
8th June 2025
ಡಾ. ಟಿ. ತ್ಯಾಗರಾಜು ಅವರಿಗೆ "ಧ್ವನಿ ಕೊಟ್ಟ ಧಣಿ ಪ್ರಶಸ್ತಿ”
ಮೈಸೂರು- ಕನ್ನಡ ಕವಿ ರಕ್ತ ದಾನಿ ಅಭಿಯಂತರರು,
ಉಪಾಧ್ಯಕ್ಷರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು
ಮೈಸೂರು, ಅಧ್ಯಕ್ಷರು, ಕಲಾ ಸಂಗಮ ಮೈಸೂರು,
ಗಾಯಕ ಸಮಾಜ ಸೇವಕ, ಅಧ್ಯಕ್ಷರು, ಕನ್ನಡ ಭವನ
ಚುಟುಕು ಸಾಹಿತ್ಯ ಪರಿಷತ್ತು ಮೈಸೂರು, ಕರ್ನಾಟಕ
ರಾಜ್ಯ ಸಂಚಾಲಕರು ಗಡಿನಾಡು ಕಾಸರಗೋಡು..
ಮೈಸೂರಿನ ಡಾ. ಟಿ ತ್ಯಾಗರಾಜು ಇವರಿಗೆ ಆತ್ಮಶ್ರೀ
ಕನ್ನಡ ಸಾಂಸ್ಕೃತಿಕ ಪ್ರತಿಷ್ಟಾನ ಬೆಂಗಳೂರು ವತಿಯಿಂದ 09-06-2025 ರಂದು
"ಧ್ವನಿ ಕೊಟ್ಟ ಧಣಿ ಪ್ರಶಸ್ತಿ" ಯನ್ನು ಅರಸು ಜಾಗೃತಿ ಟ್ರಸ್ಟ್ ಅಕಾಡೆಮಿ
ಮೈಸೂರುರವರು ನೀಡುತ್ತಿದ್ದು 'ಜನಮಿಡಿತ' ಬರಹಗಾರರಾದ ಇವರಿಗೆ
'ಜನಮಿಡಿತ' ಪತ್ರಿಕೆ ಬಳಗವು ಅಭಿನಂದನೆ ಕೋರುತ್ತದೆ.
8th June 2025
ಧಾರವಾಡ- ನಾಟ್ಯ ಸ್ಪೂರ್ತಿ ಆರ್ಟ್ ಮತ್ತು ಕಲ್ಚರ್ ಅಕಾಡೆಮಿ ಧಾರವಾಡ ಇವರು
ಕಳೆದ 15 ವರ್ಷಗಳಿಂದ ನಾಟ್ಯ ತರಬೇತಿಯಲ್ಲಿ ಹಲವಾರು ವಿದ್ಯಾರ್ಥಿಗಳಿಗೆ ತರಬೇತಿಯನ್ನ ಕೊಟ್ಟು ಸಂಸ್ಥೆಯನ್ನು ನಡೆಸುತ್ತಾ ಬಂದಿರುವ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಸದಾನಂದ ಸ್ ಬಂಗಣ್ಣವರ್ ಇದೇ ವರ್ಷ ರಾಜ್ಯಮಟ್ಟದ ಶ್ರೀ ಬಸವ ಶ್ರೀ ಸೇವಾ ರಾಜ್ಯಮಟ್ಟದ ಪ್ರಶಸ್ತಿ ಕಾರ್ಯಕ್ರಮವನ್ನು ರವಿವಾರ ದಿ.
15/06/2025 ರಂದು ಧಾರವಾಡದ ಆಲೂರು ವೆಂಕಟರಾವ್ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಆಸಕ್ತರು ಮೊ. 9945752588 ಮೂಲಕ ಸಂಪರ್ಕಿಸಬಹುದು.