9th March 2025
ಬೆಳಗಾವಿ:- ೯-೩-೨೪ ಲಿಂಗಾಯತ ಸ೦ಘಟನೆ ವಾರದ ಪ್ರಾಥ೯ನೆ ವಚನ ಪಿತಾಮಹ ಡಾ.ಪ.ಗು.ಹಳಕಟ್ಟಿ ಭವನದಲ್ಲಿ ಪ್ರಾಣಾಯಾಮದ ಸದುಪಯೋಗಪಡಿಸಿಕೊಳ್ಳಿ ಯೋಗಾ ಗುರುಗಳಾದ ಸಿದ್ದಪ್ಪ ಸಾರಪುರಿ. ಪ್ರಾಣಾಯಾಮದಿಂದ ರಕ್ತ ಪರಿಚಲಣೆ ಸುಧಾರಣೆ ಆಗುತ್ತದೆ. ಹಾಗೂ ರಕ್ತದಲ್ಲಿ ಆಮ್ಲಜನಿಕ ಮಟ್ಟ ಹೆಚ್ಚಾಗುತ್ತದೆ. ಹೃದಯರಕ್ತನಾಳಗಳು ಬಲಗೊಂಡು ಆರೋಗ್ಯ ವೃದ್ಧಿಯಾಗುತ್ತದೆ. ಅಧಿಕರಕ್ತದೊತ್ತಡ ನಿಯಂತ್ರಣವಾಗುತ್ತದೆ. ಪ್ರಾಣಾಯಾಮ ಎಂದರೆ ಉಸಿರಾಟದ ನಿಯಂತ್ರಣ ಎಂಬುದಾಗಿದೆ. ಕಪಾಲ್ ಭಾತಿ ಎರಡು ಮೂಗಿನ ಹೊಳೆಗಳಿಂದ ಗಾಳಿಯನ್ನು ಉಸಿರಾಡಿ ಸ್ವಲ್ಪ ಶಕ್ತಿಯುತ ಕ್ರಿಯೆಯೊಂದಿಗೆ ಗಾಳಿಯನ್ನು ಬಿಡಿಸಿ ಮತ್ತೆಮತ್ತೆಉಸಿರಾಡಿ ದೇಹದಿಂದ ಹೊರಬರುವ ಗಾಳಿಯನ್ನು ಅನುಭವಿಸಲು ನಿಮ್ಮ ಕೆಲ ಹೊಟ್ಟೆಯ ಮೇಲೆ ನಿಮ್ಮ ಕೈಯನ್ನು ಹಾಕಬಹುದು. ಕಪಾಲ್ ಎಂದರೆ ತಲೆಬುರುಡೆ ಮತ್ತು ಭಾತಿ ಎಂದರೆ ಹೊಳೆಯುವುದು ಅಥವಾ ಪ್ರಕಾಶಮಾನ ವಾಗುವುದು. ಈ ಅಭ್ಯಾಸವು ಮುಂಭಾಗದ ಮೆದುಳನ್ನು ಶುದ್ಧೀಕರಿಸಲು ಮತ್ತು ಆಲೋಚನೆಯ ಸ್ಪಷ್ಟತೆಯನ್ನು ತರಲು ವಿನ್ಯಾಸಗೊಳಿಸಲಾಗಿದೆ. ನಿರ್ವಿಶೀಕರಣ ಉಸಿರಾಟದ ಕಾರ್ಯವನ್ನು ಸುಧಾರಿಸುತ್ತದೆ. ಜೀರ್ಣಕ್ರಿಯೆಗೆ ಸಹಾಯಮಾಡುತ್ತದೆ. ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ ರಕ್ತ ಪರಿಚಲನೆ ಹೆಚ್ಚಿಸುತ್ತದೆ.. ಮುಖ್ಯಅತಿಥಿಗಳಾಗಿ ಮನೋಹರ ಪುಡಕಲಕಟ್ಟಿ ಆಗಮಿಸಿದ್ದರು, ದಾಸೋಹ ಸೇವೆ ಶಿವಕುಮಾರ ಅರಳಿ ಸೇವೆಗೈದರು. ಮಹಾದೇವಿ ಅರಳಿ ಅವರು ಪ್ರಾರ್ಥನೆ ನಡೆಸಿ ಕೊಟ್ಟರು .ಆರಂಭದಲ್ಲಿ ಬಸವರಾಜ ಬಿಜ್ಜರಗಿ, ವಿ ಕೆ ಪಾಟೀಲ್, ಅಕ್ಕಮಹಾದೇವಿ ತೆಗ್ಗಿ ,ಬಿ ಪಿ ಜವಣಿ, ಅಕ್ಕಮಹಾದೇವಿ ಅರಳಿ, ವಚನ ವಿಶ್ಲೇಷಣೆ ಮಾಡಿದರು. ಸಂಗಮೇಶ ಅರಳಿ ಅವರು ಕಾಯ೯ಕ್ರಮ ನಡಿಸಿಕೊಟ್ಟರು.ರಮೇಶ ಕಳಸಣ್ಣವರ, ಸತೀಶ ಪಾಟೀಲ,ಸದಾಶಿವ ದೇವರಮನಿ, ಶಶಿಭೂಷಣ ಪಾಟೀಲ,ವಿಜಯ ಹುದಲಿಮಠ,ಸುನೀಲ ಸಾಣಿಕೊಪ್ಪ, ಮಾತನಾಡಿದರು.ಸೋಮಶೇಖರ ಕಟ್ಟಿ, ಶಿವಾನಂದ ನಾಯಕ,ಅನೀಲ ರಘಶೆಟ್ಟಿ,ಬಸವರಾಜ ಮತ್ತಿಕಟ್ಟಿ ವಿರುಪಾಕ್ಷಿ ದೊಡ್ಡಮನಿ ,ಜ್ಯೋತಿಬಾದಾಮಿ, ಸುಜಾತ ಮತ್ತಿಕಟ್ಟಿ , ಸುದೀಪ್ ಪಾಟೀಲ್ ,ಮಂಹಾತೇಶ್ ಮೆಣಸಿನಕಾಯಿ, ಶೇಖರ ವಾಲಿಇಟಗಿ,ಬಾಬಣ್ಣ ತಿಗಡಿ, ಗಂಗಪ್ಪಉಣಕಲ, ಶರಣ ಶರಣೆಯರು ಉಪಸ್ಥಿತರಿದ್ದರು
undefined