Skip to main content
SUDINA

ಮಹಿಳೆಯರ ಪ್ರೋತ್ಸಾಹಕ್ಕಾಗಿ ವೇದಾಂತ ಫೌಂಡೇಶನ್ ನಿಂದ ಶ್ಲಾಘನೀಯ ಕಾರ್ಯ :ಬಿ. ಬಿ. ದೇಸಾಯಿ.

9th March 2025

ಮಹಿಳೆಯರ ಪ್ರೋತ್ಸಾಹಕ್ಕಾಗಿ ವೇದಾಂತ ಫೌಂಡೇಶನ್ ನಿಂದ ಶ್ಲಾಘನೀಯ ಕಾರ್ಯ :ಬಿ. ಬಿ. ದೇಸಾಯಿ. image


ಬೆಳಗಾವಿ - ವಿವಿಧ ಸ್ಪರ್ಧೆಗಳ ವಿಜೇತರೊಂದಿಗೆ ಸತೀಶ ಪಾಟೀಲ್, ಬಿ. ಬಿ. ದೇಸಾಯಿ, ರವಿ ತರಳೆ, ವಿಜಯ ನಂದಿಹಳ್ಳಿ, ಜಿ. ಬಿ. ಪಾಟೀಲ್ ಮತ್ತಿತರರು.

............................


ಮಹಿಳೆಯರ ಪ್ರೋತ್ಸಾಹಕ್ಕಾಗಿ ವೇದಾಂತ ಫೌಂಡೇಶನ್ ನಿಂದ ಶ್ಲಾಘನೀಯ ಕಾರ್ಯ :ಬಿ. ಬಿ. ದೇಸಾಯಿ.

ಮಹಿಳಾ ದಿನಾಚರಣೆಯ ನಿಮಿತ್ತ ವಿವಿಧ ಸ್ಪರ್ಧೆಗಳ ಆಯೋಜನೆ.


ಬೆಳಗಾವಿ. ದಿ. 8.3.2025.:ಮಹಿಳೆ ಇಂದು ಅಬಲೆಯಲ್ಲ, ಸಬಲೆಯಾಗಿದ್ದಾಳೆ. ಆದುದರಿಂದ ಇಂದು ವಿವಿಧ ಕ್ಷೇತ್ರಗಳಲ್ಲಿ ಪುರುಷರಿಗೆ ಸಮವಾಗಿ ಸಕ್ಷಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾಳೆ. ಅಂತಹ ಮಹಿಳೆಯರಿಗೆ ಪ್ರೋತ್ಸಾಹ ನೀಡಲು ವೇದಾಂತ ಫೌಂಡೇಶನ್ ಕೈಗೊಂಡಿರುವ ಕಾರ್ಯವು ಶ್ಲಾಘನೀಯವಾಗಿದೆ ಎಂದು ನಿವೃತ್ತ ಮುಖ್ಯಅಧ್ಯಾಪಕರಾದ ಶ್ರೀ ಬಿ. ಬಿ. ದೇಸಾಯಿ ಯವರು ವೇದಾಂತ ಫೌಂಡೇಶನ್ ನಿಂದ ಆಯೋಜಿಸಲ್ಪಟ್ಟ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.

  ಮಹಿಳಾ ದಿನಾಚರಣೆಯ ಪ್ರಯುಕ್ತ ಮಹಿಳೆಯರಿಗಾಗಿ ವೇಷಭೂಷಣ, ಮೆಹಂದಿ, ರಂಗೋಲಿ, 100ಮೀ. ಓಟ, ಪೊಟಾಟೋ ರೇಸ್, ಬೆಂಕಿಯಿಲ್ಲದೇ ಅಡಿಗೆ ತಯಾರಿಸುವುದು ಮುಂತಾದ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸ್ಪರ್ಧೆಗಳ ಉದ್ಘಾಟನೆಯಾದ ನಂತರ ಮಾತನಾಡುತ್ತ ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಬೆಳೆಸಬೇಕು ಎಂದು ಅಭಿಪ್ರಾಯ ಪಟ್ಟರು. ವಿಶ್ವ ಭಾರತ ಸೇವಾ ಸಮಿತಿಯ ಅಧ್ಯಕ್ಷ ಶ್ರೀ ವಿಜಯ ನಂದಿಹಳ್ಳಿ ಯವರು ಮಹಿಳೆಯರ ಸಕ್ಷಮತೆಗಾಗಿ ಸರಕಾರದಿಂದ ಜಾರಿಯಾಗಿರುವ ಯೋಜನೆಗಳ ಮಾಹಿತಿಯನ್ನು ತಿಳಿಸಿ ಅವುಗಳ ಪ್ರಯೋಜನ ಪಡೆಯಲು ತಿಳಿಸಿದರು. ಶ್ರೀಮತಿ ಲಲಿತ ಮೋಹನ ರೆಡ್ಡಿ, ಗಣಪತ್ ಪಾಟೀಲ್ ರವರು ಮಾರ್ಗದರ್ಶನ ಮಾಡಿದರು.

  ವೇದಾಂತ ಫೌಂಡೇಶನ್ ನ ಸಂಸ್ಥಾಪಕರಾದ ಶ್ರೀ ಸತೀಶ ಪಾಟೀಲ್ ರವರು ಪ್ರಾಸ್ತವಿಕ ಮಾತುಗಳನ್ನಾಡಿದರು. ಸಂಘಟನೆಯ ಅಧ್ಯಕ್ಷರಾದ ಶ್ರೀಮತಿ ಸವಿತಾ ಚಂದಗಡಕರ ಅವರ ಸ್ವಾಗತ ಭಾಷಣದ ನಂತರ ಲಲಿತಾ ರೆಡ್ಡಿ ಶ್ರೀಕಾಂತ ಅಜಗಾವಕರ, ರವೀಂದ್ರ ಹರಗುಡೆ ಯವರು ಸ್ಪರ್ಧೆಗಳ ಉದ್ಘಾಟನೆ ಮಾಡಿದರು.

  ಶ್ರೀಮತಿ ಜಯಶ್ರೀ ಪಾಟೀಲ್ ಕಾರ್ಯಕ್ರಮ ನಿರೂಪಣೆ ಮಾಡಿದರು, ಎನ್. ಡಿ. ಮಾದಾರ್ ರವರು ವಂದನಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಜಿ. ಬಿ. ಪಾಟೀಲ್, ಮನೋಹರ್ ಬೆಳಗಾವಕರ್,, ಯುವರಾಜ ರತ್ನಾಕರ್ ಮೊದಲಾದ ಪ್ರಮುಖರು ಉಪಸ್ಥಿತರಿದ್ದರು. ರವಿ ಗುರವ್, ಉಮೇಶ್ ಬೆಳಗುಂದಕರ, ಅರ್ಜುನ ಭೇಕಣೆ ಮತ್ತು ಪ್ರವೀಣ್ ಪಾಟೀಲ್ ರವರು ಸ್ಪರ್ಧೆಗಳ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು.


 ವಿವಿಧ ಸ್ಪರ್ಧೆಗಳ ವಿಜೇತರು :

ವೇಷಭೂಷಣ 

1.ಶ್ವೇತಾ ಕೋಲಾರ್ (ಪ್ರ )

2.ಪ್ರಿಯಾಂಕ ಚೌಗುಲೆ (ದ್ವಿ )

3.ಗೌತಮಿ ದೇಶಪಾಂಡೆ (ತೃ )


ಮೆಹಂದಿ 

1.ಪ್ರನೀತಾ ಧಬಾಲೆ (ಪ್ರ )

2.ವೃಶಾಲಿ ಸುತಾರ್ (ದ್ವಿ )

3.ವರ್ಷಾ ಪಾಟೀಲ್ (ತೃ )


ರಂಗೋಲಿ 

1.ಸೋನಾಲಿ ಚೌಗುಲೆ (ಪ್ರ )

2.ಮೇಘಾ ಛೋಡಕೆ (ದ್ವಿ )

3.ವೈಶಾಲಿ ದೊಡಮನಿ (ತೃ )


100ಮೀ ಓಟ 

1.ಅನುರಾಧಾ ಮಡಿವಾಳ (ಪ್ರ )

2.ಪ್ರಜ್ಞಾ ಪಾಟೀಲ್ (ದ್ವಿ )

3.ಅಶ್ವಿನಿ ಶ್ರೀನಿವಾಸ (ತೃ )


ಪೊಟಾಟೋ ರೇಸ್ 

1.ಶೃತಿ ಕೋಲಾರ್ (ಪ್ರ )

2.ಅಶ್ವಿನಿ ಶ್ರೀನಿವಾಸ (ದ್ವಿ )

3.ದಿವ್ಯಾ ಎನಬೇರ (ತೃ )


ಬೆಂಕಿಯಿಲ್ಲದೇ ಅಡಿಗೆ ಮಾಡುವುದು 

1.ರೇಣುಕಾ ಕಂಗ್ರಾಳಕರ್ (ಪ್ರ )

2.ಸೋನಿಯಾ ಪಾಟೀಲ್ (ದ್ವಿ )

3.ಚಂದಾ ಪಾಟೀಲ್ (ತೃ )


ಸಂಗೀತ ಖುರ್ಚಿ 

1.ಸೋನಾಲಿ ಮಾಯನ್ನಾಚೆ (ಪ್ರ )

2.ರೇಣುಕಾ ಕಂಗ್ರಾಳಕರ (ದ್ವಿ )

3.ಪ್ರಜ್ಞಾ ಪಾಟೀಲ್ (ತೃ )

Comments
Show comments
ಸಂಬಂಧಿತ ಲೇಖನಗಳು
SAMARTHAVANIಸಮರ್ಥವಾಣಿ
23rd July 2026

ಪ್ರಧಾನ ಜಿಲ್ಲಾ ನ್ಯಾಯಾಧೀಶ ಸಿ.ಚಂದ್ರಶೇಖರ ವರ್ಗಾವಣೆ- ಕೊಪ್ಪಳ ನ್ಯಾಯಾಲಯಕ್ಕೆ ಲತಾಕುಮಾರಿ.ಎಂ ನಿಯೋಜನೆ

SAMARTHAVANIಸಮರ್ಥವಾಣಿ
16th July 2026

ಡಾ.ಈಶ್ವರ ಸವಡಿಗೆ ಕೊಪ್ಪಳ DHO ಮುಂಬಡ್ತಿ

HOSAADHYAYAಹೊಸಅಧ್ಯಾಯ
12th July 2026

ಬಳ್ಳಾರಿ ಸಮೃದ್ಧಿ ಫೌಂಡೇಶನ್ ಉದ್ಘಾಟನೆ; ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ವಂಚಿತ ಸಮುದಾಯಗಳ ಸಬಲೀಕರಣಕ್ಕೆ ಸಂಕಲ್ಪ

HOSAADHYAYAಹೊಸಅಧ್ಯಾಯ
11th July 2026

ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎಸ್‌ಐಆರ್ ಕುರಿತು ವಿದ್ಯಾರ್ಥಿನಿಯರಿಗೆ ಜಾಗೃತಿ ಕಾರ್ಯಕ್ರಮ

HOSAADHYAYAಹೊಸಅಧ್ಯಾಯ
10th July 2026

ತಾಳ್ಯ ಗ್ರಾಮ ಪಂಚಾಯಿತಿಯಲ್ಲಿ ಎಸ್‌ಐಆರ್ ಜಾಗೃತಿ ಅಭಿಯಾನಕ್ಕೆ ಚಾಲನೆ

HOSAADHYAYAಹೊಸಅಧ್ಯಾಯ
7th July 2026

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ-2026ಕ್ಕೆ ಚಾಲನೆ

ಪ್ರಕಾಶಕರು