

26th March 2026

ನೇಸರಗಿ- ಶಾಲೆಯ ಸರ್ವಾಂಗೀಣ ಪ್ರಗತಿಗೆ ಶಾಲಾ ಆಡಳಿತ ಮಂಡಳಿ ಶ್ರಮಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೋಳಿ ಹೇಳಿದರು.
ಸಮೀಪದ ದೇಶನೂರ ಗ್ರಾಮದ ವಿಕಾಸ ಪ್ರಾಥಮಿಕ ಮತ್ತು ಪ್ರೌಢಶಾಲೆಗೆ ಬೇಟಿ ಆಡಳಿತ ಮಂಡಳಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ, ಶಾಲೆ ಪ್ರಗತಿಯತ್ತ ಕೊಂಡೊಯ್ಯಲು ಆಡಳಿತ ಮಂಡಳಿ ಅಗತ್ಯ ಕ್ರಮ ಕೈಗೊಂಡಿರುವದು ಶ್ಲಾಘನೀಯ. ಶಾಲೆ ಇನ್ನಷ್ಟು ಪ್ರಗತಿ ಹೊಂದಲೆಂದರು.
ಕಿತ್ತೂರ ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ, ಶಾಲೆಯ ಅಭಿವೃದ್ಧಿ ಮತ್ತು ಸಮಸ್ಯೆಗೆ ಶ್ರಮಿಸುವುದಾಗಿ ತಿಳಿಸಿದರು.
ಮಾಜಿ ಜಿ.ಪಂ ಸದಸ್ಯ ನಿಂಗಪ್ಪ ಅರಕೇರಿ, ಅಬ್ಬಾಸ ಅಲಿ ಪೀರಜಾದೆ,ಎಸ್.ಡಿ.ಕೋಟಗಿ, ಎಂ.ಎ.ಮತ್ತೆ, ಯು.ಬಿ.ಬಾಗೇವಾಡಿ, ಎ.ಎಂ.ಚವಾನ್,ಡಿ.ಎಂ.ಪತ್ತಾರ, ಅಣ್ಣಪ್ಪ ಕಡಕೋಳ, ಪ್ರಕಾಶ ಮುಂಗರವಾಡಿ, ಆಯುಬ ಗಣಾಚಾರಿ, ದಿಲಾವರ ಮತ್ತೆ ಉಪಸ್ಥಿತರಿದ್ದರು.

ಹುಲಿಯಪ್ಪ ಮತ್ತು ಇತರರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಿ ; ಕೊಳಗಲ್ಲು ಗ್ರಾಮಸ್ಥರ ಒತ್ತಾಯ

ಬಳ್ಳಾರಿ: ರಾಷ್ಟೀಯ ಹೆದ್ದಾರಿ 150-ಎ ರಸ್ತೆಯ ಸೇತುವೆ ಮರು ನಿರ್ಮಾಣ; 60 ದಿನಗಳ ಕಾಲ ವಾಹನ ಸಂಚಾರ ಮಾರ್ಗ ಬದಲಾವಣೆ