


16th January 2026
ಬೈಲಹೊಂಗಲ : ಸೌದತ್ತಿ ತಾಲೂಕಿನ ಮರಕುಂಬಿ ಗ್ರಾಮದಲ್ಲಿರುವ ಇನಾಮ್ದರ್ ಸಕ್ಕರೆ ಕಾರ್ಖಾನೆಯಲ್ಲಿ ಕೆಲ ದಿನಗಳ ಹಿಂದೆ ಬೈಲರ್ ಸ್ಫೋಟ ವಾಗಿ ತೀವ್ರವಾಗಿ ಗಾಯಗೊಂಡಿದ್ದ ಕಾರ್ಮಿಕರು ಚಿಕಿತ್ಸೆ ಕಾಣದೆ ಮೃತಪಟ್ಟಿದ್ದರು ಇಷ್ಟಾದರೂ ಕೂಡ ಕಾರ್ಖಾನೆಯ ಮಾಲೀಕರು ಮತ್ತು ಆಡಳಿತ ಮಂಡಳಿ ಮೃತಪಟ್ಟ ಕುಟುಂಬಗಳಿಗೆ ಪೂರ್ಣ ಪ್ರಮಾಣದ ಪರಿಹಾರವನ್ನು ನೀಡದೆ ವಿಳಂಬ ನೀತಿ ಅನುಸರಿಸಿದ್ದನ್ನು ಖಂಡಿಸಿ ಕಿತ್ತೂರು ಕರ್ನಾಟಕ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ್ ಕುಲ್ಕರ್ ನೇತೃತ್ವದಲ್ಲಿ ಕಾರ್ಖಾನೆ ಎದುರುಗಡೆ ಪ್ರತಿಭಟನೆ ಮಾಡಿದರು.
ಕಾರ್ಖಾನೆಯಲ್ಲಿಕಾರ್ಯ ನಿರ್ವಹಿಸುತ್ತಿದ್ದ ಕಾರ್ಮಿಕರ ಬಗ್ಗೆ ಮುಂಜಾಗ್ರತೆ ಕ್ರಮ ಕೈಗೊಳ್ಳದೇ ಇರುವ ಕಾರಣದಿಂದ ಎಂಟು ಜನ ಮೃತಪಟ್ಟಿದ್ದು ಇರುತ್ತದೆ. ಆದ್ದರಿಂದ ಕಾರ್ಮಿಕರ ಕುಟುಂಬಕ್ಕೆ ಒಂದು ಕೋಟಿ ರೂಪಾಯಿ ಪರಿಹಾರ ಘೋಷಣೆ ಮಾಡಬೇಕು ಹಾಗೂ ಅಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ ಇನ್ನು ಮುಂದಾದರೂ ಗುಣಮಟ್ಟದ ಸುರಕ್ಷತಾ ಕ್ರಮಗಳನ್ನು ಮತ್ತು ಭದ್ರತೆ ಒದಗಿಸುವ ಸಲುವಾಗಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಕಾರ್ಮಿಕ ಇಲಾಖೆಯ ನಿಯಮನುಸಾರ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಾರ್ಮಿಕರಿಗೆ ಒದಗಿಸಬೇಕು ಮತ್ತು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳ ಕೈಗೊಂಡು ಕಾರ್ಮಿಕರ ಜೀವ ಕಾಪಾಡಬೇಕು ಎಂದು ಒತ್ತಾಯಿಸಿದರು.
ಇಷ್ಟೆಲ್ಲಾ ಅನಾಹುತಗಳು ನಡೆದರೂ ಕೂಡ ಕಾರ್ಖಾನೆಯ ಮಾಲೀಕರು ಬಂದು ಮೃತ ಕುಟುಂಬದವರಿಗೆ ಸಾಂತ್ವನ ಹೇಳ್ದೆ ಇರುವುದನ್ನು ತೀವ್ರವಾಗಿ ಖಂಡಿಸಿದ ಪ್ರತಿಭಟನೆಕಾರರು ಮತ ಕುಟುಂಬದವರಿಗೆ ಮತ್ತು ಕಾರ್ಮಿಕರಿಗೆ ಸರಿಯಾಗಿ ಸ್ಪಂದಿಸದಿದ್ದರೆ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ಮುಖಂಡರಾದ
ಶಿವಾನಂದ ಕೋಲಕಾರ , ರಾಜು ಬೋರಣ್ಣವರ , ಸಣಗೌಡ ಸಂಗನಗೌಡರ, ದೀಪಕ್ ಶಟೋಜಿ,
ಪ್ರವೀಣ ಕಾಜಗಾರ, ಶಿವಾನಂದ ಕುರಬೆಟ್, ಅಭಿಷೇಕ್ ಕಲಾಲ, ಸಿದ್ಧಾರೂಢ ಹೊಂಡಪ್ಪನವರ, ಮಲ್ಲಿಕಾರ್ಜುನ ಬಾಜಿ ,ಆನಂದ ಪಾಟೀಲ, ಸೋಮು ತೋಟಗಿ ಇನ್ನೂ ಅನೇಕ ಕಾರ್ಯಕರ್ತರು ಪದಾಧಿಕಾರಿಗಳು ಪಾಲ್ಗೊಂಡಿದ್ದರು.

8th January 2026
ನೈಸರಗಿ- ಸಮೀಪದ ದೇಶನೂರ ಗ್ರಾಮದಲ್ಲಿ ಕಳ್ಭಭಟ್ಟಿ ಸಾರಾಯಿ ಮುಕ್ತ ಭಾರತ ಮಾಡುವಲ್ಲಿ ಗ್ರಾಮಸ್ಥರ ಸಹಕಾರ ಅತ್ಯಗತ್ಯ ಎಂದು ಬೈಲಹೊಂಗಲ ಅಬಕಾರಿ ನಿರೀಕ್ಷಕ ಅಧಿಕಾರಿ ಶ್ರೀಶೈಲ ಅಕ್ಕಿ ಹೇಳಿದರು. ಅವರು ದೇಶನೂರು ಗ್ರಾಮದಲ್ಲಿ ಕಳ್ಳಬಟ್ಟಿ ಮುಕ್ತ ಗ್ರಾಮ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾರ್ವಜನಿಕರ ಆರೋಗ್ಯ ಮತ್ತು ಉತ್ತಮ ಜೀವನದ ಹಿತದೃಷ್ಟಿಯಿಂದ ಸಾರಾಯಿ, ಕಳ್ಳಬಟ್ಟಿ ಮುಂತಾದವುಗಳನ್ನು ರಾಜ್ಯ ಸರ್ಕಾರ ನಿಷೇಧಿಸಿದ್ದು, ಕಳ್ಳಬಟ್ಟಿಮುಕ್ತ ಗ್ರಾಮಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತಿದೆ.
ಜನರ ಪೌಷ್ಟಿಕತೆ ಮಟ್ಟ ಹೆಚ್ಚಿಸಲು ಮತ್ತು ಆರೋಗ್ಯ ಸುಧಾರಿಸಲು ವಿಶೇಷ ಔಷಧಿ ತಯಾರಿಸಲಾಗುತ್ತಿದೆ. ಜನರು ನೆಮ್ಮದಿಯ ಜೀವನದಿಂದ ವಿಮುಖವಾಗದಿರಲಿ ಎಂಬ ಉದ್ದೇಶದಿಂದ ಕಳ್ಳಬಟ್ಟಿ ಸಾರಾಯಿ, ನಕಲಿ ಮದ್ಯ, ಸ್ಪಿರಿಟ್, ಸೇಂದಿ ಮುಂತಾದವುಗಳನ್ನು ತಯಾರಿಸುವುದು ಮತ್ತು ಮಾರುವುದು ನಿಷೇಧಿಸಲಾಗಿದೆ. ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಿಡಿಓ ಅಯ್ ಆರ್ ಪೋಲಿಸನವರ, ನೇಮಣ್ಣ ಟಗರಿ, ಎಂ ಬಿ ಮುಲ್ಲಾ, ಸಂತೋಷ ತಲ್ಲೂರ, ರಾಘವೇಂದ್ರ ಹಳ್ಳದ, ಕುಮಾರ ಕೆಳಗಿನಮನಿ, ಶಶಿಕಲಾ ತಳವಾರ, ರಂಗೋಜಿ ಕಂಚಿಮರದ, ಸುನಿತಾ ಕಂಚಿಮರದ, ಅಡಿವೆಪ್ಪ ಕಮತಗಿ, ಸಂತೋಷ ಬೀರಣ್ಣವರ, ಇದ್ದರು.

7th January 2026
ಬೈಲಹೊಂಗಲ: ನೇಗಿನಹಾಳ ಗ್ರಾಮದಲ್ಲಿ ಎಲ್ಲಿ ನೋಡಿದರೂ ಹಳದಿ- ಕೆಂಪು ಬಾವುಟಗಳ ಹಬ್ಬ, ಬೀದಿ ಬೀದಿಗಳಲ್ಲೂ, ಮನೆಗಳ ಮೇಲ್ಪಾವಣಿಗಳಲ್ಲೂ ಕನ್ನಡದ ಘನತೆ ಹೊಳೆಯುತ್ತಿತ್ತು. ಇಡೀ ಊರೇ ಹಬ್ಬದ ಸಂಭ್ರಮದಲ್ಲಿ ಮುಳುಗಿದ್ದ ದೃಶ್ಯ ಕಣ್ಣಿಗೆ ಹಬ್ಬವನ್ನುಂಟು ಮಾಡಿತು.
ಬೈಲಹೊಂಗಲ ತಾಲೂಕು ೮ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ತಾಲೂಕಿನ ನೇಗಿನಹಾಳ ಗ್ರಾಮದಲ್ಲಿ ಮಂಗಳವಾರ ಕಂಡುಬಂದ ದೃಷ್ಯಗಳಿವು.
ವಿವಿಧೆಡೆಯಿಂದ ಆಗಮಿಸಿದ ಸಾಹಿತ್ಯಾಸಕ್ತರು, ವಿದ್ಯಾರ್ಥಿಗಳು, ಯುವಕರು, ಮಹಿಳೆಯರು ಮತ್ತು ಹಿರಿಯರು ಸಮ್ಮೇಳನಕ್ಕೆ ಸಾಕ್ಷಿಯಾಗಿ, ಕನ್ನಡ ಭಾಷೆ- ಸಂಸ್ಕೃತಿಯ ಮೇಲಿನ ಪ್ರೀತಿಯನ್ನು ಅಭಿವ್ಯಕ್ತಪಡಿಸಿದರು.
ಸರ್ಕಾರಿ ಹಿರಿಯ ಪ್ರಾಥಮಿಕ ಮಾದರಿ ಶಾಲೆಯ ಆವರಣದಲ್ಲಿ ನಡೆದ ಸಮ್ಮೇಳನವನ್ನು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ಅವರು ಉದ್ಘಾಟಿಸಿ ಮಾತನಾಡಿ,
"ಕನ್ನಡ ನಮ್ಮ ಬದುಕಿನ ಉಸಿರು. ಎಲ್ಲರೂ ಕನ್ನಡವನ್ನು ಕೇವಲ ಮಾತನಾಡುವಷ್ಟರಲ್ಲಿ ಸೀಮಿತಗೊಳಿಸದೆ, ಬದುಕಿನಲ್ಲಿ ಬೆಳೆಸಬೇಕು. ಕನ್ನಡ ನಮ್ಮ
ಅಸ್ತಿತ್ವದ ಗುರುತು" ಎಂದರು.
ಸಮ್ಮೇಳನದ ಅಧ್ಯಕ್ಷ ಪ್ರೊ. ಕೆ.ಎಸ್. ಕೌಜಲಗಿ ಅವರು ಮಾತನಾಡಿ
ಬೈಲಹೊಂಗಲ ನಾಡು ಸ್ವಾತಂತ್ರ್ಯ ಹೋರಾಟಗಾರರ ನಾಡು, ಮೊದಲು ಸಂಪಗಾಂವ ಇದ್ದ ತಾಲೂಕು ನಂತರ ಬೈಲಹೊಂಗಲ ತಾಲೂಕು ಆಯಿತು, ನಂದರು, ಮೌರ್ಯರು, ಶತವಾಹನರು, ಚಾಲುಕ್ಯರು, ರಾಷ್ಟ್ರಕೂಟರು,ಬ್ರಿಟಿಷರ ದಾಳಿಗೆ ತುತ್ತಾದರೂ ಬೈಲಹೊಂಗಲ ನಾಡು, ಕಿತ್ತೂರು ಚನ್ನಮ್ಮ, ಬೆಳವಡಿ ಮಲ್ಲಮ್ಮ, ಸಂಗೊಳ್ಳಿ ರಾಯಣ್ಣ ಇನ್ನೂ ಅನೇಕರ ಸ್ವಾತಂತ್ರ್ಯ ಹೋರಾಟದ ನಾಡು, ನಾಗನೂರ ರುದ್ರಾಕ್ಷಿ ಮಠ, ಬೈಲಹೊಂಗಲ ಮುರುಸಾವಿರ ಮಠ ನೇಸರಗಿ ಮಲ್ಲಾಪುರ ಗಾಳೇಶ್ವರ ಮಠ ಸೇರಿದಂತೆ ಅನೇಕ ಮಠಗಳ ಬಿಡಾಗಿದ್ದು, ಪ್ರಾಚೀನ ಬೈಲಹೊಂಗಲದ ಕರಿಗುಡಿ, ನೇಸರಗಿ ಜೋಡಗುಡಿ, ವೀರಭದ್ರಶ್ವರ ದೇವಸ್ಥಾನ, ವಕ್ಕುಂದ ತ್ರಿಕೋಟೇಶ್ವರ ದೇವಸ್ಥಾನ ಹೆಸರುವಾಸಿ ಆಗಿವೆ. ಎಲ್ಲ ವಿಭಾಗ್ಯದಲ್ಲಿ ಬೈಲಹೊಂಗಲ ತಾಲೂಕು ಎಲ್ಲ ವಿಭಾಗಳಲ್ಲಿ ಮುಂದಿದ್ದು, ಬೆಳಗಾವಿ ಜಿಲ್ಲಾ ವಿಭಜನೆ ಆದರೆ ಬೈಲಹೊಂಗಲಕ್ಕೆ ಜಿಲ್ಲಾ ಸ್ಥಾನಮಾನ ಸಿಗಬೇಕು , ಕೃಷಿ ಅವಲಂಬಿತ ಈ ಭಾಗದ ರೈತರಿಗೆ ಉತ್ತೇಜನ ಸಿಗಲಿ,ಅದಕ್ಕಾಗಿಯೇ ಇದು ಗಂಡು ಮೆಟ್ಟಿನ ನಾಡು, ಕನ್ನಡ ಸರ್ಕಾರಿ ಶಾಲೆಗಳಿಗೆ ಉತ್ತೇಜನ ನೀಡಲಿ, ಪಾಲಕರು ಮಕ್ಕಳ ಶಿಕ್ಷಣ ಕನ್ನಡದಲ್ಲಿ ನೀಡಲು ಮುಂದೆ ಬರಲಿ ಎಂದರು.
ಸ್ವಾಗತ ಸಮಿತಿಯ ಸಾನಿಧ್ಯ ವಹಿಸಿದ್ದ
ನಿಜಗುಣಾನಂದ ಬೈಲೂರು ನಿಷ್ಕಲ ಮಂಟಪದ ಮಹಾಸ್ವಾಮೀಜಿ ಆಶೀರ್ವಚನ ನೀಡಿ,ಕನ್ನಡವನ್ನು ತಾಯಿಯಾಗಿ ಸ್ವೀಕರಿಸಿ, ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು" ಎಂದರು.
ಮೂರು ಸಾವಿರ ಮಠದ ಪ್ರಭು ನೀಲಕಂಠ ಸ್ವಾಮೀಜಿ ನೇಗಿನಹಾಳ ಮತ್ತು ಅದೈತಾನಂದ ಸ್ವಾಮೀಜಿ ಮಾತನಾಡಿ, "ಕನ್ನಡ ಉಳಿಸೋಣ ಎನ್ನುತ್ತೇವೆ. ಆದರೆ ಅದನ್ನು ಹೇಗೆ ಉಳಿಸಬೇಕು ಎಂಬುದರ ಬಗ್ಗೆ ಪ್ರಾಮಾಣಿಕ ಪ್ರಯತ್ನ ಬೇಕು. ಮಕ್ಕಳನ್ನು ಕನ್ನಡ ಶಾಲೆಗೆ ಕಳಿಸುವ ಮನಸ್ಥಿತಿ ಬೆಳೆಸಬೇಕು" ಎಂದರು.
ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ, "ಯುವ ಬರಹಗಾರರು ಮತ್ತು ಕವಿಗಳು ಬೆಳೆಯಬೇಕು. ಇಂತಹ ಸಮ್ಮೇಳನಗಳು ಯುವ ಪೀಳಿಗೆಗೆ ಪ್ರೇರಣೆಯಾಗುತ್ತವೆ ಎಂದರು.
ಕಾರ್ಯಕ್ರಮದಲ್ಲಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ನಾನಾಸಾಹೇಬ ಪಾಟೀಲ, ಕಾಶೀನಾಥ ಇನಾಮದಾರ, ಡಾ. ಶಾಂತಿನಾಥ ದಿಬ್ಬದ, ತಹಶೀಲ್ದಾರ ಹಣಮಂತ ಶಿರಹಟ್ಟಿ, ದೂರದರ್ಶನ ಕಲಾವಿದ ಸಿ ಕೆ ಮೆಕ್ಕೇದ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮಹಾಂತೇಶ ತುರಮರಿ, ಮಾಜಿ ಕಸಾಪ ಅಧ್ಯಕ್ಷ ಮೋಹನ ಪಾಟೀಲ, ಎಸ್. ಡಿ.ಗಂಗಣ್ಣವರ, ಮಹರುದ್ರಪ್ಪ ನಂದೇನ್ನವರ, ಗ್ರಾ ಪಂ ಅಧ್ಯಕ್ಷೆ ಮಹಾದೇವಿ ಕೋಟಗಿ, ಮಡಿವಾಳಪ್ಪ ಕುಲ್ಲೊಳ್ಳಿ,ತಾಲೂಕು ವೈದ್ಯಾಧಿಕಾರಿ ಡಾ. ಎಸ್.ಎಸ್. ಸಿದ್ದಣ್ಣವರ, ಬೈಲಹೊಂಗಲ ತಾಲೂಕ ಕಸಾಪ ಅಧ್ಯಕ್ಷ ಎನ್ ಆರ್ ಠಕ್ಕಾಯಿ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ವೈ.ತುಬಾಕಿ, ಉಪಾಧ್ಯಕ್ಷ ದೀಪಾ ಬೈಲವಾಡ, ಸಂತೋಷ ಹಡಪದ, ಶಿಕ್ಷಕ ಸಂತೋಷ ಪಾಟೀಲ, ಕಸಾಪ ಕಾರ್ಯದರ್ಶಿ ಮಂಜುಳಾ ಶೆಟ್ಡರ, ಶಿಕ್ಷಕ ಶಿವಬಸ್ಸು ಮೆಳವಂಕಿ, ಬೈಲಹೊಂಗಲ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸದಸ್ಯರು,ಪದಾಧಿಕಾರಿಗಳು, ನೇಗಿನಹಾಳ ಗ್ರಾಮ ಪಂಚಾಯತ ಸದಸ್ಯರು, ಗ್ರಾಮಸ್ಥರು, ಬೈಲಹೊಂಗಲ ತಾಲೂಕಾ ಶಿಕ್ಷಕರು, ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡು ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಗೊಳಿಸಿದರು
ಬೆಳಿಗ್ಗೆ ರಾಷ್ಟ್ರಧ್ವಜ, ಪರಿಷತ್ತಿನ ಧ್ವಜ, ನಾಡಧ್ವಜಾರೋಹಣ ಗೈಯಲಾಯಿತು. ಸಮ್ಮೇಳನದ ಅಧ್ಯಕ್ಷ ಪ್ರೋ ಕೆ.ಎಸ್. ಕೌಜಲಗಿ ದಂಪತಿಗಳನ್ನು ಬೆಳ್ಳಿ ಸಾರೋಟಿಯಲ್ಲಿ ಕುಂಭಮೇಳದ ಸುಮಂಗಲೆಯರು, ಸೈಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಹಾಗೂ ವಿವಿಧ ಕಲಾತಂಡಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಕಲಾ ಮೆರವಣಿಗೆಯ ಮೂಲಕ ಅದ್ದೂರಿಯಾಗಿ ಮುಖ್ಯ ವೇದಿಕೆಗೆ ಕರೆತರಲಾಯಿತು. ಮೆರವಣಿಗೆ ಗ್ರಾಮದಲ್ಲಿ ಕನ್ನಡತನದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿತು.
ಸ್ವಾಗತ ಸಮಿತಿ ಅಧ್ಯಕ್ಷೆ ರೋಹಿಣಿ ಬಾಬಾಸಾಹೇಬ ಪಾಟೀಲ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು. ಕಸಾಪ ತಾಲೂಕ ಅಧ್ಯಕ್ಷ ಎನ್. ಆರ್. ಠಕ್ಕಾಯಿ ಸ್ವಾಗತಿಸಿ, ರಾಜು ಹಕ್ಕಿ ಕಾರ್ಯಕ್ರಮ ನಿರೂಪಿಸಿದರು. ಸೌಟ್ಸ್ ಮತ್ತು ಗೈಡ್ನ ವಿದ್ಯಾರ್ಥಿಗಳ ಪೆರೆಡ್ ನೋಡುಗರ ಗಮನ ಸೆಳೆಯಿತು.
*****ವರದಿ: ಸುದ್ದಿ ಸದ್ದು ಪತ್ರಿಕೆ****"

6th January 2026
ಬೈಲಹೊಂಗಲ- ತಾಲೂಕಿ ನೇಗಿನಹಾಳ ಗ್ರಾಮದಲ್ಲಿ ಜನೇವರಿ 6 ರಂದು ಬೈಲಹೊಂಗಲ ತಾಲೂಕು ಎಂಟನೆಯ ಕನ್ನಡ ಸಾಹಿತ್ಯ ಸಮ್ಮೇಳನ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಮಾದರಿ ಶಾಲೆಯಲ್ಲಿ ನಡೆಯಲಿದೆ. ಸಮ್ಮೇಳನಾಧ್ಯಕ್ಷರಾಗಿ ಖ್ಯಾತ ಸಾಹಿತಿ ಪ್ರೊ. ಕೆ.ಎಸ್.ಕೌಜಲಗಿ ಆಯ್ಕೆಯಾಗಿದ್ದಾರೆ. ಸಕಲ ಸಿದ್ಧತೆಗಳು ನಡೆಯುತ್ತಿದ್ದು ನೇಗಿನಹಾಳ ಗ್ರಾಮದಲ್ಲಿ ಹಬ್ಬದ ಸಂಭ್ರಮ ಮನೆಮಾಡಿದೆ. ಬೆಳಿಗ್ಗೆ 7.30ಕ್ಕೆ ಸ್ವಾಗತ ಸಮಿತಿ ಅಧ್ಯಕ್ಷರಾದ ಶ್ರೀಮತಿ ರೋಹಿಣಿ ಬಾ. ಪಾಟೀಲ, ಬೆಳಗಾವಿ ಜಿಲ್ಲಾಧ್ಯಕ್ಷರಾದ ಶ್ರೀಮತಿ ಮಂಗಲಾ ಶ್ರೀಶೈಲ ಮೆಟಗುಡ್ಡ, ತಾಲೂಕಾಧ್ಯಕ್ಷರಾದ ಎನ್. ಆರ್.ಠಕ್ಕಾಯಿ ಧ್ವಜಾರೋಹಣವನ್ನು
ನೆರವೇರಿಸಲಿದ್ದಾರೆ. ಬೆಳಿಗ್ಗೆ 8 ಗಂಟೆಗೆ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಮಹಾದೇವಿ ಕೋಟಗಿ, ಉಪಾಧ್ಯಕ್ಷರಾದ ಶ್ರೀಮತಿ ದೀಪಾ ಬೈಲವಾಡ ಹಾಗೂ ಸರ್ವ ಸದಸ್ಯರು ಮೆರವಣಿಗೆಯನ್ನು ಉದ್ಘಾಟಿಸುವರು.
ಉಪವಿಭಾಗಾಧಿಕಾರಿಗಳಾದ ಪ್ರವೀಣ ಜೈನ್, ತಹಶೀಲ್ದಾರರಾದ ಹನಮಂತ ಶಿರಹಟ್ಟಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸಂಜೀವ ಜುನ್ನೂರ, ಪುರಸಭೆಯ ಮುಖ್ಯಾಧಿಕಾ-ರಿಗಳಾದ ವೀರೇಶ ಹಸಬಿ, ಡಿವೈ-ಎಸ್ಪಿ ವೀರಯ್ಯ ಹಿರೇಮಠ, ಸಿಪಿಐ ಪ್ರಮೋದ ಯಲಿಗಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿಂ- ುರಾದ ಶ್ರೀಮತಿ ವಿದ್ಯಾವತಿ ಭಜಂತ್ರಿ, ಕ್ಷೇತ್ರ ಶಿಕ್ಷಣಾಧಿಕಾ-ರಿಗಳಾದ ಎ.ಎನ್.ಪ್ಯಾಟಿ, ಸಿ.ವೈ. ತುಬಾಕಿ, ಕ್ಷೇತ್ರ ಸಮನ್ವಯಾಧಿಕಾರಿ ಆರ್.ಡಿ. ಹಿರೇಮಠ, ಪಿ.ಎಂ.ಪೋಷಣ ಯೋಜನೆಯ
ನಿರ್ದೇಶಕರಾದ ಶ್ರೀಮತಿ ಎಂ.ಎಸ್. ಕುಡವಕ್ಕಲಗಿ ಮುಖ್ಯ ಅತಿಥಿಗಳಾಗಿ ಆಗಮಿಸುವರು.
ಬೆಳಿಗ್ಗೆ 10.30 ಕ್ಕೆ ಉದ್ಘಾಟನಾ ' ನಡೆಯಲಿದೆ. ಸಮಾರಂಭತೋಂಟದಾರ್ಯ ಶಾಖಾ ಮಠ, ಮುಂಡರಗಿ ಹಾಗೂ ಬೈಲೂ-ರಿನ ನಿಷ್ಕಲ ಮಂಟಪದ ಪೂಜ್ಯಶ್ರೀ ನಿಜಗುಣಾನಂದ ಮಹಾಸ್ವಾಮಿಗಳು, ಬೈಲಹೊಂಗಲ ಶಾಖಾ ಮೂರುಸಾವಿರ ಮಠದ ಪೂಜ್ಯರಾದ ಮ.ನಿ.ಪ್ರ ಪ್ರಭುನೀಲಕಂಠ ಮಹಾಸ್ವಾಮಿಗಳು. ಹಾಗೂ ನೇಗಿನಹಾಳ ಗ್ರಾಮದ ಸಿದ್ದಾರೂಢಮಠದ ಶ್ರೀ ಅದೈತಾನಂದ ಸಹಾಯಕ ಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸುವರು.
ಕಿತ್ತೂರು ಶಾಸಕರಾದ ಬಾಬಾಸಾಹೇಬ ದೇ. ಪಾಟೀಲ ಅಧ್ಯಕ್ಷತೆ ವಹಿಸುವರು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ তেঘ. ಚಂದ್ರಶೇಖರ ಕಂಬಾರ ಬೆಳಗಾವಿ ಉದ್ಘಾಟಿಸುವರು. ಕಸಾಪ ಜಿಲ್ಲಾಧ್ಯಕ್ಷರಾದ ಮಂಗಲಾ ಮೆಟಗುಡ್ಡ ಶ್ರೀಮತಿ ಆಶಯ ನುಡಿಗಳನ್ನಾಡುವರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷರಾದ ಡಾ. ಶಾಂತಿನಾಥ ದಿಬ್ಬದ ಅವರು ಸರ್ವಾಧ್ಯಕ್ಷರಾದ ಪ್ರೊ. ಕೆ.ಎಸ್. ಕೌಜಲಗಿ ಅವರಿಗೆ ಧ್ವಜ ಹಸ್ತಾಂತರಿಸುವರು.
ಬೈಲಹೊಂಗಲ ಶಾಸಕರಾದ ಮಹಾಂತೇಶ Poh ಖ್ಯಾತ ಚಲನಚಿತ್ರ ನಟ-ನಿರ್ಮಾಪಕ ಶಿವರಂಜನ ಬೋಳಣ್ಣವರ, ದೂರದರ್ಶನ-ಆಕಾಶವಾಣಿ ಮತ್ತು ರಂಗಭೂಮಿ ಕಲಾವಿದ ಸಿ.ಕೆ ಮೆಕ್ಕೇದ ಹಿರಿಯ ಪತ್ರಕರ್ತರಾದ ಈಶ್ವರ ಹೋಟಿ, ತಾಲೂಕಾ ಪತ್ರಕರ್ತರ ಸಂಘ ಅಧ್ಯಕ್ಷ ಮಹಾಂತೇಶ ಸಿ.ತುರಮರಿ, ಭಾಗಿಯಾಗಿ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾಧ್ಯಕ್ಷರಾದ ಮೋಹನ ಬಸನಗೌಡ ಪಾಟೀಲ,
ಕಸಾಪ ಮಾರ್ಗದರ್ಶನ ಮಂಡಳಿ ಸದಸ್ಯರಾದ ಎಸ್.ಡಿ. ಗಂಗಣ್ಣವರ, ಮಹಾರುದ್ರಪ್ಪ ನಂದೆನ್ನವರ, ಗ್ರಾಪಂ ಅಧ್ಯಕ್ಷರಾದ ಶ್ರೀಮತಿ ಮಹಾದೇವಿ ಕೋಟಗಿ, ವಿವಿದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಮಡಿವಾಳಪ್ಪ ಕಲ್ಲೋಳಿ ಮುಖ್ಯ ಅತಿಥಿಗಳಾಗಿ ಆಗಮಿಸುವರು.
ಕನ್ನಡ ನುಡಿ ಹಬ್ಬಕ್ಕೆ ತಾಲೂಕಿನ గ్రామ ಎಲ್ಲ ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಎಲ್ಲ ಶಾಲಾ ಕಾಲೇಜುಗಳ ಶಿಕ್ಷಕರು. ವಿದ್ಯಾರ್ಥಿಗಳು, ತಾಲೂಕಿನ ಎಲ್ಲ ಕನ್ನಡಪರ ಸಂಘಟನೆಗಳ ಪ್ರತಿನಿಧಿಗಳು, ಎಲ್ಲ ಪಂಚಾಯತಿ ಸರ್ವಸದಸ್ಯರು, ತಾಲೂಕಿನ ಎಲ್ಲ ಕಚೇರಿಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ, ತಾಲೂಕಿನ ಎಲ್ಲ ಮಾಧ್ಯಮ ಪ್ರತಿನಿಧಿಗಳು, ಪರಿಷತ್ತಿನ ಸದಸ್ಯರು ಹಾಗೂ ನಾಡಿನ ಎಲ್ಲ ಕನ್ನಡ ಅಭಿಮಾನಿಗಳು, ಸಾರ್ವಜನಿಕರು ಸಮ್ಮೇಳನವನ್ನು ಯಶ ಸ್ವಿಗೊಳಿಸ ಬೇಕೆಂದ ತಾಲೂಕಾಧ್ಯಕ್ಷ ಎನ್.ಆರ್. ಠಕ್ಕಾಯಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

4th January 2026
ಬೈಲಹೊಂಗಲ:ಜ.6ರಂದು ನೇಗಿನಹಾಳ ಗ್ರಾಮದಲ್ಲಿ 8ನೇ ತಾಲ್ಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಹೆಮ್ಮೆಯ ಸಂಗತಿ ಆಗಿದೆ. ಪ್ರತಿಯೊಬ್ಬರೂ ಸಕ್ರೀಯವಾಗಿ ಭಾಗವಹಿಸುವುದರ ಸಮ್ಮೇಳನ ಮೂಲಕ ಯಶಸ್ವಿಗೊಳಿಸಬೇಕು' ಎಂದು ಚನ್ನಮ್ಮನ ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ನಡೆದ ಸಭೆಯಲ್ಲಿ ನೇಗಿನಹಾಳ ಗ್ರಾಮದಲ್ಲಿ ಜ.6ರಂದು ನಡೆಯಲಿರುವ ತಾಲ್ಲೂಕು ಮಟ್ಟದ 8ನೇ ಕನ್ನಡ ಸಾಹಿತ್ಯ ಸಮ್ಮೇಳನ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
'ಸಮ್ಮೇಳನದ ಯಶಸ್ವಿಗೆ ಪ್ರತಿಯೊಂದು ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ಕನ್ನಡಪರ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು,
ಕನ್ನಡ ಮನಸ್ಸುಗಳು, ಕನ್ನಡಾಭಿಮಾ-ನಿಗಳು, ಬೈಲಹೊಂಗಲ, ನೇಗಿನಳಾದ ಸಮಸ್ತ ಜನತೆ ಸಹಕಾರ ನೀಡಬೇಕು' ಎಂದರು.
ಕೆಪಿಸಿಸಿ ಸದಸ್ಯೆ ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷೆ ರೋಹಿಣಿ ಪಾಟೀಲ ಮಾತನಾಡಿ, 'ನೇಗಿನಹಾಳ ಗ್ರಾಮದಲ್ಲಿ ನಡೆಯಲಿರುವ ತಾಲ್ಲೂಕು ಮಟ್ಟದ 8ನೇ ಕನ್ನಡ ಸಾಹಿತ್ಯ ಸಮ್ಮೇಳನ ನೆಮ್ಮೆಲ್ಲರ ಸೌಭಾಗ್ಯವಾಗಿದೆ. ಈ ಸಮ್ಮೇಳನಕ್ಕೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ
ಚಂದ್ರಶೇಖರ ಕಮ್ಮಾರ ಅವರು ಉದ್ಘಾಟಕರಾಗಿ, ಸಾಹಿತಿ ಪ್ರೊ.ಕೆ.ಎಸ್. ಕೌಜಲಗಿ ಅವರು ಸರ್ವಾಧ್ಯಕ್ಷರಾಗಿ ಆಗಮಿಸುತ್ತಿದ್ದಾರೆ. ಇನ್ನೂ ಹಲವಾರು ಗಣ್ಯರು, ಸಾಕಷ್ಟು ಜನ ಸಾಹಿತಿಗಳು, ಕವಿಗಳು, ಕನ್ನಡದ ಸೇವಕರು ಆಗಮಿಸಿ ಸಮ್ಮೇಳನ ಯಶಸ್ವಿಗೊಳಿಸಲ್ಲಿದ್ದಾರೆ. ಇದು ಖುಷಿ ತಂದಿದೆ. ಎಲ್ಲರೂ ಸೇರಿ ಸಮ್ಮೇಳನ ಯಶಸ್ವಿಗೊಳಿಸುವುದಾಗಿ' ಅವರು ತಿಳಿಸಿದರು.
ಕೆಪಿಸಿಸಿ ಸದಸ್ಯೆ ರೋಹಣಿ ಪಾಟೀಲ,
ತಹಶೀಲ್ದಾರ್ ಎಚ್.ಎನ್.ಶಿರಹಟ್ಟಿ,
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಂಜೀವ ಜೂನ್ನೂರ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎನ್.ಪ್ಯಾಟಿ, ನಗರಸಭೆ ವಿರೇಶ ಹಸಬಿ, ಇದ್ದರು.
ಕಸಾಪ ತಾಲ್ಲೂಕು ಘಟಕ ಅಧ್ಯಕ್ಷ ಎನ್.ಆರ್.ಠಕ್ಕಾಯಿ ಸ್ವಾಗತಿಸಿದರು. ರಾಜು ಹಕ್ಕಿ ನಿರೂಪಿಸಿದರು. ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ಕನ್ನಡ ಸೇವಕರು, ನಾಗರಿಕರು ಪಾಲ್ಗೊಂಡಿದ್ದರು.

1st January 2026
ಬೈಲಹೊಂಗಲ: ತಾಲೂಕಿನ ನೇಗಿನಹಾಳ ಗ್ರಾಮದಲ್ಲಿ ಬೈಲಹೊಂಗಲ ತಾಲೂಕು 8 ನೆಯ ಕನ್ನಡ ಸಾಹಿತ್ಯ ಸಮ್ಮೇಳನ ಜನೇವರಿ 6 ರಂದು ನಡೆಯಲಿದೆ. ಸಮ್ಮೇಳನದ ಸರ್ವಾಧ್ಯಕ್ಷರಾಗಿ ಖ್ಯಾತ ಸಾಹಿತಿ ಪ್ರೊ. ಕೆ.ಎಸ್. ಕೌಜಲಗಿ ಆಯ್ಕೆಯಾಗಿದ್ದಾರೆ.
ಪಟ್ಟಣದಲ್ಲಿ ನಡೆದ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಯಿತು. ಸಭೆಯಲ್ಲಿ ಬೈಲಹೊಂಗಲ ಕನ್ನಡ ಸಾಹಿತ್ಯ ಪರಿಷತ್ತಿನ ಮಾರ್ಗದರ್ಶಿ ಮಂಡಳಿ ಸದಸ್ಯರಾದ ಸಿ.ಕೆ ಮೆಕ್ಕೇದ, ಮೋಹನ ಬಸನಗೌಡ ಪಾಟೀಲ, ಎಸ್.ಡಿ ಗಂಗಣ್ಣವರ, ಕಸಾಪ ತಾಲೂಕಾಧ್ಯಕ್ಷ ಎನ್.ಆರ್.ಠಕ್ಕಾಯಿ, ಗೌರವ ಕಾರ್ಯದರ್ಶಿಗಳಾದ ಮಂಜುಳಾ ಶೆಟ್ಟರ, ಪದಾಧಿಕಾರಿಗಳಾದ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎನ್ ಪ್ಯಾಟಿ, ಶ್ರೀಕಾಂತ ಉಳ್ಳೇಗಡ್ಡಿ, ದುಂಡಪ್ಪ ಗರಗದ, ಅನಿಲ ರಾಜನ್ನವರ, ಲಕ್ಷ್ಮೀ ಮುಗಡ್ಲಿಮಠ, ಸ್ವಾಗತ ಸಮಿತಿಯ ಉಪಾಧ್ಯಕ್ಷರಾದ ಕೃಷ್ಣಾಜಿ ಕುಲಕರ್ಣಿ, ಉಪಸಮಿತಿ ಸದಸ್ಯರಾದ ಅನ್ವರ್ ದೇವರದವರ, ಮಡಿವಾಳಪ್ಪ ಮರಿತಮ್ಮನವರ ಉಪಸ್ಥಿತರಿದ್ದರು. ರಾಜು ಹಕ್ಕಿ ಸ್ವಾಗತಿಸಿ ನಿರೂಪಿಸಿ ವಂದಿಸಿದರು.
ಸಮ್ಮೇಳನಾಧ್ಯಕ್ಷರ ಸಂಕ್ಷಿಪ್ತ ಪರಿಚಯ:
ಪ್ರೊ. ಕೆ.ಎಸ್. ಕೌಜಲಗಿ ಅವರು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನೇಸರಗಿ ಹೋಬಳಿಯ ಕೊಳದೂರು ಗ್ರಾಮದಲ್ಲಿ 15.06.1948 ರಲ್ಲಿ ಜನಿಸಿದ್ದಾರೆ. ಬೆಳಗಾವಿಯ ಲಿಂಗರಾಜ ಕಾಲೇಜಿನಲ್ಲಿ ಪದವಿ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಶಿಕ್ಷಣ ಪಡೆದಿದ್ದಾರೆ. ಹುಬ್ಬಳ್ಳಿಯ ಕೆ.ಎಲ್.ಇ ಸಂಸ್ಥೆಯ ಪಿ.ಸಿ ಜಾಬಿನ್ ಕಾಲೇಜು, ಹಾವೇರಿಯ ಜಿ.ಎಚ್ ಕಾಲೇಜು, ಗದಗಿನ ಜೆ.ಟಿ ಕಾಲೇಜು, ಹುಬ್ಬಳ್ಳಿಯ ಶ್ರೀ ಕಾಡಸಿದ್ದೇಶ್ವರ ಕಲಾ ಮಹಾವಿದ್ಯಾಲಯ ಮತ್ತು ಎಚ್.ಎಸ್. ಕೋತಂಬ್ರಿ ವಿಜ್ಞಾನ ಸಂಸ್ಥೆಗಳಲ್ಲಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಪ್ರೊ. ಕೆ.ಎಸ್. ಕೌಲಜಗಿ ಅವರು ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾಗಿ, ಎನ್.ಎಸ್.ಎಸ್ ಪ್ರಿಯದರ್ಶಿನಿ ಇಂದಿರಾಗಾಂಧಿ ರಾಷ್ಟೀಯ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾಗಿ, ವಿಶ್ವವಿದ್ಯಾಲಯ ಮತ್ತು ರಾಜ್ಯಮಟ್ಟದ ನಾಯಕತ್ವ ತರಬೇತಿ ಶಿಬಿರದ ಸಂಯೋಜನಾಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದಾರೆ.
ಪ್ರೊ. ಕೆ.ಎಸ್. ಕೌಜಲಗಿ ಅವರು ವಚನ ಸಾಹಿತ್ಯದಲ್ಲಿ ನೈತಿಕ ಮೌಲ್ಯಗಳು, ನರೇಂದ್ರದ ಮಹಾಂತ ಶಿವಯೋಗಿಗಳು, ಶಿರಸಂಗಿ ಲಿಂಗರಾಜರು, ನರಗುಂದದ ಶಿಲ್ಪಿ, ರುದ್ರಸ್ವಾಮಿಗಳು, ನಮ್ಮ ಪ್ರಾಚಾರ್ಯರು ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಕೆ.ಎಲ್.ಇ ಸಂಸ್ಥೆಯ ಇತಿಹಾಸ ರಚನೆಯ ಸಂಪಾದಕ ಮಂಡಳಿ ಸದಸ್ಯರಾಗಿ, ವೀರೇಶ ಕಿರಣ ತ್ರೈಮಾಸಿಕ ಪತ್ರಿಕೆಯ ಗೌರವ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ ಅನುಭವ ಇವರದ್ದು. ವಿಶ್ವವಿದ್ಯಾಲಯದ ಪ್ರಸಾರಾಂಗದ ಮೂಲಕ ಕಲ್ಯಾಣ ಕ್ರಾಂತಿಯ ನಂತರ ಮಡಿವಾಳ ಮಾಚಿದೇವ, ಅಲ್ಲಮಪ್ರಭು, ಬಯಲಾಟಗಳು, ವಿಜಯನಗರ ಕುರಿತು ಕನ್ನಡ ಕಾದಂಬರಿಗಳು ಮುಂತಾದ ವಿಷಯಗಳ ಮೇಲೆ ಉಪನ್ಯಾಸ ಮಾಡಿದ್ದಾರೆ.
ಪ್ರೊ. ಕೆ.ಎಸ್. ಕೌಜಲಗಿ ಅವರು ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಸಂಬಂಧಿಸಿದಂತೆ ರಾಜ್ಯ ಮಟ್ಟದ ಅನೇಕ ವಿಚಾರ ಸಂಕಿರಣ, ಸಮ್ಮೇಳನ, ಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ಅಲ್ಲದೇ ಯುಪಿಎಸ್ಸಿ ಹಾಗೂ ಕೆಪಿಎಸ್ಸಿ ಪರೀಕ್ಷಾರ್ಥಿಗಳಿಗೆ ಮಾರ್ಗದರ್ಶನ, ಕನ್ನಡ ಬೋಧನೆ ಮತ್ತು ಕೆಪಿಎಸ್ಸಿ ಪರೀಕ್ಷೆಗಳಲ್ಲಿ ಪರೀಕ್ಷಕರಾಗಿ ಸೇವೆ ಸಲ್ಲಿಸಿದ ಕೀರ್ತಿ ಇವರದ್ದಾಗಿದೆ. ಚಿತ್ರದುರ್ಗದ ಮಠದಿಂದ ಶಿಕ್ಷಣ ವಿಭೂಷಣ, ಶಿಕ್ಷಕ ರತ್ನ, ಶಿಕ್ಷಣ ಪ್ರೇಮಿ ಪ್ರಶಸ್ತಿ, ಹುಬ್ಬಳ್ಳಿಯ ವಿಜಯಕುಮಾರ ಗುಂಜಾಳ ಗೆಳೆಯರ ಬಳಗದಿಂದ ಆದರ್ಶ ಶಿಕ್ಷಕ ಪ್ರಶಸ್ತಿ, ಹುಬ್ಬಳ್ಳಿಯ ಮೂರುಸಾವಿರ ಮಠದಿಂದ ಶ್ರೀ ಬಸವ ಪ್ರಶಸ್ತಿ, ಸುಹಾಸ ಸೇವಾ ಪ್ರಶಸ್ತಿ, ಹುಬ್ಬಳ್ಳಿ ಧಾರವಾಡ ಮಹಾನಗರ ಸಭೆಯ ವತಿಯಿಂದ ಧೀಮಂತ ಪ್ರಶಸ್ತಿ ಮುಂತಾದ ಗೌರವ ಸನ್ಮಾನಗಳಿಗೆ ಇವರು ಭಾಜನರಾಗಿದ್ದಾರೆ. ವಿವಿಧ ಸಂಘ ಸಂಸ್ಥೆಗಳಿಗೆ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ಪ್ರಸ್ತುತ ಕನ್ನಡ ಜಾನಪದ ಪರಿಷತ್ತಿನ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾಗಿ ಹಾಗೂ ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ವಚನ ಸಾಹಿತ್ಯ, ಜನಪದ ಸಾಹಿತ್ಯ, ಭಾಷಾ ಶಾಸ್ತ್ರಗಳ ಬಗ್ಗೆ ಅಧ್ಯಯನ ಮಾಡಿದ್ದು ತಮ್ಮ 77 ನೆಯ ವಯಸ್ಸಿನಲ್ಲಿಯೂ ನಿರಂತರವಾಗಿ ಸಮಾಜ ಸೇವೆ, ಸಂಘಟನೆ, ಉಪನ್ಯಾಸ, ಸಾಹಿತ್ಯ ರಚನೆಯಲ್ಲಿ ಪ್ರೊ. ಕೌಜಲಗಿ ಅವರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

29th December 2025
ಬಳ್ಳಾರಿ ಜಿಲ್ಲೆ....
ಕರ್ನಾಟಕ ಸರ್ಕಾರ. ಕನ್ನಡ ಸಂಸ್ಕೃತಿ ಇಲಾಖೆ. ಬಳ್ಳಾರಿ
ಡಾ. ರಾಜಕುಮಾರ್ ರಸ್ತೆ ಬಳ್ಳಾರಿ 583101
ದಿನಾಂಕ 01.01 2026. ಗುರುವಾರ ರಂದು ಬೆಳಿಗ್ಗೆ 11 ಗಂಟೆಗೆ ಜರುಗುವ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಕರಣ ದಿನಾಚರಣೆ ವಿಶೇಷ ಉಪನ್ಯಾಸ ಶ್ರೀ ವೆಂಕಟೇಶ್ ಬಡಿಗೇರ್.
ಶಿಕ್ಷಕರ ರತ್ನ ಪ್ರಶಸ್ತಿ ಪುರಸ್ಕೃತರು
ಕನ್ನಡ ಉಪನ್ಯಾಸಕರು ಹಾಗೂ ಕನ್ನಡ ಪ್ರಾಧ್ಯಾಪಕರು
ಶ್ರೀ ಅಕ್ಷಯ ಪದವಿಪೂರ್ವ ಹಾಗೂ ಪದವಿ ಮಹಾವಿದ್ಯಾಲಯ ಹೊಸಪೇಟೆ ರವರನ್ನು ದಿನಾಂಕ 20.12.2025 ರಂದು ಮಾನ್ಯ ಸಹಾಯಕ ಆಯುಕ್ತರು ಬಳ್ಳಾರಿ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ನಡವಳಿ ತೀರ್ಮಾನಿಸಲಾಗಿದ್ದು ಕಾರ್ಯಕ್ರಮವನ್ನು ಬಳ್ಳಾರಿ ನಗರದ ಕಾಳಮ್ಮ ಬೀದಿಯ ಶ್ರೀ ಕಾಳಿಕಾ ಕಮಟೇಶ್ವರ ದೇವಸ್ಥಾನ ಸಭಾಂಗಣದಲ್ಲಿ ವಿಶೇಷ ಉಪನ್ಯಾಸ ಆಯೋಜಿಸಲಾಗಿದೆ ಎಂದು ಮಾನ್ಯ ಸಹಾಯಕ ನಿರ್ದೇಶಕರು ಕನ್ನಡ ಸಂಸ್ಕೃತಿ ಇಲಾಖೆ ಬಳ್ಳಾರಿ ಆದೇಶ ಪ್ರತಿ ನೀಡುವುದರ ಜೊತೆಗೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಈ ಸಂದರ್ಭದಲ್ಲಿ ವಿಜಯನಗರ ಜಿಲ್ಲೆಯ ಕನ್ನಡ ವಿಶ್ವವಿದ್ಯಾನಿಲಯ ಪ್ರಾಧ್ಯಾಪಕರಾದ ಬಾ. ವೀರೇಶ್ ಬಡಿಗೇರ್ ಡಾ. ಕನಕೇಶಮೂರ್ತಿ. ಭರತನಾಟ್ಯ ಕಲಾವಿದೆ ಶ್ರೀಮತಿ ಮಾಣಿಕ್ಯದೇವಿ, ಬೆಂಗಳೂರು ಸೋಲು ವಿರುಪಾಕ್ಷಗೌಡ. ಟಿ ಬಸವರಾಜ್. ಡಾ
ದಯಾನಂದ. ಶ್ರೀ ಎಂ ವಿರುಪಾಕ್ಷಯ್ಯಸ್ವಾಮಿ ಡಾ.ಧರ್ಮನ ಗೌಡ. ಎರಿಸ್ವಾಮಿ ಶಿಕ್ಷಕರು. ಶ್ರೀ ಅರುಣ್ ಕುಮಾರ್ ಬಡಿಗೇರ್. ಶ್ರೀ ಮೌನೇಶ್ ಬಡಿಗೇರ್
ಕಿನ್ನಾಳ.ಶ್ರೀಮುದೇನೂರು ಉಮಾಮಹೇಶ್ವರ.ಡಾ. ಸುಲೋಚನಾ ಇನ್ನು ಮುಂತಾದವರು ಅಭಿನಂದಿಸಿದ್ದಾರೆ

24th December 2025
ಕಾಸರಗೋಡು : ಕನ್ನಡ ಭವನದ ತ್ರಿವಿಕ್ರಮ ಶಕ್ತಿ ಡಾ. ವಾಮನ್ ರಾವ್ ಬೇಕಲ್ "ಎಂಬ ಕೃತಿ ವಿಶ್ವ ರಾಮಕ್ಷತ್ರಿಯ ತ್ರೈಮಾಸಿಕ ಮಹಾಸಭೆಯಲ್ಲಿ ಅಧ್ಯಕ್ಷರಾದ ಶ್ರೀ ಎಚ್ ಆರ್ ಶಶಿಧರ್ ನಾಯ್ಕ್ ರೀಗೆ ವಿ. ರಾ. ಮಹಾಸಂಘ ಉಪಾಧ್ಯಕ್ಷರೂ ಕನ್ನಡ ಭವನದ ಸ್ಥಾಪಕ ಅಧ್ಯಕ್ಷರೂ ಆದ ಡಾ. ವಾಮನ್ ರಾವ್ ಬೇಕಲ್ ನೀಡಿ ಶಶಿಧರ್ ನಾಯ್ಕ್ ಲೋಕಾರ್ಪಣೆ ಮಾಡಿದರು. ಈ ಕೃತಿಯನ್ನು ಡಾ. ಮೊಗಸಾಲೆಯವರ ಕಾಂತಾವರ ಕನ್ನಡ ಸಂಘವು "ನಾಡಿಗೆ ನಮಸ್ಕಾರ "ಎಂಬ ಪುಸ್ತಕ ಮಾಲೆಯಲ್ಲಿ ಸಾಹಿತಿ ವಿರಾಜ್ ಅಡೂರ್ ರಚಿಸಿದ ಕೃತಿ. "ವ್ಯಕ್ತಿಯ ಸಾಧನೆಯು ಪುಸ್ತಕ ರೂಪದಲ್ಲಿ ಧಾಖಲಾದಾಗ ಸಾಧನೆಯು ಅನಶ್ವರವಾಗಿ ಉಳಿಯುತ್ತೆ, ಅದು ಓದಿದವರೇಗೆ ಪ್ರೇರಣೆಯಾಗುತ್ತದೆ. ಎಂದು ಕೃತಿ ಲೋಕಾರ್ಪಣೆ ಗೊಳಿಸಿ ಶಶಿಧರ್ ನಾಯ್ಕ್ ಹೇಳಿದರು. ಕಾರ್ಯಕ್ರಮದಲ್ಲಿ ವಿಶ್ವ ರಾಮಕ್ಷತ್ರಿಯ ಮಹಾಸಂಘ ಕಾರ್ಯಾಧ್ಯಕ್ಷ ಶ್ರೀನಿವಾಸ್ ಶೇರ್ವೆಗಾರ್ ಹೆಬ್ರಿ, ಉಪಾಧ್ಯಕ್ಷರಾದ ನಾಗರಾಜ್ ಕಾಮಧೇನು, ಪ್ರದಾನ ಕಾರ್ಯದರ್ಶಿ ಅಡ್ವೋ. ಶ್ರೀಧರ್ ಪಿ. ಎಸ್., ಕಾರ್ಯದರ್ಶಿ ರಶ್ಮಿರಾಜ್, ಷಣ್ಮುಖ ಬಿ. ಆರ್, ಡಿ. ಸತೀಶ್, ಗಣಪತಿ ಹೋಬಳಿದಾರ್, ಕೋಶಾಧಿಕಾರಿ ಯು. ಕರುಣಾಕರ, ಪದಾಧಿಕಾರಿಗಳಾದ ಮಂಜುನಾಥ್ ಏನ್, ಅನಿಲ್ ಕುಮಾರ್, ಪದ್ಮನಾಭ ಕೊತ್ವಲ್, ಗಣಪತಿ ಏನ್ ಶೇರುಗಾರ, ಹೂವಯ್ಯ ಶೇರುಗಾರ, ಜಿ. ಆರ್. ಪ್ರಕಾಶ್, ಎಚ್ ಶ್ರೀನಿವಾಸ, ಅಶೋಕ್ ಬೆಟ್ಟಿನ್, ಡಾ. ರಾಜೇಂದ್ರ, ಶಂಕರ್ ಕುಂದಾಪುರ, ಸಂತೋಷ್ ಬಲ್ಕೂರು, ಜೆ. ಸಂತೋಷ್, ನಾಗರಾಜ್ ಮದ್ದೋಡಿ, ನಾಗೇಶ್ ಕೆ. ಜೆ. ಸತೀಶ್ ಕಾವೇರಿ ಬಿ. ನಾಗರಾಜ್ ನಾಯ್ಕ್, ಶ್ರೀಮತಿ ಸುಮಿತ್ರಾ, ಭಾಗವಹಿಸಿದರು. ಅಡ್ವೋ. ಶ್ರೀಧರ್ ಪಿ. ಎಸ್ ಸ್ವಾಗತಿಸಿ, ರಶ್ಮಿ ರಾಜ್ ನಿರೂಪಿಸಿ ಶ್ರೀನಿವಾಸ್ ಹೆಬ್ರಿ ವಂದಿಸಿದರು.

24th December 2025
ಬೆಳಗಾವಿ-
ಸಮಾಜ ಬೆಳೆಯಲು ಚದುರಿ ಭಿನ್ನವಾಗಿರುವ ಎಲ್ಲರೂ ಒಗ್ಗೂಡಿ ಸಮರ್ಥ ನಾಯಕತ್ವದಲ್ಲಿ ಮುಂದುವರೆದರೆ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ.12 ನೇ ಶತಮಾನದಲ್ಲಿ ಕಟ್ಟಿಕೊಟ್ಟ ಆ ಬುನಾದಿ ಆ ಏಕತೆ ಕಾಣ ಸಿಗುತ್ತಿಲ್ಲ . ಆ ನಿಟ್ಟಿನಲ್ಲಿ ಎಲ್ಲ ಸಂಘಟನೆಗಳು ಒಂದಾಗಬೇಕಿದೆ. ಬಲಾಢ್ಯವಾಗಿರುವ ಲಿಂಗಾಯತ ಸಮಾಜಕ್ಕೆ ಬಲ ಬರಲು ಒಂದಾಗುವುದು ಪ್ರಸ್ತುತ ಸ್ಥಿತಿಯಲ್ಲಿ ಅನಿವಾರ್ಯವಾಗಿದೆ ಎಂದು ಲಿಂಗಾಯತ ವೀರಶೈವ ಮಹಾಸಭಾದ ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ ರವಿವಾರ ದಿ. 21 ರಂದು ಬೆಳಗಾವಿಯ ಮಹಾಂತೇಶನಗರದ ಫ. ಗು.ಹಳಕಟ್ಟಿ ಭವನದಲ್ಲಿ ಲಿಂಗಾಯತ ಸಂಘಟನೆ ವತಿಯಿಂದ ಹಮ್ಮಿಕೊಳ್ಳಲಾದ 'ಚಿಂತನ ಮತ್ತು ಸನ್ಮಾನ 'ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದರು. ಲಿಂಗಾಯತ ವಿದ್ಯಾರ್ಥಿನಿಯರಿಗೆ ವೀರಶೈವ ಮಹಾಸಭಾ ವತಿಯಿಂದ ನಿರ್ಮಿಸಲಾಗಿರುವ ಉಚಿತ ವಿದ್ಯಾರ್ಥಿನಿಯರ ನಿಲಯ ನಿರ್ಮಾಣ ಪೂರ್ಣ ಮಾಡಿ ಉದ್ಘಾಟನೆ ಮಾಡುವಲ್ಲಿ ವಿಶೇಷ ಸೇವೆ ಸಲ್ಲಿಸಿರುವ ರತ್ನಪ್ರಭಾ ಬೆಲ್ಲದ ರವರನ್ನು ಲಿಂಗಾಯತ ಸಂಘಟನೆ ವತಿಯಿಂದ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ 2025 ನೇ ಸಾಲಿನ ವಿಶೇಷ ಸೇವಾ ವಿಭಾಗದಲ್ಲಿ ಬುಡುಬುಡುಕೆ ಕಲಾವಿದ ಮತ್ತು ಜ್ಯೋತಿಷ್ಯ ಶಾಸ್ತ್ರದಲ್ಲಿ ಪರಿಣಿತಿ ಹೊಂದಿರುವ ಕರ್ನಾಟಕ ರಾಜ್ಯೋತ್ಸವದ ಪ್ರಶಸ್ತಿ ವಿಜೇತರಾದ ಪುಂಡಲಿಕಶಾಸ್ತ್ರಿಯವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಲಿಂಗಾಯತ ಸಂಘಟನೆ ಅಧ್ಯಕ್ಷ ಈರಣ್ಣ ದೇಯನ್ನವರ ಮಾತನಾಡಿ ಆಚಾರ ನಡೆ-ನುಡಿಗಳಲ್ಲಿ ಒಂದಾಗಿದ್ದರೂ ಅಭಿಪ್ರಾಯಗಳ ಭಿನ್ನತೆಯಿಂದ ಸಮಾಜದಲ್ಲಿ ಸ್ವಲ್ಪ ಬಿರುಕು ಉಂಟಾಗಿದೆ.ಎಲ್ಲರೂ ಚರ್ಚಿಸುವ ಮೂಲಕ ಒಗ್ಗೂಡಿ ಮುಂದುವರೆಯೋಣ ಎಂದರು. ಕಾರ್ಯಕ್ರಮದಲ್ಲಿ ಅತಿಥಿಗಳಾದ ಶಂಕರ ಗುಡಸ, ವಿ.ಕೆ ಪಾಟೀಲ ಶರಣರ ವಿಚಾರ ಮತ್ತು ಪ್ರಸ್ತುತ ಸಮಾಜ ಕುರಿತಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಆನಂದ ಕರ್ಕಿ, ಸುರೇಶ ನರಗುಂದ ಶಿವಾನಂದ ನಾಯಕ, ಬಾಬು ತಿಗಡಿ ಶಿವಾನಂದ ತಲ್ಲೂರ, ಶಶಿಭೂಷಣ ಪಾಟೀಲ, ಸತೀಶ ಪಾಟೀಲ್ ಬಸವರಾಜ ಕರಡಿಮಠ ಸುನಿಲ ಸಾಣಿಕೊಪ್ಪ,ಬಸವರಾಜ ಬಿಜ್ಜರಗಿ,ಸಿ.ಎಂ ನರಸನ್ನವರ, ಆರ್. ಅನೀಲ, ಸುದೀರ ರಘಶೆಟ್ಟಿ, ಜಯಶ್ರೀ ಚವಲಗಿ,ಶ್ರೀದೇವಿ ನರಗುಂದ,ಮಂಗಳ ಕಾಕತಿಕರ ಮಹದೇವ ಕೆಂಪಿಗೌಡ್ರ,ಸುನಂದ ಕೆಂಪಿಗೌಡ್ರ, ಜಯಶ್ರೀ ನಷ್ಟೇ, ವಿದ್ಯಾ ಕರ್ಕಿ ಸೇರಿದಂತೆ ಸಂಘಟನೆಯ ಸದಸ್ಯರು ಮತ್ತು ಸಮಾಜದ ಪ್ರಮುಖರು ಉಪಸ್ಥಿತರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಮಹಾದೇವಿ ಅರಳಿ ಪ್ರಾರ್ಥಿಸಿದರು. ಎಂ ವೈ ಮೆಣಸಿನಕಾಯಿ ಸ್ವಾಗತಿಸಿದರು. ಸಂಗಮೇಶ ಅರಳಿ ನಿರೂಪಿಸಿದರು ವಚನ ಮಂಗಳದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

24th December 2025
****************************
ಬೆಳಗಾವಿ- ಆಧ್ಯಾತ್ಮಿಕ ಮೌಲ್ಯ ಸಂದೇಶವಿರುವ ಕವನ ಸಂಕಲನಗಳು ಇಂದು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಣೆಯಾಗಿವೆ-ಸಂಜೀವ ಪತ್ತಾರ್ ಅವರ ಅಭಿಮತ
ಹೊಸಪೇಟೆ: ಕವಿ, ಸಾಹಿತಿ ದೀಪಕ ಬಿಳ್ಳೂರ ರಚಿಸಿದ ೧, ಬೆಳಕು ತೂರಿದೆ ೨, ಸತ್ಯ ಸಾಧನೆ ೩, ಸೌಂದರ್ಯದ ಗಣಿತಕಾರ ೪, ಸಪ್ತರಂಗಿನ ಹೊಂಬೆಳಕು ೫, ಜಗವೆಲ್ಲ ದಿಗಂಬರ ಕವನ ಸಂಕಲನಗಳ ಲೋಕಾರ್ಪಣೆ
ಕಾರ್ಯಕ್ರಮ ಮಂಗಳವಾರ ದಿ. 23 .12. 2025 ರಂದು ಹೊಸಪೇಟೆಯ ಎಸ್ , ಎಲ್, ಆರ್, ಮೆಟಾಲಿಕ್ಸ ಲಿಮಿಟೆಡ ಕಂಪನಿಯಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಜೀವ ಪತ್ತಾರ್ ಅವರು ೫ ಕವನ ಸಂಕಲನಗಳ ಲೋಕಾರ್ಪಣೆ ಮಾಡಿ ಮಾತನಾಡಿ ಸಾಹಿತಿ , ಕವಿ ದೀಪಕ ಬಿಳ್ಳೂರ ಇವರು ಬೆಳಗಾವಿ ಜಿಲ್ಲೆಯ ಅಥಣಿಯವರು, ಬಿ.ಇ, ಶಿಕ್ಷಣ ಪಡೆದ ಇವರು ವೃತ್ತಿಯಿಂದ ಮೆಕ್ಯಾನಿಕಲ್ ಇಂಜಿನಿಯರ್ ಆದರೂ ಪ್ರವರ್ತಿಯಿಂದ ಕವಿ ಸಾಹಿತಿಗಳು. ಇವರು ಬರೆದಂತಹ ಕವಿತೆಯ ರಚನೆಯಲ್ಲಿ ಸರಳ ಹಾಗೂ ಎಲ್ಲರಿಗೂ ಅರ್ಥವಾಗುವಂತೆ ರಚಿಸಿದ್ದಾರೆ.ಅಲ್ಲಲ್ಲಿ ಉಪಮೇಗಳೊಂದಿಗೆ ಕವಿತೆಗಳನ್ನು ಹೆಣೆದಿರುವುದು ಕಂಡು ಬರುತ್ತದೆ.ಕೆಲ ಸಂದರ್ಭದಲ್ಲಿ ಕವಿತೆಯ ಸಾಲುಗಳಲ್ಲಿ ಬರುವ ಶಬ್ದಗಳ ಗೂಡಾರ್ಥಗಳು ಓದುಗರಿಗೆ ಸವಾಲಿನಂತೆ ಚಿತ್ರಿಸಿರುವುದು ಕವಿಯ ಭಾಷೆಯ ಪ್ರೌಢಮೆ ಮತ್ತು ಜಾನ್ಮೆ ಎದ್ದು ಕಾಣುತ್ತದೆ. ಇವರು ತಮ್ಮ ಕವನಗಳ ಮೂಲಕ ಜೀವನದ ಮೌಲ್ಯಗಳನ್ನು ಮಹತ್ವವನ್ನು ಸಮಾಜ ಸಮುದಾಯದ ಉತ್ತಮ ಅಭಿವೃದ್ಧಿಯನ್ನು ಅವರ ಅಂತರಾಳದ ಭಾವ ಚಿಂತನ ಮಂಥನದ ನವೀನ ಭಾವನೆಗಳಿಂದ ಮೇಳಯಿಸುವ ಕೃತಿಕಾರ ಎಂದರೆ ಅತಿಶಯೋಕ್ತಿ ಆಗಲಾರದು ಎಂಬ ಅಭಿಪ್ರಾಯ ಪಟ್ಟರು.
ಇದೇ ಸಂದರ್ಭದಲ್ಲಿ ಸಾಹಿತಿ ನಾಗರಾಜ ಜಲ್ಲಿ ಅವರು ಮಾತನಾಡಿ, ಶ್ರೀ ದೀಪಕ ಬಿಳ್ಳೂರ ಅವರ ಕವಿತೆಗಳು ಮನುಷ್ಯನ ಕನಸು ,ವ್ಯಕ್ತಿತ್ವ ,ನಾಡು ,ದೇಶ ,ಶಿಲ್ಪ ,ಪ್ರಕೃತಿ ,ಅಭಿವೃದ್ಧಿ ಮತ್ತು ಅದರ ಹಿನ್ನಡೆ ಸಮಕಾಲಿನ ರಾಜಕೀಯ ,ಮನುಷ್ಯನ ವಿವಿಧ ಬಗೆಯ ರಾಗ ದ್ವೇಷಗಳು, ಯೋಧರು ,ಮಾತು, ನಡೆ ನುಡಿ, ಮನೆ, ಕುಟುಂಬ, ಒಮ್ಮೆ ವೈರಾಗ್ಯ ಹೀಗೆ ಹಲವು ಭಾವಗಳುಳ್ಳ ಕವಿತೆಗಳನ್ನು ರಚಿಸಿದ್ದಾರೆ. ಅಧಿಕಾರ ಹಾಗೂ ಅಹಂಕಾರಕ್ಕಿಂತ ಮಾನವೀಯತೆ ಸಮಾಜದಲ್ಲಿ ನೆಲೆಗೊಳ್ಳಬೇಕು ಅನ್ನುವ ಸಾರವನ್ನು ಇವರ ಕವಿತೆಗಳು ಎತ್ತಿ ಹಿಡಿಯುತ್ತವೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ , ರಜನಿ ದೇಸಾಯಿ, ಬಸವರಾಜ್ ಜವಲಿ,ರಾಘವೇಂದ್ರ, ಸೇರಿದಂತೆ ಅನೇಕ ಸಾಹಿತ್ಯಸಕ್ತರು ಉಪಸ್ಥಿತರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ರಜನಿ ದೇಸಾಯಿ ಸ್ವಾಗತಿಸಿದರು. ರಾಘವೇಂದ್ರ ಕೃತಿಕಾರರನ್ನು ಪರಿಚಯಿಸಿದರು, ಜವಲಿ ಅವರು ನಿರೂಪಿಸಿ ವಂದಿಸಿದರು. ಈ ಸಂದರ್ಭದಲ್ಲಿ ಶ್ರೀ ವೆಂಕಟೇಶ್ ಬಡಿಗೇರ್ ಜಿಲ್ಲಾಧ್ಯಕ್ಷರು ಮಕ್ಕಳ ಸಾಹಿತ್ಯ ಪರಿಷತ್ತು ಹಾಗೂ ಸಂಚಾಲಕರು ಚಕೋರ ವಿಚಾರ ಸಾಹಿತ್ಯ ವೇದಿಕೆ. ವಿಜಯನಗರ ಜಿಲ್ಲೆ ಡಾ.ದಯಾನಂದ ಕಿನ್ನಾಳ. ಚಂದ್ರಶೇಖರ್ ರೋಣದ ಮಠ.ಸೋಧ ವಿರುಪಾಕ್ಷಗೌಡ. ಟಿ ಬಸವರಾಜ್. ವಿರುಪಾಕ್ಷಯ್ಯ ಸ್ವಾಮಿ. ಶ್ರೀ ಮುದೇನೂರು ಉಮಾಮಹೇಶ್ವರ ಶುಭ ಹಾರೈಸಿದ್ದಾರೆ