
18th June 2025
ಶುಭೋದಯ ವಾರ್ತೆ ಚಿಟಗುಪ್ಪಾ ಶಿವಸಿದ್ಧ ಯೋಗಾಶ್ರಮ ಶಾಖಾ ಮುಕ್ತಿಮಠ ಸುಕ್ಷೇತ್ರ ಇಟಗಾ ಪೀಠಾಧಿಪತಿಗಳಾದ ಧರ್ಮಶ್ರೀ ತಪೋರತ್ನ ಷ ಬ್ರಶ್ರೀ ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯರು ಹಾಗೂ ಷ.ಬ್ರಶ್ರೀ ಶಂಭುಲಿಂಗ ಶಿವಾ ಚಾರ್ಯರು ಹಿರೇಮುನವಳ್ಳಿ ಇವರ ದಿವ್ಯ ನೇತೃತ್ವದಲ್ಲಿ ಲಿಂ ಪೂಜ್ಯ ದಾಸೋಹ ಮೂರ್ತಿ ಶ್ರೀ ಚನ್ನಮಲ್ಲೇಶ್ವರ ತ್ಯಾಗಿಗಳವರ ದ್ವಿತೀಯ ಪುಣ್ಯಾರಾಧನೆ ಕಾರ್ಯಕ್ರವನ್ನು ಶಾಸಕರಾದ ಸಿದ್ದಲಿಂಗಪ್ಪ ಪಾಟೀಲ ರವರು ಉದ್ಘಾಟಿಸಿದರು ಚನ್ನಮಲ್ಲೇಶ್ವರ ತ್ಯಾಗಿಗಳ ೨ನೇ ಪುಣ್ಯಾರಾಧನೆ ನಿಯಮಿತವಾಗಿ ಉಚಿತ ಆರೋಗ್ಯ ಶಿಭಿರವನ್ನು ಆಯೋಜಿಸಲಾಗಿತ್ತು. ಹಾಗೂ ಮನೆಗೊಂದು ಮರ ಉರಿಗೊಂದು ವನ ಸಸಿಗಳನ್ನು ನೀಡುವುದರ ಮೂಲಕವಾಗಿ ಪರಿಸರದ ಜಾಗೃತಿಯನ್ನು ಮುಡಿಸಲಾಯಿತ್ತು ಹಾಗೂ ಈಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿರುವ ಷ ಬ್ರ ಶ್ರೀ ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯರು ಮಾತನಾಡಿ ಶ್ರೀ ಚನ್ನಮಲ್ಲೇಶ್ವರ ತ್ಯಾಗಿಗಳ ಜೀವನ ಆದರ್ಶಮಯವಾಗಿತ್ತು ಅವರ ದಾಸೋಹ ಸೇವೆ ಇಂದಿಗೂ ಚಿರಸ್ಮರಣೆ ವಾಗಿದೆ ಅವರ ತ್ಯಾಗದ ಜೀವನ ಸಮಾಜದ ಜನರರಿಗೆ ಆದರ್ಶಪ್ರಾಯವಾಗಿದೆ ಎಂದು ನುಡಿದ್ದರು. ಈ ಸಂದಂರ್ಭದಲ್ಲಿ ಹಿರೇಮುನವಳ್ಳಿಯ ಶಿವಾಚಾರ್ಯರು ಹಾಗೂ ಚಿಟಗುಪ್ಪ ತಾಲ್ಲೂಕಿನ ಇಟಗಾ ಗ್ರಾಮದ ಶಿವಸಿದ್ಧ ಯೋಗಾಶ್ರಮ ಶಾಖಾ ಮುಕ್ತಿ ಮಠದಲ್ಲಿ ಪೀರಾಧಿ ಪತಿಗಳಾದ ಧರ್ಮಾಶ್ರೀ ತಪೋರತ್ನ ಷ ಬ್ರ ಶ್ರೀ ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯರು ಹಾಗೂ ಅಂದೆ ಸಂದರ್ಭದಲ್ಲಿ ಭದ್ರೇಶ್ವರ ಜೊತೆಗೆ ವೀಣಾ ಇವರ ವಿವಾಹ ಸಮಾರಂಭವು ನೆರವೇರಿತ್ತು ಸಮಾರಂಭದಲ್ಲಿ ನಾಡಿನ ವಿವಿಧ ಪರಮ ಪೂಜ್ಯರು ಹಾಗೂ ಹರ ಗುರು ಚರ ಮೂರ್ತಿಗಳು ಮತ್ತು ಅನೇಕ ರಾಜಕೀಯ ಧುರೀಣರು ಗಣ್ಯ ಮಾನ್ಯರು ಸಂಗೀತದ ಕಲಾವಿದರು ಆಗಮಿಸಿದ್ದರು. ಈ ಸಂದರ್ಭದಲ್ಲಿ ಇಂದ್ರಣ್ಣಾ ಮೈಲೂರು ಅಣ್ಣೆಪ್ಪ ಇಸ್ಲಾಂಪೂರ ರೇವಪ್ರಾ ಪಾಟೀಲ ವಿರಶೆಟ್ಟಿ ಪಾಟೀಲ ನೀಲಕಂಠ ಇಸ್ಲಾಂಪೂರ ಆನಂದ ಸಾಗರ ನಾರಾಯಣಪೂರ ಶ್ರೀನಿವಾಸ ರೆಡ್ಡಿ ಕಂಠಯ್ಯಾ ಸ್ವಾಮಿ ಮಲ್ಲುರೆಡ್ಡಿ ಅಶೋಕ ಚೌದ್ರಿ ಸಿದ್ದಪ್ಪ ವಾಲಿ ಕಲ್ಲಯ್ಯಾ ಸ್ವಾಮಿ ಅಪಾರ ಭಕ್ತ ಸಮೂಹ ಭಾಗವಹಿಸಿತ್ತು.
ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ 'ಡಾ. ಮಹೇಶ್ ಜೋಶಿಯನ್ನು ಅಮಾನತ್ತು ಮಾಡಿ ಕನ್ನಡ ಸಾಹಿತ್ಯ ಪರಿಷತ್ತು ಉಳಿಸಿ" ಆಂದೋಲನಕ್ಕೆ ಕರೆ.
ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ 'ಡಾ. ಮಹೇಶ್ ಜೋಶಿಯನ್ನು ಅಮಾನತ್ತು ಮಾಡಿ ಕನ್ನಡ ಸಾಹಿತ್ಯ ಪರಿಷತ್ತು ಉಳಿಸಿ" ಆಂದೋಲನಕ್ಕೆ ಕರೆ.
ಜೂನ್ 21 ರಂದು 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ: ಜಿಲ್ಲಾಧಿಕಾರಿ ಎ.ಬಿ ಬಸವರಾಜು
ಜಿಲ್ಲೆಯಲ್ಲಿಯೇ ಪ್ರಥಮ ಮಾದರಿ ಕ್ರೀಡೆ ಲ್ಯಾಬ್ ಕ್ರೀಡೋ ಲ್ಯಾಬ್ ನಿಂದ ಮಕ್ಕಳ ಕಲಿಕಾ ಸಾಮರ್ಥ್ಯ ವೃದ್ಧಿ: ಡಾ.ತಿಮ್ಮಣ್ಣಾ ಆರಳೀಕಟ್ಟಿ
ದೇವದರ್ಗ ಉದ್ಯೋಗ ಖಾತ್ರಿ ಅಕ್ರಮ: ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ, ಸಿಬಿಐ ತನಿಖೆಗೆವಹಿಸಲು ರಾಜ್ಯಪಾಲರಿಗೆ ದೂರು