15th April 2025
ದೇವಸ್ಥಾನದ ಜಾತ್ರೆ, ಉತ್ಸವಗಳಿಗೆ
ಬದಿಯ ಸ್ಥಳಾವಕಾಶಕ್ಕೆ ಕ್ರಮ
ಕಾರ್ಯಸಿದ್ಧಿ ಆಂಜನೇಯ ದೇವಸ್ಥಾನದಲ್ಲಿ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಭರವಸೆ.
ಬೆಳಗಾವಿ. ೧೫- ದೇವಸ್ಥಾನದ ಬಳಿಯ ಖುಲ್ಲಾ ಜಾಗೆ ವ್ರದ್ಧರು, ಮಹಿಳೆಯರು, ಮಕ್ಕಳಿಗೆ ವಿಹಾರಕ್ಕೆ ಜಾತ್ರೆ,ಉತ್ಸವಗಳಿಗೆ ಸೂಕ್ತವಾಗಿದ್ದು,
ಅಗತ್ಯ ಕ್ರಮ ಕೈಗೊಳ್ಳುವದಾಗಿ ರಾಜ್ಯ ಲೋಕೋಪಯೋಗಿ ಹಾಗೂ ,ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಭರವಸೆ ನೀಡಿದರು.
ಅವರು ಸೋಮವಾರ ಬೆಳಗಾವಿ ರಾಮತೀರ್ಥನಗರದಲ್ಲಿ ಜೀರ್ಣೋದ್ಧಾರಗೊಂಡು, ಹೊಸ ವಿನ್ಯಾಸ ದಲ್ಲಿ ರೂಪುಗೊಂಡಿರುವ ಭಕ್ತರಾಕರ್ಷಣೆಯ ಕೇಂದ್ರವೆನಿಸಿದ ಶ್ರೀ ಕಾರ್ಯಸಿದ್ಧಿ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೆಟ್ಟಿ ಕೊಟ್ಟು, ಗದ್ದುಗೆಯ ಆಶೀರ್ವಾದ ಪಡೆದು , ಟ್ರಸ್ಟ್ ಕಮಿಟಿ ವತಿಯಿಂದ ಸನ್ಮಾನ ಸ್ವೀಕರಿಸಿ, ದೇವಸ್ಥಾನದ ನೂತನ ಫಲಕ ಅನಾವರಣಗೊಳಿಸಿ , ಅಗತ್ಯ ಸ್ಥಳಾವಕಾಶ ಕಲ್ಪಿಸುವಂತೆ ಕೋರಿದ ಮನವಿ ಸ್ವೀಕರಿಸಿ , ರಹವಾಸಿಗಳನ್ನುದ್ದೇಶಿಸಿ ಮಾತನಾಡಿದರು. ರಾಮತೀರ್ಥನಗರದ ಜನರ ಪ್ರೀತಿಯ ಕರೆಗೆ ಧನ್ಯವಾದಗಳು, ಶ್ರೀ ದುರ್ಗಾ ಮಹಿಳಾ ಮಂಡಳ ಮತ್ತು ಶ್ರೀ ಕಾರ್ಯಸಿದ್ದಿ ಆಂಜನೇಯ ಸ್ವಾಮಿ ದೇವಸ್ಥಾನ ಕಮಿಟಿ ಕೋರಿಕೊಂಡ ಮನವಿಗೆ ಸ್ಪಂದಿಸಿ ಅಭಿಮಾನದಿಂದ ಮಾತನಾಡಿದರು. ನಿಮ್ಮಮನವಿಯಲ್ಲಿಯ ಬೇಡಿಕೆಗಳು ನ್ಯಾಯ ಸಮ್ಮತವಾಗಿದ್ದು, ಮಂಜೂರು ಮಾಡಲು ಆದೇಶಿಸುವದಾಗಿ ಹೇಳಿದರು. ಜನರ ಆಶಯಗಳನ್ನು ಈಡೇರಿಸುವದೇ ಸರ್ಕಾರದ ಕಾರ್ಯ.ಎಂದರಲ್ಲದೆ, ಸನ್ಮಾನಕ್ಕೆ ಧನ್ಯವಾದ ಹೇಳಿದರು.
ಶ್ರೀ ಕಾರ್ಯಸಿದ್ಧಿ ಆಂಜನೇಯ ಸ್ವಾಮಿ ದೇವಸ್ಥಾನ ಕಮಿಟಿ ಅದ್ಯಕ್ಷ ಸುರೇಶ ಉರಬಿನಹಟ್ಟಿ ಸರ್ವರನ್ನು ಸ್ವಾಗತಿಸಿ, ಮಾತನಾಡಿ , ಸಚಿವ ಸತೀಶ ಜಾರಕಿಹೊಳಿ ನಮ್ಮವರು. ಅವರಲ್ಲಿಯ ದೂರದ್ರಷ್ಟಿ, ಯಾರಿಗೂ ನಿಲುಕದು. ಅವರೊಬ್ಬ ಕರ್ನಾಟಕದ ಮಹಾನ್ ಶಕ್ತಿ ಅಂಥವರು ನಮ್ಮ ಕರೆ ಮನ್ನಿಸಿ ದೇವಸ್ಥಾನಕ್ಕೆ ಬಂದಿದ್ದು ಈ. ರಾಮತೀರ್ಥನಗರ ಮತ್ತು ಈ ಸ್ಥಳದ ಪುಣ್ಯ. ಸತೀಶ ಅವರ ಯೋಚನೆಗಳು , ಮತ್ತು ಯೋಜನೆಗಳು ಅಸಂಖ್ಯಾತ ವಿದ್ಯಾವಂತರ ಬದುಕಿಗೆ ಕೈಗನ್ನಡಿಯಾಗಿವೆ. ಎಲ್ಲ ಕ್ಷೇತ್ರಗಳಲ್ಲೂ ಅವರು ವಿಜಯಶೀಲರೆನಿಸುವದಕ್ಕೆ ಅವರಲ್ಲಿಯ ವಿಶಾಲ ಹೃದಯವಂತಿಕೆ ಸಾಕ್ಷಿಯಾಗಿದೆ ಎಂದರಲ್ಲದೆ ಸನ್ಮಾನ ಸ್ವೀಕರಿಸಿದ್ದಕೆ ಸಂಘದ ಪರ ಧನ್ಯವಾದ ಹೇಳಿದರಲ್ಲದೆ, ಉಪಸ್ತಿತರಿದ್ದ ಜಿಲ್ಲಾ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಅದ್ಯಕ್ಷ ವಿನಯ ನಾವಲಗಟ್ಟಿ ಅವರನ್ನೂ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಸಂಘದ ಎಸ್ ಜಿ ಕಲ್ಯಾಣಿ, ಮನೋಹರ ಕಾಜಗಾರ, ಎಸ್ ಎಲ್ ಸನದಿ, ಜಿ ಎಸ್ ಪಾಟೀಲ, ರಾಜಶೇಖರ ಚೆಳಗೇರಿ, ಪಿ ಎಫ್ ಪೂಜಾರ, ಡಿ ಎಮ್ ಟೊಣ್ಣೆ , ಮಲ್ಹಾರ ದಿಕ್ಷಿತ್, ದುಂಡಪ್ಪಾ ಉಳ್ಳೇಗಡ್ಡಿ, ರೌದ್ರ ಗೌಡ ಜುಟ್ಟನ್ನವರ, ಪ್ರಹ್ಲಾದ ಹೊಳೆಯಾಚಿ, ಶಿವಾನಂದ ಕಾಗತೀಕರ, ರಾಜಶೇಖರ ಚೆಳಗೇರಿ, ಪಿ ಎಫ್ ಪೂಜಾರ, ಆನಂದ ಹಣ್ಣಿಕೇರಿ, ಬಸವರಾಜ ಹಿರೇಮಠ, ಜಿ ಎಸ್ ಹಿರೇಮಠ, ಜಿ ಐ ದಳವಾಯಿ, ಎನ್ ಬಿ ಹಣ್ಣಿಕೇರಿ , ಡಾ ಬಿ ಸಿ ಚವ್ಹಾಣ, ಸೇರಿದಂತೆ, ಶ್ರೀ ದುರ್ಗಾ ಮಹಿಳಾ ಮಂಡಳ ದ ನಿರ್ಮಲಾ ಉರಬಿನಹಟ್ಟಿ, ಪ್ರೇಮಾ ಬಾಗೇವಾಡಿ ಸುನೀತಾ ಕೆರೂರ ಕಾವ್ಯಾ ಚಿಟಗಿ, ಮಹಾದೇವಿ ಕಮತ್, ಲತಾ ಕಾಜಗಾರ, ಉಮಾ ಖಾನವಾಡೆ, ಮಹಾನಂದಾ ಹಿರೇಮಠ, ವಿದ್ಯಾ ಮೆಳವಂಕಿ, ಸುಮಾ ಕದಮ್, ಮಹಾದೇವಿ ಮೂಲಿಮನಿ, ತೋಂಟಾಪೂರ, ಲಕ್ಷ್ಮೀ ಮಜಲಟ್ಟಿ, ಭಂಡಾರಿ ಸೇರಿದಂತೆ ಸ್ನೇಹ ಸಮಾಜ ಸೇವಾ ಸಂಘದ ಸದಸ್ಯರು, ರಹವಾಸಿಗಳು, ಮಹಿಳೆಯರು ಉಪಸ್ತಿತರಿದ್ದರು.
ಸುರೇಶ ಉರಬಿನಹಟ್ಟಿ
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಸೈಬರ್ ಅಪರಾಧಗಳ ತಡೆಗೆ ಸೂಕ್ತ ಕ್ರಮ ಸಹಾಯವಾಣಿ-೧೯೩೦ ಹಾಗೂ ವೆಬ್ಬಾಟ್ ಉನ್ನತೀಕರಣ
ಏ.24 ರಂದು ಡಾ.ರಾಜ್ ಕುಮಾರ್ ಜನ್ಮದಿನಾಚರಣೆ ಅಂಗವಾಗಿ ಕನ್ನಡ ಚಲನಚಿತ್ರ ಗೀತೆಗಳ ಗಾಯನ ಕಾರ್ಯಕ್ರಮ
ಅಲೆಮಾರಿ ಸಮುದಾಯ ಜನರಿಗೆ ಸರ್ಕಾರ ಸಾಕಷ್ಟು ಯೋಜನೆ ರೂಪಿಸಲಾಗಿದೆ ಜಾಗೃತಿ ಮೂಡಿಸಿ ಸವಲತ್ತು ಕಲ್ಪಿಸಲು ಅಧಿಕಾರಿಗಳು ಮುಂದಾಗಬೇಕು -ಪಲ್ಲವಿ ಜಿ.