್ವದಲ್ಲಿ ಕಳೆದ ದಶಕದ ಪ್ರಮುಖ ಸಾಧನೆಗಳನ್ನು ವಿವರಿಸಿದ ಸಚಿವರು, ಭಾರತವು ಡಿಜಿಟಲ್ ವಹಿವಾಟುಗಳಲ್ಲಿ ಎರಡನೇ ಅತಿದೊಡ್ಡ ರಾಷ್ಟ್ರವಾಗುತ್ತಿದೆ, ನೇರ ಲಾಭ ರ್ಗಾವಣೆ (ಡಿಬಿಟಿ) ಮೂಲಕ ಕಲ್ಯಾಣ ಯೋಜನೆಗಳ ಪರಿಣಾಮಕಾರಿ ವಿತರಣೆಯಾಗುತ್ತಿದೆ, ಆತ್ಮನರ್ಭರ ಭಾರತದ ಅಡಿಯಲ್ಲಿ ತಾಂತ್ರಿಕ ಪ್ರಗತಿಯಾಗಿದ್ದು, ಇದರ ಪರಿಣಾಮವಾಗಿ ರಕ್ಷಣಾ ಆಮದುಗಳಲ್ಲಿ ಶೇ.೫೦ ಕಡಿತವಾಗಿದೆ ಎಂದು ಹೇಳಿದರು.
ಭಾರತದ ಬೆಳವಣಿಗೆಗೆ ಮೂಲಸೌರ್ಯ ಅಭಿವೃದ್ಧಿ ಮತ್ತು ಸಾಮಾಜಿಕ ಬಂಡವಾಳ ಎರಡು ಪ್ರಮುಖ ಸ್ತಂಭಗಳಾಗಿವೆ ಎಂದು ಅವರು ಒತ್ತಿ ಹೇಳಿದರು ಮತ್ತು ೨೦೪೭ ರ ವೇಳೆಗೆ ಭಾರತವು ವಿಕಸಿತ ಭಾರತವಾಗುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.
ಪುದುಚೇರಿಯ ಲೆಫ್ಟಿನೆಂಟ್ ಗರ್ನರ್ ಅವರು ಓeಗಿಂ ಉದ್ಘಾಟನೆಯನ್ನು ಒಂದು ಮೈಲಿಗಲ್ಲು ಎಂದು ಶ್ಲಾಘಿಸಿದರು, ಇದು ಶಾಸಕಾಂಗ ಕರ್ಯವನ್ನು ಡಿಜಿಟಲೀಕರಣಗೊಳಿಸುವುದಲ್ಲದೆ, ಕರ್ಯಕಲಾಪಗಳ ನೇರ ಪ್ರಸಾರವನ್ನು ಸಕ್ರಿಯಗೊಳಿಸುತ್ತದೆ, ಹೆಚ್ಚಿನ ಸರ್ವಜನಿಕ ಪ್ರವೇಶ ಮತ್ತು ಪಾರರ್ಶಕತೆಯನ್ನು ಖಚಿತಪಡಿಸುತ್ತದೆ ಎಂದು ಅವರು ಹೇಳಿದರು. ಈ ಕ್ರಮವು ಡಿಜಿಟಲ್ ಇಂಡಿಯಾ, ಗೋ ಗ್ರೀನ್ ಮತ್ತು ಉತ್ತಮ ಆಡಳಿತವನ್ನು ಬೆಂಬಲಿಸುವ ಮೂಲಕ ವರ್ಷಿಕವಾಗಿ ೩–೫ ಟನ್ ಕಾಗದವನ್ನು ಉಳಿಸುತ್ತದೆ ಎಂದು ಅವರು ಹೇಳಿದರು.
ಓeಗಿಂ ನ ವೈಶಿಷ್ಟ್ಯಗಳ ಕುರಿತು ಶಾಸಕರು ಮತ್ತು ಸಿಬ್ಬಂದಿಗೆ ತರಬೇತಿ ನೀಡುವ ಅಗತ್ಯವನ್ನು ಅಧಿಕಾರಿಗಳು ಒತ್ತಿ ಹೇಳಿದರು. ಅಪ್ಲಿಕೇಶನ್ ನ ಸುಗಮ ಅನುಷ್ಠಾನಕ್ಕಾಗಿ ಜಾಗೃತಿ ಅಭಿಯಾನಗಳು ಮತ್ತು ಸಾರ್ಥ್ಯ ವೃದ್ಧಿ ಗೋಷ್ಠಿಗಳನ್ನು ನಡೆಸಲಾಗುವುದು.
ಓeಗಿಂ ಡಿಜಿಟಲ್ ಇಂಡಿಯಾ ಕರ್ಯಕ್ರಮದ ಅಡಿಯಲ್ಲಿ ಒಂದು ಮಿಷನ್ ಮೋಡ್ ಯೋಜನೆಯಾಗಿದ್ದು, ಕಾಗದರಹಿತ, ದಕ್ಷ ಮತ್ತು ನಾಗರಿಕ-ಕೇಂದ್ರಿತ ಶಾಸಕಾಂಗ ಪ್ರಕ್ರಿಯೆಗಳನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಶಾಸನಸಭೆಗಳನ್ನು ಏಕೀಕೃತ ಡಿಜಿಟಲ್ ವೇದಿಕೆಗೆ ತರುವ ಗುರಿಯನ್ನು ಹೊಂದಿದೆ.
8th June 2025
ಮುಧೋಳ : ಆರ್.ಸಿ.ಬಿ. ಐಪಿಎಲ್ ಟ್ರೋಫಿ ಪಡೆದ ಸಂದರ್ಭದಲ್ಲಿ ನಡೆದ ವಿಜಯೋತ್ಸವ ಸಂದರ್ಭದಲ್ಲಿ ಕಾಲ್ತುಳತಕ್ಕೆ ಸಿಕ್ಕು 11 ಜನ ಅಮಾಯಕರು ಮರಣ ಹೊಂದಿರುವ ಘಟನೆಯ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಈ ಕೂಡಲೇ ರಾಜೀನಾಮೆ ಕೊಡಬೇಕೆಂದು ಬಿಜೆಪಿ ಧುರೀಣರಾದ ಅರುಣ ಗೋವಿಂದ ಕಾರಜೋಳ ಒತ್ತಾಯಿಸಿದರು.
ಕಾಲ್ತುಳಿತ ಘಟನೆ ನಡೆಯಲು ಡಿಸಿಎಂ ಡಿ.ಕೆ.ಶಿವಕುಮಾರ ಅವರಾಲಿ, ಆರ್.ಸಿ.ಬಿ., ಕೆಎಸ್ ಸಿಎ, ಮಂತ್ರಿಮಂಡಲವಾಗಲಿ, ಅಧಿಕಾರಿಗಳಾಗಲಿ ಯಾರೂ ಕಾರಣರಲ್ಲ. ಮುಖ್ಯಮಂತ್ರಿ ಸಿದ್ಧರಮಯ್ಯನವರ ಮೊಮ್ಮಗನ ಆಸೆ ತೀರಿಸುವುದಕ್ಕೋಸ್ಕರ ಕೈಗೊಂಡ ದುಡುಕಿನ ನಿರ್ಧಾರದಿಂದಾಗಿ ಈ ಘಟನೆ ನಡೆದಿದ್ದು, ಇದಕ್ಕೆ ಮುಖ್ಯಮಂತ್ರಿಗಳೇ ನೇರ ಹೊಣೆಗಾರರಾಗಿದ್ದು ಈ ಕೂಡಲೇ ಅವರು ರಾಜೀನಾಮೆ ನೀಡಬೇಕೆಂದು ಅರುಣ ಕಾರಜೋಳ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಸಂಗಣ್ಣಾ ಕಾತರಕಿ, ಗುರುಪಾದ ಕುಳಲಿ, ನಾಗಪ್ಪ ಅಂಬಿ, ಗೋಲಪ್ಪ ಗೋಲಶೆಟ್ಟಿ ಉಪಸ್ಥಿತರಿದ್ದರು.
8th June 2025
ಬೆಂಗಳೂರು, ಜೂನ್ 08, (ಕರ್ನಾಟಕ ವಾರ್ತೆ): ಬೆಂಗಳೂರಿನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಲುವಾಗಿ ನಿನ್ನೆ ಜೂನ್ 07 ರಂದು ಬೆಂಗಳೂರಿಗೆ ಆಗಮಿಸಿದ್ದ ಗೌರವಾನ್ವಿತ ಉಪ ರಾಷ್ಟ್ರಪತಿಗಳಾದ ಜಗದೀಪ್ ಧನಕರ್ ಅವರನ್ನು ಇಂದು ಬೆಂಗಳೂರಿನ ಹೆಚ್.ಎ.ಎಲ್. ವಿಮಾನ ನಿಲ್ದಾಣದಲ್ಲಿ ರಾಜ್ಯದ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಆತ್ಮೀಯವಾಗಿ ಬೀಳ್ಕೊಟ್ಟರು.
ಈ ಸಮಯದಲ್ಲಿ ಉನ್ನತ ಶಿಕ್ಷಣ ಸಚಿವರಾದ ಡಾ.ಎಂ.ಸಿ. ಸುಧಾಕರ್, ಮಾಜಿ ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್. ವೀರಯ್ಯ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಾದ ಗೌರವ್ ಗುಪ್ತ, ಕರ್ನಾಟಕ ಪೊಲೀಸ್ ಮಹಾ ನಿರ್ದೇಶಕರಾದ ಡಾ. ಎಂ.ಎ. ಸಲೀಂ, ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕಾರ್ಯದರ್ಶಿಗಳಾದ ಶ್ರೀಮತಿ ಸತ್ಯವತಿ ಜಿ ಹಾಗೂ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಜಗದೀಶ್. ಜಿ. ಉಪಸ್ಥಿತರಿದ್ದರು.
8th June 2025
ಶುಭೋದಯ ವಾರ್ತೆ ಚೀಟಗುಪ್ಪ : ಬಕ್ರೀದ್ ಮುನ್ನಾದಿನ ಮುಸ್ಲಿಂ ಬಡಾವಣೆಯೊಂದಕ್ಕೆ ಭೇಟಿ ನೀಡಿ ಹಸುಗಳನ್ನು ವಶಕ್ಕೆ ಪಡೆದ ಪ್ರಕರಣಕ್ಕೆ ಸಂಬಂದಿಸಿದಂತೆ, ಬಸವಕಲ್ಯಾಣ ಶಾಸಕ ಶರಣು ಸಲಗರ ಅವರ ವಿರುದ್ಧ ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಬಳಿ ಮುಸ್ಲಿಂ ಮುಖಂಡರು ಪ್ರತಿಭಟನೆ ನಡೆಸಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ.ಬಸವಕಲ್ಯಾಣ ಶಾಸಕ ಶರಣು ಸಲಗರ ಅವರು ಶುಕ್ರವಾರ ಬಸವಕಲ್ಯಾಣ ನಗರದ ಮುಸ್ಲಿಂ ಬಡಾವಣೆಯೊಂದಕ್ಕೆ ಭೇಟಿ ನೀಡಿ ಅಕ್ರಮವಾಗಿ ಗೋ ಹತ್ಯೆ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದರು. ಬಳಿಕ ಪಶು ಇಲಾಖೆಯ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ, ಕೊಟ್ಟಿಗೆಯಲ್ಲಿದ್ದ ಹಸುಗಳನ್ನು ವಶಕ್ಕೆ ಪಡೆದುಕೊಳ್ಳುವಂತೆ ಸೂಚಿಸಿದ್ದರು. ಅದರಂತೆ ಅಧಿಕಾರಿಗಳು ಎಲ್ಲ ಹಸುಗಳನ್ನು ವಶಕ್ಕೆ ಪಡೆದುಕೊಂಡರು ಎಂದು ತಿಳಿದು ಬಂದಿದೆ.
ಶಾಸಕ ಶರಣು ಸಲಗರ್ ಅವರು ಬಡಾವಣೆಯಿಂದ ವಾಪಸ್ಸು ಹೋದ ಬಳಿಕ, ಶಾಸಕರ ನಡೆಯನ್ನು ಖಂಡಿಸಿ ನಗರದ ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಬಳಿ ಮುಸ್ಲಿಂ ಮುಖಂಡರು ಜಮಾವಣೆಗೊಂಡು ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮುಸ್ಲಿಂ ಮುಖಂಡರೊಬ್ಬರು ಮಾತನಾಡಿ, ಪಶು ಇಲಾಖೆಯ ಅಧಿಕಾರಿಗಳು ದನಗಳನ್ನು ವಶಕ್ಕೆ ಪಡೆದುಕೊಂಡು ಹೋಗಿದ್ದಾರೆ. ಅದನ್ನು ವಾಪಸ್ಸು ತಂದು ಒಪ್ಪಿಸಬೇಕು. ಸಮುದಾಯದವರು ಯಾರು ಕೂಡ ಕಾನೂನನ್ನು ಕೈಗೆತ್ತಿಕೊಳ್ಳಬಾರದು ಎಂದು ಮನವಿ ಮಾಡಿದರು.ಈ ವೇಳೆ ಮಾತನಾಡಿದ ಡಿವೈಎಸ್ಪಿ ನ್ಯಾಮೇಗೌಡ ಅವರು, ನಾಳೆ ಬಕ್ರೀದ್ ಹಬ್ಬವಿದೆ. ಎಲ್ಲರೂ ಶಾಂತಿಯಿಂದ ಹಬ್ಬ ಆಚರಣೆ ಮಾಡಬೇಕು. ಯಾರದಾದರೂ ತೊಂದರೆ ನೀಡಿದರೆ ನಮ್ಮನ್ನು ಸಂಪರ್ಕಿಸಿ, ನಾವು ನಿಮ್ಮ ರಕ್ಷಣೆಗೋಸ್ಕರ ಸದಾ ಸಿದ್ದರಿದ್ದೇವೆ ಎಂದು ಭರವಸೆ ನೀಡಿದರು.
8th June 2025
ಬೆಂಗಳೂರು:ಹಿರಿಯ ನಟ ಅನಂತ್ ನಾಗ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಬಂದ ಹಿನ್ನೆಲೆಯಲ್ಲಿ ನೆಲಮಂಗಲ ಸಮೀಪದ ಗುಬ್ಬಿಗೂಡು ರೆಸರ್ಟ್ನಲ್ಲಿ ಚಿತ್ರ ಸಮೂಹ ಮತ್ತು ಆ್ ರ್ಕಲ್ ಸಂಯುಕ್ತಾಶ್ರಯದಲ್ಲಿ ರ್ಪಡಿಸಿದ್ದ ಕರ್ಯಕ್ರಮದಲ್ಲಿ ಅನಂತ್ ನಾಗ್ ಮತ್ತು ಗಾಯತ್ರಿ ದಂಪತಿಗಳನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಇದೇ ಸಂರ್ಭದಲ್ಲಿ ಅನಂತ್ನಾಗ್ ಅವರ ಸಿನಿಮಾದ ಹಾಡುಗಳನ್ನು ಹಾಡುವ ಮೂಲಕ ಇಡೀ ಕರ್ಯಕ್ರಮ ರಸಮಯವಾಗುವಂತೆ ಆಯೋಜಿಸಲಾಗಿತ್ತು. ಅವರೊಂದಿಗೆ ನಡೆದ ಸಂವಾದದಲ್ಲಿ ೭೬ ವಸಂತಗಳ ಅನುಭವಗಳನ್ನು ಅವರು ಹಂಚಿಕೊಂಡರು. ಪದ್ಮಭೂಷಣ ಪ್ರಶಸ್ತಿ ಬಂದಿದ್ದು ಕನ್ನಡಿಗರಿಗೆ. ಕನ್ನಡಿಗರು ನನಗೆ ಕೊಟ್ಟಿರುವ ಪ್ರೀತಿಯನ್ನು ಎಂದೂ ಮರೆಯಲಾಗದು ಎಂದು ತಮ್ಮ ಹಲವು ಅನುಭವಗಳನ್ನು ಹೇಳಿಕೊಂಡರು.
ಈ ಸಂರ್ಭದಲ್ಲಿ ಮಾತನಾಡಿದ ರ್ನಾಟಕ ಕರ್ಯ ನಿರತ ಪತ್ರರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅವರು, ಅನಂತ್ ನಾಗ್ ಅವರ ನಟನೆಗೆ ಯಾರೂ ಸಾಟಿ ಇಲ್ಲ. ಅಷ್ಟು ಮನೋಜ್ಞ ಅಭಿನಯ ಅವರದು. ಎಂಬತ್ತರ ಕಾಲಘಟ್ಟದಲ್ಲಿ ಹಿಂದಿ ಮತ್ತು ಇಂಗ್ಲೀಷ್ನಲ್ಲಿ ಮೂಡಿ ಬಂದ ಮಾಲ್ಗುಡಿ ಡೇಸ್ ಧಾರವಾಹಿಯನ್ನು ಮರೆಯಲು ಸಾಧ್ಯವೇ ಇಲ್ಲ. ಚಿತ್ರರಂಗದಲ್ಲಿ ಅನಂತ್ನಾಗ್ ಮತ್ತು ಶಂಕರ್ ನಾಗ್ ಜೋಡಿ ಹೊಸ ಮೋಡಿಯನ್ನು ಮಾಡಿತು. ಆ ಮೂಲಕ ಚಿತ್ರರಂಗಕ್ಕೆ ಹೊಸ ಸಂಚಲನ ತಂದಿತು ಎಂದರು.
ಈ ಸಂರ್ಭದಲ್ಲಿ ಚಿತ್ರ ನಟಿ ಜಯಮಾಲ, ನರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಲಿಂಗದೇವರು, ಶೇಷಾದ್ರಿ, ಕನ್ನಡ ಪ್ರಭ ಸಂಪಾದಕ ರವಿಹೆಗಡೆ, ಸಪ್ತಾಹಿಕ ಸಂಪಾದಕ ಜೋಗಿ, ಗುಬ್ಬಿಗೂಡು ರಮೇಶ್ ಅವರುಗಳು ಅಭಿನಂದಿಸಿ ಮಾತನಾಡಿದರು.