

23rd July 2026

ಬೆಳಗಾವಿ ::ಬೈಲಹೊಂಗಲ ತಾಲೂಕಿನ
ತಾಲೂಕಿನ ಹಳ್ಳಿಕೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬೈಲಹೊಂಗಲದ ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರವಿ ಹಿರೇಮಠ್ ಶಿಕ್ಷಣ ಸಂಯೋಜಕ ಮಹೇಶ್ ಯರಗಟ್ಟಿ ಹಾಗೂ ಹಣ್ಣಿಕೇರಿ ಸಿಆರ್ಪಿ S. S.ಪಾಟೀಲ್ ಅವರು ಅನಿರೀಕ್ಷಿತವಾಗಿ ಭೇಟಿ ನೀಡಿದರು. ಈ ಸಂದರ್ಭದಲ್ಲಿ 7ನೇ ತರಗತಿ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳನ್ನು ಪರಿಶೀಲಿಸಿ, ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಸೂಕ್ತ ಮಾರ್ಗದರ್ಶನ ನೀಡಿದರು. ಅಲ್ಲದೆ, ಕಾಮ್ಸ್ (KAAMS) ಹಾಗೂ ನಿರಂತರ ವಿದ್ಯಾರ್ಥಿ ಹಾಜರಾತಿ ಕುರಿತು ಅಗತ್ಯ ಸಲಹೆ–ಸೂಚನೆಗಳನ್ನು ನೀಡಿದರು. ನಂತರ ಶಾಲೆಯ ಗ್ರಂಥಾಲಯ (ಲೈಬ್ರರಿ) ಮತ್ತು ಕ್ರೀಡಾ ಕೊಠಡಿಯನ್ನು ವೀಕ್ಷಿಸಿ, ಅವುಗಳ ವ್ಯವಸ್ಥೆ ಹಾಗೂ ನಿರ್ವಹಣೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ವೇಳೆ ಅಧಿಕಾರಿಗಳು ಶಾಲೆಯ ಅಡುಗೆ ಸಿಬ್ಬಂದಿಯವರಿಗೆ ಸಮಯ ಪಾಲನೆ, ಅಡುಗೆಮನೆಯ ಸ್ವಚ್ಛತೆ, ದಿನಾಲು ಸಮವಸ್ತ್ರ ಹಾಕುವುದು ಹಾಗೂ ಆಹಾರದ ವ್ಯರ್ಥವನ್ನು ತಡೆಗಟ್ಟುವ ಕುರಿತು ಅಗತ್ಯ ಸಲಹೆ ಮತ್ತು ಸೂಚನೆಗಳನ್ನು ನೀಡಿದರು.. ಮುಖ್ಯ ಶಿಕ್ಷಕ ಎನ್.ಎನ್ ಜೋಳದ ಸ್ವಾಗತಿಸಿದರು ಈ ವೇಳೆ ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು

ರಾಜಕೀಯ ಜೀವನದ 25 ನೇ ವರ್ಷದಲ್ಲಿ ಬಿಜೆಪಿಯ ಶಿಸ್ತಿನ ಸಿಪಾಯಿ ವೀರಭದ್ರಯ್ಯ ಬಾಬು ಪೂಜಾರ*

ಎಂಎಲ್ಸಿ ಹೇಮಲತಾ ನೇತೃತ್ವದಲ್ಲಿ ಬಿಜೆಪಿ ಪ್ರತಿಭಟನೆ- ಕಾಂಗ್ರೆಸ್ ಕಚೇರಿಗೆ ಮುತ್ತಿಗೆ:ರಾಹುಲ್, ಡಿಕೆಶಿ ವಿರುದ್ಧ ಖಂಡನೆ

ಜಿಲ್ಲಾ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾಜಿ ಆಯ್ಕೆ