


6th March 2026
ನೇಸರಗಿ- ಸಮೀಪದ ಮಾಸ್ತಮರ್ಡಿ ಗ್ರಾಮದಲ್ಲಿ ಪ್ರಭುಲಿಂಗೇಶ್ವರ ಜಾತ್ರಾ ಮಹೋತ್ಸವ ಹಾಗೂ ನೂತನ ರಥೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಗುರುವಾರ ಬಿಡುಗಡೆಗೊಳಿಸಲಾಯಿತು.
ಜಾತ್ರೆಯ ಸಂಪೂರ್ಣ ವಿವರವನ್ನು ಮಾಸ್ತಮರ್ಡಿ ಜಗದ್ಗುರು ಪ್ರಭುದೇವರ ಸಂಸ್ಥಾನ ಗದ್ದುಗೆಮಠದ ಡಾ.ವೀರಪ್ರಭು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಒದಗಿಸಿ ಪತ್ರಕರ್ತರೊಂದಿಗೆ ಮಾತನಾಡಿ, ದಿ.೭ ರಂದು ಮುಂಜಾನೆ ಕಳಸಾರೋಹಣ ಹಾಗೂ ಗ್ರಾಮದಿಂದ ಪ್ರಭುದೇವರ ಮಠದವರೆಗೆ ಸಕಲ ವಾದ್ಯ ಮೇಳದೊಂದಿಗೆ ಮೆರವಣಿಗೆ ೧೧ಕ್ಕೆ ನೂತನ ದ್ವಾರಬಾಗಿಲು ಹಾಗೂ ದಾಸೋಹದ ಮಹಾಮನೆ ಉದ್ಘಾಟನೆ ದಿ.೮ ರಂದು ಬೆಳಗ್ಗೆ ೭ ಗಂಟೆಗೆ ಧ್ವಜಾರೋಹಣ ೮ ಗಂಟೆಗೆ ರುದ್ರ ಹೋಮ ಮಹಾರುದ್ರಾಭಿಷೇಕ ಮತ್ತು ನೈವೇದ್ಯ ಮದ್ಯಾಹ್ನ ೧೨ ಗಂಟೆಗೆ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ರಾತ್ರಿ ೮ ಗಂಟೆಗೆ ಭಜನಾ ಮತ್ತು ಸಂಗೀತ ಕಾರ್ಯಕ್ರಮ ನಡೆಯಲಿದೆ.
ದಿ. ೯ ರಂದು ಬೆಳಗ್ಗೆ ೯ ಗಂಟೆಗೆ ಕುಂಭಮೇಳ ಹಾಗೂ ಪಲ್ಲಕ್ಕಿ ಉತ್ಸವ ದೊಂದಿಗೆ ಶ್ರೀಗಳ ಮೆರವಣಿಗೆ ಗ್ರಾಮದಿಂದ ಪ್ರಭುದೇವರ ಮಠದವರೆಗೆ ಶ್ರೀಗಳ ಮೆರವಣಿಗೆ, ಮಧ್ಯಾಹ್ನ ೧ ಸಾಮೂಹಿಕ ವಿವಾಹಗಳು ಜರುಗುವವು. ಮಧ್ಯಾಹ್ನ ೨ ಗಂಟೆಗೆ ಗಂಟೆಗೆ ಧರ್ಮಸಭೆ, ಸಾಯಂಕಾಲ ೪ ಗಂಟೆಗೆ ಹಲವಾರು ಮಠಾಧೀಶರಿಂದ ನೂತನ ತೆರಿಗೆ ಲೋಕಾರ್ಪಣೆಗೊಳ್ಳುವುದು. ಸಂಜೆ ೪ ಕ್ಕೆ ರಥೋತ್ಸವ ನಡೆಯಲಿದೆ ಎಂದು ತಿಳಿಸಿದರು.
ಜಾತ್ರಾ ಕಾರ್ಯಕ್ರಮ ದಲ್ಲಿ
ಅಂಕಲಗಿ ಅಮರಶಿದ್ದೇಶ್ವರ ಶ್ರೀಗಳು, ಹಣಬರಹಟ್ಟಿಯ ಬಸವಲಿಂಗ ಶಿವಾಚಾರ್ಯರು, ಮಲ್ಲಾಪೂರ ಚಿದಾನಂದ ಶ್ರೀಗಳು, ಮಮದಾಪೂರದ ಮೌನ ಮಲ್ಲಿಕಾರ್ಜುನ ಶ್ರೀಗಳು, ಬಳ್ಳಾರಿ ಗುರುಲಿಂಗಾನಂದ ಶ್ರೀಗಳು, ಕಾದ್ರೋಳ್ಳಿ ಶಿವಯೋಗಿ ಪಾಲಾಕ್ಷ ಶ್ರೀಗಳು, ಬೈಲಹೊಂಗಲ ಆರಾದ್ರಿಮಠದ ಮಹಾಂತಯ್ಯ ಸ್ವಾಮೀಜಿ, ಬೈಲಹೊಂಗಲ ಬಗಳಾಂಬಾಮಠದ ಶ್ರೀಗಳು, ಹಾರುಗೊಪ್ಪ ಅಮ್ಮನವರು, ಜಕನಾಯ್ಕನಕೊಪ್ಪ ಅಮ್ಮನವರು, ಪಾಲ್ಗೊಳ್ಳುವರು.
ಈ ಸಂದರ್ಭದಲ್ಲಿ ಮಲ್ಲಪ್ಪ ಮುತ್ತೆನ್ನವರ, ಶಂಕರೆಪ್ಪ ಈರಣ್ಣವರ, ಸಿದ್ದಪ್ಪ ಮಿಂಡೊಳ್ಳಿ, ಉದ್ದಪ್ಪ ಕೊಮಾರ, ಸಿದ್ದಮಲ್ಲಪ್ಪ ತಳವಾರ, ಯಲ್ಲಪ್ಪ ನಾಯಕ, ಯಲ್ಲಗೊಂಡಪ್ಪ ಆಡಿನ, ಬಸವಣೆಪ್ಪ ಕುಮರಿ, ಭೀಮಶಿ ಈರೈನ್ನವರ, ಮಲ್ಲೇಶ ಚಿಕ್ಕೋಡಿ, ಪತ್ರಕರ್ತ ಭೀಮಸೇನ ಕಮ್ಮಾರ , ಇನ್ನಿತರರು ಉಪಸ್ಥಿತರಿದ್ದರು.

1st March 2026
ನೇಸರಗಿ - ಸಮೀಪದ ನಾಗನೂರಿನ ಕವಿ ಯಿತ್ರಿ ಜಾನಕಿ ಭದ್ರನ್ನವರ ಅವರ 'ಬೃಂದಾವನ' ಕೃತಿಯನ್ನು
ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು ಅವರು ಯುಗಪುರುಷ ಕಿನ್ನಿಗೋಳಿ ಆಶ್ರಯದಲ್ಲಿ ಕಥಾಬಿಂದು ಪ್ರಕಾಶನದ ಸಾರಥ್ಯದಲ್ಲಿ ನಡೆದ ಸಾಹಿತ್ಯಾವಲೋಕನ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಲಾಯಿತು.
ಯುಗಪುರುಷದ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ ಕಾರ್ಯಕ್ರಮ ಉದ್ಘಾಟಿಸಿದರು. ಕೊಡೆತ್ತೂರು ಭುವನಾಭಿರಾಮ ಉಡುಪ, ಶ್ರೀಪತಿ ಭಟ್, ಗೋವಿಂದ ಭಟ್, ಲಕ್ಷ್ಮಣ್ ಕೊಳ್ಚಪ್ಪ ಗೋವಿಂದ ಭಟ್, ಕೆ.ವಿ.ಲಕ್ಷ್ಮಣ್ ಮೂರ್ತಿ, ಪ್ರದೀಪ್ ಕುಮಾರ ಕಲ್ಕೂರ, ಕಸ್ತೂರಿ ಪಂಜ, ಜೊಸ್ಸಿ ಪಿಂಟೊ, ಜಯಾನಂದ ಪೆರಾಜೆ, ಪ್ರದೀಪ್ ಕುಮಾರ್,ಡಾ.ಸತೀಶ್ ಎನ್.ಬಂಗೇರ, ಶರತ್ ಶೆಟ್ಟಿ ಉಪಸ್ಥಿತರಿದ್ದರು.

26th February 2026
ಕಾಸರಗೋಡು- ಕೇರಳ ರಾಜ್ಯದ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ವಾರ್ಷಿಕೋತ್ಸವದಂಗವಾಗಿ ಕೇರಳ ರಾಜ್ಯದ ಕಾಸರಗೋಡಿನ ಕನ್ನಡ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಂಗಳೂರಿನ ವೈದ್ಯ, ಗಜಲ್ ಕವಿ ಡಾ.ಡಾ ಸುರೇಶ ನೆಗಳಗುಳಿ
ಇವರಿಗೆ ಕವಿ ಕಾವ್ಯ ವಿಭೂಷಣ ರಾಷ್ಟ್ರೀಯ ಪ್ರಶಸ್ತಿ
ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಶ್ರೀ ಮದಡೆನೀರು ಮಠಾಧೀಶ ಸಚ್ಚಿದಾನಂದ ಭಾರತೀ ಶ್ರೀಪಾದಂಗಳು, ಗೋನಾಳದ ರಮೇಶ ಸ್ವಾಮೀಜಿ, ಸಮ್ಮೇಳನಾಧ್ಯಕ್ಷ ನಾಡೋಜ ಡಾ.ಕೃಷ್ಣಪ್ರಸಾಧ ಕೂಡ್ಲ, ಚುಟುಕು ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿ ಗೌರವಾಧ್ಯಕ್ಷ ಪ್ರದೀಪಕುಮಾರ ಕಲ್ಕೂರ, ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಡಾ.ಕೆ.ಎನ್.ವೆಂಕಟರಮಣ ಹೊಳ್ಳ, ಕನ್ನಡ ಭವನ ಸ್ಥಾಪಕ ಅಧ್ಯಕ್ಷ ಡಾ. ವಾಮನ್ ರಾವ್ ಬೇಕಲ್ ಹಾಗೂ ಕಾರ್ಯದರ್ಶಿ ವಸಂತ್ ಕೆರೆಮನೆ, ಸಂದ್ಯಾ ಬೆಕಲ್, ಪ್ರದೀಪಕುಮಾರ್ ಬೆಕಲ್, ಪಿ.ವಿ.ಪ್ರದೀಪಕುಮಾರ,
ಶಾಂತಾ ಪುತ್ತೂರ,ಡಾ.ಗೋವಿಂದ ಕೊಳ್ಚಪೆ, ಡಾ.ತಮ್ಮನಗೌಡ್ರ, ಶಿಕ್ಷಕ ಸಂಘದ ಮುಖಂಡ ರಾಮಕೃಷ್ಣ ಶಿರೂರ, ಗಣ್ಯರ ಸಮ್ಮುಖದಲ್ಲಿ ಇವರಿಗೆ "ಕವಿ ಕಾವ್ಯ ವಿಭೂಷಣ "ಪ್ರಶಸ್ತಿ ನೀಡಿ ಗೌರವಿಸಲಾಯಿತು.
-1772078707501.jpg)
26th February 2026
ಕಾಸರಗೋಡು- ಪುರಾತನ ಭಾಷೆಗಳಲ್ಲೊಂದಾದ ಕನ್ನಡ ಭಾಷೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರಿಗಿದೆ. ಗಡಿನಾಡು ಕಾಸರಗೋಡಿನಲ್ಲಿ ಕನ್ನಡ ಭಾಷೆ, ಸಂಸ್ಕೃತಿಗೆ ಗದಾಪ್ರಹಾರ ಬೀಳುತ್ತಿದ್ದರೂ ಅವುಗಳನ್ನೆಲ್ಲ ಮೆಟ್ಟಿನಿಂತು ಕನ್ನಡ ಭಾಷೆ, ಸಂಸ್ಕೃತಿ ಉಳಿಸಲು ವಿವಿಧ ಯೋಜನೆಗಳನ್ನು ಕಾರ್ಯಗತಗೊಳಿಸುವ ಕನ್ನಡ ಭವನದ ಕನ್ನಡ ಕಾಯಕ ಅಭಿನಂದನಾರ್ಹ ಎಂದು ಎಡನೀರು ಮಠಾಧೀಶ ಶ್ರೀ ಸಚ್ಚದಾನಂದ ಭಾರತೀ ಶ್ರೀಪಾದರು ಹೇಳಿದರು.
ಕನ್ನಡ ಭವನ ಮತ್ತು ಗ್ರಂಥಾಲಯದ ನೇತೃತ್ವದಲ್ಲಿ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ನ ವಾರ್ಷಿಕೋತ್ಸವದ ಅಂಗವಾಗಿ ಕನ್ನಡ ಭವನದಲ್ಲಿ ಆಯೋಜಿಸಿದ ಕಾಸರಗೋಡು-ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ ಅವರು ಆಶೀರ್ವಚನ ನೀಡಿದರು.
ಲಕ್ಷೇಶ್ವರ ಗೋನಾಳದ ಶ್ರೀ ರಮೇಶ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಕನ್ನಡ ಭವನ ನಿರ್ದೇಶಕ ಡಾ| ಕೆ.ಎನ್. ವೆಂಕಟ್ರಮಣ ಹೊಳ್ಳ ದೀಪ ಪ್ರಜ್ವಲನೆಗೈದರು. ಕನ್ನಡ ಚು.ಸಾ.ಪ.ದ.ಕ. ಜಿಲ್ಲಾ ಘಟಕ ಅಧ್ಯಕ್ಷ ಡಾ| ಕೊಳ್ಚಪ್ಪೆ ಗೋವಿಂದ ಭಟ್ ದ್ಘಾಟಿಸಿದರು.
ನಾಡೋಜ ಡಾ| ಕೃಷ್ಣಪ್ರಸಾದ್ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದರು. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ದ.ಕ. ಜಿಲ್ಲೆಯ ನಿಕಟಪೂರ್ವ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಕನ್ನಡ ಕಟ್ಟಾಳು ನಂ. ವಿಜಿ ಕುಮಾರ್, ಸಾಹಿತಿ ಡಾ| ಸುರೇಶ್ ನೆಗಳಗುಳಿ, ಚು.ಸಾ.ಪ.ದ.ಕ. ಜಿಲ್ಲೆ ಗೌರವಾಧ್ಯಕ್ಷ ಇರಾನೇಮು ಪೂಜಾರಿ, ಕನ್ನಡ ಭವನ ಗದಗ ಜಿಲ್ಲಾಧ್ಯಕ್ಷ ಡಾ| ಸಂ..ವೆA. ತಮ್ಮನ ಗೌಡ್ರ, ಜಯಾನಂದ ಪೆರಾಜೆ, ಡಾ| ಶಾಂತಾ ಪುತ್ತೂರು, ದ.ಕ. ಜಿಲ್ಲಾ ಕನ್ನಡ ಚು.ಸಾ.ಪ. ಗೌರವಾಧ್ಯಕ್ಷೆ ಸತ್ಯವತಿ ಭಟ್ ಕೊಳಚಪ್ಪು, ಕೊಡಗು ಜಿಲ್ಲಾ ಚು.ಸಾ.ಪ. ಅಧ್ಯಕ್ಷೆ ರುಬೀನಾ ಎಂ.ಎ, ಪಿ.ವಿ. ಪ್ರದೀಪ್ ಕುಮಾರ್, ರೇಖಾ ಸುಧೇಶ್ ರಾವ್, ಸಂಘಟನಾ ಕಾರ್ಯದರ್ಶಿ ಶಾರದಾ ಮೊಳೆಯಾರ್ , ಬೆಳಗಾವಿ ಪತ್ರಕರ್ತ ಸಿ.ವಾಯ್.ಮೆಣಸಿನಕಾಯಿ ಮೊದಲಾದವರು ಉಪಸ್ಥಿತರಿದ್ದರು.
ಕನ್ನಡ ಭವನ ಸಂಸ್ಥಾಪಕ ಡಾ| ವಾಮನ್ ರಾವ್ ಬೇಕಲ್ ಪ್ರಸ್ತಾವಿಸಿ, ಕಾಸರಗೋಡು ಜಿಲ್ಲಾ ಚು.ಸಾ.ಪ. ಅಧ್ಯಕ್ಷ ವಿರಾಜ್ ಅಡೂರು ಕಾರ್ಯಕ್ರಮ ನಿರೂಪಿಸಿದರು, ವಿಶಾಲಾಕ್ಷ ಪುತ್ರಕಳ ಸ್ವಾಗತಿಸಿದರು.
ಸಮ್ಮೇಳನ ಆರಂಭಕ್ಕೆ ಮುನ್ನ ಶ್ರೀ ಲಕ್ಷö್ಮಣಾನಂದ ಸರಸ್ವತೀ ಮಹಿಳಾ ಭಜನಾ ವೃಂದ ಅಣಂಗೂರು ಇವರಿಂದ ಭಜನೆ ಸಂಕೀರ್ತನೆ ನಡೆಯಿತು.
ನಗರದ ಶ್ರೀ ಧೂಮಾವತಿ ದೈವಸ್ಥಾನ ಪರಿಸರದಿಂದ ಸಮ್ಮೇಳನ ಸರ್ವಾಧ್ಯಕ್ಷರಾರ ಡಾ| ಕೃಷ್ಣಪ್ರಸಾದ್ ಅವರಿಗೆ ಸಮ್ಮೇಳನಾಧ್ಯಕ್ಷ ಡಾ| ಕೆ.ಎನ್. ವೆಂಕಟ್ರಮಣ ಹೊಳ್ಳ ಹಾರಾರ್ಪಣೆ ಗೈದು “ಕನ್ನಡ ಮೆರವಣಿಗೆ”ಗೆ ನೇತೃತ್ವ ನೀಡಿದರು. ಕ.ಸಾ.ಪ. ಕೇರಳ ಗಡಿನಾಡ ಘಟಕಾಧ್ಯಕ್ಷರಾದ ಡಾ| ಜಯಪ್ರಕಾಶ್ ನಾರಾಯಣ್ ತೊಟ್ಟೆತ್ತೋಡಿ ಮರವಣಿಗೆ ಉದ್ಘಾಟಿಸಿ ಮಾತನಾಡಿದರು.
ಸಮ್ಮೇಳನದಲ್ಲಿ ಸ್ವಾಮೀಜಿ ದ್ವಯರಿಗೆ ಶಾಲು, ಫಲಪುಷ್ಪ, ಸ್ಮರಣಿಕೆ, ಫಲಕಗಳಿಂದ ಗೌರವಾರ್ಪಣೆ ಮಾಡಲಾಯಿತು. 2 ಪುಸ್ತಕ ಬಿಡುಗಡೆ, 20 ಕವಿಗಳಿಗೆ ಕವಿ ಕಾವ್ಯ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಶ್ರೀ ಗುರುರಾಜ್ ಕಾಸರಗೋಡು ಸಾರಥ್ಯದ ಗಡಿನಾಡ ಸಾಂಸ್ಕೃತಿಕ ಕಲಾ ವೇದಿಕೆ(ರಿ) ತಂಡದಿಂದ ನೃತ್ಯ ವೈಭವ ನಡೆಯಿತು.
ಶ್ರೀ ವಿರಾಜ ಅಡೂರು ಇವರ ಅಧ್ಯಕ್ಷತೆಯಲ್ಲಿ ಸುಮಾರು 50 ಮಂದಿ ಕವಿಗಳಿಂದ ಅಂತಾರಾಜ್ಯ ಕವಿಗೋಷ್ಠಿ ನಡೆಯಿತು.
ಗಡಿನಾಡ ಚೇತನ ಪ್ರಶಸ್ತಿ ಪುರಸೃತರಾದ ಹಿರಿಯ ಸಾಹಿತಿ ಶ್ರೀ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಬಿ.ಜೆ.ಪಿ. ಕ್ಯಾಲಿಕೆಟ್ ರೀಜನ್ ಅಧ್ಯಕ್ಷರಾದ ಅಡ್ವ.j ಕೆ.ಶ್ರೀಕಾಂತ್ ಮುಖ್ಯ ಅಥಿತಿಯಾಗಿ ಭಾಗವಹಿಸಿ ಕನ್ನಡದ ಅಸ್ತಿತ್ವಕ್ಕಾಗಿ ಹೋರಾಡಿದನ್ನು ನೆನಪಿಸಿಕೊಂಡರು. 20 ಮಂದಿ ಕವಿಗಳಿಗೆ ಚುಟುಕು ಸಿರಿ ರತ್ನ ಪ್ರಶಸ್ತಿಯನ್ನು ನೀಡಲಾಯಿತು.

25th February 2026
ಬೆಳಗಾವಿ- ಕೇರಳ ರಾಜ್ಯದ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ವಾರ್ಷಿಕೋತ್ಸವದಂಗವಾಗಿ ಕೇರಳ ರಾಜ್ಯದ ಕಾಸರಗೋಡಿನ ಕನ್ನಡ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಹೋರಾಟಗಾರ, ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಸಂಚಾಲಕರಾದ ಬೆಂಗಳೂರಿನ ನಂ.ವಿಜಯ ಕುಮಾರ ಇವರಿಗೆ ‘ಕನ್ನಡ ಕಟ್ಟಾಳು ವಿಶೇಷ ಪ್ರಶಸ್ತಿ ೨೦೨೬’ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಶ್ರೀ ಮದಡೆನೀರು ಮಠಾಧೀಶ ಸಚ್ಚಿದಾನಂದ ಭಾರತೀ ಶ್ರೀಪಾದಂಗಳು, ಗೋನಾಳದ ರಮೇಶ ಸ್ವಾಮೀಜಿ, ಸಮ್ಮೇಳನಾಧ್ಯಕ್ಷ ನಾಡೋಜ ಡಾ.ಕೃಷ್ಣಪ್ರಸಾಧ ಕೂಡ್ಲ, ಚುಟುಕು ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿ ಗೌರವಾಧ್ಯಕ್ಷ ಪ್ರದೀಪಕುಮಾರ ಕಲ್ಕೂರ, ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಡಾ.ಕೆ.ಎನ್.ವೆಂಕಟರಮಣ ಹೊಳ್ಳ, ಕನ್ನಡ ಭವನ ಸ್ಥಾಪಕ ಅಧ್ಯಕ್ಷ ಡಾ. ವಾಮನ್ ರಾವ್ ಬೇಕಲ್ ಹಾಗೂ ಕಾರ್ಯದರ್ಶಿ ವಸಂತ್ ಕೆರೆಮನೆ, ಸಂದ್ಯಾ ಬೆಕಲ್, ಪ್ರದೀಪಕುಮಾರ್ ಬೆಕಲ್, ಪಿ.ವಿ.ಪ್ರದೀಪಕುಮಾರ,
ಶಾಂತಾ ಪುತ್ತೂರ, ಡಾ.ಸುರೇಶ ನೆಲಗುಳಿ, ಡಾ.ಗೋವಿಂದ ಕೊಳ್ಚಪೆ, ಡಾ.ತಮ್ಮನಗೌಡ್ರ ಪತ್ರಕರ್ತ ಸಿ.ವಾಯ್.ಮೆಣಸಿನಕಾಯಿ, ಶಿಕ್ಷಕ ಸಂಘದ ಮುಖಂಡ ರಾಮಕೃಷ್ಣ ಶಿರೂರ, ಗಣ್ಯರ ಸಮ್ಮುಖದಲ್ಲಿ ಇವರಿಗೆ "ಕವಿ ಕಾವ್ಯ ವಿಭೂಷಣ "ಪ್ರಶಸ್ತಿ ನೀಡಿ ಗೌರವಿಸಲಾಯಿತು.

25th February 2026
ಬೈಲಹೊಂಗಲ - ಸಮೀಪದ ಇಂಚಲ ಗ್ರಾಮದಲ್ಲಿ ಜಿಲ್ಲಾ ಪಂಚಾಯತಿ ಬೆಳಗಾವಿ ತಾಲೂಕ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರು ಇಂದು ಮೆಟ್ರಿಕ್ ನಂತರ ಬಾಲಕರ ವಸತಿ ನಿಲಯ ಇಂಚಲ ಬಿ ಸಿ ಡಬ್ಲ್ಯೂ ಡಿ 1642 ಇದರ ನೂತನ ಕಟ್ಟಡ ಪೂಜಾ ಕಾರ್ಯಕ್ರಮವನ್ನು ರಿಬ್ಬನ್ ಕಟ್ ಮಾಡುವುದರ ಮೂಲಕ ಉದ್ಘಾಟನೆ ಮಾಡಿದರು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪರಮ ಪೂಜ್ಯ ಪೂರ್ಣಾನಂದ ಭಾರತಿ ಸ್ವಾಮೀಜಿಗಳು ಇಂಚಲ ಶ್ರೀ ಶಿವಾನಂದ ಭಾರತಿ ಶಿಕ್ಷಣ ಸಂಸ್ಥೆಯ ಆಡಳಿತ ಅಧಿಕಾರಿಗಳು ಇವರು ವಹಿಸಿದ್ದರು. ಹಾಗೂ ಬೈಲಹೊಂಗಲ ಜನಪ್ರಿಯ ಶಾಸಕರಾದ ಮಹಾಂತೇಶ ಶಿ. ಕೌಜಲಗಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಹಾಸ್ಟೆಲ ಕಟ್ಟಡ ಸುಂದರವಾಗಿ ಸುಸರ್ಜಿತವಾಗಿ ಹಾಗೂ ವಾತಾವರಣ ಅತ್ಯುತ್ತಮವಾಗಿದೆ ಇದು ನಿಮಗೆ ಒಂದು ದೇವಸ್ಥಾನ ಇದ್ದಹಾಗೆ ಇದನ್ನು ಎಷ್ಟು ನೀವು ಸ್ವಚ್ಛವಾಗಿ ಇಟ್ಟುಕೊಳ್ಳುತ್ತೀರೋ ಅಷ್ಟು ನಿಮಗೆ ಮುಂದೆ ಒಂದು ಒಳ್ಳೆಯ ಶಿಕ್ಷಣ ಉದ್ಯೋಗ ಸಿಗುತ್ತದೆ ಮುಂಬರುವ ದಿನಗಳಲ್ಲಿ ಇನ್ನೂ ಅತಿ ಹೆಚ್ಚಿನ ಕೆಲಸವನ್ನು ಮಾಡಿ ಕೊಡುತ್ತೇನೆ ಎಂದು ಶಾಸಕರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಮಾಜಿ ಪುರಸಭೆಯ ಅಧ್ಯಕ್ಷರು ಶ್ರೀ ರಾಜು ಜನ್ಮಟ್ಟಿ ಸಿ ಎಸ್ ರಾಯನಾಯ್ಕರ ಪಿಕೆಪಿಎಸ್ ಅಧ್ಯಕ್ಷರು ಇಂಚಲ. ಗ್ರಾಮದ ಹಿರಿಯರಾದಂತ ಬಸಪ್ಪ ಮಲ್ಲೂರ. ಅನಿಲ್ ಎಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು CDPO ಬೈಲಹೊಂಗಲ ಆರೋಗ್ಯ ಅಧಿಕಾರಿಗಳು PHC ಇಂಚಲ ಅಧ್ಯಕ್ಷತೆಯನ್ನು ಎಂ ಚಿನಗುಡಿ ತಾಲೂಕ ಕಲ್ಯಾಣ ಅಧಿಕಾರಿಗಳು ಹಿಂದುಳಿದ ವರ್ಗಗಳ ಇಲಾಖೆ ಬೈಲಹೊಂಗಲ ಕಟ್ಟಡದ ಗುತ್ತಿಗೆದಾರರು ಶ್ರೀ ಶಿವಾನಂದ್ ಕಾಗತಿಕರ
ನಿಲಯದ ಪಾಲಕರು ಶ್ರೀ ಎಸ್ ಜಿ ಸಿಂಗಾರಗೂಪ್ಪ ಕಾರ್ಯಕ್ರಮ ನಿರೂಪಣೆಯನ್ನು ಶ್ರೀ ಪಿ ಎಫ್ ಗುಮ್ಮಗೋಳ ವಂದನಾರ್ಪಣೆಯನ್ನು ಎಮ್ ಎ ತಹಶೀಲ್ದಾರ್. ಇಂಚಲ ಗ್ರಾಮದ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳಾದ ಮಲ್ಲಪ್ಪ ಹಾರೋಗೊಪ್ಪ ಗ್ರಾಮ ಪಂಚಾಯತಿಯ ಸದಸ್ಯರಾದ ಮುನೀರ ಮಿರ್ಜನ್ನವರ್, ಶಿವಪ್ಪ ಜಕಾತಿ, ಮುದುಕಪ್ಪ ಕರಾಡಿ ಮತ್ತು ಗ್ರಾಮದ ಗುರುಹಿರಿಯರು ಸವದತ್ತಿ ಹಾಗೂ ಬೈಲಹೊಂಗಲ ತಾಲೂಕಿನ ನಿಲಯ ಪಾಲಕರ/ನಿಲಯ ಮೇಲ್ವಿಚಾರಕರು, ಹಾಸ್ಟೆಲಿನ ವಿದ್ಯಾರ್ಥಿಗಳು ಅಡುಗೆಯವರು ಅಡುಗೆ ಸಹಾಯಕರು ಎಲ್ಲರೂ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ವರದಿ- ಬಸವರಾಜ ಲಕ್ಕನ್ನವರ ಬೈಲಹೊಂಗಲ

19th February 2026
ಬೆಳಗಾವಿ- ಜಂಬಗಿ ಸೂಪರ್ ಸ್ಪೆಷಾಲಿಟಿ ನೇತ್ರ ಸಂಸ್ಥೆ ಹಾಗೂ ಬೆಳಗಾವಿ ಲೇಸರ್ ಮತ್ತು ಕಾಂಟ್ಯಾಕ್ಟ್ ಲೆನ್ಸ್ ಕ್ಲಿನಿಕ್ ಬೆಳಗಾವಿಯಲ್ಲಿ ೨೨/೦೨/೨೦೨೬ ರಂದು ಉದ್ಘಾಟನೆಗೊಳೃಲಿದೆ. ವಿಶ್ವಮಟ್ಟದ ದೃಷ್ಟಿ ಆರೈಕೆ ಇದೀಗ ನಿಮ್ಮೂರಲ್ಲೆ,
``ದೂರದ ನಗರಗಳಿಗೆ ಪ್ರಯಾಣಿಸದೇ, ಬೆಳಗಾವಿಯಲ್ಲೇ ಜಾಗತಿಕ ಮಟ್ಟದ ಕಣ್ಣು ಚಿಕಿತ್ಸೆಯನ್ನು ಪಡೆಯುವ ಹಕ್ಕು ಬೆಳಗಾವಿಯ ಜನರಿಗೆ ಇದೆ,’’ ಎಂದು ಡಾ. ಅಮೋಘ ಲಕ್ಷ್ಮಣ ಜಂಬಗಿ ಅವರು ಹೇಳಿದರು. ``ಡಾ. ಲಕ್ಷ್ಮಣ ಜಂಬಗಿ ಮತ್ತು ಡಾ. ವರ್ಷಾ ಜಂಬಗಿ ಅವರ ೩೦ ವರ್ಷಗಳ ಸೇವಾ ಪರಂಪರೆಯ ಮೇಲೆ ನಿರ್ಮಿತವಾಗಿರುವ ಈ ಸಂಸ್ಥೆ, ಮಾನವೀಯ ಸೇವೆಯನ್ನು ಅತ್ಯಾಧುನಿಕ ತಂತ್ರಜ್ಞಾನದೊAದಿಗೆ ಸಂಯೋಜಿಸಿ, ರೋಗಿಗಳಿಗೆ ಅತಿ ಶೀಘ್ರ ಹಾಗೂ ಉತ್ತಮ ದೃಷ್ಟಿ ಫಲಿತಾಂಶವನ್ನು ಒದಗಿಸುತ್ತದೆ.’’
ಡಾ. ಲಕ್ಷ್ಮಣ ಜಂಬಗಿ ಮತ್ತು ಡಾ. ವರ್ಷಾ ಜಂಬಗಿ ಅವರ ರೋಗಿಗಳ ಸೇವಾ ಪರಂಪರೆಯನ್ನು ಮುಂದುವರೆಸುತ್ತಾ, ಡಾ. ಅಮೋಘ ಲಕ್ಷ್ಮಣ ಜಂಬಗಿ ಅವರ ನೇತೃತ್ವದಲ್ಲಿ ಬೆಳಗಾವಿಯಲ್ಲಿ ಜಂಬಗಿ ಸೂಪರ್ ಸ್ಪೆಷಾಲಿಟಿ ನೇತ್ರ ಸಂಸ್ಥೆ ಆರಂಭಗೊಳ್ಳಲಿದೆ. ೩೫,೦೦೦ ಚದರ ಅಡಿಗಳ ವಿಶಾಲ ಹಾಗೂ ಅತ್ಯಾಧುನಿಕ ಸೌಲಭ್ಯ ಹೊಂದಿರುವ ಈ ಸಂಸ್ಥೆ, ಒಂದೇ ಸೂರಿನಡಿ ಸಂಪೂರ್ಣ ಕಣ್ಣಿನ ಚಿಕಿತ್ಸೆಯನ್ನು ಒದಗಿಸುತ್ತದೆ. ಇದರಲ್ಲಿ ಕಣ್ಣಿನ ಮೋತಿ ಬಿಂದು (ಕ್ಯಾಟರಾಕ್ಟ್), ಕಾರ್ನಿಯಾ, ರೆಟಿನಾ, ಗ್ಲೂಕೋಮಾ, ಮಕ್ಕಳ ನೇತ್ರಚಿಕಿತ್ಸೆ, ಒಕ್ಯುಲೋಪ್ಲಾಸ್ಟಿ, ನ್ಯೂರೋ-ಆಫ್ತಾಲ್ಮಾಲಜಿ, ರಿಫ್ರಾಕ್ಟಿವ್ ಶಸ್ತçಚಿಕಿತ್ಸೆ ಸೇರಿದಂತೆ ವಿಶೇಷ ಡ್ರೆöÊ ಐ ಹಾಗೂ ಕಾಂಟ್ಯಾಕ್ಟ್ ಲೆನ್ಸ್ ಕ್ಲಿನಿಕ್ ಕೂಡ ಸೇರಿದೆ.
ನಮ್ಮ ಸಂಸ್ಥೆಯು ಈ ಪ್ರದೇಶದಲ್ಲೆ ಮೊದಲ ಬಾರಿಗೆ ರೋಬೋಟಿಕ್ ೪ಆ ಫ್ಯಾಕೋ ಕ್ಯಾಟರಾಕ್ಟ್ ಶಸ್ತçಚಿಕಿತ್ಸೆ ಹಾಗೂ ಕನ್ನಡಕ ಮುಕ್ತಿಗಾಗಿ ಜೈಸ್ಸ್ ಒಇಐ ೯೦ ಎಕ್ಸೆöÊಮರ್ ಲೇಸರ್ ತಂತ್ರಜ್ಞಾನವನ್ನು ಪರಿಚಯಿಸುತ್ತಿದೆ. ಈ ತಂತ್ರಜ್ಞಾನವು ಹೆಚ್ಚಿನ ನಿಖರತೆ, ಸುರಕ್ಷತೆ ಮತ್ತು ವೇಗವಾದ ಗುಣಮುಖತೆಯನ್ನು ಖಚಿತಪಡಿಸುತ್ತದೆ.
ಡಾ. ಅಮೋಘ ಜಂಬಗಿ ಅವರೊಂದಿಗೆ ವಿವಿಧ ಉಪವಿಭಾಗಗಳಲ್ಲಿ ಫೆಲೋಶಿಪ್ ಪಡೆದ ಪರಿಣತ ವೈದ್ಯರ ತಂಡವೂ ಕಾರ್ಯನಿರ್ವಹಿಸುತ್ತದೆ. ಡಾ. ಜಗದೀಶ ಪಾಟೀಲ, ಡಾ. ಹೇಮಂತ್, ಡಾ. ಸ್ನೇಹಾ ಬಂಡೂರ್ಗೆ ಹಾಗೂ ಡಾ. ಮಿತಾಲಿ ಶಾ ಸೇರಿದಂತೆ ತಜ್ಞ ವೈದ್ಯರು ಸೇರಿಕೊಂಡಿದ್ದು. ದಿನದ ೨೪ ಗಂಟೆಯೂ ಸಮಗ್ರ ನೇತ್ರ ಆರೈಕೆಯನ್ನು ಒದಗಿಸಲಿದ್ದಾರೆ.
ತಮ್ಮ ಸೇವಾ ಮೂಲ್ಯಗಳಿಗೆ ನಿಷ್ಠೆಯಾಗಿ, ಈ ಸಂಸ್ಥೆಯು ಉತ್ತಮ ಮಾದರಿಯ ಚಿಕಿತ್ಸೆಗಳು ಹಾಗೂ ಸಮುದಾಯ ಮಟ್ಟದ ಸೇವಾ ಕಾರ್ಯಕ್ರಮಗಳನ್ನು ನಡೆಸಲಿದ್ದು, ಸಮಾಜದ ಎಲ್ಲ ವರ್ಗದ ರೋಗಿಗಳಿಗೆ ಗುಣಮಟ್ಟದ ಕಣ್ಣು ಚಿಕಿತ್ಸೆ ದೊರಕುವಂತೆ ಮಾಡಲಿದೆ. ಸಂಸ್ಥೆಯ ಉದ್ಘಾಟನಾ ಸಮಾರಂಭಕ್ಕೆ ಗಣ್ಯ ವ್ಯಕ್ತಿಗಳು ಹಾಗೂ ಎಲ್ಲ ಸಮುದಾಯದ ನಾಯಕರ ಉಪಸ್ಥಿತಿ ಇರಲಿದ್ದು, ಬೆಳಗಾವಿ ಪ್ರದೇಶವು ವಿಶ್ವಮಟ್ಟದ ನೇತ್ರ ಆರೈಕೆ ಸುಲಭವಾಗಿ ಲಭಿಸುವ ಮಹತ್ವದ ಘಟ್ಟವಾಗಲಿದೆ.
ಹೆಚ್ಚಿನ ಮಾಹಿತಿಗಾಗಿ ನಮ್ಮ ಸಿಬ್ಬಂದಿಯೊAದಿಗೆ ಸಂಪರ್ಕಿಸಿರಿ: +೯೧ ೮೨೨೯೦ ೦೮೨೨೧ +೯೧ ೮೨೨೯೦ ೦೮೨೨೫

17th February 2026
ಕಾಸರಗೋಡು :ಫೆಬ್ರವರಿ 22ಭಾನುವಾರ ಬೆಳಿಗ್ಗೆ 7ರಿಂದ ರಾತ್ರಿ 10ಗಂಟೆವರೆಗೆ ನಡೆಯಲಿರುವ ಕಾಸರಗೋಡು -ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನ 2026.ರ ಆಮಂತ್ರಣ ಪತ್ರಿಕೆ 16.2.2026ಮಂಗಳವಾರ ಬೆಳಿಗ್ಗೆ ಎಡನೀರು ಶ್ರೀ ಮಠದಲ್ಲಿ, ಎಡನೀರು ಮಾಟಾಧಿಪತಿ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಗಳು ಬಿಡುಗಡೆ ಗೊಳಿಸಿ ಶುಭಾಶೀರ್ವಾದ ನೀಡಿದರು. ಭಾನುವಾರ, ನಾಡೋಜ ಡಾ. ಕೃಷ್ಣಪ್ರಸಾದ್ ಕೂಡ್ಲು ಸರ್ವಾಧ್ಯಕ್ಷತೆಯಲ್ಲಿ, ಡಾ. ವಾಮನ್ ರಾವ್ ಬೇಕಲ್ ಸಾರತ್ಯದ ಕನ್ನಡ ಭವನ ಪ್ರಾಯೋಜಕತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ. ಕನ್ನಡ ಭವನದ ಅಂಗ ಸಂಸ್ಥೆಯಾದ "ಕೇರಳ ರಾಜ್ಯ -ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ವರ್ಷಾಚರಣೆ ಪ್ರಯುಕ್ತ ಪರಿಷತ್ತಿನ ಜಿಲ್ಲಾ ಘಟಕಗಳ ಸಹಕಾರದಲ್ಲಿ ಸಮ್ಮೇಳನ ಆಯೋಜಿಸಲಾಗಿದೆ. ಬೆಳಿಗ್ಗೆ 7ರಿಂದ ಭಜನೆ. 8.30 ಗೆ ಸರ್ವಾಧ್ಯಕ್ಷರ ಮೆರವಣಿಗೆ, 9ಕ್ಕೆ ಉದ್ಘಾಟನೆ. ಶ್ರಿ ಶ್ರೀ ರಮೇಶ ಗುರೂಜಿ, ಗೋವಿನಾಳ ಗದಗ, ಹಾಗೂ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಜಿಗಳಿಂದ ಆಶೀರ್ವಚನ, ಸ್ವಾಮಿಜಿಗಳಿಗೆ ವಿಶೇಷ ಸಮ್ಮೇಳನ ಗೌರವ ಪ್ರದಾನ.. ಮಹಾನ್ ಕವಿ ಸಾಹಿತಿಗಳಿಗೆ "ಕವಿ ಕಾವ್ಯ ವಿಭೂಷಣ ರಾಷ್ಟ್ರೀಯ ಪ್ರಶಸ್ತಿ,. ಉಚಿತ ನೇತ್ರ ತಪಾಸಣಾ ಶಿಬಿರ, ಉಚಿತ ಸಾರ್ವಜನಿಕ ವಾಚನಾಲಯ ಲೋಕಾರ್ಪಣೆ, ಕವಿಗೋಷ್ಠಿ, ವಿಚಾರ ಸಂಕಿರಣ, ನ್ರಿತ್ಯ -ಗಾನ ವೈಭವ, ಪರಿಷತ್ತಿನ ಕಾರ್ಯಕರ್ತ, ಕವಿಗಳಿಗೆ "ಕವಿರತ್ನ ಪ್ರಶಸ್ತಿ "ಕನ್ನಡ ಭವನ ಜಿಲ್ಲಾ ಘಟಕಗಳ ಪದಾಧಿಕಾರಿ ಕನ್ನಡ ಮುಖಂಡರೀಗೆ "ಕನ್ನಡ ಪಯಸ್ವಿನಿ ಪ್ರಶಸ್ತಿ, ಪುಸ್ತಕ ಬಿಡುಗಡೆ ಮುಂತಾದ ಹತ್ತು ಹಲವು ಕಾರ್ಯಕ್ರಮ ಗಳು ಸಮ್ಮೇಳನದ ಭಾಗವಾಗಿ ನಡೆಯಲಿದೆ. ಕಾರ್ಯಕ್ರಮ ದಲ್ಲಿ ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷರಾದ ಡಾ. ವೆಂಕಟ್ರಮಣ ಹೊಳ್ಳ ಕಾರ್ಯಕ್ರಮದ ರೂಪು ರೇಖೆ ಗಳನ್ನು ವಿವರಿಸಿದರು ಉಪಾಧ್ಯಕ್ಷ ಶಂಕರ ಜೆ ಪಿ ನಗರ ನಿರೂಪಿಸಿದರು, ಗೌರವಾದ್ಯಕ್ಷ ಪ್ರದೀಪ್ ಬೇಕಲ್, ಕನ್ನಡ ಭವನ ರೂವಾರಿಗಳಾದ ಡಾ. ವಾಮನ್ ರಾವ್ ಬೇಕಲ್ -ಸಂಧ್ಯಾರಾಣಿ ಟೀಚರ್ ಸ್ವಾಮಿಜಿಗಳಿಗೆ ಫಲ ಪುಷ್ಪ ನೀಡಿ ಶುಭಾನುಗ್ರಹ ಬೇಡಿಕೊಂಡರು. ನಿರ್ದೇಶಕ ಜಗನ್ನಾಥ್ ಶೆಟ್ಟಿ ವಂದಿಸಿದರು.

27th January 2026
ಸಮ್ಮೇಳನ ಸರ್ವಾಧ್ಯಕ್ಷರ ಆಯ್ಕೆ.
ಕಾಸರಗೋಡು ನುಳ್ಳಿಪ್ಪಾಡಿಯ ಕನ್ನಡ ಭವನ ಬಯಲು ರಂಗ ಮಂಟಪದಲ್ಲಿ ದಿನಾಂಕ 22.02.2026. ಭಾನುವಾರ ಬೆಳಿಗ್ಗೆ ಸಾಮೂಹಿಕ ಸಂಕೀರ್ತನೆ, 9.30 ಗೆ ಉದ್ಘಾಟನೆ ಗೊಳ್ಳಲಿರುವ "ಕಾಸರಗೋಡು -ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನ 2026.ರ ಸರ್ವಾಧ್ಯಕ್ಷರಾಗಿ, ಕರ್ನಾಟಕ ಸರಕಾರದ ಪ್ರತಿಷ್ಠಿತ "ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾಡೋಜ ಡಾ. ನೇತ್ರಾಲಯ ಕೃಷ್ಣ ಪ್ರಸಾದ್ ಕೂಡ್ಲು ಆಯ್ಕೆಯಾಗಿದ್ದಾರೆ. ಸಾಹಿತ್ಯ ಕ್ಷೇತ್ರ, ವೈದ್ಯಕೀಯ ಕ್ಷೇತ್ರ, ಶೈಕ್ಷಣಿಕ ಕ್ಷೇತ್ರ, ಸಾಮಾಜಿಕ ಕ್ಷೇತ್ರಗಳಲ್ಲಿ ಅವಿರತ ದುಡಿಯುತ್ತಿರುವ ನಾಡೋಜ ಡಾ. ಕೃಷ್ಣ ಪ್ರಸಾದ್ ಕೂಡ್ಲು ಇವರು ಕಾಸರಗೋಡು ಕನ್ನಡ ಭವನದ ಅಂಗ ಸಂಸ್ಥೆಯಾದ ಕೇರಳ ರಾಜ್ಯ -ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಸ್ಥಾಪಕ ಸಂಚಾಲಕರಾದ ಡಾ. ವಾಮನ್ ರಾವ್ ಬೇಕಲ್ ಇವರ ಸವಿನಯ ಅಪೇಕ್ಷೆಯನ್ನು ಸಂತೋಷದಿಂದ ಒಪ್ಪಿಕೊಂಡಿದ್ದಾರೆ. ನಾಡೋಜ ಡಾ. ಕೃಷ್ಣ ಪ್ರಸಾದ್ ಕೂಡ್ಲು ಇವರ ನೇತೃತ್ವದಲ್ಲಿ ಸಮ್ಮೇಳನ ಅಚ್ಚುಕಟ್ಟಾಗಿ, ವಿಜೃಂಭಣೆಯಿಂದ ನಡೆಯಲಿದೆ, ಎಂದು ಪರಿಷತ್ತಿನ ಸ್ಥಾಪಕರಾದ ಡಾ. ವಾಮನ್ ರಾವ್ ಬೇಕಲ್ ತಿಳಿಸಿದ್ದಾರೆ.

25th January 2026
ಬೆಳಗಾವಿ-ವಚನ ಪಿತಾಮಹ ಡಾ ಫ ಗು ಹಳಕಟ್ಟಿ ಭವನ ಲಿಂಗಾಯತ ಸಂಘಟನೆ ಮಹಾಂತೇಶ ನಗರ ಬೆಳಗಾವಿಯಲ್ಲಿ ದಿನಾಂಕ. 25.01.2026ರಂದು ಸಾಮೂಹಿಕ ಪ್ರಾಥ೯ನೆ ಅಂಬಿಗರ ಚೌಡಯ್ಯ ಕುರಿತು ವಿರೂಪಾಕ್ಷಿ ದೊಡ್ಡಮನಿ ಅವರು ಉಪನ್ಯಾಸ ನೀಡಿದರು.ಇಷ್ಟಲಿಂಗ ಪೂಜಿಸಿದರೆ ಸಮಾನತೆಯ ಸಂಕೇತ.ಗುರುಶಿಷ್ಯರ ಸಂಬಂದ ಹೇಗಿರಬೇಕು. ಶಿಷ್ಯರಿಗೆ ಉತ್ತಮ ಭೋದನೆ ಮಾಡಬೇಕು.ಒಳ್ಳೆಯ ಮಾಗ೯ದಶ೯ಕನಾಗಿರಬೇಕು.ಈಇಜಲುಬಾರದ ವ್ಯಕ್ತಿ ಮುಳುಗುವವನು ರಕ್ಷಿಸಬಹುದೇ. ಲೋಕ ಜ್ಞಾನ ಇಲ್ಲದವ ಇನ್ನೊಬ್ಬರಿಗೆ ಜ್ಞಾನ ನಿಡಬಲ್ಲನೆ.ನುಡಿದಂತೆ ನಡೆಯಬೇಕು.ಮಾನವನಿಗೆ ಆಶೆಗೆ ಮಿತಿಯಿಲ್ಲ.ಚಿಂತೆಯಿಂದ ಮುಕ್ತರಾದವರು ಯಾರು?ಬಡತನಕ್ಕೆ ಉoಬುವ ಚಿಂತೆ.ಇoತಿ ಹಲವಾರು ಚಿಂತೆ ಯಲ್ಲಿ ಮುಳುಗಿಹೊಗಿದ್ದಾರೆ.ನನಗೆ ಸಾಕು ಎಂಬ ಭಾವನೆ ಬರುವುದು ಯಾವಾಗ ಮನುಷ್ಯನಿಗೆ ಆಶೆಗೆ ಇತಿಮಿತಿ ಇರಬೇಕು.ಆಶೆಯ ಕಥೆ ಹೇಳಿ ಮಾನವನಿಗೆ ಇತಿ ಇಲ್ಲದ ಮಾರ್ಮಿಕವಾಗಿ ತಿಳಿಸಿದರು.ಆರಂಭದಲ್ಲಿ ಶರಣೆ ಮಹಾದೇವಿ ಅರಳಿಯವರು ಸಾಮೂಹಿಕ ಪ್ರಾಥ೯ನೆ ನಡಿಸಿಕೊಟ್ಟರು.ವಿ ಕೆ ಪಾಟೀಲ,ಆನಂದ ಕರಕಿ,ಬಿ. ಪಿ.ಜೇವಣಿ,ಬಸವರಾಜ ಬಿಜ್ಜರಗಿ, ಶರಣ ಶರಣೆಯರು ವಚನ ವಿಶ್ಲೇಶಣೆ ಮಾಡಿದರು.ಈರಣ್ಣಾ ದೇಯಣ್ಣವರ ಅಧ್ಯಕ್ಷತೆವಹಿಸಿದ್ದರು.ಶೇಖರ ವಾಲಿಇಟಗಿ,ಗುರುಸಿದ್ದಪ್ಪ ರೇವಣ್ಣವರ,ಲಕ್ಷ್ಮೀ ಜೆವಣಿ,
ಬಸವ ರಾಜ ಕರಡಿಮಠ,ಶಶಿಭೂಷಣ ಪಾಟೀಲ,ಶಂಕರ ಗುಡಸ,ಬಸನಗೌಡ ಪಾಟೀಲ,ಜಯಶ್ರೀ ಚವಲಗಿ,ಜ್ಯೋತಿ ಬದಾಮಿ,ಅಶೋಕ ಉಳ್ಳೆಗಡ್ಡಿ,ಎಂ ವೈ ಮೆಣಸಿನಕಾಯಿ. ಶಿವಾನಂದ ತಲ್ಲೂರ,ಲಕ್ಷೀಕಾಂತ ಗುರವ, ಶರಣೆಯರು ಉಪಸ್ಥಿತರಿದ್ದರು.ಚನ್ನಪ್ಪ ನರಸನ್ನವರ ದಾಸೋಹ ಸೇವೆಗೈದರು.ಇತ್ತಿಚೆಗೆ ಮದುವೆಯಾದ ನಾಗರಾಜ ಚೈತ್ರಾ ಹಾಗೂ ಅಪಣಾ೯ ವಿಜಯ ಸತ್ಕರಿಸಲಾಯಿತು ಸಂಗಮೇಶ ಅರಳಿ ನಿರೂಪಿಸಿದರು.