

29th July 2026

:
ಬೈಲಹೊಂಗಲ- ನಗರದ ಶಾಸಕರ ಮಾದರಿ ಶಾಲೆ ನಂ. 4ರಲ್ಲಿ ಬೆಳಗಾವಿ ಜಿಲ್ಲಾ ಪ್ರಾಥಮಿಕ ಶಾಲಾ ಗ್ರೇಡ್–2 ದೈಹಿಕ ಶಿಕ್ಷಕರ ಸಂಘದ ಬೈಲಹೊಂಗಲ ತಾಲೂಕು ಘಟಕದ ಸಭೆ ನಡೆಯಿತು.
ಸಭೆಯಲ್ಲಿ ಜಿಲ್ಲೆಯ ಹಾಗೂ ತಾಲೂಕಿನ ದೈಹಿಕ ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಂಘದ ಅಭಿವೃದ್ಧಿ, ಶಿಕ್ಷಕರ ಹಿತಾಸಕ್ತಿ, ಕ್ರೀಡಾ ಚಟುವಟಿಕೆಗಳ ಉತ್ತೇಜನ, ಶಾಲಾ ಮಟ್ಟದ ಕ್ರೀಡಾಕೂಟಗಳ ಯಶಸ್ವಿ ಅನುಷ್ಠಾನ ಹಾಗೂ ಸಂಘದ ಮುಂದಿನ ಕಾರ್ಯಕ್ರಮಗಳ ಕುರಿತು ಸುದೀರ್ಘವಾಗಿ ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಗ್ರೇಡ್–2 ದೈಹಿಕ ಶಿಕ್ಷಕರ ಸಂಘದ ಬೈಲಹೊಂಗಲ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆಯನ್ನು ಸರ್ವಾನುಮತದಿಂದ (ಅವಿರೋಧವಾಗಿ) ನಡೆಸಲಾಯಿತು. ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಸಭೆಯಲ್ಲಿ ಉಪಸ್ಥಿತರಿದ್ದ ಎಲ್ಲ ಸದಸ್ಯರು ಅಭಿನಂದನೆ ಸಲ್ಲಿಸಿ, ಸಂಘದ ಅಭಿವೃದ್ಧಿಗೆ ಶ್ರಮಿಸುವಂತೆ ಶುಭ ಹಾರೈಸಿದರು.
ಸಭೆಯಲ್ಲಿ ಸಂಘದ ಹಿರಿಯರು, ಪದಾಧಿಕಾರಿಗಳು ಹಾಗೂ ತಾಲೂಕಿನ ವಿವಿಧ ಶಾಲೆಗಳ ದೈಹಿಕ ಶಿಕ್ಷಕರು ಭಾಗವಹಿಸಿದ್ದರು. ಸಭೆಯು ಆತ್ಮೀಯ ಹಾಗೂ ಯಶಸ್ವಿಯಾಗಿ ನಡೆಯಿತು. ...... ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಗ್ರೇಡ್–2 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಬೆಳಗಾವಿ ಜಿಲ್ಲಾ ಘಟಕದ ಜಿಲ್ಲಾ ಅಧ್ಯಕ್ಷರಾದ ಶ್ರೀ ಡಿ. ಎಸ್. ಹಲಕಿ ಅವರ ಅಧ್ಯಕ್ಷತೆಯಲ್ಲಿ ಬೈಲಹೊಂಗಲ ತಾಲ್ಲೂಕು ಘಟಕವನ್ನು ಅಧಿಕೃತವಾಗಿ ರಚಿಸಲಾಯಿತು. ............................................................................. ಕರ್ನಾಟಕ ರಾಜ್ಯ ಸರ್ಕಾರಿ ಶಾಲಾ
ಪ್ರಾಥಮಿಕ ಶಾಲಾ ಗ್ರೇಡ್–2 ದೈಹಿಕ ಶಿಕ್ಷಣ ಶಿಕ್ಷಕರ ಸಂಘ (ರಿ.)
ತಾಲೂಕು ಘಟಕ ಬೈಲಹೊಂಗಲ
ಪದಾಧಿಕಾರಿಗಳು
1. ಶ್ರೀ ಮಹಾಂತೇಶ ಬಿ. ಮುರಗೋಡ – ಗೌರವ ಅಧ್ಯಕ್ಷರು
2. ಶ್ರೀ ಜಿ. ಎಸ್. ಬಸನಗೌಡರ – ಅಧ್ಯಕ್ಷರು
3. ಶ್ರೀಮತಿ ಎಸ್. ಎಂ. ಹುಬ್ಬಳ್ಳಿ – ಉಪಾಧ್ಯಕ್ಷರು
4. ಶ್ರೀ ಬಿ. ಎಸ್. ಜಕಾತಿ – ಪ್ರಧಾನ ಕಾರ್ಯದರ್ಶಿ
5. ಶ್ರೀ ಎ. ಎಸ್. ಬಸರಿಕಟ್ಟಿ – ಖಜಾಂಚಿ
6. ಶ್ರೀ ಎ. ಆರ್. ಸುಂಕದ – ಸಹ ಕಾರ್ಯದರ್ಶಿ
7. ಶ್ರೀ ಎಸ್. ಎ. ಪೆಂಡಾರಿ – ಸಂಘಟನಾ ಕಾರ್ಯದರ್ಶಿ
8. ಶ್ರೀಮತಿ ಎಂ. ಕೆ. ಮುದಮ್ಮನಗೇರಿ – ಮಹಿಳಾ ಕಾರ್ಯದರ್ಶಿ
ನಿರ್ದೇಶಕರು
1. ಶ್ರೀ ಎಸ್. ಜಿ. ಹಿರೇಮಠ – ನಿರ್ದೇಶಕರು
2. ಶ್ರೀ ಎಸ್. ಎಸ್. ತಳವಾರ – ನಿರ್ದೇಶಕರು
3. ಶ್ರೀ ಆರ್. ಎಸ್. ರಾಹುತನ್ನವರ – ನಿರ್ದೇಶಕರು
4. ಶ್ರೀ ಎಂ. ಪಿ. ಕುರಿ – ನಿರ್ದೇಶಕರು
5. ಶ್ರೀ ಎಸ್. ಡಿ. ಲಮಾಣಿ – ನಿರ್ದೇಶಕರು
6. ಶ್ರೀಮತಿ ಬಿ. ವಾಯ್. ಶಿಂತ್ರಿ – ನಿರ್ದೇಶಕರು
ಬೈಲಹೊಂಗಲದಲ್ಲಿ ಗ್ರೇಡ್–2 ದೈಹಿಕ ಶಿಕ್ಷಕರ ಸಂಘದ ತಾಲೂಕು ಘಟಕದ ಸಭೆ ರಚನೆ

ನನ್ನ ಸೋಲಿಗೆ ಜಿಲ್ಲೆಯ ಕಾಂಗ್ರೆಸ್ ಶಾಸಕರು ಕಾರಣ.!! ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಮತ್ತೊಮ್ಮೆ ಬಹಿರಂಗ- ಕಾಂಗ್ರೆಸ್ ಸೋಲಿಸಲು ನನಗೆ ಎರಡು ಸೆಕೆಂಡ್ ಸಾಕು..!

ಕಾಂಗ್ರೆಸ್ ಕಚೇರಿ ಮೇಲೆ ದಾಂದಲೆ: ಬಿಜೆಪಿ ವಿರುದ್ಧ ದೂರು- ಎಂಎಲ್ಸಿ ಹೇಮಲತಾ ನಾಯಕ ಸೇರಿ ೧೬ ಜನರ ಮೇಲೆ ಎಫ್ಐಆರ್

ರಾಜಕೀಯ ಜೀವನದ 25 ನೇ ವರ್ಷದಲ್ಲಿ ಬಿಜೆಪಿಯ ಶಿಸ್ತಿನ ಸಿಪಾಯಿ ವೀರಭದ್ರಯ್ಯ ಬಾಬು ಪೂಜಾರ*