6th April 2025

ಭಕ್ತರ ಮನೋಭಿಲಾಷೆ ಈಡೇರಿಸುವ ಶ್ರೀ ಕಾರ್ಯಸಿದ್ಧಿ ಆಂಜನೇಯ.
ಬೆಳಗಾವಿ ರಾಮತೀರ್ಥನಗರದಲ್ಲಿರುವ ಶ್ರೀ ಕಾರ್ಯಸಿದ್ಧಿ ಆಂಜನೇಯ ದೇವಸ್ಥಾನ ಅಸಂಖ್ಯಾತ ಭಕ್ತರ ಮನೋಭಿಲಾಷೆ ಈಡೇರಿಸುವ ಶಕ್ತಿದೇವ ಎನ್ನುವದಕ್ಕೆ ದೂರದ ಮಹಾರಾಷ್ಟ್ರ ಗೋವಾ ಆಂಧ್ರ ರಾಜ್ಯಗಳಿಂದ ಬರುವ ಭಕ್ತರೇ ಸಾಕ್ಷಿ ಎಣಿಸಿದ್ದು, ನಂಬಿ ಶುದ್ಧ ಮನಸ್ಸಿನಿಂದ ಸಂಕಲ್ಪ ಮಾಡಿ ,ಹರಕೆ ಫಲ ಕಟ್ಟಿ ತಮ್ಮ ಮನೋಭಿಲಾಷೆ ಈಡೇರಿಸಿಕೊಂಡ ಸುಮಾರು ಭಕ್ತರನ್ನು ಇಲ್ಲಿ ಕಾಣಬಹುದಾಗಿದೆ. ಬೆಳಗಾವಿ ಕೇಂದ್ರ ಬಸ್ಸು ನಿಲ್ದಾಣದಿಂದ ಕಣಬರ್ಗಿ ರಸ್ತೆಯ ರಾಮತೀರ್ಥನಗರದ ೧ ನೇ ಹಂತದ ಮುಖ್ಯ ರಸ್ತೆಯಲ್ಲಿರುವ ಈ ದೇವಸ್ಥಾನಕ್ಕೆ ಬರ ಹೋಗಲು ಸಿಬಿಟಿ ಯಿಂದ ಕಣಬರ್ಗಿ, ಮುಚ್ಚಂಡಿ, ಖನಗಾಂವ, ಸುಳಿಭಾವಿ ಬಸ್ಸುಗಳ ಮೂಲಕ ಬರಬಹುದಾಗಿದೆ. ಈ ದೇವಸ್ಥಾನ ಕರಾವಳಿ ಮಾದರಿಯಲ್ಲಿ ಕಬ್ಬಿಣದ ಸರಳುಗಳನ್ನು ಬಳಸಿದ್ದು, ಸುತ್ತಲೂ ಗಾಜಿನ ಚೌಕಟ್ಟುಗಳಿವೆಯಲ್ಲದೆ, ಕೆಂಪು ಹಂಚಿನ ಮೆಲ್ಹೊದಿಕೆ ಇದೆ. ಅತ್ಯಂತ ಆಕರ್ಷಕವಾಗಿ ಕಾಣುವ ಈ ಮಂದಿರ ಅಪಾರ ಸಂಖ್ಯೆಯ ಭಕ್ತರನ್ನೊಳಗೊಂಡಿದ್ದು ವಿಶೇಷ..
ಮಂದಿರದ ಮುಂದೆ ಹಸಿರು ಹಾಸು ಹುಲ್ಲು, ಸುತ್ತಲೂ ಆಸನಗಳು, ಗಿಡ ಮರಗಳು ಭಕ್ತರನ್ನು ಆಕರ್ಷಿಸಲು ಕಾರಣವೆನ್ನಬಹುದು. ಪ್ರತಿ ದಿನವೂ ಎರಡು ಬಾರಿ ಶ್ರೀ ಆಂಜನೇಯನಿಗೆ ಪೂಜೆ ನೆರವೇರುತ್ತದೆ. ಮಂಗಳವಾರ ಮತ್ತು ಶನಿವಾರ ವಿಶೇಷ ಪೂಜೆ ಜರುಗುತ್ತದೆ. ಶನಿವಾರ ನೂರಾರು ಭಕ್ತರಿಂದ ಹನುಮಾನ ಚಾಳೀಸಾ ಪಠನೆ, ಮತ್ತು ಮಹಾ ಪೂಜಾ ಜರುಗುತ್ತದೆ. ಆಂಜನೇಯನಿಗೆ
ಸಂಕಲ್ಪ ಮಾಡಿ ಕಾಯಿ ಕಟ್ಟಿ ೯ ವಾರ. ಸರಳ ವ್ರತ ಆಚರಿಸಿ ತಮ್ಮ ಮನೋಭಿಲಾಷೆ ಈಡೇರಿಸಿಕೊಂಡ ಸುಮಾರು ಭಕ್ತರು ಇತರ ಭಕ್ತರಿಗೆ ಸ್ಫೂರ್ತಿ ಎಣಿಸಿದ. ಏಕೈಕ ಮಂದಿರ ಇದಾಗಿದೆ. ಪೂಜಾ ವಿಧಿ,ವಿಧಾನಗಳಲ್ಲಿ ನುರಿತ ಮತ್ತು ವಿದ್ಯಾ ಪಾರಂಗತ ವೇದ ಮೂರ್ತಿ ಸಿದ್ದಬಸಯ್ಯಾ ಹಿರೇಮಠ ದೇವಸ್ಥಾನದ ಆರ್ಚಕರಾಗಿದ್ದು,
ಕಳೆದ ಐದು ವರ್ಷಗಳಿಂದ ರೂಪುಗೊಳ್ಳುತ್ತಿರುವ ಈ ಮಂದಿರ ವಿಶೇಷ ಮಾದರಿಯಾಗಬೇಕೆಂಬುದು ದೇವಸ್ಥಾನ ಕಮಿಟಿ ಅದ್ಯಕ್ಷ ಸುರೇಶ ಉರಬಿನಹಟ್ಟಿ ಅವರ ಬಲವಾದ ಇಚ್ಛೆ. ಮಂದಿರ ನಿರ್ಮಾಣ ಕಾರ್ಯ ಹಂತ,ಹಂತವಾಗಿ ರೂಪುಗೊಂಡಿದ್ದು, . ೯/೮ ಫೂಟು ಅಳತೆಯ ಸ್ಟೀಲನಿಂದ ನಿರ್ಮಿತ ಗರ್ಭ ಗುಡಿ ಇದ್ದು, ಕ್ರಷ್ಣ ಶಿಲೆಯಿಂದಾದ ಕೈ ಮುಗಿದು ಕುಳಿತ ಭಂಗಿಯ ಬಲು ಆಕರ್ಷಕ ಆಂಜನೇಯನ ಮೂರುತಿ ಇದೆ. ಸುಮಾರು ೨೪/೨೧/ ಫೂಟು ಅಳತೆಯ ಅಷ್ಟ ಭುಜಾಕ್ರತಿಯ ಆವರಣ ಮಂದಿರವಿದೆ. ಎಲ್ಲಕ್ಕೂ ಸೌಂದರ್ಯ ಇಮ್ಮಡಿಸಬಲ್ಲ ಆಕರ್ಷಕ ಗೋಪುರ ಕಳಸವಿದೆ. ಇಲ್ಲಿ ಸಂಕಲ್ಪ ಮಾಡಿಕೊಳ್ಳುವ ಭಕ್ತರು ಇಷ್ಟಾರ್ಥ ಸಿದ್ಧಿಗಾಗಿ ಶ್ರೀ ಕಾರ್ಯಸಿದ್ಧಿ ಆಂಜನೇಯ ಸ್ವಾಮಿಗೆ ೯ ಶನಿವಾರ ಹರಕೆ ವ್ರತ ಆಚರಿಸುವ ಪದ್ಧತಿ ಇದೆ. ತಮ್ಮ ವಿದ್ಯೆ, ಉದ್ಯೋಗ, ವ್ಯಾಪಾರ, ನೌಕರಿ, ವಿವಾಹ ಭಾಗ್ಯ, ಸಂತಾನ ಭಾಗ್ಯ, ಅರೋಗ್ಯ ಸೇರಿದಂತೆ ಇನ್ನಿತರ ಕಾರ್ಯ ಸಿದ್ಧಿಗಾಗಿ ಶ್ರದ್ಧಾ,ಭಕ್ತಿಯಿಂದ ಸ್ವಾಮಿಗೆ ಪೂರ್ಣ ಫಲ ವನ್ನು ದೇವಸ್ಥಾನದಲ್ಲಿ ಕಟ್ಟುತ್ತಾರೆ. ಈ ಕಾರ್ಯ ಸಿದ್ಧಿ ಆಂಜನೇಯ ಸ್ವಾಮಿಯಿಂದ ಆಶೀರ್ವದಿಸಲ್ಪಟ್ಟ ರಕ್ಷಾ ದಾರವನ್ನು ಕಟ್ಟಿಕೊಳ್ಳುವದರಿಂದ ಮತ್ತು ಸಿಂಧೂರ ವನ್ನು ಹಚ್ಚಿಕೊಳ್ಳುವದರಿಂದ ದ್ರಷ್ಟಿ ದೋಷ, ಧುಃ ಸ್ವಪ್ನ, ದುಷ್ಠ ಶಕ್ತಿ ನಿಗ್ರಹ ನಿವಾರಣೆಯಾಗುವದು ಎಂಬುದು ಇಲ್ಲಿಯ ಭಕ್ತರ ನಂಬಿಗೆಯಾಗಿದೆ. ಇಲ್ಲಿಶನಿವಾರ ಬರುವ ಭಕ್ತರಿಗೆ ಭಕ್ತ ದಾನಿಗಳಿಂದ ಪ್ರಸಾದ ವಿತರಿಸಲಾಗುತ್ತದೆ. ಬೆಳಗಿನ ಮತ್ತು ಸಂಜೆಯ ಪೂಜೆಯ ಸಮಯದಲ್ಲಿ ಇಲ್ಲಿ ಬಂದು ಮೌನ, ಧ್ಯಾನ, ಪ್ರಾರ್ಥನೆ ಸಲ್ಲಿಸಿದರೆ ಸಿಗುವ ಸಮಾಧಾನ, ಶಾಂತಿ ,ನೆಮ್ಮದಿ ಮನಸ್ಸಿನ ತಳ,ಮಳ ದೂರಾಗಿಸಿ ದೈವತ್ವ ತುಂಬಿಸಿ, ಮನಸ್ಸಿನ ಆನಂದಕ್ಕೆ ಮೇರೇಯೇ ಇಲ್ಲದಂತಾಗಿಸುವದು. ಇಲ್ಲಿಯ ವಿಶೇಷತೆ. ದೇವಸ್ಥಾನಕ್ಕೆ ಹೊಂದಿಕೊಂಡು ಗ್ರಂಥಾಲಯವಿದ್ದು ಓದುಗ ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ , ಹಿರಿಯರಿಗೆ, ವ್ರದ್ಧರಿಗೆ ಕುಳಿತು ಅಧ್ಯಯನ ಮಾಡಲು ಚಿಕ್ಕದಾದ ಕೋಣೆ ಇದ್ದು, ವ್ರತ ಪತ್ರಿಕೆಗಳು, ದಿನ ಪತ್ರಿಕೆಗಳು, ವಾರ ಪತ್ರಿಕೆಗಳು, ಮಾಸಿಕಗಳು ಸೇರಿದಂತೆ ಇತರೆ ಕಥೆ, ಕಾದಂಬರಿಗಳು ಇಲ್ಲಿ ಯಾವತ್ತೂ ಓದ ಸಿಗುತ್ತವೆ. ನಿವ್ರತ್ತ ಜಿಲ್ಲಾಧಿಕಾರಿ ಎಮ್ ಜಿ ಹಿರೇಮಠ ಅವರ ಮತ್ತು ಶಾಸಕ ಅನಿಲ್ ಬೆನಕೆ ಅವರ ಕೊಡುಗೆ ಇದಾಗಿದೆ. ಇದೇ ಶನಿವಾರ ದಿನಾಂಕ ೧೨-೦೪-೨೦೨೫ರಂದು ಸಂಜೆ ಈ ಮಂದಿರ ವನ್ನು, ರಾಜ್ಯ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಲೋಕಾರ್ಪಣೆ ಗೊಳಿಸಲಿದ್ದು, ಸಾನಿಧ್ಯವನ್ನು ಕಾರಂಜಿ ಮಠದ ಶ್ರೀ ಗುರುಸಿದ್ಧ ಮಹಾಸ್ವಾಮೀಜಿ ಮತ್ತು ಅಂಕಲಗಿ ಅಡವಿಸಿದ್ದೇಶ್ವರ ಸಂಸ್ಥಾನ ಮಠದ ಡಾ ಅಮರಸಿದ್ಧೇಶ್ವರ ಶ್ರೀಗಳು ನೇತೃತ್ವ ವಹಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ, ಬೆಳಗಾವಿ ಸಂಸದ ಜಗದೀಶ ಶೆಟ್ಟರ, ಜನ ಮನ ಗೆದ್ದ ನಿವ್ರತ್ತ ಜಿಲ್ಲಾಧಿಕಾರಿ ಎಮ್ ಜಿ ಹಿರೇಮಠ, ಶಾಸಕರಾದ ಆಸಿಫ್ ಸೇಠ್, ಮಹಾಂತೇಶ ಕೌಜಲಗಿ, ಹನುಮಂತ ನಿರಾಣಿ, ಕೆ ಎಲ್ ಇ ನಿರ್ದೇಶಕರಾದ ಮಹಾಂತೇಶ ಕವಟಗಿಮಠ ಮಾಜಿ ಶಾಸಕ ಅನಿಲ್ ಬೆನಕೆ, ವಿನಯ ನಾವಲಗಟ್ಟಿ, ಮಾಜಿ ಮಹಾಪೌರ ಎನ್ ಬಿ ನಿರ್ವಾಣಿ, ಕಾರ್ಪೊರೇಟರ್ ಹನುಮಂತ ಕೊಂಗಾಲಿ ಮುಂತಾದವರು ಉಪಸ್ತಿತರಿರುವರು.. ಕಾರ್ಯಕ್ರಮದ ಲ್ಲಿ ದೇವಸ್ಥಾನದ ದಾನಿಗಳನ್ನು ಸನ್ಮಾನಿಸಲಾಗುತ್ತದೆ ಯಲ್ಲದೆ, ನಂತರ ಸರ್ವರಿಗೂ ಮಹಾಪ್ರಸಾದವಿರುವದಾಗಿ ಕಮಿಟಿ ತಿಳಿಸಿದ್ದು, ಈ ದೇವಸ್ಥಾನಕ್ಕೊಮ್ಮೆ ಭಕ್ತಿಯಿಂದೊಮ್ಮೆ ಭೆಟ್ಟಿ ಕೊಟ್ಟು ಶ್ರೀ ಸ್ವಾಮಿಯ ದರ್ಶನ ಪಡೆದು ಜನ್ಮ ಸಾರ್ಥಕಗೊಳಿಸಿಕೊಳ್ಳಿ ಎಂಬುದು ಲೇಖಕರ ಅನಿಸಿಕೆ.
ಶ್ರೀ ಕ್ಷೇತ್ರ ಕಾರ್ಯಸಿದ್ಧಿ ಆಂಜನೇಯ ಸ್ವಾಮಿ ದೇವಸ್ಥಾನ ಸದ್ಯದಲ್ಲಿ ಲೋಕಾರ್ಪಣೆಗೊಳ್ಳಲಿರುವ ಹಿನ್ನೆಲೆಯಲ್ಲಿ ವಿಶೇಷ ಲೇಖನ - ಸುರೇಶ ಉರಬಿನಹಟ್ಟಿ

ಬಳ್ಳಾರಿ ಸಮೃದ್ಧಿ ಫೌಂಡೇಶನ್ ಉದ್ಘಾಟನೆ; ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ವಂಚಿತ ಸಮುದಾಯಗಳ ಸಬಲೀಕರಣಕ್ಕೆ ಸಂಕಲ್ಪ

ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎಸ್ಐಆರ್ ಕುರಿತು ವಿದ್ಯಾರ್ಥಿನಿಯರಿಗೆ ಜಾಗೃತಿ ಕಾರ್ಯಕ್ರಮ