



11th April 2026
ನೇಸರಗಿ: ಗ್ರಾಮದ ವಕೀಲ ಶೀತಲಕುಮಾರ ಹಾಗೂ
ಶಿಕ್ಷಕಿ ಈರಮ್ಮ ಅವರ ಪುತ್ರಿ ದಾನೇಶ್ವರಿ ಕಾಡಣ್ಣವರ ಪಿಯುಸಿ ವಿಜ್ಞಾನ ವಿಭಾಗದಲ್ಲಿ 600% 582 50 8 8.97 ತಾಂಶ ಮಾಡಿ ಗ್ರಾಮಕ್ಕೆ ಹಾಗೂ ಹುಬ್ಬಳ್ಳಿ ವಿದ್ಯಾನಿಕೇತನ ಸೈನ್ಸ್ ಕಾಲೇಜಿಗೆ ಕೀರ್ತಿ ತಂದಿದ್ದಾಳೆ.

2nd April 2026
ನೇಸರಗಿ - ಗ್ರಾಮದ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ 1999-2002 ನೇ ಸಾಲಿನ ಬಿ. ಎ ವ್ಯಾಸಂಗ ಮಾಡಿದ್ದ ವಿದ್ಯಾರ್ಥಿ- ವಿದ್ಯಾರ್ಥಿನೀಯರಿಂದ ಗುರುವಂದನೆ ಹಾಗೂ ಸ್ನೇಹಿತರ ಪುನರ್ ಮಿಲನ ಸಮಾರಂಭ ಹಾಗೂ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಡಾ. ಎಫ್.ಡಿ. ಗದ್ದಿಗೌಡರ ವಿರಚಿತ 'ಗುರು ನೀನು ಶಿಷ್ಯ ನಾನು ' ಧ್ವನಿ ಸುರುಳಿ ಬಿಡುಗಡೆ ಸಮಾರಂಭ ದಿ. 5-4-2026 ರಂದು ಮುಂಜಾನೆ 9 ಘಂಟೆಗೆ ಕಾಲೇಜಿನ ಸಭಾಂಗಣದಲ್ಲಿ ನೆರವೇರಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಚನ್ನಮ್ಮನ ಕಿತ್ತೂರು ಶಾಸಕರು, ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಬಾಬಾ ಸಾಹೇಬ ಪಾಟೀಲ ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಎಫ್ .ಡಿ. ಗದ್ದಿಗೌಡರ ವಹಿಸಲಿದ್ದಾರೆ. ಮುಖ್ಯ ಅಥಿತಿಗಳಾಗಿ ನಿವೃತ್ತ ಜಂಟಿ ನಿರ್ದೇಶಕರಾದ ವಿ .ಎಸ್. ಪ್ರಕಾಶ, ಅಥಿತಿಗಳಾಗಿ ನಿವೃತ್ತ ಪ್ರಾಚಾರ್ಯ, ಜನಪ್ರೀಯ ಸಾಹಿತಿಗಳಾದ ಡಾ. ವಾಯ್ .ಎಮ್. ಯಾಕೊಳ್ಳಿ, ಕಾಲೇಜು ಸುಧಾರಣೆ ಸಮಿತಿ ಉಪಾಧ್ಯಕ್ಷರಾದ ಅಡಿವೆಪ್ಪ ಮಾಳಣ್ಣವರ, ಕಾಲೇಜು ಸುಧಾರಣೆ ಸಮಿತಿಯ ಸದಸ್ಯರು,1999-2002 ರಲ್ಲಿ ಶಿಕ್ಷಣ ಕಲಿಸಿದ ಉಪನ್ಯಾಸಕರು, ಸದ್ಯದ ಉಪನ್ಯಾಸಕರು, ಭೋಧಕ ಭೋಧಕೇತರ ಸಿಬ್ಬಂದಿ,1999-2002 ರಲ್ಲಿ ಬಿ.ಎ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು, ವಿದ್ಯಾರ್ಥಿ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆಂದು ಪ್ರಾಚಾರ್ಯ ಡಾ.ಎಫ್.ಡಿ.ಗಡ್ಡಿಗೌಡರ ತಿಳಿಸಿದ್ದಾರೆ.

26th March 2026
ನೇಸರಗಿ- ಶಾಲೆಯ ಸರ್ವಾಂಗೀಣ ಪ್ರಗತಿಗೆ ಶಾಲಾ ಆಡಳಿತ ಮಂಡಳಿ ಶ್ರಮಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೋಳಿ ಹೇಳಿದರು.
ಸಮೀಪದ ದೇಶನೂರ ಗ್ರಾಮದ ವಿಕಾಸ ಪ್ರಾಥಮಿಕ ಮತ್ತು ಪ್ರೌಢಶಾಲೆಗೆ ಬೇಟಿ ಆಡಳಿತ ಮಂಡಳಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ, ಶಾಲೆ ಪ್ರಗತಿಯತ್ತ ಕೊಂಡೊಯ್ಯಲು ಆಡಳಿತ ಮಂಡಳಿ ಅಗತ್ಯ ಕ್ರಮ ಕೈಗೊಂಡಿರುವದು ಶ್ಲಾಘನೀಯ. ಶಾಲೆ ಇನ್ನಷ್ಟು ಪ್ರಗತಿ ಹೊಂದಲೆಂದರು.
ಕಿತ್ತೂರ ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ, ಶಾಲೆಯ ಅಭಿವೃದ್ಧಿ ಮತ್ತು ಸಮಸ್ಯೆಗೆ ಶ್ರಮಿಸುವುದಾಗಿ ತಿಳಿಸಿದರು.
ಮಾಜಿ ಜಿ.ಪಂ ಸದಸ್ಯ ನಿಂಗಪ್ಪ ಅರಕೇರಿ, ಅಬ್ಬಾಸ ಅಲಿ ಪೀರಜಾದೆ,ಎಸ್.ಡಿ.ಕೋಟಗಿ, ಎಂ.ಎ.ಮತ್ತೆ, ಯು.ಬಿ.ಬಾಗೇವಾಡಿ, ಎ.ಎಂ.ಚವಾನ್,ಡಿ.ಎಂ.ಪತ್ತಾರ, ಅಣ್ಣಪ್ಪ ಕಡಕೋಳ, ಪ್ರಕಾಶ ಮುಂಗರವಾಡಿ, ಆಯುಬ ಗಣಾಚಾರಿ, ದಿಲಾವರ ಮತ್ತೆ ಉಪಸ್ಥಿತರಿದ್ದರು.

25th March 2026
ಹುಬ್ಬಳ್ಳಿ : ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಮಾಜಿ ಶಾಸಕರೊಬ್ಬರ ಪುತ್ರನ ಕೊಲೆಯಾಗಿರುವುದು ಧಾರವಾಡ ಗ್ರಾಮೀಣ ಠಾಣೆ ಪೊಲೀಸರ ತನಿಖೆಯಿಂದ ತಿಳಿದುಬಂದಿದ್ದು, ಈ ಸಂಬಂಧ ಮಹಿಳೆ ಸೇರಿದಂತೆ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಹತ್ಯೆಯಾಗಿರುವ ವ್ಯಕ್ತಿಯನ್ನು 53-ವರುಷದ ರಾಜು ಬೋಳಶೆಟ್ಟಿ ಎಂದು ಗುರುತಿಸಲಾಗಿದ್ದು ಇವರು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನಲ್ಲಿ ವಾಸವಾಗಿದ್ದರು.
ಧಾರವಾಡದ ರಾಮಾಪುರ ಗ್ರಾಮದ ರೈಲ್ವೆ ಹಳಿ ಪಕ್ಕದಲ್ಲಿರುವ ದಟ್ಟ ಅರಣ್ಯ ಪ್ರದೇಶದಲ್ಲಿ ಕಾರಿನೊಳಗೆ ಗುರುತು ಸಿಗದಂತೆ ದುಷ್ಕರ್ಮಿಗಳು ರಾಜು ಬೋಳಶೆಟ್ಟಿ ಅವರನ್ನು ಸುಟ್ಟು ಪರಾರಿಯಾಗಿದ್ದರು.
ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಗೆ ರಾಜು ಸಾಲದ ರೂಪದಲ್ಲಿ ಹಣ ನೀಡಿದ್ದರು. ಇದುವರೆಗೂ 2 ಲಕ್ಷ ರೂ.ಗೂ ಹೆಚ್ಚು ಹಣ ಪಡೆದುಕೊಂಡಿದ್ದ ಮಹಿಳೆ ಇತ್ತೀಚೆಗೆ ರಾಜು ಅವರೊಂದಿಗೆ ಮನಸ್ತಾಪ ಹೊಂದಿದ್ದರು.
ನಿನ್ನೆ ಮಂಗಳವಾರ ಸಹ ರಾಜು ಅವರ ಜಮೀನಿನ ಬಳಿ ಮಹಿಳೆ ಹೋಗಿದ್ದು, ಆಕೆಯ ಪ್ರಿಯಕರ ಹಾಗೂ ಮಗ ಸೇರಿ ರಾಜು ಅವರನ್ನು ಕೊಲೆ ಮಾಡಿ ಸಾಕ್ಷ್ಯ ನಾಶಪಡಿಸಲು ಬೆಂಕಿ ಹಚ್ಚಿರುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.
ರಾಜು ಅವರ ಜಮೀನಿನಲ್ಲೇ ಅವರ ಕೊಲೆ ಮಾಡಿ ಅವರ ಕಾರಿನ ಹಿಂದಿನ ಸೀಟಿನಲ್ಲಿ ಮೃತದೇಹವಿಟ್ಟು ಮೊದಲೇ ಮಾಡಿಕೊಂಡ ಸಂಚಿನಂತೆ ತಂದಿದ್ದ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಮಹಿಳೆ ಸೇರಿ ಮೂವರು ಪರಾರಿಯಾಗಿದ್ದರು.ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ತನಿಖೆ ಚುರುಕುಗೊಳಿಸಿದ ಪೊಲೀಸರು ಕೆಲವೇ ಗಂಟೆಗಳಲ್ಲಿ ಮಹಿಳೆ ಸೇರಿದಂತೆ ಮೂವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.

17th March 2026
ಬೆಳಗಾವಿ: ಭಾರತೀಯ ಸಾಮಾಜಿಕ ಹಾಗೂ ಧಾರ್ಮಿಕ ಪರಂಪರೆಯಲ್ಲಿ ಮಹಿಳೆಗೆ ಕೇವಲ ಬಾಯಿ ಮಾತಿನಲ್ಲಿ ಪೂಜ್ಯನೀಯ, ಗೌರವದ ಸ್ಥಾನಮಾನಗಳ ಉಲ್ಲೇಖವಿದ್ದು, ಆಧುನಿಕ ಕಾಲದಲ್ಲಿಯೂ ಮುಂದುವರಿಯುತ್ತಿರುವುದು ವಿಷಾದದ ಸಂಗತಿಯಾಗಿದೆ. ಆದ್ದರಿಂದ ಮಹಿಳೆಯರಿಗೆ ಎಲ್ಲ ಕ್ಷೇತ್ರಗಳಲ್ಲಿ ಸೂಕ್ತ ಸ್ಥಾನಮಾನಗಳು ದೊರೆಯಬೇಕಾದದ್ದು ಅಗತ್ಯವಾಗಿದೆ ಎಂದು ಯರಗಟ್ಟಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ. ರಾಜಶೇಖರ ಬಿರಾದಾರ ಹೇಳಿದರು.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘ ಬೆಳಗಾವಿ ಹಾಗೂ ವಿಕಲಚೇತನ ನೌಕರರ ಸಂಘ ಖಾನಾಪುರ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದ ಆಧುನಿಕ ಯುಗದಲ್ಲಿಯೂ ಮಹಿಳೆಗೆ ಪುರುಷರ ಸಮನಾದ ಸ್ಥಾನಮಾನಗಳನ್ನು ಕೊಡುವಲ್ಲಿ ವಿಫಲರಾಗಿದ್ದೇವೆ. ಸಾಮಾಜಿಕ, ಧಾರ್ಮಿಕ, ರಾಜಕೀಯ, ಕ್ರೀಡೆ, ಸಿನಿಮಾ, ವಿಜ್ಞಾನ ಹಾಗೂ ಸಾಹಿತ್ಯ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಅವರ ಸಾಮರ್ಥ್ಯನುಸಾರ ಅವಕಾಶಗಳು ದೊರೆತಿಲ್ಲ. ಜಾಗತೀಕರಣದ ಪ್ರಭಾವದಿಂದ ಸೃಷ್ಟಿಯಾಗಿರುವ ಸ್ಪರ್ಧಾತ್ಮಕತೆಯಲ್ಲಿ ನಾವು ಮುಂದುವರೆಯಲು ಸ್ತ್ರೀ ಪುರುಷರು ಒಂದಾಗಿ ಪ್ರಯತ್ನಿಸಿದರೆ ಮಾತ್ರ ಕುಟುಂಬಗಳು ಆ ಮೂಲಕ ದೇಶದ ಪ್ರಗತಿ ಸಾಧ್ಯವಾಗುತ್ತದೆ. ಆದ್ದರಿಂದ ಮಹಿಳೆಗೆ ಎಲ್ಲ ಕ್ಷೇತ್ರಗಳಲ್ಲಿ ಸಮಾನ ಪ್ರತಿನಿತ್ಯದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಖ್ಯಾತ ಸ್ತ್ರೀ ರೋಗ ತಜ್ಞರಾದ ಡಾ. ವನಿತಾ ಮೆಟಗುಡ್ಡ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಆರೋಗ್ಯವೇ ಮಹಾಭಾಗ್ಯವಾಗಿದ್ದು ಮಹಿಳೆಯರು ತಮ್ಮ ಆರೋಗ್ಯದ ಕಾಳಜಿ ವಹಿಸಬೇಕು ಎಂದು ಹೇಳಿದರು. ಶ್ರೀಮತಿ ಎಸ್.ಎನ್. ಭದ್ರಿ, ಡಾ. ದಾನಮ್ಮ ಝಳಕಿ, ಕ.ಸಾ.ಪ. ಗೌರವ ಕಾರ್ಯದರ್ಶಿ ಎಂ.ವೈ. ಮೆಣಸಿನಕಾಯಿ ಅವರು ಮಾತನಾಡಿದರು. ಸುರೇಶ ಸಕ್ರೆನ್ನವರ ಅಧ್ಯಕ್ಷತೆ ವಹಿಸಿದ್ದರು. ಡಾ. ಸುನೀಲ ಪರೀಟ, ನಸ್ರಿನ್ ಬಾನು ಕಾಸಿಮನವರ, ವಿಠ್ಠಲ ಯಕಾಜನವರ ಉಪಸ್ಥಿತರಿದ್ದರು.

17th March 2026
ಕಾಸರಗೋಡು- ಇಲ್ಲಿಯ ಕನ್ನಡ ಭವನ ಸಮೂಹ ಸಂಸ್ಥೆಗಳ ರೂವಾರಿ ಡಾ. ವಾಮನ್ ರಾವ್ ಬೇಕಲ್ ರೀಗೆ ಕರ್ನಾಟಕದ ಪ್ರತಿಷ್ಠಿತ "ಹೊಯ್ಸಳ ಪ್ರಶಸ್ತಿ ".
ಮೈಸೂರು ನಗರದ ಹೊಯ್ಸಳ ಕನ್ನಡ ಸಂಘ ಮತ್ತು ಸವಿಗನ್ನಡ ಪತ್ರಿಕಾ ಬಳಗ ಕೊಡಮಾಡುವ 2025 ನೇ ಸಾಲಿನ ರಾಜ್ಯ ಮಟ್ಟದ "ಹೊಯ್ಸಳ ಪ್ರಶಸ್ತಿ "ಗಡಿನಾಡಿನ ಕನ್ನಡ ಸೇವೆ "ಯನ್ನು ಪರಿಗಣಿಸಿ ಡಾ. ವಾಮನ್ ರಾವ್ ಬೇಕಲ್ ಇವರನ್ನು ಆರಿಸಲಾಗಿದೆ ಎಂದು ಹೊಯ್ಸಳ ಕನ್ನಡ ಸಂಘ ಅಧ್ಯಕ್ಷರಾದ ಪತ್ರಕರ್ತ, ಸಾಹಿತಿ, ಸಂಘಟಕರಾದ ರಂಗನಾಥ್ ಮೈಸೂರು ತಿಳಿಸಿದ್ದಾರೆ.
ಇದೇ ಬರುವ ಏಪ್ರಿಲ್ 5 ರಂದು ಮೈಸೂರಿನ ನಾದಬ್ರಹ್ಮ ಸಭಾಅಂಗಣದಲ್ಲಿ ಸವಿಗನ್ನಡ ಪತ್ರಿಕೆಯ 26 ನೇ ವಾರ್ಷಿಕೋತ್ಸವದ ಅಂಗವಾಗಿ ನಡೆಯುವ ಕಾರ್ಯಕ್ರಮ ದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಪ್ರಶಸ್ತಿ ಆಯ್ಕೆ ಸಮಿತಿಯ ಗೌರವ ಸಂಚಾಲಕ ಡಾ. ರಘುರಾಮ್ ವಾಜಪೇಯಿ ತಿಳಿಸಿದ್ದಾರೆ.
ಕನ್ನಡ ಭವನ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ಅವರಿಗೆ ಪ್ರತಿಷ್ಠಿತ ಹೊಯ್ಸಳ ಪ್ರಶಸ್ತಿ ಲಭಿಸಿರುವದಕ್ಜೆ ಕನ್ನಡ ಭವನ ನಿರ್ದೆಶಕರು, ಸುದ್ದಿ ಸದ್ದು ಪತ್ರಿಕೆ ಸಂಪಾದಕರಾದ ಸಿ.ವಾಯ್.ಮೆಣಸಿನಕಾಯಿ, ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಸಂಚಾಲಕರಾದ ನಂ. ವಿಜಯ ಕುಮಾರ, ವಾಮನರಾವ್ ಅಭಿಮಾನಿ ಬಳಗದವರು ಅವರಿಗೆ ಅಭಿನಂದಿಸಿದ್ದಾರೆ.

14th March 2026
ಬೈಲಹೊಂಗಲ- ಕರ್ನಾಟಕ ಸರ್ಕಾರದ ಬೆಳಗಾವಿಯ ಬಸವರಾಜ ಕಟ್ಟೀಮನಿ ಪ್ರತಿಷ್ಠಾನವು ದಿನಾಂಕ 13ರಂದು ಬೆಳಗಾವಿ ಜಿಲ್ಲಾ ಮಟ್ಟದ ಪದವಿ ಮತ್ತು ಶಿಕ್ಷಣ ಮಹಾವಿದ್ಯಾಲಯಗಳ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಅಂತಿಮ ಹಂತದ " ಕಟ್ಟೀಮನಿ ಕಥಿ ಹೇಳೂಣ ಸ್ಪರ್ಧೆ " ಯಲ್ಲಿ ಬೈಲಹೊಂಗಲ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಿ.ಕಾಂ. ನಾಲ್ಕನೆಯ ಸೆಮಿಸ್ಟರ ವಿದ್ಯಾರ್ಥಿನಿ ತಿರುಳ್ಗನ್ನಡ ನಾಡಿನ ವಕ್ಕುಂದ ಗ್ರಾಮದ ಕುಮಾರಿ ಸ್ಪೂರ್ತಿ ಶ್ರೀಶೈಲ ಕೋಟಗಿ ಪ್ರಥಮ ಸ್ಥಾನ ಪಡೆದಿದ್ದಾಳೆಂದು ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಯಲ್ಲಪ್ಪ ಹಿಮ್ಮಡಿ, ಸದಸ್ಯ ಕಾರ್ಯದರ್ಶಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ಶ್ರೀಮತಿ ವಿದ್ಯಾವತಿ ಭಜಂತ್ರಿ ತಿಳಿಸಿದ್ದಾರೆ.
ಬೆಳಗಾವಿಯ ಸುಭಾಸ ನಗರದ ಕುಮಾರ ಗಂಧರ್ವ ಕಲಾಮಂದಿರದ ಆವರಣದಲ್ಲಿರುವ ಬಸವರಾಜ ಕಟ್ಟೀಮನಿ ಸಭಾಂಗಣದಲ್ಲಿ ಕುಮಾರಿ ಸ್ಪೂರ್ತಿ ಶ್ರೀಶೈಲ ಕೋಟಗಿ ಅವರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ಕೆ.ಎಚ್.ಚೆನ್ನೂರ, ಖ್ಯಾತ ಸಾಹಿತಿ ಡಾ.ರಾಮಕೃಷ್ಣ ಮರಾಠೆ,ಬಸವರಾಜ ಕಟ್ಟೀಮನಿಯವರ ಮೊಮ್ಮಗಳಾದ ಡಾ.ವೀಣಾ ಬಿರಾದಾರ,ಗಡಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯರಾದ ಡಾ.ಸುಬ್ಬರಾವ ಎಂಟೆತ್ತಿನವರ,ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಯಲ್ಲಪ್ಪ ಹಿಮ್ಮಡಿ,ಸದಸ್ಯ ಕಾರ್ಯದರ್ಶಿಗಳಾದ ಶ್ರೀಮತಿ ವಿದ್ಯಾವತಿ ಭಜಂತ್ರಿ,ಸದಸ್ಯ ಸಂಚಾಲಕರಾದ ಡಾ. ಕೆ.ಆರ್.ಸಿದ್ದಗಂಗಮ್ಮ ,ಸದಸ್ಯರಾದ ಶ್ರೀಮತಿ ಮಂಜುಳಾ ಬಿರಾದಾರ,ಡಾ. ಜೆ.ಪಿ.ದೊಡ್ಡಮನಿ, ಡಾ.ವಿಷ್ಣು ಶಿಂಧೆ,ಪ್ರೊ.ಎಸ್.ಜಿ.ಚಿಕ್ಕ ನರಗುಂದ, ಶ್ರೀಮತಿ ಹಮೀದಾಬೇಗಂ ದೇಸಾಯಿ, ವಿಠ್ಠಲ ದಳವಾಯಿ ಸ್ಮರಣಿಕೆ,ಪ್ರಮಾಣ ಪತ್ರ ಮತ್ತು ಐದು ಸಾವಿರ ರೂಪಾಯಿ ನಗದು ನೀಡಿ ಗೌರವಿಸಿದರು.
ತಿರುಳ್ಗನ್ನಡ ನಾಡಿಗೆ ಕೀರ್ತಿ ತಂದ ಸ್ಪೂರ್ತಿ ಶ್ರೀಶೈಲ ಕೋಟಗಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಬೆಳಗಾವಿ ಜಿಲ್ಲಾ ಮಾಜಿ ಅಧ್ಯಕ್ಷರಾದ ಮೋಹನ ಬಸನಗೌಡ ಪಾಟೀಲ,ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ಕೆ.ಎಚ್.ಚೆನ್ನೂರ, ಬಸವರಾಜ ಕಟ್ಟೀಮನಿಯವರ ಮೊಮ್ಮಗಳಾದ ಶಿಕ್ಷಣ ತಜ್ಞೆ, ಸಾಮಾಜಿಕ ಕಾರ್ಯಕರ್ತೆ ವೀಣಾ ಬಿರಾದಾರ, ವಿದ್ಯಾರ್ಥಿನಿಗೆ ಮಾರ್ಗ ದರ್ಶನ ನೀಡಿದ ಬೈಲಹೊಂಗಲ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಡಾ. ರಾಘವೇಂದ್ರ ಹುಲಕುಂದ, ಕನ್ನಡ ಪ್ರಾಧ್ಯಾಪಕರಾದ ಡಾ.ರವೀಂದ್ರ ಚಿಕ್ಕಮಠ ಗೌರವಿಸಿ,ಅಭಿನಂದಿಸಿ, ಶುಭ ಹಾರೈಸಿದರು.

13th March 2026
ಬೈಲಹೊಂಗಲ- ಸಮೀಪದ ಸುಕ್ಷೇತ್ರ ಇಂಚಲ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ಶೆಟ್ಟೆಮ್ಮ ದೇವಿ ದೇವಸ್ಥಾನ ಉದ್ಘಾಟನೆ ಕಾರ್ಯಕ್ರಮ ಅದ್ದೂರಿಯಾಗಿ ಆಚರಣೆ ಮಾಡಲಾಯಿತು. ಉದ್ಘಾಟನೆ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪರಮ ಪೂಜ್ಯ ಡಾಕ್ಟರ್ ಶ್ರೀ ಶಿವಾನಂದ ಭಾರತಿ ಮಹಾಸ್ವಾಮಿಗಳು ಇಂಚಲ ವಹಿಸಿದ್ದರು. ಉಪಸ್ಥಿತಿ ಪರಮ ಪೂಜ್ಯ ಶ್ರೀ ಪೂರ್ಣಾನಂದ ಭಾರತಿ ಮಹಾಸ್ವಾಮಿಗಳು ಶ್ರೀ ಶಿವಾನಂದ ಭಾರತಿ ಶಿಕ್ಷಣ ಸಂಸ್ಥೆ ಆಡಳಿತ ಅಧಿಕಾರಿಗಳು ಇವರು ಆಗಮಿಸಿದ್ದರು. ಹೂರ ರಾಜ್ಯದಲ್ಲಿ ಶೆಟ್ಟೆಮ್ಮ ದೇವಿ ದೇವಸ್ಥಾನ ಬಹುತೇಕ ಕಡಿಮೆ ಇವೆ. ಕರ್ನಾಟಕ ಹಾಗೂ ಹೊರ ರಾಜ್ಯದಿಂದ ಈ ದೇವಸ್ಥಾನಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಾರೆ. ಈ ದೇವಸ್ಥಾನದ ಹಿನ್ನೆಲೆ ಏನೆಂದರೆ ಶೆಟ್ಟೆಮ್ಮದೇವಿ ಉದ್ಭವ ಮೂರ್ತಿ ಇದಾಗಿದೆ.ಇದು ಕರಾಡೆ ಅವರ ಮನೆತನದ ಮೂಲ ಗದ್ದುಗೆ ಯಾಗಿದೆ. ಸಣ್ಣ ಮಕ್ಕಳು ಹುಟ್ಟಿದಾಗ ಐದು ದಿನಕ್ಕೊಮ್ಮೆ ಅಥವಾ ಒಂಬತ್ತು ದಿನಕ್ಕೊಮ್ಮೆ ಚೇಟಿಗೆವ್ವ ಎಂದು ದೇವಿಗೆ ಬಂದು ಉಡಿತುಂಬಿ ಹೋಗುತ್ತಾರೆ. ಆಗ ಶೆಟ್ಟೆಮ್ಮ ಮಕ್ಕಳ ಹಣೆಬರಹವನ್ನು ಬರಿತಾಳೆ ಎಂದು ಮೊದಲಿನಿಂದ ವಾಡಿಕೆ ಇದೆ. ಶೆಟ್ಟೆಮ್ಮ ಉಡಿ ತುಂಬಿದರೆ ಆಗ ಮಕ್ಕಳು ಒಳ್ಳೆಯ ರೀತಿ ಸದೃಢವಾಗಿ ವಿದ್ಯಾವಂತರಾಗಿ ಬೆಳೆಯುತ್ತಾರೆ.ಇಂದು ಹೋಮ ಹವನ ವಿಶೇಷ ಪೂಜೆಗಳನ್ನು ಮಾಡಿ ದೇವಿಗೆ ವಿಶೇಷ ಹೂವಿನ ಅಲಂಕಾರವನ್ನು ಮಾಡಿದ್ದರು. ಈ ಕಾರ್ಯಕ್ರಮದಲ್ಲಿ ಡಿ ಬಿ ಮಲ್ಲೂರ್. ಎಸ್ಎಂ ರಾಹುತನ್ನವರ. ಸದೆಪ್ಪ ವಾರಿ. ಚಂದ್ರನಾಯಕ ರಾಯನಾಯ್ಕರ.ರಾವಜೀ ನಲವಡೆ. ಶಿವಾನಂದ ಗಾಯಕವಾಡ. ನಾರಾಯಣ ನಲವಡೆ. ಬಿಎಸ್ ಮಲ್ಲುರ. ಸಿರಾಜ ಮಿರ್ಜನ್ನವರ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕರಾಡೆ ಬಂಧುಗಳು ಹಾಗೂ ಇಂಚಲ ಗ್ರಾಮದ ಗುರು ಹಿರಿಯರು ಹಾಗೂ ಮರಾಠ ಗಲ್ಲಿಯ ಸದ್ಭಕ್ತರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ವರದಿ -ಬಸವರಾಜ ಲಕ್ಕನ್ನವರ್

9th March 2026
ಬೈಲಹೊಂಗಲ್- ಸಮೀಪದ ಇಂಚಲ ಗ್ರಾಮದ ವಿದ್ಯಾರ್ಥಿ ಸೂಫಿಯನ್ ಮುರಗೋಡ ಕರ್ಮೆಲ್ ವಿದ್ಯಾ ವಿಕಾಸ್ ಸ್ಕೂಲ್ ನಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು. ಬೆಂಗಳೂರಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ಸಾರಕ್ಕಿ ಶಾಲೆಯಲ್ಲಿ ಕೀಪಿಂಗ್ ನಲ್ಲಿ ಭಾಗವಹಿಸಿ ರಾಜಮಟ್ಟದಲ್ಲಿ ಪ್ರಥಮ ಸ್ಥಾನ ಮತ್ತು ದ್ವಿತೀಯ ಪಡೆದಿದ್ದಾನೆ. ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ವೃಂದ ವಿದ್ಯಾರ್ಥಿಗೆ ಅಭಿನಂದನೆ ತಿಳಿಸಿ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ .
ವರದಿ- ಬಸವರಾಜ ಲಕ್ಕನ್ಮವರ

8th March 2026
ಬೈಲಹೊಂಗಲ- ತಾಲೂಕಿನ ಮಾಸ್ತಮರ್ಡಿಗ್ರಾಮದಲ್ಲಿ
ಪ್ರಭುಲಿಂಗೇಶ್ವರ ಜಾತ್ರಾ ಮಹೋತ್ಸವ ಹಾಗೂ ನೂತನ ನೂತನ ದ್ವಾರಬಾಗಿಲ ಉದ್ಘಾಟನಾ ಅದ್ದೂರಿಯಾಗಿ ಉದ್ಘಾಟನೆಗೊಂಡಿತು
ಪ್ರಭುದೇವರ ಸಂಸ್ಥಾನ ಗದ್ದುಗೆ ಮಠದ ತಪೋಕ್ಷೇತ್ರ ಮಾಸ್ತಮರ್ಡಿ ಪೀಠಾಧೀಶರಾದ ಷಟಸ್ಥ ಬ್ರಹ್ಮ ಡಾ.
ವೀರಪ್ರಭು ಪಂಡಿತಾರಾಧ್ಯ ಶಿವಾಚಾರ್ಯ
ಮಹಾಸ್ವಾಮಿಗಳು ಹಾಗೂ ವಿವಿಧ ಮಠಾಧೀಶರು
ಗ್ರಾಮದ ಹಿರಿಯರು ಹಾಗೂ ದಾನಿಗಳಾದ ಮಲ್ಲಪ್ಪಾ.ಮುತ್ತೆಣ್ಣವರ ಹಾಗೂ ಶ್ರೀ ಮತಿ ಶಕುಂನತಲಾ.ಮುತ್ತೆಣ್ಣವರ ಶ್ರೀಸಿದ್ದಪ್ಪ.ಹುರಕೇಣ್ಣವರ ಸೈನಿಕರು ಸಿದಪ್ಪ.ಮಿಂಡೋಳಿ ಶಂಕ್ರಪ್ಪ ಈರೈನವರ ಯಲ್ಲಪ್ಪ.ಮುತ್ತೆಣ್ಣವರ.ಸೈನಿಕರು ಯಲಪ್ಪ ನಾಯಕ
ಉದ್ದಪ್ಪ ಕೊಮಾರ ಪ್ರಕಾಶ ಕೊಮಾರ ಭೀಮಸಿ ಈರೈನವರ ಸೈನಿಕರು ಕಲ್ಲಪ್ಪ ತೀರಕನ್ನವರ ಯಲ್ಲಪ್ಪ ಚಿಕೊಪ್ಪ.ಸಿದ್ದಮಲಪ್ಪ ತಳವಾರ ಇದ್ಧರು.