
18th June 2025
ಮುಧೋಳ : ನರ್ಸರಿ, ಎಲ್.ಕೆ.ಜಿ. ಮತ್ತು ಯುಕೆಜಿ ಮಕ್ಕಳ ದೈಹಿಕ ಚಟುವಳಿಕೆಗಳ ಜೊತೆಗೆ ಮಾನಸಿಕ ಚಟುವಟಿಕೆಗಳನ್ನು ಕಲಿಸುತ್ತ ಇನ್ನಿತರ ವಿದ್ಯಾಭ್ಯಾಸಗಳ ಶಿಕ್ಷಣ ಕಲಿಯುವಂತೆ ಮಾಡುವಲ್ಲಿ ಕ್ರೀಡೋ ಲ್ಯಾಬ್ ಹೆಚ್ಚು ಸಹಕಾರಿಯಾಗಲಿದೆ ಎಂದು ರಾಯಲ್ ಸ್ಕೂಲ್ನ ಸಂಸ್ಥಾಪಕ ಅಧ್ಯಕ್ಷ ಡಾ.ತಿಮ್ಮಣ್ಣಾ ಅರಳೀಕಟ್ಟಿ ತಿಳಿಸಿದರು.
ಮುಧೋಳ ರಾಯಲ್ ಸ್ಕೂಲಿನಲ್ಲಿ ಕ್ರೀಡೋ ಲ್ಯಾಗ್ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೋವಿಡ್ ಸಂದರ್ಭದಲ್ಲಿ 48 ವಿದ್ಯಾರ್ಥಿಗಳಿಂದ ಪ್ರಾರಂಭವಾದ ಈ ಸಂಸ್ಥೆ ಇಂದು 1250 ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಹೊಂದಿದೆ. ಆದರಲ್ಲೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅಂತರಾಷ್ಟ್ರೀಯ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದ್ದೇವೆ. ಇದಕ್ಕೆಲ್ಲ ಹಿಂದಿನ ಹಾಗೂ ಈಗಿನ ಪಾಲಕರ ಸಹಾಯ, ಸಹಕಾರ ಬಹುಮುಖ್ಯವಾಗಿದೆ. ಒಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಅತೀ ಸರಳವಾಗುವಂತೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ ಎಂದು ತಿಳಿಸಿದರು.
ಕ್ರೀಡೋ ಲ್ಯಾಬ್ ಉದ್ಘಾಟಿಸಿ ಮಾತನಾಡಿದ ಪ್ರೊ.ಬಸವರಾಜ ಕೊಣ್ಣೂರ ಅವರು, ಡಾ.ತಿಮ್ಮಣ್ಣಾ ಅರಳೀಕಟ್ಟಿ ಅವರು ಓರ್ವ ಕನಸುಗಾರ, ಸದಾ ಹೊಸತನ್ನು ಬಯಸುವ ಹಾಗೂ ಅದನ್ನು ತಕ್ಷಣಕ್ಕೆ ಅನುಷ್ಠಾನಕ್ಕೆ ತರುವ ಅದಮ್ಯ ಬಯಕೆ ಹೊಂದಿರುವಂತಹ ವ್ಯಕ್ತಿ. ಅವರು ಬೇರೆ ಬೇರೆ ಶಾಲೆಗಳಿಗೆ ಭೇಟಿ ನೀಡಿದಾಗ ಅಲ್ಲಿರುವ ವಿನೂತನ ವಿಶೇಷತೆಗಳನ್ನು ಕಂಡ ತಕ್ಷಣ ಅವುಗಳನ್ನು ತಮ್ಮ ಸ್ಕೂಲಿನಲ್ಲಿ ಆಳವಡಿಸಿಕೊಂಡು ಈ ಭಾಗದ ಎಲ್ಲ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ. ವಿನೂತನ ಮಾದರಿಯ ಕ್ರೀಡೋ ಲ್ಯಾಬ್ ನಲ್ಲಿ ಮಕ್ಕಳ ಮಾನಸಿಕ ಹಾಗೂ ಆಟಪಾಠಗಳ ಚಟುವಟಿಕೆಗಳ ಮೂಲಕ ಮಕ್ಕಳಿಗೆ ವಿನೂತನ ಜ್ಞಾನ ನೀಡಲಾಗುತ್ತಿದೆ ಎಂದು ಹೇಳಿದರು.
ಮುದೋಳ ರಾಯಲ್ ಸ್ಕೂಲಿನ ಅಧ್ಯಕ್ಷೆ ಸವಿತಾ ತಿಮ್ಮಣ್ಣಾ ಅರಳೀಕಟ್ಟಿ ಮಾತನಾಡಿ, ನರ್ಸರಿ, ಎಲ್ ಕೆಜಿ ಹಾಗೂ ಯುಕೆವಿ ಮಕ್ಕಳ ಕಲಿಕೆ, ಆಟದೊಂದಿಗೆ ಪಾಠ ಎಂಬ ವಿಶೇಷತೆಯೊಂದಿಗೆ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಬಾಗಲಕೋಟೆ ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಕ್ರೀಡೋ ಲ್ಯಾಬ್ನ್ನು ಅರಳೀಕಟ್ಟಿ ಫೌಂಡೇಶನ್ನ ಮುಧೋಳ ರಾಯಲ್ ಸ್ಕೂಲಿನಲ್ಲಿ ಆಳವಡಿಸಲಾಗಿದೆ. ಕ್ರೀಡೋ ಲ್ಯಾಬ್ ನಿಂದ ಮಕ್ಕಳ ಕಲಿಕಾ ಸಾಮರ್ಥ್ಯ ಹಾಗೂ ಕಲಿಯುವ ಹುಮ್ಮಸ್ಸು ದ್ವಿಗುಣಗೊಳ್ಳುತ್ತದೆ. ಸುಸಜ್ಜಿತವಾದ ಕ್ರೀಡೋ ಲ್ಯಾಬ್ ರೂ. 5 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿದೆ. ಒಟ್ಟಾರೆಯಾಗಿ ಕಲಿಕೆಯ ವಿಷಯವನ್ನು ಮಕ್ಕಳಿಗೆ ಪರಿಣಾಮಕಾರಿಯಾಗಿ ಮುಟ್ಟಿಸಲು ಈ ಕಲಿಕಾ ಸಾಧನಗಳು ಸಹಾಯ ಮಾಡಲಿದೆ ಎಂದು ತಿಳಿಸಿದರು.
ರಾಯಲ್ ಸ್ಕೂಲಿನ ಕಾರ್ಯದರ್ಶಿ ವಿನಾಯಕ ತಿಮ್ಮಣ್ಣಾ ಅರಳೀಕಣ್ಣ, ಪಿಎಸ್ಐ ಅಜೀತಕುಮಾರ ಹೊಸಮನಿ, ಆಡಳಿತಾಧಿಕಾರಿ ಇಂದಿರಾ ಸಾತನೂರ, ಪ್ರಾಂಶುಪಾಲ ಚಂದ್ರಶೇಖರ, ಕ್ರೀಡೋ ಲ್ಯಾಬ್ ನ ಮುಖ್ಯಸ್ಥ ಕಿಶೋರ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ 'ಡಾ. ಮಹೇಶ್ ಜೋಶಿಯನ್ನು ಅಮಾನತ್ತು ಮಾಡಿ ಕನ್ನಡ ಸಾಹಿತ್ಯ ಪರಿಷತ್ತು ಉಳಿಸಿ" ಆಂದೋಲನಕ್ಕೆ ಕರೆ.
ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ 'ಡಾ. ಮಹೇಶ್ ಜೋಶಿಯನ್ನು ಅಮಾನತ್ತು ಮಾಡಿ ಕನ್ನಡ ಸಾಹಿತ್ಯ ಪರಿಷತ್ತು ಉಳಿಸಿ" ಆಂದೋಲನಕ್ಕೆ ಕರೆ.
ಚನ್ನಮಲ್ಲೇಶ್ವರ ತ್ಯಾಗಿಗಳ ಜೀವನ ಆದರ್ಶ ಪ್ರಾಯವಾಗಿದೆ ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯರು
ಜೂನ್ 21 ರಂದು 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ: ಜಿಲ್ಲಾಧಿಕಾರಿ ಎ.ಬಿ ಬಸವರಾಜು
ದೇವದರ್ಗ ಉದ್ಯೋಗ ಖಾತ್ರಿ ಅಕ್ರಮ: ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ, ಸಿಬಿಐ ತನಿಖೆಗೆವಹಿಸಲು ರಾಜ್ಯಪಾಲರಿಗೆ ದೂರು