


26th June 2026
ಸೊಲ್ಲಾಪೂರ*- ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡ ಇದರ ಆಶ್ರಯದಲ್ಲಿ ಮಹಾರಾಷ್ಟ್ರದ ಸೋಲಾಪುರದ ಶ್ರೀ ಸಿದ್ದೇಶ್ವರ ದೇವಸ್ಥಾನದ ಸಮೀಪದ ಹುತಾತ್ಮ ಸ್ಮೃತಿ ಮಂದಿರದಲ್ಲಿ 2026 ಜೂನ್ 20 ಮತ್ತು 21 ರಂದು ನಡೆದ ಅಖಿಲ ಭಾರತ ಹೊರನಾಡ ಕನ್ನಡ ಸಂಘಗಳ ಪ್ರತಿನಿಧಿಗಳ 10 ನೇ ಮಹಾಮೇಳದಲ್ಲಿ ಹೊರನಾಡ ಕನ್ನಡಿಗರ ಗೋಷ್ಠಿಯಲ್ಲಿ ಕಾಸರಗೋಡಿನ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಅವರು ಗಡಿನಾಡು ಕಾಸರಗೋಡು ಕನ್ನಡಿಗರ ಕುರಿತು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.
ಹಲವು ದಶಕಗಳ ಹಿಂದೆ ರಾಷ್ಟ್ರೀಯ ಸ್ಮಾರಕವಾಗಿ ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಕೇರಳ - ಕರ್ನಾಟಕ ಸರಕಾರಗಳ ಜಂಟಿ ಸಹಭಾಗಿತ್ವದಲ್ಲಿ 2017 ಜನವರಿ 11 ರಂದು ಕೇರಳ ಮುಖ್ಯ ಮಂತ್ರಿ ಪಿಣರಾಯಿ ವಿಜಯನ್ ಹಾಗೂ ಕರ್ನಾಟಕ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ವಿಶೇಷ ಅನುದಾನ ನೀಡಿ ರಾಷ್ಟ್ರಕವಿ ಗೋವಿಂದ ಪೈ ಸಾಂಸ್ಕೃತಿಕ ಕೇಂದ್ರ - ಗಿಳಿವಿಂಡು, ಮತ್ತು ಭವನಿಕಾ ಲಲಿತಕಲಾ ಮಂದಿರವನ್ನು ಉದ್ಘಾಟಿಸಿದ್ದು ಆನಂತರ ಪುನರ್ ನಿರ್ಮಾಣ ಕಾಮಗಾರಿಯು ಪರಿಪೂರ್ಣವಾಗದೆ ಸ್ಥಗಿತಗೊಂಡಿತ್ತು. ರಾಷ್ಟ್ರ ಕವಿ ಹೆಸರಿನಲ್ಲಿ ಟ್ರಸ್ಟ್ ಸಮಿತಿಯನ್ನು ರೂಪೀಕರಿಸಿ ಕಾರ್ಯ ಪ್ರವೃತ್ತರಾದರೂ, ಇವುಗಳ ನಿರಾಸಕ್ತಿಯಿಂದ ರಾಷ್ಟ್ರಕವಿ ನಿವಾಸ,ಗ್ರಂಥ ಭಂಡಾರ,ವಸ್ತು ಸಂಗ್ರಹಾಲಯ, ಅತಿಥಿ ಗೃಹ, ಒಳಸಭಾಂಗಣ, ಸಭಾ ಭವನದ ಕಾಮಗಾರಿಗಳು ಅಪೂರ್ಣವಾಗಿದ್ದು,ಇರುವ ಇಬ್ಬರು ಅರೆಕಾಲಿಕ ನೌಕರರಿಗೆ ತಿಂಗಳ ಸಂಬಳ ಪಾವತಿಯಾಗದೇ ಶೋಚನೀಯ ಸ್ಥಿತಿಯಲ್ಲಿದೆ. ಗೋವಿಂದ ಪೈ ನಿಧನದ ಬಳಿಕ ರಾಷ್ಟ್ರ ಕವಿ ಸ್ಮಾರಕ ನಿರ್ಮಿಸುವ ಉದ್ದೇಶದಿಂದ ಅವರ 1.82 ಎಕರೆ ಭೂಮಿಯಲ್ಲಿ ರಾಷ್ಟ್ರಕವಿ ಸ್ಮಾರಕದ ಸಮಗ್ರ ಅಭಿವೃದ್ಧಿಗಾಗಿ ಕುಟುoಬಸ್ಥರು ಕೇರಳ ಸರಕಾರಕ್ಕೆ ಹಸ್ತಾಂತರಿಸಿದರು. ಕನ್ನಡದ ಪ್ರಥಮ ರಾಷ್ಟ್ರಕವಿ ಗೋವಿಂದ ಪೈ ನಿವಾಸ ಗಿಳಿವಿಂಡುವನ್ನು
ಪುನರ್ ನಿರ್ಮಾಣಗೊಳಿಸುವ ಉದ್ದೇಶದಿಂದ ಕೇರಳ ಸರಕಾರದ ನೂತನ ಮುಖ್ಯಮಂತ್ರಿ ವಿ.ಡಿ ಸತೀಶನ್, ಕರ್ನಾಟಕ ಸರಕಾರದ ಮುಖ್ಯ ಮಂತ್ರಿ ಡಿ. ಕೆ. ಶಿವಕುಮಾರ್ ಹಾಗೂ ಕರ್ನಾಟಕ ಮಾಜಿ ಮುಖ್ಯಮಂತ್ರಿ ಡಾ. ಎಂ. ವೀರಪ್ಪ ಮೊಯ್ಲಿ ಅವರಲ್ಲಿಗೆ ರಾಜ್ಯದ ಹಿರಿಯ ಸಾಹಿತಿಗಳು, ವಿದ್ವಾಂಸರು,ಕಲಾವಿದರು, ಚಲನಚಿತ್ರನಟರು, ಮಾಧ್ಯಮದವರು,ವಿವಿಧ ಸಂಘಟನೆಗಳ ಪ್ರತಿನಿಧಿಗಳನ್ನೊಳಗೊಂಡ ಉನ್ನತ ಮಟ್ಟದ ನಿಯೋಗದೊಂದಿಗೆ ಭೇಟಿ ಮಾಡಿ ಮನವಿಯನ್ನು ಸಲ್ಲಿಸಲಾಗುವುದು.
ಕೇರಳ - ಕರ್ನಾಟಕ ಸರಕಾರದ ಜಂಟಿ ಸಹಯೋಗದಲ್ಲಿರುವ ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಟ್ರಸ್ಟ್ ಸಮಿತಿಯನ್ನು ಪುನರ್ ರೂಪೀಕರಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ, ನಿರ್ದೇಶಕರಿಗೆ ಪ್ರತ್ಯೇಕ ಮನವಿ ಸಲ್ಲಿಸಿ ಒತ್ತಾಯಿಸಲಾಗಿದೆ.ಪ್ರಥಮ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ನಿವಾಸವನ್ನು ವಿಶ್ವಮಟ್ಟದಲ್ಲಿ ಗುರುತಿಸುವಂತಾಗಲು ಕರ್ನಾಟಕ ಮುಖ್ಯಮಂತ್ರಿಗಳು ವಿಶೇಷ ಮುತುವರ್ಜಿ ವಹಿಸಬೇಕೆಂದು ಕರ್ನಾಟಕ ರಾಜ್ಯದ ಎಲ್ಲಾ ಸಂಘ-ಸಂಸ್ಥೆಗಳು ಒಮ್ಮತದಿಂದ ಕೇರಳ ಮತ್ತು ಕರ್ನಾಟಕ ಸರಕಾರದ ಮುಖ್ಯ ಮಂತ್ರಿಗಳಿಗೆ ನಿರಂತರ ಮನವಿಯನ್ನು ಸಲ್ಲಿಸುವ ಮೂಲಕ ಅಗ್ರಹಿಸಬೇಕಾಗಿದೆ.
ಕೇರಳ ಸರಕಾರವು ಕೇರಳ ಕನ್ನಡ ಅಕಾಡೆಮಿ ಸ್ಥಾಪಿಸಲು ಮನವಿ
ಕೇರಳ ರಾಜ್ಯದಲ್ಲಿ ನೆಲೆಸಿರುವ ಸರ್ವ ಕನ್ನಡಿಗರು, ಕನ್ನಡ ಉಪಭಾಷೆಯ ಜನಾಂಗದವರ ಹಿತರಕ್ಷಣೆಗಾಗಿ ಹಾಗೂ ಕನ್ನಡ ಭಾಷೆ,ಸಾಹಿತ್ಯ, ಸಂಸ್ಕೃತಿ, ಪರಂಪರೆ ಇತಿಹಾಸವನ್ನು ಉಳಿಸಿ ಬೆಳೆಸಲು ಸಮಗ್ರವಾದ ಸಾಂಸ್ಕೃತಿಕ ಕನ್ನಡೀಕರಣ ಯೋಜನೆಯನ್ನು ಸಿದ್ಧಪಡಿಸಿ, ಮುಂದಿನ ಬಜೆಟ್ ನಲ್ಲಿ ಕೇರಳ ಸರಕಾರವು ಒಂದು ಕೋಟಿ ರೂಪಾಯಿ ಮೊತ್ತದ ಕನ್ನಡ ಸಾಂಸ್ಕೃತಿಕ ನಿಧಿಯೊoದನ್ನು ಸ್ಥಾಪಿಸಿ, ನೂತನವಾಗಿ ಕೇರಳ ಕನ್ನಡ ಅಕಾಡೆಮಿಯನ್ನು ಸ್ಥಾಪಿಸಬೇಕೆಂದು ಪ್ರಸ್ತಾವನೆಯ ಮನವಿಯನ್ನು ಕೇರಳ ಮುಖ್ಯಮಂತ್ರಿ ವಿ.ಡಿ ಸತೀಶನ್ ಅವರಿಗೆ ನೀಡಿ ಒತ್ತಾಯಿಸಲಾಗಿದೆ.
ಕೇರಳ ಸರಕಾರವು ಮಲಯಾಳಂ ಭಾಷಾ ಬಿಲ್ಸ್ -2025 ಸೂಕ್ತ ತಿದ್ದುಪಡಿಗೆ
ಆಗ್ರಹಿಸಿ ಕೇರಳ ಮುಖ್ಯ ಮಂತ್ರಿಗೆ ಮನವಿ
ಕೇರಳ ಸರಕಾರವು (ಮಲಯಾಳಂ ಭಾಷಾ ಬಿಲ್ಸ್- 2025) ಮಲಯಾಳ ಭಾಷಾ ಮಸೂದೆಯನ್ನು ಕೇರಳ ವಿಧಾನಸಭೆಯಲ್ಲಿ ಅಂಗೀಕರಿಸಿದ್ದು ಈ ಮಸೂದೆಯನ್ನು ಪುನರ್ ಪರಿಶೀಲಿಸಿ ಸೂಕ್ತ ತಿದ್ದುಪಡಿಗಳನ್ನು ಮಾಡುವುದು ಕಾಸರಗೋಡು ಕನ್ನಡಿಗರು ಹಾಗೂ ಕನ್ನಡ ಮಕ್ಕಳ ಭಾಷಾ ಮತ್ತು ಶೈಕ್ಷಣಿಕ ಹಕ್ಕುಗಳ ಸಂರಕ್ಷಣೆಗಾಗಿ ಕೇರಳ ಹೈ ಕೋರ್ಟ್ ನಲ್ಲಿ ರಿಟ್ ಅರ್ಜಿಗಳನ್ನು ಸಲ್ಲಿಸಿ ಕಾನೂನು ಹೋರಾಟ ನಡೆಸುತ್ತಿದ್ದು, ಕಾಸರಗೋಡು ಕನ್ನಡಿಗರ ನ್ಯಾಯಯುತ ಹಕ್ಕುಗಳನ್ನು ಸಂರಕ್ಷಿಸುವ ಜವಾಬ್ದಾರಿಯು ಕಾಸರಗೋಡು ಜಿಲ್ಲೆಯ ಶಾಸಕರು,ಜನಪ್ರತಿನಿಧಿಗಳು ಹಾಗೂ ಕೇರಳ ಸರಕಾರದ ಕರ್ತವ್ಯವಾಗಿದ್ದು,ಈ ಕುರಿತು ಕೇರಳ ಮುಖ್ಯಮಂತ್ರಿ ವಿ. ಡಿ ಸತೀಶನ್ ಅವರಿಗೆ, ಕರ್ನಾಟಕ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಭಾರತೀಯ ಜನತಾ ಪಾರ್ಟಿಯ ಕೇರಳ ರಾಜ್ಯ ಸಮಿತಿಯ ಅಧ್ಯಕ್ಷ ರಾಜೀವ್ ಚಂದ್ರಶೇಖರ್, ಭಾರತೀಯ ಜನತಾ ಪಾರ್ಟಿಯ ಕರ್ನಾಟಕ ರಾಜ್ಯ ಸಮಿತಿಯ ಅಧ್ಯಕ್ಷ ಬಿ. ವೈ. ವಿಜಯೇಂದ್ರ, ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ. ಎಲ್. ಸಂತೋಷ್ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಗಿದೆ.
ಕೇರಳ ರಾಜ್ಯ 8 ನೇ ಕನ್ನಡ ಸಮ್ಮೇಳನ - 2026 ಮತ್ತು ಕೇರಳ - ಕರ್ನಾಟಕ ಉತ್ಸವಕ್ಕೆ ಕರ್ನಾಟಕ ಸರ್ಕಾರದಿಂದ ವಿಶೇಷ ಅನುದಾನಕ್ಕೆ ಮನವಿ
ಕಾಸರಗೋಡು ಕನ್ನಡ ಗ್ರಾಮದಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ(ರಿ.), ಕಾಸರಗೋಡು ನೇತೃತ್ವದಲ್ಲಿ 2026 ನವಂಬರ್ 7 ಮತ್ತು 8 ರಂದು ನಡೆಯುವ ಕೇರಳ ರಾಜ್ಯ 8ನೇ ಕನ್ನಡ ಸಮ್ಮೇಳನ- 2026 ಮತ್ತು ಕೇರಳ -ಕರ್ನಾಟಕ ಉತ್ಸವ, ಕೇರಳ -ಕರ್ನಾಟಕ ಕನ್ನಡ ರಾಜ್ಯೋತ್ಸವದ ಯಶಸ್ವಿ ಸಂಘಟನೆಗೆ ಕರ್ನಾಟಕ ಸರಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರಿಂದ 50 ಲಕ್ಷ ರೂಪಾಯಿ ಮೊತ್ತದ ವಿಶೇಷ ಅನುದಾನವನ್ನು ನೀಡಬೇಕೆಂದು ಮನವಿ ಸಲ್ಲಿಸಲಾಗಿದೆ.
ಕೇರಳ - ಕರ್ನಾಟಕ ಭವನ ನಿರ್ಮಾಣಕ್ಕೆ ಕರ್ನಾಟಕ ಸರಕಾರದಿಂದ ವಿಶೇಷ ಅನುದಾನಕ್ಕೆ ಮನವಿ ಕಾಸರಗೋಡಿನಲ್ಲಿ ನಿರಂತರವಾಗಿ ಕನ್ನಡ ಭಾಷೆ, ಸಾಹಿತ್ಯ,ಸಾಂಸ್ಕೃತಿಕ ಚಟುವಟಿಕೆಯನ್ನು ಹಮ್ಮಿಕೊಳ್ಳುವ ಉದ್ದೇಶದಿಂದ ಕಾಸರಗೋಡು ಕನ್ನಡ ಗ್ರಾಮದಲ್ಲಿ ಸುಮಾರು 6 ಕೋಟಿ ರೂಪಾಯಿ ವೆಚ್ಚದಲ್ಲಿ ಎರಡು ಅಂತಸ್ತಿನ ಕೇರಳ- ಕರ್ನಾಟಕ ಭವನ ಸಾಂಸ್ಕೃತಿಕ ಸಮುಚ್ಚಯದ ನಿರ್ಮಾಣ ಯೋಜನೆಯನ್ನು ಕೈಗೊಳ್ಳಲಾಗಿದೆ.
ಕೇರಳ - ಕರ್ನಾಟಕ ಭವನದಲ್ಲಿ ನಾಲ್ಕು ಅತಿಥಿಗೃಹಗಳು,ಸಾಂಸ್ಕೃತಿಕ ಸಭಾಂಗಣ,ಪ್ರಾದೇಶಿಕ ಜಾನಪದ ವಸ್ತು ಸಂಗ್ರಹಾಲಯ, ಆರ್ಟ್ ಗ್ಯಾಲರಿ,ಗ್ರಂಥಾಲಯ, ಸಾರ್ವಜನಿಕ ಸಂಪರ್ಕ- ಮಾಧ್ಯಮ ಕೇಂದ್ರ, ಕಾಸರಗೋಡು ಸ್ವಉದ್ಯೋಗ ತರಬೇತಿ ಕೇಂದ್ರ, ಕಾಸರಗೋಡು ಗೋ -ಕುಟೀರ, ಕೃಷಿ ಕುಟೀರ, ಹಿರಿಯ ನಾಗರಿಕರಿಗೆ ಉಚಿತ ವೈದ್ಯಕೀಯ ತಪಾಸಣೆಗಾಗಿ ಗ್ರಾಮೀಣ ಕ್ಲಿನಿಕ್,ಗಡಿನಾಡಿನ ಕನ್ನಡ ವಿದ್ಯಾರ್ಥಿಗಳಿಗಾಗಿ ರಜಾ ದಿನಗಳಲ್ಲಿ ಗುರುಕುಲ ಮಾದರಿಯಲ್ಲಿ ಕನ್ನಡ ಭಾಷೆ, ಸಾಹಿತ್ಯ,ಸಂಗೀತ ನೃತ್ಯ ಸಾಂಸ್ಕೃತಿಕ, ರಂಗಭೂಮಿ, ಯಕ್ಷಗಾನ ಚಟುವಟಿಕೆಗಳ ಅಧ್ಯಯನ ಕೇಂದ್ರವನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಕೇರಳ- ಕರ್ನಾಟಕ ಭವನ ಸಾಂಸ್ಕೃತಿಕ ಸಮುಚ್ಚಯ ನಿರ್ಮಾಣಕ್ಕೆ ಕರ್ನಾಟಕ ಸರಕಾರವು 6 ಕೋಟಿ ರೂಪಾಯಿ ಮೊತ್ತದ ವಿಶೇಷ ಅನುದಾನವನ್ನು ಮುಂದಿನ ಬಜೆಟ್ ನಲ್ಲಿ ಘೋಷಿಸಲು ಮನವಿ ಸಲ್ಲಿಸಲಾಗಿದೆ.ಕೇರಳ - ಕರ್ನಾಟಕ ಭವನದ ಶಿಲಾನ್ಯಾಸವನ್ನು 2026 ನವಂಬರ್ 7 ಮತ್ತು 8ರಂದು ಕರ್ನಾಟಕ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಕೇರಳ ಮುಖ್ಯ ಮಂತ್ರಿ ವಿ. ಡಿ. ಸತೀಶನ್ ಅವರಿಂದ ನೆರವೇರಿಸಲಾಗುವುದು.
ಸಂಪರ್ಕ :-ಶಿವರಾಮ
ಕಾಸರಗೋಡು
ಮೊಬೈಲ್ :-9448572016

23rd May 2026
ಹುಬ್ಬಳ್ಳಿ: ರಾಷ್ಟ್ರೀಯ ಕೋಲಿ ಬೆಸ್ತ ನಿಶಾದ್ ಹಿಂದುಳಿದ ವರ್ಗಗಳ ಮಠಾಧೀಶ್ವರರ ಮಹಾಸಭಾ ನೇತೃತ್ವದಲ್ಲಿ ಶನಿವಾರ ನಗರದ ಖಾಸಗಿ ಹೋಟೆಲ್ ನಲ್ಲಿ ರಾಷ್ಟ್ರೀಯ ವಿಕಾಸಶೀಲ್ ಇನ್ಸಾನ್ ಪಕ್ಷಕ್ಕೆ ಚಾಲನೆ ನೀಡಲಾಯಿತು. ಉತ್ತರ ಕರ್ನಾಟಕದ ಹೆಬ್ಬಾಗಿಲಾದ ಹುಬ್ಬಳ್ಳಿಯಲ್ಲಿ ಪಕ್ಷಕ್ಕೆ ಚಾಲನೆ ನೀಡಲಾಯಿತು.
ರಾಷ್ಟ್ರೀಯ ಸಂಸ್ಥಾಪಕ ಗೌರವ ಅಧ್ಯಕ್ಷ ಮುಖೇಶ ಸಹನಿ ಮಾತನಾಡಿ, ದೇಶದ ಸರ್ವ ಧರ್ಮೀಯರನ್ನು ಒಗ್ಗೂಡಿಸಿ ಕೊಂಡು ರಾಷ್ಟದ ರೈತರು,ಸೈನಿಕರು, ಯುವಜನತೆ, ಮಹಿಳೆಯರು,
ಸಾಮಾಜೀಕ, ಆರ್ಥಿಕ, ಶೈಕ್ಷಣಿಕ ಧಾರ್ಮಿಕ ವಿಜ್ಞಾನ ತಂತ್ರಜ್ಞಾನ ಸೇರಿದ್ದಂತೆ ಸರ್ವತೋಮುಖ ವಾಗಿ ದೇಶ ಪ್ರಗತಿ ಪಥದತ್ತ ಸಾಗಲು ರಾಷ್ಟ್ರೀಯ ವಿಕಾಸಶೀಲ್ ಇನ್ಸಾನ್ ಪಕ್ಷಗೆ ಕರ್ನಾಟಕದ ಮಹಾಜನತೆ ಸಹಕಾರ ನೀಡಬೇಕೆಂದು ಕೋರಿದ್ದರು.
ಪಕ್ಷದ ಅಧ್ಯಕ್ಷ ಸಂತೋಷ ಸಹನಿ ಪಕ್ಷದ ಕುರಿತಾದ ಸಂಕ್ಷಿಪ್ತವಾಗಿ ವಿವರಿಸಿದರು.
ರಾಷ್ಟ್ರೀಯ ಉಪಾಧ್ಯಕ್ಷ ಬಿ.ಕೆ.ಮೋಹನ ಕುಮಾರ ಪಕ್ಷದ ತತ್ವ ಸಿದ್ಧಾಂತ ವಿವರಿಸಿ, ಕರ್ನಾಟಕ ರಾಜ್ಯದ ಪ್ರತಿಯೊಂದು ಗ್ರಾಮ ಪಂಚಾಯತ ಮಟ್ಟದಲ್ಲಿ ಕಾರ್ಯಕರ್ತರು
ಪಕ್ಷವನ್ನು ಬಲಪಡಿಸುವುದರ ಮೂಲಕ ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ಸಕ್ರಿಯರಾಗಬೇಕೆಂದು ಕರೆ ನೀಡಿದರು.

23rd May 2026
ಬೆಳಗಾವಿ: ಆಧುನಿಕ ಜಗತ್ತಿನಲ್ಲಿ ಮಧುಮೇಹ (ಸಕ್ಕರೆ ಕಾಯಿಲೆ) ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಸಮಾಜವನ್ನು ತೀವ್ರವಾಗಿ ಕಾಡುತ್ತಿವೆ. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಅತ್ಯಂತ ನಿಖರ ಹಾಗೂ ಕೈಗೆಟುಕುವ ದರದಲ್ಲಿ ಅತ್ಯಾಧುನಿಕ ವೈದ್ಯಕೀಯ ತಪಾಸಣಾ ಸೇವೆಗಳನ್ನು ಒದಗಿಸಲು 'ಕಾಮಾಖ್ಯಾ ಡೈಗೋಸ್ಟಿಕ್ ಮತ್ತು ಸಂಶೋಧನಾ ಪ್ರಯೋಗಾಲಯ' ಸಜ್ಜಾಗಿದೆ. ಮೇ 24ರ ಭಾನುವಾರದಂದು ಬೆಳಗಾವಿಯ ಸದಾಶಿವ ನಗರದಲ್ಲಿ ಈ ಸುಸಜ್ಜಿತ ಪ್ರಯೋಗಾಲಯದ ಭವ್ಯ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಸ್ಥಾಪಕರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಕಾಂತ ಎಂ. ಕವೀಶ್ವರ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ವಿಶಿಷ್ಟ 'ಕಾಮಾಖ್ಯಾ ಹೆಲ್ತ್ ಕಾರ್ಡ್' ಪರಿಚಯಿಸಿದ ನಿರ್ದೇಶಕ ಅನಿಲ ಪಾಟೀಲ ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ನಿರ್ದೇಶಕರಾದ ಅನಿಲ ಪಾಟೀಲ ಅವರು ಮಾತನಾಡಿ, ಸಾರ್ವಜನಿಕರ ಅನುಕೂಲಕ್ಕಾಗಿ ಸಂಸ್ಥೆಯು ವಿಶೇಷ ಆರೋಗ್ಯ ಯೋಜನೆಯನ್ನು ಜಾರಿಗೆ ತರುತ್ತಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಸಕ್ಕರೆ ಕಾಯಿಲೆಯು ಸಮಾಜದಲ್ಲಿ ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡುತ್ತಿದೆ.
ಇವನ್ನು ನಿಯಂತ್ರಿಸಲು ಮತ್ತು ಮುಂಜಾಗ್ರತಾ ಕ್ರಮ ಕೈಗೊಳ್ಳಲು ನಾವು 'ಕಾಮಾಖ್ಯಾ ಹೆಲ್ತ್ ಕಾರ್ಡ್' ಪರಿಚಯಿಸುತ್ತಿದ್ದೇವೆ. ಕೇವಲ ₹2,499ರ ಒಂದು ಬಾರಿಯ ಚಂದಾದಾರಿಕೆಯೊಂದಿಗೆ ಈ ಕಾರ್ಡ್ ಪಡೆಯಬಹುದು. ವಿಶೇಷವೆಂದರೆ, ಈ ಒಂದು ಕಾರ್ಡ್ ಮೂಲಕ ಇಬ್ಬರು ಗ್ರಾಹಕರ ಜೊತೆಗೆ ಹೆಚ್ಚುವರಿಯಾಗಿ ಮೂರು ಜನರಿಗೆ ಸಂಪೂರ್ಣ ಉಚಿತ ಆರೋಗ್ಯ ತವಾಸಣೆ ಮಾಡಲಾಗುವುದು, ಎಂದು ಅವರು ವಿವರಿಸಿದರು.
ಬೆಳಗಾವಿಯಲ್ಲೇ ಪ್ರಥಮ: ಆ್ಯಪ್ ಆಧಾರಿತ ಬುಕಿಂಗ್ ಸೇವೆ: ಡಿಜಿಟಲ್ ತಂತ್ರಜ್ಞಾನದ ಸದುಪಯೋಗ ಪಡೆದುಕೊಂಡಿರುವ ಕಾಮಾಖ್ಯಾ ಪ್ರಯೋಗಾಲಯವು
ಬೆಳಗಾವಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ಮೊಬೈಲ್ ಆ?ಯಪ್ ಮೂಲಕ ಬುಕಿಂಗ್ ಮಾಡುವ ಅತ್ಯಾಧುನಿಕ ವ್ಯವಸ್ಥೆಯನ್ನು ಪರಿಚಯಿಸಿದೆ.
ಸ್ಟಾರ್ಟ್ ಫೋನ್ ಆ್ಯಪ್: ಈ ಆ್ಯಪ್ ಆಂಡ್ರಾಯ್ಡ್ ಹಾಗೂ ಆಪಲ್ ಎರಡೂ ಪ್ಲಾಟ್ ಫಾರ್ಮ್ ಗಳಲ್ಲಿ ಲಭ್ಯವಿದ್ದು, ಸಾರ್ವಜನಿಕರು ಸುಲಭವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದು.
ತಜ್ಞ ವೈದ್ಯರ ಮೇಲ್ವಿಚಾರಣೆ: ಪ್ರಸ್ತುತ ಸಂಸ್ಥೆಯಲ್ಲಿ ಮೂವರು ಅನುಭವಿ ತಜ್ಞ ವೈದ್ಯರ ತಂಡವಿದ್ದು, ಇಡೀ ಪ್ರಕ್ರಿಯೆಯನ್ನು ಹತ್ತಿರದಿಂದ ನಿರ್ವಹಿಸಲಿದೆ.
ವಾಟ್ಸಾಪ್ನಲ್ಲಿ ವರದಿ: ಗ್ರಾಹಕರು ತಪಾಸಣೆ ಮಾಡಿಸಿಕೊಂಡ ನಂತರ ಅವರ ವೈದ್ಯಕೀಯ ವರದಿಗಳನ್ನು ನೇರವಾಗಿ ಅವರ ವಾಟ್ಸಾಪ್ ಸಂಖ್ಯೆಗೆ ಕಳುಹಿಸುವ ಡಿಜಿಟಲ್ ವ್ಯವಸ್ಥೆ ಮಾಡಲಾಗಿದೆ.
ಗ್ರಾಮೀಣ ಭಾಗಕ್ಕೆ ಕಾಲ್ ಸೆಂಟರ್: ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗುವಂತೆ ಸಂಸ್ಥೆಯು ಸ್ವಂತ ಕಾಲ್ ಸೆಂಟರ್ ಹೊಂದಿದ್ದು, ಕೇವಲ ಒಂದು ಫೋನ್ ಕರೆಯ ಮೂಲಕವೂ ಸಾರ್ವಜನಿಕರು ಈ ಎಲ್ಲಾ ಸೌಲಭ್ಯಗಳನ್ನು ತಮ್ಮದಾಗಿಸಿಕೊಳ್ಳಬಹುದು.
ರಾಷ್ಟ್ರೀಯ ಗುಣಮಟ್ಟದ ಮಾನ್ಯತೆ ಪಡೆದ ಈ ಅತ್ಯಾಧುನಿಕ ಪ್ರಯೋಗಾಲಯದಲ್ಲಿ ಈ ಕೆಳಗಿನ ಉನ್ನತ ಮಟ್ಟದ ಪರೀಕ್ಷೆಗಳು ಲಭ್ಯವಿವೆ.
ಉನ್ನತ ಮಟ್ಟದ ಪ್ರಯೋಗಾಲಯ ಪರೀಕ್ಷೆಗಳು, ಸಂಪೂರ್ಣ ರಕ್ತ ಪರೀಕ್ಷೆಗಳು, ಇ.ಸಿ.ಜಿ ಸೇವೆ, ಶ್ವಾಸಕೋಶದ ಸಾಮರ್ಥ್ಯ ಪರೀಕ್ಷೆ, ಶ್ರವಣ ದೋಷ ಪರೀಕ್ಷೆ, ಉದ್ಯೋಗ ಪೂರ್ವ ಆರೋಗ್ಯ ತಪಾಸಣೆ, ನಿಯತಕಾಲಿಕ ಉದ್ಯೋಗದ ಆರೋಗ್ಯ ತಪಾಸಣೆ, ಮನೆ ಬಾಗಿಲಿಗೇ ಬಂದು ಮಾದರಿ ಸಂಗ್ರಹಣೆ, ಮೇ 24, 2026ರಂದು ಬೆಳಗಾವಿಯ ಸದಾಶಿವ ನಗರದಲ್ಲಿ ನಡೆಯಲಿರುವ ಈ ಉದ್ಘಾಟನಾ ಸಮಾರಂಭದಲ್ಲಿ ನಾಡಿನ ಪ್ರಮುಖ ರಾಜಕೀಯ ಧುರೀಣರು ಹಾಗೂ ಪ್ರಮುಖ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ, ಶಾಸಕರುಗಳಾದ ಅಭಯ ಪಾಟೀಲ ಹಾಗೂ ಆಸೀಫ್ (ರಾಜು) ಸೇಶ್, ಜಿಲ್ಲಾಧಿಕಾರಿ ಮೊಹಮ್ಮದ ರೋಷನ್, ಮಾಜಿ ಶಾಸಕ ಸಂಜಯ ಪಾಟೀಲ, ಡಿಸಿಪಿ ನಾರಾಯಣ ಭರಮನಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಐ.ಪಿ. ಗಡೇದ, ಬಿಮ್ಸ್ ನಿರ್ದೇಶಕರಾದ ಡಾ. ಅಶೋಕ ಕುಮಾರ ಶೆಟ್ಟಿ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯರಾದ ಮಹಾಂತೇಶ ಕವಟಗಿಮಠ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರಲಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಲಾಯಿತು.

15th May 2026
ಶ್ರೀ సి.ఎం. ಮುತ್ಯಾಲಪ್ಪ ಮತ್ತು ಶ್ರೀಮತಿ ಕದರಮ್ಮ ದಂಪತಿಗಳ ಮಗನಾಗಿ 1955ರಲ್ಲಿ ಜನಿಸಿರುವ ತಿಮ್ಮಯ್ಯನವರು ಬಿ.ಎಸ್ಸಿ ಪದವೀಧರರು. ರಂಗಭೂಮಿ ಇವರ ನೆಚ್ಚಿನ ಕ್ಷೇತ್ರ. ಬಾಲ್ಯದಲ್ಲಿ ಪೌರಾಣಿಕ ನಾಟಕಗಳನ್ನು ನೋಡುತ್ತಾ ರಂಗಭೂಮಿಯ ಗೀಳನ್ನು ಅಂಟಿಸಿಕೊಂಡು ನಂತರ ಶಾಲಾ ದಿನಗಳಲ್ಲಿ ಶಿಕ್ಷಕಿಯರ ಪ್ರೋತ್ಸಾಹದಿಂದ ರಂಗಪ್ರವೇಶ ಮಾಡಿ ನಾಟಕಗಳಲ್ಲಿ ನಟಿಸುವ ಅವಕಾಶ ಪಡೆದರು. ಕಾಲೇಜು ದಿನಗಳು ಮುಗಿದ ಮೇಲೆ ಉತ್ಸಾಹಿ ಯುವಕರನ್ನು ಒಗ್ಗೂಡಿಸಿಕೊಂಡು 2.៥.১০. ಕಲಾವಿದರು ಎಂಬ ಸ್ವಂತ ನಾಟಕ ತಂಡವನ್ನು ಶ್ರೀ ಸಿ.ಎಂ. ತಿಮ್ಮಯ್ಯ ಕಟ್ಟಿದ್ದಾರೆ. 25 ವರ್ಷಗಳಿಂದ ಸತತವಾಗಿ ಡಾ. ಬಿ. ಆರ್. ಅಂಬೇಡ್ಕರ್ ಸ್ಕಾರಕ ಅಖಿಲ ಭಾರತ ಕನ್ನಡ ನಾಟಕ ಸ್ಪರ್ಧೆಯನ್ನು ನಡೆಸಿಕೊಂಡು ಬಂದಿದ್ದಾರೆ.
ದೆಹಲಿ, ಬಾಂಬೆ, ಲಕ್ನೊ, ಕೇರಳ, ಕೊಲ್ಕತ್ತಾ, ಕಾಶಿ, ನೇಪಾಳ, ಹೈದರಾಬಾದ್, ಕಾಸರಗೋಡು, ಗೋವಾ. ಅಂಡಮಾನ್ ಮುಂತಾದ ಕಡೆಗಳಲ್ಲಿ ತಮ್ಮ ತಂಡದೊಂದಿಗೆ ಹೋಗಿ ನಾಟಕಗಳನ್ನು ಪ್ರದರ್ಶಿಸಿದ್ದಾರೆ. ಇವರ ತಂಡದ ಡಾ|| ಚಂದ್ರಶೇಖರ ಕಂಬಾರರ ಸಂಗ್ಯಾ ಬಾಳ್ಯ ನೃತ್ಯ ರೂಪಕ ನಾಟಕ ಸುಮಾರು 30 ಪ್ರದರ್ಶನಗಳನ್ನು ಕಂಡಿದೆ. ಇದು ವಿ.ಕೆ.ಎಂ. ಕಲಾವಿದರು ನಾಟಕ ತಂಡದ ಹೆಗ್ಗಳಿಕೆ. ಶ್ರೀ ಸಿ.ಎಂ. ತಿಮ್ಮಯ್ಯ ಅವರು ದೆಹಲಿಯ ಕರ್ನಾಟಕ ಭವನದಲ್ಲಿ ಮಾರ್ಚ್ 22 ಮತ್ತು 23.1999 ರಂದು ಸತತವಾಗಿ 30 ಗಂಟೆಗಳ ಕಾಲ ನಿರಂತರವಾಗಿ ಅಭಿನಯಿಸಿ ಗಿನ್ನಿಸ್ ದಾಖಲೆ ಮಾಡಲು ಪ್ರಯತ್ನಿಸಿರುತ್ತಾರೆ. ಇವರ ಪ್ರತಿಭೆಯನ್ನು ಗುರುತಿಸಿ ಇಂಗ್ಲೆಂಡಿನ ಡಿಕ್ಷನರಿ ಆಫ್ ಇಂಟರ್ನ್ಯಾಷನಲ್ ಬಯೋಗ್ರಫಿ ಸಂಸ್ಥೆಯವರು ವಿಶ್ವದ 2 ಲಕ್ಷಕ್ಕೂ ಹೆಚ್ಚಿನ ಪ್ರತಿಭಾವಂತರ ಜೊತೆಗೆ ತಮ್ಮ ಮುಂದಿನ ಸಂಚಿಕೆಯಲ್ಲಿ ದಾಖಲಿಸಲು ಶ್ರೀ ಸಿ.ಎಂ. ತಿಮ್ಮಯ್ಯನವರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಇದೊಂದು ನಾಡಿಗೆ ಹೆಮ್ಮೆ ತರುವ ವಿಚಾರ.
ಇವರು ಅಭಿನಯಿಸಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದ ನಾಟಕಗಳು ಲಚ್ಚಿ, ಕುದುರೆ, ಮೊಟ್ಟೆ, ರತ್ತೋರತ್ತೋ ರಾಯನ ಮಗಳೆ, ಮೀನಿನ ಹೆಜ್ಜೆ, ಬೆಳಕಿನೆಡೆಗೆ, ಜೋಕುಮಾರ ಸ್ವಾಮಿ, ಸಂಗ್ಯಾಬಾಳ್ಯ ನಾಗಮಂಡಲ, ಅಂಬರ ಬಾಲೆ, ಕಪ್ಪು ನೆಲದಲ್ಲಿ ಕೆಂಪು ಹೂ, ಬೆಳ್ಳಕ್ಕಿ ಹಿಂಡು ಬೆದರ್ಯಾವೋ, ಮೊದಲಾದವು. ಇವರ ಅತ್ಯುತ್ತಮ ನಿರ್ದೇಶನದ ನಾಟಕಗಳು ಲಚ್ಚಿ, ದೇವರ ಹೆಣ. ಮುಂತಾದವು.
ಇವರ ಪ್ರತಿಭೆಗೆ ಪ್ರಾಶಸ್ತ್ರ ಸಿಕ್ಕು ಇವರಿಗೆ ಕೆಂಪೇಗೌಡ ಪ್ರಶಸ್ತಿ, ಹಾಗೂ ಇವರ ವಿ.ಕೆ.ಎಂ. ಕಲಾವಿದರು ತಂಡಕ್ಕೆ ಕರ್ನಾಟಕ ನಾಟಕ ಅಕಾಡೆಮಿಯಿಂದ ಮಾನ್ಯತಾ ಪತ್ರ ಸಿಕ್ಕಿದೆ.
ಶ್ರೀ ಸಿ.ಎಂ. ತಿಮ್ಮಯ್ಯ ಇವರ ರಂಗಭೂಮಿಯಲ್ಲಿನ ಸೇವೆ ಮತ್ತು ಸಾಧನೆಗಳನ್ನು ಪರಿಗಣಿಸಿ ಇವರಿಗೆ ಸಾಮಾಜಿಕ ಕ್ರಾಂತಿಕಾರಿ ಶ್ರೀ ಬಸವೇಶ್ವರರ ಜಯಂತಿ ಅಂಗವಾಗಿ ಪ್ರತಿಷ್ಠಿತ ಕರ್ನಾಟಕ ವಿಭೂಷಣ ರಾಜ್ಯ ಪ್ರಶಸ್ತಿಯು ಸೇರಿದಂತೆ ನೂರಾರು ಪ್ರಶಸ್ತಿಗಳು ಅವರನ್ನು ಅರಸಿ ಬಂದಿವೆ. ಇಂಥಹ ಅಪರೂಪದ ರಂಗ ಕಲಾವಿದರನ್ನು ಪಡೆದಿರುವ ಕರ್ನಾಟಕ ರಾಜ್ಯ ಧನ್ಯತೆಯಿಂದ ಕೂಡಿದೆ ಎನ್ನಬಹುದು.ವಿಶಿಷ್ಠ ಕಲಾವಿದರಾದ ಇವರು ಇನ್ನಷ್ಟು ಸಾಧನೆ ಮಾಡಲಿ. ರಾಜ್ಯ ಸರಕಾರ, ಸಂಘ ಸಂಸ್ಥೆಗಳಿಂದ ಇವರ ಪ್ರತಿಭೆಗೆ ಗೌರವ ಸನ್ಮಾನಗಳು ಲಭಿಸಲೆಂದು ಹಾರೈಸೋಣ.

11th April 2026
ನೇಸರಗಿ: ಗ್ರಾಮದ ವಕೀಲ ಶೀತಲಕುಮಾರ ಹಾಗೂ
ಶಿಕ್ಷಕಿ ಈರಮ್ಮ ಅವರ ಪುತ್ರಿ ದಾನೇಶ್ವರಿ ಕಾಡಣ್ಣವರ ಪಿಯುಸಿ ವಿಜ್ಞಾನ ವಿಭಾಗದಲ್ಲಿ 600% 582 50 8 8.97 ತಾಂಶ ಮಾಡಿ ಗ್ರಾಮಕ್ಕೆ ಹಾಗೂ ಹುಬ್ಬಳ್ಳಿ ವಿದ್ಯಾನಿಕೇತನ ಸೈನ್ಸ್ ಕಾಲೇಜಿಗೆ ಕೀರ್ತಿ ತಂದಿದ್ದಾಳೆ.

2nd April 2026
ನೇಸರಗಿ - ಗ್ರಾಮದ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ 1999-2002 ನೇ ಸಾಲಿನ ಬಿ. ಎ ವ್ಯಾಸಂಗ ಮಾಡಿದ್ದ ವಿದ್ಯಾರ್ಥಿ- ವಿದ್ಯಾರ್ಥಿನೀಯರಿಂದ ಗುರುವಂದನೆ ಹಾಗೂ ಸ್ನೇಹಿತರ ಪುನರ್ ಮಿಲನ ಸಮಾರಂಭ ಹಾಗೂ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಡಾ. ಎಫ್.ಡಿ. ಗದ್ದಿಗೌಡರ ವಿರಚಿತ 'ಗುರು ನೀನು ಶಿಷ್ಯ ನಾನು ' ಧ್ವನಿ ಸುರುಳಿ ಬಿಡುಗಡೆ ಸಮಾರಂಭ ದಿ. 5-4-2026 ರಂದು ಮುಂಜಾನೆ 9 ಘಂಟೆಗೆ ಕಾಲೇಜಿನ ಸಭಾಂಗಣದಲ್ಲಿ ನೆರವೇರಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಚನ್ನಮ್ಮನ ಕಿತ್ತೂರು ಶಾಸಕರು, ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಬಾಬಾ ಸಾಹೇಬ ಪಾಟೀಲ ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಎಫ್ .ಡಿ. ಗದ್ದಿಗೌಡರ ವಹಿಸಲಿದ್ದಾರೆ. ಮುಖ್ಯ ಅಥಿತಿಗಳಾಗಿ ನಿವೃತ್ತ ಜಂಟಿ ನಿರ್ದೇಶಕರಾದ ವಿ .ಎಸ್. ಪ್ರಕಾಶ, ಅಥಿತಿಗಳಾಗಿ ನಿವೃತ್ತ ಪ್ರಾಚಾರ್ಯ, ಜನಪ್ರೀಯ ಸಾಹಿತಿಗಳಾದ ಡಾ. ವಾಯ್ .ಎಮ್. ಯಾಕೊಳ್ಳಿ, ಕಾಲೇಜು ಸುಧಾರಣೆ ಸಮಿತಿ ಉಪಾಧ್ಯಕ್ಷರಾದ ಅಡಿವೆಪ್ಪ ಮಾಳಣ್ಣವರ, ಕಾಲೇಜು ಸುಧಾರಣೆ ಸಮಿತಿಯ ಸದಸ್ಯರು,1999-2002 ರಲ್ಲಿ ಶಿಕ್ಷಣ ಕಲಿಸಿದ ಉಪನ್ಯಾಸಕರು, ಸದ್ಯದ ಉಪನ್ಯಾಸಕರು, ಭೋಧಕ ಭೋಧಕೇತರ ಸಿಬ್ಬಂದಿ,1999-2002 ರಲ್ಲಿ ಬಿ.ಎ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು, ವಿದ್ಯಾರ್ಥಿ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆಂದು ಪ್ರಾಚಾರ್ಯ ಡಾ.ಎಫ್.ಡಿ.ಗಡ್ಡಿಗೌಡರ ತಿಳಿಸಿದ್ದಾರೆ.

26th March 2026
ನೇಸರಗಿ- ಶಾಲೆಯ ಸರ್ವಾಂಗೀಣ ಪ್ರಗತಿಗೆ ಶಾಲಾ ಆಡಳಿತ ಮಂಡಳಿ ಶ್ರಮಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೋಳಿ ಹೇಳಿದರು.
ಸಮೀಪದ ದೇಶನೂರ ಗ್ರಾಮದ ವಿಕಾಸ ಪ್ರಾಥಮಿಕ ಮತ್ತು ಪ್ರೌಢಶಾಲೆಗೆ ಬೇಟಿ ಆಡಳಿತ ಮಂಡಳಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ, ಶಾಲೆ ಪ್ರಗತಿಯತ್ತ ಕೊಂಡೊಯ್ಯಲು ಆಡಳಿತ ಮಂಡಳಿ ಅಗತ್ಯ ಕ್ರಮ ಕೈಗೊಂಡಿರುವದು ಶ್ಲಾಘನೀಯ. ಶಾಲೆ ಇನ್ನಷ್ಟು ಪ್ರಗತಿ ಹೊಂದಲೆಂದರು.
ಕಿತ್ತೂರ ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ, ಶಾಲೆಯ ಅಭಿವೃದ್ಧಿ ಮತ್ತು ಸಮಸ್ಯೆಗೆ ಶ್ರಮಿಸುವುದಾಗಿ ತಿಳಿಸಿದರು.
ಮಾಜಿ ಜಿ.ಪಂ ಸದಸ್ಯ ನಿಂಗಪ್ಪ ಅರಕೇರಿ, ಅಬ್ಬಾಸ ಅಲಿ ಪೀರಜಾದೆ,ಎಸ್.ಡಿ.ಕೋಟಗಿ, ಎಂ.ಎ.ಮತ್ತೆ, ಯು.ಬಿ.ಬಾಗೇವಾಡಿ, ಎ.ಎಂ.ಚವಾನ್,ಡಿ.ಎಂ.ಪತ್ತಾರ, ಅಣ್ಣಪ್ಪ ಕಡಕೋಳ, ಪ್ರಕಾಶ ಮುಂಗರವಾಡಿ, ಆಯುಬ ಗಣಾಚಾರಿ, ದಿಲಾವರ ಮತ್ತೆ ಉಪಸ್ಥಿತರಿದ್ದರು.

25th March 2026
ಹುಬ್ಬಳ್ಳಿ : ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಮಾಜಿ ಶಾಸಕರೊಬ್ಬರ ಪುತ್ರನ ಕೊಲೆಯಾಗಿರುವುದು ಧಾರವಾಡ ಗ್ರಾಮೀಣ ಠಾಣೆ ಪೊಲೀಸರ ತನಿಖೆಯಿಂದ ತಿಳಿದುಬಂದಿದ್ದು, ಈ ಸಂಬಂಧ ಮಹಿಳೆ ಸೇರಿದಂತೆ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಹತ್ಯೆಯಾಗಿರುವ ವ್ಯಕ್ತಿಯನ್ನು 53-ವರುಷದ ರಾಜು ಬೋಳಶೆಟ್ಟಿ ಎಂದು ಗುರುತಿಸಲಾಗಿದ್ದು ಇವರು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನಲ್ಲಿ ವಾಸವಾಗಿದ್ದರು.
ಧಾರವಾಡದ ರಾಮಾಪುರ ಗ್ರಾಮದ ರೈಲ್ವೆ ಹಳಿ ಪಕ್ಕದಲ್ಲಿರುವ ದಟ್ಟ ಅರಣ್ಯ ಪ್ರದೇಶದಲ್ಲಿ ಕಾರಿನೊಳಗೆ ಗುರುತು ಸಿಗದಂತೆ ದುಷ್ಕರ್ಮಿಗಳು ರಾಜು ಬೋಳಶೆಟ್ಟಿ ಅವರನ್ನು ಸುಟ್ಟು ಪರಾರಿಯಾಗಿದ್ದರು.
ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಗೆ ರಾಜು ಸಾಲದ ರೂಪದಲ್ಲಿ ಹಣ ನೀಡಿದ್ದರು. ಇದುವರೆಗೂ 2 ಲಕ್ಷ ರೂ.ಗೂ ಹೆಚ್ಚು ಹಣ ಪಡೆದುಕೊಂಡಿದ್ದ ಮಹಿಳೆ ಇತ್ತೀಚೆಗೆ ರಾಜು ಅವರೊಂದಿಗೆ ಮನಸ್ತಾಪ ಹೊಂದಿದ್ದರು.
ನಿನ್ನೆ ಮಂಗಳವಾರ ಸಹ ರಾಜು ಅವರ ಜಮೀನಿನ ಬಳಿ ಮಹಿಳೆ ಹೋಗಿದ್ದು, ಆಕೆಯ ಪ್ರಿಯಕರ ಹಾಗೂ ಮಗ ಸೇರಿ ರಾಜು ಅವರನ್ನು ಕೊಲೆ ಮಾಡಿ ಸಾಕ್ಷ್ಯ ನಾಶಪಡಿಸಲು ಬೆಂಕಿ ಹಚ್ಚಿರುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.
ರಾಜು ಅವರ ಜಮೀನಿನಲ್ಲೇ ಅವರ ಕೊಲೆ ಮಾಡಿ ಅವರ ಕಾರಿನ ಹಿಂದಿನ ಸೀಟಿನಲ್ಲಿ ಮೃತದೇಹವಿಟ್ಟು ಮೊದಲೇ ಮಾಡಿಕೊಂಡ ಸಂಚಿನಂತೆ ತಂದಿದ್ದ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಮಹಿಳೆ ಸೇರಿ ಮೂವರು ಪರಾರಿಯಾಗಿದ್ದರು.ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ತನಿಖೆ ಚುರುಕುಗೊಳಿಸಿದ ಪೊಲೀಸರು ಕೆಲವೇ ಗಂಟೆಗಳಲ್ಲಿ ಮಹಿಳೆ ಸೇರಿದಂತೆ ಮೂವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.

17th March 2026
ಬೆಳಗಾವಿ: ಭಾರತೀಯ ಸಾಮಾಜಿಕ ಹಾಗೂ ಧಾರ್ಮಿಕ ಪರಂಪರೆಯಲ್ಲಿ ಮಹಿಳೆಗೆ ಕೇವಲ ಬಾಯಿ ಮಾತಿನಲ್ಲಿ ಪೂಜ್ಯನೀಯ, ಗೌರವದ ಸ್ಥಾನಮಾನಗಳ ಉಲ್ಲೇಖವಿದ್ದು, ಆಧುನಿಕ ಕಾಲದಲ್ಲಿಯೂ ಮುಂದುವರಿಯುತ್ತಿರುವುದು ವಿಷಾದದ ಸಂಗತಿಯಾಗಿದೆ. ಆದ್ದರಿಂದ ಮಹಿಳೆಯರಿಗೆ ಎಲ್ಲ ಕ್ಷೇತ್ರಗಳಲ್ಲಿ ಸೂಕ್ತ ಸ್ಥಾನಮಾನಗಳು ದೊರೆಯಬೇಕಾದದ್ದು ಅಗತ್ಯವಾಗಿದೆ ಎಂದು ಯರಗಟ್ಟಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ. ರಾಜಶೇಖರ ಬಿರಾದಾರ ಹೇಳಿದರು.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘ ಬೆಳಗಾವಿ ಹಾಗೂ ವಿಕಲಚೇತನ ನೌಕರರ ಸಂಘ ಖಾನಾಪುರ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದ ಆಧುನಿಕ ಯುಗದಲ್ಲಿಯೂ ಮಹಿಳೆಗೆ ಪುರುಷರ ಸಮನಾದ ಸ್ಥಾನಮಾನಗಳನ್ನು ಕೊಡುವಲ್ಲಿ ವಿಫಲರಾಗಿದ್ದೇವೆ. ಸಾಮಾಜಿಕ, ಧಾರ್ಮಿಕ, ರಾಜಕೀಯ, ಕ್ರೀಡೆ, ಸಿನಿಮಾ, ವಿಜ್ಞಾನ ಹಾಗೂ ಸಾಹಿತ್ಯ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಅವರ ಸಾಮರ್ಥ್ಯನುಸಾರ ಅವಕಾಶಗಳು ದೊರೆತಿಲ್ಲ. ಜಾಗತೀಕರಣದ ಪ್ರಭಾವದಿಂದ ಸೃಷ್ಟಿಯಾಗಿರುವ ಸ್ಪರ್ಧಾತ್ಮಕತೆಯಲ್ಲಿ ನಾವು ಮುಂದುವರೆಯಲು ಸ್ತ್ರೀ ಪುರುಷರು ಒಂದಾಗಿ ಪ್ರಯತ್ನಿಸಿದರೆ ಮಾತ್ರ ಕುಟುಂಬಗಳು ಆ ಮೂಲಕ ದೇಶದ ಪ್ರಗತಿ ಸಾಧ್ಯವಾಗುತ್ತದೆ. ಆದ್ದರಿಂದ ಮಹಿಳೆಗೆ ಎಲ್ಲ ಕ್ಷೇತ್ರಗಳಲ್ಲಿ ಸಮಾನ ಪ್ರತಿನಿತ್ಯದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಖ್ಯಾತ ಸ್ತ್ರೀ ರೋಗ ತಜ್ಞರಾದ ಡಾ. ವನಿತಾ ಮೆಟಗುಡ್ಡ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಆರೋಗ್ಯವೇ ಮಹಾಭಾಗ್ಯವಾಗಿದ್ದು ಮಹಿಳೆಯರು ತಮ್ಮ ಆರೋಗ್ಯದ ಕಾಳಜಿ ವಹಿಸಬೇಕು ಎಂದು ಹೇಳಿದರು. ಶ್ರೀಮತಿ ಎಸ್.ಎನ್. ಭದ್ರಿ, ಡಾ. ದಾನಮ್ಮ ಝಳಕಿ, ಕ.ಸಾ.ಪ. ಗೌರವ ಕಾರ್ಯದರ್ಶಿ ಎಂ.ವೈ. ಮೆಣಸಿನಕಾಯಿ ಅವರು ಮಾತನಾಡಿದರು. ಸುರೇಶ ಸಕ್ರೆನ್ನವರ ಅಧ್ಯಕ್ಷತೆ ವಹಿಸಿದ್ದರು. ಡಾ. ಸುನೀಲ ಪರೀಟ, ನಸ್ರಿನ್ ಬಾನು ಕಾಸಿಮನವರ, ವಿಠ್ಠಲ ಯಕಾಜನವರ ಉಪಸ್ಥಿತರಿದ್ದರು.

17th March 2026
ಕಾಸರಗೋಡು- ಇಲ್ಲಿಯ ಕನ್ನಡ ಭವನ ಸಮೂಹ ಸಂಸ್ಥೆಗಳ ರೂವಾರಿ ಡಾ. ವಾಮನ್ ರಾವ್ ಬೇಕಲ್ ರೀಗೆ ಕರ್ನಾಟಕದ ಪ್ರತಿಷ್ಠಿತ "ಹೊಯ್ಸಳ ಪ್ರಶಸ್ತಿ ".
ಮೈಸೂರು ನಗರದ ಹೊಯ್ಸಳ ಕನ್ನಡ ಸಂಘ ಮತ್ತು ಸವಿಗನ್ನಡ ಪತ್ರಿಕಾ ಬಳಗ ಕೊಡಮಾಡುವ 2025 ನೇ ಸಾಲಿನ ರಾಜ್ಯ ಮಟ್ಟದ "ಹೊಯ್ಸಳ ಪ್ರಶಸ್ತಿ "ಗಡಿನಾಡಿನ ಕನ್ನಡ ಸೇವೆ "ಯನ್ನು ಪರಿಗಣಿಸಿ ಡಾ. ವಾಮನ್ ರಾವ್ ಬೇಕಲ್ ಇವರನ್ನು ಆರಿಸಲಾಗಿದೆ ಎಂದು ಹೊಯ್ಸಳ ಕನ್ನಡ ಸಂಘ ಅಧ್ಯಕ್ಷರಾದ ಪತ್ರಕರ್ತ, ಸಾಹಿತಿ, ಸಂಘಟಕರಾದ ರಂಗನಾಥ್ ಮೈಸೂರು ತಿಳಿಸಿದ್ದಾರೆ.
ಇದೇ ಬರುವ ಏಪ್ರಿಲ್ 5 ರಂದು ಮೈಸೂರಿನ ನಾದಬ್ರಹ್ಮ ಸಭಾಅಂಗಣದಲ್ಲಿ ಸವಿಗನ್ನಡ ಪತ್ರಿಕೆಯ 26 ನೇ ವಾರ್ಷಿಕೋತ್ಸವದ ಅಂಗವಾಗಿ ನಡೆಯುವ ಕಾರ್ಯಕ್ರಮ ದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಪ್ರಶಸ್ತಿ ಆಯ್ಕೆ ಸಮಿತಿಯ ಗೌರವ ಸಂಚಾಲಕ ಡಾ. ರಘುರಾಮ್ ವಾಜಪೇಯಿ ತಿಳಿಸಿದ್ದಾರೆ.
ಕನ್ನಡ ಭವನ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ಅವರಿಗೆ ಪ್ರತಿಷ್ಠಿತ ಹೊಯ್ಸಳ ಪ್ರಶಸ್ತಿ ಲಭಿಸಿರುವದಕ್ಜೆ ಕನ್ನಡ ಭವನ ನಿರ್ದೆಶಕರು, ಸುದ್ದಿ ಸದ್ದು ಪತ್ರಿಕೆ ಸಂಪಾದಕರಾದ ಸಿ.ವಾಯ್.ಮೆಣಸಿನಕಾಯಿ, ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಸಂಚಾಲಕರಾದ ನಂ. ವಿಜಯ ಕುಮಾರ, ವಾಮನರಾವ್ ಅಭಿಮಾನಿ ಬಳಗದವರು ಅವರಿಗೆ ಅಭಿನಂದಿಸಿದ್ದಾರೆ.