

23rd May 2026

ಬೆಳಗಾವಿ: ಆಧುನಿಕ ಜಗತ್ತಿನಲ್ಲಿ ಮಧುಮೇಹ (ಸಕ್ಕರೆ ಕಾಯಿಲೆ) ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಸಮಾಜವನ್ನು ತೀವ್ರವಾಗಿ ಕಾಡುತ್ತಿವೆ. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಅತ್ಯಂತ ನಿಖರ ಹಾಗೂ ಕೈಗೆಟುಕುವ ದರದಲ್ಲಿ ಅತ್ಯಾಧುನಿಕ ವೈದ್ಯಕೀಯ ತಪಾಸಣಾ ಸೇವೆಗಳನ್ನು ಒದಗಿಸಲು 'ಕಾಮಾಖ್ಯಾ ಡೈಗೋಸ್ಟಿಕ್ ಮತ್ತು ಸಂಶೋಧನಾ ಪ್ರಯೋಗಾಲಯ' ಸಜ್ಜಾಗಿದೆ. ಮೇ 24ರ ಭಾನುವಾರದಂದು ಬೆಳಗಾವಿಯ ಸದಾಶಿವ ನಗರದಲ್ಲಿ ಈ ಸುಸಜ್ಜಿತ ಪ್ರಯೋಗಾಲಯದ ಭವ್ಯ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಸ್ಥಾಪಕರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಕಾಂತ ಎಂ. ಕವೀಶ್ವರ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ವಿಶಿಷ್ಟ 'ಕಾಮಾಖ್ಯಾ ಹೆಲ್ತ್ ಕಾರ್ಡ್' ಪರಿಚಯಿಸಿದ ನಿರ್ದೇಶಕ ಅನಿಲ ಪಾಟೀಲ ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ನಿರ್ದೇಶಕರಾದ ಅನಿಲ ಪಾಟೀಲ ಅವರು ಮಾತನಾಡಿ, ಸಾರ್ವಜನಿಕರ ಅನುಕೂಲಕ್ಕಾಗಿ ಸಂಸ್ಥೆಯು ವಿಶೇಷ ಆರೋಗ್ಯ ಯೋಜನೆಯನ್ನು ಜಾರಿಗೆ ತರುತ್ತಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಸಕ್ಕರೆ ಕಾಯಿಲೆಯು ಸಮಾಜದಲ್ಲಿ ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡುತ್ತಿದೆ.
ಇವನ್ನು ನಿಯಂತ್ರಿಸಲು ಮತ್ತು ಮುಂಜಾಗ್ರತಾ ಕ್ರಮ ಕೈಗೊಳ್ಳಲು ನಾವು 'ಕಾಮಾಖ್ಯಾ ಹೆಲ್ತ್ ಕಾರ್ಡ್' ಪರಿಚಯಿಸುತ್ತಿದ್ದೇವೆ. ಕೇವಲ ₹2,499ರ ಒಂದು ಬಾರಿಯ ಚಂದಾದಾರಿಕೆಯೊಂದಿಗೆ ಈ ಕಾರ್ಡ್ ಪಡೆಯಬಹುದು. ವಿಶೇಷವೆಂದರೆ, ಈ ಒಂದು ಕಾರ್ಡ್ ಮೂಲಕ ಇಬ್ಬರು ಗ್ರಾಹಕರ ಜೊತೆಗೆ ಹೆಚ್ಚುವರಿಯಾಗಿ ಮೂರು ಜನರಿಗೆ ಸಂಪೂರ್ಣ ಉಚಿತ ಆರೋಗ್ಯ ತವಾಸಣೆ ಮಾಡಲಾಗುವುದು, ಎಂದು ಅವರು ವಿವರಿಸಿದರು.
ಬೆಳಗಾವಿಯಲ್ಲೇ ಪ್ರಥಮ: ಆ್ಯಪ್ ಆಧಾರಿತ ಬುಕಿಂಗ್ ಸೇವೆ: ಡಿಜಿಟಲ್ ತಂತ್ರಜ್ಞಾನದ ಸದುಪಯೋಗ ಪಡೆದುಕೊಂಡಿರುವ ಕಾಮಾಖ್ಯಾ ಪ್ರಯೋಗಾಲಯವು
ಬೆಳಗಾವಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ಮೊಬೈಲ್ ಆ?ಯಪ್ ಮೂಲಕ ಬುಕಿಂಗ್ ಮಾಡುವ ಅತ್ಯಾಧುನಿಕ ವ್ಯವಸ್ಥೆಯನ್ನು ಪರಿಚಯಿಸಿದೆ.
ಸ್ಟಾರ್ಟ್ ಫೋನ್ ಆ್ಯಪ್: ಈ ಆ್ಯಪ್ ಆಂಡ್ರಾಯ್ಡ್ ಹಾಗೂ ಆಪಲ್ ಎರಡೂ ಪ್ಲಾಟ್ ಫಾರ್ಮ್ ಗಳಲ್ಲಿ ಲಭ್ಯವಿದ್ದು, ಸಾರ್ವಜನಿಕರು ಸುಲಭವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದು.
ತಜ್ಞ ವೈದ್ಯರ ಮೇಲ್ವಿಚಾರಣೆ: ಪ್ರಸ್ತುತ ಸಂಸ್ಥೆಯಲ್ಲಿ ಮೂವರು ಅನುಭವಿ ತಜ್ಞ ವೈದ್ಯರ ತಂಡವಿದ್ದು, ಇಡೀ ಪ್ರಕ್ರಿಯೆಯನ್ನು ಹತ್ತಿರದಿಂದ ನಿರ್ವಹಿಸಲಿದೆ.
ವಾಟ್ಸಾಪ್ನಲ್ಲಿ ವರದಿ: ಗ್ರಾಹಕರು ತಪಾಸಣೆ ಮಾಡಿಸಿಕೊಂಡ ನಂತರ ಅವರ ವೈದ್ಯಕೀಯ ವರದಿಗಳನ್ನು ನೇರವಾಗಿ ಅವರ ವಾಟ್ಸಾಪ್ ಸಂಖ್ಯೆಗೆ ಕಳುಹಿಸುವ ಡಿಜಿಟಲ್ ವ್ಯವಸ್ಥೆ ಮಾಡಲಾಗಿದೆ.
ಗ್ರಾಮೀಣ ಭಾಗಕ್ಕೆ ಕಾಲ್ ಸೆಂಟರ್: ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗುವಂತೆ ಸಂಸ್ಥೆಯು ಸ್ವಂತ ಕಾಲ್ ಸೆಂಟರ್ ಹೊಂದಿದ್ದು, ಕೇವಲ ಒಂದು ಫೋನ್ ಕರೆಯ ಮೂಲಕವೂ ಸಾರ್ವಜನಿಕರು ಈ ಎಲ್ಲಾ ಸೌಲಭ್ಯಗಳನ್ನು ತಮ್ಮದಾಗಿಸಿಕೊಳ್ಳಬಹುದು.
ರಾಷ್ಟ್ರೀಯ ಗುಣಮಟ್ಟದ ಮಾನ್ಯತೆ ಪಡೆದ ಈ ಅತ್ಯಾಧುನಿಕ ಪ್ರಯೋಗಾಲಯದಲ್ಲಿ ಈ ಕೆಳಗಿನ ಉನ್ನತ ಮಟ್ಟದ ಪರೀಕ್ಷೆಗಳು ಲಭ್ಯವಿವೆ.
ಉನ್ನತ ಮಟ್ಟದ ಪ್ರಯೋಗಾಲಯ ಪರೀಕ್ಷೆಗಳು, ಸಂಪೂರ್ಣ ರಕ್ತ ಪರೀಕ್ಷೆಗಳು, ಇ.ಸಿ.ಜಿ ಸೇವೆ, ಶ್ವಾಸಕೋಶದ ಸಾಮರ್ಥ್ಯ ಪರೀಕ್ಷೆ, ಶ್ರವಣ ದೋಷ ಪರೀಕ್ಷೆ, ಉದ್ಯೋಗ ಪೂರ್ವ ಆರೋಗ್ಯ ತಪಾಸಣೆ, ನಿಯತಕಾಲಿಕ ಉದ್ಯೋಗದ ಆರೋಗ್ಯ ತಪಾಸಣೆ, ಮನೆ ಬಾಗಿಲಿಗೇ ಬಂದು ಮಾದರಿ ಸಂಗ್ರಹಣೆ, ಮೇ 24, 2026ರಂದು ಬೆಳಗಾವಿಯ ಸದಾಶಿವ ನಗರದಲ್ಲಿ ನಡೆಯಲಿರುವ ಈ ಉದ್ಘಾಟನಾ ಸಮಾರಂಭದಲ್ಲಿ ನಾಡಿನ ಪ್ರಮುಖ ರಾಜಕೀಯ ಧುರೀಣರು ಹಾಗೂ ಪ್ರಮುಖ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ, ಶಾಸಕರುಗಳಾದ ಅಭಯ ಪಾಟೀಲ ಹಾಗೂ ಆಸೀಫ್ (ರಾಜು) ಸೇಶ್, ಜಿಲ್ಲಾಧಿಕಾರಿ ಮೊಹಮ್ಮದ ರೋಷನ್, ಮಾಜಿ ಶಾಸಕ ಸಂಜಯ ಪಾಟೀಲ, ಡಿಸಿಪಿ ನಾರಾಯಣ ಭರಮನಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಐ.ಪಿ. ಗಡೇದ, ಬಿಮ್ಸ್ ನಿರ್ದೇಶಕರಾದ ಡಾ. ಅಶೋಕ ಕುಮಾರ ಶೆಟ್ಟಿ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯರಾದ ಮಹಾಂತೇಶ ಕವಟಗಿಮಠ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರಲಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಲಾಯಿತು.

ಕಂಪ್ಲಿ ಶಾಸಕ ಜೆ.ಎನ್. ಗಣೇಶ್ಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಬಳ್ಳಾರಿಯಲ್ಲಿ ಬೃಹತ್ ಪಾದಯಾತ್ರೆ