30th May 2025

ಕರ್ನಾಟಕದಲ್ಲೂ ದೆಹಲಿ ಪಂಜಾಬ್ ಮಾದರಿ ಆಡಳಿತ ತರಲಾಗುವುದೆಂದು ಆಮ್ ಆದ್ಮ ಪಾರ್ಟಿ ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ ಹೇಳಿದರು
ಬೆಳಗಾವಿಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೆಹಲಿ ಮಾದರಿ ಆಡಳಿತವನ್ನು ಇಲ್ಲಿ ತರುತ್ತೇವೆ ಕರ್ನಾಟಕದ ಐದಾರು ಜಿಲ್ಲೆ ಹಲವಾರು ತಾಲೂಕುಗಳಲ್ಲಿ ಪ್ರವಾಸ ಮಾಡಿದ್ದೇವೆ ರಸ್ತೆಗಳು ಸರಿ ಇಲ್ಲ, ನೀರಿನ ಕೊರತೆ ಇದೆ ರೈತರ ಸಮಸ್ಯೆಗಳಿವೆ ಈ ಎಲ್ಲ ಸಮಸ್ಯೆಗಳಿಗೆ ಮೂಲ ಕಾರಣ ಭ್ರಷ್ಟಾಚಾರ, ನಿರ್ಲಕ್ಷತೆಯಾಗಿದೆ. ರಾಜಕಾರಣಿಗಳಾಗಲಿ ಸರ್ಕಾರಿ ನೌಕರರಾಗಲಿ ಯಾರೂ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಿಲ್ಲ.ದೆಹಲಿ ಹಾಗೂ ಪಂಜಾಬ್ದಲ್ಲೂ ಇದೇ ರೀತಿ ವ್ಯವಸ್ಥೆ ಇತ್ತು ಅದನ್ನು ನಾವು ಸರಿಪಡಿಸಿದ್ದೇವೆ. ಪಂಜಾಬದಲ್ಲಿ ಮಾದಕ ದ್ರವ್ಯದ ಹಾವಳಿಯನ್ನು ಶೂನ್ಯ ಸ್ಥಿತಿಗೆ ತಂದಿದ್ದೇವೆ. ಸ್ವಚ್ಛ ಆಡಳಿತವನ್ನು ಕೊಡುವುದಕ್ಕಾಗಿ ನಾವು ಬರುವ ಚುನಾವಣೆಗಳಲ್ಲಿ ಸ್ಪರ್ಧೆ ಮಾಡುತ್ತೇವೆ. ಒಂದು ನಯ್ಯಾ ಪೈಸೆಯನ್ನೂ ಖರ್ಚು ಮಾಡದೆ ಯಾರಿಗೂ ಕೊಡದೆ ನಾವು ಪಂಜಾಬ್ ಮತ್ತು ದೆಹಲಿಯಲ್ಲಿ ಸ್ಪರ್ಧಿಸಿ ಚುನಾವಣೆ ಗೆದ್ದಿದ್ದೇವೆ. ಕರ್ನಾಟಕದಲ್ಲೂ ನಾವು ಆಮ್ ಅಮ್ಮ ಪಾರ್ಟಿಯಿಂದ ಸ್ಪರ್ಧಿಸಿ ಗೆದ್ದು ಭ್ರಷ್ಟಾಚಾರ ರಹಿತ ಉತ್ತಮ ಆಡಳಿತವನ್ನು ತರುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಕ್ಷದ ಪದಾಧಿಕಾರಿಗಳಾದ ಹಾಲಗಿ ಗೌಡ, ಜಗದೀಶ್ ಕದಮ್ ವಿಜಯ ಪಾಟೀಲ್ ಸೇರಿದಂತೆ ಇತರರು ಇದ್ದರು.

ಪತ್ರಕರ್ತರಿಗೆ ಅಗೌರವ ತೋರಿದ ಮಾಜಿ ಶಾಸಕ ಡಿ.ಜಿ. ಪಾಟೀಲ ಹೇಳಿಕೆ ಖಂಡಿಸಿ ಬಹಿರಂಗ ಕ್ಷಮೆಗೆ ಆಗ್ರಹ

ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಶಿವಶರಣಪ್ಪಗೌಡ್ರ ಪಾಟೀಲ್ ನಿಧನ.