


4th December 2025
ಬೈಲಹೊಂಗಲ-
ಜೀವನದ ಆದರ್ಶಗಳ ಜೊತೆಗೆ ಜ್ಞಾನ ಹೆಚ್ಚಿಸುವ ಮಾಹಿತಿಗಳನ್ನು ಮತ್ತು ಎಲ್ಲರೂ ರೂಡಿಸಿಕೊಳ್ಳಲೇ ಬೇಕಾದ ಕೆಲವು ಸರಳವಾದರೂ ಸತ್ಯ ಸಂಗತಿಗಳನ್ನು ಬಿಂಬಿಸಿ ರಚಿಸಿರುವ ಮಲಾಬಾದಿಯವರ ಕೃತಿಗಳು ಎಲ್ಲರಿಗೂ ಮಾರ್ಗದರ್ಶಿಯಾಗಿವೆ ಎಂದು ಬೆಳಗಾವಿ ನಗರದ ಪೊಲೀಸ್ ಉಪ ಆಯುಕ್ತ ನಾರಾಯಣ ಬರಮನಿ ಯವರು ರವಿವಾರ ದಿ. 30 ರಂದು ಬೆಳಗಾವಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಶ್ರೀಶೈಲಗಿರಿ ಪ್ರಕಾಶನ ಬೆಳಗಾವಿಯವರ ವತಿಯಿಂದ ಸಾಹಿತಿ ಬಿ ಕೆ ಮಲಾಬಾದಿ ಅವರು ರಚಿಸಿದ 'ನೀವು ಇದನ್ನು ತಿಳಿದಿರಬೇಕು' ಮತ್ತು 'ವಚನ ವೈಖರಿ' ಕೃತಿಗಳನ್ನು ಲೋಕಾರ್ಪಣೆ ಗೊಳಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಜಲತ್ಕುಮಾರ್ ಪುನಜಗೌಡ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಕೃತಿಗಳನ್ನು ರಚಿಸುವುದು ದುರ್ಲಭವಾಗಿರುವಾಗ ಯಾವುದೇ ಪ್ರಚಾರ ಬಯಸದೆ ಸರಳತೆಯಿಂದ ಸಾಹಿತ್ಯ ಕೃಷಿ ಮಾಡುತ್ತಿರುವ ಮಲಾಬಾದಿಯವರ ಸಾಹಿತ್ಯ ಸೇವೆ ಅನನ್ಯವಾದದು ಅವರ ಈ ಕೃತಿಗಳ ಪ್ರಯೋಜನ ಎಲ್ಲರೂ ಪಡೆಯಲಿ ಎಂದರು. ಸಾಹಿತಿ ಡಾ. ರಾಜಶೇಖರ್ ಬಿರಾದಾರ್ ರವರು 'ನೀವು ಇದನ್ನು ತಿಳಿದಿರಬೇಕು' ಎಂಬ ಕೃತಿಯನ್ನು ಅದರಲ್ಲಿ ಅಡಗಿರುವ ಸಾಹಿತ್ಯಕ,ಜ್ಞಾನಾತ್ಮಕ ಮತ್ತು ವೈಚಾರಿಕ ಲೇಖನಗಳ ಕುರಿತು ಪರಿಚಯಿಸಿದರು. ಸಾಹಿತಿ ಡಾ. ಅನ್ನಪೂರ್ಣ ಹಿರೇಮಠ ' ವಚನ ವೈಖರಿ' ಕೃತಿಯನ್ನು ಅದರಲ್ಲಿರುವ ಸರಳವಾದ ವಚನಗಳಲ್ಲಿ ವೈಚಾರಿಕತೆಯನ್ನು ವಿವರಿಸುತ್ತಾ ಪರಿಚಯಿಸಿದರು. ಕಿರಿಯರಿಂದ ಹಿಡಿದು ಹಿರಿಯರವರೆಗೆ ಓದಲೇಬೇಕಾದ ಕೃತಿ ಇದನ್ನು ನೀವು ತಿಳಿದಿರಬೇಕು ಇದು ಎಲ್ಲರ ಬಳಿ ಇರಬೇಕು ಇಲ್ಲ ಮಾಹಿತಿ ಇರಲಿದೆ ಎಂದು ಎಂ ವೈ ಮೆಣಸಿನಕಾಯಿಯವರು ತಿಳಿಸಿದರು. ಕೃತಿಕಾರ ಬಿ.ಕೆ ಮಲಾಬಾದಿ ಮಾತನಾಡಿ ಕೃತಿ ರಚನೆ ದುಸ್ತರವಾಗಿರುವ ಈಗಿನ ದಿನಗಳಲ್ಲಿ ಮಕ್ಕಳಿಗೆ ಸೇರಿದಂತೆ ಎಲ್ಲರಿಗೂ ಅನುಕೂಲಕರವಾಗುವ ನಿಟ್ಟಿನಲ್ಲಿ ವಿನೂತನ ಶೈಲಿಯ ಕೃತಿಯ ರಚನೆಗೆ ಸಹಕಾರಿಯಾದ ಸರ್ವರಿಗೂ ಅಭಿನಂದನೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕ.ಸಾ.ಪ ಜಿಲ್ಲಾ ಕಾರ್ಯದರ್ಶಿ ಎಂ.ವೈ ಮೆಣಸಿನಕಾಯಿ,ಬೆಳಗಾವಿ ತಾಲೂಕು ಕಸಾಪ ಅಧ್ಯಕ್ಷ
ಸುರೇಶ ಹಂಜಿ, ಸ. ರಾ. ಸುಳಕೂಡೆ, ಬಿ ಬಿ ಮಠಪತಿ,ಎಸ್. ಎಂ. ಕಾಮಣ್ಣವರ, ಸಂಗಮೇಶ ಅರಳಿ, ಇಂದಿರಾ ಮೂಟೆಬೆನ್ನೂರು, ಡಾ ಹೇಮಾವತಿ ಸೋನೋಳ್ಳಿಮಹಾನಂದಾ ಮಲಾಬಾದಿ,ಅಕ್ಕಮಹಾದೇವಿ ತೆಗ್ಗಿ,ಮೀನಾಕ್ಷಿ ಮಲಾಬಾದಿ,ಮಹಿಮಾ, ಸುರೇಖಾ ಮಲಾಬಾದಿ, ಚಿದಾನಂದ ಮಲಾಬಾದಿ, ಸದಾನಂದ ಮಲಾಬಾದಿಸಾಹಿಬಾಜ ಶೇಖ ಸೇರಿದಂತೆ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಕಾರ್ಯಕ್ರಮದ ಆರಂಭದಲ್ಲಿ ವೀರಭದ್ರ ಅಂಗಡಿ ಸ್ವಾಗತಿಸಿದರು ಶಿವಾನಂದ ತಲ್ಲೂರ ನಿರೂಪಿಸಿದರು. ನವೀನ ಮಲಾಬಾದಿ ವಂದಿಸಿದರು.

3rd December 2025
ಹುಣಸಗಿ - ಚಾರಿತ್ರಿಕ ಸಿನೆಮಾಗಳು ಜನತೆಯ ಮನೋಧರ್ಮ ಬದಲಿಸಬಲ್ಲವು ಎಂದು ರಾಜ್ಯದ ಗ್ರಂಥಾಲಯಗಳ ಉನ್ನತ ಮಟ್ಟದ ಪುಸ್ತಕ ಆಯ್ಕೆ ಸಮಿತಿಯ ಸದಸ್ಯರಾದ ಲೇಖಕ ಡಾ.ಸಿದ್ಧರಾಮ ಹೊನ್ಕಲ್ ಕರೆ ನೀಡಿದರು.ಅವರು
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನಲ್ಲಿ ಇತ್ತೀಚೆಗೆ ಶ್ರೀ ಹೊನ್ಕಲ್ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಮೂಲಕ *ಸಮುದಾಯದತ್ತ ಸಿನೆಮಾ... ಅಡಿಯಲ್ಲಿ ನಾಡೋಜ ಬರಗೂರರ ಕಥೆ ಚಿತ್ರಕಥೆ ಸಂಭಾಷಣೆ ನಿರ್ದೇಶನದ *ಸ್ವಪ್ನ ಮಂಟಪ* ಚಲನಚಿತ್ರ ಪ್ರದರ್ಶನದ ಆಶಯ ನುಡಿಯಲ್ಲಿ ಚಾರಿತ್ರಿಕ ಸಿನೆಮಾಗಳು ಕುರಿತು ಮಾತನಾಡಿದರು. ಮುಂದುವರಿದು ಅವರು ಪ್ರೊ.ಬರಗೂರರ ಸಾಹಿತ್ಯ,ಅವರ ಜನಮುಖಿ ಆಶಯಗಳು,ಅವರ ಸಮಾಜಮುಖಿ ಚಲನಚಿತ್ರಗಳು ಹಾಗೂ ಈ ಸ್ವಪ್ನ ಮಂಟಪ ಚಲನಚಿತ್ರದ ಚಾರಿತ್ರಿಕ ಹಾಗೂ ವರ್ತಮಾನದ ಸಮೀಕರಣದ ಬಗ್ಗೆ ತಿಳಿಸಿಕೊಟ್ಟರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಅಮೃತ ಅರಳಗುಂಡಿಗಿ,ಶಿವಾಜಿ ಗುಂತಾ,ಅನುಭಾವಿಕ ಕವಿ ಸಾಹೇಬ ಗೌಡ ಬಿರಾದಾರ, ಲೇಖಕ ವಿದ್ಯಾ ಕುಮಾರ್ ಬಡಿಗೇರ ಮುಂತಾದ ಅನೇಕ ಗಣ್ಯರು, ಉಪನ್ಯಾಸಕ ಮಿತ್ರರು ಹಾಗೂ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಈ ಸ್ವರ್ಣ ಮಂಟಪ ಸಿನೆಮಾ ಇದು ಯಾದಗಿರಿ ಜಿಲ್ಲೆಯ ಆರು ತಾಲೂಕುಗಳಲ್ಲಿ ಪ್ರದರ್ಶನಗೊಳ್ಳುವ ಮೂಲಕ ಇಂದು ಸಮಾರೋಪ ಸಮಾರಂಭ ನಡೆಸಲಾಯಿತು. ಪ್ರೌಡಶಾಲೆಯ ಮುಖ್ಯ ಗುರುಗಳಾದ ಶ್ರೀಮತಿ ಸಂಗಮ್ಮ ನಾಗಾವಿ ಅವರು ಸಮಾರೋಪ ನುಡಿಯಲ್ಲಿ ತಮ್ಮ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಇಂತಹ ಚಲನಚಿತ್ರ ಪ್ರದರ್ಶನ ಏರ್ಪಡಿಸಿದ್ದಕ್ಕೆ ಪ್ರೊ ಬರಗೂರರಿಗೆ ಹಾಗೂ ಯಾದಗಿರಿ ಜಿಲ್ಲೆಯ ಹಿರಿಯ ಲೇಖಕ ಡಾ.ಸಿದ್ಧರಾಮ ಹೊನ್ಕಲ್ ಅವರಿಗೆ ಕೃತಜ್ಞತೆಗಳು ಸಲ್ಲಿಸಿದರು. ಇದು ನಾಡಿನಾದ್ಯಂತ ಪ್ರದರ್ಶನಗೊಂಡು ಜನಮನ ತಲುಪಲಿ ಎಂದು ಶುಭ ಕೋರಿದರು. ಶ್ರೀ ಹೊನ್ಕಲ್
ಪ್ರತಿಷ್ಠಾನದ ಸದಸ್ಯರಾದ ಶ್ರೀ ನೀಲಕಂಠ ಹೊನ್ಕಲ್ ಅವರು ಪ್ರೊ.ಬರಗೂರರ ಬದುಕು ಬರಹ ಪರಿಚಯಿಸಿ ಕಾರ್ಯಕ್ರಮಕ್ಕೆ ಸ್ವಾಗತಿಸಿದರು.ಸಣ್ಣೆಕೆಪ್ಪ ಪುಜಾರಿ ಕಾರ್ಯಕ್ರಮ ನಿರ್ವಹಣೆ ಮಾಡಿ ಚಲನಚಿತ್ರ ಪ್ರದರ್ಶನಕ್ಕೆ ಎರ್ಪಾಡು ಮಾಡಿದರು. ಹುಣಸಗಿ ಕಸಾಪ ಅಧ್ಯಕ್ಷರಾದ ವೆಂಕಟಗಿರಿ ದೇಶಪಾಂಡೆ ಹಾಗೂ ಮಾಜಿ ಗೌರವ ಕಾರ್ಯದರ್ಶಿ ನಾಗನಗೌಡ ಪಾಟೀಲ ಮುಂತಾದ ಗಣ್ಯರು ನೂರಾರು ವಿದ್ಯಾರ್ಥಿಗಳ ಜೊತೆ ಚಲನಚಿತ್ರ ವೀಕ್ಷಣೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.

3rd December 2025
ನೇಸರಗಿ- ನೇಸರಗಿ ಭಾಗದ ಯುವಕರಿಗೆ ಉನ್ನತ ಶಿಕ್ಷಣದ ಅವಶ್ಯಕತೆಯನ್ನು ಪೂರೈಸಲು ಕಾಲೇಜಿನ ಅಭಿವೃದ್ದಿಗಾಗಿ ಕೊಠಡಿ ನಿರ್ಮಾಣ ಕಾಮಗಾರಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಕಿತ್ತೂರ ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.
ಮಂಗಳವಾರ ಗ್ರಾಮದ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ೨೦೦ ಲಕ್ಷ ರೂ. ಗಳ ಅನುದಾನದಲ್ಲಿ ಹೆಚ್ಚುವರಿ ಹೊಸ ಕೊಠಡಿಗಳ ಕಾಮಗಾರಿಗೆ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಕಿತ್ತೂರ ಮತಕ್ಷೇತ್ರದ ನೇಸರಗಿ ಭಾಗದ ಮೂಲಭೂತ ಸೌಕರ್ಯಕ್ಕೆ ಅನುದಾನ ಒದಗಿಸಿ ಅಭಿವೃದ್ದಿಗೆ ಪ್ರಯತ್ನಿಸಲಾಗುವುದು. ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ ಅಭಿವೃದ್ಧಿಗೆ ಒತ್ತು ನೀಡಿ ಕಾಲೇಜಿನ ಮೂಲಭೂತ ಸೌಕರ್ಯವನ್ನು ಕಲ್ಪಿಸಲಾಗುವುದು ಎಂದರು.
ಕಾಲೇಜು ಅಭಿವೃದ್ದಿ ಮಂಡಳಿ ಉಪಾಧ್ಯಕ್ಷ ಅಡಿವೆಪ್ಪ ಮಾಳನ್ನವರ, ಯುವ ದುರೀಣರಾದ ಸಚೀನ ಪಾಟೀಲ, ಬಸವರಾಜ ಚಿಕ್ಕನಗೌಡರ, ಪ್ರಾಚಾರ್ಯ ಡಾ.ಎಪ್.ಡಿ.ಗದ್ದಿಗೌಡರ, ದುರೀಣರಾದ ಬಾಳಪ್ಪ ಮಾಳಗಿ, ಆಡಳಿತ ಮಂಡಳಿ ಸದಸ್ಯರಾದ ಸುರೇಶ ಲೆಂಕನಟ್ಟಿ, ವಿನಾಯಕ ಮಾಸ್ತಮರಡಿ, ರಾಯನಗೌಡ ಪಾಟೀಲ, ಸುನೀಲ ಪಿಸೆ, ನಿಂಗಪ್ಪ ತಳವಾರ, ಯಮನಪ್ಪ ಪೂಜೇರಿ, ಚನಗೌಡ ಪಾಟೀಲ, ಮಂಜು ಮದೆನ್ನವರ, ನಜೀರ ತಹಶೀಲ್ದಾರ, ಅನ್ವರ ಮನಿಯಾರ, ಪುಂಡಲೀಕ ಹಮ್ಮನ್ನವರ, ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

3rd December 2025
ಹುಣಸಿಗಿ- ಕರ್ನಾಟಕ ಸಾಹಿತ್ಯ ಅಕಾಡೆಮಿ ನಾಡಿನ ತುಂಬಾ ಮನೆ ಬಾಗಿಲಿಗೆ ಸಾಹಿತ್ಯ ಮತ್ತು ಸಾಂಸ್ಕೃತಿಕತೆಯ ಪರಿಚಯ ಮಾಡುತ್ತಿದೆ ಎಂದು ಕಸಾಪ ಅಧ್ಯಕ್ಷರಾದ ವೆಂಕಟಗಿರಿ ದೇಶಪಾಂಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅವರು ಯಾದಗಿರಿ ಜಿಲ್ಲೆಯ ಚಕೋರ ಸಾಹಿತ್ಯ ವಿಚಾರ ವೇದಿಕೆಯ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಬೆನಕನಕಹಳ್ಳಿ ಪ್ರೌಢ ಶಾಲೆಯಲ್ಲಿ ಇಂದು *ರಾಷ್ಟ್ರಕವಿ ಕುವೆಂಪು* ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಪತ್ರಿಕೆಯೊಂದನ್ನು ಲೋಕಾರ್ಪಣೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
*ರಾಷ್ಟ್ರಕವಿ ಕುವೆಂಪು* ಕುರಿತು ಅನುಭಾವಿ ಕವಿ ಲೇಖಕ ಕನಕಪ್ಪ ವಾಗನಗೇರಿ ಅವರು ವಿಶೇಷ ಉಪನ್ಯಾಸ ನೀಡಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಡಾ. ಸಿದ್ಧರಾಮ ಹೊನ್ಕಲ್ ಅವರು ಚಕೋರ ಕಾರ್ಯಕ್ರಮದ ಉದ್ದೇಶ ತಿಳಿಸಿ ಕುವೆಂಪು ಬೇಂದ್ರೆ ಮುಂತಾದವರು ನಮ್ಮ ನಾಡಿನ ಹೆಮ್ಮೆಯ ಕವಿಗಳು ಎಂದು ಆಶಯ ನುಡಿಯಲ್ಲಿ ಸ್ಮರಿಸಿದರು.
ಮುಖ್ಯ ಅತಿಥಿಯಾಗಿ ನಾಗನಗೌಡ ಪಾಟೀಲ ನಿಕಟಪೂರ್ವ ಕಸಾಪ ಗೌರವ ಕಾರ್ಯದರ್ಶಿ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೌಢ ಶಾಲೆಯ ಮುಖ್ಯ ಗುರುಗಳಾದ ಶ್ರೀಮತಿ ಸಂಗಮ್ಮ ನಾಗಾವಿ ವಹಿಸಿದ್ದರು. ಅವರು ಚಕೋರದ ಮೂಲಕ ತಮ್ಮ ವಿದ್ಯಾರ್ಥಿಗಳಿಗೆ ಸಾಹಿತ್ಯ ಪರಿಚಯ ಮಾಡಿದ್ದು ಸಂತೋಷ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಅಮೃತ ಅರಳಗುಂಡಗಿ,ಉಪಾಧ್ಯಕ್ಷರಾದ ಶಿವಾಜಿ ಗುಂತಾ, ನಿವೃತ್ತ ಶಿಕ್ಷಕರಾದ ಬಸವರಾಜ ಕೋಳ್ಕೂರ,ಚಂದ್ರಕಾಂತ ಕುಲಕರ್ಣಿ, ಹಣಮಂತ್ರಾಯ ಗುಂತಾ,ಮಾನಪ್ಪ ಚಿಕ್ಕ ಹೆಬ್ಬಾಳ,ತಿರುಪತಿ ದೊರೆ ಮುಂತಾದ ಶಿಕ್ಷಕರು ಹಾಗೂ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.ಕಾರ್ಯಕ್ರಮದಲ್ಲಿ ಸಣ್ಣೆಕ್ಕೆಪ್ಪ ಪೂಜಾರಿ ಸ್ವಾಗತಿಸಿದರು ಹಾಗೂ ಜಾನಪದ ಹಾಗೂ ತತ್ವಪದಕಾರ ಕವಿ ಸಾಹೇಬಗೌಡ ಬಿರಾದಾರ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಸಂಘಟಿಸಿ ನಿರ್ವಹಿಸಿದವರು .

1st December 2025
ಬೆಳಗಾವಿ: ಮನುಷ್ಯ ಆಧುನಿಕತೆ ಹೆಸರಿನಲ್ಲಿ ರಾಕ್ಷಸೀತನದತ್ತ ಹೊರಟಿದ್ದು, ಅದರಿಂದ ಹೊರತರುವ ಶಕ್ತಿ ಸಂಗೀತ, ಸಾಹಿತ್ಯಕ್ಕಿದೆ. ಸಾಹಿತ್ಯ ನಮ್ಮನ್ನು ನಾವು ತಿದ್ದಿ ತೀಡಿಕೊಳ್ಳುವ ಕೈಗನ್ನಡಿಯಾಗಿದೆ ಎಂದು ಖ್ಯಾತ ಕಾದಂಬರಿಕಾರ ರಾಘವೇಂದ್ರ ಪಾಟೀಲ ಹೇಳಿದರು.
ನಗರದ ಹಿಂದವಾಡಿಯಲ್ಲಿರುವ ಐಎಂಇಆರ್ ಸಭಾಭವನದ ಪ್ರಾಚಾರ್ಯ ಪ್ರಹ್ಲಾದಕುಮಾರ ಸಭಾಮಂಟಪದಲ್ಲಿ ಪರಿಮಳ ಪ್ರಕಾಶನ ಮತ್ತು ಪರಿಮಳ ಸಾಂಸ್ಕೃತಿಕ ವಾಹಿನಿ ಸಹಯೋಗದಲ್ಲಿ ರವಿವಾರ ನಡೆದ ಬೆಳಗಾವಿ ಸಾಹಿತ್ಯೋತ್ಸವ -2025ದಲ್ಲಿ ಲೇಖಕಿ ಗುರುದೇವಿ ಹುಲೆಪ್ಪನವರಮಠ ಅವರ 'ರವಿವಾರಾಯನಮಃ' ಲಲಿತ ಪ್ರಬಂಧ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಸಂಗೀತ, ಸಾಹಿತ್ಯಕ್ಕೆ ಸಂಬಂಧಿಸಿದ ಕೆಲಸಗಳನ್ನು ಹೆಚ್ಚಿಸುವ ಕಾರ್ಯ ಆಗಬೇಕಿದೆ. ಸಂಗೀತ, ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು ಆಧುನಿಕತೆ ಎಂಬ ರೋಗವನ್ನು ನಿವಾರಿಸಲು ಒಳ್ಳೆಯ ಔಷಧಿಗಳಾಗಿವೆ. ಈ ಸಾಹಿತ್ಯೋತ್ಸವ ಔಷಧಿಯಾಗಿ ಕೆಲಸ ಮಾಡುತ್ತಲಿದೆ. ಸಂಗೀತ, ಸಾಹಿತ್ಯ, ಉಪನ್ಯಾಸದಿಂದ ಕೂಡಿದ ಸಾಹಿತ್ಯೋತ್ಸವ ನಮ್ಮ ಹೃದಯದಲ್ಲಿರುವ ಕಲ್ಮಶಗಳನ್ನು ತೆಗೆದು ಮನುಷ್ಯನನ್ನಾಗಿಸುವ ಕಾರ್ಯ ಮಾಡುತ್ತಲಿದೆ ಎಂದು ಹೇಳಿದರು.
ಸಾಹಿತಿ, ಅನುವಾದಕ ಡಾ. ಚಂದ್ರಕಾಂತ ಪೋಕಳೆ ಮಾತನಾಡಿ, ಮರಾಠಿ ಭಾಷಿಕರಲ್ಲಿ ನಡೆಯುವಂತೆ ಕನ್ನಡದಲ್ಲಿ ಸಮ್ಮೇಳನಗಳು ನಡೆಯುತ್ತಿಲ್ಲ. ಅವರಲ್ಲಿರುವ ಸಹಕಾರ ಇಲ್ಲಿ ಇಲ್ಲ. ಭಾಷಾ ಉತ್ಸವಗಳಲ್ಲಿ ಊರಿನ ಎಲ್ಲ ಜನರು ಪಾಲ್ಗೊಂಡು ಸಂಭ್ರಮಿಸುತ್ತಾರೆ. ಇಲ್ಲಿ ಸಾಹಿತ್ಯಕ ಉತ್ಸವಗಳು ಕೇವಲ ಸಾಹಿತಿಗಳಿಗೆ ಮಾತ್ರ ಸೀಮಿತವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಸಂಚಾಲಕ ಶಿರೀಷ ಜೋಶಿ ಮಾತನಾಡಿ, ಸಾಹಿತ್ಯೋತ್ಸವ-2025 ನಮ್ಮ ಮೊದಲ ಕಾರ್ಯಕ್ರಮವಾಗಿದ್ದು ಇದರಲ್ಲಿ ಸಂಗೀತ, ಸಾಹಿತ್ಯ,
ಪ್ರವಾರ
ನಾಟಕ ಹೀಗೆ ಎಲ್ಲವನ್ನೂ ಒಂದೆಡೆ ಸೇರಿಸುವ ಪ್ರಯತ್ನ ಮಾಡಿದ್ದೇವೆ. ಈ ಉತ್ಸವ ಪ್ರತಿವರ್ಷವೂ ನಡೆಯಲಿದ್ದು ಇದರ ಸದುಪಯೋಗವನ್ನು ಎಲ್ಲ ಬರಹಗಾರರು, ಸಾಹಿತ್ಯ ವಿದ್ಯಾರ್ಥಿಗಳು ಪಡೆಯಬೇಕೆಂದು ಹೇಳಿದರು.
ಶಾಸ್ತ್ರೀಯ ಸಂಗೀತ, ಬೆಳಗಾವಿ ಜಿಲ್ಲೆಯ ಕಾವ್ಯ ಪರಂಪರೆ, ಮಾಧ್ಯಮಗಳ ಸಾಂಸ್ಕೃತಿಕ ಹೊಣೆ, ನಾಕುತಂತಿಗೆ ಸುವರ್ಣ ಸಂಭ್ರಮ, ಸಾಹಿತಿಗಳ ಸಂಗ ಮೋಜಿನ ಪ್ರಸಂಗ, ವರ್ತಮಾನ ರಂಗಭೂಮಿ, ನಾನು ಮತ್ತು ನನ್ನ ಪುಸ್ತಕ, ಕುವೆಂಪು ಕಾದಂಬರಿಗಳು ಕುರಿತು ಗೋಷ್ಠಿಗಳು ನಡೆದವು.
ಡಾ. ಅಯ್ಯಪ್ಪಯ್ಯ ಹಲಗಲಿಮಠ ಅವರಿಂದ ಶಾಸ್ತ್ರೀಯ ಸಂಗೀತ ನಡೆಯಿತು. ತಬಲಾ ನಾರಾಯಣ ಗಣಾಚಾರಿ, ಹಾರ್ಮೋನಿಯಂ ಯೋಗೇಶ ರಾಮದಾಸ ಸಾಥ್ ನೀಡಿದರು. ರಾಗರಾಗಿಣಿ ತಂಡದವರು ಪ್ರಾರ್ಥಿಸಿದರು. ಎಂ.ಬಿ. ಹೊಸಳ್ಳಿ ನಿರೂಪಿಸಿದರು.
ಡಾ. ಬಸವರಾಜ ಜಗಜಂಪಿ, ಪ್ರೊ. ಎಂ.ಎಸ್. ಇಂಚಲ, ರಘು ಕಮ್ಮಾರ, ಪ್ರಕಾಶ ಗರುಡ, ಸಂಕೇತ ಪಾಟೀಲ, ಡಾ. ರಾಜಶೇಖರ ಎಚ್. ಬಿ., ಡಾ. ಗುರುಪಾದ ಮರಿಗುದ್ದಿ, ಬಿ. ಎಸ್. ಗವಿಮಠ, ಜ್ಯೋತಿ ಬದಾಮಿ, ಸಯ್ಯದ ಎನ್.ಆರ್., ಡಾ. ಸರಜೂ ಕಾಟ್ಕರ್, ಡಾ. ಶಾಮಸುಂದರ ಬಿದರಕುಂದಿ, ರಮೇಶ ಮಿರ್ಜಿ, ನಿರಜಾ ಗಣಾಚಾರಿ, ರಮೇಶ ಜಂಗಲ, ಡಾ. ಎನ್. ಎಸ್. ಶ್ರೀಧರಮೂರ್ತಿ, ಸುಮಾ ಕಿತ್ತೂರ, ಆಶಾ ಯಮಕನಮರ್ಡಿ, ಶ್ವೇತಾ ನರಗುಂದ, ಶೈಲಜಾ ಭಿಂಗೆ, ಡಾ. ರಾಮಕೃಷ್ಣ ಮರಾಠ, ಎನ್. ಬಿ. ದೇಶಪಾಂಡೆ, ಬಂಡು ಕುಲಕರ್ಣಿ, ಬಿ.ಕೆ. ಕುಲಕರ್ಣಿ, ಡಾ. ಪಿ.ಜಿ. ಕೆಂಪಣ್ಣವರ, ಶೈಲಜಾ, ಭಿಂಗೆ, ಜಯಶೀಲಾ ಬ್ಯಾಕೋಡ, ಎಂ. ಕೆ. ಹೆಗಡೆ, ಡಾ. ಶ್ರೀಧರ ಹುಕ್ಕೇರಿ, ಎಚ್, ಎಸ್, ದೇಶಪಾಂಡೆ, ಜಿ.ಎಸ್. ಸೋನಾರ, ತಾನಾಜಿ, ಗುಂಡೇನಟ್ಟಿ ಮಧುಕರ, ರಾಜಕುಮಾರ ಕುಂಬಾರ, ದೇವು ಪತ್ತಾರ, ದೀಪಿಕಾ ಚಾಟೆ, ಶ್ರದ್ಧಾ ಪಾಟೀಲ ಗೋಷ್ಠಿಗಳಲ್ಲಿ ಪಾಲ್ಗೊಂಡಿದ್ದರು.

27th November 2025
ಯರಗಟ್ಟಿ : ನೂತನವಾಗಿ ರಚನೆಯಾಗಿರುವ ಯರಗಟ್ಟಿ ಪಟ್ಟಣದಲ್ಲಿ ಪೊಲೀಸ್ ಠಾಣೆಯನ್ನು ಡಿಸೆಂಬರ್ ತಿಂಗಳಿನಲ್ಲಿ ಪ್ರಾರಂಭಿಸಲಾಗುವುದು ಎಂದು ರಾಜ್ಯ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ ಅವರು ಭರವಸೆ ನೀಡಿದರು. ಪಟ್ಟಣಕ್ಕೆ ಭೇಟಿ ನೀಡಿದ ವೇಳೆ ವಿವಿಧ ಸಂಘಟನೆಗಳು ಹಾಗೂ నాగరిక గోమతిగాళం పిశివు వూటలా ಆರಂಭಿಸುವಂತೆ ಸಲ್ಲಿಸಿದ ಮನವಿಗೆ ಅವರು ಈ ಪ್ರತಿಕ್ರಿಯೆ ನೀಡಿದರು.
ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರಿಗೆ ತಾಲೂಕಿನ ಸಮಸ್ತ ನಾಗರಿಕರು, ದಲಿತ ಮುಖಂಡರು ಮತ್ತು ರೈತರು ಅದೂರಿ ಸ್ವಾಗತ ಕೋರಿದರು. ಈ ಸಂದರ್ಭದಲ್ಲಿ, ಸ್ಥಳೀಯ ಪೊಲೀಸ್ ಠಾಣೆಯನ್ನು ಶೀಘ್ರದಲ್ಲಿಯೇ ಆರಂಭಿಸುವಂತೆ ಒತ್ತಾಯಿಸಿ, ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಅವರಿಗೆ ಔಪಚಾರಿಕ ಮನವಿ ಸಲ್ಲಿಸಲಾಯಿತು.
ಕರ್ನಾಟಕ ರಕ್ಷಣಾ ವೇದಿಕೆ, ದಲಿತಪರ ಸಂಘಟನೆಗಳು, ಕರ್ನಾಟಕ ರಾಜ್ಯ ರೈತ ಸಂಘ, ಪತ್ರಿಕಾ ಮಾಧ್ಯಮದವರು, ನ್ಯಾಯವಾದಿಗಳ
మాజ ಸೈನಿಕರ ಸಮನ್ವಯ ಸಮಿತಿ, ಕೂಲಿ ಕಾರ್ಮಿಕರ ಸಂಘಟನೆಗಳ ಮನವಿ ಸ್ವೀಕರಿಸಿದ ಬಳಿಕ ಮಾತನಾಡಿದ ಡಾ. ಜಿ. ಪರಮೇಶ್ವರ ಅವರು, ಯರಗಟ್ಟಿ ತಾಲೂಕಿಗೆ ಈಗಾಗಲೇ ಪೊಲೀಸ್ ಠಾಣೆಯನ್ನು ಮಂಜೂರಾತಿ ನೀಡಲಾಗಿದೆ. ಪ್ರಸ್ತುತ, ಯೋಜನೆ ಆರ್ಥಿಕ ಹಂತದಲ್ಲಿದೆ. ಶಾಸಕ ವಿಶ್ವಾಸ ವೈದ್ಯ ಅವರೊಂದಿಗೆ ಈ ಕುರಿತು ಈಗಾಗಲೇ ಚರ್ಚೆ ನಡೆಸಿದ್ದು, ಡಿಸೆಂಬರ್ ತಿಂಗಳಲ್ಲಿ ನೂತನ ಪೊಲೀಸ್ ಠಾಣೆಯನ್ನು ಪ್ರಾರಂಭಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ರಫೀಕ ಡಿ.ಕೆ., ದಲಿತ ಮುಖಂಡರಾದ ಸಂತೋಷ ಚನ್ನಮೇತ್ರಿ, ಸುರೇಶ್ ಭಜಂತ್ರಿ, ಹಾಗೂ ವಿಠಲಗೌಡ ದೇವರಡ್ಡಿ, ಆರುಣ ನೀಲಪ್ಪನ್ನವರ, ಫಾರುಕ್ ಅತ್ತಾರ, ಆಬಿದಬೇಗ ಜಮಾದಾರ. ఊరేజు వారి, మంజునాథ బాపరాళ్ళ ಸೋಮು ರೈನಾಪೂರ, ಮಂಜುನಾಥ ಸಿದ್ದನಗೌಡ, ಹಸೇನಸಾಬ ಹುಸೇನಾಯ್ಕರ, ಸೂರಜ ಸಂಗೋಳ್ಳಿ ಸೇರಿದಂತೆ ಆನೇಕ ಮುಖಂಡರು ಹಾಗೂ ನಾಗರಿಕರು ಉಪಸ್ಥಿತರಿದ್ದರು.

27th November 2025
ಕಲಾದಗಿ -ಇಲ್ಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದಿ.೨೬ ರಂದು ರಾಜ್ಯಶಾಸ್ತ್ರ ವಿಭಾಗ ಹಾಗೂ ಐಕ್ಯೂಎಸಿ ಸಹಯೋಗದಲ್ಲಿ ಸಂವಿಧಾನ ದಿನಾಚರಣೆಯನ್ನು ಆಚರಿಸಲಾಯಿತು.
ರಾಜ್ಯಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕಿ ಯಂಕಮ್ಮ ಮಾತನಾಡಿ,
ಸಂವಿಧಾನ ದಿನವನ್ನು ಆಚರಿಸುವುದು ಅಂದರೆ, ಕೇವಲ ಆಚರಣೆ ಮಾತ್ರವಲ್ಲ
ಇದು ಸಂವಿಧಾನ ನೀಡಿರುವ ಹಕ್ಕುಗಳು ಮತ್ತು ಕರ್ತವ್ಯಗಳನ್ನು ನೆನೆದು, ಅವುಗಳನ್ನು ನಿಷ್ಠೆಯಿಂದ ಪಾಲಿಸುವ ಸಂಕಲ್ಪವನ್ನು ಪುನರುಚ್ಚರಿಸುವ ಕ್ಷಣವಾಗಿದೆ.
ಇದು ನಾಗರಿಕರಾಗಿ ನಾವು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಕಾಪಾಡುವುದರಲ್ಲಿ ನಮ್ಮ ಪಾತ್ರದ ಕುರಿತು ಜಾಗೃತರಾಗಿ ಯೋಚಿಸುವ ದಿನವಾಗಿದೆ. ಈ ಸಂದರ್ಭದಲ್ಲಿ, ನಾವು ನಮ್ಮ ಸಂವಿಧಾನದ ತತ್ವಗಳನ್ನು ಗೌರವಿಸುವುದಾಗಿ,
ಸಮಾನತೆ ಮತ್ತು ಸಹಿಷ್ಣುತೆ ಎನ್ನುವ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದಾಗಿ,
ರಾಷ್ಟ್ರದ ಏಕತೆ ಮತ್ತು ಪ್ರಗತಿಗಾಗಿ ಜವಾಬ್ದಾರಿಯುತ ನಾಗರಿಕರಾಗುವುದಾಗಿ ಸಂಕಲ್ಪಗೊಳ್ಳೋಣ.
ನಮ್ಮ ಸಂವಿಧಾನವು ಕೇವಲ ಕಾನೂನುಗಳ ಸಮೂಹವಲ್ಲ; ಅದು "ನಾವು ಭಾರತೀಯರು" ಎಂದು ಪ್ರಾರಂಭವಾಗುವ ಜನರ ಆತ್ಮಸಾಕ್ಷಿಯ ಪ್ರತಿಧ್ವನಿಯಾಗಿದೆ. ಅದು ಸಮಾನತೆ, ನ್ಯಾಯ, ಸ್ವಾತಂತ್ರ್ಯ ಮತ್ತು ಬಾಂಧವ್ಯ ಎಂಬ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಪ್ರತಿಷ್ಠಾಪಿಸುತ್ತದೆ. ಡಾ. ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ಸಂವಿಧಾನದ ಕರಡು ಸಮಿತಿಯು ಅಸಾಧಾರಣ ಅನುಭವ, ಜ್ಞಾನ ಮತ್ತು ದೂರದೃಷ್ಟಿಯಿಂದ ಈ ಮಹತ್ಕೃತಿಯನ್ನು ರಚಿಸಿದೆ ಎಂದರು.
ಅಧ್ಯಕ್ಷತೆಯನ್ನು ವಹಿಸಿದ ಪ್ರಾಚಾರ್ಯರಾದ ಡಾ.ಎಚ್ .ಬಿ.ಮಹಾಂತೇಶ್ ಅವರು ಮಾತನಾಡಿ,ಸಂವಿಧಾನ ದಿನದ ಆಚರಣೆ ಉದ್ದೇಶವೆಂದರೆ,
ಭಾರತದ ಪ್ರಜೆಗಳಲ್ಲಿ ಸಂವಿಧಾನದಲ್ಲಿರುವ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದಂತಹ ಮೂಲಭೂತ ಮೌಲ್ಯಗಳ ಬಗ್ಗೆ ಜಾಗೃತಿ ಮೂಡಿಸುವುದು. ನಾಗರಿಕರಿಗೆ ಅವರ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ನೆನಪಿಸುವುದು. ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರ ಅಪ್ರತಿಮ ಕೊಡುಗೆಯನ್ನು ಸ್ಮರಿಸುವುದು ಮತ್ತು ಅವರಿಗೆ ಗೌರವ ಸಲ್ಲಿಸುವುದಾಗಿದೆ. ಎಲ್ಲರೂ ಸಂವಿಧಾನವನ್ನು ಪಾಲಿಸಲು ಬದ್ಧರಾಗಬೇಕೆಂದರು.
ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಯೋಜಕರು, ಸಹ ಪ್ರಾಧ್ಯಾಪಕಿ ಡಾ.ಸರೋಜಿನಿ ಹೊಸಕೇರಿ, ಶ್ರೀದೇವಿ ಮುಂಡಗನೂರ, ಅರ್ಜುನ ನಾಯಕ, ಸಿ.ವಾಯ್.ಮೆಣಸಿನಕಾಯಿ, ಡಾ.ಪುಂಡಲೀಕ ಹುನ್ನಳ್ಳಿ, ಡಾ.ಲೋಕಣ್ಣ ಭಜಂತ್ರಿ, ಮೌಲಾಸಾಬ ಮುಲ್ಲಾ, ಬೈಲಪ್ಪ ಮುಳ್ಳೂರ, ವಿದ್ಯಾರ್ಥಿ , ವಿದ್ಯಾರ್ಥಿನಿಯರು ಇದ್ದರು.
ಕು.ಪವಿತ್ರಾ ಭಜಂತ್ರಿ ಸ್ವಾಗತಿಸಿದರು.
ಕು.ಅಲ್ಪಿಯಾ ಬಾಗವಾನ ನಿರೂಪಿಸಿದರು.
ಕು.ಸಾಧಿಕ ಕಳಸಕೊಪ್ಪ ವಂದಿಸಿದರು.

27th November 2025
"ಸಂವಿಧಾನ ಎಂದರೆ ಒಂದು ದೇಶದ ಮೂಲಭೂತ ಕಾನೂನು ಮತ್ತು ನಿಯಮಗಳ ಸಮೂಹವಾಗಿದೆ" ಭಾರತದ ಸಂವಿಧಾನವು ಜಗತ್ತಿನಲ್ಲಿ ಅತ್ಯಂತ ದೊಡ್ಡದಾದ ಲಿಖಿತ ಸಂವಿಧಾನವಾಗಿದೆ. ಇದು ಸರ್ಕಾರದ ಸ್ವರೂಪ, ಅದರ ಅಧಿಕಾರಗಳು ಮತ್ತು ಮಿತಿಗಳನ್ನು ನಿರ್ಧರಿಸುತ್ತದೆ ಮತ್ತು ನಾಗರಿಕರ ಹಕ್ಕುಗಳು ಮತ್ತು ಕರ್ತವ್ಯಗಳನ್ನು ವಿವರಿಸುತ್ತದೆ. ಸಂವಿಧಾನವು ರಾಜ್ಯದ ಎಲ್ಲಾ ಸಂಸ್ಥೆಗಳಿಗೆ ಮಾರ್ಗದರ್ಶನ ನೀಡುತ್ತದೆ, ಇದು ಅತ್ಯಂತ ಮೂಲಭೂತ ಕಾನೂನು ಆಗಿ ಕಾರ್ಯನಿರ್ವಹಿಸುತ್ತದೆ.
ಭಾರತದ ಸಂವಿಧಾನ ಸಭೆಯನ್ನು 1946ರಲ್ಲಿ ಸ್ಥಾಪಿಸಲಾಯಿತು. ಭಾರತ ಸಂವಿಧಾನ ರಚನೆಗೆ 2 ವರ್ಷ 11 ತಿಂಗಳು 18 ದಿನಗಳ ಕಾಲ ಸಮಯ ತೆಗೆದುಕೊಳ್ಳಲಾಯಿತು.
ನಮ್ಮ ದೇಶದ ಸಂವಿಧಾನ ದಿನವನ್ನು ಪ್ರತಿ ವರ್ಷ ನವೆಂಬರ್ 26 ರಂದು ಆಚರಿಸಲಾಗುತ್ತದೆ, ಏಕೆಂದರೆ 1949ರ ನವೆಂಬರ್ 26ರಂದು ಭಾರತ ಸಂವಿಧಾನವನ್ನು ಅಂಗೀಕರಿಸಿತ್ತು. 2015 ರಲ್ಲಿ, ಸಂವಿಧಾನದ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ 125ನೇ ಜನ್ಮದಿನದ ನೆನಪಿಗಾಗಿ ಭಾರತ ಸರ್ಕಾರವು ನವೆಂಬರ್ 26ನ್ನು ಸಂವಿಧಾನ ದಿನವೆಂದು ಅಧಿಕೃತವಾಗಿ ಘೋಷಿಸಿತು.
2025 ರ ಹೊತ್ತಿಗೆ ಭಾರತೀಯ ಸಂವಿಧಾನವು 448 ವಿಧಿಗಳು, 25 ಭಾಗಗಳು ಮತ್ತು 12 ಅನುಸೂಚಿಗಳನ್ನು ಒಳಗೊಂಡಿದೆ. ಮೂಲತಃ, ಇದು 395 ವಿಧಿಗಳು, 22 ಭಾಗಗಳು ಮತ್ತು 8 ಅನುಸೂಚಿಗಳನ್ನು ಹೊಂದಿತ್ತು. ನಂತರ, 104 ಕ್ಕೂ ಹೆಚ್ಚು ತಿದ್ದುಪಡಿಗಳನ್ನು ಮಾಡಲಾಗಿದೆ, ಇದರ ಪರಿಣಾಮವಾಗಿ ವಿಧಿಗಳ ಮತ್ತು ಭಾಗಗಳ ಸಂಖ್ಯೆ ಹೆಚ್ಚಾಗಿದೆ.
ಸಂವಿಧಾನವು ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದಂತಹ ಸರ್ಕಾರದ ವಿವಿಧ ಶಾಖೆಗಳನ್ನು ಹೇಗೆ ರಚಿಸಬೇಕು ಮತ್ತು ಅವುಗಳ ನಡುವಿನ ಸಂಬಂಧವನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನು ವಿವರಿಸುತ್ತದೆ.
ಭಾರತ ಸಂವಿಧಾನ ಸಭೆಯು 1949ರ ನವೆಂಬರ್ 26ರಂದು ಸಂವಿಧಾನವನ್ನು ಅಂಗೀಕರಿಸಿದ ದಿನವನ್ನು ಸ್ಮರಿಸಲು. ಈ ದಿನದಂದು, ಸಂವಿಧಾನದ ಮಹತ್ವದ ಬಗ್ಗೆ ಜನರಿಗೆ ಮತ್ತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಗುತ್ತದೆ, ಸಂವಿಧಾನದ ಪೀಠಿಕೆಯನ್ನು ಓದುವುದು ಮತ್ತು ಸಂವಿಧಾನದ ಕುರಿತು ಉಪನ್ಯಾಸಗಳು ಹಾಗೂ ಸ್ಪರ್ಧೆಗಳನ್ನು ಆಯೋಜಿಸುವುದು ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.
ಭಾರತವನ್ನು ಸಾರ್ವಭೌಮ, ಸಮಾಜವಾದಿ, ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕ ಗಣರಾಜ್ಯವೆಂದು ಘೋಷಿಸುತ್ತದೆ ಮತ್ತು ಎಲ್ಲಾ ನಾಗರಿಕರಿಗೆ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ರಾಷ್ಟ್ರದ ಏಕತೆ ಮತ್ತು ಸಮಗ್ರತೆಯನ್ನು ಕಾಪಾಡಿಕೊಳ್ಳಲು ಭ್ರಾತೃತ್ವವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಭಾರತೀಯ ಸಂವಿಧಾನವನ್ನು ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಭಾರತದ ಮೊದಲ ಕಾನೂನು ಸಚಿವ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಈ ದಿನ ಗೌರವ ಸಲ್ಲಿಸಲಾಗುತ್ತದೆ.
ಭಾರತದ ಸಂವಿಧಾನವು ಬ್ರಿಟನ್, ಐರ್ಲೆಂಡ್, ಜಪಾನ್, ಯುಎಸ್ಎ, ದಕ್ಷಿಣ ಆಫ್ರಿಕಾ, ಜರ್ಮನಿ, ಆಸ್ಟ್ರೇಲಿಯಾ ಮತ್ತು ಕೆನಡಾ ಸೇರಿದಂತೆ ಇತರ ದೇಶಗಳಿಂದ ವೈಶಿಷ್ಟ್ಯಗಳನ್ನು ಎರವಲು ಪಡೆದುಕೊಂಡಿದೆ. ಇದು ಸರ್ಕಾರದ ಅಧಿಕಾರಗಳ ಮೇಲೆ ಮಿತಿಗಳನ್ನು ವಿಧಿಸುತ್ತದೆ ಮತ್ತು ಯಾವುದೇ ರೀತಿಯ ಅಧಿಕಾರದ ದುರುಪಯೋಗವನ್ನು ತಡೆಯುತ್ತದೆ.
ನಾಗರಿಕರ ಹಕ್ಕುಗಳು: ಸಂವಿಧಾನವು ಎಲ್ಲಾ ನಾಗರಿಕರ ಹಕ್ಕುಗಳು ಮತ್ತು ಜವಾಬ್ದಾರಿಗಳನ್ನು ಖಚಿತಪಡಿಸುತ್ತದೆ, ಇದು ರಾಜ್ಯ ಮತ್ತು ವ್ಯಕ್ತಿಯ ನಡುವಿನ ಸಂಬಂಧವನ್ನು ವ್ಯಾಖ್ಯಾನಿಸುತ್ತದೆ.
ಮೂಲಭೂತ ಕಾನೂನು: ಇದು ದೇಶದ ಎಲ್ಲಾ ಕಾನೂನುಗಳು ಮತ್ತು ನಿಯಮಗಳಿಗಿಂತ ಹೆಚ್ಚಿನ ಸ್ಥಾನಮಾನವನ್ನು ಹೊಂದಿರುವ ಅತ್ಯಂತ ಮೂಲಭೂತ ಕಾನೂನಾಗಿದೆ.
ಲಿಖಿತ ಅಥವಾ ಅಲಿಖಿತ: ಸಂವಿಧಾನವು ಸಾಮಾನ್ಯವಾಗಿ ಲಿಖಿತ ರೂಪದಲ್ಲಿರುತ್ತದೆ (ಉದಾಹರಣೆಗೆ, ಭಾರತದ ಸಂವಿಧಾನ), ಆದರೆ ಕೆಲವು ದೇಶಗಳಲ್ಲಿ ಇದು ಅಲಿಖಿತ (ಅಂದರೆ, ವಿವಿಧ ಕಾನೂನುಗಳು ಮತ್ತು ಸಂಪ್ರದಾಯಗಳ ಸಂಗ್ರಹ) ರೂಪದಲ್ಲಿರಬಹುದು. ಭಾರತೀಯ ಸಂವಿಧಾನವು ಜನವರಿ 26, 1950 ರಂದು ಜಾರಿಗೆ ಬಂದಿತು.
*ಭಾರತ ಸಂವಿಧಾನದ ಲಕ್ಷಣಗಳು*
*ಲಿಖಿತ ಸಂವಿಧಾನ*
ಇದು ವಿಶ್ವದ ಅತಿ ಉದ್ದದ ಮತ್ತು ವಿವರವಾದ ಲಿಖಿತ ಸಂವಿಧಾನವಾಗಿದೆ.
*ಫೆಡರಲಿಸಂ* : ಇದು ಕೇಂದ್ರ ಮತ್ತು ರಾಜ್ಯಗಳ ನಡುವೆ ಅಧಿಕಾರಗಳ ವಿಭಜನೆಯನ್ನು ಹೊಂದಿದೆ, ಇದು ಉಭಯ ಸರ್ಕಾರಗಳ ರಾಜಕೀಯ ವ್ಯವಸ್ಥೆಯನ್ನು ಆಧರಿಸಿದೆ.
*ಜಾತ್ಯತೀತತೆ ಮತ್ತು ಸಮಾಜವಾದ:* ಸಂವಿಧಾನವು ಎಲ್ಲರಿಗೂ ಸಮಾನ ಅವಕಾಶ ಮತ್ತು ನಂಬಿಕೆಯ ಸ್ವಾತಂತ್ರ್ಯವನ್ನು ಖಾತರಿಪಡಿಸುತ್ತದೆ. ಇದು ಆರ್ಥಿಕ ಮತ್ತು ಸಾಮಾಜಿಕ ನ್ಯಾಯವನ್ನು ಉತ್ತೇಜಿಸುತ್ತದೆ.
*ಮೂಲಭೂತ ಹಕ್ಕುಗಳು* : ಇದು ನಾಗರಿಕರಿಗೆ ನ್ಯಾಯ, ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ, ಶೋಷಣೆಯಿಂದ ಸ್ವಾತಂತ್ರ್ಯ, ಮತ್ತು ಸಾಂವಿಧಾನಿಕ ಪರಿಹಾರಗಳ ಹಕ್ಕನ್ನು ಖಾತರಿಪಡಿಸುತ್ತದೆ.
*ರಾಜ್ಯ ನೀತಿಯ ನಿರ್ದೇಶನ ತತ್ವಗಳು* :
ಇವು ಕಡ್ಡಾಯವಲ್ಲದಿದ್ದರೂ, ದೇಶದ ಆಡಳಿತ ಮತ್ತು ಶಾಸನಗಳ ರಚನೆಗೆ ಮಾರ್ಗಸೂಚಿಗಳಾಗಿ ಕಾರ್ಯನಿರ್ವಹಿಸುತ್ತವೆ.
*ಸ್ವತಂತ್ರ ನ್ಯಾಯಾಂಗ*
: ಸ್ವತಂತ್ರ ನ್ಯಾಯಾಂಗವು ಸಂವಿಧಾನದ ಸಂರಕ್ಷಕನಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಸಂವಿಧಾನಕ್ಕೆ ಹೊಂದಿಕೆಯಾಗದ ಕಾನೂನುಗಳನ್ನು ಪರಿಶೀಲಿಸುವ ಅಧಿಕಾರವನ್ನು ಹೊಂದಿದೆ.
*ಕಠಿಣ ಮತ್ತು ನಮ್ಯತೆಯ ಮಿಶ್ರಣ:* ಸಂವಿಧಾನ ತಿದ್ದುಪಡಿ ಪ್ರಕ್ರಿಯೆಯು ಕಠಿಣ ಮತ್ತು ನಮ್ಯತೆಯ ಸಂಯೋಜನೆಯನ್ನು ಹೊಂದಿದೆ, ಇದು ಕಾಲಾನಂತರದಲ್ಲಿ ಬದಲಾವಣೆಗಳನ್ನು ಸುಲಭಗೊಳಿಸುತ್ತದೆ.
ಸಾರ್ವಭೌಮ, ಸಮಾಜವಾದಿ, ಜಾತ್ಯತೀತ, ಪ್ರಜಾಸತ್ತಾತ್ಮಕ ಮತ್ತು ಗಣರಾಜ್ಯ: ಪೀಠಿಕೆಯು ಸಂವಿಧಾನದ ಪ್ರಮುಖ ತತ್ವಗಳನ್ನು ಎತ್ತಿ ತೋರಿಸುತ್ತದೆ, ಇದು ಭಾರತವನ್ನು ಈ ಎಲ್ಲಾ ಗುಣಲಕ್ಷಣಗಳನ್ನು ಹೊಂದಿರುವ ರಾಷ್ಟ್ರ ಎಂದು ವಿವರಿಸುತ್ತದೆ.
*ಸಂವಿಧಾನದ ಮುಖ್ಯ ಆಶಯಗಳು:*
ನ್ಯಾಯ: ಎಲ್ಲಾ ನಾಗರಿಕರಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು ಒದಗಿಸುವುದು.
*ಸಮಾನತೆ* : ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದು ಪರಿಗಣಿಸುವುದು ಮತ್ತು ಯಾವುದೇ ರೀತಿಯ ತಾರತಮ್ಯವನ್ನು ನಿಷೇಧಿಸುವುದು.
*ಸ್ವಾತಂತ್ರ್ಯ* : ಚಿಂತನೆ, ಅಭಿವ್ಯಕ್ತಿ, ನಂಬಿಕೆ ಮತ್ತು ಆರಾಧನೆಯ ಸ್ವಾತಂತ್ರ್ಯವನ್ನು ಖಾತರಿಪಡಿಸುವುದು.
*ಸಹೋದರತ್ವ* : ವೈವಿಧ್ಯಮಯ ಸಮಾಜದಲ್ಲಿ ಏಕತೆ ಮತ್ತು ಸಹೋದರಭಾವನೆಯನ್ನು ಬೆಳೆಸುವುದು.
*ರಾಷ್ಟ್ರೀಯ ಏಕತೆ ಮತ್ತು ಸಮಗ್ರತೆ* : ರಾಷ್ಟ್ರದ ಏಕತೆ ಮತ್ತು ಸಮಗ್ರತೆಯನ್ನು ಬಲಪಡಿಸುವುದು.
---------
ಶ್ರೀಧರ ಹಿರೇಮಠ
ದೈಹಿಕ ಶಿಕ್ಷಣ ಶಿಕ್ಷಕರು, ಗುಡದೂರ

25th November 2025
ನೇಸರಗಿ- ಸಂಪನ್ಮೂಲ ಕೇಂದ್ರ ಹಣಬರಹಟ್ಟಿ
ಮಾಸ್ತಮರ್ಡಿ ಗ್ರಾಮದಲ್ಲಿ ಹಣಬರಹಟ್ಟಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಅದ್ದೂರಿಯಾಗಿ ಜರುಗಿತು.
2025-26 ನೇ ಸಾಲಿನ ಹಣಬರಹಟ್ಟಿ ಕ್ಲಸ್ಟರ ಹಂತದ ಪ್ರತಿಭಾ ಕಾರಂಜಿ /ಕಲೋತ್ಸವ ಕಾರ್ಯಕ್ರಮವನ್ನು ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಮಹಾನಂದಾ ಪಾಣಿ ಎಸ್.ಡಿ.ಎಮ್.ಸಿ.ಅಧ್ಯಕ್ಷರು ಶ್ರೀಮತಿ ಲಕ್ಕವ್ವಾ ಕಡಬಿ ವಣ್ಣೂರ ಗ್ರಾಮ ಪಂಚಾಯತಿ ಅಧ್ಯಕ್ಷ ಬಾಳಾಸಾಹೇಬ ದೇಸಾಯಿ ಟಿ.ಎ.ಪಿ.ಸಿ.ಎಮ್.ಎಸ್.ನಿರ್ದೇಶಕರು ಬೈಲಹೊಂಗಲ.ಇವರು ಮುಖ್ಯ ಅತಿಥಿ ಸ್ಥಾನವನ್ನು ವಹಿಸಿದ್ದರು. ರವಿ ಹಿರೇಮಠ ಕ್ಷೇತ್ರ ಸಮನ್ವಯಾಧಿಕಾರಿಗಳು ಬೈಲಹೊಂಗಲ ಕಾರ್ಯಕ್ರಮವನ್ನು ಉದ್ಘಾಟಿಸಿದರು, ಎಸ್.ಬಿ.ಸಂಗನಗೌಡರ ಸಿ.ಆರ್.ಪಿ ಹಣಬರಹಟ್ಟಿ ಕಾರ್ಯಕ್ರಮವನ್ನು ಆಯೋಜಿಸಿ ಕಾರ್ಯಕ್ರಮದ ಕುರಿತು ಪ್ರತಿಭಾ ಕಾರಂಜಿ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸುವ ವೇದಿಕೆಯಾಗಿದೆ.ಮಕ್ಕಳು ಅರಳುವ ಕುಸುಮಗಳು ಅವುಗಳಿಗೆ ಸೂಕ್ತ ವೇಳೆಯಲ್ಲಿ ವೇದಿಕೆ ನಿರ್ಮಿಸಿ ಪ್ರತಿಭೆಯನ್ನು ಹೋರಹಾಕಲು ಎಲ್ಲ ಶಿಕ್ಷಕರು - ಪಾಲಕರು ಹಾಗೂ ಸಮಾಜದ ಜವಾಬ್ದಾರಿಯನ್ನು ತಿಳಿಸಿದರು.ಸರಕಾರಿ ಶಾಲೆಗಳು ಮಕ್ಕಳ ಗುಣಾತ್ಮಕ ಶಿಕ್ಷಣಕ್ಕೆ ಹೆಚ್ಚು ಕಾಳಜಿ ವಹಿಸಿವೆ ಎಂದು ಪ್ರಾಸ್ಥಾವಿಕವಾಗಿ ಮಾತನಾಡಿದರು. ಕಾರ್ಯಕ್ರಮಕ್ಕೆ ಸಹಾಯ ಮಾಡಿದ ಶ್ರೀಮತಿ ಎಸ್.ಎಸ್.ಜುಜನ್ನವರ ಸಹ ಶಿಕ್ಷಕಿಯರನ್ನು ಹಾಗೂ ತಾಲೂಕಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದ್ದಕ್ಕೆ ಶ್ರೀಎಸ್.ಎಸ್. ನೀಲನ್ನವರ ಸಹ ಶಿಕ್ಷಕರನ್ನು ಸನ್ಮಾನಿಸಲಾಯಿತು. ಮಹೇಶ ಯರಗಟ್ಟಿ ಇ.ಸಿ.ಓ ಬೈಲಹೊಂಗಲ,ಶ್ರೀ ಸಂತೋಷ ಪಾಟೀಲ ಉಪಾದ್ಯಕ್ಷರು ತಾಲೂಕಾ ಪ್ರಾಥಮಿಕ ಶಿಕ್ಷಕರ ಸಂಘ ಬೈಲಹೊಂಗಲ ಎಸ್.ಆಯ್.ಮಿರ್ಜನ್ನವರ ಜಿಲ್ಲಾ ದೈಹಿಕ ಸಂಘದ ಅಧ್ಯಕ್ಷರು ,ಶ್ರೀ ಡಿ.ಎಮ್.ನಾಯ್ಕರ ಮುಖ್ಯೊಪಾಧ್ಯಯರು ಸರಕಾರಿ ಪ್ರೌಢ ಶಾಲೆ ಮಾಸ್ತಮರ್ಡಿ. ಚಿದಾನಂದ ವಾರಿ ಜಿಲ್ಲಾ ಎನ್.ಪಿ.ಎಸ್. ಸಂಘದ ಅಧ್ಯಕ್ಷರು ,ಶ್ರೀ ರಾಜು ಖೋತ ಮುಖ್ಯೊಪಾಧ್ಯಯರು ಸರಕಾರಿ ಪ್ರೌಢ ಶಾಲೆ ವಣ್ಣೂರ. ಮಲ್ಲೇಶಪ್ಪಾ ಚಿಕೋಡಿ ,
ವಾಯ್.ಎಮ್ .ಚಿಕ್ಕೋಪ್ಪ ಶಿಕ್ಷಣ ಪ್ರೇಮಿಗಳು,ಸಿದ್ದಮಲ್ಲಪ್ಪಾ ತಳವಾರ,ಸಿದ್ದಪ್ಪಾ ಹುಣಶೀಕಟ್ಟಿ ಊರಿನ ಶಿಕ್ಷಣ ಪ್ರೇಮಿಗಳು ಧಾನಿಗಳು ಮಕ್ಕಳ ಕಾರ್ಯಕ್ರಮಕ್ಕೆ ತನು-ಮನದಿಂದ ಸಹಾಯ ಮಾಡಿದರು. ಬಿ.ಕೆ ನ್ಯೂಜ್ ಸುದ್ದಿ ವಾಹಿಣಿ ಸಂಪಾದಕರಾದ ಭೀಮಶೆನ ಕಮ್ಮಾರ. ಅಡವಯ್ಯ ಕುಲಕರ್ಣಿ ಹಾಜರಿದ್ದರು. ಸಂತೋಷ ಸಿದ್ದಯ್ಯನವರ ಸಹ ಶಿಕ್ಷಕರು ಮಂಜುನಾಥ ಚೋಬಾರಿ ಪ್ರಧಾನ ಗುರುಗಳು ಮಾಸ್ತಮರ್ಡಿ ಸ್ವಾಗತಿಸಿದರು.ಶ್ರೀಮತಿ ಗೌರವ್ವಾ ಕೋಣಿನವರ ಮತ್ತು ಸಂತೋಷ ಸಿದ್ದಯ್ಯನವರ ಸಹ ಶಿಕ್ಷಕರು,ನಿರೂಪಿಸಿದರು. ಸಂತೋಷ ಚೀಟೀನ ವಂದಿಸಿದರು

25th November 2025
ಬೆಳಗಾವಿ- ಕರ್ನಾಟಕ ರಾಜ್ಯ ಪತ್ರಕರ್ತರ ವೇದಿಕೆ ಬೆಂಗಳೂರು ಇದರ ರಾಜ್ಯಾಧ್ಯಕ್ಷರಾದ ಅಶೋಕ ಲ.ಭಜಂತ್ರಿ ಇವರ ಅಧ್ಯಕ್ಷತೆಯಲ್ಲಿ ಬೆಳಗಾವಿ ಸಕ್ಯೂಟ್ ಹೌಸ ದಲ್ಲಿ ನಡೆದ ಸಭೆಯಲ್ಲಿ ರಾಜ್ಯ ಮತ್ತು ಜಿಲ್ಲಾ ಪದಾಧಿಕಾರಿಗಳ ಆಯ್ಕೆಯನ್ನು ಮಾಡಲಾಯಿತು.
ರಾಜ್ಯ ಉಪಾಧ್ಯಕ್ಷರಾಗಿ ಗೋಕಾಕದ ಜೈನುಲ್ಲಾ ಅಂಕಲಗಿ, ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ರಾಜಶೇಖರ ಕೆ, ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಸಂದೀಪ ಮೆಣಸಿನಕಾಯಿ, ಬೆಳಗಾವಿ ಜಿಲ್ಲಾ ಗೌರವ ಅಧ್ಯಕ್ಷರಾಗಿ ಪ್ರಕಾಶ ಕೆಳಗಿನಮನಿ, ಜಿಲ್ಲಾ ಕಾರ್ಯಾಧ್ಯಕ್ಷರಾಗಿ ಶಶಿ ಕನ್ನಪ್ಪನವರ,
ಪ್ರಧಾನ ಕಾರ್ಯದರ್ಶಿಯಾಗಿ ರಾಮು ಮರೆನ್ನವರ ,ಜಿಲ್ಲಾ ಉಪಾಧ್ಯಕ್ಷರಾಗಿ ಅಪ್ಪಣ್ಣ ಅಗಸರ, ಜಿಲ್ಲಾ ಖಜಾಂಚಿಯಾಗಿ ವಿಶ್ವನಾಥ ಚಿಕ್ಕಮಠ, ಬೆಳಗಾವಿ ತಾಲೂಕ ಅಧ್ಯಕ್ಷರನ್ನಾಗಿ ನ್ಯಾಯವಾದಿ ವಿನೋದ ಪಾಟೀಲ, ಉಪಾದ್ಯಕ್ಷರನ್ನಾಗಿ ಮುಂಜಾನೆ ಬೆಳಕು ಸಂಪಾದಕರಾದ ನಂದೀಶ ಎಂ.ಮೆಣಸಿನಕಾಯಿ ಇವರನ್ನು ಆಯ್ಕೆ ಮಾಡಲಾಯಿತು.