31st May 2025
ಕಿಯೋನಿಕ್ಸ್ ಪ್ರಾಂಚಾಯ್ಸಿ ಪಡೆದುಕೊಂಡ ಶಾರ್ಪ್ ಕಂಪ್ಯೂಟರ್ ಸಂಸ್ಥೆ ವಿರುದ್ಧ ಆರೋಪ..
ಉದ್ಯಮಿ ಲಕ್ಷ್ಮಿ ಉದಯಕುಮಾರ ಶೆಟ್ಟಿ ವಿರುದ್ಧ ಗಂಭೀರ ಆರೋಪ..
ಅಕ್ರಮದ ಕುರಿತು ದಾಖಲೆ ಬಿಡುಗಡೆಗೊಳಿಸಿದ ನ್ಯಾಯವಾದಿ ರಾಜು ಶಿರಗಾಂವೆ..
ಬೆಳಗಾವಿ : ರಂದು ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅಥಣಿ ಮೂಲದ ನ್ಯಾಯವಾದಿ ರಾಜು ಎಸ್ ಶಿರಗಾಂವೆ ಅವರು ಬೆಳಗಾವಿಯಲ್ಲಿ ಕಿಯೋನಿಕ್ಸ್ ಪ್ರಾಂಚಾಯ್ಸಿಯನ್ನು ನಡೆಸುತ್ತಿರುವ ಲಕ್ಷ್ಮಿ ಶೆಟ್ಟಿ ಹಾಗೂ ಉದಯ ಶೆಟ್ಟಿ ಅವರುಗಳ ವಿರಿದ್ಧ ಗಂಭೀರ ಆರೋಪಗಳನ್ನು ಮಾಡಿದ್ದು, ಜೂನ್ ಮೂರರ ಒಳಗೆ ಕಿಯೋನಿಕ್ಸ್ ಬೋರ್ಡ್ ತಗೆಯದೇ ಇದ್ದರೆ ಸಂಸ್ಥೆಯ ವಿರುದ್ಧ ತಮಟೆ ಚಳುವಳಿಯನ್ನು ಮಾಡುತ್ತೇವೆ ಎಂಬ ಎಚ್ಚರಿಕೆ ನೀಡಿದ್ದಾರೆ..
ಸುದ್ದಿಗೋಷ್ಟಿಯಲ್ಲಿ ನ್ಯಾಯವಾದಿಗಳು ಲಕ್ಷ್ಮಿ ಶೆಟ್ಟಿ ಮತ್ತು ಉದಯ ಶೆಟ್ಟಿ ಮೇಲೆ ಮಾಡಿದ ಆರೋಪಗಳು ಈ ಕೆಳಗಿನಂತಿವೆ,,
ರದ್ದುಗೊಳಿಸಿದರೂ ಅಕ್ರಮವಾಗಿ ಕಿಯೋನಿಕ್ಸ್ ಪ್ರಾಂಚೈಜಿ ಮುಂದುವರೆಸಿದ ಆರೋಪ,
ಅದಕ್ಕೆ ಸಂಬಂದಿಸಿದ ದಾಖಲೆಗಳನ್ನು ಬೆಳಗಾವಿಯಲ್ಲಿ ನ್ಯಾಯವಾದಿ ರಾಜು ಶಿರಗಾಂವೆ ಬಿಡುಗಡೆ ಮಾಡಿದ್ದು,
ಉದ್ಯಮಿ ಲಕ್ಷ್ಮೀ ಶೆಟ್ಟಿ ಹಾಗೂ ಉದಯಕುಮಾರ ಶೆಟ್ಟಿ ವಿರುದ್ಧ ವಿರುದ್ಧ ಗಂಭೀರ ಆರೋಪವಿದ್ದು,
2023ರಲ್ಲಿಯೇ ಬೆಳಗಾವಿಯ ಶಾರ್ಪ ಕಂಪ್ಯೂಟರ್ ಸಂಸ್ಥೆಗೆ ಕಿಯೋನಿಕ್ಸ್ ನೀಡಿದ್ದ ಪ್ರಾಂಚೈಜಿ ರದ್ದುಗೊಳಿಸಲಾಗಿದೆ,
ಇಷ್ಟೇಲ್ಲಾ ಆದ್ರೂ ಕಿಯೋನಿಕ್ಸ್ ನಾಮಫಲಕ ತೆಗೆಸದೇ ದುರ್ಬಳಕೆ ಮಾಡಿರುವ ಆರೋಪ,
ಇನ್ನೂ ಉದಯಕುಮಾರ ಶೆಟ್ಟಿ ವಿರುದ್ಧ ಹಲವು ಕ್ರಿಮಿನಲ್ ಪ್ರಕರಣಗಳ ಮಾಹಿತಿ,
ಕಿಯೋನಿಕ್ಸ್ ಎಂಡಿ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆದು ಸಂಸ್ಥೆಗೆ ಮೋಸ.
ಬೆಳಗಾವಿ ಕ್ಲಬ್ ಸದಸ್ಯನಾಗಲು ಕಿಯೋನಿಕ್ಸ್ ಸಂಸ್ಥೆಯ ಎ ಗ್ರುಪ್ ನೌಕಕರೆಂದು ಸುಳ್ಳು ದಾಖಲೆ ಸಲ್ಲಿಕೆ,
ಕಿಯೋನಿಕ್ಸ್ ಸಂಸ್ಥೆ ಪ್ರಾಂಚೈಜಿ ರದ್ದುಗೊಂಡರೂ ಅದರ ಹೆಸರು ದುರ್ಬಳಕೆ ಮಾಡಿ ಅನುದಾನ ಪಡೆದ ಆರೋಪ,
ಇಷ್ಟೆಲ್ಲಾ ಆರೋಪ ಹೊತ್ತಿರುವ ಈ ಶಾರ್ಪ್ ಕಂಪ್ಯೂಟರ್ ಸಂಸ್ಥೆಯು
ಕಿಯೋನಿಕ್ಸ್ ನಾಮಫಲಕವನ್ನು ತೆರವುಗೊಳಿಸದಿದ್ದರೆ ಜೂ.3ರಂದು ತಮಟೆ ಚಳುವಳಿಗೆ ನಿರ್ಧಾರ.
ಪ್ರತಿಭಟನೆಯಲ್ಲಿ ಜಿಲ್ಲೆಯ ದಲಿತ ಹಾಗೂ ಇನ್ನು ಹಲವಾರು ಸಂಘಟನೆಗಳು ಭಾಗಿಯಾಗಿ, ಅವರ ಸಂಸ್ಥೆಯ ಎದುರಿಗೆ ಬ್ರಹತ್ ಹೋರಾಟ ಮಾಡುತ್ತೇವೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ..
18th May 2025
ಒಂದು ಜೀವಿಯ ದೇಹ ಮನಸ್ಸು ಸಂಪೂರ್ಣ ಸಮತೋಲನದಲ್ಲಿರುವ ಸ್ಥಿತಿಯನ್ನು ಆರೋಗ್ಯ ಎಂದು ಕರೆಯಬಹುದು.ಸಿದ್ದಪ್ಪ ಸಾರಾಪುರೆ. ಬೆಳಗಾವಿ.11.ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಭವನ ಲಿಂಗಾಯತ ಸಂಘಟನೆ ಮಹಾಂತೇಶ ನಗರ ಬೆಳಗಾವಿಯಲ್ಲಿ ವಾರದ ಸಾಮೂಹಿಕ ಪ್ರಾಥ೯ನೆ ವಚನ ವಿಶ್ಲೇಷಣೆ ಯೋಗ ಮತ್ತು ಆರೋಗ್ಯ ಕುರಿತು ದಿನಾಂಕ 11.05.2025.ರಂದು ಸಿದ್ದಪ್ಪ ಸಾರಾಪುರೆ ಉಪನ್ಯಾಸ ನೀಡಿದರು. ಯೋಗವು ಮನುಷ್ಯನ ದೈಹಿಕ ಮಾನಸಿಕ ಮತ್ತು ಆಧ್ಯಾತ್ಮಿಕ ಆರೋಗ್ಯ. ಸರಳ ಮೊತ್ತವೂ ಹೌದು .ಯೋಗವು ಆರೋಗ್ಯಕರ
ಜೀವನ ಶೈಲಿ ಕಲೆ ಮತ್ತು ವಿಜ್ಞಾನವಾಗಿದೆ. ಇದು ಅತ್ಯಂತ ಸೂಕ್ಷ್ಮವಾದ ವಿಜ್ಞಾನವನ್ನು ಆಧರಿಸಿದೆ. ಆಧ್ಯಾತ್ಮಿಕ ಶಿಸ್ತು. ಇದು ಮನಸ್ಸು ಮತ್ತು ದೇಹದ ನಡುವೆ ಆದರಿಸಿದ ಯೋಗ,ಜೂನ 21 ರಂದು ಅಂತರಾಷ್ಟ್ರೀಯ ಯೋಗ ದಿನ ಆಚರಿಸುತ್ತಾರೆ.ಎಂದು ಸಾರಾಪುರೆ ತಿಳಿಸಿದರು.ಮಕ್ಕಳಿಗೆ ಯೋಗ ಮಾಡಿಸಿದರು.ಅನುಲೋಮ ಖಾಲಿ ಹೊಟ್ಟೆಯಲ್ಲಿ ಮಾಡಬೇಕು.ಪ್ರಾರಂಭದಲ್ಲಿ ಬಿ.ಪಿ. ಜೇವಣಿ ಸಾಮೂಹಿಕ ಪ್ರಾಥ೯ನೆ ನಡಿಸಿಕೊಟ್ಟರು.ಆನಂದ ಕರಕಿ,ದಾಕ್ಷಾಯಿಣಿ ಪೂಜೇರಿ,ವಿ ಕೆ ಪಾಟೀಲ,ಬಸವರಾಜ ಬಿಜ್ಜರಗಿ,ಜಯಶ್ರೀ ಚಾವಲಗಿ,ಬಿ. ಪಿ. ಜವಣಿ,ಜ್ಯೋತಿ ನಾಯಕ,ವಚನ ವಿಶ್ಲೇಷಣೆ ಮಾಡಿದರು.ಬಸವ ಜಯಂತಿಗೆ ತಾವೆಲ್ಲ ಬಂದು ಯಶಸ್ವಿಗೊಳಿಸಿದ್ದಕ್ಕಾಗಿ ಅಭಿನಂದಿಸಿದರು,ಶೇಖರ ವಾಲಿಇಟಗಿ,ದೊಡಗೌಡ ಪಾಟೀಲ,ಮಹಾಂತೇಶ ಮೆಣಸಿನಕಾಯಿ,ತಿಗಡಿ ದಂಪತಿಗಳು,ಕೆಂಪಣ್ಣಾ ರಾಮಾಪೂರೆ,ಅನೀಲ ರಘಶೆಟ್ಟಿ,ಮಹಾಂತೇಶ ತೋರಣಗಟ್ಟ,ಬಸವರಾಜ ಪೂಜೇರಿ,ಶಿವಾನಂದ ನಾಯಕ, ವಿದ್ಯಾಥಿ೯ನಿಯರು ಶರಣಶರಣೆಯರು ಉಪಸ್ಥಿತರಿದ್ದರು.ಲಿಂಗಾಯತ ಸಂಘಟನೆ ಪ್ರಸಾದ ಸೇವೆ ಏಪ೯ಡಿಸಿದ್ದರು.ಆನಂದ ಕರಕಿ ಸ್ವಾಗತಿಸಿ ನಿರೂಪಿಸಿದರು.
18th May 2025
ವಚನ ಪಿತಾಮಹ ಡಾ ಫ ಗು ಹಳಕಟ್ಟಿ ಭವನ ಲಿಂಗಾಯತ ಸಂಘಟನೆ ಮಹಾಂತೇಶ ನಗರ ಬೆಳಗಾವಿಯಲ್ಲಿ ದಿ.18.05.2025 ರಂದು ಸಾಮೂಹಿಕ ಪ್ರಾಥ೯ನೆ ಪ್ರೋ.ವಿರೂಪಾಕ್ಷ. ಬಾ. ದೊಡಮನಿ ಉಪನ್ಯಾಸ ನೀಡಿದರು.ಜ್ಞಾನಜ್ಯೋತಿಗೆ ಸಾಧು ಮಾನ್ಯರು ದೀಪಕ್ಕೆ ಎಣ್ಣೆ ಹಾಕಬೇಕು.ನೋಡುವ ದೃಷ್ಟಿ ಬದಲಾಗಬೇಕು.ಸಮಯ ಮಾಡಿಕೊಂಡು ಶರಣರ ಮಾತು ಆಲಿಸಬೇಕು.ಮನಸಿಗೆ ಬಂದ್ದದೆಲ್ಲಾ ಬಯಸಬಾರದು.ದೀಪದ ಗುಣ ಅಳವಡಿಸಿ ಕೊಳ್ಳಬೇಕು.ಅತಿಥಿಗಳನ್ನು ಆದರಿಸಬೇಕು.ಶಿಷ್ಯನೊವ೯ನು ನನ್ನ ಹೆಸರು ಅಜರಾಮರಾಗಿ ಉಳಿಯಲು ಏನು ಮಾಡಬೇಕು ಎಂದಾಗ ಗುಡ್ಡದ ತುದಿಗೆ ಕರೆದುಕೊಂಡು ಹೋಗಿ ಪ್ರತಿದ್ವನಿ ಹೇಗೆ ಬರುವುದು ತೋರಿಸಿದರು ನಾವು ಹೇಗೆ ಇರುತ್ತೆವೆಯೂ ಹಾಗೆ ಜೀವನ ನಮ್ಮಲ್ಲಿ ಅರಿಷಡ್ವಗಳು ಗೆಲ್ಲಬೇಕು ಮನಸ್ಸು ಸ್ವಚ್ಛವಿರಬೇಕು.ನಡೆ ನುಡಿ ಒಂದೆ ಇರಬೇಕು.ನಮ್ಮ ತಪ್ಪುಗಳನ್ನ ನಾವು ತಿದ್ದಿಕೊಳ್ಳಬೇಕು. ಶರಣರ ಸಂತರ ಆದಶ೯ಗಳನ್ನ ಅಳವಡಿಸಿಕೊಳ್ಳಬೇಕು. ಬಿ. ಪಿ. ಜೇವಣಿಯವರು ಸಾಮೂಹಿಕ ಪ್ರಾಥ೯ನೆ ನಡಿಸಿಕೊಟ್ಟರು.ಆನಂದಕರಕಿ,ವಿ. ಕೆ. ಪಾಟೀಲ,ಅಕ್ಕಮಹಾದೇವಿ ತೆಗ್ಗಿ,ಜಯಶ್ರೀ ಚಾವಲಗಿ,ದಾಕ್ಷಾಯಿಣಿ ಪೂಜಾರ,ಸುನಿಲ ಸಾಣಿಕೊಪ್ಪ,ವಚನ ವಿಶ್ಲೇಷಣೆ ಮಾಡಿದರು..ಈರಣ್ಣಾ ದೇಯಣ್ಣವರಅಧ್ಯಕ್ಷತೆವಹಿಸಿದ್ದರು.ದ್ರಾಕ್ಷಯಿಣಿ ಪೂಜಾರ ದಾಸೋಹ ಸೇವೆಗೈದರು. ಇದೇ ಸ೦ದಭ೯ದಲಿೢ ಶಿವಪುತ್ರಯ್ಯ ಪೂಜಾರ ಇವರ ೮೧ನೇಯ ಹುಟ್ಟುಹಬ್ಬ ಆಚರಿಸಲಾಯಿತು ಮಹಾ೦ತೇಶ ತೊರಣಗಟ್ಟಿ, ಆನಂದ ಕರಕಿ,ಬಸವರಾಜ ಪೂಜಾರ,ಮಹಾ೦ತೇಶ ಇ೦ಚಲ, ಬಸವರಾಜ ಕರಡಿಮಠ, ಕಾಡೆ,ಸುಶೀಲಾ ಗುರವ, ದೊಡಗೌಡ ಪಾಟೀಲ,,ರುದ್ರಗೌಡ ಪಾಟೀಲ,ಗಂಗಪ್ಪ ಉಣಕಲ್,ಮಹಾಂತೇಶ ಮೆಣಸಿನಕಾಯಿ,ಬಸವರಾಜ ಛಟ್ಟರಕಿ,ಸಿದ್ಧಪ್ಪ ಸಾರಾಪೂರೆ,ಮರಲಿಂಗಣ್ಣವರ,ಗುರುಸಿದ್ದಪ್ಪ ರೇವಣ್ಣವರ,ಕೆಂಪಣ್ಣಾ ರಾಮಾಪೂರೆ ದಂಪತಿಗಳು,ಲಕ್ಷೀಕಾಂತ ಗುರವ,ಶೇಖರ ವಾಲಿಇಟಗಿ,ತಿಗಡಿ ದಂಪತಿಗಳು,ಶಿವಾನಂದ ನಾಯಕ,ಎಸ್ ಎಸ್ ಪೂಜಾರ ದಂಪತಿಗಳು,ಗಂಗಾಧರ ಹಿತ್ತಲಮನಿ,ಶರಣ ಶರಣೆಯರು ಉಪಸ್ಥತರಿದ್ದರು.ಆನಂದ ಕಕಿ೯ ನಿರೂಪಿಸಿ ವಂದಿಸಿದರು
18th May 2025
ಸ್ಮಾರಕ ವಾರ್ಲಿ ಕಲಾ ಮೇರುಕೃತಿಗಳೊಂದಿಗೆ ಹೊಸ ವಿಶ್ವ ದಾಖಲೆ ನಿರ್ಮಿಸಿದ ಬೆಳಗಾವಿ ಕಲಾವಿದ
ಬೆಳಗಾವಿ, ಮಾರ್ಚ್ 20: ಭಾರತೀಯ ಜಾನಪದ ಕಲೆಗೆ ನೀಡಿದ ಅಸಾಧಾರಣ ಕೊಡುಗೆಗಾಗಿ ಖ್ಯಾತ ಭಾರತೀಯ ಕಲಾವಿದ ಮಧುಸೂದನ್ ಗಜಾನನ್ ಮಹಾಲೆ ಅವರು ಅಂತರರಾಷ್ಟ್ರೀಯ ದಾಖಲೆ ಪುಸ್ತಕದಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಅವರು ಈಗ ದಾಖಲೆಗಳನ್ನು ಹೊಂದಿದ್ದಾರೆ:
1. ಹನುಮಾನ್ ಚಾಲೀಸಾದ ಅತಿದೊಡ್ಡ ವಾರ್ಲಿ ಕಲೆಯನ್ನು ಅವರ ಶ್ಲೋಕಗಳೊಂದಿಗೆ ತಯಾರಿಸಲಾಗಿದೆ, ಮತ್ತು
2. ಇಡೀ ರಾಮಾಯಣವನ್ನು ವಾರ್ಲಿ ಕಲಾ ಪ್ರಕಾರದಲ್ಲಿ ಚಿತ್ರಿಸಲಾಗಿದೆ.
ಅವರ ಇತ್ತೀಚಿನ ಸಾಧನೆ - 3 ಅಡಿ ಅಗಲ 5 ಅಡಿ ವಾರ್ಲಿ ಕಲಾಕೃತಿ - ಇಡೀ ಹನುಮಾನ್ ಚಾಲೀಸಾವನ್ನು ಅದರ ಶ್ಲೋಕಗಳೊಂದಿಗೆ ವಿವರಿಸುತ್ತದೆ - ಕರ್ನಾಟಕದ ಬೆಳಗಾವಿಯಲ್ಲಿ ಮಾರ್ಚ್ 20, 2025 ರಂದು ಅಧಿಕೃತವಾಗಿ ಗುರುತಿಸಲಾಯಿತು. ಈ ಆಧ್ಯಾತ್ಮಿಕ ಮೇರುಕೃತಿಯು ಭಕ್ತಿ ಪಠ್ಯ ಮತ್ತು ಸಾಂಪ್ರದಾಯಿಕ ಬುಡಕಟ್ಟು ಕಲೆಯ ಶಕ್ತಿಯುತ ಸಂಯೋಜನೆಯ ಮೂಲಕ ಹನುಮಂತನಿಗೆ ಗೌರವ ಸಲ್ಲಿಸುತ್ತದೆ.
ಈ ಹಿಂದೆ, ಇಡೀ ರಾಮಾಯಣವನ್ನು ವಾರ್ಲಿ ರೂಪದಲ್ಲಿ ರಚಿಸಿದ್ದಕ್ಕಾಗಿ ಮಹಾಲೆ ಅವರನ್ನು ಗೌರವಿಸಲಾಯಿತು, ಇದು ಪ್ರಾಚೀನ ಮಹಾಕಾವ್ಯವನ್ನು ಸ್ಥಳೀಯ ಲಕ್ಷಣಗಳು ಮತ್ತು ವಿವರವಾದ ಕಥೆ ಹೇಳುವ ಮೂಲಕ ದೃಶ್ಯೀಕರಿಸುವ ಸ್ಮರಣೀಯ ಪ್ರಯತ್ನವಾಗಿದೆ.
ಕಲಾವಿದನ ಬಗ್ಗೆ:
ಮಧುಸೂದನ್ ಗಜಾನನ್ ಮಹಾಲೆ ಅವರು ಸಾಂಪ್ರದಾಯಿಕ, ಅಮೂರ್ತ ಮತ್ತು ಆಧುನಿಕತೆಯನ್ನು ಬೆರೆಸುವಲ್ಲಿ ಹೆಸರುವಾಸಿಯಾದ ಬಹುಮುಖ ಮತ್ತು ದೂರದೃಷ್ಟಿಯ ಕಲಾವಿದ. ಅವರ ಕೆಲಸವು ಭಾರತೀಯ ಪರಂಪರೆಯೊಂದಿಗಿನ ಆಳವಾದ ಸಂಪರ್ಕವನ್ನು ಪ್ರತಿಬಿಂಬಿಸುತ್ತದೆ, ಇದನ್ನು ನವೀನ ಸ್ವರೂಪಗಳ ಮೂಲಕ ವ್ಯಕ್ತಪಡಿಸಲಾಗುತ್ತದೆ. ಜಾನಪದ ನಿರೂಪಣೆಗಳ ಹೊರತಾಗಿ, ಅವರು ಅಮೂರ್ತ ಮತ್ತು ಆಧುನಿಕ ಕಲೆಯಲ್ಲಿ ಸಮಕಾಲೀನ ವಿಷಯಗಳನ್ನು ಸಕ್ರಿಯವಾಗಿ ಅನ್ವೇಷಿಸುತ್ತಾರೆ ಮತ್ತು ಭಾರತ, ನ್ಯೂಯಾರ್ಕ್, ಲಂಡನ್ ಮತ್ತು ಅಥೆನ್ಸ್ನಲ್ಲಿ ತಮ್ಮ ಸೃಷ್ಟಿಗಳನ್ನು ಪ್ರದರ್ಶಿಸಿದ್ದಾರೆ, ಅಂತರರಾಷ್ಟ್ರೀಯ ಮೆಚ್ಚುಗೆಯನ್ನು ಗಳಿಸಿದ್ದಾರೆ.
ಎನ್ಸುರಿ ಎಂಬ ಆಧುನಿಕ ದೃಷ್ಟಿಕೋನದ ಮೂಲಕ ಸಾಂಸ್ಕೃತಿಕ ಕಥೆಗಳನ್ನು ಪುನರುಜ್ಜೀವನಗೊಳಿಸುವುದು ಮತ್ತು ಮರುಕಲ್ಪಿಸುವುದು ಅವರ ಕಲಾತ್ಮಕ ಧ್ಯೇಯವಾಗಿದೆ
1st May 2025
ಬೆಳಗಾವಿ ಗಾಮ್ರ ಕಾಕತಿ ಅಂಗನವಾಡಿ ಗ್ರಾಮದ 314 ಸುಜಾತ ಬೆಳಗಾಂಕರ್ ನನ್ನ ಅಂಗನವಾಡಿ ಕೇಂದ್ರದಲ್ಲಿ 3 /7 2006ರಲ್ಲಿ ಜನಿಸಿದಂತ ಮಗು ಕುಮಾರಿ ಸುಮನ್ ದಾಖಲು ನೀಲಸ್ಗರ. ಅದೇ ತಾನೇ ರಾಜ್ಯ ಸರ್ಕಾರದಿಂದ ಬಂದಂತ ಹೊಸ ಯೋಜನೆಗಳಲ್ಲಿ ಯೋಜನೆಗಳಲ್ಲಿ ಭಾಗ್ಯಲಕ್ಷ್ಮಿ ಕೂಡ ಒಂದು ಯೋಜನೆಯಾಗಿ ಬಂತು ಆ ಒಂದು ಯೋಜನೆಯಲ್ಲಿ ಈ ಮಗುವನ್ನು ಹಾಕಿ ಈ ದಿನ ಭಾಗ್ಯಲಕ್ಷ್ಮಿಯ ಹಣವನ್ನು ಪಡೆದು ತನ್ನ ಮುಂದಿನ ಭವಿಷ್ಯಕ್ಕಾಗಿ ಒಳ್ಳೆಯ ರೀತಿಯಿಂದ ಉಪಯೋಗ ಮಾಡಿಕೊಂಡರು. ಈ ದಿನ ನಾನು ಈ ಮಾತನ್ನು ಹೇಳಲು ಗರ್ವ ಪಡುತ್ತೇನೆ ಏಕೆಂದರೆ ನಾಳೆ ದಿನಾಂಕ 6/5/ 2025 ರಂದು ಈ ಮಗುವಿನ ಮದುವೆ ಕಾರ್ಯಕ್ರಮ ಈ ಒಂದು ಮದುವೆಗೆ ನಮ್ಮ ಇಲಾಖೆ ಅಂದರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಫಲಾನುಭವಿಗೆ 35 ಸಾವಿರದವರೆಗೆ ಅವಳ ಭಾಗ್ಯಲಕ್ಷ್ಮಿ ಹಣ ಬಂದು ಕೈ ಸೇರಿತು ಅದು ಅಲ್ಲದೆ ಇವಳ ಪ್ರೈಮರಿ ಹಂತದಿಂದ ಹೈ ಸ್ಕೂಲ್ ಹಂತದವರೆಗೂ ಇವಳಿಗೆ ಪ್ರತಿ ವರ್ಷ ಸ್ಕಾಲರ್ಶಿಪ್ ಕೂಡ ಬಂದಿತ್ತು . ನಾವು ಈ ದಿನ ಈ ಮಗುವಿಗೆ ಭೇಟಿಯಾಗಿ ಅವಳ ಮದುವೆಗೆ ನನ್ನ ವೈಯಕ್ತಿಕ ವಾಗಿ ಒಂದು ಸಣ್ಣ ಕಾಣಿಕೆಯನ್ನು ಕೊಟ್ಟು ಬಂದೆ. ಅವರು ಕೂಡ ನನಗೆ ಮತ್ತು ನಮ್ಮ ಇಲಾಖೆಗೆ ತುಂಬು ಹೃದಯದ ಧನ್ಯವಾದಗಳು ತಿಳಿಸಿದರು.
1st May 2025
ರಾಮತೀರ್ಥನಗರ
ಆಂಜನೇಯ ದೇವಸ್ಥಾನದ ಲೋಕಾರ್ಪಣೆ ನಿಮಿತ್ತ ಸ್ಟಾರ್ ಸುವರ್ಣ ಟೀಮ್ ದಿಂದ ಚಿತ್ರಿತ
ವಿಡಿಯೋ ಪ್ರಸಾರ.
ಶುಕ್ರವಾರ ಡಾ ಗೋಪಾಲ ಕ್ರಷ್ಣ ಶರ್ಮಾ ಗುರೂಜಿ ಪ್ರವಚನ ಪ್ರಸಾರ.
ಬೆಳಗಾವಿ, ೩೦, ಸ್ಟಾರ್ ಸುವರ್ಣ ನೆಟ್ ಟಿ ವಿ ಚೆನಲ್ ತಂಡದಿಂದ ದಿನಾಂಕ ೧೨-೦೪-೨೦೨೫ರಂದು ಶನಿವಾರ ಶ್ರೀ ಕಾರ್ಯ ಸಿದ್ಧಿ ಆಂಜನೇಯ ಸ್ವಾಮಿ ದೇವಸ್ಥಾನ ದ ೬ನೇ ವಾರ್ಷಿಕೋತ್ಸವ ಹಾಗೂ ಹನುಮ ಜಯಂತಿ ಕಾರ್ಯಕ್ರಮದ ನಿಮಿತ್ತ ಶ್ರೀ ಗೋಪಾಲ್ ಕ್ರಷ್ಣ ಶರ್ಮಾ ಗುರೂಜಿ ಅವರಿಂದ ಜರುಗಿದ ಶ್ರೀ ಕಾರ್ಯಸಿದ್ದಿ ಆಂಜನೇಯ ಸ್ವಾಮಿ ಕುರಿತ ವಿಶೇಷ ಪ್ರವಚನ ಮತ್ತು ಶ್ರೀಗಳ ಸನ್ಮಾನ ಕಾರ್ಯಕ್ರಮದೊಂದಿಗೆ ಜಾತ್ರೆಯ ಸಂಪೂರ್ಣ ವಿಡಿಯೋ ಚಿತ್ರಣ ಇದೇ ಶುಕ್ರವಾರ ದಿನಾಂಕ ೦೨ -೦೫-೨೦೨೫ ಮತ್ತು ಶನಿವಾರ ೦೩-೦೫-೨೦೨೫ ರಂದು ಬೆಳಗಿನ ೭-೩೦ಕ್ಕೆ ಸ್ಟಾರ್ ಸುವರ್ಣ ಟಿ ವಿ ಚೆನಲ್ ನಲ್ಲಿ ಪ್ರಸಾರಗೊಳ್ಳಲಿದ್ದು ಭಕ್ತಾದಿಗಳು ಮತ್ತು ದೇವಸ್ಥಾನದ ಸದ್ಭಕ್ತರು ವಿಕ್ಷೀಸಬಹುದಾಗಿದೆ ಎಂದು ಶ್ರೀ ಕಾರ್ಯಸಿದ್ದಿ ಆಂಜನೇಯ ಸ್ವಾಮಿ ದೇವಸ್ಥಾನ ಕಮಿಟಿ ಅದ್ಯಕ್ಷರಾದ ಸುರೇಶ ಉರಬಿನಹಟ್ಟಿ
ತಿಳಿಸಿದ್ದಾರೆ.
29th April 2025
ವಿದ್ಯಾ ಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನ ವಿದ್ಯಾಭಾರತಿ.ಕರ್ನಾಟಕ ಬೆಳಗಾವಿ ಜಿಲ್ಲೆಯ ವತಿಯಿಂದ ವಿದ್ಯಾ ವಿಕಾಸ ಶಿಬಿರವನ್ನು ಸಂತ ಮೀರಾ ಶಾಲೆ ಅನಗೋಳದಲ್ಲಿ ಎಪ್ರಿಲ್ 24 ರಿಂದ ಮೇ 4 ರವರೆಗೆ ಹತ್ತು ದಿನಗಳ ಕಾಲ ಏರ್ಪಡಿಸ ಲಾಗಿದೆ. ಶಿಶುವಾಟಿಕ ಪ್ರಶಿಕ್ಷಣ ವರ್ಗದ ಐದನೇ ದಿನದ ಅವಧಿಯಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀಮತಿ ಪ್ರಿಯಾ ಪುರಾಣಿಕ್ ಮತ್ತು ಶ್ರೀಮತಿ ಲತಾ ಹೂಲಿಯವರು ಆಗಮಿಸಿದ್ದರು. ಈ ಅವಧಿಯಲ್ಲಿ ಶಿಶು ವಾಟಿಕಾ ಪ್ರಾಂತ ಕಾರ್ಯದರ್ಶಿಯಾದ ಶ್ರೀಮತಿ ತಾರಾ ಮಾತಾಜಿಯವರು ಭಾರತೀಯ ಶಿಕ್ಷಣ ಪದ್ಧತಿಯ ಬಗ್ಗೆ ಬಹಳ ವಿವರವಾಗಿ ತಿಳಿಸಿದರು. ನಮ್ಮ ದೇಹವು ಪಂಚಭೂತಗಳಿಂದ ಆಗಿದೆ ನಾವು ನಮ್ಮ ಭಾರತೀಯ ಸಂಸ್ಕೃತಿಯನ್ನು ಉಳಿಸಿ ಬೆಳಸಬೇಕು ಅದನ್ನು ನಾವು ನಮ್ಮ ಶಾಲೆಯಲ್ಲಿ ಬೆಳಸಬೇಕು ಎಂದು ಹೇಳಿದರು. ಹಾಗೆಯೇ ಅತಿಥಿ ಅವರು 12 ವ್ಯವಸ್ಥೆಗಳನ್ನು ವೀಕ್ಷಿಸಿ ಬಹಳ ಹರ್ಷವನ್ನು ವ್ಯಕ್ತಪಡಿಸಿದರು.
29th April 2025
ಹುಟ್ಟು ಗುಡಿಸಲಲ್ಲಾದರೂ ಬದುಕು ಚರಿತ್ರೆಯಾಗಲಿ: ಕುಲಪತಿ ಸಿ.ಎಂ.ತ್ಯಾಗರಾಜ
ಬೆಳಗಾವಿ: ನಮ್ಮ ಹುಟ್ಟು ಗುಡಿಸಲಲ್ಲಿಯಾದರೂ ಬದುಕು ಚರಿತ್ರೆಯಾಗಬೇಕು. ಬದುಕು ಚರಿತ್ರೆಯಾಗಬೇಕಾದರೆ ನಾವು ಜ್ಞಾನ, ವಿದ್ವತ್ತನ್ನು ಸಂಪಾದಿಸಬೇಕು ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ ಸಿ. ಎಂ. ತ್ಯಾಗರಾಜ ಅವರು ಅಭಿಪ್ರಾಯಪಟ್ಟರು.
ಉದ್ಯೋಗ ವಿನಿಮಯ ಕೇಂದ್ರ ಮತ್ತು ಮಾದರಿ ವೃತ್ತಿ ಕೇಂದ್ರ ಬೆಳಗಾವಿ ಹಾಗೂ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯ, ಬೆಳಗಾವಿ ಇವುಗಳ ಸಹಯೋಗದೊಂದಿಗೆ ಎ. ೨೮ರಂದು ಕಾಲೇಜಿನಲ್ಲಿ ಆಯೋಜಿಸಿದ್ದ ಬೃಹತ್ ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.
ಅವಕಾಶವೇ ದೇವರು. ಅವಕಾಶಕ್ಕಿಂತ ಮಿಗಿಲಾದುದು ಯಾವುದೂ ಇಲ್ಲ.
ವಿದ್ಯಾರ್ಥಿಗಳು ಜ್ಞಾನ, ಕೌಶಲ್ಯಗಳನ್ನು ಹೊಂದಬೇಕು. ಅಂಥ ವಿದ್ಯಾರ್ಥಿಗಳನ್ನು ಉದ್ಯೋಗ ನೀಡುವ ಸಂಸ್ಥೆಗಳು ಕೈಬೀಸಿ ಕರೆಯುತ್ತವೆ. ಇಂದಿನದು ಜ್ಞಾನದ ಮಾರುಕಟ್ಟೆ. ಇದರಲ್ಲಿ ಜ್ಞಾನವೇ ಮಾನದಂಡ. ಜ್ಞಾನದ ಮೇಲೆಯೇ ವ್ಯವಹಾರ. ಜ್ಞಾನ ಕೌಶಲ್ಯಗಳನ್ನು ಪಡೆದುಕೊಂಡವರಿಗೆ ಬಹುಬೇಡಿಕೆಯಿದೆ.
ನಮ್ಮ ಮಹಾವಿದ್ಯಾಲಯದಲ್ಲಿ ಓದುವ ವಿದ್ಯಾರ್ಥಿಗಳು ತುಂಬಾ ಬಡತನ ಮತ್ತು ಗ್ರಾಮೀಣ ಭಾಗದವರು. ಆದರೆ ಅವರಲ್ಲಿರುವ ಧೈರ್ಯ ಸ್ಥೈರ್ಯ ಅಪರಿಮಿತವಾದುದು. ಅವರು ಎತ್ತರಕ್ಕೆ ಏರಬೇಕಾದರೆ ಅವರಲ್ಲಿ ಹೊಸ ತಂತ್ರಜ್ಞಾನ, ಭಾಷೆ ಮತ್ತು ಜ್ಞಾನದ ಕೌಶಲ್ಯಗಳು, ಆವಿಷ್ಕಾರದ ಮನೋಭಾವವಿರಬೇಕು. ಜೊತೆಗೆ ಬೆಳೆಯಬೇಕೆಂಬ ತುಡಿತ ರಾಜಿಯಾಗದ ಕಾರ್ಯಕ್ಷಮತೆ ಇರಬೇಕು. ಇವು ಅವರನ್ನು ಸಾಧಕರನ್ನಾಗಿ ಮಾಡುತ್ತದೆ.
ಒಂದು ದೇಶದ ಅರ್ಥ ವ್ಯವಸ್ಥೆಯನ್ನು ಮೇಲಕ್ಕೆ ಎತ್ತಬೇಕಾದರೆ ಅದಕ್ಕೆ ಆ ದೇಶದ ಯುವಕರ ಕಾಣಿಕೆ ಬಲು ದೊಡ್ಡದು. ಜಗತ್ತಿನಲ್ಲಿಯೇ ಅತೀ ಹೆಚ್ಚು ಯುವಕರನ್ನು ಹೊಂದಿರುವ ಭಾರತವು ಆರ್ಥಿಕವಾಗಿ ಬಲಾಢ್ಯವಾಗಲು ಯುವಕರ ಕೊಡುಗೆ ಮುಖ್ಯವಾದುದು ಎಂದರು.
ವಿದ್ಯಾರ್ಥಿಗಳಲ್ಲಿ ಒಂದಿಷ್ಟು ಭಾಷಾಜ್ಞಾನ, ಒಂದಿಷ್ಟು ಕೌಶಲ್ಯ ಜ್ಞಾನ ತುಂಬಿದಲ್ಲಿ ಅವರು ಉತ್ತಮ ಉದ್ಯೋಗವನ್ನು ಪಡೆಯುವಲ್ಲಿ ಖಂಡಿತವಾಗಿ ಯಶಸ್ವಿಯಾಗುತ್ತಾರೆ.
ಜೂನ್ ಕೊನೆಯ ವಾರದಲ್ಲಿ ಮತ್ತೊಂದು ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗುತ್ತಿದೆ. ಕನಿಷ್ಠ 60,000 ವಿದ್ಯಾರ್ಥಿಗಳಿಗೆ ಉದ್ಯೋಗ ನೀಡಲು ನೂರಾರು ಕಂಪನಿಗಳು ಮಾವಿದ್ಯಾಲಯದ ಅಂಗಳಕ್ಕೆ ಬರುತ್ತಿವೆ. ಇದೆಲ್ಲವನ್ನೂ ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕುಲಸಚಿವರಾದ ಸಂತೋಷ ಕಾಮಗೌಡ ಅವರು ವಿದ್ಯಾರ್ಥಿಗಳು ತಾವು ಬಯಸುವ ಉದ್ಯೋಗಕ್ಕೆ ತಕ್ಕಂತೆ ಕೌಶಲ್ಯ , ಜ್ಞಾನವನ್ನು ಹೊಂದಿರಬೇಕಾಗುತ್ತದೆ. ಅಂಥ ಬೌದ್ಧಿಕ ಸಾಮರ್ಥ್ಯವನ್ನು ಒದಗಿಸಿಕೊಡುವುದು ಶಿಕ್ಷಣ ಸಂಸ್ಥೆಗಳ ಬಹು ಮುಖ್ಯ ಕೆಲಸವಾಗಬೇಕು. ಆಗ ವಿದ್ಯಾರ್ಥಿಗಳು ಉತ್ತಮವಾದ ಉದ್ಯೋಗವನ್ನು ಪಡೆಯಲು ಸಾಧ್ಯವಾಗುತ್ತದೆ. ನಾವು ಬಯಸುವ ವೇತನಕ್ಕೆ ತಕ್ಕಂತೆ ಕೌಶಲ್ಯ ನಮ್ಮಲ್ಲಿರಬೇಕು. ಯಾಕೆಂದರೆ, ಉದ್ಯೋಗ ಸಂಸ್ಥೆಗಳು ತಾವು ನೀಡುವ ವೇತನಕ್ಕೆ ತಕ್ಕಂತೆ ಕಾರ್ಯಕ್ಷಮತೆಯನ್ನು ನಿರೀಕ್ಷಿಸುತ್ತವೆ ಎಂದರು.
ಉದ್ಯೋಗ ವಿನಿಮಯ ಕೇಂದ್ರದ ಸಹಾಯಕ ನಿರ್ದೇಶಕರಾದ ಗುರುಪಾದಯ್ಯ ಹಿರೇಮಠ ಮತ್ತು ಜಿಲ್ಲಾ ಸಂಚಾಲಕರಾದ ಸಂತೋಷ ನಾಗಲಾವಿ ಬೃಹತ್ ಉದ್ಯೋಗ ಮೇಳದ ಕುರಿತು ಮಾತನಾಡಿ, ಯುವಜನಾಂಗಕ್ಕೆ ಉದ್ಯೋಗವನ್ನು ಕಲ್ಪಿಸಲು ನಮ್ಮ ಉದ್ಯೋಗ ವಿನಿಮಯ ಕೇಂದ್ರವು ಸತತವಾಗಿ ಪ್ರಯತ್ನಿಸುತ್ತಿದೆ. ಜೊತೆಗೆ ಇಂತಹ ಮೇಳವನ್ನು ಆಯೋಜಿಸಿದಾಗ ಯುವಜನತೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಂ. ಜಿ. ಹೆಗಡೆ ಅವರು ಈ ಕಾಲೇಜಿನಲ್ಲಿ ಇಂಥ ಬೃಹತ್ ಉದ್ಯೋಗ ಮೇಳ ಆಯೋಜಿಸಿದುದು ಇದೇ ಮೊದಲು. ಕುಲಪತಿಗಳ ಸಹಕಾರದಿಂದ ಇದು ಸಾಧ್ಯವಾಯಿತು. ವಿದ್ಯಾರ್ಥಿಗಳು ಕಾಣುವ ಕನಸು ನಿಮ್ಮ ಶಕ್ತಿ ಮೀರಿದಂತಿಬೇಕು. ಆಗ ಅದಕ್ಕೆ ಬೇಕಾದಂತ ಇನ್ಪುಟ್ಸ್ ತನ್ನಿಂದ ತಾನೇ ಬರುತ್ತದೆ. ನಮ್ಮ ಜ್ಞಾನಕ್ಕೆ ಮತ್ತು ನಾವು ಮಾಡುವ ಉದ್ಯೋಗಕ್ಕೆ ಮಿತಿಯನ್ನು ನಾವು ಹಾಕಿಕೊಳ್ಳಬಾರದು. ಅವೆರಡೂ ಚಲನಶೀಲತೆಯಿಂದ ಕೂಡಿರಬೇಕು. ಈ ಉದ್ಯೋಗ ಮೇಳದಲ್ಲಿ ನೂರಾರು ವಿದ್ಯಾರ್ಥಿಗಳು ಉದ್ಯೋಗವನ್ನು ಪಡೆದಿದ್ದೀರಿ. ಆದರೆ ಅಲ್ಲಿಯೆ ಸ್ಥಗಿತವಾಗದೇ ನಿಮ್ಮ ಜ್ಞಾನ ವಿಕಾಸದೊಂದಿಗೆ ಮುಂದೆ ಉನ್ನತ ಹುದ್ದೆಗಳನ್ನು ಪಡೆದುಕೊಳ್ಳಿ. ಆ ಮೂಲಕ ನಿಮ್ಮ ಪಾಲಕರಿಗೂ ನಿಮ್ಮ ಶಿಕ್ಷಣ ಸಂಸ್ಥೆಗಳಿಗೂ ಗೌರವ ತನ್ನಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಉದ್ಯೋಗ ಮೇಳದಲ್ಲಿ ಒಟ್ಟೂ 38 ಕಂಪನಿಗಳು ಭಾಗಿಯಾಗಿದ್ದವು, 1454 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದರು. 449 ಅಭ್ಯರ್ಥಿಗಳ ತಾತ್ಕಾಲಿಕ ಪಟ್ಟಿ ಸಿದ್ಧಪಡಿಸಿದರು, 43 ಅಭ್ಯರ್ಥಿಗಳಿಗೆ ಕೆಲಸಕ್ಕೆ ಹಾಜರಾಗಲು ಸ್ಥಳದಲ್ಲಿಯೇ ಆದೇಶ ಪ್ರತಿ ನೀಡಿದರು.
ಮಹಾವಿದ್ಯಾಲಯದ ಉದ್ಯೋಗ ಕೋಶದ ಸಂಯೋಜನಾಧಿಕಾರಿಯಾದ ಡಾ. ಮುಕುಂದ ಮುಂಡರಗಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಬಿಬಿಎ ವಿಭಾಗದ ಉಪನ್ಯಾಸಕರುಗಳಾದ ಶಿವಕುಮಾರ ಮೇಸ್ತ್ರಿ ಸ್ವಾಗತಿಸಿದರು, ಮಲ್ಲಸರ್ಜಿ ವಂದಿಸಿದರು, ಡಾ. ನಮಿತಾ ಪೋತರಾಜ ನಿರೂಪಿಸಿದರು.
28th April 2025
ಪರಿಸರಸ್ನೇಹಿ ನೀತಿಗಳು ಭೂಗ್ರಹವನ್ನು ಉಳಿಸುತ್ತದೆ: ಡಾ. ಸುನಂದಾ ಕಿತ್ಲಿ
ಬೆಳಗಾವಿ:ಜೀವಿಸಲು ಯೋಗ್ಯವಾದ ಏಕೈಕ ಗ್ರಹ ಭೂಮಿ. ಆದರೆ, ಮಾನವನ ವೈಭವೋಪೇತ ಜೀವನ ಮತ್ತು ದುರಾಸೆಯಿಂದಾಗಿ ಈ ಗ್ರಹದಲ್ಲಿ ಇಂದು ವಾಸಿಸುವುದು ದುಸ್ತರವಾಗಿದೆ ಎಂದು ರಾಣಿ ಪಾರ್ವತಿ ದೇವಿ ಮಹಾವಿದ್ಯಾಲಯದ ಸಹ
ಪ್ರಾಧ್ಯಾಪಕರಾದ ಡಾ. ಸುನಂದಾ ಕಿತ್ಲಿ ಕಳವಳ ವ್ಯಕ್ತಪಡಿಸಿದರು.
ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಭೂಗೋಳಶಾಸ್ತ್ರ ವಿಭಾಗವು ವಿಶ್ವ ಭೂಮಿ ದಿನದ ಅಂಗವಾಗಿ " ನೂತನ
ಸಹಸ್ರಮಾನದಲ್ಲಿನ ಜಾಗತಿಕ ಸವಾಲುಗಳು ಮತ್ತು ಹವಾಮಾನ ಬದಲಾವಣೆ " ಶೀರ್ಷಿಕೆಯಡಿಯಲ್ಲಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಶನಿವಾರದಂದು ಹಮ್ಮಿಕೊಳ್ಳಲಾದ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು.
ಮಾನವನು ಪರಿಸರದ ಮೇಲೆ ನಡೆಸುತ್ತಿರುವ ಅತಿಯಾದ ಆಕ್ರಮಣವು ಭೂಗ್ರಹಕ್ಕೆ ಗಂಡಾಂತರ ತಂದಿದೆ. ನೂತನ ಸಹಸ್ರಮಾನದಲ್ಲಿನ ಅನೇಕ ಜಾಗತಿಕ ಸವಾಲುಗಳ ಪರಿಣಾಮವಾಗಿ ಜಾಗತಿಕ
ತಾಪಮಾನದ ಏರಿಕೆ, ಜೀವವೈವಿಧ್ಯತೆಯ ನಾಶ ಹಾಗೂ ಸಂಪನ್ಮೂಲಗಳ ಕೊರತೆ ಉಂಟಾಗಿದೆ. ಇದನ್ನು ನಿಭಾಯಿಸಲು ಸುಸ್ಥಿರ ಅಭಿವೃದ್ಧಿ, ನವೀಕರಿಸಬಹುದಾದ ಶಕ್ತಿಯ ಬಳಕೆ ಹಾಗೂ ಪರಿಸರ ಸ್ನೇಹಿ ನೀತಿಗಳ ಅನುಷ್ಠಾನ ಅತ್ಯಗತ್ಯವಾಗಿದೆ.ಇದರ ಕುರಿತು ಬಹು ದೊಡ್ಡ ಜಾಗೃತಿ ಮೂಡಬೇಕಾದ ಅಗತ್ಯವಿದೆ. ಭವಿಷ್ಯದ ಪೀಳಿಗೆಗಾಗಿ ಸುರಕ್ಷಿತ ಮತ್ತು ಸಮೃದ್ಧ ಜಗತ್ತನ್ನು ನೀಡುವುದು ನಮ್ಮೆಲ್ಲರ ನೈತಿಕ ಹೊಣೆಗಾರಿಕೆಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಎಂ. ಜಿ. ಹೆಗಡೆ ಅವರು 21ನೇ ಶತಮಾನದಲ್ಲಿ ಮಾನವಕುಲವು ಎದುರಿಸುತ್ತಿರುವ ಅತ್ಯಂತ ಗಂಭಿರವಾದ ಸಮಸ್ಯೆ ಎಂದರೆ ಅದು ಹವಾಮಾನ ಬದಲಾವಣೆ. ಮನುಕುಲದ ಅಳಿವು ಉಳಿವು ಇದರಲ್ಲಿ ಅಡಗಿದೆ. ಮಾನವನು ತನ್ನ ಮನೋಸ್ಥಿತಿಯನ್ನು ಬದಲಾಯಿಸಿಕೊಂಡು ಪರಿಸರಕ್ಕೆ ಪೂರಕವಾಗಿ ಬದುಕಬೇಕು. ಇಲ್ಲವಾದಲ್ಲಿ ಮುಂದೊಂದು ದಿನ ಈ ಭೂಮಿಯನ್ನೇ ಕಳೆದುಕೊಳ್ಳುತ್ತೇವೆ. ಇದಕ್ಕಾಗಿ ಸುಸ್ಥಿರ ನಿರ್ವಹಣೆಯ ಅಗತ್ಯವಿದೆ. ಭೂಮಿಯ ರಕ್ಷಣೆಯ ಕುರಿತು ಜಾಗೃತಿ ಮೂಡಿಸಲು ಹಮ್ಮಿಕೊಳ್ಳಲಾಗಿರುವ ಉಪನ್ಯಾಸ, ಕಾರ್ಯಕ್ರಮಗಳು ಕೇವಲ ಒಂದು ಭಾಗವಷ್ಟೇ ಹೊರತು, ಅದೇ ಅಂತಿಮವಲ್ಲ. ಹೀಗಾಗಿ ಅದನ್ನು ಕಾರ್ಯರೂಪಕ್ಕೆ ತರುವುದು ಮಹತ್ವದ್ದಾಗಿದೆ ಎಂದರು.
ಭೂಗೋಳಶಾಸ್ತ್ರದ ಮುಖ್ಯಸ್ಥರಾದ ಡಾ. ದೀಪಿಕಾ ದೇವರಮನಿ ಪ್ರಸ್ತಾವಿಕ ನುಡಿಗಳನ್ನಾಡಿದರು.
ವಿದ್ಯಾರ್ಥಿನಿಯರಾದ ಜ್ಯೋತಿ ದುರ್ಗಿ ಪ್ರಾರ್ಥಿಸಿದರು, ಲಕ್ಷ್ಮೀ ಕೊಳ್ಳಿ ಸ್ವಾಗತಿಸಿದರು, ಪೂಜಾ ಮಾದಿಗರ ವಂದಿಸಿದರು, ಲಕ್ಷ್ಮೀ ಸಿದ್ದಾಪುರ ನಿರೂಪಿಸಿದರು. ಡಾ. ಅರುಣ ಒಡ್ಡಿನ್ ಪರಿಚಯಿಸಿದರು. ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
15th April 2025
ಸಂವಿಧಾನ ಆಶಯಕ್ಕೆ ಧಕ್ಕೆ ಬಾರದಿರಲಿ : ಪ್ರೊ. ವಿಜಯ ನಾಗಣ್ಣವರ
ಬೆಳಗಾವಿ : ಪ್ರತಿಯೊಂದು ದೇಶದ ಸಂವಿಧಾನ ಆ ದೇಶವನ್ನು ನಡೆಸಲು ಇರುವ ಕಾನೂನಿನ ಪುಸ್ತಕವಷ್ಟೇ. ಆದರೆ ಭಾರತದ ಸಂವಿಧಾನ ನಮ್ಮ ಭವಿತವ್ಯದ, ಬದುಕಿನ ಪುಸ್ತಕ. ಅದರ ಆಶಯಕ್ಕೆ ಧಕ್ಕೆ ಬಾರದಿರಲಿ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಇಂಗ್ಲೀಷ್ ವಿಭಾಗದ ಪ್ರೊ. ವಿಜಯ ನಾಗಣ್ಣವರ ಅಭಿಪ್ರಾಯಪಟ್ಟರು.
ಎ. 14ರಂದು ನಗರದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಸಮಾಜವಿಜ್ಞಾನ ವಿಭಾಗಗಳು ಮತ್ತು ಸಂವಿಧಾನ ಓದು ಅಭಿಯಾನ- ಕರ್ನಾಟಕ, ಬೆಂಗಳೂರು ಇವರ ಸಹಯೋಗದಲ್ಲಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆದ ಎರಡು ದಿನಗಳ ರಾಜ್ಯ ಮಟ್ಟದ ಸಂವಿಧಾನ ಓದು ಅಧ್ಯಯನ ಶಿಬಿರದ ಸಮಾರೋಪ ಮತ್ತು ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಜಯಂತಿಯ ಸಮಾರಂಭದಲ್ಲಿ ಮಾತನಾಡಿದರು.
ಅಂಬೇಡ್ಕರ್ ಅವರ ಪರಿಶ್ರಮದಿಂದ ಈ ದೇಶಕ್ಕೆ ಅತ್ಯುತ್ತಮ ಸಂವಿಧಾನ ಸಿಕ್ಕಿದೆ. ಈ ಸಂವಿಧಾನಕ್ಕೆ ಸಾವಿರಾರು ವರ್ಷಗಳ ಭವಿಷ್ಯವಿದೆ. ಹಿಂದೆ ಧರ್ಮ ಗ್ರಂಥಗಳು ಸಮಾಜವನ್ನು ನಿಯಂತ್ರಣ ಮಾಡುತ್ತಿದ್ದವು. ಇಂದು ಸಂವಿಧಾನ ಸಮಾಜವನ್ನು ಮನ್ನಡೆಸುತ್ತಿದೆ. ಅಂಬೇಡ್ಕರ್ ಅವರ ಆಶಯಗಳನ್ನು ಸಂಪೂರ್ಣವಾಗಿ ಅನುಷ್ಠಾನಕ್ಕೆ ತರುವಲ್ಲಿ ನಾವೆಲ್ಲರೂ ಕಂಕಣ ಬದ್ಧರಾಗಬೇಕು. ಬುರ್ಕಾ ಸಂಸ್ಕೃತಿ ಕೇವಲ ಒಂದೇ ಧರ್ಮದಲ್ಲಿ ಇಲ್ಲ. ಈಗಲೂ ಕೂಡ ಬೇರೆ ಬೇರೆ ಧರ್ಮದವರು ರಾಜಸ್ಥಾನ, ಉತ್ತರ ಪ್ರದೇಶಗಳಲ್ಲಿ ಧರಿಸುತ್ತಾರೆ. ವಸ್ತ್ರ, ಆಹಾರ ಅವರವರಿಗೆ ಬಿಟ್ಟದ್ದು. ಸರ್ವಜನಾಂಗದ ಶಾಂತಿಯ ತೋಟವಾದ ಈ ಭಾರತವು ಸಂವಿಧಾನದ ನೆರಳಿನಲ್ಲಿ ಹೀಗೆಯೇ ಮುಂದೆ ಸಾಗಬೇಕು. ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯದ ರಥ ಎಂದಿಗೂ ಹಿಂದಕ್ಕೆ ಹೋಗದಂತೆ ನೋಡಿಕೊಳ್ಳಬೇಕು ಎಂದರು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪ್ರೊ. ಎಂ. ಜಿ. ಹೆಗಡೆ ಅವರು ಮಾತನಾಡುತ್ತಾ, ಚರಿತ್ರೆಯ ಬೇರುಗಳನ್ನು ಅಧ್ಯಯನ ಮಾಡಿದ ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಅದನ್ನು ಸರಿಪಡಿಸಿ ಅದಕ್ಕೆ ಹೊಸ ಕಾಯಕಲ್ಪ ನೀಡಿದರು. ಇದಕ್ಕಾಗಿ ಜೀವನ ಪರ್ಯಂತ ಹೋರಾಡಿದರು. ಅವರು ಹುಟ್ಟು ಹಾಕಿದ ಹೋರಾಟದ ದೀಪವನ್ನು ಆರದಂತೆ ನೋಡಿಕೊಳ್ಳಬೇಕು. ನಿಜದ ಸುದ್ದಿಗಿಂತ ಸುಳ್ಳಿನ ಸುದ್ದಿಯೇ ಸಮಾಜದಲ್ಲಿ ಪ್ರಾಮುಖ್ಯತೆ ಪಡೆಯುತ್ತಿದೆ. ಇದರ ಹಿಂದೆ ಪ್ರಭುತ್ವವಿದೆ. ಇಂದಿನ ರಾಜಕೀಯ ವ್ಯವಸ್ಥೆ ಧರ್ಮದೊಂದಿಗೆ ಅಪವಿತ್ರ ಮೈತ್ರಿ ಮಾಡಿಕೊಂಡು ವ್ಯವಸ್ಥೆಯನ್ನು ದಾರಿ ತಪ್ಪಿಸುತ್ತಿದೆ. ವರ್ತಮಾನದಲ್ಲಿ ಅಂಬೇಡ್ಕರ್ ಮತ್ತು ಸಂವಿಧಾನವೇ ನಮಗೆ ದಾರಿದೀಪ ಎಂದರು.
ಶಿಬಿರದ ಮೊದಲ ದಿನ ಸಂವಿಧಾನ ರಚನೆ ಮತ್ತು ಮೂಲತತ್ವಗಳು ಕುರಿತು ನಿವೃತ್ತ ನ್ಯಾಯಮೂರ್ತಿ ಎಚ್. ಎನ್. ನಾಗಮೋಹನದಾಸ್, ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಕುರಿತು ಡಾ. ಗೋವಿಂದಪ್ಪ ಪಾವಗಡ, ಸಂವಿಧಾನ ಮತ್ತು ಮಹಿಳೆ ವಿಷಯದ ಕುರಿತು ಶಾಂತಿ ನಾಗಲಾಪುರ ಹಾಗೂ ಎರಡನೇ ದಿನ ಸಂವಿಧಾನ ಮತ್ತು ಸಾಮಾಜಿಕ ನ್ಯಾಯದ ಕುರಿತು ಬಿ. ರಾಜಶೇಖರಮೂರ್ತಿ, ಸಂವಿಧಾನ ಮತ್ತು ಜಾತ್ಯತೀತತೆಯ ಕುರಿತು ಆರ್ ರಾಮಕೃಷ್ಣ ಉಪನ್ಯಾಸಗಳನ್ನು ನೀಡಿದರು.
ನ್ಯಾಯವಾದಿ ಅನಂತ ನಾಯ್ಕ ಶಿಬಿರದ ಕುರಿತು ಅನಿಸಿಕೆಯನ್ನು ಹಂಚಿಕೊಂಡರು.
ಡಾ. ಮಲ್ಲೇಶ ದೊಡ್ಡಲಕ್ಕಣ್ಣವರ ವಂದಿಸಿದರು. ಡಾ. ಪ್ರೀತಿ ಪಡದಪ್ಪಗೋಳ ನಿರೂಪಿಸಿದರು. ಮಹಾವಿದ್ಯಾಲಯದ ಬೋಧಕ- ಬೋಧಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಹಾಗೂ ವಿವಿಧ ಕಾಲೇಜಿನ ಬೋಧಕವರ್ಗ, ರಾಚವಿ ಸಿಬ್ಬಂದಿಗಳು ಉಪಸ್ಥಿತರಿದ್ದರು.