

3rd July 2026

ಸಾಮಾಜಿಕ ಕಳಕಳಿಯೊಂದಿಗೆ ಸಮಾಜ ಮುಖಿ ಬರಹಗಳ ಮೂಲಕ ಹೆಸರಾದ ಬೆಳಗಾವಿಯ ಹಿರಿಯ ಸಾಹಿತಿ ಸ.ರಾ.ಸೂಳಕೂಡೆ ನಮ್ಮ ನಿಮ್ಮೆಲ್ಲರ ನಡುವಿನ ಅಪರೂಪದಲ್ಲಿ ಅಪರೂಪದ ವ್ಯಕ್ತಿಯಾಗಿದ್ದಾರೆ.
ಬೆಳಗಾವಿಯ ರಾಮತೀರ್ಥ ನಗರದ ನಿವಾಸಿ ನಿವೃತ್ತ ಶ್ರೀ ಸತ್ಯಪ್ಪ ರಾಮಪ್ಪ ಸುಳಕೂಡೆಯವರು(ಸ.ರಾ.ಸೂಳಕೂಡೆ) ಸೌಜನ್ಯ ಸ್ವಭಾವದೊಂದಿಗೆ ಎಲ್ಲರೊಂದಿಗೆ ಕಾಳಜಿಯುವತವಾಗಿ ಬೆರೆತು ಸಾಹಿತ್ಯಕ್ಕೊಂದು ಮುಕಟಮಣಿ ಯಾಗಿ ಹೊರಹೊಮ್ಮಿದ್ದಾರೆ. ಬೆಳಗಾವ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಜೈನಾಪುರದವರು. ದಿನಾಂಕ ೧-೨-೧೯೫೨ ರಂದು ಜನಿಸಿದ ಇವರು ಎಂ.ಎಸ್ಸಿ. ಎಲ್ಎಲ್.ಬಿ (ಸ್ಪೇಶಲ್) ಪದವೀಧರರು. ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಆರೋಗ್ಯ, ವಯಸ್ಕರ ಶಿಕ್ಷಣ, ಕಂದಾಯ, ಗ್ರಾಮೀಣಾಭಿವೃದ್ಧಿ. ನೀರಾವರಿ ಇಲಾಖೆಗಳಲ್ಲಿ ಹಲವಾರು ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಉಪನಿರ್ದೆಶಕರು (ಸಾಂಖ್ಯಿಕ) ನೀರಾವರಿ ನಿಗಮ ನಿಯಮಿತ ಉತ್ತರವಲಯ ಹುದ್ದೆಯಲ್ಲಿ ಸೇವೆ ಸಲ್ಲಿಸಿದ ದಿನಾಂಕ: ೩೧-೧-೨೦೧೨ ರಂದು ಸೇವಾ ನಿವೃತ್ತಿ ಹೊಂದಿದ್ದಾರೆ. ವೃತ್ತಿಯಲ್ಲಿದ್ದಾಗ ಇತರೇ ಹಲವಾರು ಹುದ್ದೆಗಳನ್ನು ನಿರ್ವಹಿಸಿ ಅದರಲ್ಲೂ ಸೈ ಎನಿಸಿಕೊಂಡವರು. ಕೆಲವು ಸಂಘಟನೆಗಳಲ್ಲಿಯೂ ತೊಡಗಿಸಿಕೊಂಡವರು.
ಸಾಕ್ಷರತಾ ಸದನ ವಿಜಾಪುರ, ಸಂಪೂರ್ಣ ಸಾಕ್ಷಾರತಾ ಕಾರ್ಯಕ್ರಮದ ದಾಖಲಾ ಗುಮ್ಮಟ', 'ಅಕ್ಷರ ಪ್ರಭಾ', 'ಜ್ಞಾನ ಪ್ರಭಾ', 'ಗ್ರಾಮೀಣ ಭಾರತ'. ಪ್ರಭಾರ ಯೋಜನಾ ಅಂದಾಜು ಮತ್ತು ಮೌಲ್ಯಮಾಪನ ಅಧಿಕಾರಿ ಜಿಲ್ಲಾ ಪಂಚಾಯತಿ ಬೆಳಗಾವಿ. ಜಂಟೀ ನಿಬಂಧಕರು (ಕರ ವಸೂಲಾತಿ) ಕರ್ನಾಟಕ ನೀರಾವರಿ ನಿಗಮ ನಿಯಮಿತ ಉತ್ತರ ವಲಯ ಬೆಳಗಾವಿ. ಹೀಗೆ ಅನೇಕ ಇಲಾಖೆಗಳಲ್ಲಿ ಸೇವೆಗೈದು ಹೆಸರುವಾಸಿಯಾಗಿದ್ದಾರೆ. ಬೆಳಗಾವಿ 'ಹೊಂಬೆಳಕು' ಸಾಂಸ್ಕೃತಿಕ ಸಂಘದ ಅಧ್ಯಕ್ಷರಾಗಿ ರಾಜ್ಯ ಮಟ್ಟದ ಪ್ರಶಸ್ತಿ ನೀಡುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಅಲ್ಲದೆ ಇತರ ಸಂಸ್ಥೆಗಳ ಹಿತ ಚಿಂತಕರಾಗಿ ಮಾರ್ಗದರ್ಶನ ನೀಡುತ್ತಾ ಸದಾ ಯುವಕರಂತೆ ಒಂದಿಲ್ಲೊAದು ಕಾರ್ಯದಲ್ಲಿ ತೊಡಗಿರುತ್ತಾರೆ.
ಸಾಮಾಜಿಕ ಸೇವೆ:
ಬಯಲು ಸೀಮೆ ಸಾಹಿತ್ಯ ವೇದಿಕೆ ವಿಜಾಪುರ, ಸಮಾಜವಾದಿ ಗೆಳೆಯರ ಬಳಗ ವಿಜಾಪುರ, ಹೊಂಬೆಳಕು ಸಾಂಸ್ಕೃತಿಕ ಸಂಘ ಬೆಳಗಾವಿ, ಸ್ವದೇಶಿ ಆಂದೋಲನ ಬೆಳಗಾವಿ ಜಿಲ್ಲಾ ಘಟಕ ಬೆಳಗಾವಿ, ಕಿತ್ತೂರ ಚೆನ್ನಮ್ಮ ಸಾಂಸ್ಕೃತಿಕ ಸಂಘ ಬೆಳಗಾವಿ, ತನ್ಮಯ ಪ್ರಕಾಶನ ಬೆಳಗಾವಿ, ಪ್ರಸಾದ ಗ್ರಂಥ ಸಂಸ್ಥೆ ಬೆಳಗಾವಿ, ಹೀಗೆ ಹತ್ತು ಹಲವಾರು ಸಂಘ ಸಂಸ್ಥೆಗಳ ಆಡಳಿತ ಮಂಡಳಿಯ ಸದಸ್ಯರಾಗಿ, ಆಕಾಶವಾಣಿ ಹಾಗೂ ದೂರದರ್ಶನಗಳಲ್ಲಿ ಇವರ ಕಾವ್ಯ ವಾಚನ ಪ್ರಸಾರವಾಗಿವೆ. ಸುಮಾರು ಹದಿನೈದಕ್ಕೂ ಮಿಕ್ಕ ಚಿಂತನಗಳು ಮತ್ತು ಹಲವಾರು ವಿಷಯಗಳ ಕುರಿತು ಭಾಷಣಗಳು ಪ್ರಸಾರಗೊಂಡಿವೆ. ಸಾಕ್ಷರತಾ ಆಂದೋಲನದ ಸಾಕ್ಷಚಿತ್ರ ಆಕಾಶವಾಣಿ ಕೇಂದ್ರ ಧಾರವಾಡ ಮೂಲಕ ಬಿತ್ತರಗೊಂಡಿದೆ.
ಬರವಣಿಗೆ-
ಇವರು 'ಜೀವನ ಸಂಗ್ರಾಮ' 'ನನ್ನತನ', 'ಸಚೇತನ', ಮೊದಲಾದ ಸ್ವರಚಿತ. ಕವನ ಸಂಗ್ರಹಗಳನ್ನು ಸಾರಸ್ವತ ಲೋಕಕ್ಕೆ ಅರ್ಪಿಸಿದ್ದಾರೆ. ಸಂಪಾದಿತ ಕೃತಿಗಳನ್ನು ಹೊರ ತಂದಿದ್ದಾರೆ. ಅವುಗಳೆಂದರೆ, ೧. ಕಿತ್ತೂರು ಸಂಸ್ಥಾನ ಮತ್ತು ಸ್ವಾತಂತ್ರ್ಯ ಸಂಗ್ರಾಮ ೨. ಹೊಂಬೆಳಕು ೩. ಸಂಭ್ರಮ ೪. ಅಭಿಮಾನ ೫. ಬೆಳಗಾವಿ ಜಿಲ್ಲಾ ಬರಹಗಾರರ ಬೆಡಗು ೬. ಸಹಜ ೭. ಸಂಭ್ರಮ ೮. ಹೊಂಬೆಳಕು ೯. ಅಭಿಮಾನ ೧೦. ಬಂಗಾರ ಗುದ್ದಲಿ, ಇತ್ಯಾದಿಗಳು ಆಗಿವೆ. ಸತ್ಯದರ್ಶನ ಎಂಬ ಅವರ ಬದುಕು ಬರಹ ಬೃಹತ್ ಕೃತಿಯಲ್ಲಿ ಹಲವಾರು ಸಾಹಿತಿಗಳು, ಒಡನಾಡಿಗಳು ಅವರ ಬಗ್ಗೆ ವಿಷಯಗಳನ್ನು ಬರೆದಿದ್ದಾರೆ. ಇವರು ಸಾವಿರಾರು ಬಿಡಿ ಲೇಖನಗಳನ್ನೂ ಬರೆದಿದ್ದಾರೆ. ಇವರು ಸೇವೆಯಿಂದ ನಿವೃತ್ತಿಯಾದರೂ ಸಾಹಿತ್ಯ ಸೇವೆಗೆ ನಿವೃತ್ತಿ ಎಂಬುದಿಲ್ಲವೆAಬAತೆ ಇಂದಿಗೂ ವಿವಿಧ ಪತ್ರಿಕೆಗಗೆ ಲೇಖನ ಬರೆಯುತ್ತಾರೆ. ಇಂದಿಗೂ ನಿವೃತ್ತಿ ಜೀವನದಲ್ಲೂ ಹುಮ್ಮಸ್ಸಿನಿಂದ ಕೃತಿ ರಚಿಸಿ ಓದುಗರಿಗೆ ನೀಡುತ್ತಿದ್ದಾರೆ. ಅವರ ಕೃತಿಗಳಲ್ಲಿ ಆಸಕ್ತಿಯ ವೈವಿಧ್ಯಮಯ ವಿಷಯಗಳನ್ನು ಒಳಗೊಂಡಿರುತ್ತವೆ. ಪ್ರಮುಖವಾದ ಸಾಹಿತ್ಯ ಕೃತಿಗಳೆಂದರೆ, ೧. ಮನಕ್ಕೆ ಮನವೇ ಸಾಕ್ಷಿ ೨. ಅಂತರAಗದ ಅನ್ವೇಷಣೆ ೩. ಸಮಾಲೋಚನೆ ೪. ಬದುಕಿನ ಅನನ್ಯತೆ ಮತ್ತು ಆಧುನಿಕತೆ ೫. ಮಾನವ ಅಭಿವೃದ್ಧಿ ಸಾಧನೆ ಮತ್ತು ಸವಾಲುಗಳು ೬ ಸತ್ಯ ಮತ್ತು ಸಮಕಾಲೀನ ಸಮಾಜ ೭ ಗ್ರಾಮೀಣಾಭಿವೃದ್ಧಿಯ ಪ್ರಾಮುಖ್ಯತೆ ೮. ವಚನ ಸಂಗಮದ ಶೀಲ ಆಚಾರಗಳ ಪರಿಕಲ್ಪನೆ ೯. ಸಮುದಾಯ ಸಾಕ್ಷರತೆ ೧೦. ವಚನಗಳಲ್ಲಿ ಶೀಲ ಆಚಾರಗಳ ಪರಿಕಲ್ಪನೆ ೧೧. ಸಮುದಾಯ ಆರೋಗ್ಯ ಮತ್ತು ಸಂಖ್ಯಾಶಾಸ್ತ್ರ ೧೨. ದರ್ಶನ-ನಿದರ್ಶನ ೧೩. ಸಮಯೋಚಿತ ದರ್ಶನ ೧೪. ಸಹಜವೆಂಬುವ ಭಾವ. ೧೫. ಜನನ ಮರಣಗಳ ನೋಂದಣಿಯ ಮಹತ್ವ ೧೬. ಮಾಹಿತಿ ಹಕ್ಕಿನ ಮಹತ್ವ, ಮೊದಲಾದವುಗಳು
ಕಥಾ ಸಂಕಲನಗಳು: ೧. ಸರಳ ಕಥೆಗಳು ೨. ಹದಿನೇಳು ಆನೆಗಳು ೩. ತಿಳಿದುಕೊಳ್ಳಿ ತಿಳಿಯುವಂತೆಯೂ ಮಾಡಿ ಸೇರಿದಂತೆ ನವಸಾಕ್ಷರ ಕೃತಿಗಳು - ೧೬ ಮಕ್ಕಳ ಸಾಹಿತ್ಯ-೨, ಕಾನೂನು ಸಾಹಿತ್ಯ ೧೨, ಸಂಪಾದನೆ ಗ್ರಂಥಗಳು-೧೧ ಪ್ರಕಟಗೊಂಡಿವೆ. ಅವರು ಇಲ್ಲಿಯವರೆಗೆ ಸುಮಾರು ೧೩೫ ಕ್ಕೂ ಮಿಕ್ಕಿ ಕೃತಿಗಳನ್ನು ರಚಿಸಿದ್ದಾರೆ. ನಾಡಿನ ಪ್ರಖ್ಯಾತ ವಿವಿಧ ಪತ್ರಿಕೆಗಳಲ್ಲಿ ಇವರ ಲೇಖನ ಪ್ರಕಟವಾಗಿವೆ.
ಪ್ರತಿಭಾವಂತರಾದ ಇವರಿಗೆ ದೊರೆತ ಪ್ರಶಸ್ತಿ ಗಳ ಸಂಖ್ಯೆಯೂ ದೊಡ್ಡದಿದೆ. ಶ್ರೀಯುತರಿಗೆ ಈ ಕೆಳಗಿನ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.
೧. 'ಹೊಸತು' ಪತ್ರಿಕೆ ಆಯ್ದ ಲೇಖನಕ್ಕೆ ಎಚ್.ಎಂ.ಟಿ. ಪ್ರಶಸ್ತಿ.
೨. ಪ್ರಸಾರಭಾರತಿ ಮತ್ತು ನವಕರ್ನಾಟಕ ಪಬ್ಲಿಕೇಶನ್ದ ಪುಸ್ತಕ ವಿಮರ್ಶಾ ಸ್ಪರ್ಧೆಯಲ್ಲಿ, ಪ್ರಥಮ, ದ್ವಿತೀಯ, ತೃತೀಯ, ಪ್ರಶಸ್ತಿ,
೩. ಸಾಕ್ಷರತಾ ಪ್ರಬಂಧಕ್ಕೆ ಮಾನವ ಸಂಪನ್ಮೂಲ ಇಲಾಖೆಯ ಪ್ರಶಸ್ತಿ.
೪. ಸಂಚಯ ಸಾಹಿತ್ಯ ಪ್ರಶಸ್ತಿ (೨೦೦೨) ೫. ಅಂತರAಗ ಅನ್ವೇಷಣೆ ಕೃತಿಗೆ ಅಮರಮ್ಮ ಚೆನ್ನಬಸಪ್ಪ ಬೆಟದೂರ ಪ್ರಶಸ್ತಿ, ೬. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಉತ್ತಮ ಸೇವಾ ಪ್ರಶಸ್ತಿ.
ಅಲ್ಲದೆ ೭೪ ನೇಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು, ಜಿಲ್ಲಾ ಅಕ್ಷರ ಪ್ರಭಾ ಸಮಿತಿ ಬೆಳಗಾವಿ, ಬಸವ ಸಮಿತಿ ಬೆಂಗಳೂರು ಸನ್ಮಾನಿಸಿವೆ. ಇನ್ನೂ ನೂರಾರು ಕಡೆಯಲ್ಲಿ ಇವರ ಅಭಿಮಾನಿಗಳು ಇವರನ್ನು ಅಭಿನಂದಿಸಿ, ಗೌರವಿಸಿದ್ದಾರೆ. ಹಲವಾರು ಪ್ರತಿಭಾ ಪುರಸ್ಕಾರಗಳನ್ನು ಪಡೆದುಕೊಂಡು ಸಾಹಿತ್ಯ ಕ್ಷೇತ್ರದಲ್ಲಿ ಹಿರಿಯರೆನಿಸಿದ್ದಾರೆ. ಇಂದಿಗೂ ಬೆಳಗಾವಿಯ ಹಲವಾರು ಸಮ್ಮೇಳನ, ಸಭೆ, ಸಮಾರಂಭಗಳಲ್ಲಿ ಭಾಗವಹಿಸುತ್ತಾ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ದಣಿವರಿಯದ ಮಾಂತ್ರಿಕರಾದ ಸುಳಕೂಡೆ ಅವರ ಲೇಖನ, ಕವನ, ಪ್ರಬಂಧಗಳನ್ನು ಓದಿದವರಲ್ಲಿ ದನ್ಯತಾಭಾವ ಮೂಡುತ್ತದೆ. “ಜನಸೇವೆಯೇ ಜನಾರ್ದನನ ಸೇವೆ"ವೆಂಬAತೆ ಸರಳ ಸಾದಾ ನಡೆನುಡಿಯನ್ನು ಒಳಗೊಂಡ ಇವರ ಜೀವನ ಶೈಲಿ ನಿಜಕ್ಕೂ ಮೆಚ್ಚುವಂತಹದ್ದಾಗಿದೆ.
ಇವರ ಬದುಕು ಹಸನವಾಗಲಿ, ಎಲ್ಲ ವರ್ಗದ ಸಾಹಿತ್ಯಾಭಿಮಾನಿಗಳಿಗೆ ಸ್ಫೂರ್ತಿಯ ಸೆಲೆಯಾಗಿ ನಿರಂತರ ನಮ್ಮೊಂದಿಗೆ ನೂರು ಕಾಲ ಬಾಳಿ ಬದುಕಲೆಂದು ಶುಭ ಹಾರೈಸುತ್ತೇನೆ.
ಲೇಖನ- ಸಿ.ವಾಯ್.ಮೆಣಸಿನಕಾಯಿ, ಸಾಹಿತಿಗಳು
ಪೋಸ್ಟ- ನೇಸರಗಿ ತಾಲೂಕ- ಬೈಲಹೊಂಗಲ ಜಿಲ್ಲೆ- ಬೆಳಗಾವಿ
ಮೊ-೮೦೫೦೧೬೮೫೦೪
ಸಾಮಾಜಿಕ ಕಳಕಳಿಯೊಂದಿಗೆ ಸಮಾಜ ಮುಖಿ ಬರಹಗಳ ಮೂಲಕ ಹೆಸರಾದ ಬೆಳಗಾವಿಯ ಹಿರಿಯ ಸಾಹಿತಿ ಸ.ರಾ.ಸೂಳಕೂಡೆ ನಮ್ಮ ನಿಮ್ಮೆಲ್ಲರ ನಡುವಿನ ಅಪರೂಪದಲ್ಲಿ ಅಪರೂಪದ ವ್ಯಕ್ತಿಯಾಗಿದ್ದಾರೆ.
ಬೆಳಗಾವಿಯ ರಾಮತೀರ್ಥ ನಗರದ ನಿವಾಸಿ ನಿವೃತ್ತ ಶ್ರೀ ಸತ್ಯಪ್ಪ ರಾಮಪ್ಪ ಸುಳಕೂಡೆಯವರು(ಸ.ರಾ.ಸೂಳಕೂಡೆ) ಸೌಜನ್ಯ ಸ್ವಭಾವದೊಂದಿಗೆ ಎಲ್ಲರೊಂದಿಗೆ ಕಾಳಜಿಯುವತವಾಗಿ ಬೆರೆತು ಸಾಹಿತ್ಯಕ್ಕೊಂದು ಮುಕಟಮಣಿ ಯಾಗಿ ಹೊರಹೊಮ್ಮಿದ್ದಾರೆ. ಬೆಳಗಾವ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಜೈನಾಪುರದವರು. ದಿನಾಂಕ ೧-೨-೧೯೫೨ ರಂದು ಜನಿಸಿದ ಇವರು ಎಂ.ಎಸ್ಸಿ. ಎಲ್ಎಲ್.ಬಿ (ಸ್ಪೇಶಲ್) ಪದವೀಧರರು. ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಆರೋಗ್ಯ, ವಯಸ್ಕರ ಶಿಕ್ಷಣ, ಕಂದಾಯ, ಗ್ರಾಮೀಣಾಭಿವೃದ್ಧಿ. ನೀರಾವರಿ ಇಲಾಖೆಗಳಲ್ಲಿ ಹಲವಾರು ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಉಪನಿರ್ದೆಶಕರು (ಸಾಂಖ್ಯಿಕ) ನೀರಾವರಿ ನಿಗಮ ನಿಯಮಿತ ಉತ್ತರವಲಯ ಹುದ್ದೆಯಲ್ಲಿ ಸೇವೆ ಸಲ್ಲಿಸಿದ ದಿನಾಂಕ: ೩೧-೧-೨೦೧೨ ರಂದು ಸೇವಾ ನಿವೃತ್ತಿ ಹೊಂದಿದ್ದಾರೆ. ವೃತ್ತಿಯಲ್ಲಿದ್ದಾಗ ಇತರೇ ಹಲವಾರು ಹುದ್ದೆಗಳನ್ನು ನಿರ್ವಹಿಸಿ ಅದರಲ್ಲೂ ಸೈ ಎನಿಸಿಕೊಂಡವರು. ಕೆಲವು ಸಂಘಟನೆಗಳಲ್ಲಿಯೂ ತೊಡಗಿಸಿಕೊಂಡವರು.
ಸಾಕ್ಷರತಾ ಸದನ ವಿಜಾಪುರ, ಸಂಪೂರ್ಣ ಸಾಕ್ಷಾರತಾ ಕಾರ್ಯಕ್ರಮದ ದಾಖಲಾ ಗುಮ್ಮಟ', 'ಅಕ್ಷರ ಪ್ರಭಾ', 'ಜ್ಞಾನ ಪ್ರಭಾ', 'ಗ್ರಾಮೀಣ ಭಾರತ'. ಪ್ರಭಾರ ಯೋಜನಾ ಅಂದಾಜು ಮತ್ತು ಮೌಲ್ಯಮಾಪನ ಅಧಿಕಾರಿ ಜಿಲ್ಲಾ ಪಂಚಾಯತಿ ಬೆಳಗಾವಿ. ಜಂಟೀ ನಿಬಂಧಕರು (ಕರ ವಸೂಲಾತಿ) ಕರ್ನಾಟಕ ನೀರಾವರಿ ನಿಗಮ ನಿಯಮಿತ ಉತ್ತರ ವಲಯ ಬೆಳಗಾವಿ. ಹೀಗೆ ಅನೇಕ ಇಲಾಖೆಗಳಲ್ಲಿ ಸೇವೆಗೈದು ಹೆಸರುವಾಸಿಯಾಗಿದ್ದಾರೆ. ಬೆಳಗಾವಿ 'ಹೊಂಬೆಳಕು' ಸಾಂಸ್ಕೃತಿಕ ಸಂಘದ ಅಧ್ಯಕ್ಷರಾಗಿ ರಾಜ್ಯ ಮಟ್ಟದ ಪ್ರಶಸ್ತಿ ನೀಡುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಅಲ್ಲದೆ ಇತರ ಸಂಸ್ಥೆಗಳ ಹಿತ ಚಿಂತಕರಾಗಿ ಮಾರ್ಗದರ್ಶನ ನೀಡುತ್ತಾ ಸದಾ ಯುವಕರಂತೆ ಒಂದಿಲ್ಲೊAದು ಕಾರ್ಯದಲ್ಲಿ ತೊಡಗಿರುತ್ತಾರೆ.
ಸಾಮಾಜಿಕ ಸೇವೆ:
ಬಯಲು ಸೀಮೆ ಸಾಹಿತ್ಯ ವೇದಿಕೆ ವಿಜಾಪುರ, ಸಮಾಜವಾದಿ ಗೆಳೆಯರ ಬಳಗ ವಿಜಾಪುರ, ಹೊಂಬೆಳಕು ಸಾಂಸ್ಕೃತಿಕ ಸಂಘ ಬೆಳಗಾವಿ, ಸ್ವದೇಶಿ ಆಂದೋಲನ ಬೆಳಗಾವಿ ಜಿಲ್ಲಾ ಘಟಕ ಬೆಳಗಾವಿ, ಕಿತ್ತೂರ ಚೆನ್ನಮ್ಮ ಸಾಂಸ್ಕೃತಿಕ ಸಂಘ ಬೆಳಗಾವಿ, ತನ್ಮಯ ಪ್ರಕಾಶನ ಬೆಳಗಾವಿ, ಪ್ರಸಾದ ಗ್ರಂಥ ಸಂಸ್ಥೆ ಬೆಳಗಾವಿ, ಹೀಗೆ ಹತ್ತು ಹಲವಾರು ಸಂಘ ಸಂಸ್ಥೆಗಳ ಆಡಳಿತ ಮಂಡಳಿಯ ಸದಸ್ಯರಾಗಿ, ಆಕಾಶವಾಣಿ ಹಾಗೂ ದೂರದರ್ಶನಗಳಲ್ಲಿ ಇವರ ಕಾವ್ಯ ವಾಚನ ಪ್ರಸಾರವಾಗಿವೆ. ಸುಮಾರು ಹದಿನೈದಕ್ಕೂ ಮಿಕ್ಕ ಚಿಂತನಗಳು ಮತ್ತು ಹಲವಾರು ವಿಷಯಗಳ ಕುರಿತು ಭಾಷಣಗಳು ಪ್ರಸಾರಗೊಂಡಿವೆ. ಸಾಕ್ಷರತಾ ಆಂದೋಲನದ ಸಾಕ್ಷಚಿತ್ರ ಆಕಾಶವಾಣಿ ಕೇಂದ್ರ ಧಾರವಾಡ ಮೂಲಕ ಬಿತ್ತರಗೊಂಡಿದೆ.
ಬರವಣಿಗೆ-
ಇವರು 'ಜೀವನ ಸಂಗ್ರಾಮ' 'ನನ್ನತನ', 'ಸಚೇತನ', ಮೊದಲಾದ ಸ್ವರಚಿತ. ಕವನ ಸಂಗ್ರಹಗಳನ್ನು ಸಾರಸ್ವತ ಲೋಕಕ್ಕೆ ಅರ್ಪಿಸಿದ್ದಾರೆ. ಸಂಪಾದಿತ ಕೃತಿಗಳನ್ನು ಹೊರ ತಂದಿದ್ದಾರೆ. ಅವುಗಳೆಂದರೆ, ೧. ಕಿತ್ತೂರು ಸಂಸ್ಥಾನ ಮತ್ತು ಸ್ವಾತಂತ್ರ್ಯ ಸಂಗ್ರಾಮ ೨. ಹೊಂಬೆಳಕು ೩. ಸಂಭ್ರಮ ೪. ಅಭಿಮಾನ ೫. ಬೆಳಗಾವಿ ಜಿಲ್ಲಾ ಬರಹಗಾರರ ಬೆಡಗು ೬. ಸಹಜ ೭. ಸಂಭ್ರಮ ೮. ಹೊಂಬೆಳಕು ೯. ಅಭಿಮಾನ ೧೦. ಬಂಗಾರ ಗುದ್ದಲಿ, ಇತ್ಯಾದಿಗಳು ಆಗಿವೆ. ಸತ್ಯದರ್ಶನ ಎಂಬ ಅವರ ಬದುಕು ಬರಹ ಬೃಹತ್ ಕೃತಿಯಲ್ಲಿ ಹಲವಾರು ಸಾಹಿತಿಗಳು, ಒಡನಾಡಿಗಳು ಅವರ ಬಗ್ಗೆ ವಿಷಯಗಳನ್ನು ಬರೆದಿದ್ದಾರೆ. ಇವರು ಸಾವಿರಾರು ಬಿಡಿ ಲೇಖನಗಳನ್ನೂ ಬರೆದಿದ್ದಾರೆ. ಇವರು ಸೇವೆಯಿಂದ ನಿವೃತ್ತಿಯಾದರೂ ಸಾಹಿತ್ಯ ಸೇವೆಗೆ ನಿವೃತ್ತಿ ಎಂಬುದಿಲ್ಲವೆAಬAತೆ ಇಂದಿಗೂ ವಿವಿಧ ಪತ್ರಿಕೆಗಗೆ ಲೇಖನ ಬರೆಯುತ್ತಾರೆ. ಇಂದಿಗೂ ನಿವೃತ್ತಿ ಜೀವನದಲ್ಲೂ ಹುಮ್ಮಸ್ಸಿನಿಂದ ಕೃತಿ ರಚಿಸಿ ಓದುಗರಿಗೆ ನೀಡುತ್ತಿದ್ದಾರೆ. ಅವರ ಕೃತಿಗಳಲ್ಲಿ ಆಸಕ್ತಿಯ ವೈವಿಧ್ಯಮಯ ವಿಷಯಗಳನ್ನು ಒಳಗೊಂಡಿರುತ್ತವೆ. ಪ್ರಮುಖವಾದ ಸಾಹಿತ್ಯ ಕೃತಿಗಳೆಂದರೆ, ೧. ಮನಕ್ಕೆ ಮನವೇ ಸಾಕ್ಷಿ ೨. ಅಂತರAಗದ ಅನ್ವೇಷಣೆ ೩. ಸಮಾಲೋಚನೆ ೪. ಬದುಕಿನ ಅನನ್ಯತೆ ಮತ್ತು ಆಧುನಿಕತೆ ೫. ಮಾನವ ಅಭಿವೃದ್ಧಿ ಸಾಧನೆ ಮತ್ತು ಸವಾಲುಗಳು ೬ ಸತ್ಯ ಮತ್ತು ಸಮಕಾಲೀನ ಸಮಾಜ ೭ ಗ್ರಾಮೀಣಾಭಿವೃದ್ಧಿಯ ಪ್ರಾಮುಖ್ಯತೆ ೮. ವಚನ ಸಂಗಮದ ಶೀಲ ಆಚಾರಗಳ ಪರಿಕಲ್ಪನೆ ೯. ಸಮುದಾಯ ಸಾಕ್ಷರತೆ ೧೦. ವಚನಗಳಲ್ಲಿ ಶೀಲ ಆಚಾರಗಳ ಪರಿಕಲ್ಪನೆ ೧೧. ಸಮುದಾಯ ಆರೋಗ್ಯ ಮತ್ತು ಸಂಖ್ಯಾಶಾಸ್ತ್ರ ೧೨. ದರ್ಶನ-ನಿದರ್ಶನ ೧೩. ಸಮಯೋಚಿತ ದರ್ಶನ ೧೪. ಸಹಜವೆಂಬುವ ಭಾವ. ೧೫. ಜನನ ಮರಣಗಳ ನೋಂದಣಿಯ ಮಹತ್ವ ೧೬. ಮಾಹಿತಿ ಹಕ್ಕಿನ ಮಹತ್ವ, ಮೊದಲಾದವುಗಳು
ಕಥಾ ಸಂಕಲನಗಳು: ೧. ಸರಳ ಕಥೆಗಳು ೨. ಹದಿನೇಳು ಆನೆಗಳು ೩. ತಿಳಿದುಕೊಳ್ಳಿ ತಿಳಿಯುವಂತೆಯೂ ಮಾಡಿ ಸೇರಿದಂತೆ ನವಸಾಕ್ಷರ ಕೃತಿಗಳು - ೧೬ ಮಕ್ಕಳ ಸಾಹಿತ್ಯ-೨, ಕಾನೂನು ಸಾಹಿತ್ಯ ೧೨, ಸಂಪಾದನೆ ಗ್ರಂಥಗಳು-೧೧ ಪ್ರಕಟಗೊಂಡಿವೆ. ಅವರು ಇಲ್ಲಿಯವರೆಗೆ ಸುಮಾರು ೧೩೫ ಕ್ಕೂ ಮಿಕ್ಕಿ ಕೃತಿಗಳನ್ನು ರಚಿಸಿದ್ದಾರೆ. ನಾಡಿನ ಪ್ರಖ್ಯಾತ ವಿವಿಧ ಪತ್ರಿಕೆಗಳಲ್ಲಿ ಇವರ ಲೇಖನ ಪ್ರಕಟವಾಗಿವೆ.
ಪ್ರತಿಭಾವಂತರಾದ ಇವರಿಗೆ ದೊರೆತ ಪ್ರಶಸ್ತಿ ಗಳ ಸಂಖ್ಯೆಯೂ ದೊಡ್ಡದಿದೆ. ಶ್ರೀಯುತರಿಗೆ ಈ ಕೆಳಗಿನ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.
೧. 'ಹೊಸತು' ಪತ್ರಿಕೆ ಆಯ್ದ ಲೇಖನಕ್ಕೆ ಎಚ್.ಎಂ.ಟಿ. ಪ್ರಶಸ್ತಿ.
೨. ಪ್ರಸಾರಭಾರತಿ ಮತ್ತು ನವಕರ್ನಾಟಕ ಪಬ್ಲಿಕೇಶನ್ದ ಪುಸ್ತಕ ವಿಮರ್ಶಾ ಸ್ಪರ್ಧೆಯಲ್ಲಿ, ಪ್ರಥಮ, ದ್ವಿತೀಯ, ತೃತೀಯ, ಪ್ರಶಸ್ತಿ,
೩. ಸಾಕ್ಷರತಾ ಪ್ರಬಂಧಕ್ಕೆ ಮಾನವ ಸಂಪನ್ಮೂಲ ಇಲಾಖೆಯ ಪ್ರಶಸ್ತಿ.
೪. ಸಂಚಯ ಸಾಹಿತ್ಯ ಪ್ರಶಸ್ತಿ (೨೦೦೨) ೫. ಅಂತರAಗ ಅನ್ವೇಷಣೆ ಕೃತಿಗೆ ಅಮರಮ್ಮ ಚೆನ್ನಬಸಪ್ಪ ಬೆಟದೂರ ಪ್ರಶಸ್ತಿ, ೬. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಉತ್ತಮ ಸೇವಾ ಪ್ರಶಸ್ತಿ.
ಅಲ್ಲದೆ ೭೪ ನೇಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು, ಜಿಲ್ಲಾ ಅಕ್ಷರ ಪ್ರಭಾ ಸಮಿತಿ ಬೆಳಗಾವಿ, ಬಸವ ಸಮಿತಿ ಬೆಂಗಳೂರು ಸನ್ಮಾನಿಸಿವೆ. ಇನ್ನೂ ನೂರಾರು ಕಡೆಯಲ್ಲಿ ಇವರ ಅಭಿಮಾನಿಗಳು ಇವರನ್ನು ಅಭಿನಂದಿಸಿ, ಗೌರವಿಸಿದ್ದಾರೆ. ಹಲವಾರು ಪ್ರತಿಭಾ ಪುರಸ್ಕಾರಗಳನ್ನು ಪಡೆದುಕೊಂಡು ಸಾಹಿತ್ಯ ಕ್ಷೇತ್ರದಲ್ಲಿ ಹಿರಿಯರೆನಿಸಿದ್ದಾರೆ. ಇಂದಿಗೂ ಬೆಳಗಾವಿಯ ಹಲವಾರು ಸಮ್ಮೇಳನ, ಸಭೆ, ಸಮಾರಂಭಗಳಲ್ಲಿ ಭಾಗವಹಿಸುತ್ತಾ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ದಣಿವರಿಯದ ಮಾಂತ್ರಿಕರಾದ ಸುಳಕೂಡೆ ಅವರ ಲೇಖನ, ಕವನ, ಪ್ರಬಂಧಗಳನ್ನು ಓದಿದವರಲ್ಲಿ ದನ್ಯತಾಭಾವ ಮೂಡುತ್ತದೆ. “ಜನಸೇವೆಯೇ ಜನಾರ್ದನನ ಸೇವೆ"ವೆಂಬAತೆ ಸರಳ ಸಾದಾ ನಡೆನುಡಿಯನ್ನು ಒಳಗೊಂಡ ಇವರ ಜೀವನ ಶೈಲಿ ನಿಜಕ್ಕೂ ಮೆಚ್ಚುವಂತಹದ್ದಾಗಿದೆ.
ಇವರ ಬದುಕು ಹಸನವಾಗಲಿ, ಎಲ್ಲ ವರ್ಗದ ಸಾಹಿತ್ಯಾಭಿಮಾನಿಗಳಿಗೆ ಸ್ಫೂರ್ತಿಯ ಸೆಲೆಯಾಗಿ ನಿರಂತರ ನಮ್ಮೊಂದಿಗೆ ನೂರು ಕಾಲ ಬಾಳಿ ಬದುಕಲೆಂದು ಶುಭ ಹಾರೈಸುತ್ತೇನೆ.
ಲೇಖನ- ಸಿ.ವಾಯ್.ಮೆಣಸಿನಕಾಯಿ, ಸಾಹಿತಿಗಳು
ಪೋಸ್ಟ- ನೇಸರಗಿ ತಾಲೂಕ- ಬೈಲಹೊಂಗಲ ಜಿಲ್ಲೆ- ಬೆಳಗಾವಿ
ಮೊ-೮೦೫೦೧೬೮೫೦೪

ದಾವಣಗೆರೆಯಲ್ಲಿ ಜಿಲ್ಲಾ ಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ: ಪ್ರತಿಭಾವಂತ ಮಹಿಳಾ ಕಲಾವಿದರಿಗೆ ಸುವರ್ಣಾವಕಾಶ

ದಾವಣಗೆರೆ ಜಿಲ್ಲಾ ಪ್ರಪ್ರಥಮ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನ-2026: ನಾಲ್ಕನೇ ಪೂರ್ವಭಾವಿ ಸಭೆ ಯಶಸ್ವಿ

ಬಿಜೆಪಿ ಕೊಪ್ಪಳ ಜಿಲ್ಲಾ ಘಟಕಕ್ಕೆ ಪದಾಧಿಕಾರಿಗಳ ನೇಮಕ- ಜಿಲ್ಲಾಧ್ಯಕ್ಷ ನವೀನ ಗುಳಗಣ್ಣನವರ ಪಟ್ಟಿ ಬಿಡುಗಡೆ

ಬೆಳಗಾವಿ : ಉತ್ತರ ವಿಧಾನಸಭಾ ಕ್ಷೇತ್ರದ ಆಟೋನಗರ ಹಾಗೂ ರಾಮತೀರ್ಥನಗರ ಕೈಗಾರಿಕಾ ಪ್ರದೇಶಗಳಲ್ಲಿ