

23rd July 2026

ಬೆಳಗಾವಿ- ತಾಲೂಕಿನ ಶಿಂದೊಳ್ಳಿ ಗ್ರಾಮದ ಸಮಾಜ ಸೇವಕರು, ಭಾರತೀಯ ಜನತಾ ಪಾರ್ಟಿಯ ಮುಖಂಡರು ಹಾಗೂ ನಿಕಟಪೂರ್ವ ಗ್ರಾಮ ಪಂಚಾಯಿತಿ ಸದಸ್ಯರಾದ ವೀರಭದ್ರಯ್ಯ ಬಾಬು ಪೂಜಾರ ಇವರು "ಹಳ್ಳಿಯ ಅಭಿವೃದ್ಧಿಯೇ ದೇಶದ ಅಭಿವೃದ್ಧಿ" ಎಂದು ಅರಿತು "ದೇಶ ಸೇವೆಯೇ ಈಶ ಸೇವೆ" ಎಂದು ಮನಗೊಂಡು ಗ್ರಾಮದ ಸುಧಾರಣೆಗೆ ತಮ್ಮ ಕೈಲಾದ ಸೇವೆ ಮಾಡುತ್ತಿರುವ ಇವರು ಶಿಕ್ಷಣ ಪ್ರೇಮಿಯೂ ಹೌದು, ದೇಶ ಪ್ರೇಮಿಯೂ ಹೌದು.
ವೀರಭದ್ರಯ್ಯ ಇವರಿಗೆ ಶಿಂದೊಳ್ಳಿ ಗ್ರಾಮದ ಜನತೆಯು ಪ್ರೀತಿಯಿಂದ ಕರೆಯುವ ಹೆಸರು ಈರಣ್ಣ ಅಥವಾ ಈರಯ್ಯ ಎಂದು, ಶಿಂದೊಳ್ಳಿ ಗ್ರಾಮದ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಅರ್ಚಕರ ಮಗನಾಗಿ, ಬಡ ರೈತ ಕುಟುಂಬದಿಂದ ಬೆಳೆದು ಬಂದು 2002 ರಲ್ಲಿ ತಮ್ಮ 18ನೇ ವಯಸ್ಸಿನಲ್ಲಿ ಬಿಜೆಪಿಯ ಬೂತ್ ಮಟ್ಟದ ಕಾರ್ಯಕರ್ತರಾಗಿ ಅಧಿಕೃತ ರಾಜಕೀಯ ಪ್ರವೇಶ ಪಡೆದು ಬೂತ್ ಮಟ್ಟದಲ್ಲಿ ಅಂದಿನ ಶಿಂದೊಳ್ಳಿ ಗ್ರಾಮದ ಹಿರಿಯ ಕಾರ್ಯಕರ್ತರು ಹೇಳಿದಲ್ಲಿ ಭಿತ್ತಿಪತ್ರಗಳನ್ನು ಅಂಟಿಸುವುದು, ಕರಪತ್ರಗಳನ್ನು ಮನೆ ಮನೆಗೆ ವಿತರಿಸುವುದು, ಪಕ್ಷದ ಧ್ವಜ ಕಟ್ಟುವುದು, ಆಗಿನ ಬಟ್ಟೆಯ ಬ್ಯಾನರ್ ಗಳನ್ನು ಊರಿನಲ್ಲಿ ಕಟ್ಟುವುದು ಖುಷಿಯ ಸಂಗತಿಯಾಗಿರುತ್ತಿತ್ತು ಎನ್ನುವ ಇವರು ಪಕ್ಷ ಸಂಘಟನೆಯನ್ನು ಬೂತ್ ಮಟ್ಟದಲ್ಲಿ ಮಾಡುತ್ತ, ಬಾಗೇವಾಡಿ ವಿಧಾನಸಭಾ ಮತಕ್ಷೇತ್ರವಿದ್ದ ಸಮಯದಿಂದ ಇಲ್ಲಿಯವರೆಗೆ ಬಿಜೆಪಿಯ ಬೂತ್ ಮಟ್ಟದ ಕಾರ್ಯಕರ್ತರಾಗಿ ಶಕ್ತಿ ಕೇಂದ್ರ ಪ್ರಮುಖರಾಗಿ, ಮಹಾಶಕ್ತಿ ಕೇಂದ್ರ ಪ್ರಮುಖರಾಗಿ, ಬೆಳಗಾವಿ ಗ್ರಾಮೀಣ ಮಂಡಲದ ಸಾಮಾಜಿಕ ಜಾಲತಾಣದ ಪ್ರಮುಖರಾಗಿ, ಬೆಳಗಾವಿ ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿಗಳಾಗಿ, ಬಿಜೆಪಿಯ ವಿವಿಧ ಅಭಿಯಾನಗಳ ಸಂಚಾಲಕ ಹಾಗೂ ಸಹ ಸಂಚಾಲಕರಾಗಿ, ಪ್ರಸ್ತುತ ಬಿಜೆಪಿಯ ಬೆಳಗಾವಿ ಗ್ರಾಮಾಂತರ ಜಿಲ್ಲೆಯ ಪ್ರಶಿಕ್ಷಣ ಪ್ರಕೋಷ್ಟದ ಸಹ-ಸಂಚಾಲಕರಾಗಿ ಪಕ್ಷದ ಶಿಸ್ತಿನ ಸಿಪಾಯಿಯಾಗಿ ಸಂಘಟನೆ ಕಾರ್ಯ ಮಾಡುತ್ತಿದ್ದಾರೆ. ಬಿಜೆಪಿ ಮುಖಂಡರಾದ ಸಂಜಯ ಪಾಟೀಲ, ಜಗದೀಶ ಶೆಟ್ಟರ, ಈರಣ್ಣ ಕಡಾಡಿ, ರಮೇಶ ಜಾರಕಿಹೊಳಿ, ಅಭಯ ಪಾಟೀಲ, ಬಾಲಚಂದ್ರ ಜಾರಕಿಹೊಳಿ, ಮಹಾಂತೇಶ ಕವಟಗಿಮಠ, ಸಾಬಣ್ಣ ತಳವಾರ, ಹಣಮಂತ ನಿರಾಣಿ, ಮಹೇಶ್ ಟೆಂಗಿನಕಾಯಿ, ಅನಿಲ ಬೆನಕೆ, ವಿಠಲ ಹಲಗೇಕರ, ಅರವಿಂದ ಪಾಟೀಲ, ಮಹಾಂತೇಶ ದೊಡ್ಡಗೌಡರ, ಜಗದೀಶ ಮೆಟಗುಡ್ಡ, ವಿಶ್ವನಾಥ ಪಾಟೀಲ, ಸುಭಾಸ ಪಾಟೀಲ, ಬಸವರಾಜ ಯಂಕಂಚಿ, ಚಂದ್ರಶೇಖರ ಕವಟಗಿ, ಪ್ರಕಾಶ ಅಕ್ಕಲಕೋಟ, ಡಾ. ರವಿ ಪಾಟೀಲ ಹೀಗೆ ಅನೇಕ ಹಿರಿಯ ಮುಖಂಡರೊಂದಿಗೆ ಉತ್ತಮ ಒಡನಾಟ ಹೊಂದಿದ್ದಾರೆ. ಶಿಂದೊಳ್ಳಿಯ ಹಿರಿಯರು ಹಾಗೂ ಯುವಕರೊಂದಿಗೆ ಒಳ್ಳೆಯ ಸ್ನೇಹಮಯ ಬಾಂಧವ್ಯ ಹೊಂದಿದ್ದಾರೆ. ಕೇಂದ್ರ ಸಚಿವರಾಗಿದ್ದ ದಿ. ಸುರೇಶ ಅಂಗಡಿಯವರು ಕೂಡ ಇವರ ಸಂಘಟನೆಯಲ್ಲಿನ ಪಾಲ್ಗೊಳ್ಳುವಿಕೆ ಹಾಗೂ ಸರ್ಕಾರದ ಯೋಜನೆಗಳನ್ನು ಕಾರ್ಯಕರ್ತರೊಂದಿಗೆ ಫಲಾನುಭವಿಗಳಿಗೆ ತಲುಪಿಸುವ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ವೀರಭದ್ರಯ್ಯ ಇವರು ಅಧಿಕಾರಿಗಳ ಜೊತೆ, ಕಛೇರಿಯ ಸಿಬ್ಬಂದಿಗಳ ಜೊತೆ ಸತತ ಸಂಪರ್ಕ ಹಾಗೂ ಫಾಲೋ-ಅಪ್ ಮೆಚ್ಚುವಂತದ್ದಾಗಿರುತ್ತದೆ.
ಶಿಂದೊಳ್ಳಿ-ನಿಲಜಿ ಗ್ರಾಮ ಪಂಚಾಯಿತಿ ಸದಸ್ಯರಾಗಿ ಚುನಾವಣೆಯಲ್ಲಿ ಗೆದ್ದುಬಂದು ಗ್ರಾಮದ ಅಭಿವೃದ್ಧಿ ದೃಷ್ಟಿಯಿಂದ ಅನೇಕ ಸರ್ಕಾರಿ ಯೋಜನೆಗಳನ್ನು ತಮ್ಮ ಶಿಂದೊಳ್ಳಿ ಗ್ರಾಮಕ್ಕೆ ಹೇಗೆಲ್ಲಾ ತರಬಹುದು ಯಾವ ಯೋಜನೆಯಿಂದ ಗ್ರಾಮದ ಅಭಿವೃದ್ಧಿ ಸಾಧ್ಯ ಎನ್ನುವ ತಮ್ಮ ಅನೇಕ ಅಭಿವೃದ್ಧಿ ವಿಚಾರಗಳನ್ನು ಹಲವು ಬಾರಿ ಪಂಚಾಯಿತಿ ಸಭೆಗಳಲ್ಲಿ ಹಾಗೂ ಪಂಚಾಯಿತಿ ಸದಸ್ಯರು ಒಂದೆಡೆ ಸೇರಿದ ಸಂದರ್ಭದಲ್ಲಿ ಸಲಹೆ ಸೂಚನೆ ನೀಡುತ್ತಾ ಬಂದಿದ್ದಾರೆ, ಗ್ರಾಮದ ಅಭಿವೃದ್ಧಿಗಾಗಿ ಗ್ರಾಮ ಪಂಚಾಯಿತಿ ಸದಸ್ಯರಾಗುವ ಮುಂಚೆ ಮತ್ತು ನಂತರ ಗ್ರಾಮದ ಜನತೆಯ, ರಾಜಕೀಯ ಮುಖಂಡರ ಹಾಗೂ ಕಾರ್ಯಕರ್ತಸ್ನೇಹಿತರ ಸಹಕಾರದಲ್ಲಿ ತಮ್ಮ ರಾಜಕೀಯ ಜೀವನದ 25 ವರ್ಷಗಳಲ್ಲಿ ಶಿಂದೊಳ್ಳಿ ಗ್ರಾಮ ವ್ಯಾಪ್ತಿಯ ಶಾಸಕರಿಂದ, ವಿಧಾನ ಪರಿಷತ್ ಸದಸ್ಯರಿಂದ, ರಾಜ್ಯಸಭಾ ಹಾಗೂ ಲೋಕಸಭಾ ಸಂಸದರಿಂದ, ಗ್ರಾಮ ಪಂಚಾಯಿತಿಯಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳಲ್ಲಿ ಕೊಟ್ಯಾಂತರ ರೂಪಾಯಿ ಅನುದಾನ ಶಿಂದೊಳ್ಳಿಗೆ ತರಲು ಶ್ರಮವಹಿಸಿದ್ದಾರೆ. ಶಿಂದೊಳ್ಳಿ ಗ್ರಾಮದಲ್ಲಿ ಸಂಪರ್ಕ ರಸ್ತೆಗಳ ಸುಧಾರಣೆಗಾಗಿ, ಗ್ರಾಮದ ಒಳರಸ್ತೆಗಳ ಅಭಿವೃದ್ಧಿಗಾಗಿ, ಗಟಾರುಗಳ ನಿರ್ಮಾಣಕ್ಕಾಗಿ, ಸರಕಾರಿ ಶಾಲೆಗೆ ಸ್ಮಾರ್ಟ್ ಕ್ಲಾಸ್ ಸಾಮಗ್ರಿಗಳು ಹಾಗೂ ಡೆಸ್ಕ್ ಗಳ ವಿತರಣೆಗಾಗಿ, ಸಾಂಸ್ಕೃತಿಕ ಹಾಗೂ ಸಮುದಾಯ ಭವನಗಳ ನಿರ್ಮಾಣಕ್ಕಾಗಿ ಹೀಗೆ ಅನೇಕ ವಿಧವಾದ ಅಭಿವೃದ್ಧಿ ಕಾರ್ಯಗಳಿಗೆ, ಸಂಬಂಧಿಸಿದ ಜನಪ್ರತಿನಿಧಿಗಳಿಂದ ಹಾಗೂ ಗ್ರಾಮ ಪಂಚಾಯಿತಿಯಿಂದ ಅನುದಾನ ತರುವಲ್ಲಿ ಯಶಸ್ವಿಯಾಗಿದ್ದಾರೆ, ಇವರು ಸರ್ಕಾರಗಳ ಅನೇಕ ಯೋಜನೆಗಳನ್ನು ಮನೆ ಮನೆಗೆ ತಲುಪಿಸಿದ್ದಾರೆ. ಕೋರೋಣ ಹಾಗೂ ಅತೀವೃಷ್ಟಿ ಕಾಲಘಟ್ಟದ ಸಮಯದಲ್ಲಿ ಸರ್ಕಾರದ ಇಲಾಖೆಯಿಂದ ಹಾಗೂ ವಿವಿಧ ಸಂಘಸಂಸ್ಥೆಗಳಿಂದ, ಅನೇಕ ಮಹನೀಯರಿಂದ ನೀಡುವ ಆಹಾರ ಸಾಮಗ್ರಿಗಳನ್ನು ಬಡವರಿಗೆ, ನಿರ್ಗತಿಕರಿಗೆ ತಲುಪಿಸಿದ್ದಾರೆ, ಗ್ರಾಮದ ಜನತೆಗೆ ವಿವಿಧ ಆಸ್ಪತ್ರೆಗಳಳಿಂದ ಹಲವಾರು ಬಾರಿ ಉಚಿತ ಆರೊಗ್ಯ ತಪಾಸಣೆ ಶಿಬಿರಗಳನ್ನು ಆಯೋಜಿಸಿದ್ದಾರೆ.
ವೀರಭದ್ರಯ್ಯ ಪೂಜಾರ ಇವರಿಂದ ಸಮಾಜ ಸೇವೆ ಹಾಗೂ ಶಿಂದೊಳ್ಳಿ ಗ್ರಾಮದ ಅಭಿವೃದ್ಧಿಯ ಕಾರ್ಯಗಳು ಸದಾ ಹೀಗೆ ಮುಂದುವರಿಯಲಿ, ಇವರಿಗೆ ದೇವರು ಉತ್ತಮ ಆರೋಗ್ಯ, ಹೆಚ್ಚಿನ ಆಯುಷ್ಯ ಕರುಣಿಸಲಿ, ಮುಂದಿನ ದಿನಗಳಲ್ಲಿ ರಾಜಕೀಯದ ಉನ್ನತ ಹುದ್ದೆಗಳು ಇವರಿಗೆ ಸಿಗಲಿ ಎಂದು ಇವರ ಹಿತೈಷಿಗಳು ಶುಭ ಹಾರೈಸಿದ್ದಾರೆ.

ಎಂಎಲ್ಸಿ ಹೇಮಲತಾ ನೇತೃತ್ವದಲ್ಲಿ ಬಿಜೆಪಿ ಪ್ರತಿಭಟನೆ- ಕಾಂಗ್ರೆಸ್ ಕಚೇರಿಗೆ ಮುತ್ತಿಗೆ:ರಾಹುಲ್, ಡಿಕೆಶಿ ವಿರುದ್ಧ ಖಂಡನೆ

ಜಿಲ್ಲಾ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾಜಿ ಆಯ್ಕೆ