

28th June 2026

ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನದ ಅಂಗವಾಗಿ ಬೆಳಗಾವಿ ತಾಲೂಕಿನ ಶಿಂದೊಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಉಪ-ಕೇಂದ್ರದಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮ ಉದ್ದೇಶಿಸಿ ಸಮಾಜ ಸೇವಕರು ಹಾಗೂ ನಿಕಟಪೂರ್ವ ಗ್ರಾಮ ಪಂಚಾಯಿತಿ ಸದಸ್ಯ ವೀರಭದ್ರಯ್ಯ ಪೂಜಾರ ಮಾತನಾಡಿ ನಮ್ಮ ಭಾರತವು ಪೋಲಿಯೋ ರೋಗಮುಕ್ತ ದೇಶವಾಗಲು ಇಂದಿನ ಮತ್ತು ಹಿಂದಿನ ಸರ್ಕಾರಗಳು ತೀವ್ರಗತಿಯಲ್ಲಿನ ವ್ಯವಸ್ಥಿತ ಅನುಷ್ಠಾನ ಹಾಗೂ ರೂಪುರೇಷೆಯಂತೆ ಕಾರ್ಯ, ಅಧಿಕಾರಿಗಳ ಜೊತೆ ಜೊತೆಗೆ ತಳಮಟ್ಟದ ಆರೋಗ್ಯ ಕಾರ್ಯಕರ್ತರ ಪರಿಶ್ರಮದಿಂದಾಗಿ ಯಶಸ್ಸು ಸಾಧ್ಯವಾಗಿದೆ, ಭಾರತದ ಪಲ್ಸ್ ಪೋಲಿಯೋ ಅಭಿಯಾನ ವಿಶ್ವಕ್ಕೆ ಮಾದರಿ ಎಂದರು.
ಶಿಂದೊಳ್ಳಿ ಗ್ರಾಮದ ಸರಕಾರಿ ಶಾಲೆಯ ಮುಖ್ಯೋಪಾಧ್ಯಾಯರಾದ ಅಶೋಕ ಹಂಚಿನಮನಿಯವರು ಮಾತನಾಡಿ ಅಂಗವಿಕಲತೆಯನ್ನು ಭಾರತ ದೇಶವು ಮೆಟ್ಟಿ ನಿಲ್ಲಲು ಪ್ರತಿ ವರ್ಷ ನಡೆಸುವ ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನ ಸಹಕಾರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಮುತಗಾ ಪ್ರಾಥಮಿಕ ಆರೊಗ್ಯ ಕೇಂದ್ರದ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸರಕಾರಿ ಶಾಲಾ ಶಿಕ್ಷಕರು ಹಾಗೂ ಶಿಕ್ಷಕಿಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನದ ಅಂಗವಾಗಿ ಬೆಳಗಾವಿ ತಾಲೂಕಿನ ಶಿಂದೊಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಉಪ-ಕೇಂದ್ರದಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮ ಉದ್ದೇಶಿಸಿ ಸಮಾಜ ಸೇವಕರು ಹಾಗೂ ನಿಕಟಪೂರ್ವ ಗ್ರಾಮ ಪಂಚಾಯಿತಿ ಸದಸ್ಯ ವೀರಭದ್ರಯ್ಯ ಪೂಜಾರ ಮಾತನಾಡಿ ನಮ್ಮ ಭಾರತವು ಪೋಲಿಯೋ ರೋಗಮುಕ್ತ ದೇಶವಾಗಲು ಇಂದಿನ ಮತ್ತು ಹಿಂದಿನ ಸರ್ಕಾರಗಳು ತೀವ್ರಗತಿಯಲ್ಲಿನ ವ್ಯವಸ್ಥಿತ ಅನುಷ್ಠಾನ ಹಾಗೂ ರೂಪುರೇಷೆಯಂತೆ ಕಾರ್ಯ, ಅಧಿಕಾರಿಗಳ ಜೊತೆ ಜೊತೆಗೆ ತಳಮಟ್ಟದ ಆರೋಗ್ಯ ಕಾರ್ಯಕರ್ತರ ಪರಿಶ್ರಮದಿಂದಾಗಿ ಯಶಸ್ಸು ಸಾಧ್ಯವಾಗಿದೆ, ಭಾರತದ ಪಲ್ಸ್ ಪೋಲಿಯೋ ಅಭಿಯಾನ ವಿಶ್ವಕ್ಕೆ ಮಾದರಿ ಎಂದರು.
ಶಿಂದೊಳ್ಳಿ ಗ್ರಾಮದ ಸರಕಾರಿ ಶಾಲೆಯ ಮುಖ್ಯೋಪಾಧ್ಯಾಯರಾದ ಅಶೋಕ ಹಂಚಿನಮನಿಯವರು ಮಾತನಾಡಿ ಅಂಗವಿಕಲತೆಯನ್ನು ಭಾರತ ದೇಶವು ಮೆಟ್ಟಿ ನಿಲ್ಲಲು ಪ್ರತಿ ವರ್ಷ ನಡೆಸುವ ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನ ಸಹಕಾರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಮುತಗಾ ಪ್ರಾಥಮಿಕ ಆರೊಗ್ಯ ಕೇಂದ್ರದ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸರಕಾರಿ ಶಾಲಾ ಶಿಕ್ಷಕರು ಹಾಗೂ ಶಿಕ್ಷಕಿಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

"ಗಡಿನಾಡಿನಲ್ಲಿ ಕಾಸರಗೋಡು ಕನ್ನಡ ಗ್ರಾಮದ ಪರಿಕಲ್ಪನೆ ಅಭಿನಂದನೀಯ" ಎಲ್. ಜಿ.ಜ್ಯೋತಿಶ್ವರ ಅಭಿಮತ