
13th June 2025
ನೃತ್ಯ ಕಲೆ ವಿಶೇಷವಾದದ್ದು, ಇದು ಸಾಧಾರಣವಾಗಿ ಸರಾಗವಾಗಿ ಕಲಿಯುವಂತದ್ದಲ್ಲ.ವಿಶೇಷ ತರಬೇತಿ ಮೂಲಕ ಕಲಿತಾಗ ಮಾತ್ರ ನೃತ್ಯ ಕಲೆ ಸಿದ್ದಿಸಬಲ್ಲದು. ಇಂತಹ ನೃತ್ಯ ಕಲೆಯನ್ನು ತಮ್ಮ ಜೀವಾಳವಾಗಿಸಿಕೊಂಡು ಹಲವಾರು ವರ್ಷಗಳಿಂದ ನೃತ್ಯ ಪ್ರದರ್ಶನಗಳಂಥ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಗುರುತಿಸಿಕೊಂಡಿರುವ ಧಾರವಾಡದ
ಸದಾನಂದ ಸಹದೇವಪ್ಪ ಬಂಗೆಣ್ಣವರ ಅವರು ವಿಶೇಷ ಸಾಧಕರಾಗಿದ್ದಾರೆ.
ಬಿಕಾಂ ಪದವಿಧರಾದ ಸದಾನಂದ ಬಂಗೆನ್ನವರ ಅವರು ಜಾನಪದ ನೃತ್ಯ, ರಂಗಭೂಮಿ ಕಲಾ ಪ್ರದರ್ಶಕ ಅಲ್ಲದೆ ಸಾಮಾಜಿಕ ಹಾಗೂ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳ ಸಂಯೋಜಕ ಹಾಗೂ ಸಂಘಟಕರಾಗಿ ಕಲಾ ಸೇವೆಯನ್ನು ಮಾಡುತ್ತಿದ್ದಾರೆ.
ಅಂತರಾಷ್ಟ್ರೀಯ ಬ್ಯಾಂಕಾಂಕ್ದ ವಿಯೆಟ್ನಾಂ ಓಂ ಯೋಗಾ ಸಂಸ್ಥೆಯಲ್ಲಿ ನೃತ್ಯ ನಿರ್ದೇಶಕರಾಗಿ ಕಾರ್ಯನಿರ್ವಹಿಸಿರುವ ಇವರು ಕರ್ನಾಟಕ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಾನಪದ ವೈಭವ, ಕನ್ನಡ ಹಬ್ಬ, ಮಕ್ಕಳ ಜಾನಪದ ಜಾತ್ರೆ ಸೇವೆ ಸಲ್ಲಿಸಿದ್ದಾರೆ ತಮ್ಮ ಕಲಾ ಸೇವೆಯನ್ನು ಮುಂದುವರೆಸಿದ್ದಾರೆ.
ಅಂತರಾಷ್ಟ್ರೀಯ, ರಾಷ್ಟ್ರೀಯ, ರಾಜ್ಯಮಟ್ಟದ ಹಾಗೂ ಪ್ರತಿಷ್ಠಿತ ಕಲಾ ಉತ್ಸವಗಳಲ್ಲಿ ಸುಮಾರು 55 ಜನ ಕಲಾವಿದರ ತಂಡದೊಂದಿಗೆ ತಂಡದ ಪ್ರಮುಖ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದಾರೆ.
ರಾಜ್ಯ ಹಾಗೂ ಅಂತರಾಷ್ಟ್ರೀಯ ಶಾಲಾ/ಕಾಲೇಜು ವಿದ್ಯಾರ್ಥಿಗಳಿಗೆ, ಮಹಿಳಾ ಮಂಡಳದ ಸದಸ್ಯರುಗಳಿಗೆ ಹಲವು ಕಲಾವಿದರಿಗೆ, ಆಸಕ್ತ ತಂಡಗಳಿಗೆ ನಿರಂತರವಾಗಿ ನೃತ್ಯ ತರಬೇತಿ, ಹಾಗೂ ದೇಹ ಸದೃಢತೆಗಾಗಿ ತರಬೇತಿ (ಫೀಟ್ಸ್ ನೇಸ), ಕೋಲಾಪೂರದ ಪ್ರತಿಷ್ಠಿತ ಸಂಸ್ಥೆಯಾದ ಸಂಜೇಗೌಡಾ ಅಂತರಾಷ್ಟ್ರೀಯ ಶಾಲೆ ಹಾಗೂ ಧಾರವಾಡದ ಎಸ್.ಡಿ.ಎಂ. ಮೆಡಿಕಲ್ ಹಾಗೂ ಇಂಜನಿಯರ್ ಕಾಲೇಜು, ಧಾರವಾಡದ ರಾಷ್ಟೋಥಾನ ವಿದ್ಯಾ ಕೇಂದ್ರ, ಜಾನಪದ ನೃತ್ಯ ಸಂಗೀತ, ಕಲೆ, ನಾಟಕಗಳಲ್ಲಿ ರಾಜ್ಯಮಟ್ಟದ ಹಾಗೂ ಅಂತರಾಷ್ಟ್ರೀಯ ಮಟ್ಟದ ಶಿಬಿರಗಳನ್ನು, ಕಾರ್ಯಾಗಾರಗಳನ್ನು ನಡೆಸಿಕೊಟ್ಟಿದ್ದಾರೆ. ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.
ಧಾರವಾಡ ಜಿಲ್ಲಾಧಿಕಾರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಡೆಸುವ ಧಾರವಾಡ ಉತ್ತವ, ಕಿತ್ತೂರ ಉತ್ಸವ. ಮೈಸೂರು ಉತ್ಸವಗಳಲ್ಲಿ ಭಾಗವಹಿಸಿ ಪ್ರದರ್ಶನ ನೀಡಿದ್ದಾರೆ.
ರಾಜ್ಯಮಟ್ಟದ ಜಾನಪದ ಕಲಾಮೇಳದಲ್ಲಿ ನೃತ್ಯ ಪ್ರದರ್ಶನ ನೀಡಿರುವ ಇವರು ಕನ್ನಡದ ಪ್ರತಿಷ್ಟಿತ ಟಿವಿ ಚಾನಲ್ಗಳಾದ ಜೀ ಕನ್ನಡ, ಸುವರ್ಣ ಚಾನಲ, ಈ ಟಿವಿ ಕನ್ನಡ "ಜೀ ಕನ್ನಡ ಕುಟುಂಬ ಆವಾರ್ಡ", "ಸಂಗೀತ ಸಂಭ್ರಮ", "ಕುಣಿಯೋಣು ಬಾರಾ" ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶನ ನೀಡಿರುತ್ತಾರೆ. ಕಿರು ಚಿತ್ರಗಳಲ್ಲಿ ಬಂಜಾರ ನೃತ್ಯ ನೀರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ವಿಭಾಗ ಆಯೋಜಿಸುವ ಪ್ರತಿ ವರ್ಷದ ಡಾ.ಬಿ.ಆರ್.ಅಂಬೇಡ್ಕರ್ ರವರ ಜಯಂತಿ ಮಹೋತ್ಸವ ಹಾಗೂ ವಿಶ್ವ ಜ್ಞಾನದ ದಿನಾಚರಣೆ ಅಂಗವಾಗಿ ಏರ್ಪಡಿಸಿದ “ಭೀಮೋತ್ಸವ ದಲ್ಲಿ ಭಾಗವಹಿಸಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅತ್ಯುತ್ತಮ ನೃತ್ಯ ಪ್ರದರ್ಶನ ನೀಡಿದ್ದಾರೆ. ಧಾರವಾಡ ಜಿಲ್ಲಾ ಭಾರತ ಗಣರಾಜ್ಯೋತ್ಸವ ಸಮಿತಿಯು ಆಯೋಜಿಸಿದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ನೃತ್ಯ ಪ್ರದರ್ಶನ ನೀಡಿದ್ದಾರೆ. ಕರ್ನಾಟಕ ಸರ್ಕಾರ ಪ್ರವಾಸೋದ್ಯಮ ಇಲಾಖೆ ಹಾಗೂ ಜಿಲ್ಲಾಡಳಿತ ಬೆಳಗಾವಿಯ ಹಲಸಿ ಕದಂಬೋತ್ಸವದಲ್ಲಿ ಭಾಗವಹಿಸಿ ಉತ್ತಮ ನೃತ್ಯ ಪ್ರದರ್ಶನ ನೀಡಿದ್ದಾರೆ. ಕರ್ನಾಟಕ ಕೃಷಿ ವಿಶ್ವವಿದ್ಯಾಲಯ ಧಾರವಾಡ ಯುವಜನ ಮಹೋತ್ಸವದಲ್ಲಿ ಜಾನಪದ ನೃತ್ಯ ಪ್ರದರ್ಶನ, ಹೋಟೆಲ ಒಡೆಯರ ಸಂಘ ಧಾರವಾಡದ "ಆಹಾರ ಮೇಳ"ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶನ, ವಿಶ್ವ ಕನ್ನಡ ಸಮ್ಮೇಳನ. ಅಖಿಲ ಭಾರತ ಸಾಹಿತ್ಯ ಸಮ್ಮೇಳನ, ದೇಶದ ವಿವಿಧ ರಾಜ್ಯಗಳಲ್ಲಿ ಹೊರನಾಡು ಉತ್ಸವ ಹಾಗೂ ವಿವಿಧ ಜಿಲ್ಲಾ ಉತ್ಸವಗಳಲ್ಲಿ ನಮ್ಮ ತಂಡದೊಂದಿಗೆ ಪ್ರದರ್ಶನ ನೀಡಿದ್ದಾರೆ.
ಮಕ್ಕಳ ಕಿರು ಚಲನಚಿತ್ರ, ಮತ್ತು ಮಂಗಳೂರಿನ ಸಾಂಸ್ಕೃತಿಕ ನೃತ್ಯ, ಕಣಗಿ ನೃತ್ಯ ಹಾಗೂ ವೀರಗಾಸೆ ಜಾನಪದ ನೃತ್ಯಗಳಲ್ಲಿ ನೃತ್ಯ ನಿರ್ದೇಶನ ಮಾಡಿದ್ದಾರೆ.
ಹೆಣ್ಣು ಭ್ರೂಣ ಹತ್ಯೆ, ಬಾಲ್ಯ ವಿವಾಹ, ಕಾನೂನು ಅರಿವು-ನೆರವು ಕುರಿತು ಜಾಗೃತಾ ಕಾರ್ಯಕ್ರಮ, ಬಾಲ ಕಾರ್ಮಿಕ ಪದ್ದತಿ ವಿರುದ್ಧ ಅರಿವು ಮೂಡಿಸುವುದು. ಪರಿಸರ ಸಂರಕ್ಷಣೆಗಾಗಿ ವನಮಹೋತ್ಸವ, ದೇಶ ಕಾಯುವ ಯೋಧರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮ, ರೈತರ ಕುರಿತು ವಿಶೇಷ ಕಾರ್ಯಕ್ರಮ, ಉಚಿತ ಜಾನಪದ ನೃತ್ಯ ತರಬೇತಿ ಶಿಬಿರ, ಪಲ್ಸ ಪೋಲಿಯೋ, ಸ್ವಯಂ ಪ್ರೇರಿತ ರಕ್ತದಾನ ಶಿಬಿರ, ಉಚಿತ ಆರೋಗ್ಯ ತಪಾಸಣೆ ಶಿಬಿರ, ಭಾರತೀಯ ಕ್ರಿಕೇಟ ತಂಡದ ಆಟಗಾರರಿಗೆ ಪಂದ್ಯ ಗೆಲ್ಲಲು (ವಲ್ಡ್ ಕಪ್) ನೃತ್ಯದ ಮೂಲಕ ಪ್ರೋತ್ಸಾಹ ಇತ್ಯಾದಿ ವಿವಿಧ ಸಾಮಾಜಿಕ ಅರಿವು ಮೂಡಿಸುವ ಶಿಬಿರಗಳನ್ನು ಏರ್ಪಡಿಸುತ್ತಾ ರಾಷ್ಟ್ರೀಯ ಭಾವೈಕ್ಯತಾ ಸೈಕಲ್ ರ್ಯಾಲಿಯಲ್ಲಿ ಭಾಗವಹಿಸಿದ್ದಾರೆ.
ಬಯಲು ಸೀಮೆ ಜಾನಪದ ಕಲಾ ಮೇಳ (ಗ್ರಾಮೀಣ ಕಲಾವಿದರ ಕುರಿತು) ರಾಜ್ಯ, ಜಿಲ್ಲಾ, ಹಾಗೂ ಶಾಲಾ ಮಟ್ಟದ ಕಾರ್ಯಕ್ರಮಗಳಲ್ಲಿ ವಿಶೇಷವಾಗಿ ನೃತ್ಯ ಸಂಗಮ (ರಾಜ್ಯ ಮಟ್ಟದ ನೃತ್ಯ ಸ್ಪರ್ಧೆ) ರಾಜ್ಯ ಮಟ್ಟದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವೇದಿಕೆ ಒದಗಿಸಿ ಪ್ರೋತ್ಸಾಹಿಸಿ, ಅವರನ್ನು ಗೌರವಿಸಿದ್ದಾರೆ. ಬಡವಿದ್ಯಾರ್ಥಿಗಳಿಗೆ ಬುಕ್ ವಿತರಣಾ ಕಾರ್ಯಕ್ರಮ, ಸಾಂಸ್ಕೃತಿಕ ಕಲಾ ಮೇಳ, ಹಿರಿಯ ಕಲಾವಿದರನ್ನು ಗುರುತಿಸಿ ಗೌರವಿಸುವುದು ರಾಜ್ಯಮಟ್ಟದ ಕಲಾ ಪ್ರತಿಭೆಗಳ ಪ್ರದರ್ಶನ ಹೀಗೆ ಹಲವಾರು ಸಾಂಸ್ಕೃತಿಕ ಕಾರ್ಯ ಕ್ರಮಗಳನ್ನು ಸಂಘಟಿಸಿದ್ದಾರೆ.
*ಸಂದ ಪ್ರಶಸ್ತಿಗಳು* - ಶ್ರೀ ಮಲ್ಲಿಕಾರ್ಜುನ ಮನ್ಸೂರ, ರಾಜ್ಯ ಪ್ರಶಸ್ತಿ ವಿಜೇತೆ ಫಕ್ಕೀರವ್ವ ಗುಡಿಸಾಗರ ಜಾನಪದ ಕಲಾವಿದರ ಅಭಿವೃದ್ಧಿ ಸಂಘದ ವತಿಯಿಂದ ಆಯೋಜಿಸಿದ "ಜಾನಪದ ಶ್ರೀ" ಪ್ರಶಸ್ತಿ, "ಜಾನಪದ ಕಲಾಸಿರಿ", ಪರಿವಾರ ಸಂಸ್ಥೆಯ ರಾಜ್ಯಮಟ್ಟದ "ವರ್ಷದ ಶ್ರೇಷ್ಟ ವ್ಯಕ್ತಿ" ಪ್ರಶಸ್ತಿ, ಸಾಂಸ್ಕೃತಿಕ ಜಾನಪದ ಲೋಕ-2015 ರ ಪ್ರಶಸ್ತಿ, ಕಲಾ ತಪಸ್ವಿ, “ಶ್ರೇಷ್ಠ ನೃತ್ಯ ನಿರ್ದೇಶಕ ಪ್ರಶಸ್ತಿ, ನಟರಾಜ ಯುವಕ ಸಂಘದ ಪ್ರಶಸ್ತಿ ಪತ್ರ, ಉಪೇಂದ್ರ ಅಭಿಮಾನಿಗಳ ಸಂಘದ ಪ್ರಶಸ್ತಿ ಪತ್ರ, ರಾಕ್ ಸ್ಟಾರ್ ಡ್ಯಾನ್ಸ್ ಅಕ್ಯಾಡೆಮಿಯ ಪ್ರಶಸ್ತಿ ಪತ್ರ, ಕುಷ್ಟಗಿಯ ಎಚ್.ಬಿ. ಡ್ಯಾನ್ಸ್ ಅಕ್ಯಾಡೆಮಿಯ ಪ್ರಶಸ್ತಿ ಪತ್ರ, ಸ್ವಾಮಿ ವಿವೇಕಾನಂದ ಯುವಕ ಸಂಘದ ಪ್ರಶಸ್ತಿ ಪತ್ರ, ಗದುಗಿನ ಹೊಯ್ಸಳ ಡಾನ್ಸ್ ಅಕ್ಯಾಡೆಮಿಯ ಪ್ರಶಸ್ತಿ ಪತ್ರ, ಹುಬ್ಬಳ್ಳಿಯ ಶ್ರೀ ದೇವಿ ನಲ್ಲನಮ್ಮ ಕಲ್ಯಾಣ ಸೇವಾ ಸಂಘದ ಪ್ರಶಸ್ತಿ ಪತ್ರ, ಯುವಾ ಡಾನ್ಸ್ ಅಕ್ಯಾಡೆಮಿಯ ಪ್ರಶಸ್ತಿ ಪತ್ರ, ಶ್ರೀ ದುರ್ಗಾ ಶಕ್ತಿ ಕಲ್ಟರಲ್ ಅಕ್ಯಾಡೆಮಿಯ ಪ್ರಶಸ್ತಿ ಪತ್ರ, ಸಾಂಸ್ಕೃತಿಕ ಲೋಕ ಆರ್ಟ್ & ಕಲ್ಬರಲ್ ಅಕ್ಯಾಡೆಮಿಯ ಪ್ರಶಸ್ತಿ ಪತ್ರ, ಇತ್ಯಾದಿ ಹಲವಾರು ಪುರಸ್ಕಾರ, ಸನ್ಮಾನಗಳನ್ನು ಸ್ವೀಕರಿಸಿದ್ದೇನೆ. ನನ್ನ ಕಾರ್ಯ ಚಟುವಟಿಗೆಗಳನ್ನು ಗುರುತಿಸಿ ವಿವಿಧ ಸಂಘ ಸಂಸ್ಥೆಗಳು ಪ್ರಶಸ್ತಿಗಳನ್ನು ನೀಡಿ ಗೌರವಿಸಿದ್ದಾರೆ.
ಕರ್ನಾಟಕ ವಿದ್ಯಾವರ್ಧಕ ಸಂಘ, ಉತ್ತರ ಕರ್ನಾಟಕ ನೃತ್ಯ ಕಲಾವಿದರ ಸಂಘ, ಶ್ರೀ ಶಿರಡಿ ಸಾಯಿಬಾಬಾ ಸಂಸ್ಥೆ ಧಾರವಾಡ, ನಾಟ್ಯ ಸ್ಪೂರ್ತಿ ಆರ್ಟ್ ಆ್ಯಂಡ್ ಕಲ್ಲ್ ಅಕ್ಯಾಡೆಮಿ ಅಧ್ಯಕ್ಷನಾಗಿ ಹಾಗೂ ಹಲವಾರು ಸಂಘ ಸಂಸ್ಥೆಗಳೊಂದಿಗೆ ಸದಸ್ಯನಾಗಿ ಸಕ್ರಿಯವಾಗಿ ಕಾರ್ಯ ನಿರ್ವಹಿಸಿದ್ದಾರೆ. ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸುಮಾರು 25 ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಕಲಾ ಸೇವೆಯನ್ನು ಮಾಡುತ್ತಿರುವ ಇಂಥ ಪ್ರತಿಭಾವಂತರನ್ನು ರಾಜ್ಯ ಸರಕಾರ ಗುರುಸಿ ಸಹಾಯ ಸಹಕಾರ ನೀಡಿ ಪ್ರೋತ್ಸಾಹಿಸುವ ಅಗತ್ಯವಿದೆ.
13th June 2025
ಗೋಕಾಕ ಬಸ್ ನಿಲ್ದಾಣ ತಾತ್ಕಾಲಿಕ ಸ್ಥಳಾಂತರ
ಬೆಳಗಾವಿ- ಗೋಕಾಕ ಬಸ್ ನಿಲ್ದಾಣದಲ್ಲಿ ಡಾಂಬರೀಕರಣ ನವೀಕರಣ ಕಾರ್ಯ ನಡೆಯುವ ಕಾರಣ ದಿನಾಂಕ 11.6.2025 ರಿಂದ ಒಂದು ವಾರದವರೆಗೆ ಬಸ್ ನಿಲ್ದಾಣವನ್ನು ತಾತ್ಕಾಲಿಕವಾಗಿ ನಗರದ ಶ್ರೀ ವಾಲ್ಮೀಕಿ ಕ್ರೀಡಾಂಗಣಕ್ಕೆ ಸ್ಥಳಾಂತರಿಸಿದ್ದು ಸಾರ್ವಜನಿಕ ಪ್ರಯಾಣಿಕರು ಸಾರಿಗೆ ಸೇವೆಯನ್ನು ಶ್ರೀ ವಾಲ್ಮೀಕಿ ಕ್ರೀಡಾಂಗಣ ದಿಂದಲೇ ಪಡೆದು ಸಹಕರಿಸಬೇಕೆಂದು ವಾ.ಕ.ರ.ಸಾಸಂಸ್ಥೆ ಚಿಕ್ಕೋಡಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.
12th June 2025
*ರಾಜ್ಯಮಟ್ಟದ ಬಸವಶ್ರೀ ಪ್ರಶಸ್ತಿ-2025 ಪ್ರದಾನ ಸಮಾರಂಭ*
ಧಾರವಾಡ-ನಾಟ್ಯ ಸ್ಫೂರ್ತಿ ಆರ್ಟ್ & ಕಲ್ಬರಲ್ ಅಕಾಡೆಮಿ ಧಾರವಾಡ ಇದರ 15ನೇ ವಾರ್ಷಿಕೋತ್ಸವದ ಅಂಗವಾಗಿ ರಾಜ್ಯಮಟ್ಟದ ಬಸವಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಕನ್ನಡ, ನಾಡು-ನುಡಿ, ಜಲ, ಸಾಹಿತ್ಯ-ಸಾಂಸ್ಕೃತಿಕ, ಕೃಷಿ, ಶಿಕ್ಷಣ ಚಿಂತನೆ, ನಾಟಕ ಪ್ರದರ್ಶನ ಕಾರ್ಯಕ್ರಮವನ್ನು ದಿನಾಂಕ 15-06-2025ರಂದು ಮುಂಜಾನೆ 10.30 ಕ್ಕೆ ಆಲೂರ ವೆಂಕಟರಾವ್ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮವನ್ನು ನವಲಗುಂದ ಶಾಸಕರಾದ ಎನ್ ಎಚ್ ಕೋನರಡ್ಡಿ ಉದ್ಘಾಟನೆ ಮಾಡುವರು. ಮನಸೂರ ಶ್ರೀ ರೇವಣಸಿದ್ದೇಶ್ವರ ಮಠದ ಡಾ. ಶ್ರೀ ಶ್ರೀ ಶ್ರೀ ಬಸವರಾಜ ದೇವರು ದಿವ್ಯ ಸಾನಿಧ್ಯವನ್ನು ವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಟ್ಯಸ್ಫೂರ್ತಿ ಆರ್ಟ ಕಲ್ಚರಲ್ ಅಕಾಡೆಮಿಯ ಅಧ್ಯಕ್ಷರಾದ ಸದಾನಂದ ಎಸ್ ಬಂಗೆಣ್ಣನವರ ವಹಿಸುವರು. ಮುಖ್ಯ ಅತಿಥಿಗಳಾಗಿ
ಧಾರವಾಡ ಗ್ರಾಮೀಣ ಮಾಜಿ ಶಾಸಕರಾದ ಸೀಮಾ ಅಶೋಕ ಮಸೂತಿ, ಕರ್ನಾಟಕ ರೇಷ್ಮೆ ಮಾರಾಟ ಮಂಡಳಿಯ ಮಾಜಿ ಅಧ್ಯಕ್ಷರಾದ ಸವಿತಾ ಅಮರಶೆಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ ಬೆಕ್ಕೇರಿ, ಸಾಹಿತಿಗಳು ಹಾಗೂ ಸಂಘಟಕರಾದ ಮಾರ್ತಾಂಡಪ್ಪ ಕತ್ತಿ ಆಗಮಿಸಲಿದ್ದಾರೆ. ಅತಿಥಿಗಳಾಗಿ ಶ್ರೀಮಠ ಸೇವಾ ಟ್ರಸ್ಟ್ (ರಿ) ಹರೇಟನೂರಿನ ಕಾರ್ಯಾಧ್ಯಕ್ಷರಾದ
ಡಾ. ಚನ್ನಬಸಯ್ಯಸ್ವಾಮಿ ಹಿರೇಮಠ, ಜಾನಪದ ಕಲಾವಿದರು, ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕತರಾದ ಇಮಾಮಸಾಬ ವಲ್ಲೆಪ್ಪಣ್ಣವರ, ಬೆಳಗಾವಿ ಜಿಲ್ಲೆಯ ಕ.ಸಾ.ಪ ಗೌರವ ಕಾರ್ಯದರ್ಶಿ ಎಂ.ವಾಯ್ .ಮೆಣಸಿನಕಾಯಿ ಆಗಮಿಸುವರು.
ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಾಟ್ಯಸ್ಪೂರ್ತಿ ಆರ್ಟ & ಕಲ್ಚರಲ್ ಅಕಾಡೆಮಿಯ ವಿದ್ಯಾರ್ಥಿಗಳಿಂದ ಕನ್ನಡ ನಾಡಗೀತೆ ಚಲನಚಿತ್ರ ಗೀತೆಗೆ ನೃತ್ಯ, ಇಮಾಮಸಾಬ ವಲ್ಲೆಪ್ಪನವರ ಅವರಿಂದ ತತ್ವಪದ, ಚಿನ್ನು ವಸ್ತ್ರದ ಅವರ ಸ್ವರ್ಣ ಮಯೂರಿ ನೃತ್ಯಸಂಸ್ಥೆ ಹುಬ್ಬಳ್ಳಿಯವರಿಂದ ವಚನರೂಪಕ ನೃತ್ಯ, ಸುಮಾ ಹಡಪದ ಅವರಿಂದ ಕವಿಗೋಷ್ಟಿ, ಮೊಬೈಲ್ ಮಲ್ಲ ಅವರಿಂದ ಹಾಸ್ಯ ಕಾರ್ಯಕ್ರಮ ಹಾಗೂ ಬಸವಶ್ರೀ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಸದಾನಂದ ಬಂಗೆಣ್ಣನವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
12th June 2025
ಆಸ್ಪತ್ರೆ ನುಗ್ಗಿದ ಮಳೆ ನೀರು
ಬೈಲಹೊಂಗಲ- ಪಟ್ಟಣದಲ್ಲಿ ಗುರುವಾರ ಬಾರಿ ಮಳೆ ಸುರಿದು ಸಾಕಷ್ಟು ಹಾನಿಯಾದ ವರದಿಯಾಗಿದೆ.
ಪಟ್ಟಣದ ಸೋಮವಾರ ಪೇಟೆಯ ಪದ್ಮಾವತಿ ಮೆಡಿಕಲ್ ಹತ್ತಿರ ಹಳೆಯ ದೊಡಮನಿ ಆಸ್ಪತ್ರೆಯಲ್ಲಿ ಮಳೆ ಹೊಕ್ಕು ಆಸ್ಪತ್ರೆ ನೀರಿನಿಂದ ಆವೃತ್ತವಾದ ಘಟನೆ ನಡೆಯಿತು.
ಬಾರಿ ಪ್ರಮಾಣದಲ್ಲಿ ಮಳೆ ಯಾಗಿರುವದರಿಂದ ಜನಜೀವನ ಅಸ್ತವ್ಯಸ್ಥವಾಯಿತು.
12th June 2025
ಬೈಲಹೊಂಗಲ- ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ (ರಿ)ಹಿರೇಬಾಗೇವಾಡಿ ತಾಲ್ಲೂಕು ರವರ ವತಿಯಿಂದ ಮದನಬಾವಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪರಿಸರ ಮಾಹಿತಿ ಕಾರ್ಯಕ್ರಮವನ್ನು ಆಯೋಜಿಸಿದ್ದು ಕಾರ್ಯಕ್ರಮವನ್ನು ಗಿಡಕ್ಕೆ ನೀರು ಹಾಕುವುದರ ಮೂಲಕ ವೇದಿಕೆಯಲ್ಲಿರುವ ಗಣ್ಯರು ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯ ಶಿಕ್ಷಕರಾದ ಸಿ.ವಿ. ಸಂಗನಗೌಡ್ರ ರವರು ವಹಿಸಿಕೊಂಡಿದ್ದರು. ಮಖ್ಯ ಅಥಿತಿಗಳಾಗಿ ಶಿವನಾಯ್ಕರ್ ಬಿಆರ್ ಪಿ ಕಾರ್ಯಕ್ರಮವನ್ನು ಉದ್ದೇಶಿಸಿ ಪರಿಸರ ಸಂರಕ್ಷಣೆಯ ಬಗ್ಗೆ ಪರಿಸರದಿಂದ ಸಿಗುವ ಆರೋಗ್ಯದ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಹಲವಾರು ಸಾಮಾಜಿಕ,ಧಾರ್ಮಿಕ, ಗ್ರಾಮ ಶುಭೀಕ್ಷಾ, ಮಹಿಳೆಯರ ಸಬಲೀಕರಣ, ಶಿಷ್ಯ ವೇತನ, ಶಾಲೆ ಮತ್ತು ಕಾಲೇಜು ಮಕ್ಕಳಿಗೆ ದುಶ್ಚಟದ ಜಾಗೃತಿ, ಪರಿಸರ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ಕಾರ್ಯಕ್ರಮದ ಉದ್ದೇಶ ಗಳನ್ನು ಸದುಪಯೋಗ ಪಡೆದುಕೊಳ್ಳುವುದರ ಬಗ್ಗೆ ಪ್ರಾಸ್ತವಿಕ ಮಾತುಗಳೊಂದಿಗೆ ಶ್ರೀ ಕ್ಷೇ ಧ ಗ್ರಾ ಯೋ ತಾಲ್ಲೂಕು ಕೃಷಿ ಮೇಲ್ವಿಚಾರಕ ರಿಯಾಜ ಸಾಹೇಬ್ ದರಗಾದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, "ಕಾಡು ಬೆಳಸಿ ನಾಡು ಉಳಿಸಿ,, ಮನೆ ಅಂಗಳದಲ್ಲಿ ಜಮೀನಿನಲ್ಲಿ ಮರ ಗಿಡಗಳನ್ನು ಬೆಳಸುವುದರಿಂದ ನಾವೆಲ್ಲರೂ ಆರೋಗ್ಯಕರ ಜೀವನವನ್ನು ನೆಡೆಸಬಹುದು ಎಂಬುದರ ಬಗ್ಗೆ ಮಾಹಿತಿ ನೀಡಿದರು. ಪರಿಸರ ಬೆಳವಣಿಗೆಗೆ ನಾವೆಲ್ಲರೂ ಸಹಕರಿಸುವುದರಿಂದ ಮುಂದಿನ ಪೀಳಿಗೆಗೆ ತುಂಬಾ ಉಪಯೋಗವಾಗುತ್ತದೆ ಎಂದು ತಿಳಿಸಿದರು. ಶಾಲೆಯ ಸಹ ಶಿಕ್ಷಕರು ಹಾಗೂ ಸಿಬ್ಬಂದಿವರ್ಗದವರು ಕಾರ್ಯಕ್ಷೇತದ ಸೇವಾಪ್ರತಿನಿಧಿ ಸಂಘದ ಸದಸ್ಯರು ಮತ್ತು ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಿಕ್ಷಕಿ ಮಂಜುಳಾ ಶೆಟ್ಟರ ನಿರೂಪಿಸಿದರು.
ವಲಯದ ಮೇಲ್ವಿಚಾರಕರಾದ ಯಶೋಧ ವಂದಿಸಿದರು.
12th June 2025
ವಿಮಾನ ಪತನ ದುರ್ಘಟನೆ: ಆಘಾತಕಾರಿ
ಬೈಲಹೊಂಗಲ: ಅಹಮದಾಬಾದ್ ನಲ್ಲಿ ಗುರುವಾರ ಸಂಭವಿಸಿದ ವಿಮಾನ ಪತನ ದುರ್ಘಟನೆಯು ಅತ್ಯಂತ ಆಘಾತಕರಿ ವಿಚಾರ ಎಂದು ರಾಜ್ಯ ಬಿಜೆಪಿ ಮಾಧ್ಯಮ ಸಮಿತಿ ಸದಸ್ಯ ಎಫ್.ಎಸ್. ಸಿದ್ದನಗೌಡರ ತಿಳಿಸಿದ್ದಾರೆ.
ಈ ಹೃದಯವಿದ್ರಾವಕ ಘಟನೆಯಲ್ಲಿ ವಿಮಾನ ಪ್ರಯಾಣಿಕರು ಹಾಗೂ ಈ ವಿಮಾನ ಅಪ್ಪಳಿಸಿದ ವೈದ್ಯ ವಿದ್ಯಾರ್ಥಿಗಳ ವಸತಿ ನಿಲಯಕ್ಕೆ ಅಪ್ಪಳಿಸಿದ್ದು ವೈದ್ಯರು ಅಸುನಿಗಿದ್ದು, ಭಾರತೀಯ ನಾಗರಿಕರು, ವೈಮಾನಿಕ ಸಿಬ್ಬಂದಿಗಳ ಮತ್ತು ವಿದೇಶೀಯರ ಕುಟುಂಬಕ್ಕೆ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ. ಮೃತರಿಗೆ ಸದ್ಗತಿ ಲಭಿಸಲಿ; ಮೃತರ ಸಂಬಂಧಿಗಳಿಗೆ ದೇವರು ಈ ದುಃಖವನ್ನು ತಡೆದುಕೊಳ್ಳುವ ಶಕ್ತಿ ನೀಡಲಿ. ಗಾಯಾಳುಗಳು ಬೇಗನೆ ಚೇತರಿಸಿಕೊಳ್ಳಲಿ ಎಂದು ಅವರು ಪ್ರಾರ್ಥಿಸಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ವಿಮಾನ ಅವಘಡಗಳಾಗದಂತೆ ಮುಂಜಾಗ್ರತಾ ಕ್ರಮಗಳು ಆಧುನಿಕ ತಂತ್ರಜ್ಞಾನ ಬಳಸಿ ಸುಧಾರಿಸಿಕೊಳ್ಳಬೇಕೆಂದಿದ್ದಾರೆ.
11th June 2025
ಸುದ್ದಿ ಸದ್ದು ಪತ್ರಿಕೆಗೆ ಶುಭ ಹಾರೈಸಿದ ಕಲ್ಮಠ ಶ್ರೀಗಳು
ಹಿರಿಯ ಪತ್ರಕರ್ತ ಹಾಗೂ ಸಾಹಿತಿಗಳಾದ ಶ್ರೀ ಸಿ.ವಾಯ್.ಮೆಣಸಿನಕಾಯಿ ಅವರ ಸಂಪಾದಕತ್ವದಲ್ಲಿ ಹೊರ ಬಂದಿರುವ ನೂತನವಾಗಿ ಪ್ರಾರಂಭವಾದ ಸುದ್ದಿ ಸದ್ದು ಪಾಕ್ಷಿಕ ಪತ್ರಿಕೆಯು ಉತ್ತರೋತ್ತರವಾಗಿ ಉತ್ತಮ ಸುದ್ದಿಗಳನ್ನು ಬಿತ್ತರಿಸುವ ಮೂಲಕ ಜನಮನ್ನಣೆ ಗಳಿಸಲಿ ಎಂದು ಶುಭ ಹಾರೈಸುತ್ತೇನೆ.ಈ ಸಂದರ್ಭದಲ್ಲಿ ಸಮಾಜ ಸೇವಕರಾದ ಶ್ರೀ ನಾಗರಾಜ ಮುಚ್ಚಂಡಿ ಇದ್ದರು.
- ಕಿತ್ತೂರ ಕಲ್ಮಠ ಮತ್ತು ದೇಶನೂರ ವಿರಕ್ತಮಠದ ಶ್ರೀ ಮಡಿವಾಳ ರಾಜಯೋಗಿಂದ್ರ ಮಹಾಸ್ವಾಮೀಜಿ
11th June 2025
ಬೆಳಗಾವಿ: ತಾಲೂಕಿನ ಅಂಬೇವಾಡಿ ಗ್ರಾಮದಲ್ಲಿ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಕಾರ್ಯಕ್ರಮದ ಅಂಗವಾಗಿ ಕೆಎಲ್ಇ ಕೆವಿಕೆ ಮತ್ತಿಕೊಪ್ಪ, ಕೃಷಿ ಇಲಾಖೆ, ಇಫ್ಕೋ ಗೊಬ್ಬರ ಸಂಸ್ಥೆ ಮತ್ತು ಸ್ಥಳೀಯ ಗ್ರಾಮ ಪಂಚಾಯತಿ ಆಶ್ರಯದಲ್ಲಿ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಕಾರ್ಯಕ್ರಮ ಏರ್ಪಡಿಸಿದ್ದು, ರೈತರನ್ನು ಉದ್ಧೇಶಿಸಿ ಕೆಎಲ್ಇ ಸಂಸ್ಥೆಯ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ. ಮಂಜುನಾಥ ಚೌರಡ್ಡಿ ಮಾತನಾಡುತ್ತಿದ್ದರು. ಅಂಬೇವಾಡಿ ಗ್ರಾಮದ ಸುತ್ತಮುತ್ತ ಕಬ್ಬು ಬೆಳೆಗಾರರು ಹೆಚ್ಚಾಗಿದ್ದು, ಕಡಿಮೆ ಇಳುವರಿ ಪಡೆಯುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಿಓ-೯೨೦೦೫ ಕಬ್ಬಿನ ತಳಿಯ ಸುಧಾರಿತ ಅಂಗಾಂಶ ಕೃಷಿಯ ಸಸಿಗಳನ್ನು ಬಳಕೆ ಮಾಡಿದಲ್ಲಿ ಇಳುವರಿ ಹೆಚ್ಚಿಸಲು ಸಾಧ್ಯವಿದೆ ಎಂದರು. ರೈತರು ಬೆಳೆಯುತ್ತಿರುವ ಕಬ್ಬಿಗೆ ತುಕ್ಕು ರೋಗದ ಬಾಧೆ ಹೆಚ್ಚಾಗಿ ಕಂಡು ಬರುತ್ತಿದೆ. ವಾರ್ಷಿಕ ಮಳೆಯ ಪ್ರಮಾಣವು ಹೆಚ್ಚಾಗಿರುವುದರಿಂದ ಅಗಲ ಸಾಲು ಪದ್ಧತಿಯಲ್ಲಿ ಸಾಲಿನಿಂದ ಸಾಲಿಗೆ ಐದು ಅಡಿ ಅಂತರವಿಟ್ಟು ಲಾವಣಿ ಮಾಡಿದಲ್ಲಿ ಬೆಳೆಗೆ ಸಾಕಷ್ಟು ಪ್ರಮಾಣದಲ್ಲಿ ಗಾಳಿ, ಬೆಳಕು ಸಿಕ್ಕು ಲಭ್ಯವಿರುವ ಪೋಷಕಾಂಶ ಬಳಸಿಕೊಂಡು ಬೆಳೆ ಇಳುವರಿ ಸುಧಾರಿಸಲಿದೆ. ನಾಟಿ ಮಾಡುವಾಗ ಕ್ಲೋರ್ಪೈರಿಫಾಸ್, ಯೂರಿಯಾ, ಕಾರ್ಬನ್ಡೈಜಿಮ್ ಇವೆ ಮೊದಲಾದ ರಾಸಾಯನಿಕಗಳನ್ನು ಬಳಸಿ ಬೀಜೋಪಚಾರ ಮಾಡುವುದು ಸೂಕ್ತ ಎಂದು ಅಭಿಪ್ರಾಯಿಸಲಾಯಿತು. ಅತೀ ಮಳೆಯಿಂದ ಕಳೆ ಬಾಧೆ ಹೆಚ್ಚಾಗಿದ್ದು, ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ಸಂಪರ್ಕಿಸಿ ಉದಯಪೂರ್ವ ಕಳೆನಾಶಕಗಳನ್ನು ಬಳಸಿ ನಿರ್ವಹಣಾ ವೆಚ್ಚವನ್ನು ತಗ್ಗಿಸಲು ತಿಳಿಸಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಶ್ರೀಮತಿ ಸುವರ್ಣಾ ಲೋಹಾರ ಇವರು ಉಪಸ್ಥಿತರಿದ್ದು, ರೈತರೊಡನೆ ಹಾಗೂ ತಜ್ಞರೊಡನೆ ಸಂವಾದಿಸಿದರು. ಇದುವರೆಗೂ ನಮ್ಮ ಗ್ರಾಮಕ್ಕೆ ಈ ರೀತಿ ಕೃಷಿ ತಜ್ಞರು ಬಂದಿರಲಿಲ್ಲ. ಆದುದರಿಂದ ಇನ್ನು ಮುಂದೆ ಕೆಎಲ್ಇ ಕೃಷಿ ವಿಜ್ಞಾನ ಕೇಂದ್ರದೊಡನೆ ಸಂಪರ್ಕವಿಟ್ಟುಕೊಂಡು ಕೃಷಿ ತಾಂತ್ರಿಕ ಮಾಹಿತಿ ಪಡೆಯಲು ಯತ್ನಿಸುವುದಾಗಿ ವಿವರಿಸಿದರು. ಭಾರತೀಯ ಕೃಷಿ ಅನುಸಂಧಾನ ಪರಿಷತ್ನ ಸಿಫಾ ಸಂಸ್ಥೆಯಿAದ ಬಂದಿರುವ ಡಾ. ಆನಂದಕುಮಾರ ಇವರು ಭತ್ತದಲ್ಲಿ ಅಜೋಲ್ಲಾ ಬೆಳೆಯುವ ಬಗ್ಗೆ ಹಾಗೂ ಮೀನು ಸಾಕಾಣೆ ಮಾಡುವ ಕುರಿತು ರೈತರಿಗೆ ವಿವರಿಸಿದರು. ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಪುಲಕೇಶಿ ದಾನಿ, ಕೃಷಿ ಅಧಿಕಾರಿ ಇವರು ಇಲಾಖೆಯ ವಿವಿಧ ಯೋಜನೆಗಳನ್ನು ವಿವರಿಸಿ, ರೈತರು ಇದರ ಸದುಪಯೋಗ ಪಡೆಯಲು ವಿನಂತಿಸಿದರು. ಆತ್ಮ ಯೋಜನೆಯ ಮಲೀಕ್ ನಾಯಿಕ, ಕೆವಿಕೆಯಿಂದ ತರಬೇತಿ ಪಡೆದ ಕೃಷಿ ಸಖಿ ಶ್ರೀಮತಿ ರಾಜಶ್ರೀ ಜೈನ ಉಪಸ್ಥಿತರಿದ್ದು, ಕಾರ್ಯಕ್ರಮವನ್ನು ಸಾಂಗೋಪವಾಗಿ ನಡೆಸಿಕೊಟ್ಟರು. ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕಾ ತಜ್ಞ ಪ್ರವೀಣ ಯಡಹಳ್ಳಿ ಇವರು ಬೆಳಗಾವಿ ಜಿಲ್ಲೆಯಲ್ಲಿ ತರಕಾರಿ ಬೆಳೆಗೆ ಇರುವ ಬೇಡಿಕೆ ಮತ್ತು ಪೂರೈಕೆ ಕುರಿತು ಹಾಗೂ ವಿವಿಧ ತರಕಾರಿ ಬೆಳೆಗಳ ಬೇಸಾಯ ಕ್ರಮಗಳನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಬೀಜೋಪಚಾರ ಮಾಡುವ ಪ್ರಾತ್ಯಕ್ಷಿಕೆ ಹಾಗೂ ಜೈವಿಕ ಕೀಟನಾಶಕ ಮತ್ತು ಶಿಲೀಂದ್ರನಾಶಕಗಳ ಬಳಕೆ ಕುರಿತು ವಿವರ ಮಾಹಿತಿ ನೀಡಲಾಯಿತು. ಪ್ರವೀಣ ಯಡಹಳ್ಳಿ ಇವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮವು ಸಂಪನ್ನವಾಯಿತು.
ವರದಿ:
ಸಾಗರ ಮೆಣಸಿನಕಾಯಿ
11th June 2025
ಬೆಳಗಾವಿ: ಖಾನಾಪುರ ತಾಲೂಕಿನ ಕೊಡಚವಾಡ ಗ್ರಾಮದಲ್ಲಿ ನಡೆದ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಕಾರ್ಯಕ್ರಮದಲ್ಲಿ ರೈತರ ಪ್ರಶ್ನೆಗಳಿಗೆ ಉತ್ತರಿಸುತ್ತ ಕೇಂದ್ರದ ಸಸ್ಯ ಸಂರಕ್ಷಣಾ ತಜ್ಞ ಡಾ. ಎಸ್. ಎಸ್. ಹಿರೇಮಠ ಇವರು ಖಾನಾಪುರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮೆಣಸಿನಕಾಯಿ ಬೆಳೆಯುತ್ತಿದ್ದು, ಸದರಿ ಬೆಳೆಯು ಮುಟುರು ರೋಗದಿಂದ ಬಾಧೆಗೆ ಒಳಪಡುತ್ತಿದೆ. ಈ ಹಿನ್ನಲೆಯಲ್ಲಿ ರೈತರು ಮೆಣಸು ಬೀಜ ಬಿತ್ತನೆ ಸಂದರ್ಭದಲ್ಲಿ ಪ್ರತಿ ಕಿಲೋ ಬೀಜಕ್ಕೆ ೧೦ ಗ್ರಾಂ ಥಯೋಮೆಥಾಕ್ಸಾಮ್ ೩೦ ಎಫ್.ಎಸ್. ಕೀಟನಾಶಕದಿಂದ ಬೀಜೋಪಚಾರ ಮಾಡಿ ಬಿತ್ತಲು ಸಲಹೆ ನೀಡಿದರು. ಬೆಳೆಯನ್ನು ಮುಖ್ಯ ಕ್ಷೇತ್ರಕ್ಕೆ ನಾಟಿ ಮಾಡುವಾಗ ಹೊಲದ ಸುತ್ತಲೂ ಮೂರು ಸಾಲು ಎತ್ತರವಾಗಿ ಬೆಳೆಯುವ ಗೋವಿನ ಜೋಳ ಅಥವಾ ಜೋಳದ ಬೆಳೆಯನ್ನು ಬಿತ್ತಬೇಕು. ಇದರಿಂದ ಥ್ರೀಪ್ಸ್ ಹಾಗೂ ಮೈಟ್ಸ್ ನುಸಿಗಳು ಗಾಳಿ ಮೂಲಕ ಹರಡುವುದನ್ನು ನಿಯಂತ್ರಿಸಬಹುದಾಗಿದೆ. ಖರ್ಚಿಲ್ಲದ ಕ್ರಮವಾಗಿ ಮೆಣಸಿನಕಾಯಿ ಬೆಳೆ ನಾಟಿ ಮಾಡುವ ಸಂದರ್ಭದಲ್ಲಿ ಕೊತ್ತಂಬರಿ, ಚಂಡು ಹೂ ನಾಟಿ ಮಾಡುವುದರಿಂದ ನೈಸರ್ಗಿಕವಾಗಿ ಕೀಟ ನಿಯಂತ್ರಣ ಸಾಧ್ಯವಾಗುತ್ತದೆ ಎಂದರು. ತಾವು ಬಿತ್ತುವ ಮೆಣಸಿನಕಾಯಿ ಬೀಜವು ಗುಣಮಟ್ಟದ್ದಾಗಿರಬೇಕು ಎಂಬುದನ್ನು ರೈತರು ಮನಗಾನಬೇಕು. ಮೆಣಸಿನಕಾಯಿ ಬೆಳೆಯಲ್ಲಿ ಬೆಳೆಗಿಂತ ಒಂದು ಅಡಿ ಎತ್ತರದಲ್ಲಿ ಹಳದಿ ಅಂಟು ಬಲೆ ಮತ್ತು ನೀಲಿ ಅಂಟು ಬಲೆಗಳನ್ನು ಪ್ರತಿ ಎಕರೆಗೆ ೨೦ ರಂತೆ ತೂಗು ಹಾಕುವುದರಿಂದ ರಸಹೀರುವ ಕೀಟಗಳ ನಿರ್ವಹಣೆ ಮಾಡಬಹುದು. ಮುಟುರು ರೋಗ ಕಂಡುಬAದಲ್ಲಿ ಪ್ರತಿ ಲೀಟರ ನೀರಿಗೆ ೦.೫ ಮಿಲೀ ಅಬಾಮೆಕ್ಟಿನ್ ೧.೯ ಇ.ಸಿ. ಅಥವಾ ೨ ಮಿಲೀ ಪ್ರೊಪರ್ಗೈಟ್ ೫೭ ಇ.ಸಿ. ಅಥವಾ ೧.೫ ಮಿಲೀ ಫೆಂಜಾಕ್ವೀನ್ ೧೦ ಇ. ಸಿ. ಕೀಟನಾಶಕಗಳನ್ನು ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಕೀಟಗಳ ಚಟುವಟಿಕೆಯನ್ನು ನೋಡಿಕೊಂಡು ಕೀಟನಾಶಕ ಬಳಸಬೇಕು. ಯಾವುದೇ ಕಾರಣಕ್ಕೂ ಮೊನೊಕ್ರೋಟೊಫಾಸ್ ಕೀಟನಾಶಕ ಬಳಸಬಾರದು. ಒಂದೇ ತರಹದ ಕೀಟನಾಶಕವನ್ನು ಪದೇಪದೇ ಸಿಂಪಡಿಸಬಾರದು ಹಾಗೂ ೨ ಅಥವಾ ೩ ಕೀಟನಾಶಕಗಳನ್ನು ಬೆರೆಸಿ ಬಳಸಬಾರದು. ಹೆಚ್ಚಿನ ಮಾಹಿತಿಗೆ ಕೆಎಲ್ಇ ಕೃಷಿ ವಿಜ್ಞಾನ ಕೇಂದ್ರದ ತಜ್ಞರನ್ನು ಅಥವಾ ತಮ್ಮ ಸಮೀಪದ ತೋಟಗಾರಿಕೆ ಇಲ್ಲವೇ ಕೃಷಿ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸುವAತೆ ಕೋರಿದರು. ಉತ್ತಮ ಗುಣಮಟ್ಟದ ಇಳುವರಿ ಪಡೆಯಲು ಮೆಣಸಿನಕಾಯಿ ಬೆಳೆಗೆ ಶಿಫಾರಸ್ಸು ಮಾಡಿದ ರಸಗೊಬ್ಬರಗಳನ್ನು ಹಂತಹAತವಾಗಿ ನೀಡಬೇಕು. ಗಿಡಗಳ ನಿರ್ವಹಣೆಗೆ ಬೇವಿನ ಹಿಂಡಿ ಅಥವಾ ಹೊಂಗೆ ಹಿಂಡಿ ಬಳಸುವುದು ಸೂಕ್ತ. ಪೊಟ್ಯಾಷ್ ಗೊಬ್ಬರ ಬಳಸುವುದರಿಂದ ಗಿಡಗಳಿಗೆ ರೋಗ ನಿರೋಧಕ ಶಕ್ತಿ ಸಿಗುವುದೆಂದು ಕೇಂದ್ರದ ಬೇಸಾಯ ತಜ್ಞ ಜಿ. ಬಿ. ವಿಶ್ವನಾಥ ತಿಳಿಸಿದರು.
ಇದೇ ಸಂದರ್ಭದಲ್ಲಿ ಭಾರತೀಯ ಕೃಷಿ ಅನುಸಂಧಾನ ಪರಿಷತ್ನ ಹಿರಿಯ ವಿಜ್ಞಾನಿಗಳಾದ ಡಾ. ಅತುಲ್ ಕೊಲ್ಟೆ ಅವರು ರೈತರು ಮಾಡಿದ ಅವಿಷ್ಕಾರಿ ತಂತ್ರಜ್ಞಾನಗಳ ಬಗ್ಗೆ ಮಾಹಿತಿ ದಾಖಲಿಸಿಕೊಂಡರು. ಇಫ್ಕೋ ರಸಗೊಬ್ಬರ ಸಂಸ್ಥೆಯ ಪದಾಧಿಕಾರಿಗಳಾದ ನವೀನ ಪಾಟೀಲ ಇವರು ನ್ಯಾನೋ, ಡಿಎಪಿ ಹಾಗೂ ನಾನ್ಯೋ ಯೂರಿಯಾ ಬಳಕೆ ಬಗ್ಗೆ ಪಾತ್ಯಕ್ಷಿಕೆ ತೋರಿಸಿದರು. ಕೃಷಿ ಇಲಾಖೆಯ ಅಧಿಕಾರಿಗಳು, ಕೃಷಿ ಸಂಜೀವಿನಿ ಯೋಜನೆಯ ತಾಂತ್ರಿಕ ಸಹಾಯಕರು ಮತ್ತು ಕೃಷಿ ಸಖಿಯರು ಉಪಸ್ಥಿತರಿದ್ದು ಮಾಹಿತಿ ನೀಡಿದರು. ಒಟ್ಟು ೨೨೩ ರೈತರು, ರೈತ ಮಹಿಳೆಯರು, ಕೃಷಿ ಯುವಕರು ಈ ಕಾರ್ಯಕ್ರಮದ ಲಾಭ ಪಡೆದುಕೊಂಡರು.
ಮೇಲಿನ ಮಾಹಿತಿಯನ್ನು ತಮ್ಮ ಘನ ಪತ್ರಿಕೆಯಲ್ಲಿ ಸುದ್ದಿಯಾಗಿ ಉಚಿತವಾಗಿ ರೈತರ ಉಪಯೋಗಕ್ಕಾಗಿ ಪ್ರಕಟಿಸುವಂತೆ ಕೋರಿದೆ.
11th June 2025
೧೩ನೆಯ ದಿನದ ವಿಕಸಿತ ಕೃಷಿ ಸಂಕಲ್ಪ ಅಭಿಯಾನ
ಬೆಳಗಾವಿ: ೧೩ ನೆಯ ದಿನದ ಕೃಷಿ ಸಂಕಲ್ಪ ಅಭಿಯಾನದ ಅಂಗವಾಗಿ ದಿನಾಂಕ ೧೦.೦೬.೨೦೨೫ ರಂದು ಖಾನಾಪುರ ತಾಲೂಕಿನ ಚಿಕ್ಕಅಂಗರೊಳ್ಳಿ, ಹಿಂಡಲಗಿ ್ತ ಬೀಡಿ, ಕೊಡಚವಾಡ, ಅವರೊಳ್ಳಿ, ಚಾಪಗಾಂವ ಗ್ರಾಮಗಳಲ್ಲಿನ ರೈತರಿಗೆ ಮುಂಗಾರು ಬೇಸಾಯ ಕ್ರಮಗಳು, ರಾಸುಗಳಿಗೆ ಪೋಷಣೆ ಹಾಗೂ ಕೇಂದ್ರ ಸರಕಾರದ ಕೃಷಿ ಯೋಜನೆಗಳ ಸಂಪೂರ್ಣ ಮಾಹಿತಿಯನ್ನು ರೈತರಿಗೆ ಐಸಿಎಆರ್-ಕೆಎಲಇ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಶ್ರೀ ಎಸ್. ಎಮ್. ವಾರದ ತಿಳಿಸಿದರು. ಖಾನಾಪುರ ತಾಲೂಕಿನ ಕೃಷಿ ಭೂಮಿಯು ಅರೆಮಲೆನಾಡು, ಮಲೆನಾಡು ಪ್ರದೇಶದ ವಲಯವನ್ನು ಹೊಂದಿದ್ದು ಆಮ್ಲೀಯ ಮಣ್ಣು ಹೆಚ್ಚಿನ ಪ್ರಮಾಣದಲ್ಲಿರುತ್ತದೆ ಹಾಗೂ ಈ ಮಣ್ಣಿನಲ್ಲಿ ಪೊಟ್ಯಾಷ್ ಪ್ರಮಾಣವು ಕಡಿಮೆ ಇದ್ದು ಇದಕ್ಕೆ ಠಿಊ ಮಟ್ಟವನ್ನು ಹೆಚ್ಚಿಸುವ ಮೂಲಕ ಆಮ್ಲೀಯ ಮಣ್ಣನ್ನು ಸುಧಾರಿಸಬೇಕು. ಇದನ್ನು ಮಾಡಲು ರೈತರು ಮಣ್ಣಿಗೆ ಡೊಲೊಮೈಟ್ ಸುಣ್ಣದ ಅಂಶವನ್ನು ಹೊಂದಿದ ಗೊಬ್ಬರಗಳನ್ನು ಉಪಯೋಗಿಸಬೇಕು. ಆದ್ದರಿಂದ ರೈತರು ತಮ್ಮ ಮಣ್ಣನ್ನು ಪರೀಕ್ಷಿಸಿ ಮಣ್ಣಿನ ಸುಧಾರಣೆಯನ್ನು ಕೈಗೊಳ್ಳುವಂತೆ ಸಲಹೆ ನೀಡಿದರು. ಪೊಟ್ಯಾಸಿಯಮ್ ಕೊರತೆಯನ್ನು ಸರಿಪಡಿಸಲು ಮತ್ತು ಸಸ್ಯಗಳ ಬೆಳವಣಿಗೆಯನ್ನು ಬೆಂಬಲಿಸಲು ಸಾಕಷ್ಟು ಪ್ರಮಾಣದ ಪೊಟ್ಯಾಸಿಯಮ್ ಗೊಬ್ಬರಗಳನ್ನು ಒದಗಿಸಲು ಸಹ ಸಲಹೆ ನೀಡಲಾಯಿತು. ಭತ್ತದಲ್ಲಿ ಜಾಫಿ ಬೀಜಗಳನ್ನು ನಿಲ್ಲಿಸಲು, ಮಣ್ಣಿಗೆ ಬೊರನ್ ಅಂಶದ ಗೊಬ್ಬರಗಳನ್ನು ಹಾಗೂ ಎಲೆಗಳ ಸಿಂಪಡಣೆಯನ್ನು ತೆಗೆದುಕೊಳ್ಳಲು ಸಲಹೆ ನೀಡಲಾಯಿತು. ಕೃಷಿ ವಿಜ್ಞಾನ ಕೇಂದ್ರದ ಮತ್ತೊರ್ವ ವಿಜ್ಞಾನಿಗಳಾದ ಶ್ರೀ ಪ್ರವೀಣ ಯಡಹಳ್ಳಿ ಅವರು ಎಎಮ್ಸಿ ಗೊಬ್ಬರವನ್ನು ಬಳಸಿಕೊಂಡು ಮೆಣಸಿನಕಾಯಿ ಬೆಳೆಯ ಉತ್ಪಾದನೆಯನ್ನು ಹೆಚ್ಚಿಸಬೇಕೆಂದು ತಿಳಿಸಿಕೊಟ್ಟರು. ಡಾ. ಎಸ್. ಎಸ್. ಹಿರೇಮಠ, ವಿಜ್ಞಾನಿ ಸಸ್ಯ ಸಂರಕ್ಷಣೆ ಭತ್ತದ ಬೆಳೆಯಲ್ಲಿ ಬರುವ ಕೀಟ ಮತ್ತು ರೋಗಗಳ ಬಗ್ಗೆ ಮಾಹಿತಿ ನೀಡಿದರು. ಜಿ. ಬಿ. ವಿಶ್ವನಾಥ, ವಿಜ್ಞಾನಿ ಬೇಸಾಯ ಶಾಸ್ತ್ರ ಭತ್ತ ಬೆಳೆಯ ಸಮಗ್ರ ಬೇಸಾಯ ಕ್ರಮಗಳ ಬಗ್ಗೆ ರೈತರೊಂದಿಗೆ ಚಚ್ಸಿದರು. ಭಾರತೀಯ ಕೃಷಿ ಅನುಸಂಧಾನ ಪರಿಷತ್, ಬೆಂಗಳೂರು ವಿಜ್ಞಾನಿಗಳಾದ ಡಾ. ಆನಂದಕುಮಾರ ಮತ್ತು ಡಾ. ಅತುಲ್ ಕೊಲ್ಟೆ ಇವರು ರೈತರ ಸಮಸ್ಯೆಗಳನ್ನು ದಾಖಲಿಸಿಕೊಂಡರು. ಒಟ್ಟು ೧೨೦೦ ಕ್ಕೂ ಅಧಿಕ ರೈತರು ಭಾಗವಹಿಸಿದ್ದರು.